Prime Minister inaugurates Vibrant Gujarat Global Summit 2017
India's strength lies in three Ds -Democracy, Demography and Dividend : PM
India has become the fastest growing major economy in the world: PM
Our govt is strongly committed to continue the reform of the Indian economy: PM
Our govt has placed highest priority to ease of doing business: PM
Our development needs are huge. Our development agenda is ambitious: PM

ಪ್ರಧಾನಮಂತ್ರಿ ಅವರು ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನ 2017 ಉದ್ದೇಶಿಸಿ ಮಾಡಿದ ಭಾಷಣದ ಪಠ್ಯ

ನಾನು ಎಲ್ಲರನ್ನೂ ಈ ವೈಬ್ರೆಂಟ್ ಗುಜರಾತ್ ಸಮಾವೇಶಕ್ಕೆ ಸ್ವಾಗತಿಸುತ್ತೇನೆ. ಹೊಸ ವರ್ಷದ ಶುಭಾಶಯಗಳು, ಈ ವರ್ಷ ಎಲ್ಲರಿಗೂ ಶ್ರೇಯಸ್ಸು ಹಾಗೂ ಯಶಸ್ಸನ್ನು ತರಲಿ ಎಂದು ಆಶಿಸುತ್ತೇನೆ. ಈ ಸಂದರ್ಭದಲ್ಲಿ ನಾನು 2003ರಲ್ಲಿ ಸಮಾವೇಶ ಆರಂಭಿಸಿದ್ದನ್ನು ನೆನಪು ಮಾಡಿಕೊಳ್ಳುತ್ತೇನೆ. ಅಂದು ಆರಂಭವಾದ ಈ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆದಿದೆ.

 

ನಾನು ಈ ಸಮಾವೇಶದ ಪಾಲುದಾರ ರಾಷ್ಟ್ರಗಳು ಮತ್ತು ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಅವುಗಳೆಂದರೆ ಜಪಾನ್, ಕೆನಡ, ಅಮೆರಿಕ, ಬ್ರಿಟನ್, ನೆದರ್‍ಲ್ಯಾಂಡ್ಸ್, ಆಸ್ಟ್ರೇಲಿಯಾ, ಡೆನ್ಮಾರ್ಕ್, ಫ್ರಾನ್ಸ್, ಪೋಲ್ಯಾಂಡ್, ಸ್ವೀಡನ್, ಸಿಂಗಾಪುರ್ ಮತ್ತು ಯುಎಇ. ನಾನು ವಿಶೇಷವಾಗಿ ಈ ವೈಬ್ರೆಂಟ್ ಗುಜರಾತ್ ಸಮಾವೇಶದ ಆರಂಭಿಕ ಪಾಲುದಾರ ರಾಷ್ಟ್ರಗಳಾದ ಜಪಾನ್ ಮತ್ತು ಕೆನಡಾಕ್ಕೆ ಧನ್ಯವಾದ ಅರ್ಪಿಸುತ್ತೇನೆ.

ಹಲವು ಜಾಗತಿಕ ಪ್ರತಿಷ್ಠಿತ ಸಂಸ್ಥೆಗಳು ಹಾಗೂ ಕಂಪನಿಗಳು ಈ ಸಮಾವೇಶದಲ್ಲಿ ಪಾಲುದಾರಿಕೆ ಹೊಂದಿವೆ. ಆ ಪಾಲುದಾರಿಕೆಗಾಗಿ ಅವರನ್ನು ನಾನು ಅಭಿನಂದಿಸುತ್ತೇನೆ. ನೀವು ಭಾಗಿಯಾಗಿರುವುದು ವಾಣಿಜ್ಯೋದ್ಯಮಿಗಳಿಗೆ ಹಾಗೂ ಯುವ ಉದ್ದಿಮೆದಾರರಿಗೆ ಸ್ಫೂರ್ತಿ ಒದಗಿಸಿದೆ. ನಿಮ್ಮ ಬೆಂಬಲವಿಲ್ಲದೆ ಈ ದ್ವೈವಾರ್ಷಿಕ ಸಮಾವೇಶಗಳು ಎಂಟನೇ ಆವೃತಿ ಕಾಣುತ್ತಿರಲಿಲ್ಲ, ಪ್ರತಿಯೊಂದು ಸಮಾವೇಶವೂ ಹಿಂದಿನ ಸಮಾವೇಶಕ್ಕಿಂತ ಅತ್ಯಂತ ಬೃಹದಾಕಾರವಾಗಿ ಬೆಳೆಯುತ್ತಿವೆ. ಹಿಂದಿನ ಮೂರು ಸಮಾವೇಶಗಳು ವಿಶೇಷವಾಗಿ ಅತಿದೊಡ್ಡವಾದವು. ನೂರಕ್ಕೂ ಹೆಚ್ಚು ರಾಜಕೀಯ ಹಾಗೂ ವಾಣಿಜ್ಯೋದ್ಯಮಿಗಳು ಈ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಜಗತ್ತಿನ ನಾನಾ ರಾಷ್ಟ್ರಗಳ ಹಲವು ಕಂಪನಿಗಳು ಭಾಗವಹಿಸುವ ಮೂಲಕ ಈ ಸಮಾವೇಶವನ್ನು ನಿಜಕ್ಕೂ ಜಾಗತಿಕ ಸಮಾವೇಶವನ್ನಾಗಿ ಮಾಡಿವೆ. ನಾನು ಇಲ್ಲಿ ಭಾಗವಹಿಸಿರುವ ಪ್ರತಿನಿಧಿಗಳಿಗೆ ಪ್ರತಿಯೊಬ್ಬರೂ ಒಬ್ಬರನೊಬ್ಬರು ಭೇಟಿಯಾಗಿ ಸಮಾಲೋಚನೆಗಳನ್ನು ನಡೆಸಿ, ಸಮಾವೇಶದ ಉತ್ತಮ ಲಾಭ ಪಡೆಯಬೇಕು ಎಂದು ಆಗ್ರಹಿಸುತ್ತೇನೆ. ನೀವು ವಸ್ತುಪ್ರದರ್ಶನ ಮತ್ತು ಮಳಿಗೆಗಳಿಗೆ ಭೇಟಿ ನೀಡಿ, ಅಲ್ಲಿ ನೂರಾರು ಕಂಪನಿಗಳು ಪ್ರದರ್ಶನಕ್ಕೆ ಇಟ್ಟಿರುವ ಉತ್ಪನ್ನಗಳು ಹಾಗೂ ಅವುಗಳ ಬಗ್ಗೆ ತಿಳಿದುಕೊಳ್ಳಬೇಕು.

