ಸ್ವಾಮಿ ವಿವೇಕಾನಂದರ ಪ್ರಭಾವ ಮತ್ತು ವರ್ಚಸ್ಸು ನಮ್ಮ ರಾಷ್ಟ್ರೀಯ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ
ರಾಜಕೀಯದಲ್ಲಿ ನಿಸ್ವಾರ್ಥ ಮತ್ತು ರಚನಾತ್ಮಕ ಕೊಡುಗೆ ನೀಡುವಂತೆ ಯುವಕರಿಗೆ ಕರೆ
ರಾಜಕೀಯ ವಂಶಾಡಳಿತ, ಸಾಮಾಜಿಕ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಎರಡನೇ ರಾಷ್ಟ್ರೀಯ ಯುವ ಸಂಸತ್ತು ಉತ್ಸವದ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು. ಸೆಂಟ್ರಲ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಮೂವರು ರಾಷ್ಟ್ರಮಟ್ಟದ ಸ್ಪರ್ಧೆಯ ವಿಜೇತರ ಅಭಿಪ್ರಾಯಗಳನ್ನು ಆಲಿಸಿದರು. ಲೋಕಸಭಾಧ್ಯಕ್ಷರು, ಕೇಂದ್ರ ಶಿಕ್ಷಣ ಸಚಿವರು ಮತ್ತು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವರು, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸ್ವಾಮಿ ವಿವೇಕಾನಂದರನ್ನು ಅವರ ಜಯಂತಿಯಂದು ಸ್ಮರಿಸಿದ ಪ್ರಧಾನಮಂತ್ರಿಯವರು, ಎಷ್ಟೇ ವರ್ಷಗಳು ಉರುಳಿದ್ದರೂ, ಸ್ವಾಮಿ ವಿವೇಕಾನಂದರ ಪ್ರಭಾವ ಮತ್ತು ವರ್ಚಸ್ಸು ನಮ್ಮ ರಾಷ್ಟ್ರೀಯ ಜೀವನದಲ್ಲಿ ಹಾಸುಹೊಕ್ಕಾಗಿರುತ್ತದೆ ಎಂದರು. ರಾಷ್ಟ್ರೀಯತೆ ಮತ್ತು ರಾಷ್ಟ್ರ ನಿರ್ಮಾಣದ ಬಗ್ಗೆ ಅವರ ಅಭಿಪ್ರಾಯಗಳು ಮತ್ತು ಜನ ಸೇವೆ ಮಾಡುವ ಮತ್ತು ಜಗತ್ತಿನ ಸೇವೆ ಮಾಡುವ ಬಗ್ಗೆ ಅವರ ಬೋಧನೆ ನಮಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ ಎಂದರು. ಸ್ವಾಮೀಜಿಯವರು ವ್ಯಕ್ತಿ ಮತ್ತು ಸಂಸ್ಥೆಗಳ ವಿಕಾಸಕ್ಕೆ ನೀಡಿದ ಕೊಡುಗೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಸ್ವಾಮಿ ವಿವೇಕಾನಂದರ ಸಂಪರ್ಕಕ್ಕೆ ಬಂದ ವ್ಯಕ್ತಿಗಳು ಸಂಸ್ಥೆಗಳನ್ನು ಕಟ್ಟಿದರು ಮತ್ತು ಅದಕ್ಕೆ ಪ್ರತಿಯಾಗಿ ಸಂಸ್ಥೆಗಳು- ಹೊಸ ಸಾಂಸ್ಥಿಕ ನಿರ್ಮಾಣದಾರರನ್ನು ರೂಪಿಸಿತು ಎಂದರು. ವ್ಯಕ್ತಿಗತ ಉದ್ಯಮಶೀಲತೆ ಮತ್ತು ಶ್ರೇಷ್ಠ ಕಂಪನಿಗಳ ಸಂಪರ್ಕವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇದು ಭಾರತದ ದೊಡ್ಡ ಶಕ್ತಿ ಎಂದರು. ಇತ್ತೀಚಿನ ರಾಷ್ಟ್ರೀಯ ಶಿಕ್ಷಣ ನೀತಿ ಒದಗಿಸಲು ಉದ್ದೇಶಿಸಿರುವ ನಾವಿನ್ಯಪೂರ್ಣ ಕಲಿಕಾ ವಿಧಾನದ ನಮ್ಯತೆಯ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಯುವಜನರಿಗೆ ಕರೆ ನೀಡಿದರು. "ನಾವು ದೇಶದಲ್ಲಿ ಪರಿಸರ ವ್ಯವಸ್ಥೆಯನ್ನು ರೂಪಿಸಲು ಪ್ರಯತ್ನಿಸುತ್ತಿದ್ದೇವೆ, ಅದರ ಅನುಪಸ್ಥಿತಿಯಿಂದಾಗಿ ಯುವಕರು ವಿದೇಶಿ ತೀರಗಳತ್ತ ನೋಡುವಂತಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಆತ್ಮವಿಶ್ವಾಸವಿರುವ, ನಿರ್ಮಲ ಹೃದಯದ, ನಿರ್ಭೀತ ಮತ್ತು ಧೈರ್ಯಶಾಲಿ ಯುವಕರನ್ನು ರಾಷ್ಟ್ರದ ಬುನಾದಿ ಎಂದು ಗುರುತಿಸಿದವರು ಸ್ವಾಮಿ ವಿವೇಕಾನಂದರು ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಯುವಜನರಿಗಾಗಿ ಸ್ವಾಮಿ ವಿವೇಕಾನಂದರು ನೀಡಿದ ಮಂತ್ರಗಳನ್ನು ಪ್ರತಿಪಾದಿಸಿದರು. ದೈಹಿಕ ಸಾಮರ್ಥ್ಯ ಎಂದರೆ ‘ಕಬ್ಬಿಣದಂಥ ಸ್ನಾಯುಗಳು ಮತ್ತು ಉಕ್ಕಿನ ನರಮಂಡಲ’, ವ್ಯಕ್ತಿತ್ವ ವಿಕಸನಕ್ಕಾಗಿ, ‘ನಿಮ್ಮಲ್ಲಿ ನಂಬಿಕೆ ಇಡಿ’; ನಾಯಕತ್ವ ಮತ್ತು ತಂಡದ ಕೆಲಸಕ್ಕಾಗಿ ಸ್ವಾಮೀಜಿ ಅವರು ‘ಎಲ್ಲರನ್ನೂ ನಂಬಿರಿ’ ಎಂದು ಹೇಳಿದ್ದರು ಎಂದರು.

