ಶೃಂಗಸಭೆಯು ಇಂಡೋ-ಜರ್ಮನ್ ಪಾಲುದಾರಿಕೆಗೆ ಹೊಸ ಅಧ್ಯಾಯದ ಸೇರ್ಪಡೆಯಾಗಿದೆ: ಪ್ರಧಾನಮಂತ್ರಿ
2024ನೇ ವರ್ಷವು ಇಂಡೋ-ಜರ್ಮನ್ ಸ್ಟ್ರಾಟೆಜಿಕ್ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಇದು ಐತಿಹಾಸಿಕ ವರ್ಷವಾಗಿದೆ: ಪ್ರಧಾನಮಂತ್ರಿ
ಜರ್ಮನಿಯ "ಫೋಕಸ್ ಆನ್ ಇಂಡಿಯಾ" ದಾಖಲೆಯು ಭಾರತದ ತಂತ್ರಾತ್ಮಕ ಮಹತ್ವವನ್ನು ವಿಶ್ವವು ಗುರುತಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ: ಪ್ರಧಾನಮಂತ್ರಿ
ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಮುಂಚೂಣಿ ದೇಶವಾಗಿ ಗಮನಾರ್ಹ ಪ್ರಗತಿ ಸಾಧಿಸಿದೆ: ಪ್ರಧಾನಮಂತ್ರಿ
ಭಾರತವು ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ವೇಗವಾದ ಪ್ರಗತಿಯನ್ನು ಸಾಧಿಸುತ್ತಿದೆ: ಪ್ರಧಾನಮಂತ್ರಿ
ಭಾರತದ ಕ್ರಿಯಾಶೀಲತೆ ಮತ್ತು ಜರ್ಮನಿಯ ನಿಖರತೆಯ ನಡುವಿನ ಪಾಲುದಾರಿಕೆಗೆ ಪ್ರಧಾನಮಂತ್ರಿಗಳು ಕರೆ ನೀಡಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಜರ್ಮನಿಯ ಸ್ಟಟ್‌ಗಾರ್ಟ್ ನಲ್ಲಿ ನಡೆದ ನ್ಯೂಸ್ 9 ಜಾಗತಿಕ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಮೋದಿ, ಈ ಶೃಂಗಸಭೆಯು ಭಾರತ-ಜರ್ಮನ್ ಪಾಲುದಾರಿಕೆಗೆ ಹೊಸ ಅಧ್ಯಾಯವನ್ನು ಸೇರಿಸಿದೆ ಎಂದು ಹೇಳಿದರು. "ಇಂದಿನ ಮಾಹಿತಿ ಯುಗದಲ್ಲಿ ಭಾರತದ ಮಾಧ್ಯಮ ಗುಂಪೊಂದು ಜರ್ಮನಿ ಮತ್ತು ಜರ್ಮನ್ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿರುವುದು ನನಗೆ ಸಂತೋಷವನ್ನುಂಟುಮಾಡಿದೆ. ಇದು ಭಾರತದ ಜನರಿಗೆ ಜರ್ಮನಿ ಮತ್ತು ಜರ್ಮನ್ ಜನರನ್ನು ಅರ್ಥಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ಪ್ರಧಾನಮಂತ್ರಿಗಳು ಈ ಶೃಂಗಸಭೆಯನ್ನು ಭಾರತದ ಟಿವಿ 9 ಜರ್ಮನಿಯ F.A.U. ಸ್ಟಟ್ಗಾರ್ಟ್ ಮತ್ತು ಬಾಡೆನ್-ವರ್ಟೆಂಬರ್ಗ್ ಸಹಯೋಗದೊಂದಿಗೆ ಆಯೋಜಿಸಿದೆ ಎಂದು ಹೇಳಿದರು. "ಭಾರತ-ಜರ್ಮನಿ: ಸುಸ್ಥಿರ ಬೆಳವಣಿಗೆಗೆ ಮಾರ್ಗನಕ್ಷೆ" ಎಂಬುದು ಈ ಶೃಂಗಸಭೆಯ ಥೀಮ್ ಆಗಿದ್ದು, ಇದು ಭಾರತ ಮತ್ತು ಜರ್ಮನಿ ನಡುವಿನ ಜವಾಬ್ದಾರಿಯುತ ಪಾಲುದಾರಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಕಳೆದ ಎರಡು ದಿನಗಳಲ್ಲಿ, ಭಾಗವಹಿಸಿದವರು ಆರ್ಥಿಕ ವಿಷಯಗಳ ಜೊತೆಗೆ ಕ್ರೀಡೆ ಮತ್ತು ಮನರಂಜನೆಗೆ ಸಂಬಂಧಿಸಿದ ವಿಷಯಗಳ ಕುರಿತು ಫಲಪ್ರದ ಚರ್ಚೆಗಳನ್ನು ನಡೆಸಿದ್ದಾರೆ, ಇದು ಎರಡೂ ದೇಶಗಳ ನಡುವಿನ ಸಹಯೋಗದ ವ್ಯಾಪಕ ವ್ಯಾಪ್ತಿಯನ್ನು ಎತ್ತಿ ತೋರಿಸುತ್ತದೆ ಎಂದು ಪ್ರಧಾನಮಂತ್ರಿಗಳು ಹೇಳಿದರು.

