PM Modi applauds doctors, Medical Staff, Para-Medical Staff, sanitation workers in hospitals and everyone associated with Corona Vaccine
PM Modi complements Corona warriors for their authentic communication about the pandemic and vaccination
World's largest vaccination programme is going on in our country today: PM Modi



ಹರ್ ಹರ್ ಮಹಾದೇವ್!

ಬನಾರಸ್‌ ನ ಸೇವಕನಿಂದ ಬನಾರಸ್‌ ನ ಎಲ್ಲರಿಗೂ ಪ್ರಣಾಮಗಳು! ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪ್ಯಾರಾ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳಲ್ಲಿ ಪ್ರಮುಖ ಕೆಲಸ ಮಾಡುವ, ಸ್ವಚ್ಛ ತೆಯನ್ನು ಕಾಪಾಡುವ ಸ್ನೇಹಿತರು ಮತ್ತು ಸಹೋದರ ಸಹೋದರಿಯರು, ಕೊರೊನಾ ಲಸಿಕೆಗೆ ಸಂಬಂಧಿಸಿದ ಎಲ್ಲಾ ಜನರು ಮತ್ತು ಕೊರೊನಾ ಲಸಿಕೆ ಪಡೆದ ಎಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಈ ಸಮಯದಲ್ಲಿ ನಾನು ನಿಮ್ಮ ನಡುವೆ ಇರಬೇಕಾಗಿತ್ತು, ಆದರೆ ಕೆಲವು ಕಾರಣಗಳಿಂದಾಗಿ, ನಾವು ವರ್ಚುವಲ್‌ ಆಗಿ ಭೇಟಿಯಾಗಬೇಕಾಯಿತು. ಆದರೆ ನಾನು ಯಾವಾಗಲೂ ಕಾಶಿಗಾಗಿ ನಾನು ಏನು ಬೇಕಾದರೂ ಮಾಡಲು ಪ್ರಯತ್ನಿಸುತ್ತೇನೆ ಎನ್ನುವುದು ನಿಜ.

ಸ್ನೇಹಿತರೇ,

2021 ವರ್ಷವು ಬಹಳ ಶುಭ ನಿರ್ಣಯಗಳೊಂದಿಗೆ ಪ್ರಾರಂಭವಾಗಿದೆ. ಕಾಶಿಯ ಬಗ್ಗೆ ಕೇವಲ ಕಾಶಿಯ ಸ್ಪರ್ಶವು ಶುಭ ಹಾರೈಕೆಗಳನ್ನು ಪರಿಪೂರ್ಣತೆಗೆ ಬದಲಾಯಿಸುತ್ತದೆ ಎಂದು ಹೇಳಲಾಗುತ್ತದೆ. ಈ ಸಾಧನೆಯ ಫಲವೇ ಇಂದು ವಿಶ್ವದ ಅತಿದೊಡ್ಡ ಲಸಿಕೆ ಕಾರ್ಯಕ್ರಮವು ನಮ್ಮ ದೇಶದಲ್ಲಿ ನಡೆಯುತ್ತಿದೆ. ಮತ್ತು, ಮೊದಲ ಎರಡು ಹಂತಗಳಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಇಂದು, ದೇಶದಲ್ಲಿ ಅಂತಹ ವಾತಾವರಣ ಮತ್ತು ಪ್ರವೃತ್ತಿ ಇದ್ದು, ಅದು ತನ್ನದೇ ಆದ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅದೂ ಒಂದು ಅಲ್ಲ, ಎರಡು ‘ಮೇಡ್ ಇನ್ ಇಂಡಿಯಾʼ ಲಸಿಕೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇಂದು, ದೇಶದ ವ್ಯವಸ್ಥೆಯು ಹೇಗಿದೆಯೆಂದರೆ , ಲಸಿಕೆಗಳು ದೇಶದ ಮೂಲೆ ಮತ್ತು ಮೂಲೆಯನ್ನು ತ್ವರಿತವಾಗಿ ತಲುಪುವುದು ಮಾತ್ರವಲ್ಲದೆ, ವಿಶ್ವದ ಈ ಮಹತ್ತರವಾದ ಅಗತ್ಯದಲ್ಲಿ ಭಾರತವು ಸಂಪೂರ್ಣವಾಗಿ ಆತ್ಮ ನಿರ್ಭರವಾಗಿದೆ. ಅಷ್ಟೇ ಅಲ್ಲ, ಭಾರತವೂ ಅನೇಕ ದೇಶಗಳಿಗೆ ಸಹಾಯ ಮಾಡುತ್ತಿದೆ.

ಸ್ನೇಹಿತರೇ,

ಕಳೆದ ಆರು ವರ್ಷಗಳಲ್ಲಿ, ಬನಾರಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ವೈದ್ಯಕೀಯ ಮೂಲಸೌಕರ್ಯದಲ್ಲಿನ ಪ್ರಮುಖ ಬದಲಾವಣೆಯು ಕೊರೊನಾ ಕಾಲದಲ್ಲಿ ಇಡೀ ಪೂರ್ವಾಂಚಲ ಪ್ರದೇಶಕ್ಕೆ ಸಹಾಯಕವಾಗಿದೆ. ಈಗ ಬನಾರಸ್ ಲಸಿಕೆಗಾಗಿ ಅದೇ ವೇಗದಲ್ಲಿ ಸಾಗುತ್ತಿದೆ. ಮೊದಲ ಹಂತದಲ್ಲಿ 20 ಸಾವಿರಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರಿಗೆ ಬೆನಾರಸ್‌ನಲ್ಲಿ ಲಸಿಕೆ ನೀಡಲಾಗುವುದು ಎಂದು ನನಗೆ ತಿಳಿಸಲಾಗಿದೆ. ಇದಕ್ಕಾಗಿ 15 ಲಸಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಸಂಪೂರ್ಣ ಅಭಿಯಾನಕ್ಕಾಗಿ ನಾನು ಎಲ್ಲಾ ವೈದ್ಯರು, ದಾದಿಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ, ಯೋಗಿಜಿ ಸರ್ಕಾರವನ್ನು ಅಭಿನಂದಿಸುತ್ತೇನೆ, ಎಲ್ಲಾ ಇಲಾಖೆಯ ಸಹೋದ್ಯೋಗಿಗಳನ್ನು ಅಭಿನಂದಿಸುತ್ತೇನೆ.

 

ಸ್ನೇಹಿತರೇ,

ಬನಾರಸ್‌ನಲ್ಲಿ ನಿಮ್ಮ ಅನುಭವಗಳೇನು? ವ್ಯಾಕ್ಸಿನೇಷನ್‌ನಲ್ಲಿ ನೀವು ಯಾವುದೇ ಸಮಸ್ಯೆಯನ್ನು ಎದುರಿಸುತ್ತಿರುವಿರಾ? ಇದೆಲ್ಲವನ್ನೂ ತಿಳಿದುಕೊಳ್ಳಲು ನಾನು ಇಂದು ನಿಮ್ಮ ನಡುವೆ ಬಂದಿದ್ದೇನೆ. ನಾವು ವರ್ಚುವಲ್‌ ಆಗಿ ಮಾತನಾಡೋಣ. ನಾನು ಇಂದು ಯಾವುದೇ ಭಾಷಣ ಮಾಡಲು ಬಂದಿಲ್ಲ. ಕಾಶಿ ಮತ್ತು ಅದರ ಜನರ ಪ್ರತಿಕ್ರಿಯೆ ಇತರ ಪ್ರದೇಶಗಳಲ್ಲಿ ನನಗೆ ತುಂಬಾ ಉಪಯುಕ್ತವಾಗಲಿದೆ ಎಂದು ನಾನು ಭಾವಿಸುತ್ತೇನೆ. ಎಲ್ಲಾ ರೀತಿಯ ಜನರು ಇಲ್ಲಿದ್ದಾರೆ - ಲಸಿಕೆ ಹಾಕಿಸಿಕೊಂಡವರು ಮತ್ತು ಲಸಿಕೆ ಅಭಿಯಾನದಲ್ಲಿ ತೊಡಗಿರುವವರು. ಮತ್ತು ವಾರಣಾಸಿ ಜಿಲ್ಲಾ ಮಹಿಳಾ ಆಸ್ಪತ್ರೆಯ ಮೇಟ್ರನ್‌ ಸಿಸ್ಟರ್ ಪುಷ್ಪಾಜಿ ಅವರು ಮೊದಲು ನನ್ನೊಂದಿಗೆ ಮಾತನಾಡುತ್ತಾರೆ ಎಂದು ನನಗೆ ತಿಳಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ಪುಷ್ಪಾಜಿ.

ಪುಷ್ಪಾ ದೇವಿ: ಮಾನ್ಯ ಪ್ರಧಾನಮಂತ್ರಿಯವರಿಗೆ ಪ್ರಣಾಮಗಳು. ನನ್ನ ಹೆಸರು ಪುಷ್ಪಾ ದೇವಿ. ಸರ್, ನಾನು ಕಳೆದ ಒಂದು ವರ್ಷದಿಂದ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಮೇಟ್ರನ್‌ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ಒಳ್ಳೆಯದು. ಮೊದಲನೆಯದಾಗಿ, ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಂಡವರಲ್ಲಿ ನೀವೂ ಇದ್ದೀರಿ ಎಂದು ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಜನರು ಕೊರೊನಾಗೆ ಹೆದರುತ್ತಿದ್ದ ಸಮಯವಿತ್ತು. ಈಗ, ನಾನು ಪುಷ್ಪಾಜಿಯಿಂದ ಕೇಳಲು ಬಯಸುತ್ತೇನೆ. ನಾನು ಕೂಡ ಕೇಳುತ್ತಿದ್ದೇನೆ ಮತ್ತು ದೇಶವೂ ಕೂಡ.

