ಈ ವರ್ಷದ ಕೇಂದ್ರ ಬಜೆಟ್ ತಂತ್ರಜ್ಞಾನ, ಸುಧಾರಣೆಗಳು ಮತ್ತು ಹಣಕಾಸಿನಿಂದ ನಡೆಸಲ್ಪಡುವ ವಿಕಸಿತ ಭಾರತಕ್ಕೆ ಮಾರ್ಗಸೂಚಿಯನ್ನು ರೂಪಿಸುತ್ತದೆ: ಪ್ರಧಾನಮಂತ್ರಿ
ನಾವು ಪ್ರಕ್ರಿಯೆಗಳನ್ನು ಸರಳೀಕರಿಸಿದ್ದೇವೆ, ವ್ಯವಹಾರವನ್ನು ಸುಲಭಗೊಳಿಸಿದ್ದೇವೆ, ತಂತ್ರಜ್ಞಾನ ನೇತೃತ್ವದ ಆಡಳಿತವನ್ನು ವಿಸ್ತರಿಸಿದ್ದೇವೆ ಮತ್ತು ಸಂಸ್ಥೆಗಳನ್ನು ಬಲಪಡಿಸಿದ್ದೇವೆ; ಮತ್ತು ಇಂದಿಗೂ, ದೇಶವು 'ಸುಧಾರಣಾ ಎಕ್ಸ್‌ಪ್ರೆಸ್'ನಲ್ಲಿ ಸವಾರಿ ಮಾಡುತ್ತಿದೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ, ನಾವು ಮೂಲಸೌಕರ್ಯ ಕ್ಷೇತ್ರಕ್ಕೆ ಹೆಚ್ಚು ಗಮನವನ್ನು ನೀಡಿದ್ದೇವೆ: ಪ್ರಧಾನಮಂತ್ರಿ
ಕಳೆದ ದಶಕದಲ್ಲಿ, ನಾವು ಮೂಲಸೌಕರ್ಯದ ಮೇಲೆ ಬಲವಾದ ಗಮನವನ್ನು ಕಾಯ್ದುಕೊಂಡಿದ್ದೇವೆ: ಪ್ರಧಾನಮಂತ್ರಿ
ಹೆದ್ದಾರಿಗಳು, ರೈಲ್ವೆಗಳು, ಬಂದರುಗಳು, ಡಿಜಿಟಲ್ ನೆಟ್‌ವರ್ಕ್‌ಗಳು ಮತ್ತು ವಿದ್ಯುತ್ ವ್ಯವಸ್ಥೆಗಳಂತಹ ಘನ ಸ್ವತ್ತುಗಳನ್ನು ರಚಿಸುವ ಮೂಲಕ ಮಾತ್ರ ಭಾರತದ ಅಭಿವೃದ್ಧಿಯನ್ನು ಸಾಧಿಸಬಹುದು ಎಂದು ನಾವು ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ: ಪ್ರಧಾನಮಂತ್ರಿ
ಈ ಸ್ವತ್ತುಗಳು ಮುಂಬರುವ ಹಲವು ದಶಕಗಳವರೆಗೆ ಉತ್ಪಾದಕತೆಯನ್ನು ಹೆಚ್ಚುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ, ಸಾರ್ವಜನಿಕ ಬಂಡವಾಳ ವೆಚ್ಚವನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ: ಪ್ರಧಾನಮಂತ್ರಿ
ಸರ್ಕಾರ, ಕೈಗಾರಿಕೆ ಮತ್ತು ಜ್ಞಾನ ಪಾಲುದಾರರು ಒಟ್ಟಾಗಿ ಮುಂದುವರೆದಾಗ, ಸುಧಾರಣೆಗಳು ಫಲಿತಾಂಶಗಳಾಗಿ ಬದಲಾದಾಗ ಮಾತ್ರ ಘೋಷಣೆಗಳು ಸಾಧನೆಗಳಾಗುತ್ತವೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 2026-27ರ ಸರಣಿಯ ಮೊದಲ ಬಜೆಟ್ ನಂತರದ ವೆಬಿನಾರ್ ಉದ್ದೇಶಿಸಿ ಮಾತನಾಡಿದರು. "ವಿಕಸಿತ ಭಾರತಕ್ಕಾಗಿ ತಂತ್ರಜ್ಞಾನ ಸುಧಾರಣೆಗಳು ಮತ್ತು ಹಣಕಾಸು" ಎಂಬ ವಿಷಯದ ಮೇಲೆ ಭಾಷಣವನ್ನು ಕೇಂದ್ರೀಕರಿಸಿದರು. ರಾಷ್ಟ್ರೀಯ ಬಜೆಟ್ ಅಲ್ಪಾವಧಿಯ ವ್ಯಾಪಾರ ದಾಖಲೆಗಿಂತ ನೀತಿ ಮಾರ್ಗಸೂಚಿಯಾಗಿದೆ ಎಂದು ಹೇಳಿದ ಶ್ರೀ ಮೋದಿ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಸಾಮೂಹಿಕ ಪ್ರಯತ್ನಕ್ಕೆ ಕರೆ ನೀಡಿದರು.