 

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾರತಕ್ಕೆ ಯುರೋಪ್ ನ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು, ವಿಶೇಷವಾಗಿ ಭೂರಾಜಕೀಯ ಸಂಬಂಧಗಳು, ವ್ಯಾಪಾರ ಮತ್ತು ಹೂಡಿಕೆಯ ದೃಷ್ಟಿಯಿಂದ ಒತ್ತಿ ಹೇಳಿದರು. ಇದರಲ್ಲಿ ಜರ್ಮನಿ ಭಾರತದ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ. 2024 ಇಂಡೋ-ಜರ್ಮನ್ ಸ್ಟ್ರಾಟೆಜಿಕ್ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತದೆ. ಇದು ಐತಿಹಾಸಿಕ ವರ್ಷವಾಗಿದೆ. ಚಾನ್ಸೆಲರ್ ಸ್ಕೋಲ್ಜ್ ಅವರ ಭಾರತಕ್ಕೆ ಮೂರನೇ ಭೇಟಿ ಮತ್ತು 12 ವರ್ಷಗಳ ನಂತರ ದೆಹಲಿಯಲ್ಲಿ ನಡೆಯುತ್ತಿರುವ ಜರ್ಮನ್ ವ್ಯವಹಾರಗಳ ಏಷ್ಯಾ-ಪೆಸಿಫಿಕ್ ಸಮ್ಮೇಳನ ಸೇರಿದಂತೆ ಗಮನಾರ್ಹ ಘಟನೆಗಳನ್ನು ಪ್ರಧಾನಮಂತ್ರಿಗಳು ಪ್ರಸ್ತಾಪಿಸಿದರು. ಜರ್ಮನಿಯು "ಫೋಕಸ್ ಆನ್ ಇಂಡಿಯಾ" ಡಾಕ್ಯುಮೆಂಟ್ ಮತ್ತು ಅದರ ಮೊದಲ ದೇಶ-ನಿರ್ದಿಷ್ಟವಾದ "ಭಾರತಕ್ಕಾಗಿ ನುರಿತ ಕಾರ್ಮಿಕ ಕಾರ್ಯತಂತ್ರ" ವನ್ನು ಬಿಡುಗಡೆ ಮಾಡಿತು, ಇದು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತ-ಜರ್ಮನ್ ತಂತ್ರಾತ್ಮಕ ಪಾಲುದಾರಿಕೆ 25 ವರ್ಷಗಳಿಂದ ಅಸ್ತಿತ್ವದಲ್ಲಿದ್ದರೂ, ಎರಡು ದೇಶಗಳ ನಡುವಿನ ಸಂಬಂಧ ಶತಮಾನಗಳಷ್ಟು ಹಿಂದಿನದು ಎಂದು ಪ್ರಧಾನಮಂತ್ರಿಗಳು ಹೇಳಿದರು. ವಿಶೇಷವಾಗಿ, ಒಬ್ಬ ಜರ್ಮನ್ ಯುರೋಪ್ನ ಮೊದಲ ಸಂಸ್ಕೃತ ವ್ಯಾಕರಣ ಪುಸ್ತಕಗಳನ್ನು ರಚಿಸಿದರು, ಮತ್ತು ಜರ್ಮನ್ ವ್ಯಾಪಾರಿಗಳು ತಮಿಳು ಮತ್ತು ತೆಲುಗು ಮುದ್ರಣವನ್ನು ಯುರೋಪ್ ಗೆ ಪರಿಚಯಿಸಿದರು. "ಇಂದು, ಸುಮಾರು 3 ಲಕ್ಷ ಭಾರತೀಯರು ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ, 50,000 ಭಾರತೀಯ ವಿದ್ಯಾರ್ಥಿಗಳು ಅಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭಾರತದಲ್ಲಿ, 1,800ಕ್ಕೂ ಹೆಚ್ಚು ಜರ್ಮನ್ ಕಂಪನಿಗಳು ಕಳೆದ 3-4 ವರ್ಷಗಳಲ್ಲಿ 15 ಬಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡಿವೆ" ಎಂದು ಪ್ರಧಾನಮಂತ್ರಿಗಳು ಹೇಳಿದರು. ಎರಡು ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರವು ಸುಮಾರು 34 ಬಿಲಿಯನ್ ಡಾಲರ್ಗಳಷ್ಟಿದೆ, ಮತ್ತು ಬಲಗೊಳ್ಳುತ್ತಿರುವ ಪಾಲುದಾರಿಕೆಯಿಂದಾಗಿ ಈ ವ್ಯಾಪಾರವು ಮುಂದಿನ ವರ್ಷಗಳಲ್ಲಿ ಬೆಳೆಯುತ್ತಲೇ ಇರುತ್ತದೆ ಎಂದು ಪ್ರಧಾನಮಂತ್ರಿಗಳು ಸೇರಿಸಿದರು.