 

ಗುಜರಾತ್ ಇದು ಮಹಾತ್ಮ ಗಾಂಧಿ ಮತ್ತು ಸರ್ದಾರ್ ಪಟೇಲ್ ಅವರ ಭೂಮಿ. ಇದು ಭಾರತದಲ್ಲಿ ವ್ಯಾಪಾರದ ಸ್ಫೂರ್ತಿಯನ್ನು ಪ್ರತಿನಿಧಿಸುವ ಜಾಗವೂ ಹೌದು. ದಶಕಗಳ ಹಿಂದಿನಿಂದಲೂ ಇಲ್ಲಿ ವಾಣಿಜ್ಯ ಮತ್ತು ವ್ಯಾಪಾರ ಮುಂಚೂಣಿಯಲ್ಲಿದೆ. ಶತಮಾನಗಳ ಹಿಂದೆ 7 ಸಮುದ್ರಗಳಲ್ಲಿ ಜನರು ಅವಕಾಶಗಳಿಗಾಗಿ ಹುಡುಕಾಡುತ್ತಿದ್ದರು. ಈಗಲೂ ಈ ರಾಜ್ಯದ ಮೂಲದ ಅತಿ ಹೆಚ್ಚಿನ ಮಂದಿ ಹೊರ ದೇಶಗಳಲ್ಲಿ ದುಡಿಯುತ್ತಿದ್ದಾರೆ. ಇಲ್ಲಿನ ಜನ ಎಲ್ಲಿ ಹೋಗಿ ನೆಲೆಸಿದ್ದರೋ ಅಲ್ಲೆಲ್ಲಾ ಮಿನಿ ಗುಜರಾತ್‍ಗಳನ್ನು ನಿರ್ಮಿಸಿದ್ದಾರೆ. ಅದಕ್ಕಾಗಿಯೇ ನಾವು ಹೆಮ್ಮೆಯಿಂದ ಹೇಳುತ್ತೇವೆ. “ಎಲ್ಲೆಲ್ಲಿ ಗುಜರಾತಿಗಳು ನೆಲೆಸಿರುತ್ತಾರೋ ಅವರು ಅಲ್ಲೇ ಸದಾಕಾಲ ಗುಜರಾತಿಗಳಾಗಿಯೇ ಇರುತ್ತಾರೆ”.

ಗುಜರಾತ್ ಇದೀಗ ಗಾಳಿಪಟ ಉತ್ಸವದ ಮಧ್ಯಭಾಗದಲ್ಲಿದೆ. ಗಾಳಿಪಟಗಳು ನಮ್ಮನ್ನು ಇನ್ನು ಹೆಚ್ಚಿನ ಎತ್ತರಕ್ಕೆ ಹಾರಲು ಉತ್ತೇಜಿಸಲಿ.

ಗೆಳೆಯರೇ,

            ನಾನು ಆಗಿದ್ದಾಂಗೆ ಹೇಳುತ್ತಿರುತ್ತೇನೆ ಭಾರತದ ಸಾಮಥ್ರ್ಯ ವಿರುವುದು ಮೂರು ‘ಡಿ’ಗಳಲ್ಲಿ ಅಂದರೆ ಡೆಮಾಕ್ರಸಿ, ಡೆಮೋಗ್ರಫಿ ಮತ್ತು ಡಿಮಾಂಡ್ – ಪ್ರಜಾಪ್ರಭುತ್ವ, ಜನಸಂಖ್ಯೆ ಮತ್ತು ಬೇಡಿಕೆ.

            ನಮ್ಮ ಅತಿದೊಡ್ಡ ಶಕ್ತಿ ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆ. ಕೆಲವರು ಹೇಳಬಹುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪರಿಣಾಮಕಾರಿ ಮತ್ತು ತ್ವರಿತ ಆಡಳಿತ ನೀಡುವುದು ಸಾಧ್ಯವಿಲ್ಲವೆಂದು, ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಸಹ ಕ್ಷಿಪ್ರ ಫಲಿತಾಂಶಗಳನ್ನು ನೀಡುವುದು ಸಾಧ್ಯ ಎಂಬುದನ್ನು ನಿರೂಪಿಸಿದ್ದೇವೆ.