ಪುಷ್ಪಾ ದೇವಿ: ಮೊದಲನೆಯದಾಗಿ, ನನ್ನ ಎಲ್ಲ ಆರೋಗ್ಯ ಸಿಬ್ಬಂದಿಯ ಪರವಾಗಿ, ಕೊರೊನಾ ಲಸಿಕೆಗಳಿಗಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ, ಏಕೆಂದರೆ ನೀವು ಆರೋಗ್ಯ ಇಲಾಖೆಯನ್ನು ಮೊದಲ ಹಂತದಲ್ಲಿ ವ್ಯಾಕ್ಸಿನೇಷನ್ಗಾಗಿ ಆಯ್ಕೆ ಮಾಡಿಕೊಂಡಿದ್ದೀರಿ ಮತ್ತು ಜನವರಿ 16 ರಂದು ಲಸಿಕೆ ಹಾಕಿಸಿಕೊಂಡ ಮೊದಲನೆಯವಳು ನಾನು. ನಾನು ಲಸಿಕೆ ಹಾಕಿಸಿಕೊಂಡಿರುವ ಅದೃಷ್ಟಶಾಲಿಯೆಂದುಕೊಂಡಿದ್ದೇನೆ ಮತ್ತು ನಾನು, ನನ್ನ ಕುಟುಂಬ ಮತ್ತು ಸಮಾಜವು ಸುರಕ್ಷಿತವಾಗಿರುವುದು ಎಂದು ನಾನು ಭಾವಿಸುತ್ತೇನೆ. ಇದಲ್ಲದೆ, ನಾನು ಶುಶ್ರೂಷಾ ಸಿಬ್ಬಂದಿ ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ವ್ಯಾಕ್ಸಿನೇಷನ್ಗಾಗಿ ವಿನಂತಿಸುತ್ತಿದ್ದೇನೆ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ನಾನು ಅವರಿಗೆ ಹೇಳುತ್ತಿದ್ದೇನೆ. ಇದು ಇತರ ಯಾವುದೇ ಚುಚ್ಚುಮದ್ದಿನಂತೆಯೇ ಇರುತ್ತದೆ. ಆದ್ದರಿಂದ, ನೀವು, ನಿಮ್ಮ ಕುಟುಂಬ ಮತ್ತು ಸಮಾಜವು ಸುರಕ್ಷಿತವಾಗಿರಲು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಬೇಕು ಎನ್ನುವುದು ನನ್ನ ಮನವಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ: 'ಮೇಡ್ ಇನ್ ಇಂಡಿಯಾ' ಲಸಿಕೆಗಾಗಿ ಇದು ನಮ್ಮೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ, ಆದರೆ ಇದರ ಯಶಸ್ಸಿಗೆ ಕಾರಣ ನಿಮ್ಮಂತಹ ಲಕ್ಷಾಂತರ ಯೋಧರು ಮತ್ತು 130 ಕೋಟಿ ದೇಶವಾಸಿಗಳು. ನೀವು ಯಾವುದೇ ಸಮಸ್ಯೆಯನ್ನು ಎದುರಿಸಲಿಲ್ಲ ಮತ್ತು ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ನೀವು ಹೇಳಿದ್ದರಿಂದ, ಇದೊಂದು ಉತ್ತಮ ಅನುಭವವಿದೆ ಎಂದು ನೀವು ಯಾರಿಗಾದರೂ ಅತ್ಯಂತ ವಿಶ್ವಾಸದಿಂದ ಹೇಳಬಲ್ಲಿರಾ?

ಪುಷ್ಪಾ ದೇವಿ: ಹೌದು.

ಪ್ರಧಾನಿ ನರೇಂದ್ರ ಮೋದಿ: ವಿವರಿಸಿ ಹೇಳಿ, ಪುಷ್ಪಾಜಿ.

ಪುಷ್ಪಾ ದೇವಿ: ಹೌದು ಸರ್,

ಪ್ರಧಾನಿ ನರೇಂದ್ರ ಮೋದಿ: ನಿಮಗೆ ನನ್ನ ಮಾತು ಕೇಳಿಸ್ತಿದೆಯಾ ?

ಪುಷ್ಪಾ ದೇವಿ: ಹೌದು ಸರ್.

ಪ್ರಧಾನಿ ನರೇಂದ್ರ ಮೋದಿ: ನೀವು ಹೇಳಿದಂತೆ ಇದು ಬೇರೆಯದರಂತೆ ಸಾಮಾನ್ಯ ಲಸಿಕೆ ಎಂದು ನೀವು ಕಂಡುಕೊಂಡಿದ್ದೀರಿ, ಆದರೆ ಕೆಲವರಿಗೆ ಆತಂಕವಿದೆ. ನೀವು ವೈದ್ಯಕೀಯ ಜಗತ್ತಿನವರಾದ್ದರಿಂದ ಮತ್ತು ನಿಮಗೆ ಲಸಿಕೆ ನೀಡಲಾಗಿರುವುದರಿಂದ, ದಯವಿಟ್ಟು ಜನರಿಗೆ ಭರವಸೆ ನೀಡುವಂತಹ ಮಾತನ್ನು ಹಂಚಿಕೊಳ್ಳಿ.

ಪುಷ್ಪಾ ದೇವಿ: ಇದು ಜನರಿಗೆ ಬಹಳ ಮುಖ್ಯವಾದ ಲಸಿಕೆ ಎಂದು ನಾವು ಜನರಿಗೆ ಭರವಸೆ ನೀಡಬೇಕಾಗಿದೆ ಮತ್ತು ಒಂಬತ್ತು ತಿಂಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಿಂದದ ಲಭ್ಯವಾಗಿಸಿಹ ಲಸಿಕೆಗಳಿಂದಾಗಿ ಜನರು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತಾರೆ. ಅವರಿಗೆ ಯಾವುದೇ ಆತಂಕಗಳು ಇರಬಾರದು ಮತ್ತು ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಮತ್ತು ನಮಗೆ ಯಾವುದೇ ಹಾನಿ ಆಗುವುದಿಲ್ಲ. ಆದ್ದರಿಂದ, ಪ್ರತಿಯೊಬ್ಬರೂ ಯಾವುದೇ ಭಯವಿಲ್ಲದೆ ಲಸಿಕೆ ಹಾಕಿಸಿಕೊಳ್ಳಬೇಕಾಗಿದೆ.

ಪ್ರಧಾನಿ ನರೇಂದ್ರ ಮೋದಿ: ನೀವು ಸರಿಯಾಗಿ ಹೇಳಿದ್ದೀರಿ ಪುಷ್ಪಾಜಿ. ನಮ್ಮ ವಿಜ್ಞಾನಿಗಳು ಯಾವುದೇ ಲಸಿಕೆಯನ್ನು ತಯಾರಿಸಲು ಸಾಕಷ್ಟು ಶ್ರಮಿಸುತ್ತಾರೆ ಮತ್ತು ಇದು ಸಂಪೂರ್ಣವಾದ ವೈಜ್ಞಾನಿಕ ಪ್ರಕ್ರಿಯೆಯಾಗಿದೆ. ಮತ್ತು ನೀವು ಕೇಳಿರಬಹುದು, ಆರಂಭದಲ್ಲಿ, ನನ್ನ ಮೇಲೆ ಭಾರಿ ಒತ್ತಡವಿತ್ತು, ಲಸಿಕೆ ಏಕೆ ಲಭ್ಯವಿಲ್ಲ? ನೀವು ಯಾವಾಗ ಲಸಿಕೆ ಪ್ರಾರಂಭಿಸುತ್ತೀರಿ? ಎಂದು. ರಾಜಕೀಯದಲ್ಲಿ, ಅನೇಕ ವಿಷಯಗಳನ್ನು ಹೇಳಲಾಗುತ್ತದೆ ಆದರೆ ವಿಜ್ಞಾನಿಗಳು ಹೇಳುವದನ್ನು ನಾವು ಮಾಡುತ್ತೇವೆ ಎಂದು ನಾನು ಒಂದೇ ಉತ್ತರವನ್ನು ನೀಡುತ್ತಿದ್ದೆ. ನಿರ್ಧರಿಸುವುದು ರಾಜಕೀಯದವರ ಕೆಲಸವಲ್ಲ. ಮತ್ತು ನಮ್ಮ ವಿಜ್ಞಾನಿಗಳು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ತಕ್ಷಣ, "ಈಗ ಎಲ್ಲಿಂದ ಪ್ರಾರಂಭಿಸಬೇಕು?" ಎಂದು ಹೇಳಿದೆವು. ಆದ್ದರಿಂದ ನಾವು ಮೊದಲು ರೋಗಿಗಳೊಂದಿಗೆ ದಿನನಿತ್ಯ ಕೆಲಸ ಮಾಡುವವರ ಬಗ್ಗೆ ಯೋಚಿಸಿದ್ದೇವೆ. ಅವರು ಸುರಕ್ಷಿತರಾಗಿದ್ದರೆ, ಸಮಾಜದ ಎಲ್ಲರನ್ನೂ ನೋಡಿಕೊಂಡಂತಾಗುತ್ತದೆ. ಮತ್ತು ಇಷ್ಟು ದೀರ್ಘಾವಧಿಯ ಕಠಿಣ ಕಾರ್ಯವಿಧಾನಗಳು ಮತ್ತು ವೈಜ್ಞಾನಿಕ ತನಿಖೆಗಳ ನಂತರ, ಲಸಿಕೆಗಳು ಇದ್ದಾಗ, ಆರೋಗ್ಯ ಸೇವೆಯಲ್ಲಿ ತೊಡಗಿರುವ ಎಲ್ಲರಿಗೂ ಆದ್ಯತೆ ನೀಡಲು ನಾವು ನಿರ್ಧರಿಸಿದ್ದೇವೆ. ಕೆಲವು ಜನರು ನನ್ನ ಮೇಲೆ ಕೋಪಗೊಳ್ಳುತ್ತಿದ್ದಾರೆ ಏಕೆಂದರೆ ಅವರು ಆರಂಭಿಕ ಲಸಿಕೆ ಸಹ ಬಯಸುತ್ತಾರೆ, ಆದರೆ ಮೊದಲು ನಿಮಗೆ ಲಸಿಕೆ ನೀಡಬೇಕು ಎಂದು ನಾನು ಹೇಳುತ್ತೇನೆ. ಹಲವಾರು ಹಂತಗಳಲ್ಲಿ ಜನರಿಗೆ ಲಸಿಕೆ ನೀಡಲು ನಿರ್ಧರಿಸಲಾಗಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲ ಎಂದು ಕಂಡುಹಿಡಿದ ನಂತರವೇ ಲಸಿಕೆಗಳನ್ನು ಬಿಡುಗಡೆ ಮಾಡಲಾಗಿದೆ. ಆದ್ದರಿಂದ, ದೇಶದ ಜನರು ತಮ್ಮ ವಿಜ್ಞಾನಿಗಳು ಮತ್ತು ವೈದ್ಯರನ್ನು ನಂಬಬೇಕು ಮತ್ತು ವೈದ್ಯಕೀಯ ಕ್ಷೇತ್ರದ ನಿಮ್ಮಂತಹ ಜನರು ಇದನ್ನು ಹೇಳಿದಾಗ ಜನರು ನಂಬಿಕೆ ಹೊಂದಬೇಕು. ಪುಷ್ಪಾಜಿ ನಿಮಗೆ ಅನೇಕ ಅಭಿನಂದನೆಗಳು. ಆರೋಗ್ಯವಾಗಿರಿ ಮತ್ತು ಸೇವೆಯನ್ನು ಮುಂದುವರಿಸಿ.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ರಾಣಿಜಿ.