 

ಪ್ರಧಾನಮಂತ್ರಿಗಳು ಭಾರತವನ್ನು ವಿಶ್ವದ ಅತಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆ ಎಂದು ಒತ್ತಿ ಹೇಳಿದರು, ಇದರೊಂದಿಗೆ ಜಗತ್ತು ಬೆಳವಣಿಗೆಗಾಗಿ ಪಾಲುದಾರಿಕೆ ಹೊಂದಲು ಆಸಕ್ತಿ ಹೊಂದಿದೆ. ಜರ್ಮನಿಯ "ಫೋಕಸ್ ಆನ್ ಇಂಡಿಯಾ" ದಾಖಲೆಯು ಭಾರತದ ತಂತ್ರಾತ್ಮಕ ಮಹತ್ವವನ್ನು ವಿಶ್ವವು ಗುರುತಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ. ಈ ಬದಲಾವಣೆಯು ಕಳೆದ ದಶಕದಲ್ಲಿ ಭಾರತದ ಸುಧಾರಣೆಗಳಿಗೆ ಕಾರಣವಾಗಿದೆ. ಕಳೆದ ದಶಕದಲ್ಲಿ ಭಾರತದ ಸುಧಾರಣೆಗಳು ವ್ಯವಹಾರದ ಪರಿಸ್ಥಿತಿಗಳನ್ನು ಸುಧಾರಿಸಿವೆ, ಅಧಿಕಾರಶಾಹಿಯನ್ನು ಕಡಿಮೆ ಮಾಡಿವೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ನೀತಿಗಳನ್ನು ಆಧುನೀಕರಿಸಿವೆ. ಇದರಿಂದ ಈ ಬದಲಾವಣೆ ಸಾಧ್ಯವಾಗಿದೆ. GSTಯೊಂದಿಗೆ ತೆರಿಗೆ ವ್ಯವಸ್ಥೆಯನ್ನು ಸರಳೀಕರಿಸುವುದು, 30,000ಕ್ಕೂ ಹೆಚ್ಚು ಅನುಸರಣೆಗಳನ್ನು ತೆಗೆದುಹಾಕುವುದು ಮತ್ತು ಬ್ಯಾಂಕಿಂಗ್ ವಲಯವನ್ನು ಸ್ಥಿರಗೊಳಿಸುವುದು ಪ್ರಮುಖ ಸುಧಾರಣೆಗಳಾಗಿವೆ ಎಂದು ಪ್ರಧಾನಮಂತ್ರಿಗಳು ವಿವರಿಸಿದರು. ಈ ಪ್ರಯತ್ನಗಳು ಭಾರತದ ಭವಿಷ್ಯದ ಅಭಿವೃದ್ಧಿಗೆ ಬಲವಾದ ಅಡಿಪಾಯವನ್ನು ಹಾಕಿವೆ, ಈ ಪ್ರಯಾಣದಲ್ಲಿ ಜರ್ಮನಿ ಪ್ರಮುಖ ಪಾಲುದಾರರಾಗಿ ಮುಂದುವರಿಯಲಿದೆ ಎಂದು ಪ್ರಧಾನಮಂತ್ರಿ ಮೋದಿ ಸೇರಿಸಿದರು.