            ಕಳೆದ ಎರಡೂವರೆ ವರ್ಷಗಳಲ್ಲಿ ಹಲವು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧಾ ಸಂಸ್ಕøತಿಯನ್ನು ಬೆಳೆಸುವಲ್ಲಿ ಯಶಸ್ವಿಯಾಗಿದ್ದೇವೆ. ರಾಜ್ಯಗಳಿಗೆ ಉತ್ತಮ ಆಡಳಿತದ ಮಾನದಂಡಗಳಡಿ ರೇಟಿಂಗ್ ನೀಡಲಾಗಿದೆ. ಈ ಪ್ರಕ್ರಿಯೆಯಲ್ಲಿ ವಿಶ್ವಬ್ಯಾಂಕ್ ನಮಗೆ ಸಹಕರಿಸುತ್ತಿದೆ.

ಇನ್ನು ಜನಸಂಖ್ಯೆ ಬಗ್ಗೆ ಹೇಳುವುದಾದರೆ ನಮ್ಮದು ಯುವಶಕ್ತಿಯ ರಾಷ್ಟ್ರ. ನಮ್ಮ ಶಿಸ್ತಿನ ಬದ್ಧತೆ ಇರುವ ಮತ್ತು ಪ್ರತಿಭಾವಂತ ಯುವ ಸಮೂಹ, ಜಾಗತಿಕ ಮಟ್ಟದ ದುಡಿಯುವ ಶಕ್ತಿಗಳಿಗಿಂತಲೂ ಶ್ರೇಷ್ಠ. ಇಂಗ್ಲಿಷ್ ಮಾತನಾಡುವ ಎರಡನೇ ಅತಿದೊಡ್ಡ ರಾಷ್ಟ್ರ ನಮ್ಮದು. ನಮ್ಮ ಯುವಕರು ಕೇವಲ ಉದ್ಯೋಗಗಳಿಗಾಗಿ ಎದುರು ನೋಡುತ್ತಿಲ್ಲ, ಅವರು ಯಾವುದೇ ರೀತಿಯ ಸವಾಲುಗಳನ್ನು ಎದುರಿಸಿ, ಉದ್ಯಮಿಗಳಾಗಲು ಹಾತೊರೆಯುತ್ತಿದ್ದಾರೆ.

ಇನ್ನು ಬೇಡಿಕೆಯ ಬಗ್ಗೆ ಹೇಳುವುದಾದರೆ ನಮ್ಮ ಬೆಳೆಯುತ್ತಿರುವ ಮಧ್ಯಮ ವರ್ಗ ದೊಡ್ಡ ದೇಸೀಯ ಮಾರುಕಟ್ಟೆಗೆ ಅತ್ಯುತ್ತಮ ಅವಕಾಶಗಳನ್ನು ಒದಗಿಸಿಕೊಟ್ಟಿದೆ.

ಭಾರತದ ಕರಾವಳಿ ವಲಯ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ಯೂರೋಪ್‍ನ ಹಲವು ಜಾಗತಿಕ ದೊಡ್ಡ ಮಾರುಕಟ್ಟೆಗಳಿಗೆ ಸಂಪರ್ಕ ಕಲ್ಪಿಸುತ್ತವೆ. ನಿಸರ್ಗವೂ ಕೂಡ ನಮಗೆ ಅನುಕೂಲಕಾರಿಯಾಗಿದೆ. ಮೂರು ಬಗೆಯ ಬೆಳೆ ಪದ್ಧತಿ ನಮಗೆ ಆಹಾರ ಧಾನ್ಯ, ತರಕಾರಿ ಹಾಗೂ ಹಣ್ಣುಗಳನ್ನು ಯಥೇಚ್ಛವಾಗಿ ಬೆಳೆಯಲು ಅವಕಾಶ ಕಲ್ಪಿಸಿದೆ.

ನಮ್ಮಲಿನ ವನಸ್ಪತಿ ಮತ್ತು ಪ್ರಾಣಿ ಸಮೂಹ ಸಂಪತ್ತು ಬೇರಾವ ದೇಶದಲ್ಲೂ ಸಿಗುವುದಿಲ್ಲ. ನಮ್ಮ ಸಂಸ್ಕøತಿ ಉತ್ಕøಷ್ಟವಾದುದು. ಇಲ್ಲಿನ ಜೀವನಶೈಲಿ ವಿಭಿನ್ನವಾದುದು. ನಮ್ಮ ಸಂಸ್ಥೆಗಳು ಹಾಗೂ ವಿದ್ವಾಂಸರು ಜಗತ್ತಿನೆಲ್ಲೆಡೆ ಗುರುತಿಸಲ್ಪಟ್ಟಿದ್ದಾರೆ. ಭಾರತ ಇದೀಗ ಸಂಶೋಧನಾ ಮತ್ತು ಅಭಿವೃದ್ಧಿಯ ತಾಣವಾಗಿ ರೂಪುಗೊಳ್ಳುತ್ತಿದೆ. ನಾವು ವಿಜ್ಞಾನಿಗಳು ಹಾಗೂ ಇಂಜಿನಿಯರ್‍ಗಳ ಅಭಿವೃದ್ಧಿಯಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ.