ರಾಣಿ ಕುನ್ವರ್ ಶ್ರೀವಾಸ್ತವ್: ನಮಸ್ತೆ ಸರ್. ನಾನು, ಕಾಶಿಯ ಎಲ್ಲ ಜನರ ಪರವಾಗಿ ಮಾನ್ಯ ಪ್ರಧಾನ ಮಂತ್ರಿಗೆ ಪ್ರಣಾಮಗಳನ್ನು ಮಾಡುತ್ತೇನೆ. ಸರ್, ನನ್ನ ಹೆಸರು ರಾಣಿ ಕುನ್ವರ್ ಶ್ರೀವಾಸ್ತವ್. ನಾನು ಆರು ವರ್ಷಗಳಿಂದ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ಎನ್‌ಎಂ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ಈ ಆರು ವರ್ಷಗಳಲ್ಲಿ ನೀವು ಎಷ್ಟು ಜನರಿಗೆ ಲಸಿಕೆ ಹಾಕಿದ್ದೀರಿ? ದಿನದಲ್ಲಿ ನೀವು ಎಷ್ಟು ಜನರಿಗೆ ಲಸಿಕೆ ಹಾಕುತ್ತೀರಿ?

ರಾಣಿ ಕುನ್ವರ್ ಶ್ರೀವಾಸ್ತವ್: ಸರ್, ನಾವು ದಿನಕ್ಕೆ ಸುಮಾರು 100 ಜನರಿಗೆ ಲಸಿಕೆ ಹಾಕುತ್ತೇವೆ.

ಪ್ರಧಾನಿ ನರೇಂದ್ರ ಮೋದಿ: ಹಾಗಾದರೆ, ಈ ಲಸಿಕೆ ಕಾರ್ಯಕ್ರಮದ ಸಮಯದಲ್ಲಿ ನಿಮ್ಮ ಎಲ್ಲಾ ದಾಖಲೆಗಳು ಮುರಿಯಲಿವೆ, ಏಕೆಂದರೆ ನೀವು ಅನೇಕ ಜನರಿಗೆ ಲಸಿಕೆ ಹಾಕಬೇಕಾಗಬಹುದು ಇದರಿಂದ ಬಹುಶಃ ನಿಮ್ಮ ಎಲ್ಲಾ ದಾಖಲೆಗಳು ಮುರಿಯಬಹುದು.

ರಾಣಿ ಕುನ್ವರ್ ಶ್ರೀವಾಸ್ತವ್: ಸರ್, ಕೋವಿಡ್ -19 ನಂತಹ ಭಯಾನಕ ಕಾಯಿಲೆಯ ವಿರುದ್ಧ ಲಸಿಕೆ ಹಾಕುವ ಅವಕಾಶ ನನಗೆ ಸಿಗುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಾನು ತುಂಬಾ ಅದೃಷ್ಟಶಾಲಿ ಎಂದುಕೊಳ್ಳುತ್ತೇನೆ.

ಪ್ರಧಾನಿ ನರೇಂದ್ರ ಮೋದಿ: ಆಗ ಜನರು ಕೂಡ ನಿಮ್ಮನ್ನು ಆಶೀರ್ವದಿಸುತ್ತಾರೆ.

ರಾಣಿ ಕುನ್ವರ್ ಶ್ರೀವಾಸ್ತವ್: ಹೌದು ಸರ್, ನನಗೆ ಅನೇಕ ಆಶೀರ್ವಾದಗಳು ಸಿಗುತ್ತವೆ. ನನ್ನೊಂದಿಗೆ, ಕೊರೊನಾ ಲಸಿಕೆಗಳನ್ನು 10 ತಿಂಗಳಲ್ಲಿಯೇ ಪ್ರಾರಂಭಿಸಲಾಗಿದೆ ಮತ್ತು ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಜನರು ನಿಮ್ಮನ್ನು ಹೆಚ್ಚು ಆಶೀರ್ವದಿಸುತ್ತಾರೆ.

ಪ್ರಧಾನಿ ನರೇಂದ್ರ ಮೋದಿ: ನೋಡಿ, ನಾನು ಅದಕ್ಕೆ ಅರ್ಹನಲ್ಲ. ಮೊದಲಿಗೆ, ನೀವು ಧೈರ್ಯದಿಂದ ಕೆಲಸ ಮಾಡುವುದನ್ನು ಮುಂದುವರೆಸಿದ್ದರಿಂದ, ಕೊರೊನಾವನ್ನು ಮನೆಗೆ ಕೊಂಡೊಯ್ಯುವ ಭಯದ ಮಧ್ಯೆ ಬಡವರಿಗೆ ಮತ್ತು ರೋಗಿಗಳಿಗೆ ಸೇವೆ ಸಲ್ಲಿಸಿದ್ದರಿಂದ ನೀವು ಇದಕ್ಕೆ ಅರ್ಹರಾಗಿದ್ದೀರಿ. ಎರಡನೆಯದು ನಮ್ಮ ಆಧುನಿಕ ಋಷಿಮುನಿಗಳಾದ ನಮ್ಮ ವಿಜ್ಞಾನಿಗಳು. ಕೊರೊನಾ ಒಂದು ಅಪರಿಚಿತ ಶತ್ರು ಆದರೆ ನಮ್ಮ ವಿಜ್ಞಾನಿಗಳು ಅಚಲವಾಗಿಯೇ ಇದ್ದರು ಮತ್ತು ಪ್ರಯೋಗಾಲಯಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿದರು ಮತ್ತು ಇಂದು ಲಸಿಕೆಗಳು ಅವರ ಪ್ರಯತ್ನದ ಫಲವಾಗಿದೆ. ಆದ್ದರಿಂದ, ನಾನಲ್ಲ, ಆದರೆ ನೀವೆಲ್ಲರೂ ಇದಕ್ಕೆ ಅರ್ಹರಾಗಿದ್ದೀರಿ. ನೀವು ಇದನ್ನು ಬಲವಾದ ನಂಬಿಕೆಯಿಂದ ಹೇಳುತ್ತಿರುವುದು ನನಗೆ ಒಳ್ಳೆಯದು. ದಯವಿಟ್ಟು, ಅದನ್ನು ಮುಂದುವರೆಸಿಕೊಂಡು ಜನರ ವಿಶ್ವಾಸವನ್ನು ಬೆಳೆಸಿಕೊಳ್ಳಿ. ರಾಣಿಜಿಗೆ ನನ್ನ ಶುಭಾಶಯಗಳು. ಧನ್ಯವಾದಗಳು.

ರಾಣಿ ಕುನ್ವರ್ ಶ್ರೀವಾಸ್ತವ್: ಧನ್ಯವಾದಗಳು ಸರ್, ನಮಸ್ಕಾರ.

ಪ್ರಧಾನಿ ನರೇಂದ್ರ ಮೋದಿ: ನಮಸ್ಕಾರ, ಡಾಕ್ಟರ್!

ಡಾ. ವಿ. ಶುಕ್ಲಾ: ನಮಸ್ಕಾರ ಸರ್. ನಾನು, ಡಾ. ವಿ. ಶುಕ್ಲಾ ವಾರಣಾಸಿಯ ಪಂಡಿತ್ ದೀನ್‌ ದಯಾಳ್ ಉಪಾಧ್ಯಾಯದ ಮುಖ್ಯ ವೈದ್ಯಕೀಯ ಅಧೀಕ್ಷಕ,. ನನ್ನ ವೈದ್ಯಕೀಯ ಭ್ರಾತೃತ್ವದ ಪರವಾಗಿ ಅವರು ಗೌರವಾನ್ವಿತ ಪ್ರಧಾನಿಯವರಿಗೆ ಪ್ರಣಾಮಗಳನ್ನು ಸಲ್ಲಿಸುತ್ತೇನೆ.

ಪ್ರಧಾನಿ ನರೇಂದ್ರ ಮೋದಿ: ಹೇಳಿ, ಶುಕ್ಲಾಜಿ. ನಿಮ್ಮ ಅನುಭವಗಳು ಯಾವುವು? ನಮ್ಮ ಕಾಶಿ ಜನರು ತೃಪ್ತರಾಗಿದ್ದಾರೆಯೇ?

ಡಾ. ವಿ. ಶುಕ್ಲಾ: ಸರ್, ಅವರು ತುಂಬಾ ತೃಪ್ತರಾಗಿದ್ದಾರೆ. ಎಲ್ಲರಲ್ಲೂ ತುಂಬಾ ಉತ್ಸಾಹವಿದೆ. ಇಷ್ಟು ಕಡಿಮೆ ಅವಧಿಯಲ್ಲಿ, ನಾವು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿ, ಲಸಿಕೆ ಬಗ್ಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತ ಮುಂದಿದ್ದೇವೆ. ವ್ಯಾಕ್ಸಿನೇಷನ್ಗಾಗಿ ನೀವು ಮೊದಲು ನಮ್ಮನ್ನು ಆಯ್ಕೆ ಮಾಡಿದ್ದೀರಿ ಎಂದು ನಮ್ಮ ವೈದ್ಯಕೀಯ ಭ್ರಾತೃತ್ವ ಮತ್ತು ಆರೋಗ್ಯ ಕಾರ್ಯಕರ್ತರು ಹೆಮ್ಮೆ ಪಡುತ್ತಾರೆ. ನಾವು ಹೆಮ್ಮೆಪಡುತ್ತೇವೆ ಮತ್ತು ಅದಕ್ಕಾಗಿ ಕೃತಜ್ಞತೆಗಳು .

ಪ್ರಧಾನಿ ನರೇಂದ್ರ ಮೋದಿ: ನಾನು ನಿಮಗೆ ಕೃತಜ್ಞನಾಗಿದ್ದೇನೆ, ಆದರೆ ನೀವು ನಿಜವಾಗಿಯೂ ಅದ್ಭುತಗಳನ್ನು ಮಾಡಿದ್ದೀರಿ. ಈ ಬಿಕ್ಕಟ್ಟಿನಿಂದ ದೇಶವನ್ನು ಉಳಿಸುವಲ್ಲಿ ಕೊರೊನಾ ಯೋಧರಿಗೆ ಬಹಳ ದೊಡ್ಡ ಪಾತ್ರವಿದೆ ಎಂದು ನಾನು ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಹಾ, ಶುಕ್ಲಾಜಿ, ನಿಮ್ಮ ಅನುಭವದ ಬಗ್ಗೆ ನಮಗೆ ತಿಳಿಸಿ.