ಮೂಲಸೌಕರ್ಯವನ್ನು ವಿಸ್ತರಿಸುವುದು, ಸಾಲದ ಹರಿವನ್ನು ಸರಳಗೊಳಿಸುವುದು, ವ್ಯವಹಾರ ಮಾಡುವ ಸುಲಭತೆಯನ್ನು ಸುಧಾರಿಸುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವುದು ಮುಂತಾದ ಸಮಗ್ರ ನಿಯತಾಂಕಗಳ ಮೂಲಕ ಬಜೆಟ್‌ನ ಪರಿಣಾಮಕಾರಿತ್ವವನ್ನು ನಿರ್ಣಯಿಸಬೇಕು ಮತ್ತು ನಾಗರಿಕರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ಅಗತ್ಯ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. "ಈ ಅಂಶಗಳಿಗೆ ಸಂಬಂಧಿಸಿದ ಬಜೆಟ್ ನಿರ್ಧಾರಗಳು ಆರ್ಥಿಕತೆಗೆ ಶಾಶ್ವತ ಶಕ್ತಿಯನ್ನು ಒದಗಿಸುತ್ತವೆ" ಎಂದು ಹೇಳಿದರು.

ರಾಷ್ಟ್ರ ನಿರ್ಮಾಣವು ನಿರಂತರ ಪ್ರಕ್ರಿಯೆಯಾಗಿರುವುದರಿಂದ, ಯಾವುದೇ ಬಜೆಟ್ ಅನ್ನು ಸ್ವತಂತ್ರ ಕಾರ್ಯಕ್ರಮವಾಗಿ ನೋಡಬಾರದು ಎಂದು ಪ್ರಧಾನಮಂತ್ರಿ ಹೇಳಿದರು. "ಪ್ರತಿಯೊಂದು ಬಜೆಟ್ ದೊಡ್ಡ ಗುರಿಯತ್ತ ಸಾಗುವ ಹಂತವಾಗಿದೆ, ಮತ್ತು ಆ ದೊಡ್ಡ ಗುರಿ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಲಿದೆ. ಆದ್ದರಿಂದ, ಪ್ರತಿಯೊಂದು ಸುಧಾರಣೆ, ಪ್ರತಿಯೊಂದು ಹಂಚಿಕೆ ಮತ್ತು ಪ್ರತಿಯೊಂದು ಬದಲಾವಣೆಯನ್ನು ಈ ದೀರ್ಘ ಪ್ರಯಾಣದ ಅವಿಭಾಜ್ಯ ಅಂಗವಾಗಿ ನೋಡಬೇಕು" ಎಂದು ಶ್ರೀ ಮೋದಿ ಹೇಳಿದರು.

 