ನಮ್ಮ ಮನರಂಜನಾ ಉದ್ಯಮ ವಿಶ್ವದಾದ್ಯಂತ ಅಲೆಗಳನ್ನು ಸೃಷ್ಟಿಸಿದೆ. ಇವೆಲ್ಲಾ ಕಾರಣಗಳಿಂದಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಜೀವನವನ್ನು ಇಲ್ಲಿ ನಡೆಸಲು ಸಹಕಾರಿಯಾಗಿದೆ.

ಗೆಳೆಯರೇ,

            ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತವನ್ನು ಬದಿಗೊತ್ತಿ, ಉತ್ತಮ ಪಾರದರ್ಶಕ ಸರ್ಕಾರ ನೀಡುವುದು ನಮ್ಮ ಮೊದಲ ಹಾಗೂ ಅಗ್ರ ಆದ್ಯತೆಯಾಗಿದ್ದು, ಅದನ್ನೇ ಮಾಡಿಕೊಂಡು ಬರುತ್ತಿದ್ದೇವೆ. ನಮ್ಮ ರಾಜಕೀಯ ವ್ಯವಸ್ಥೆ ಹಾಗೂ ಆರ್ಥಿಕತೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ತರುವುದು ನಮ್ಮ ಮುನ್ನೋಟ ಹಾಗೂ ಯೋಜನೆಯಾಗಿದೆ. ಆ ನಿಟ್ಟಿನಲ್ಲಿ ನಾವು ಹಲವು ಸರಣಿ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಆ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ ನಾವು ಈ ಬದಲಾವಣೆಗಳನ್ನು ಮಾಡಿದ್ದೇವೆ.

         ಸಂಬಂಧ ಆಧಾರಿತ ಆಡಳಿತದಿಂದ ವ್ಯವಸ್ಥೆ ಆಧಾರಿತ ಆಡಳಿತದತ್ತ.

         ವಿವೇಚನಾ ಆಡಳಿತದಿಂದ ನೀತಿ ಆಧಾರಿತ ಆಡಳಿತದತ್ತ.

         ಪದೇ ಪದೇ ಹಸ್ತಕ್ಷೇಪ ಮಾಡುವುದರಿಂದ ತಾಂತ್ರಿಕ ಮಧ್ಯ ಪ್ರವೇಶದತ್ತ.

         ಸ್ವಜನ ಪಕ್ಷಪಾತದಿಂದ ಸಮಾನ ಅವಕಾಶಗಳನ್ನು ನೀಡುವತ್ತ.

         ಅನಧಿಕೃತ ಆರ್ಥಿಕ ವ್ಯವಸ್ಥೆಯಿಂದ ಅಧಿಕೃತ ಆರ್ಥಿಕ ವ್ಯವಸ್ಥೆಯತ್ತ.

 

ಈ ಎಲ್ಲ ಕೆಲಸಗಳನ್ನು ಮಾಡುವಲ್ಲಿ ಡಿಜಿಟಲ್ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. ನಾನು ಆಗಿಂದಾಗ್ಗೆ ಹೇಳುತ್ತಿರುತ್ತೇನೆ. ಇ-ಆಡಳಿತ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ಎಂದು ಹಾಗಾಗಿಯೇ ನಾವು ನೀತಿ ಆಧಾರಿತ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆನ್‍ಲೈನ್ ಪ್ರಕ್ರಿಯೆಯಿಂದ ನಿರ್ಧಾರದಲ್ಲಿ ಪಾರದರ್ಶಕತೆ ಹಾಗೂ ಅತ್ಯಂತ ವೇಗ ಬಂದಿದೆ. ನಾವು ವಿವೇಚನೆಯನ್ನು ಹೋಗಲಾಡಿಸಿ, ಪಾರದರ್ಶಕತೆಯನ್ನು ತರಲು ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ನಾವು ವಿಶ್ವದ ಡಿಜಿಟಲೀಕರಣ ಆರ್ಥಿಕತೆ ಹೊಂದುವತ್ತ ಸಾಗಿದ್ದೇವೆ. ನಮ್ಮನ್ನು ನಂಬಿ, ನಿಮ್ಮಲ್ಲಿ ಬಹುತೇಕ ಮಂದಿ ಭಾರತದಲ್ಲಿ ಬದಲಾವಣೆಯಾಗಬೇಕು ಎಂದು ಬಯಸಿದ್ದೀರಿ. ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ ಆ ಬದಲಾವಣೆ ನಿಮ್ಮ ಕಣ್ಣ ಮುಂದೆಯೇ ಆಗುತ್ತಿದೆ ಎಂದು.

ಕಳೆದ ಎರಡೂವರೆ ವರ್ಷಗಳಿಂದ ನಾವು ನಿರಂತರವಾಗಿ ಭಾರತದ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡಿಕೊಂಡು ನಮ್ಮ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸಲು ಶ್ರಮಿಸುತ್ತಿದ್ದೇವೆ. ಅದರ ಫಲಿತಾಂಶಗಳು ಉತ್ತೇಜನಕಾರಿಯಾಗಿವೆ. ಜಿಡಿಪಿ ಬೆಳವಣಿಗೆ, ಹಣದುಬ್ಬರ ನಿಯಂತ್ರಣ, ವಿತ್ತೀಯ ಕೊರತೆ, ಚಾಲ್ತಿಖಾತೆ ಕೊರತೆ ಮತ್ತು ವಿದೇಶಿ ಬಂಡವಾಳ ಆಕರ್ಷಿಸು ಹಲವು ಆರ್ಥಿಕ ಸೂಚ್ಯಂಕಗಳಲ್ಲಿ ಗಮನಾರ್ಹ ಪ್ರಗತಿಯನ್ನು ನಾವು ಸಾಧಿಸಿದ್ದೇವೆ.

ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ನಾವು ಅತ್ಯುತ್ತಮ ಪ್ರಗತಿ ಸಾಧಿಸಿದ್ದೇವೆ. ಇಂದು ಭಾರತ ಜಾಗತಿಕ ಆರ್ಥಿಕತೆಯಲ್ಲಿ ಅತ್ಯುತ್ತಮ ಸ್ಥಾನದಲ್ಲಿದೆ. ನಾವು ಜಾಗತಿಕ ಬೆಳವಣಿಗೆಯ ಇಂಜಿನ್‍ಆಗಿ ಬೆಳೆಯುತ್ತಿದ್ದೇವೆ.

ವಿಶ್ವಬ್ಯಾಂಕ್,ಐಎಂಎಫ್ ಮತ್ತು ಇತರೆ ಸಂಸ್ಥೆಗಳು ಮುಂದಿನ ದಿನಗಳಲ್ಲಿ ದೇಶ ಅತ್ಯುತ್ತಮ ಆರ್ಥಿಕ ಪ್ರಗತಿ ಕಾಣಲಿವೆ ಎಂದು ಅಂದಾಜಿಸಿವೆ. 2014-15ರಲ್ಲಿ ಭಾರತ ಜಾಗತಿಕ ಪ್ರಗತಿಗೆ ಶೇ.12.5ರಷ್ಟು ಕೊಡುಗೆ ನೀಡಿದೆ. ವಿಶ್ವದ ಆರ್ಥಿಕತೆಗೆ ಹೋಲಿಸಿದರೆ ಭಾರತಕ್ಕೆ ಜಾಗತಿಕ ಕೊಡುಗೆ ಶೇ.68ಕ್ಕೂ ಅಧಿಕ.

ಉತ್ತಮ ವ್ಯಾಪಾರಿ ವಾತಾವರಣವನ್ನು ಸೃಷ್ಟಿಸುವುದು ಮತ್ತು ಬಂಡವಾಳ ಆಕರ್ಷಿಸುವುದು ನಮ್ಮ ಅಗ್ರ ಆದ್ಯತೆಯಾಗಿದೆ. ನಮ್ಮ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಈ ಕೆಲಸ ಮಾಡಬೇಕಿದೆ. ಆ ನಿಟ್ಟಿನಲ್ಲಿ, ಹಲವು ಐತಿಹಾಸಿಕ ಕ್ರಮಗಳನ್ನು ಜಾರಿಗೊಳಿಸಲಾಗುತಿದೆ. ಅದರಲ್ಲಿ ಸರಕು ಮತ್ತು ಸೇವಾ ತೆರಿಗೆ-ಜಿಎಸ್‍ಟಿ ಕೂಡ ಒಂದು.

ದಿವಾಳಿ ಮತ್ತು ಸಾಲ ತೀರಿಸಲಾಗದ ಸಂಕೇತ, ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ ರಚನೆ, ಹೊಸ ರಾಜೀ ಸಂಧಾನ ಚೌಕಟ್ಟು ಮತ್ತು ಹೊಸ ಬೌದ್ಧಿಕ ಹಕ್ಕು ಸಾಮ್ಯ ಪದ್ದತಿಯನ್ನು ಜಾರಿಗೊಳಿಸಲಾಗಿದೆ. ಹೊಸ ವಾಣಿಜ್ಯ ಕೋರ್ಟ್‍ಗಳನ್ನು ಸ್ಥಾಪಿಸಲಾಗಿದೆ. ಇವು ಕೆಲವು ಉದಾಹರಣೆಗಳಷ್ಟೇ, ಆ ನಿಟ್ಟಿನಲ್ಲಿ ನಾವು ಇನ್ನು ಮುಂದೆ ಹೋಗುತ್ತಿದ್ದೇವೆ. ಭಾರತೀಯ ಆರ್ಥಿಕತೆಯಲ್ಲಿ ಸುಧಾರಣೆಗಳನ್ನು ಮುಂದುವರಿಸಲು ನಮ್ಮ ಸರ್ಕಾರ ಬದ್ಧವಾಗಿದೆ.

ಗೆಳೆಯರೇ..

ಸಲಭವಾಗಿ ವ್ಯಾಪಾರ ಮಾಡುವಂತಹ ವಾತಾವರಣ ನಿರ್ಮಿಸಲು ಹೆಚ್ಚಿನ ಆದ್ಯತೆ ನೀಡಲಾಗಿದೆ. ಲೈಸನ್ಸ್ ನೀಡುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ, ಅನುಮತಿಗಳು,ಮರು ಪಾವತಿಗಳು ಮತ್ತು ಸ್ಥಳ ಪರಿವೀಕ್ಷಣೆ ಕುರಿತ ನಿಯಮಗಳನ್ನು ಸರಳಗೊಳಿಸಲಾಗಿದೆ. ನಿಯಂತ್ರಣ ಚೌಕಟ್ಟಿನಲ್ಲಿ ಹಲವು ಸುಧಾರಣೆಗಳನ್ನು ತರುವ ಗುರಿ ಹೊಂದಲಾಗಿದ್ದು, ಅದಕ್ಕಾಗಿ ನಾನಾ ವಲಯಗಳಲ್ಲಿ ನೂರಾರು ಕ್ರಿಯಾ ಅಂಶಗಳನ್ನು ಜಾರಿಗೊಳಿಸಿ ಅವುಗಳ ಮೇಲೆ ನಿಗಾ ಇರಿಸಲಾಗಿದೆ.

