‘ವಸುಧೈವ ಕುಟುಂಬಕಂ’ ಪರಂಪರೆ ವಿಸ್ತರಣೆ ಮಾಡಿದ್ದಕ್ಕಾಗಿ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂಬುದನ್ನು ಆಧಾತ್ಮಿಕ ಮಂತ್ರವನ್ನಾಗಿ ಪ್ರಚಾರ ಮಾಡಿದ್ದಕ್ಕಾಗಿ ತೇರಾಪಂಥ್ ಗೆ ಅಭಿನಂದನೆ ಸಲ್ಲಿಕೆ
“ಯಾವುದೇ ರೀತಿಯ ವ್ಯಸನದ ಅನುಪಸ್ಥಿತಿಯಲ್ಲಿ ಮಾತ್ರ ನಿಜವಾದ ಆತ್ಮ ಸಾಕ್ಷಾತ್ಕಾರ ಸಾಧ್ಯ’’
“ಇಂದಿಗೂ ಸರ್ಕಾರದ ಮೂಲಕ ಎಲ್ಲವನ್ನೂ ಮಾಡುವ ಪ್ರವೃತ್ತಿಯಿಲ್ಲ, ಇಲ್ಲಿ ಸರ್ಕಾರ, ಸಮಾಜ ಮತ್ತು ಆಧ್ಯಾತ್ಮಿಕ ಅಧಿಕಾರ ಯಾವಾಗಲೂ ಸಮಾನ ಪಾತ್ರವನ್ನು ಹೊಂದಿರುತ್ತದೆ’’

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ವೇತಾಂಬರ ತೇರಾಪಂಥ್‌ನ ಅಹಿಂಸಾ ಯಾತ್ರೆ ಸಂಪನ್ನತಾ ಸಮರೋಪ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿ ತಮ್ಮ ಸಂದೇಶ ನೀಡಿದರು. 

ಆರಂಭದಲ್ಲಿ ಪ್ರಧಾನಮಂತ್ರಿ ಅವರು, ನಿರಂತರ ಚಲನೆಗೆ ಒತ್ತು ನೀಡುವ ಸಾವಿರಾರು ವರ್ಷಗಳ ಭಾರತೀಯ ಸಂತರ ಸಂಪ್ರದಾಯವನ್ನು ನೆನಪಿಸಿಕೊಂಡರು. ಶ್ವೇತಾಂಬರ ತೇರಾಪಂಥವು ಆಲಸ್ಯವನ್ನು ಆಧ್ಯಾತ್ಮಿಕ ಪ್ರತಿಜ್ಞೆಯಾಗಿ ಮಾಡಿದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು. 

ಮೂರು ದೇಶಗಳಲ್ಲಿ 18 ಸಾವಿರ ಕಿಲೋಮೀಟರ್ ಪಾದಯಾತ್ರೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರು ಆಚಾರ್ಯ ಮಹಾಶ್ರಮನ್ ಜಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ವಸುಧೈವ ಕುಟುಂಬಕಂ’ ಸಂಪ್ರದಾಯವನ್ನು ವಿಸ್ತರಿಸಿದ್ದಕ್ಕಾಗಿ ಮತ್ತು ‘ಏಕ್ ಭಾರತ್ ಶ್ರೇಷ್ಠ ಭಾರತ್’ ಎಂಬ ಮಂತ್ರವನ್ನು ಆಧ್ಯಾತ್ಮಿಕ ಪ್ರತಿಜ್ಞೆಯಾಗಿ ಪ್ರಚಾರ ಮಾಡಿದ ಆಚಾರ್ಯರನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ಪ್ರಧಾನಮಂತ್ರಿ ಅವರು ಶ್ವೇತಾಂಬರ ತೇರಾಪಂಥ್‌ನೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡರು ಮತ್ತು “ಯೇ ತೇರಾ ಪಂಥ್ ಹೈ, ಯೇ ಮೇರಾ ಪಂಥ್ ಹೈ' - ಈ ತೇರಾಪಂಥ್ ನನ್ನ ಮಾರ್ಗವಾಗಿದೆ ಎಂಬ ಅವರ ಹಿಂದಿನ ಹೇಳಿಕೆಯನ್ನು ಸ್ಮರಿಸಿದರು. 