ಈ ವಾರ್ಷಿಕ ಬಜೆಟ್ ನಂತರದ ವೆಬಿನಾರ್‌ಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಅಧಿವೇಶನಗಳು ಕೇವಲ ವಿಚಾರಗಳ ವಿನಿಮಯಕ್ಕೆ ಸೀಮಿತವಾಗಿರದೆ,  ಪರಿಣಾಮಕಾರಿ ಮಾಹಿತಿ ವಿನಿಮಯಕ್ಕೆ ವೇದಿಕೆಯಾಗಬೇಕು ಎಂಬ ನಿರೀಕ್ಷೆಯನ್ನು ಅವರು ವ್ಯಕ್ತಪಡಿಸಿದರು. "ಭಾಗಿದಾರರ ಅನುಭವ ಮತ್ತು ಪ್ರಾಯೋಗಿಕ ಸವಾಲುಗಳನ್ನು ಆಧರಿಸಿದ ಸಲಹೆಗಳು ಆರ್ಥಿಕ ತಂತ್ರಗಳನ್ನು ಮತ್ತಷ್ಟು ಪರಿಷ್ಕರಿಸಲು ಮತ್ತು ಪರಿಹಾರಗಳನ್ನು ಕಂಡುಹಿಡಿಯಲು ಖಂಡಿತವಾಗಿಯೂ ಸಹಾಯ ಮಾಡುತ್ತದೆ" ಎಂದು ಶ್ರೀ ಮೋದಿ ಹೇಳಿದರು. ಇದಲ್ಲದೇ, ಉದ್ಯಮ, ಶೈಕ್ಷಣಿಕ, ವಿಶ್ಲೇಷಕರು ಮತ್ತು ನೀತಿ ನಿರೂಪಕರು ಒಟ್ಟಾಗಿ ಯೋಚಿಸಿದಾಗ, ಯೋಜನೆಗಳ ಅನುಷ್ಠಾನವು ಸುಧಾರಿಸುತ್ತದೆ ಮತ್ತು ಫಲಿತಾಂಶಗಳು ಹೆಚ್ಚು ನಿಖರವಾಗುತ್ತವೆ ಎಂದು ಅವರು ಹೇಳಿದರು, ಇದು ಈ ವೆಬಿನಾರ್‌ಗಳ ಸರಣಿಯ ಹಿಂದಿನ ಮೂಲ ಉದ್ದೇಶವಾಗಿದೆ.

21ನೇ ಶತಮಾನದ ಕಾಲು ಭಾಗ ಕಳೆದಿದೆ ಎಂದು ಪ್ರಧಾನಮಂತ್ರಿ ಹೇಳಿದರು, ಇದು ಸೇವೆಯಲ್ಲಿರುವವರ ಜೀವನದಲ್ಲಿ ಮಹತ್ವದ ಅವಧಿಯನ್ನು ಗುರುತಿಸುತ್ತದೆ. ದೇಶವು ಈಗ ಅಭಿವೃದ್ಧಿಯ ಪ್ರಯಾಣದ ನಿರ್ಣಾಯಕ ಹಂತದಲ್ಲಿದೆ, ಆರ್ಥಿಕತೆಯು ತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು. ಕಳೆದ ದಶಕಗಳಲ್ಲಿ ಭಾರತದ ಅಸಾಧಾರಣ ಸ್ಥಿತಿಸ್ಥಾಪಕತ್ವವನ್ನು ಉಲ್ಲೇಖಿಸುತ್ತಾ, ಶ್ರೀ ಮೋದಿ ಈ ಪ್ರಗತಿಯು ಆಕಸ್ಮಿಕವಾಗಿ ಸಂಭವಿಸಿಲ್ಲ, ಬದಲಿಗೆ ದೃಢನಿಶ್ಚಯ-ಚಾಲಿತ ಸುಧಾರಣೆಗಳ ಪರಿಣಾಮವಾಗಿದೆ ಎಂದು ವಿವರಿಸಿದರು. "ಸರ್ಕಾರವು ಪ್ರಕ್ರಿಯೆಗಳನ್ನು ಸರಳೀಕರಿಸಿದೆ, ವ್ಯವಹಾರವನ್ನು ಸುಲಭಗೊಳಿಸಿದೆ, ತಂತ್ರಜ್ಞಾನ ನೇತೃತ್ವದ ಆಡಳಿತವನ್ನು ವಿಸ್ತರಿಸಿದೆ ಮತ್ತು ಸಂಸ್ಥೆಗಳನ್ನು ಬಲಪಡಿಸಿದೆ, ಇಂದಿಗೂ ದೇಶವು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ಸವಾರಿ ಮಾಡುತ್ತಿದೆ" ಎಂದು ಶ್ರೀ ನರೇಂದ್ರ ಮೋದಿ ಸ್ಪಷ್ಟಪಡಿಸಿದರು.