ಈ ಎಲ್ಲ ಪ್ರಯತ್ನಗಳ ಫಲ ಎಂದರೆ, ಹಲವು ಸೂಚ್ಯಂಕಗಳಲ್ಲಿ ಭಾರತ ಜಾಗತಿಕ ಮಟ್ಟದ ರ್ಯಾಂಕಿಂಗ್‍ನಲ್ಲಿ ಅಗ್ರ ಸ್ಥಾನದಲ್ಲಿರುವುದು. ಕಳೆದ ಎರಡೂವರೆ ವರ್ಷಗಳಲ್ಲಿನ ಜಾಗತಿಕ ವರದಿಗಳು ಹಾಗೂ ಮೌಲ್ಯಮಾಪನಗಳಿಂದ, ಭಾರತದಲ್ಲಿ ನೀತಿ, ನಿರೂಪಣೆಗಳು ಹಾಗೂ ಆರ್ಥಿಕ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ ಎಂಬುದು ತಿಳಿದುಬಂದಿದೆ.

            ವಿಶ್ವಬ್ಯಾಂಕ್ ವಾಣಿಜ್ಯ ವ್ಯಾಪಾರ ವರದಿಯಲ್ಲಿ ಭಾರತದ ರ್ಯಾಂಕಿಂಗ್ ಸುಧಾರಿಸಿದೆ. ಯುಎನ್‍ಸಿಟಿಯಡಿ ಬಿಡುಗಡೆ ಮಾಡಿರುವ ವಿಶ್ವ ಬಂಡವಾಳ ಹೂಡಿಕೆ – 2016 ವರದಿಯಲ್ಲಿ 2016 – 2018ರ ನಡುವಿನ ಅಗ್ರ ಉತ್ತಮ ಆರ್ಥಿಕ ಬೆಳವಣಿಗೆ ಪಟ್ಟಿಯಲ್ಲಿ ಭಾರತ ಮೂರನೇ ರ್ಯಾಂಕ್‍ನಲ್ಲಿದೆ 2015 – 2016 ಮತ್ತು 2016 – 2017ನೇ ಸಾಲಿನ ವಿಶ್ವ ಆರ್ಥಿಕ ಫೋರಂನ ಜಾಗತಿಕ ಸ್ಪರ್ಧಾತ್ಮಕ ವರದಿಗಳಲ್ಲಿ ಭಾರತದ ಸ್ಥಾನ 32 ಸ್ಥಾನಗಳಿಗೇರಿದೆ. ಡಬ್ಲ್ಯೂಐಪಿಒ ಮತ್ತು ಇತರ ಸಂಸ್ಥೆಗಳು ಹೊರ ತಂದಿರುವ ಜಾಗತಿಕ ಅನ್ವೇಷಣಾ ಸೂಚ್ಯಂಕ 2016 ವರದಿಯಲ್ಲಿ ಭಾರತ 16ನೇ ಕ್ರಮಾಂಕಕ್ಕೆ ಏರಿಕೆಯಾಗಿದೆ. ವಿಶ್ವಬ್ಯಾಂಕ್‍ನ ಸಾಧನೆ ಸೂಚ್ಯಂಕ 2016 ವರದಿಯಲ್ಲಿ ಭಾರತ 19ನೇ ಸ್ಥಾನಕ್ಕೇರಿದೆ.

            ಜಾಗತಿಕ ಉತ್ತಮ ಪದ್ಧತಿಗಳಿಗೆ ಸನಿಹದಲ್ಲಿ ನಾವು ಇದ್ದೇವೆ. ದಿನದಿಂದ ದಿನಕ್ಕೆ ನಾವು ಜಾಗತಿಕ ಮಟ್ಟದ ಸುಧಾರಣೆಗಳನ್ನು ತರುತ್ತಿದ್ದೇವೆ. ನಮ್ಮ ನೀತಿ ನಿರೂಪಣೆಗಳ ಸಕಾರಾತ್ಮಕ ಪರಿಣಾಮದಿಂದಾಗಿ ನಮ್ಮ ವಿಶ್ವಾಸ ವೃದ್ಧಿಯಾಗಿದೆ. ಇದು ನಮಗೆ ಉತ್ತಮ ವ್ಯಾಪಾರ ವಾತಾವರಣ ಕಲ್ಪಿಸಲು ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸಲು ಉತ್ತೇಜನ ನೀಡಿದೆ. ಪ್ರತಿ ದಿನ ನಾವು ನಮ್ಮ ನೀತಿ ನಿರೂಪಣೆಗಳಲ್ಲಿ ಸಮಗ್ರಗೊಳಿಸಿ ವಾಣಿಜ್ಯ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಪೂರಕ ಮತ್ತು ಸರಳ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾವು ಎಫ್‍ಡಿಐ ಪದ್ಧತಿಯನ್ನು ಹಲವು ವಲಯಗಳಲ್ಲಿ ಸರಳೀಕರಣಗೊಳಿಸಿ, ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಭಾರತ ಇಂದು ಅತ್ಯಂತ ಮುಕ್ತ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ.