ನಿಸ್ವಾರ್ಥವಾಗಿ ಮತ್ತು ರಚನಾತ್ಮಕವಾಗಿ ರಾಜಕೀಯಕ್ಕೆ ಕೊಡುಗೆ ನೀಡುವಂತೆ ಯುವಜನರಿಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ಇಂದು ಪ್ರಮಾಣಿಕ ಜನರು ಸೇವೆಯ ಅವಕಾಶ ಪಡೆಯುತ್ತಿದ್ದಾರೆ, ನಿರ್ಲಜ್ಜ ಚಟುವಟಿಕೆಯ ತಾಣವೇ ರಾಜಕೀಯ ಎಂಬ ಹಳೆಯ ಮನೋಭಾವ ಬದಲಾಯಿಸುತ್ತಿದ್ದಾರೆ ಎಂದರು. ಪ್ರಾಮಾಣಿಕತೆ ಮತ್ತು ಸಾಮರ್ಥ್ಯ ಪ್ರದರ್ಶನ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು, ರಾಜಕೀಯ ವಂಶಪಾರಂಪರ್ಯದ ಬಗ್ಗೆ ದೀರ್ಘವಾಗಿ ಮಾತನಾಡಿದರು. ಭ್ರಷ್ಟಾಚಾರವು ಅವರ ಪರಂಪರೆಯಾಗಿದ್ದು, ಭ್ರಷ್ಟಾಚಾರ ಜನರ ಮೇಲೆ ಹೊರೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ವಂಶಪಾರಂಪರ್ಯ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತೆಸೆಯುವಂತೆ ಅವರು ಯುವಕರಿಗೆ ಕರೆ ನೀಡಿದರು. ವಂಶಪಾರಂಪರ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಸಮರ್ಥತೆ ಮತ್ತು ಸರ್ವಾಧಿಕಾರಿ ಧೋರಣೆಗೆ ಕಾರಣವಾಗುತ್ತದೆ, ಏಕೆಂದರೆ ಅಂತಹ ಜನರು ರಾಜಕೀಯದಲ್ಲಿ ಕುಟುಂಬ ಮತ್ತು ಕುಟುಂಬದ ರಾಜಕೀಯವನ್ನು ಉಳಿಸಿಕೊಳ್ಳುವತ್ತ ಕೆಲಸ ಮಾಡುತ್ತಾರೆ ಎಂದರು. “ಇಂದು, ಕುಟುಂಬದ ಹೆಸರಿನ ಬಲದಲ್ಲಿ ಚುನಾವಣೆಯಲ್ಲಿ ಗೆಲ್ಲುವ ದಿನಗಳು ಮುಗಿದಿವೆ, ವಂಶಪಾರಂಪರ್ಯ ರಾಜಕಾರಣದ ಈ ಅನಾರೋಗ್ಯ ದೂರವಾಗುತ್ತಿದೆ ... ಕುಟುಂಬ ರಾಜಕೀಯ ರಾಷ್ಟ್ರದ ಪ್ರಗತಿ ಮುನ್ನಡೆಸುವ ಬದಲು ತಮ್ಮ ಮತ್ತು ಕುಟುಂಬದ ಪ್ರಗತಿಯನ್ನು ಉತ್ತೇಜಿಸುತ್ತದೆ. ಇದು ಭಾರತದಲ್ಲಿನ ಸಾಮಾಜಿಕ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣವಾಗಿದೆ ”ಎಂದು ಪ್ರಧಾನಮಂತ್ರಿ ಹೇಳಿದರು.