ನೀತಿ ಉದ್ದೇಶವು ನಿರ್ಣಾಯಕವಾಗಿದ್ದರೂ, ಭಾರತದ ಅಭಿವೃದ್ಧಿಯ ಪ್ರಸ್ತುತ ಹಂತವು ವಿತರಣಾ ಶ್ರೇಷ್ಠತೆಯ ಮೇಲೆ ನಿರಂತರ ಗಮನ ಹರಿಸುವ ಅಗತ್ಯವಿದೆ. "ಸುಧಾರಣೆಗಳ ಮೌಲ್ಯಮಾಪನವು ಅವುಗಳ ಘೋಷಣೆಯನ್ನು ಆಧರಿಸಿರಬಾರದು, ಆದರೆ ನೆಲದ ಮಟ್ಟದಲ್ಲಿ ಅವುಗಳ ಪ್ರಭಾವವನ್ನು ಆಧರಿಸಿರಬೇಕು ಮತ್ತು ಸಾರ್ವಜನಿಕ ಸೇವಾ ವಿತರಣೆಯಲ್ಲಿ ಹೊಣೆಗಾರಿಕೆ ಮತ್ತು ವೇಗ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು AI, ಬ್ಲಾಕ್‌ಚೈನ್ ಮತ್ತು ಡೇಟಾ ಅನಾಲಿಟಿಕ್ಸ್‌ನ ಏಕೀಕರಣಕ್ಕೆ ಆದ್ಯತೆ ನೀಡುವ ಅಗತ್ಯವಿದೆ" ಎಂದು ಶ್ರೀ ಮೋದಿ ಹೇಳಿದರು. ಅಲ್ಲದೇ, ಕುಂದುಕೊರತೆ ಪರಿಹಾರ ವ್ಯವಸ್ಥೆಗಳ ಮೂಲಕ ಪರಿಣಾಮವನ್ನು ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಹೇಳಿದರು.

 

ದೀರ್ಘಾವಧಿಯ ಉತ್ಪಾದಕ ಆಸ್ತಿಗಳನ್ನು ನಿರ್ಮಿಸುವ ಸರ್ಕಾರದ ಬದ್ಧತೆಯನ್ನು ಉಲ್ಲೇಖಿಸುತ್ತಾ, ಪ್ರಧಾನಮಂತ್ರಿಯವರು ಸಾರ್ವಜನಿಕ ಬಂಡವಾಳ ವೆಚ್ಚದಲ್ಲಿನ ಗಮನಾರ್ಹ ಏರಿಕೆಯನ್ನು ಗಮನಸೆಳೆದರು. "ಕಳೆದ 11 ವರ್ಷಗಳಲ್ಲಿ, ಈ ನಿಬಂಧನೆಯು ಪ್ರಸ್ತುತ ಬಜೆಟ್‌ನಲ್ಲಿ ಸುಮಾರು ₹2 ಲಕ್ಷ ಕೋಟಿಯಿಂದ ₹12 ಲಕ್ಷ ಕೋಟಿಗೂ ಹೆಚ್ಚಾಗಿದೆ. ಈ ಹೂಡಿಕೆಯು ಖಾಸಗಿ ವಲಯವು ಮೂಲಸೌಕರ್ಯ ಮತ್ತು ನಾವೀನ್ಯತೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸ್ಪಷ್ಟ ಸಂಕೇತವಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಪ್ರಧಾನಮಂತ್ರಿ ಅವರು ಉದ್ಯಮ ಮತ್ತು ಹಣಕಾಸು ಸಂಸ್ಥೆಗಳು ಹೊಸ ಶಕ್ತಿಯೊಂದಿಗೆ ಮುಂದೆ ಬರುವಂತೆ ಕರೆ ನೀಡಿದರು, ಮೂಲಸೌಕರ್ಯದಲ್ಲಿ ಹೆಚ್ಚಿನ ಭಾಗವಹಿಸುವಿಕೆ, ಹಣಕಾಸು ಮಾದರಿಗಳಲ್ಲಿ ಹೆಚ್ಚಿನ ನಾವೀನ್ಯತೆ ಮತ್ತು ಉದಯೋನ್ಮುಖ ವಲಯದಲ್ಲಿ ಬಲವಾದ ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದರು.