ಡಾ. ವಿ. ಶುಕ್ಲಾ: ಸರ್, ಆರೋಗ್ಯ ಇಲಾಖೆಯಲ್ಲಿರುವ ಈ ಜನರಿಗೆ ಮೊದಲು ಲಸಿಕೆ ಹಾಕುವ ಅವಶ್ಯಕತೆಯಿದೆ ಎಂದು ಇಲಾಖೆಯಲ್ಲಿ ಇಟ್ಟಿರುವ ನಂಬಿಕೆ ನಮಗೆ ಉತ್ಸಾಹ ತುಂಬಿದೆ, ಮತ್ತು ನಾವು ಹೆಚ್ಚು ಉತ್ಸಾಹದಿಂದ ನಮ್ಮ ಕೆಲಸಕ್ಕೆ ಬದ್ಧರಾಗಿದ್ದೇವೆ. ಲಸಿಕೆಗಳು ಸಂಪೂರ್ಣವಾಗಿ ಸುರಕ್ಷಿತವೆಂದು ಜನರಿಗೆ ಸಕಾರಾತ್ಮಕ ಸಂದೇಶವನ್ನು ಕಳುಹಿಸುತ್ತಿದೆ ಏಕೆಂದರೆ ಪ್ರಧಾನ ಮಂತ್ರಿ ಮತ್ತು ವಿಜ್ಞಾನಿಗಳು ಲಸಿಕೆಗಾಗಿ ಈ ಕಾಯಿಲೆಯಿಂದ ಜನರನ್ನು ಉಳಿಸುವಲ್ಲಿ ತೊಡಗಿರುವ ಜನರನ್ನು ಮೊದಲು ಆಯ್ಕೆ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ: ನೋಡಿ, ಕಳೆದ ನಾಲ್ಕೈದು ವರ್ಷಗಳಿಂದ ನಾವು ನಡೆಸುತ್ತಿರುವ ಸ್ವಚ್ಛತೆ , ಶುದ್ಧ ಕುಡಿಯುವ ನೀರು, ಶೌಚಾಲಯಗಳಂತಹ ವಿವಿಧ ಅಭಿಯಾನಗಳಿಂದಾಗಿ ದೇಶದ ಕಡು ಬಡವರೂ ಕೂಡ ಈ ರೋಗದ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿಯನ್ನು ಅಭಿವೃದ್ಧಿಪಡಿಸಿಕೊಳ್ಳಲು ದೇವರು ನಮಗೆ ದಯೆ ತೋರಿಸಿದ್ದಾನೆ. ಬಡ ನಾಗರಿಕರು ಮತ್ತು ವೃದ್ಧರು ಈ ರೋಗವನ್ನು ನಿಭಾಯಿಸಲು ಈ ಅಭಿಯಾನಗಳು ಪರೋಕ್ಷವಾಗಿ ನಮಗೆ ಸಹಾಯ ಮಾಡಿದವು. ಇದರ ಪರಿಣಾಮವಾಗಿ, ನಮ್ಮ ದೇಶದಲ್ಲಿ ಮರಣ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸ್ವಚ್ಛತೆ, ಶೌಚಾಲಯ ಅಥವಾ ಶುದ್ಧ ನೀರು ಸಾಕಷ್ಟು ಸಹಾಯ ಮಾಡಿದೆ. ಶುಕ್ಲಾಜಿ, ನೀವೊಬ್ಬ ನಾಯಕರು ನಿಮ್ಮೊಂದಿಗೆ ಕೆಲಸ ಮಾಡುವ ದೊಡ್ಡ ತಂಡವಿದೆ ಮತ್ತು ವಿವಿಧ ಸ್ತರಗಳ ಜನರು ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸಹೋದ್ಯೋಗಿಗಳ ವಿಶ್ವಾಸಾರ್ಹದ ಎಷ್ಟರ ಮಟ್ಟದಲ್ಲಿದೆ?

ಡಾ. ವಿ.ಶುಕ್ಲಾ: ತುಂಬಾ ಹೆಚ್ಚಿದೆ. ಜನರು ಸಂಪೂರ್ಣವಾಗಿ ತೃಪ್ತರಾಗಿದ್ದಾರೆ. ಯಾರಿಗೂ ಯಾವುದೇ ಆತಂಕವಿಲ್ಲ. ಲಸಿಕೆ ಕಾರ್ಯಕ್ರಮದ ಮೊದಲು, ನಾವು ಚರ್ಚೆ ನಡೆಸಿದ್ದೇವೆ ಮತ್ತು ಇದು ಹಲವಾರು ವರ್ಷಗಳಿಂದ ನಡೆಯುತ್ತಿರುವ ಯಾವುದೇ ಲಸಿಕೆ ಅಭಿಯಾನದಂತೆ ಮತ್ತು ನೋವು, ಜ್ವರ, ಶೀತದಂತಹ ಸಣ್ಣ ಅಡ್ಡಪರಿಣಾಮಗಳು ಸಾಮಾನ್ಯವಾಗಿದೆ ಮತ್ತು ಅದು ಅದೇನೂ ದೊಡ್ಡ ಸಮಸ್ಯೆಯಲ್ಲ ಎಂದು ಸಮಾಜದ ಪ್ರತಿಯೊಬ್ಬರಿಗೂ ಹೇಳಬೇಕು ಎಂದು ಚರ್ಚಿಸಿದ್ದೇವೆ,. ಮತ್ತು ಲಸಿಕೆ ನಂತರ ಈ ಸಮಸ್ಯೆಗಳು ಬರಬಹುದು, ಆದರೆ ನಾವು ಭಯಪಡಬೇಕಾಗಿಲ್ಲ. ಆದ್ದರಿಂದ, ಜನರಲ್ಲಿ ಯಾವುದೇ ತಪ್ಪುಗ್ರಹಿಕೆಯನ್ನು ನಿವಾರಿಸಲು, ನಾವು ಮೊದಲ ದಿನ ನಮ್ಮ ಕೇಂದ್ರದ ಸಿಬ್ಬಂದಿಗೆ ಲಸಿಕೆ ಹಾಕಿದ್ದೇವೆ ಮತ್ತು ಶೇಕಡಾ 82 ರಷ್ಟು ಲಸಿಕೆ ಮಾಡಲಾಯಿತು. ಇದು ಜನರ ಆತ್ಮ ವಿಶ್ವಾಸಕ್ಕೂ ಕಾರಣವಾಯಿತು ಮತ್ತು ಪ್ರತಿಯೊಬ್ಬರೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ: ನಾವು ಜನರಿಗೆ ಚಿಂತೆ ಮಾಡಬೇಡಿ ಮತ್ತು ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸಬಹದು ಎಂದು ಏನೇ ಹೇಳಿದರೂ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದ ಜನರಿಂದ ಒಂದು ಮಾತು ರೋಗಿಗಳು ಮತ್ತು ಜನರಲ್ಲಿ ವಿಶ್ವಾಸವನ್ನು ಉಂಟುಮಾಡುತ್ತದೆ. ಆದ್ದರಿಂದ, ಜನರು ನಿಮಗೆ ಬಹಳಷ್ಟು ಪ್ರಶ್ನೆಗಳನ್ನು ಕೇಳುತ್ತಿರಬಹುದು. ನೀವು ಹೇಗೆ ನಿರ್ವಹಿಸುತ್ತೀರಿ?

ಡಾ. ವಿ. ಶುಕ್ಲಾ: ಪ್ರತಿ ಲಸಿಕೆ ನಂತರ ಸಣ್ಣ ಅಡ್ಡಪರಿಣಾಮಗಳು ಸಾಮಾನ್ಯವೆಂದು ನಾವು ಜನರಿಗೆ ಹೇಳುತ್ತೇವೆ. ನಿನ್ನೆ ತನಕ, ದೇಶದಲ್ಲಿ 10 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ ಮತ್ತು ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿದವರುಬಹಳ ಕಡಿಮೆ. ನಮ್ಮ ಕೇಂದ್ರದಲ್ಲಿ ಯಾರಿಗೆ ಲಸಿಕೆ ಹಾಕಿಸಲಾಗಿದೆಯೋ ಅವರನ್ನು ಗಮನಿಸಲು ಇಲ್ಲಿ ಅರ್ಧ ಘಂಟೆಯವರೆಗೆ ಕುಳಿತುಕೊಳ್ಳಬೇಕಾಗಿತ್ತು ಮತ್ತು ಅದರ ನಂತರ ಎಲ್ಲರೂ ತಮ್ಮ ಕೆಲಸಕ್ಕೆ ಮರಳಿದರು. ಚುಚ್ಚುಮದ್ದಿನ ನಂತರ ಸ್ವಚ್ಛ ಗೊಳಿಸುವ ಸಿಬ್ಬಂದಿ ತಮ್ಮ ಕೆಲಸವನ್ನು ಪುನರಾರಂಭಿಸಿದರು. ನಾವು ನಮ್ಮ ಕೆಲಸವನ್ನು ಪುನರಾರಂಭಿಸಿದ್ದೇವೆ. ಗಂಭೀರ ರೋಗವಿರುವವರು, ಹೃದಯ ಕಾಯಿಲೆಗಳಿಂದ ಬಳಲುತ್ತಿರುವವರು, ಅಥವಾ ಉಸಿರಾಟದ ತೊಂದರೆ ಇರುವವರು ಅಥವಾ ಕ್ಯಾನ್ಸರ್ ರೋಗಿಗಳಿಗೆ ಲಸಿಕೆ ಹಾಕುವ ಅವಶ್ಯಕತೆಯಿದೆ. ನೈಸರ್ಗಿಕವಾಗಿ ಏನಾದರೂ ಸಂಭವಿಸದಲ್ಲಿ, ಅದನ್ನು ಲಕ್ಷಾಂತರ ಜನರ ವ್ಯಾಕ್ಸಿನೇಷನ್ನಿಗೆ ಸಂಬಂಧ ಕಲ್ಪಿಸಬಾರದು. ಇದು ಸಾಮಾನ್ಯ ವಿಧಾನ ಮತ್ತು ಯಾವುದೇ ಲಸಿಕೆ ಅಮರತ್ವವನ್ನು ಖಚಿತಪಡಿಸುವುದಿಲ್ಲ ಮತ್ತು ಆದ್ದರಿಂದ, ವ್ಯಾಕ್ಸಿನೇಷನ್‌ನೊಂದಿಗೆ ಅದನ್ನು ಜೋಡಿಸುವುದು ತಪ್ಪು. ಇದು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಏಕೆಂದರೆ ನಮ್ಮ ದೇಶದಲ್ಲಿ ನಡೆದಂತೆ ವರದಿಯನ್ನು ವಿಶ್ವದ ಬೇರೆಲ್ಲಿಯೂ ಮಾಡಿಲ್ಲ. ಲಸಿಕೆ ನಂತರ ಹತ್ತು ಲಕ್ಷ ಜನರು ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ. ಇದು ನಮಗೆ ಒಂದು ದೊಡ್ಡ ಭಾಗ್ಯವಾಗಿದೆ ಮತ್ತು ಈ ರೋಗದ ವಿರುದ್ಧ ಇಷ್ಟು ದೊಡ್ಡ ಲಸಿಕೆ ಅಭಿಯಾನವನ್ನು ಭಾರತ ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಇನ್ನೂ ಮಾಡಲಾಗಿಲ್ಲ ಎಂಬ ಸಂದೇಶವನ್ನು ನಾವು ಜಗತ್ತಿಗೆ ನೀಡುತ್ತೇವೆ.