ಜರ್ಮನಿಯ ತಯಾರಿಕಾ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿನ ಅಭಿವೃದ್ಧಿಯೊಂದಿಗೆ ಹೋಲಿಕೆ ಮಾಡುತ್ತಾ, ಪ್ರಧಾನ ಜಾಗತಿಕ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮುತ್ತಿರುವ ಭಾರತದ ಪ್ರಗತಿಯನ್ನು ಪ್ರಧಾನಮಂತ್ರಿಗಳು ಎತ್ತಿ ತೋರಿಸಿದರು. "ಮೇಕ್ ಇನ್ ಇಂಡಿಯಾ" ಉಪಕ್ರಮದ ಅಡಿಯಲ್ಲಿ, ದೇಶವು ತಯಾರಕರಿಗೆ ಉತ್ಪಾದನೆ-ಆಧಾರಿತ ಪ್ರೋತ್ಸಾಹಧನಗಳನ್ನು ನೀಡುತ್ತಿದೆ. ಭಾರತವು ಮೊಬೈಲ್ ಮತ್ತು ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಮುಂಚೂಣಿ ದೇಶವಾಗಿ, ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದಕ, ಹಾಗೂ ಉಕ್ಕು ಮತ್ತು ಸಿಮೆಂಟ್ ಉತ್ಪಾದನೆಯಲ್ಲಿ ಎರಡನೇ ಅತಿದೊಡ್ಡ ಉತ್ಪಾದಕವಾಗಿ ಗಮನಾರ್ಹ ಪ್ರಗತಿ ಸಾಧಿಸಿದೆ. ಈ ಪರಿವರ್ತನೆಯು ಜಾಗತಿಕ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಮಹತ್ವವನ್ನು ಸೂಚಿಸುತ್ತದೆ.

 