            ಈ ಬದಲಾವಣೆಯನ್ನು ದೇಶೀಯ ಹಾಗೂ ವಿದೇಶಿ ಬಂಡವಾಳ ಹೂಡಿಕೆದಾರರು ಗುರುತಿಸಿದ್ದಾರೆ. ದೇಶದಲ್ಲಿ ನವೋದ್ಯಮ ಸ್ಥಾಪನೆಗೆ ಉತ್ತಮ ಉತ್ತೇಜನಕಾರಿ ವಾತಾವರಣ ನಿರ್ಮಿಸಲಾಗಿದೆ. ಆ ಮೂಲಕ ಯುವಶಕ್ತಿಯ ಅರಳುವಿಕೆಗೆ ಒತ್ತು ನೀಡಲಾಗುತ್ತಿದೆ.

ಕಳೆದ ಎರಡೂವರೆ ವರ್ಷಗಳಲ್ಲಿ ಒಟ್ಟಾರೆ ಒಂದುನೂರ ಮೂವತ್ತು ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ದೇಶಕ್ಕೆ ಹರಿದುಬಂದಿದೆ. ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಕಳೆದ ಎರಡು ವರ್ಷಗಳಲ್ಲಿ ವಿದೇಶಿ ನೇರ ಬಂಡವಾಳದ ಒಳಹರಿವು ಶೇಕಡ 60ಕ್ಕಿಂತಲೂ ಹೆಚ್ಚಾಗಿದೆ. ಕಳೆದ ವರ್ಷ ಒಟ್ಟಾರೆ ಎಫ್‍ಡಿಐ ಒಳಹರಿವು ಹೆಚ್ಚಾಗಿದ್ದು, ದಾಖಲೆ ನಿರ್ಮಿಸಲಾಗಿದೆ.

ವಿದೇಶಿ ನೇರ ಬಂಡವಾಳ ಹರಿದು ಬರುತ್ತಿರುವ ರಾಷ್ಟ್ರಗಳ ಸಂಖ್ಯೆ ಏರಿಕೆಯಾಗಿದೆ. ಅದೇ ರೀತಿ ಕಳೆದ ಎರಡು ವರ್ಷಗಳಲ್ಲಿ ನಾನಾ ವಲಯಗಳಲ್ಲಿ ಬಂಡವಾಳ ಹೂಡಿಕೆ ಹರಿದುಬರುತ್ತಿದೆ. ಏಷ್ಯಾ ಫೆಸಿಫಿಕ್ ಭಾಗದಲ್ಲಿ ಬಂಡವಾಳ ಹೂಡಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿದೇಶಿ ನೇರ ಬಂಡವಾಳ ಹರಿವಿನಲ್ಲಿ ಭಾರತ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಹತ್ತು ರಾಷ್ಟ್ರಗಳಲ್ಲಿ ಒಂದಾಗಿದೆ.

ಈ ಯಶೋಗಾಥೆ ಇಲ್ಲಿಗೆ ನಿಲ್ಲುವುದಿಲ್ಲ. ಭಾರತ ಬಂಡವಾಳ ಹೂಡಿಕೆ ಮೇಲಿನ ಮರುಪಾವತಿಗಳನ್ನು ನೀಡುವಲ್ಲಿಯೂ ಹಿಂದೆ ಬಿದ್ದಿಲ್ಲ, 2015ರಲ್ಲಿ ಭಾರತ ಬೇಸ್‍ಲೈನ್ ಪ್ರಾಫಿಟಬಿಲಿಟಿ(ಮೂಲ ಸೂಚ್ಯಂಕ ಲಾಭಾಂಶ ನೀಡಿಕೆ) ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದೆ.

ಮೇಕ್ ಇನ್ ಇಂಡಿಯಾ ಭಾರತದ ಅತಿದೊಡ್ಡ ಬ್ರಾಂಡ್ ಆಗಿದೆ. ಉತ್ಪಾದನೆ, ವಿನ್ಯಾಸ ಮತ್ತು ಅನ್ವೇಷಣಾ ವಲಯದಲ್ಲಿ ಭಾರತ ಜಾಗತಿಕ ತಾಣವಾಗಿ ರೂಪುಗೊಳ್ಳುತ್ತಿದೆ. ಮೇಕ್ ಇನ್ ಇಂಡಿಯಾ ಅಭಿಯಾನದ ಮೂಲಕ ಹಲವು ಬಂಡವಾಳ ಹೂಡಿಕೆ ತಾಣಗಳನ್ನು ಸೃಷ್ಟಿಸಲಾಗುತ್ತಿದೆ. ಹಲವು ಅವಕಾಶಗಳು ಸೃಷ್ಟಿಯಾಗುತ್ತಿದ್ದು, ಆರೋಗ್ಯಕರ ಸ್ಪರ್ಧೆ ಏರ್ಪಟ್ಟಿದೆ. ಉತ್ತಮ ಆಡಳಿತ ಹಾಗೂ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಮೇಕ್ ಇನ್ ಇಂಡಿಯಾ ಅಭಿಯಾದ ಎರಡನೇ ವಾರ್ಷಿಕೋತ್ಸವವನ್ನು ಇತ್ತೀಚೆಗಷ್ಟೇ ಆಚರಿಸಲಾಯಿತು. ಈ ಸಂದರ್ಭದಲ್ಲಿ ಭಾರತ ಉತ್ಪಾದನಾ ವಲಯದಲ್ಲಿ ವಿಶ್ವದಲ್ಲೇ ಆರನೇ ಸ್ಥಾನದಲ್ಲಿದೆ ಎಂಬುದನ್ನು ಹಂಚಿಕೊಳ್ಳಲು ಹರ್ಷಪಡುತ್ತೇನೆ. ಹಿಂದೆ ನಾವು 9ನೇ ಸ್ಥಾನದಲ್ಲಿದ್ದೆವು. 2015 – 2016ನೇ ಸಾಲಿನಲ್ಲಿ ಉತ್ಪಾದನಾ ವಲಯದಲ್ಲಿ ಶೇಕಡ 9ರಷ್ಟು ಪ್ರಗತಿ ಸಾಧಿಸಿದ್ದೇವೆ. ಅದರ ಹಿಂದಿನ ಮೂರು ವರ್ಷಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಹಿಂದೆ ಶೇಕಡ 5 ರಿಂದ 6 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗುತ್ತಿತ್ತು.