ಪ್ರಧಾನಿ ನರೇಂದ್ರ ಮೋದಿ: ನಿಮ್ಮ ಸ್ವಾಭಿಮಾನವು ತುಂಬಾ ಪ್ರಬಲವಾಗಿದೆ ಮತ್ತು ನಿಮ್ಮ ನಾಯಕತ್ವವು ತುಂಬಾ ಶಕ್ತಿಯುತವಾಗಿದೆ ಮತ್ತು ನಿಮ್ಮ ಆಸ್ಪತ್ರೆಯಲ್ಲಿ ನೀವು ಎಷ್ಟೋ ಜನರಿಗೆ ಲಸಿಕೆ ನೀಡಿದ್ದರಿಂದ, 100 ಪ್ರತಿಶತದಷ್ಟು ಕೆಲಸ ಎಷ್ಟು ಬೇಗನೆ ಪೂರ್ಣಗೊಳ್ಳುತ್ತದೆ ಎಂದು ನಿರ್ಧರಿಸಲು ನಾನು ಎಲ್ಲಾ ಆಸ್ಪತ್ರೆಗಳನ್ನು ಒತ್ತಾಯಿಸುತ್ತೇನೆ. ನಮ್ಮ ಆಸ್ಪತ್ರೆಗಳಲ್ಲಿ 100 ಪ್ರತಿಶತದಷ್ಟು ಲಸಿಕೆ ಮಾಡಿದ ನಂತರ ಎರಡನೇ ಹಂತದ ಲಸಿಕೆ ಪ್ರಾರಂಭವಾಗುವಂತಹ ವಾತಾವರಣವನ್ನು ನಿರ್ಮಾಣ ಮಾಡಲು ಸ್ಪರ್ಧೆಯನ್ನು ನಡೆಸಬೇಕು . 50 ವರ್ಷಕ್ಕಿಂತ ಮೇಲ್ಪಟ್ಟವರ ಮೇಲೆ ನಾವು ತಕ್ಷಣ ಲಸಿಕೆ ಹಾಕುವುದನ್ನು ಪ್ರಾರಂಭಿಸಬಹುದು. ನಿಮ್ಮ ನಾಯಕತ್ವದಲ್ಲಿ ಎಷ್ಟೋ ಜನರಿಗೆ ಲಸಿಕೆ ಹಾಕಿದ್ದಕ್ಕಾಗಿ ನೀವು ಮೆಚ್ಚುಗೆಗೆ ಅರ್ಹರಾಗಿದ್ದೀರಿ. ಆದರೆ ಇತರ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ನಿಮ್ಮಿಂದ ಸ್ಫೂರ್ತಿ ಪಡೆದರೆ ಮತ್ತು ಹೆಚ್ಚು ಮುಂಚೂಣಿಯ ಯೋಧರಿಗೆ ಲಸಿಕೆ ಹಾಕಿದರೆ ಅದು ಬಹಳ ಸಹಾಯಕವಾಗುತ್ತದೆ. ಶುಕ್ಲಾಜಿ, ನಿಮ್ಮನ್ನು ಮತ್ತು ನಿಮ್ಮ ತಂಡವನ್ನು ಅಭಿನಂದಿಸುತ್ತೇನೆ. ಧನ್ಯವಾದಗಳು.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ರಮೇಶ್‌ ಜಿ.

ರಮೇಶ್ ಚಂದ್ ರಾಯ್: ಮಾನ್ಯ ಪ್ರಧಾನ ಮಂತ್ರಿಯವರಿಗೆ ನಮಸ್ಕಾರ. ನಾನು, ರಮೇಶ್ ಚಂದ್ ರಾಯ್, ಪಂಡಿತ್ ದೀಂದಯಾಲ್ ಉಪಾಧ್ಯಾಯ ವೈದ್ಯಕೀಯ ಆಸ್ಪತ್ರೆಯಲ್ಲಿ ಹಿರಿಯ ಲ್ಯಾಬ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ನಿಮಗೆ ಲಸಿಕೆ ನೀಡಲಾಗಿದೆಯೇ?

ರಮೇಶ್ ಚಂದ್ ರಾಯ್‌ : ಹೌದು ಸರ್, ಇದು ನನಗೆ ಮೊದಲ ಹಂತದಲ್ಲಿ ಈ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ.

ಪ್ರಧಾನಿ ನರೇಂದ್ರ ಮೋದಿ: ಅದ್ಭುತ. ಹಾಗಾದ್ರೆ, ಇತರರ ಆತ್ಮವಿಶ್ವಾಸವೂ ಹೆಚ್ಚಾಗಿರಬೇಕು. ಹಿರಿಯ ತಂತ್ರಜ್ಞರಿಗೆ ಲಸಿಕೆ ಹಾಕಿದಾಗ, ಅದು ಇತರರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.

ರಮೇಶ್ ಚಂದ್‌ ರಾಯ್‌ : ನಿಜ, ಸರ್. ನೀವು ಮೊದಲ ಡೋಸ್ ತೆಗೆದುಕೊಂಡಿದ್ದೀರಿ, ಎರಡನೆಯದಕ್ಕೆ ಸಿದ್ಧರಾಗಿರಿ ಎಂದು ನಾವು ಎಲ್ಲರಿಗೂ ಹೇಳುತ್ತಿದ್ದೇವೆ. ಸುರಕ್ಷಿತವಾಗಿರಿ; ನಿಮ್ಮ ಕುಟುಂಬ, ಸಮಾಜ ಮತ್ತು ರಾಷ್ಟ್ರವನ್ನು ಸುರಕ್ಷಿತವಾಗಿರಿಸಿಕೊಳ್ಳಿ ಸರ್.

ಪ್ರಧಾನಿ ನರೇಂದ್ರ ಮೋದಿ: ನೀವು ಅದನ್ನು ವಿಶ್ವಾಸದಿಂದ ಮುಂದುವೆರಿಸಿದ್ದೀರಿ. ನಿಮ್ಮ ಇಡೀ ತಂಡದ ಮೇಲೆ ಅದರ ಪ್ರಭಾವ ಏನು? ಅವರಲ್ಲಿ ವಿಶ್ವಾಸ ಹೆಚ್ಚಿದೆಯೇ?

ರಮೇಶ್ ಚಂದ್ ರಾಯ್: ತುಂಬಾ, ಸರ್. ಜನರು ಬಹಳ ಉತ್ಸಾಹದಿಂದ‌ ಇದ್ದಾರೆ ಮತ್ತು 81 ಜನರು ವ್ಯಾಕ್ಸಿನೇಷನ್ಗಾಗಿ ಮೊದಲ ಹಂತದಲ್ಲಿ ಬಂದರು. ಬಹುಶಃ, 19 ಜನರು ಕೆಲವು ಕಾರಣಗಳಿಂದ ಎಲ್ಲೋ ಹೋಗಿದ್ದರು. ನಮ್ಮ ಅಭಿಯಾನವು ಚಾಲನೆಯಲ್ಲಿದೆ, ಸರ್.

ಪ್ರಧಾನಿ ನರೇಂದ್ರ ಮೋದಿ: ರಮೇಶ್‌ ಜಿ ಮತ್ತು ನಿಮ್ಮ ತಂಡಕ್ಕೆ ನನ್ನ ಶುಭಾಶಯಗಳು. ಅನೇಕ ಧನ್ಯವಾದಗಳು.

ಪ್ರಧಾನಿ ನರೇಂದ್ರ ಮೋದಿ: ನಮಸ್ತೆ, ಶ್ರಂಖ್ಲಾಜಿ.

ಶ್ರಂಖ್ಲಾ ಚೌಹಾನ್: ಸರ್, ನಿಮಗೆ ಅನೇಕ ಪ್ರಣಾಮಗಳು ಸರ್, ನಾನು ಸಿಎಸ್.ಸಿ. ಹಾತಿ ಬಜಾರ್, ಪಿಎಸ್ಸಿ ಸೇವಾಪುರಿಯಲ್ಲಿ ಎಎನ್ಎಂ ಆಗಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನಿ ನರೇಂದ್ರ ಮೋದಿ: ಮೊದಲನೆಯದಾಗಿ, ನಿಮಗೆ ಅನೇಕ ಧನ್ಯವಾದಗಳು. ಏಕೆಂದರೆ ನಿಜವಾಗಿಯೂ ಸೇವಾಪುರಿಯಲ್ಲಿ ಸೇವೆ ಸಲ್ಲಿಸುವ ಮೂಲಕ, ನೀವು ಸೇವಪುರಿಯ ಹೆಸರನ್ನು ಸಹ ಸಾರ್ಥಕಗೊಳಿಸುತ್ತಿದ್ದೀರಿ ಮತ್ತು ನಿಮ್ಮ ಕುಟುಂಬದ ಹೆಸರನ್ನು ಸಾರ್ಥಕಗೊಳಿಸುತ್ತಿದ್ದೀರಿ. ಇದು ಬಹಳ ಉದಾತ್ತ ಸೇವೆ. ಅಂತಹ ಬಿಕ್ಕಟ್ಟಿನ ಸಮಯದಲ್ಲಿ ನೀವು ಸೇವೆ ಸಲ್ಲಿಸಿದಾಗ, ಅದು ಅಮೂಲ್ಯವಾದುದು ಮತ್ತು ಬೆಲೆ ಕಟ್ಟಲಾಗದು. ನಿಮ್ಮಂತಹ ಜನರಿಂದ ಜಗತ್ತಿನ ಅತಿ ದೊಡ್ಡ ಅಭಿಯಾನವನ್ನು ನಡೆಸಲಾಗುತ್ತಿದೆ. ನೀವು ಇಲ್ಲಿಯವರೆಗೆ ಎಷ್ಟು ಜನರಿಗೆ ಲಸಿಕೆ ಹಾಕಿದ್ದೀರಿ? ದಿನದಲ್ಲಿ ನೀವು ಎಷ್ಟು ಜನರಿಗೆ ಲಸಿಕೆ ಹಾಕುತ್ತೀರಿ?

ಶ್ರಂಖ್ಲಾ ಚೌಹಾನ್: ಸರ್, ಜನವರಿ 16, 2021 ರಂದು, ಮೊದಲ ಹಂತದಲ್ಲಿ ನಾನು ಕೋವಿಶೀಲ್ಡ್ನ ಮೊದಲ ಡೋಸನ್ನುತೆಗೆದುಕೊಂಡೆ ಮತ್ತು ಅದೇ ದಿನ 87 ಜನರಿಗೆ ಲಸಿಕೆ ಹಾಕಿದೆ.

ಪ್ರಧಾನಿ ನರೇಂದ್ರ ಮೋದಿ: ವಾಹ್! ನೀವೇ ಲಸಿಕೆ ಹಾಕಿಸಿಕೊಂಡ ದಿನ ನೀವು ತುಂಬಾ ಕೆಲಸ ಮಾಡಿದ್ದೀರಿ!

ಶ್ರಂಖ್ಲಾ ಚೌಹಾನ್: ಯೆಸ್ ಸರ್.

ಪ್ರಧಾನಿ ನರೇಂದ್ರ ಮೋದಿ: ಅದ್ಭುತ! 87 ಜನರಿಗೆ ಲಸಿಕೆ ಹಾಕುವುದು ಸಣ್ಣ ವಿಷಯವಲ್ಲ. ಹಾಗಾದರೆ ಅವರೆಲ್ಲರೂ ನಿಮ್ಮನ್ನು ಆಶೀರ್ವದಿಸುತ್ತಿರಬೇಕು.

