PM visits International Rice Research Institute in Philippines

ಪ್ರಧಾನಮಂತ್ರಿಯವರು ತಾಳಿಕೊಳ್ಳುವ ಅಕ್ಕಿ ವಿಧಗಳಿಗಾಗಿ ಹೊಸ ಜಮೀನಿನಲ್ಲಿ ಸಾಂಕೇತಿಕವಾಗಿ ಭೂಮಿ ಅಗೆಯುವ ಮೂಲಕ ಚಾಲನೆ ನೀಡಿದರು. ಶ್ರೀ ನರೇಂದ್ರ ಮೋದಿ ಚೇತರಿಕೆಯ ಭತ್ತದ ಗದ್ದೆಯ ಪ್ರಯೋಗ ಶಾಲೆಯನ್ನು ಉದ್ಘಾಟಿಸಲು ಫಲಕ ಅನಾವರಣ ಮಾಡಿದರು. ಐ.ಆರಾ.ಆರ್.ಐ. ವಂಶವಾಹಿ ಬ್ಯಾಂಕ್ ಗೆ ಪ್ರಧಾನಿ ಭಾರತದ ಎರಡು ಭತ್ತದ ತಳಿಗಳ ವಂಶವಾಹಿಯನ್ನು ಕೊಡುಗೆಯಾಗಿ ನೀಡಿದರು.

ಪ್ರವಾಹ ತಾಳಿಕೊಳ್ಳಬಲ್ಲ ಭತ್ತದ ತಳಿ; ಬರ ತಾಳಿಕೊಳ್ಳುವ ಭತ್ತದ ವಿಧ;ಉಪ್ಪಿನಂಶ ತಾಳಿಕೊಳ್ಳುವ ತಳಿ, ಮತ್ತು ಮಹಿಳಾ ಕೃಷಿ ಸಹಕಾರಿಗಳೊಂದಿಗೆ ಐ.ಆರ್.ಆರ್.ಐ ಮಾಡಿರುವ ಕಾರ್ಯ ಕುರಿತ ಛಾಯಾಚಿತ್ರ ಪ್ರದರ್ಶನವನ್ನೂ ಅವರು ಪರಾಮರ್ಶಿಸಿದರು.

ಪ್ರಧಾನಮಂತ್ರಿಯವರು ಮನಿಲಾದಲ್ಲಿ ಮಹಾವೀರ್ ಪಿಲಿಪ್ಪೀನ್ ಪ್ರತಿಷ್ಠಾನಕ್ಕೂ ಭೇಟಿ ನೀಡಿದರು. ಇದು ಭಾರತ ಮತ್ತು ಪಿಲಿಪ್ಪೀನ್ಸ್ ನಡುವೆ ದೀರ್ಘ ಕಾಲದಿಂದ ನಡೆಯುತ್ತಿರುವ ಮಾನವೀಯ ಸಹಕಾರದ ಕಾರ್ಯಕ್ರಮವಾಗಿದೆ, ಮತ್ತು ಇದನ್ನು ಮನಿಲಾದ ಭಾರತೀಯ ಮೂಲದ ಮೇಯರ್ ಡಾ. ರಾಮೋನ್ ಭಗತ್ ಸಿಂಗ್ ಅವರು ಸ್ಥಾಪಿಸಿದ್ದಾರೆ. ಈ ಪ್ರತಿಷ್ಠಾನವು ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿಯೊಂದಿಗೆ ಸಹಯೋಗ ಹೊಂದಿದ್ದು, ಕಾಲಿಲ್ಲದವರಿಗೆ ಜೈಪುರ ಕೃತಕ ಕಾಲುಗಳ ಜೋಡಣೆ ಮಾಡುತ್ತಿದೆ. ಪ್ರಧಾನಮಂತ್ರಿಯವರು ಜೈಪುರ ಕಾಲುಗಳನ್ನು ಅಳವಡಿಸಿಕೊಂಡ ಫಲಾನುಭವಿಗಳೊಂದಿಗೆ ಮಾತುಕತೆ ನಡೆಸಿದರು.

ಈ ಭೇಟಿಯ ವೇಳೆ ಪ್ರಧಾನಮಂತ್ರಿಯವರು ಐ.ಆರ್.ಆರ್.ಐ.ನಲ್ಲಿ ಕೆಲಸ ಮಾಡುತ್ತಿರುವ ಹಲವು ಭಾರತೀಯ ವಿಜ್ಞಾನಿಗಳೊಂದಿಗೆ ಸಂವಾದ ನಡೆಸಿದರು. 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Government's foodgrain stocks hit 604 lakh tonnes, nearly three times buffer requirement

Media Coverage

Government's foodgrain stocks hit 604 lakh tonnes, nearly three times buffer requirement
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 7 ಮೇ 2026
May 07, 2026

Justice Delivered Under PM Modi: How Operation Sindoor Redefined India’s Response to Terror

Aatmanirbhar Bharat in Action: Record Exports, Defence Exports, Food Security & Green Mobility Under the Leadership of PM Modi