ಭುಜ್ ಭೂಕಂಪದ ತರುವಾಯ ಮರುನಿರ್ಮಾಣದ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ವಿಪತ್ತಿನ ಸಂದರ್ಭದಲ್ಲಿ ತಮ್ಮದೆ ಹಾದಿಯಲ್ಲಿ ಪಾಠ ಕಲಿಯುವ ಸಮಾಜ, ತನ್ನ ಹಣೆಬರಹವನ್ನು ತಾನೇ ಬರೆಯುತ್ತದೆ ಎಂದು ಯುವಜನರಿಗೆ ತಿಳಿಸಿದರು. ಆದ್ದರಿಂದ, 130 ಕೋಟಿ ಭಾರತೀಯರೆಲ್ಲರೂ ಇಂದು ತಮ್ಮ ಹಣೆಬರಹವನ್ನು ತಾವೇ ಬರೆಯುತ್ತಿದ್ದಾರೆ. ಇಂದಿನ ಯುವಜನರ ಪ್ರತಿಯೊಂದು ಪ್ರಯತ್ನ, ನಾವೀನ್ಯತೆ, ಪ್ರಾಮಾಣಿಕ ಪ್ರತಿಜ್ಞೆ ನಮ್ಮ ಭವಿಷ್ಯಕ್ಕೆ ಬಲವಾದ ಅಡಿಪಾಯ ಹಾಕುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's Ayushman Bharat Digital Mission Crosses 90 Crore ABHA Registrations, Nearly Half Are Women

Media Coverage

India's Ayushman Bharat Digital Mission Crosses 90 Crore ABHA Registrations, Nearly Half Are Women
NM on the go

Nm on the go

Always be the first to hear from the PM. Get the App Now!
...
Prime Minister pays tribute to Lokmata Ahilyabai Holkar on her birth anniversary
May 31, 2026

The Prime Minister, Shri Narendra Modi has paid tributes to Lokmata Ahilyabai Holkar on her birth anniversary.

Shri Modi said that the entire nation remembers Lokmata Ahilyabai Holkar with deep respect and reverence for her wisdom, compassion and unwavering commitment to public welfare.

The Prime Minister noted that her life remains an exemplary model of good governance, patriotism and cultural pride. He said that she always led with courage and a strong sense of duty.

The Prime Minister highlighted her unparalleled contribution to ensuring justice and welfare for all, as well as her efforts towards the reconstruction of sacred temples and pilgrimage sites across the country. He remarked that her work further strengthened India’s cultural consciousness.

The Prime Minister stated that Lokmata Ahilyabai Holkar’s dedication to society, culture and nation-building will continue to inspire every generation of the country.

The Prime Minister wrote on X;

“लोकमाता अहिल्याबाई होल्कर जी को उनकी जयंती पर कोटि-कोटि नमन! बुद्धिमत्ता, करुणा और जनकल्याण के प्रति अटूट निष्ठा को लेकर पूरा देश उन्हें आदर और सम्मान के साथ स्मरण करता है। उनका जीवन सुशासन, राष्ट्रभक्ति और सांस्कृतिक गौरव का एक उत्कृष्ट उदाहरण है। उन्होंने सदैव साहस और कर्तव्यनिष्ठा के साथ नेतृत्व किया। देशभर में पावन मंदिरों और तीर्थस्थलों के पुनर्निर्माण से लेकर सभी के लिए न्याय और कल्याण सुनिश्चित करने में उन्होंने अतुलनीय योगदान दिया। उन्होंने भारत की सांस्कृतिक चेतना को और सशक्त बनाया। समाज, संस्कृति और राष्ट्र निर्माण के प्रति उनका समर्पण भाव देश की हर पीढ़ी को प्रेरित करता रहेगा।”