ಭಾರತವು ನಾಲ್ಕು-ಚಕ್ರ ವಾಹನಗಳ ತಯಾರಿಕೆಯಲ್ಲಿ ನಾಲ್ಕನೇ ಅತಿದೊಡ್ಡ ಉತ್ಪಾದಕವಾಗಿದೆ. ಮತ್ತು ಅದರ ಸೆಮಿಕಂಡಕ್ಟರ್ ಉದ್ಯಮವು ಜಾಗತಿಕ ಯಶಸ್ಸಿಗಾಗಿ ಸಜ್ಜಾಗಿದೆ ಎಂದು ಪ್ರಧಾನಮಂತ್ರಿಗಳು ಹೇಳಿದರು. ಮೂಲಸೌಕರ್ಯ ಸುಧಾರಣೆ, ಸಾರಿಗೆ ವೆಚ್ಚ ಕಡಿಮೆ ಮಾಡುವುದು, ವ್ಯವಹಾರ ಕಾರ್ಯಾಚರಣೆಗಳನ್ನು ಸುಲಭಗೊಳಿಸುವುದು ಮತ್ತು ಸ್ಥಿರ ಆಡಳಿತವನ್ನು ಖಾತ್ರಿಪಡಿಸುವ ಇತ್ತೀಚಿನ ಸರ್ಕಾರದ ನೀತಿಗಳಿಂದ ಈ ಪ್ರಗತಿ ಸಾಧ್ಯವಾಗಿದೆ. ಭಾರತವು ಭೌತಿಕ, ಸಾಮಾಜಿಕ ಮತ್ತು ಡಿಜಿಟಲ್ ಮೂಲಸೌಕರ್ಯದಲ್ಲಿ ವೇಗವಾದ ಪ್ರಗತಿಯನ್ನು ಸಾಧಿಸುತ್ತಿದೆ. ಭಾರತವು ತನ್ನ ನವೀನ ಡಿಜಿಟಲ್ ತಂತ್ರಜ್ಞಾನಗಳಿಂದ ಗಮನಾರ್ಹ ಜಾಗತಿಕ ಪ್ರಭಾವ ಬೀರುತ್ತಿದೆ. ಭಾರತವು ಈಗ ವಿಶ್ವದ ಅತ್ಯಂತ ವಿಶಿಷ್ಟ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಈಗಾಗಲೇ ಭಾರತದಲ್ಲಿ ಸ್ಥಾಪಿತವಾಗಿರುವ ಜರ್ಮನ್ ಕಂಪನಿಗಳಿಗೆ ತಮ್ಮ ಹೂಡಿಕೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸಿದರು ಮತ್ತು ಇನ್ನೂ ಹಾಜರಾಗದವರಿಗೆ ಭಾರತೀಯ ಮಾರುಕಟ್ಟೆಗೆ ಪ್ರವೇಶಿಸುವ ಬಗ್ಗೆ ಯೋಚಿಸುವಂತೆ ಆಹ್ವಾನಿಸಿದರು. ಭಾರತದ ಬೆಳವಣಿಗೆಯೊಂದಿಗೆ ಸಮನ್ವಯಗೊಳಿಸಲು ಇದು ಸರಿಯಾದ ಸಮಯ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಗಳು, ಭಾರತದ ಚೈತನ್ಯಶೀಲತೆ ಮತ್ತು ಜರ್ಮನಿಯ ನಿಖರತೆ, ಎಂಜಿನಿಯರಿಂಗ್ ಮತ್ತು ನಾವೀನ್ಯತೆಯ ನಡುವಿನ ಪಾಲುದಾರಿಕೆಗೆ ಕರೆ ನೀಡಿದರು. ಪುರಾತನ ನಾಗರಿಕತೆಯಾಗಿ ಭಾರತವು ಯಾವಾಗಲೂ ಜಾಗತಿಕ ಪಾಲುದಾರಿಕೆಗಳನ್ನು ಸ್ವಾಗತಿಸಿದೆ ಎಂಬುದನ್ನು ಎತ್ತಿ ತೋರಿಸುತ್ತಾ ಮತ್ತು ವಿಶ್ವದ ಸಮೃದ್ಧ ಭವಿಷ್ಯವನ್ನು ನಿರ್ಮಿಸುವಲ್ಲಿ ಭಾಗಿಯಾಗಲು ಎಲ್ಲರನ್ನೂ ಆಹ್ವಾನಿಸುವ ಮೂಲಕ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

 

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
10 Years of UPI: From 18 mln to 219 bln transactions, volumes jump 12,000x

Media Coverage

10 Years of UPI: From 18 mln to 219 bln transactions, volumes jump 12,000x
NM on the go

Nm on the go

Always be the first to hear from the PM. Get the App Now!
...
Prime Minister extends his best wishes to Shri Harivansh upon his nomination to the Rajya Sabha
April 10, 2026

Prime Minister Shri Narendra Modi today extended his heartiest best wishes to Shri Harivansh for his upcoming parliamentary tenure following his nomination to the Rajya Sabha by the Hon'ble President.

The Prime Minister remarked that Shri Harivansh has made an invaluable contribution to both journalism and public life, establishing himself as a respected intellectual and thinker. Shri Modi pointed out that his profound thoughts and insights have significantly enriched the proceedings of the House over the past few years. The Prime Minister expressed his sincere pleasure regarding the nomination, affirming that Shri Harivansh's continued presence will further benefit the parliamentary discourse.

The Prime Minister wrote on X:

"हरिवंश जी ने पत्रकारिता और सार्वजनिक जीवन में अमूल्य योगदान दिया है। वे एक सम्मानित बुद्धिजीवी और विचारक हैं। उन्होंने अपने गहन विचारों और अंतर्दृष्टि से पिछले कुछ वर्षों में सदन की कार्यवाही को समृद्ध किया है। मुझे प्रसन्नता है कि माननीय राष्ट्रपति जी ने उन्हें राज्यसभा के लिए मनोनीत किया है। आगामी संसदीय कार्यकाल के लिए उन्हें मेरी बहुत-बहुत शुभकामनाएं!"