ಶ್ರಂಖ್ಲಾ ಚೌಹಾನ್: ಯೆಸ್‌ ಸರ್. ಕರ್ತವ್ಯದಲ್ಲಿದ್ದ ಎಲ್ಲರಿಗೂ ಲಸಿಕೆ ಹಾಕಿದ ನಂತರ ನಾನು ಲಸಿಕೆ ಹಾಕಿಸಿಕೊಂಡೆ.

ಪ್ರಧಾನಿ ನರೇಂದ್ರ ಮೋದಿ: ನಿಮಗೂ ನನ್ನ ಶುಭಾಶಯಗಳು. ನಿಮ್ಮ ಪ್ರಯತ್ನದಿಂದಾಗಿ ನೀವೆಲ್ಲರೂ ಶೀಘ್ರದಲ್ಲೇ ಸುರಕ್ಷಿತವಾಗಿರುತ್ತೀರಿ ಮತ್ತು ಲಸಿಕೆ ಹಾಕುವ ಕೆಲಸವನ್ನು ಸಮಾಜದ ಇತರರಿಗೆ ಮುಂದುವರೆಸುತ್ತೀರಿ ಎಂದು ನನಗೆ ಖಾತ್ರಿಯಿದೆ. ಇಂದು, ನಿಮ್ಮೊಂದಿಗೆ ಮಾತನಾಡಲು ನಡೆಸಲು ನನಗೆ ಅವಕಾಶ ಸಿಕ್ಕಿತು. ಲಸಿಕೆ ಕಾರ್ಯಕ್ರಮದ ಸಮಯದಲ್ಲಿ ನಾನು ಕಾಶಿಯ ಜನರನ್ನು ಭೇಟಿಯಾಗಬಹುದೆಂದು, ಅವರೊಂದಿಗೆ ಮಾತನಾಡಬಹುದೆಂದು ಮತ್ತು ವಿಶೇಷವಾಗಿ ಈ ಅಭಿಯಾನವನ್ನು ಮುನ್ನಡೆಸುತ್ತಿರುವ ವೈದ್ಯಕೀಯ ಭ್ರಾತೃತ್ವವನ್ನು ಮಾತನಾಡಿಸಲು ಸಾಧ್ಯವಾಯಿತೆಂದು ನನಗೆ ಸಂತೋಷವಾಗಿದೆ. ಇದು ನನಗೆ ಅದೃಷ್ಟದ ಕ್ಷಣಗಳು. ಮತ್ತೊಮ್ಮೆ, ನಾನು ಕಾಶಿಯ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವಂತೆ ವಿನಂತಿಸುತ್ತೇನೆ, ಇದರಿಂದಾಗಿ ನಾವು ಎರಡನೇ ಹಂತಕ್ಕೆ ಹೋಗಬಹುದು, ಇದರಿಂದಾಗಿ ನಾವು 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ತ್ವರಿತವಾಗಿ ಲಸಿಕೆ ನೀಡಬಹುದು. ಕಾಶಿಯಲ್ಲಿ ಈ ಕಾರ್ಯವನ್ನು ನಾವು ಸಾಧ್ಯವಾದಷ್ಟು ಬೇಗ ಸಾಧಿಸಬೇಕೆಂದು ಕಾಶಿಯ ಸೇವಕನಾಗಿ ನಾನು ವಿನಂತಿಸುತ್ತೇನೆ.

ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು.

ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
New Smart Drug RK-251 Developed as Replacement for Chemotherapy

Media Coverage

New Smart Drug RK-251 Developed as Replacement for Chemotherapy
NM on the go

Nm on the go

Always be the first to hear from the PM. Get the App Now!
...
The world is seeing India as a bright spot of growth and hope: PM Modi at Economic Times World Leaders Forum 2026
August 21, 2026
The world sees India as a bright spot for growth and hope: PM
Today, India is implementing next-generation reforms at the policy level and undertaking reforms at governance level: PM
Increasing production was met with punishment earlier but today, our government is providing incentives for boosting production
India has political stability and continuity in its policies: PM
Earlier, the approach of regulations was, 'prohibited unless permitted’; We are changing this approach and taking it towards 'permitted unless prohibited’: PM
The relationship between the government and citizens should be based on trust, not suspicion: PM
Today, we are shaping policies that are pro-people, pro-growth and pro-development: PM

World Leaders Forum का ये प्रतिष्ठित मंच, Business और Industry की दुनिया के सभी जाने माने दिग्गज, पॉलिसी मेकर्स, अन्य महानुभाव, देवियों और सज्जनों।

आप सबके बीच आकर के खुश होना बहुत स्वाभाविक भी है। इस साल समिट का फोकस Shared Future पर है। पिछले कुछ वर्षों में दुनिया ने अनेक उतार-चढ़ाव देखे हैं। और इन अनुभवों ने एक बात बहुत स्पष्ट कर दी है, कोई चाहे या ना चाहे, हर देश का भविष्य, उसका फ्यूचर, एक-दूसरे से जुड़ा हुआ ही है, Isolation में कुछ संभव नहीं है। इसीलिए Shared Futures की ये theme, आज और भी अधिक प्रासंगिक हो गई है। और भारत तो हमेशा से इसी भावना को लेकर चला है। जी-20 की अध्यक्षता में इसलिए ही भारत का मंत्र रहा, One Earth, One Family, One Future. Shared Future की ये भावना और इसके साथ जुड़ा दायित्वबोध, 21वीं सदी के इस विश्व की अनेक समस्याओं का समाधान देता है।

साथियों,

आज दुनिया में growth को लेकर के कई तरह की चिंताएं हैं। दुनिया ने बड़ा भयंकर एक रूप देखा है इन दिनों। Resources का वेपनाइजेशन हो रहा है। अविश्वास का वातावरण विश्व के लिए अनेक नई चुनौतियां लेकर के आ रहा है। लेकिन ऐसे समय में भी, दुनिया भारत को growth और hope के bright spot के रूप में देख रही है। भारत ने पिछले 10-12 साल में अपनी 25 करोड़ आबादी को गरीबी से बाहर निकाला है। इतना ही नहीं, अगर आने वाले दिनों की चर्चा करें, तो IMF का forecast है कि भारत दुनिया की fastest growing major economy बना रहेगा। और भारत निरंतर वो कदम उठा रहा है, जो उसके विकास को गति दे रहे हैं।

Friends,

अभी पिछले हफ्ते ही, 15 अगस्त को मैंने लाल किले से सप्त-धारा की सप्त-शक्तियों की बात की है। मैन्यूफैक्चरिंग, टेक्नोलॉजी और इनोवेशन, फूड प्रोसेसिंग, ग्रीन और ब्लू इकोनॉमी समेत, मैंने ऐसे सात सेक्टर्स की बात की है, जिन पर भारत का आज बहुत ज्यादा फोकस है। और इसलिए भारत आज, Policy level पर, नेक्स्ट जनरेशन reforms कर रहा है, ताकि हमारा future सुरक्षित हो। Governance पर reforms कर रहा है, Ease of Living के लिए reforms कर रहा है। पिछली बार जब मैं इसी मंच के माध्यम से आपसे जुड़ा था, तब भी मैंने कहा था, ये Reforms हमारे लिए Compulsion नहीं है। ये हमारा commitment है, ये हमारा conviction है।

साथियों,

2014 में, जब हमारी सरकार बनी, तो उसके बाद से ही रिफॉर्म्स ने कैसे देश की दिशा और दशा बदली है, मैं इसका एक बहुत दिलचस्प उदाहरण आपको देना चाहता हूं। यहां मौजूद शायद ही किसी को PLP के बारे में पता होगा, कोई है, जिसको PLP के बारे में पता है? अपना हाथ उठाएं। यहां इतने मीडिया के दिग्गज बैठे हैं, PLP आपको पता है? और आप सुनकर के हैरान हो जाएंगे। PLP यानी प्रोडक्शन लिंक्ड पनिशमेंट, इसके बारे में किसी को पता नहीं है। और एक दूसरा टर्म आपने जरूर सुना है PLI, ये ज्यादातर लोगों को पता होगा। PLI- यानी प्रोडक्शन लिंक्ड इंसेंटिव।

साथियों,

ये दोनों टर्म, भारत के दो अलग-अलग Time Period को डिफाइन करते हैं। आजकल Explainer का जमाना है, तो मैं आपको Explain करता हूं।

साथियों,

आज की युवा पीढ़ी को ये सुनकर हैरानी होगी, कि हमारे देश में एक समय ऐसा भी था, कि अगर कोई कंपनी तय लिमिट से ज्यादा प्रॉडक्शन कर दे, तो उसे पनिशमेंट दिया जाता था। ये पहले की लाइसेंस राज वाली सरकारों का, PLP यानी प्रोडक्शन लिंक्ड पनिशमेंट मॉडल था। ऐसे भी उदाहरण रहे हैं कि अगर किसी फैक्ट्री ने ज्यादा डिमांड देखते हुए ज्यादा प्रॉडक्शन कर दिया, तो उसे नोटिस भेज दिया जाता था। मजबूरी में वो कंपनी अपना प्रॉडक्ट मार्केट में बेचने के बजाय, उसे खुद ही नष्ट कर देती थी।

साथियों,

आज जो लोग Make In India और आत्मनिर्भर भारत अभियान का मजाक उड़ाते हैं, उनके पुरखों की सोच यही थी, PLP यानी प्रोडक्शन लिंक्ड पनिशमेंट। ऐसा करने के पीछे एक विशेष तरह की विकृत मानसिकता काम करती थी। ऐसी मानसिकता वाले लोग हमेशा चाहते थे कि जरूरी चीजों की किल्लत बनी रहे। देश के नागरिकों को अभाव में रखना उनकी पॉलिसी थी। वो चाहते थे कि जनता उनके सामने हाथ जोड़े, हाथ फैलाए, आप समझ गए मैं किन लोगों की बात कर रहा हूं। लोगों से हाथ जुड़वाने के बाद उपकार करना, उन सरकारों का तरीका था, इसलिए वो प्रोडक्शन लिंक्ड पनिशमेंट मॉडल पर चलते थे। आप कल्पना कर सकते हैं, ऐसे करके उन लोगों ने Employment Generation के बेसिक principal का गला घोंट दिया था। और हैरानी ये, इन लोगों के दरबारियों ने again I repeat, इन लोगों के दरबारियों ने, कभी इसके खिलाफ कोई आवाज नहीं उठाई।