ಈ ಎಲ್ಲ ಕಾರಣಗಳಿಂದಾಗಿ ಉದ್ಯೋಗ ಮಾರುಕಟ್ಟೆ ವಿಸ್ತರಣೆಯಾಗುತ್ತಿರುವುದರ ಜತೆಗೆ ಜನರಲ್ಲಿ ಖರೀದಿಸುವ ಶಕ್ತಿ ಹೆಚ್ಚುತ್ತಿದೆ. ಇದು ಪ್ರಗತಿಗೆ ಪೂರಕವಾಗಿದೆ. ಈ ಬಗ್ಗೆ ಕೆಲವು ಉದಾಹರಣೆಗಳನ್ನು ನೀಡುವುದಾದರೆ ಭಾರತದ ಆಹಾರ ಸಂಸ್ಕರಣಾ ಉದ್ಯಮದ ಸಾಮಥ್ರ್ಯ ಮುಂದಿನ ಹತ್ತು ವರ್ಷಗಳಲ್ಲಿ ಐದು ಪಟ್ಟು ಹೆಚ್ಚಾಗಲಿದೆ. ಇದೇ ರೀತಿ ಭಾರತದ ಆಟೋಮೊಬೈಲ್ ಮಾರುಕಟ್ಟೆಯು ವಿಶ್ವದ ಅತ್ಯಂತ ಆಕರ್ಷಕ ವಲಯವಾಗಿ ರೂಪುಗೊಳ್ಳುತ್ತಿದೆ. ಸರ್ಕಾರದ ಮಟ್ಟದಲ್ಲಿ ಗ್ರಾಮೀಣ ಮತ್ತು ನಗರ ಸಮುದಾಯಗಳನ್ನು ಒಳಗೊಂಡಂತೆ ಸಮಗ್ರ ಅಭಿವೃದ್ಧಿ ಪ್ರಕ್ರಿಯೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಭಾರತಕ್ಕೆ ನಾವು ಈ ಕೆಲಸಗಳನ್ನು ಮಾಡಲು ಬದ್ಧವಾಗಿದ್ದೇವೆ.

         ಉತ್ತಮ ಉದ್ಯೋಗಾವಕಾಶಗಳ ಸೃಷ್ಟಿ.

         ಆದಾಯ ಹೆಚ್ಚಳ.

         ಖರೀದಿ ಶಕ್ತಿ ವೃದ್ಧಿ.

         ಗುಣಮಟ್ಟದ ಜೀವನ ಶೈಲಿ.

         ಮತ್ತು ಉತ್ತಮ ಜೀವನಮಟ್ಟ ಸುಧಾರಣೆ.

 

ಗೆಳೆಯರೇ,

            ನಮ್ಮ ಅಭಿವೃದ್ಧಿ ಅಗತ್ಯತೆಗಳು ದೊಡ್ಡದಾಗಿವೆ. ಅದೇ ರೀತಿ ನಮ್ಮ ಅಭಿವೃದ್ಧಿಯ ಮೂಲತಂತ್ರವು ಮಹತ್ವಾಕಾಂಕ್ಷಿಯದ್ದಾಗಿದೆ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Gyan Bharatam Portal Houses Over 88,800 Manuscripts, Government Informs Lok Sabha

Media Coverage

Gyan Bharatam Portal Houses Over 88,800 Manuscripts, Government Informs Lok Sabha
NM on the go

Nm on the go

Always be the first to hear from the PM. Get the App Now!
...
Prime Minister expresses delight as Sarnath is inscribed on the UNESCO World Heritage List
July 25, 2026

Prime Minister Shri Narendra Modi today expressed that it is a proud moment for every Indian, sharing his delight that Sarnath in Uttar Pradesh has been inscribed on the UNESCO World Heritage List.

He noted that Sarnath has a close association with Lord Buddha, whose timeless message of wisdom, compassion and harmony inspires the world.

Shri Modi highlighted that this recognition celebrates India’s profound civilisational and spiritual heritage. The Prime Minister observed that it will also inspire more people across the world to come to Sarnath and connect with the ideals of Lord Buddha.

In a post on X, the Prime Minister shared:

 "A proud moment for every Indian!

Delighted that Sarnath in Uttar Pradesh has been inscribed on the UNESCO World Heritage List.

Sarnath has a close association with Lord Buddha, whose timeless message of wisdom, compassion and harmony inspires the world.

This recognition celebrates India’s profound civilisational and spiritual heritage. It will also inspire more people across the world to come to Sarnath and connect with the ideals of Lord Buddha.

@UNESCO"