"ಯೋಜನೆ ಮಂಜೂರಾತಿ ವಿಧಾನ ಮತ್ತು ಮೌಲ್ಯಮಾಪನ ಗುಣಮಟ್ಟವನ್ನು ಬಲಪಡಿಸಬೇಕು, ವ್ಯರ್ಥ ಮತ್ತು ವಿಳಂಬಗಳನ್ನು ತೊಡೆದುಹಾಕಲು ವೆಚ್ಚ-ಪ್ರಯೋಜನ ವಿಶ್ಲೇಷಣೆ ಮತ್ತು ಜೀವನ-ಚಕ್ರ ವೆಚ್ಚವನ್ನು ಅತ್ಯಂತ ಪ್ರಮುಖವಾಗಿರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಹಣಕಾಸಿನ ಚೌಕಟ್ಟನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ವ್ಯವಸ್ಥೆಯನ್ನು ಹೆಚ್ಚು ಊಹಿಸಬಹುದಾದ ಮತ್ತು ಹೂಡಿಕೆದಾರರ ಸ್ನೇಹಿಯನ್ನಾಗಿ ಮಾಡಲು ಸರ್ಕಾರವು ವಿದೇಶಿ ಹೂಡಿಕೆ ಚೌಕಟ್ಟನ್ನು ಮತ್ತಷ್ಟು ಸರಳಗೊಳಿಸುತ್ತಿದೆ ಎಂದು ಹೇಳಿದರು. ಬಾಂಡ್ ಮಾರುಕಟ್ಟೆಗಳನ್ನು ಹೆಚ್ಚು ಸಕ್ರಿಯವಾಗಿಸಲು ಮತ್ತು ಬಾಂಡ್‌ಗಳ ಖರೀದಿ ಮತ್ತು ಮಾರಾಟವನ್ನು ಸರಳಗೊಳಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಅವರು ಎತ್ತಿ ತೋರಿಸಿದರು, ಈ ಸುಧಾರಣೆಗಳನ್ನು ದೀರ್ಘಾವಧಿಯ ಬೆಳವಣಿಗೆಗೆ ಅಗತ್ಯವಾದ ಸಕ್ರಿಯಗೊಳಿಸುವಿಕೆಗಳಾಗಿ ನೋಡುತ್ತಾರೆ." "ಊಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು, ದ್ರವ್ಯತೆಯನ್ನು ಹೆಚ್ಚಿಸುವುದು ಮತ್ತು ಅಪಾಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ನಿರಂತರ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಹೊಸ ಸಾಧನಗಳನ್ನು ಪರಿಚಯಿಸುವ ಅವಶ್ಯಕತೆಯಿದೆ" ಎಂದು ಶ್ರೀ ಮೋದಿ ಹೇಳಿದರು. ಬಾಂಡ್ ಮಾರುಕಟ್ಟೆ ಮತ್ತು ವಿದೇಶಿ ಹೂಡಿಕೆ ಚೌಕಟ್ಟನ್ನು ಬಲಪಡಿಸಲು ಸಹಾಯ ಮಾಡಲು ಜಾಗತಿಕ ಅತ್ಯುತ್ತಮ ಅಭ್ಯಾಸಗಳಿಂದ ಕಲಿಯುವಂತೆ ಪಾಲುದಾರರಿಗೆ ಸಲಹೆ ನೀಡಿದರು.

 

ನಿರಂತರ ವಿದೇಶಿ ಬಂಡವಾಳವನ್ನು ಆಕರ್ಷಿಸಲು ಮತ್ತು ದೀರ್ಘಾವಧಿಯ ಹಣಕಾಸು ಸುಧಾರಿಸಲು, ಪ್ರಧಾನಮಂತ್ರಿಗಳು ವಿದೇಶಿ ಹೂಡಿಕೆ ಚೌಕಟ್ಟಿಗೆ ಮತ್ತಷ್ಟು ಸರಳೀಕರಣಗಳನ್ನು ಘೋಷಿಸಿದರು. ಈ ಕಾರ್ಯತಂತ್ರವು ಹೆಚ್ಚು ಸಕ್ರಿಯ ಬಾಂಡ್ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸುವುದು, ಬಾಂಡ್ ವ್ಯಾಪಾರ ಪ್ರಕ್ರಿಯೆಗಳನ್ನು ಸರಳೀಕರಿಸುವುದು ಮತ್ತು ಕಠಿಣ ವೆಚ್ಚ-ಪ್ರಯೋಜನ ವಿಶ್ಲೇಷಣೆ ಮತ್ತು ಜೀವನ-ಚಕ್ರ ವೆಚ್ಚದ ಮೂಲಕ ಯೋಜನೆಯ ಮಂಜೂರಾತಿ ವಿಧಾನಗಳನ್ನು ಬಲಪಡಿಸುವುದನ್ನು ಒಳಗೊಂಡಿದೆ. "ಈ ಕ್ರಮಗಳು ವ್ಯವಸ್ಥೆಯನ್ನು ಹೆಚ್ಚು ಊಹಿಸಬಹುದಾದ ಮತ್ತು ಹೂಡಿಕೆದಾರ ಸ್ನೇಹಿಯನ್ನಾಗಿ ಮಾಡುವ ಗುರಿಯನ್ನು ಹೊಂದಿದ್ದು, ಅಪಾಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತವೆ" ಎಂದು ಶ್ರೀ ಮೋದಿ ಹೇಳಿದರು.