साथियों,

हर reform की शुरुआत सबसे पहले, आपके सोचने के तरीके, आपके मानसिक, किस रेंज में आप काम कर रहे हैं, इस सोच के reform से ही होती है। जहां पहले production बढ़ाने पर पनिशमेंट मिलता था, वहीं आज हमारी सरकार production बढ़ाने पर incentive दे रही है। और आज PLI स्कीम की सक्सेस दुनिया देख रही है। सिर्फ इस एक योजना की वजह से, मैं सारी योजनाओं की बात नहीं करता हूं, एक की बात करता हूं, करीब ढाई लाख करोड़ रुपए का actual investment हुआ है। 22 लाख करोड़ रुपए से ज्यादा का production और sales हुई है। 15 लाख करोड़ रुपए से ज्यादा का exports हुआ है, और 14 लाख से ज्यादा direct और indirect jobs बनी हैं। और मैं फिर याद दिलाउंगा, ये आंकड़े सिर्फ एक स्कीम के हैं। आप सोचिए, पहले का लाइसेंस राज वाली सरकार का पनिशमेंट मॉडल जहां बेरोजगारी बढ़ाता था, वहीं आज का हमारा incentive मॉडल लाखों नई जॉब्स क्रिएट कर रहा है।

साथियों,

आज भारत में ये तेज विकास, ये तेज रिफॉर्म इसलिए हो रहे हैं, क्योंकि भारत में और जिसका अभी सत्य ने उल्लेख किया, political stability है, हमारी policy में continuity है। पहले देश में रिफॉर्म्स की बात करने वाले घोषणा तो कर देते थे, बाद में भूल जाते थे। लेकिन हमने रिफॉर्म्स को लेकर एक क्लियर रोडमैप बनाया। इस रोडमैप की प्रमुख दिशा रही है- गवर्नेंस लेवेल के रिफॉर्म्स हों! इसके लिए, आज 21वीं सदी के भारत में, हम सिर्फ regulations नहीं बदल रहे हैं, हम regulation की पूरी philosophy बदल रहे हैं। पहले regulations की अप्रोच थी- “Prohibited unless permitted.” यानी जब तक सरकार इजाजत ना दे, तब तक आप वो काम नहीं कर सकते। हम इस approach को बदलकर, “Permitted unless prohibited” की तरफ ले जा रहे हैं। यानी, जो काम कानून ने स्पष्ट रूप से मना नहीं किया है, उसके लिए हर कदम पर permission की कोई जरूरत नहीं होनी चाहिए। और इसके पीछे सोच बहुत सीधी है, सरकार और नागरिक के रिश्ते का आधार, Suspicion नहीं, trust होना चाहिए।

साथियों,

यही सोच आपको Jan Vishwas बिल में भी दिखाई देती है। मैं मानता हूं, हर procedural गलती को criminal offence मान लेना ठीक नहीं है। इसीलिए अनेक offences को decriminalise किया गया है। कई मामलों में जेल की जगह केवल आर्थिक penalty का प्रावधान किया गया है। Government और enterprise के रिश्ते में, हम इसी reform mindset को आगे बढ़ा रहे हैं। बीते वर्षों में 40 हजार से ज्यादा compliances हटाए गए हैं, 40 thousand. डेढ़ हजार से ज्यादा, 15 hundred, डेढ़ हजार से ज्यादा, पुराने और बेकार हो चुके कानून हमने खत्म किए, और जब इन सारे reforms को एक साथ देखते हैं, तो अंदाजा होता है, हमारी industries और businesses के कंधों से कितना बड़ा बोझ कम हुआ है।

साथियों,

गवर्नेंस रिफॉर्म्स की इस प्रक्रिया, उस पर हम निरंतर काम कर रहे है। अभी संसद के मॉनसून सत्र में हमने ‘बैंकर्स बुक एविडेंस बिल’ पारित किया है। और वो भी तब जब विपक्ष ने संसद में लगातार गतिरोध बनाया हुआ था। हमने देश की सेवा करने का काम रूकने नहीं दिया। अब इस कानून ने 19वीं सदी के अंग्रेजी कानून को रिप्लेस किया है। अब बैंकों के डिजिटल रिकॉर्ड्स की स्वीकार्यता को कानूनी मान्यता दी गई है। इससे कानूनी उलझनें कम होंगी, सिस्टम में पारदर्शिता होगी, Ease of Doing Business बढ़ेगा।

साथियों,

गवर्नेंस में रिफॉर्म का एक मतलब ये भी है कि सिस्टम ऐसे बनें, जिसमें एक-एक मानव जीवन और उसके समय के प्रति संवेदनशीलता हो। मैं रेलवे का उदाहरण देता हूं। हमारी रेलवेज में भी इसी अप्रोच के साथ काम हुआ है। आज साढ़े 6 हजार से ज्यादा रेलवे स्टेशनों पर इलेक्ट्रॉनिक इंटरलॉकिंग की व्यवस्था है। 10 हजार से ज्यादा लेवल क्रॉसिंग गेट्स को भी इंटरलॉकिंग से जोड़ा जा चुका है। इससे ह्यूमन एरर से होने वाले हादसों की आशंका बहुत कम हुई है।

साथियों,

जब 2014 में हमारी सरकार आई, तो करीब 9 हजार फाटक ऐसे थे जो Un-Manned थे। इन्हें हटाना कोई रॉकेट साइंस नहीं था। Un-Manned क्रॉसिंग्स की वजह से हजारों लोगों को अपनी जान गंवानी पड़ी, लेकिन पहले की सरकारों को इससे बहुत फर्क नहीं पड़ता था। हमने मिशन मोड में, गत दस वर्ष में, इन Un-Manned क्रॉसिंग्स को समाप्त कर दिया। हमने रोड ओवर ब्रिज और रोड अंडर ब्रिज बनाने की गति भी कई गुना बढ़ा दी। और इसी का नतीजा है कि 2014 के पहले के मुकाबले ट्रेन दुर्घटनाओं की संख्या में Ninety Percent तक की कमी आई है, 90, Ninety Percent. 12 साल पहले जहां एक साल में करीब डेढ़ सौ रेल दुर्घटनाएं होती थीं, वहीं अब इनकी संख्या घटकर 15-20 रह गई है। और हम इसे और कम से कम करने का प्रयास लगातार कर रहे हैं।

साथियों,

Railways में स्वच्छता भी गवर्नेंस रिफॉर्म का एक बड़ा उदाहरण है। एक समय था, जब रेल पटरियों पर गंदगी और human waste एक बड़ी समस्या हुआ करती थी। आज स्थिति पूरी तरह बदल गई है। 2014 से पहले हमारी ट्रेनों में जहां लगभग 12 हजार बायो-टॉयलेट्स लगाए गए थे, वहीं 2014 के बाद ट्रेनों में 3 लाख 60 हजार से ज्यादा बायो-टॉयलेट्स लगाए गए हैं। यानी, 97 प्रतिशत से ज्यादा बायो-टॉयलेट्स पिछले 12 वर्षों में लगे हैं। ये बदलाव सिर्फ सफाई का नहीं, यात्रियों की गरिमा, स्वच्छता और आधुनिक भारत के निर्माण की दिशा में गवर्नेंस का एक नया मॉडल है। ये करोड़ों यात्रियों को बेहतर अनुभव देने का अभियान भी है।

साथियों,

गवर्नेंस की क्वालिटी का एक और पैमाना, और वो पैमाना है - समय। जो प्रोजेक्ट शुरू हो, वो समय पर पूरा हो। और जो सर्विस लोगों को मिले, वो भी समय की कसौटी पर खरी उतरे। दिल्ली-मेरठ नमो भारत रैपिड रेल सिस्टम इसका बहुत अच्छा उदाहरण है। इस कॉरिडोर पर 160 किलोमीटर प्रति घंटे की रफ्तार से ट्रेनें चल रही हैं। ये हमारे देश में पहले कभी सोचा नहीं जा सकता था। अब तक 4 करोड़ से ज्यादा यात्री इसमें ट्रैवल कर चुके हैं। और इसका एक और अहम फैक्टर है, जिसकी चर्चा नहीं होती है। दिल्ली मेरठ नमो भारत रैपिड रेल की पंक्चुअलिटी 99.9 परसेंट है। वरना हम तो हर चीज में कहते हैं, लेट हो तो कहते थे, ये तो इंडियन टाइम है। वक्त बदला है, ये मैं छोटी-छोटी चीजें इसलिए बताता हूं, कि हमें अंदाज आए कि कितने बड़े व्यापक स्तर पर काम हो रहा है। इसी तरह, Delhi Metro की पंक्चुअलिटी। Delhi Metro की पंक्चुअलिटी 99.9 परसेंट है। और ये punctuality, New York, Hong Kong और Paris जैसे शहरों की Metro से करीब-करीब बराबर हो चुकी है। ये सिर्फ समय पर चलती हुई Metro और नमो रेपिड रेल की कहानी नहीं है, ये समय के साथ बदलते हुए भारत की पहचान है। मैं जानता हूं कि अभी भी, और र्मैं कोई इतने से संतोष मानकर बैठने वाला व्यक्ति नहीं हूं, अभी भी इस दिशा में हमें बहुत कुछ करना है, बहुत कुछ बाकी है, लेकिन हम लगातार कर रहे हैं। लेकिन एक शुरूआत तो हुई है और ये शुरुआत सराहनीय है।

साथियों,

हमारे रिफॉर्म्स रोडमैप का एक और बड़ा आयाम है- पॉलिसी लेवल पर होने वाले रिफॉर्म्स! आज हम ऐसी policies बना रहे हैं, जो pro-people हों, Pro-growth हों, pro development हों! पॉलिसीज़ देश और देश के लोगों की जरूरत के हिसाब से होनी चाहिए न कि पॉलिसीज़ बनाकर देश को उनके हिसाब से चलने को मजबूर होना पड़े! मैं आपको एक और Interesting उदाहरण देना चाहता हूं। कुछ साल पहले तक हमारे यहाँ देश का नक्शा बनाना भी गैर-कानूनी था, मैप बनाए तो गैर कानूनी था, आप जेल चले जाएंगे। बिना परमिशन के आप देश में मैपिंग का काम भी नहीं कर सकते थे। आप सोचिए, विदेशी सैटेलाइट टेक्नोलॉजी के जरिए भारत के किसी भी कोने को मैप कर सकती थी, लेकिन भारत में भारतीयों पर भारत का मैप बनाने पर पाबंदी लगी हुई थी।

साथियों,

आज टेक्नोलॉजी के इस दौर में, इस एक पाबंदी से कितने स्टार्टअप्स की हत्या हो सकती थी! कितने ideas implement होने से वंचित रह सकते थे! हमने इस व्यवस्था को भी बदला। हमने Geospatial डेटा का Deregulation किया और आज Geospatial डेटा कितने ही स्टार्टअप्स का आधार बन रहा है।

साथियों,

आज आप लगातार ड्रोन्स की उपयोगिता बढ़ते हुए देख रहे हैं। एग्रीकल्चर में, डिफेंस में, डिलिवरी में, शूटिंग में, कंटेंट क्रिएशन में, ये सब संभव ही नहीं होता, अगर सरकार ने इससे जुड़े नियमों में Reform नहीं किए होते। पहले देश में ड्रोन फ्लाइंग पूरी तरह नियमों में, बंधनों में जकड़ी हुई थी। हमने उसे बंधनों से आजाद किया, और आज भारत की ड्रोन इंडस्ट्री, एक अभूतपूर्व उड़ान के साथ आगे बढ़ रही है।