2014ರಲ್ಲಿ ಕೆಂಪು ಕೋಟೆಯಿಂದ ಚಾಲನೆ ನೀಡಲಾದ 'ಪಾದಯಾತ್ರೆ'ಯ ಪ್ರಾಮುಖ್ಯವನ್ನು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು ಮತ್ತು ಕಾಕತಾಳೀಯವೆಂದರೆ ಅದೇ ವರ್ಷದಲ್ಲಿ ತಾವು ಸ್ವತಃ ಭಾರತದ ಪ್ರಧಾನಮಂತ್ರಿಯಾಗಿ ಹೊಸ ಪಯಣ ಆರಂಭಿಸಿದ್ದು ಮತ್ತು ಸಾರ್ವಜನಿಕ ಕಲ್ಯಾಣದ ಸೇವೆಯ ಪಣಯವನ್ನು ಆರಂಭಿಸಿದೆ ಎಂದು ಅವರು ಉಲ್ಲೇಖಿಸಿದರು.ಪಾದಯಾತ್ರೆಯ ವಿಷಯ ಅಂದರೆ ಸಾಮರಸ್ಯ, ನೈತಿಕತೆ ಮತ್ತು ನಿಷ್ಠುರತೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಯಾವುದೇ ರೀತಿಯ ವ್ಯಸನ ಇಲ್ಲದಿದ್ದಾಗ ಮಾತ್ರ ನಿಜವಾದ ಆತ್ಮಸಾಕ್ಷಾತ್ಕಾರ ಸಾಧ್ಯ ಎಂದು ಹೇಳಿದರು. ವ್ಯಸನಗಳಿಂದ ಮುಕ್ತಿಯು ಬ್ರಹ್ಮಾಂಡದೊಂದಿಗೆ ಸ್ವಯಂ ವಿಲೀನಕ್ಕೆ ಕಾರಣವಾಗುತ್ತದೆ ಮತ್ತು ಎಲ್ಲರ ಕಲ್ಯಾಣವು ಸಾಧ್ಯವಾಗುತ್ತದೆ ಎಂದರು, 

ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ನಡುವೆಯೇ, ದೇಶವು ಸಮಾಜ ಮತ್ತು ರಾಷ್ಟ್ರದ ಕಡೆಗೆ ಆತ್ಮವನ್ನು ಮೀರಿದ ಕರ್ತವ್ಯಕ್ಕೆ ಕರೆ ನೀಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಾಯಸ್ ಎಂಬ ಭಾವನೆಯಿಂದ ದೇಶ ಸಾಗುತ್ತಿದೆ ಎಂದರು. ಭಾರತದ ಪ್ರವೃತ್ತಿಯು ಎಂದಿಗೂ ಸರ್ಕಾರದ ಮೂಲಕ ಎಲ್ಲವನ್ನೂ ಮಾಡುವುದಲ್ಲ ಮತ್ತು ಇಲ್ಲಿ ಸರ್ಕಾರ, ಸಮಾಜ ಮತ್ತು ಆಧ್ಯಾತ್ಮಿಕ ಅಧಿಕಾರವು ಯಾವಾಗಲೂ ಸಮಾನ ಪಾತ್ರವನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ದೇಶವು ತನ್ನ ಪ್ರತಿಜ್ಞೆಗಳನ್ನು ಸಾಧಿಸುವ ಕಡೆಗೆ ಕರ್ತವ್ಯದ ಹಾದಿಯಲ್ಲಿ ನಡೆಯುವಾಗ ಈ ಮನೋಭಾವವನ್ನು ಪ್ರತಿಬಿಂಬಿಸುತ್ತಿದೆ ಎಂದು ಅವರು ಹೇಳಿದರು. 

ಭಾಷಣದ ಕೊನೆಯಲ್ಲಿ ಪ್ರಧಾನಮಂತ್ರಿ ಅವರು ದೇಶದ ಪ್ರಯತ್ನಗಳು ಮತ್ತು ಪ್ರತಿಜ್ಞೆಗಳನ್ನು ಮುಂದೆ ಕೊಂಡೊಯ್ಯುವುದನ್ನು ಮುಂದುವರಿಸುವಂತೆ ಆಧ್ಯಾತ್ಮಿಕ ನಾಯಕರಲ್ಲಿ ಮನವಿ ಮಾಡಿದರು. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
From 8 PM Announcements To Midnight Reels: Prime Minister Modi Leads Algorithmic Pivot To Connect With Gen Z

Media Coverage

From 8 PM Announcements To Midnight Reels: Prime Minister Modi Leads Algorithmic Pivot To Connect With Gen Z
NM on the go

Nm on the go

Always be the first to hear from the PM. Get the App Now!
...
Share your ideas for PM Modi's Independence Day speech
July 25, 2026

Prime Minister Narendra Modi has invited citizens to share their ideas and suggestions for his Independence Day address.

Share your thoughts and suggestions. Some of the ideas received may be mentioned by the Prime Minister during his Independence Day address from the Red Fort.