ಯಾವುದೇ ನೀತಿಯು ಒಂದು ಚೌಕಟ್ಟನ್ನು ರಚಿಸಬಹುದಾದರೂ, ಅದರ ಅಂತಿಮ ಯಶಸ್ಸು ಎಲ್ಲಾ ಪಾಲುದಾರರ ಸಕ್ರಿಯ ಭಾಗವಹಿಸುವಿಕೆಯ ಮೇಲೆ ಅವಲಂಬಿತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೊಸ ಹೂಡಿಕೆ ಮತ್ತು ನಾವೀನ್ಯತೆಯೊಂದಿಗೆ ಮುಂದುವರಿಯಲು ಅವರು ಉದ್ಯಮಕ್ಕೆ ಕರೆ ನೀಡಿದರು, ಆದರೆ ಹಣಕಾಸು ಸಂಸ್ಥೆಗಳು ಮತ್ತು ವಿಶ್ಲೇಷಕರು ಪ್ರಾಯೋಗಿಕ ಪರಿಹಾರಗಳನ್ನು ಸಿದ್ಧಪಡಿಸುವಲ್ಲಿ ಮತ್ತು ಮಾರುಕಟ್ಟೆ ವಿಶ್ವಾಸವನ್ನು ಬಲಪಡಿಸುವಲ್ಲಿ ಸಹಾಯ ಮಾಡುವಂತೆ ಒತ್ತಾಯಿಸಿದರು. "ಸರ್ಕಾರ, ಉದ್ಯಮ ಮತ್ತು ಜ್ಞಾನ ಪಾಲುದಾರರು ಒಗ್ಗಟ್ಟಿನಿಂದ ಮುಂದುವರೆದಾಗ, ಸುಧಾರಣೆಗಳು ಯಶಸ್ವಿ ಫಲಿತಾಂಶಗಳಾಗಿ ಪರಿವರ್ತನೆಗೊಳ್ಳುತ್ತವೆ. ಬಜೆಟ್ ಘೋಷಣೆಗಳು ಈ ಸಾಮೂಹಿಕ ಸಿನರ್ಜಿ ಮೂಲಕ ಮಾತ್ರ ನೆಲದ ಮೇಲೆ ಸ್ಪಷ್ಟವಾದ ಫಲಿತಾಂಶಗಳಾಗಿ ಪರಿವರ್ತನೆಗೊಳ್ಳುತ್ತವೆ" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಸರ್ಕಾರ, ಕೈಗಾರಿಕೆ, ಹಣಕಾಸು ಸಂಸ್ಥೆಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ನಡುವಿನ ಹಂಚಿಕೆಯ ಸಂಕಲ್ಪವಾದ "ಸುಧಾರಣಾ ಪಾಲುದಾರಿಕೆ ಚಾರ್ಟರ್" ಅನ್ನು ಅಭಿವೃದ್ಧಿಪಡಿಸಲು ಪ್ರಧಾನಮಂತ್ರಿ ಸೂಚಿಸಿದರು. ಬಜೆಟ್ ನಂತರದ ವೆಬಿನಾರ್‌ಗಳ ಉದ್ದೇಶವು ಇನ್ನು ಮುಂದೆ ಬಜೆಟ್‌ನ ವಿಷಯಗಳನ್ನು ಚರ್ಚಿಸುವುದು ಅಲ್ಲ, ಆದರೆ ಅದರ ತ್ವರಿತ ಮತ್ತು ಸರಳ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವುದು ಎಂದು ಅವರು ಸ್ಪಷ್ಟಪಡಿಸಿದರು.