साथियों,

पहले border areas को लेकर सरकारों की सोच थी कि बॉर्डर पर roads और infrastructure बढ़ेगा, तो उसका फायदा दुश्मन भी उठा सकता है। हमने इस सोच को बदला। हमने कहा, Border infrastructure कमजोरी नहीं, देश की ताकत है। और इसीलिए आज border areas में roads, bridges और tunnels का network तेजी से बढ़ रहा है। सिर्फ 2024 और 2025 में ही, BRO के 250 infrastructure projects देश को समर्पित किए गए हैं। सोच बदली, तो border infrastructure की तस्वीर भी बदल गई।

साथियों,

एक उदाहरण न्यूक्लियर रिफॉर्म्स का भी है। एक ऐसे समय में, जब विकास पूरी तरह से energy dependent है, बंदिशों और प्रतिबंधों के कारण, देश अपने न्यूक्लियर potential का इस्तेमाल नहीं कर पा रहा था। हमने शांति बिल के जरिए इसमें भी बड़ा रिफॉर्म किया है। आज भारत में न्यूक्लियर एनर्जी में प्राइवेट सेक्टर के लिए रास्ता खुल चुका है। इसी तरह, हमने एक बड़ा पॉलिसी रिफॉर्म डिफेंस सेक्टर में भी किया। 200 साल के पहले जो व्यवस्था चली आ रही थी, उसे बदलकर हमने 40 से ज्यादा ordnance फैक्ट्रीज़ को मर्ज करके 7 फैक्ट्रीज़ बना दी। और उसका परिणाम हमें देखने को मिल रहा है। आज भारत अपनी रक्षा जरूरतों के लिए भी आत्मनिर्भर बन रहा है, और 2014 की तुलना में, हमारा डिफेंस एक्सपोर्ट 55 गुना बढ़ा है। और इसलिए, कई बार रिफॉर्म्स हमारे जीवन में इस तरह घुल-मिल जाते हैं कि हमारा उनकी तरफ ध्यान ही नहीं जाता। आप सोचिए, आपका कोई सामान्य दिन आज कैसे बीतता है। आप सुबह उठते हैं, फोन पर घर का सामान ऑर्डर कर देते हैं, और जब तक ऑफिस के लिए रेडी होते हैं, वो सारा सामान आपके घर आकर के पहुंच जाता है। आपकी गली के स्ट्रीट वेंडर से लेकर, आपकी गाड़ी के शो रूम तक, आपकी सारी पेमेंट्स, सिर्फ एक क्यूआर कोड स्कैन करके हो जाती है। अगर आपकी बेटी, किसी दूसरे शहर में पढ़ती है, तो आप फोन से उसे पैसे भेज सकते हैं, और वो पैसा, कुछ सेकंड्स में उसके पास भी पहुंच जाता है। कई बार तो बिटिया क्यूआर ही शेयर कर देती है कि ‘पापा-मां मैंने ये ड्रेस ले ली है, इसकी पेमेंट कर दीजिए, और आप उसकी शॉपिंग अपने घर बैठे-बैठे करवा देते हैं। ये चीजें Remarkable हैं, लेकिन अब ये कोई भारत के लोगों को कम से कम हैरानी नहीं होती, बाहर के लोग आते हैं, उनको आश्चर्य होता है, अच्छा ऐसे होता है। भारत के लोगों का रूटीन हो गया है। ये भारत के सामान्य मानवी के जीवन का हिस्सा बन चुका है। आप सोचिए, 2014 से पहले ऐसी कितनी ही बातें क्या पॉसिबल थीं?

साथियों,

भारत ने बीते 10-12 सालों में Ease of Living से जुड़े जो रिफॉर्म्स किए हैं, उसकी वजह से लोगों का, खासतौर पर हमारे मिडिल क्लास का जो जीवन बदला है, वो दुनिया के कई विकसित देशों में आज भी एक सपना ही है।

साथियों,

आज दुनिया का सबसे सस्ता डेटा भारत में है, हम सस्ते और अच्छे स्मार्टफोन्स बना रहे हैं। अभी सत्या ने उसका वर्णन किया। भारत दुनिया के fastest 5G rollouts करने वाले देशों में से एक है। हमने आधार को बैंकिंग, मोबाइल कनेक्टिविटी और सर्विसेज से जोड़कर, ई-के.वाई.सी और Digital Authentication जैसी सर्विसेज को पॉसिबल किया है। आज आपको अगर बैंक अकाउंट खोलना है, तो उसके लिए बैंक जाने तक की जरूरत नहीं है। सरकार ने बैंक को ही, आपके पास पहुंचा दिया है। आज चाहे कोई बिल जमा करना हो, कोई टिकट करानी हो, किसी सरकारी दफ्तर में जाने की जरूरत नहीं पड़ती, ये सारा काम ऑनलाइन हो जाता है। इनकम टैक्स की फाइलिंग का काम आसान हुआ है। ऐसी व्यवस्था बनी है कि फॉर्म में मैक्सिमम जानकारियां पहले से भरी होती हैं। आप ये इन्फॉर्मेशन वेरिफाई करते हैं, कुछ जोड़ना है तो जोड़ देते हैं, और सबमिट करते हैं, आपका काम पूरा हो जाता है। पहले जो रिफंड आने में महीनों लगते थे, अब वो भी कुछ ही दिनों में आ जाता है।

साथियों,

आज ई-संजीवनी की मदद से, शायद इसकी चर्चा अभी बहुत कम होती है, ई-संजीवनी की मदद से, गांव के दूर दराज के लोग भी, कहीं से भी डॉक्टर्स के साथ सीधी अपनी चर्चा करके अपने उपचार का रास्ता लेते हैं। और इससे जिन लोगों को अस्पताल जाने के लिए कई किलोमीटर का सफर करना पड़ता था, आज डॉक्टर उनके घर पर, उनकी स्क्रीन पर उपलब्ध है। अब तक ये आंकड़ा भी आपको जरूर आश्चर्य करेगा। यानी भारत ने टेक्नोलॉजी को किस प्रकार से अडाप्ट किया है, सामान्य मानवीय के जीवन को कैसे सरल किया है। अब तक ईं-संजीवनी के तहत करीब-करीब 50 करोड़ टेली-कंसल्टेशंस हो चुकी हैं।

साथियों,

आज भारत में Travel Experience बदल रहा है, भारत के नागरिकों की यात्राएं पूरी तरह बदल गई हैं। यहां इस हॉल में ऐसा व्यक्ति खोजना मुश्किल होगा, जिसने एयरपोर्ट पर डिजी यात्रा का इस्तेमाल ना किया हो। ऐसे ही आजकल बहुत सारा काम Seamless तरीके से हो रहा है। हाइवे पर फास्ट टैग चल रहे हैं, ताकि आप बिना रुके टोल देकर आगे बढ़ सकें। Ease of Living का सही अर्थ यही है। समय की बचत हो रही है, जीवन आसान हो रहा है, और करोड़ों लोग अपनी प्रगति पर फोकस कर पा रहे हैं।

साथियों,

Politics में अक्सर वही फैसले headlines बनते हैं, जिनका असर आज दिखाई दे, यानी उसकी उमर 24 घंटे हो। पहले की सरकारों ने इलेक्शन सामने देख कर भी घोषणाएं करने का फॉर्मूला अपनाया। लेकिन ऐसी घोषणाओं से देश नहीं बदला। देश बदलने वाले फैसले वो होते हैं, जिनका प्रभाव जमीन पर दिखे, जो वर्तमान और भविष्य, दोनों को ध्यान में रखकर के लिए गए होने चाहिए।

साथियों,

पीएम कुसुम योजना और पीएम सूर्यघर मुफ्त बिजली योजना इसका बहुत बड़ा यूनीक Example है। कुसुम योजना से किसानों को बिजली की चिंता से मुक्ति मिली है। और सूर्यघर योजना से मिडिल क्लास को बहुत फायदा हुआ है।

साथियों,

मैं ये जानता हूं कि अगर मैंने ये अनाउंस कर दिया होता कि आज से लाखों-लाख परिवारों के लिए बिजली मुफ्त है, तो सारा मीडिया, सारी स्क्रीन्स, सारे न्यूजपेपर्स, बड़ी-बड़ी हेडलाइन बनाकर के खबर दे देते कि मोदी जी ने आज अनाउंस कर दिया है। लेकिन हमने कुछ दूसरे अप्रोच से काम शुरू किया। हमने हर घर की छत पर एक सूरज उगाने की ठान ली, और आज देश के 50 लाख से ज्यादा परिवार, पीएम सूर्यघर मुफ्त बिजली योजना से जुड़े हैं। सरकार ने 22 हजार करोड़ रुपए से ज्यादा इन परिवारों को दिए हैं, ये सोलर सिस्टम लगाने के लिए, ताकि उनकी छत पर सोलर प्लांट लगाकर सोलर पावर पैदा की जा सके। अब ये परिवार, एक्स्ट्रा बिजली को, बिजली ग्रिड में बेचकर, पैसे भी कमा रहे हैं। खुद का बिल तो जीरो हुआ, कमाई भी होने लगी। इस योजना से लोगों के सपनों को भी विस्तार मिल रहा है। बिजली बिल कम हुआ है, तो अब घर में फ्रिज, कूलर, वाशिंग मशीन, टीवी जैसी चीजें लोग खरीदकर रखने लगे हैं। अब ये डर नहीं होता कि बिजली कटौती की वजह से दूध फट जाएगा, अब चिंता नहीं रहती है। अब स्कूल जाने वाले बच्चे रातभर चैन से सो पाते हैं। मैं फिर कहता हूं- इलेक्शन हो या ना हो, लेकिन ये सूर्यघर और उसकी रोशनी बनी रहेगी, इस प्लांट का फायदा, सालों तक देश के परिवारों को होता रहेगा।

साथियों,

आने वाले समय में Ease of Living और Ease of Doing Business का और विस्तार होगा। देश के Youth के लिए, नारीशक्ति के लिए, Farmers के लिए, गरीब और Middle Class के लिए, हमारी सरकार लगातार काम करती रहेगी, हमारी Reform Express और अधिक गति से आगे बढ़ने वाली है। विकसित भारत का लक्ष्य पूरा करने के लिए, हम पूरी प्रतिबद्धता के साथ काम करते रहेंगे। और मैं, मेरे लिए भारत का future अगर सुनिश्चित हो गया ना, तो दुनिया के future में भी स्थिरता लाने का बहुत बड़ा काम इसी धरती से होने वाला है। इस आत्मविश्वास के साथ भारत जितना स्टेबल होगा, भारत का future जितना सुरक्षित होगा, विश्व को सुरक्षत्व का एहसास देने की ताकत यहीं से पैदा होने वाली है। इस सामर्थ्य के साथ, इसी संकल्प के साथ, मैं एक बार फिर, आज के इस कार्यक्रम में मुझे आमंत्रित करने के लिए, Economic Times की पूरी टीम का हृदय से बहुत-बहुत धन्यवाद करता हूं। वन्दे मातरम् !