 

ಹಣಕಾಸು ಸಂಸ್ಥೆಗಳು, ಮಾರುಕಟ್ಟೆಗಳು, ಕೈಗಾರಿಕೆ, ವೃತ್ತಿಪರರು ಮತ್ತು ನಾವೀನ್ಯಕಾರರು ಸೇರಿದಂತೆ ಎಲ್ಲಾ ಪಾಲುದಾರರು ಈ ಬಜೆಟ್ ಒದಗಿಸಿದ ಹೊಸ ಅವಕಾಶಗಳ ಲಾಭವನ್ನು ಪಡೆದುಕೊಳ್ಳುವಂತೆ ಪ್ರಧಾನಿ ಒತ್ತಾಯಿಸಿದರು. ಈ ನಿರೀಕ್ಷೆಗಳೊಂದಿಗೆ ಆಳವಾಗಿ ತೊಡಗಿಸಿಕೊಳ್ಳಬೇಕು. ಸಕ್ರಿಯ ಭಾಗವಹಿಸುವಿಕೆಯು ಯೋಜನೆಗಳ ಅನುಷ್ಠಾನವನ್ನು ಸುಧಾರಿಸುತ್ತದೆ ಮತ್ತು ಪ್ರತಿಕ್ರಿಯೆ ಮತ್ತು ಸಹಕಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ವಿವರಿಸಿದರು. ಅಭಿವೃದ್ಧಿ ಹೊಂದಿದ ಭಾರತದ ಕನಸು ಸಾಧ್ಯವಾದಷ್ಟು ಬೇಗ ನನಸಾಗುವ ಭವಿಷ್ಯವನ್ನು ಸೃಷ್ಟಿಸಲು ಎಲ್ಲರೂ ಸುಧಾರಣೆ ಮತ್ತು ಒಟ್ಟಾಗಿ ಬೆಳೆಯಬೇಕೆಂದು ಕರೆ ನೀಡಿದರು.

ದಿನದ ಚರ್ಚೆಗಳಲ್ಲಿ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ಪ್ರಕ್ರಿಯೆಗಳನ್ನು ಸರಳೀಕರಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು. ಬಜೆಟ್ ಅನ್ನು ಪರಿಷ್ಕರಿಸಲು ಬಜೆಟ್‌ಗೆ ಮೊದಲು ಸಮಾಲೋಚನೆಗಳನ್ನು ನಡೆಸಲಾಗಿದ್ದರೂ, ಬಜೆಟ್ ನಂತರದ ವೆಬಿನಾರ್‌ಗಳನ್ನು ಸರಳ ಮಾರ್ಗಗಳ ಮೂಲಕ ಸಾಧ್ಯವಾದಷ್ಟು ಬೇಗ ಬಜೆಟ್ ಅನ್ನು ನೆಲಕ್ಕೆ ಇಳಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.  ಪಾಲುದಾರರು ಸಾಮೂಹಿಕ ಪ್ರಯೋಜನವನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಿದರೆ, ಈ ವೆಬಿನಾರ್‌ಗಳು ನಿಜವಾಗಿಯೂ ರೋಮಾಂಚಕ ಆರ್ಥಿಕತೆಗೆ ಬಾಗಿಲು ತೆರೆಯುತ್ತವೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Modi’s Gen Z compact: Listen, respond, reform

Media Coverage

Modi’s Gen Z compact: Listen, respond, reform
NM on the go

Nm on the go

Always be the first to hear from the PM. Get the App Now!
...
Prime Minister congratulates Shilpa Kanchugarakoppalu Shyla on winning Bronze in Women’s Shot Put F57 at Commonwealth Games 2026
July 28, 2026

The Prime Minister, Shri Narendra Modi, has congratulated Shilpa Kanchugarakoppalu Shyla on winning the Bronze medal in the Women’s Shot Put F57 Final at the Glasgow Commonwealth Games 2026.

The Prime Minister said that Shilpa’s personal best throw made the achievement even more remarkable.

Shri Modi congratulated her on the accomplishment.

The Prime Minister wrote on X;

“A brilliant performance by Shilpa Kanchugarakoppalu Shyla at the Commonwealth Games 2026!

Congratulations to Shilpa for having won the Bronze Medal in the Women's Shot Put F57 Final and that too with a personal best throw. This is indeed a remarkable accomplishment.

#CWG2026”