Youngsters are filled with energy and enthusiasm... What they need is encouragement, mentorship and institutional support: PM Modi 
Intent leads to ideas, ideas have the power to drive innovation and innovation ultimately will lead to the creation of a New India: PM Modi 
Never stop dreaming and never let the dreams die. It is good for children to have high curiosity quotient: PM 
Need of the hour for is to innovate and come up with solutions to the problems the world faces. Innovate to transform lives of the commons: PM Modi to youngsters 
Thank PM of Israel for the desalinisation motorable machine, it will benefit people in border areas: PM Modi

ಪ್ರಧಾನಮಂತ್ರಿ ಮೋದಿ ಮತ್ತು ಇಸ್ರೇಲ್ ಪ್ರಧಾನಮಂತ್ರಿ ನೆತನ್ಯಾಹು ಅವರಿಂದು ಅಹ್ಮದಾಬಾದ್ ನ ಹೊರ ವಲಯದಲ್ಲಿ ಸ್ಥಾಪನೆಯಾಗಿರುವ ಐ ಕ್ರಿಯೇಟ್ ಸೌಲಭ್ಯವನ್ನು ದೇಶಕ್ಕೆ ಸಮರ್ಪಿಸಿದರು. ಐ ಕ್ರಿಯೇಟ್, ಸೃಜನಶೀಲತೆ, ನಾವಿನ್ಯತೆ, ಎಂಜಿನಿಯರಿಂಗ್, ಉತ್ಪನ್ನ ವಿನ್ಯಾಸ ಮತ್ತು ಆಹಾರ ಭದ್ರತೆ, ಜಲ, ಸಂಪರ್ಕ, ಸೈಬರ್ ಸುರಕ್ಷತೆ, ಐಟಿ ಮತ್ತು ವಿದ್ಯುನ್ಮಾನ, ಇಂಧನ, ಜೈವಿಕ – ವೈದ್ಯಕೀಯ ಸಲಕರಣೆ ಮತ್ತು ಸಾಧನಗಳು ಇತ್ಯಾದಿ ಪ್ರಮುಖ ವಿಷಯಗಳ ನಿರ್ವಹಣೆಗೆ ಹೊರಹೊಮ್ಮುತ್ತಿರುವ ಹೊಸ ತಂತ್ರಜ್ಞಾನ ಬಳಕೆಯ ಉದ್ದೇಶದೊಂದಿಗೆ ರೂಪುಗೊಂಡ ಒಂದು ಸ್ವತಂತ್ರ ಕೇಂದ್ರವಾಗಿದೆ. ಐ ಕ್ರಿಯೇಟ್ ಭಾರತದಲ್ಲಿ ಗುಣಮಟ್ಟದ ಉದ್ಯಮಶೀಲತೆಯನ್ನು ಸೃಷ್ಟಿಸುವ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಇಬ್ಬರೂ ನಾಯಕರು ವಿವಿಧ ವಲಯಗಳಲ್ಲಿ ನಾವಿನ್ಯತೆ ಮತ್ತು ತಂತ್ರಜ್ಞಾನವನ್ನು ಪ್ರಮುಖವಾಗಿ ಪ್ರದರ್ಶಿಸುವ ವಿವಿಧ ಮಳಿಗೆಗಳಿಗೆ ಭೇಟಿ ನೀಡಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ನಾವಿನ್ಯತೆಯು ಭಾರತ ಮತ್ತು ಇಸ್ರೇಲ್ ಜನರನ್ನು ಪರಸ್ಪರ ಹತ್ತಿರಕ್ಕೆ ತರಲು ಮಹತ್ವದ ಪಾತ್ರ ನಿರ್ವಹಿಸುತ್ತದೆ ಎಂದರು. ಇಡೀ ವಿಶ್ವ ಇಸ್ರೇಲ್ ನ ತಂತ್ರಜ್ಞಾನದ ಶಕ್ತಿ ಮತ್ತು ಸೃಜನಶೀಲತೆಯನ್ನು ಗುರುತಿಸಿದೆ ಎಂದರು.

ಭಾರತದ ಯುವಜನರು ಚೈತನ್ಯ ಮತ್ತು ಉತ್ಸಾಹ ಹೊಂದಿದ್ದಾರೆ ಎಂದು ತಿಳಿಸಿದರು. ಯುವಕರಿಗೆ ಬೇಕಾಗಿರುವುದು ಕೊಂಚ ಪ್ರೋತ್ಸಾಹ ಮತ್ತು ಸಾಂಸ್ಥಿಕ ಬೆಂಬಲ ಎಂದು ತಿಳಿಸಿದರು.

ಇಡೀ ವ್ಯವಸ್ಥೆಯನ್ನು ನಾವಿನ್ಯ ಸ್ನೇಹಿಗೊಳಿಸಲು ಸರ್ಕಾರ ಶ್ರಮಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ಇದರಿಂದಾಗಿ ಕಲ್ಪನೆಗಳು ಸೃಷ್ಟಿಯಾಗುತ್ತವೆ, ಕಲ್ಪನೆಗಳಿಂದಾಗಿ ನಾವಿನ್ಯತೆ ಮೂಡುತ್ತದೆ, ಮತ್ತು ನಾವಿನ್ಯತೆಯು ನವ ಭಾರತ ನಿರ್ಮಾಣಕ್ಕೆ ನೆರವಾಗುತ್ತದೆ ಎಂದರು.

ಯಶಸ್ಸಿನ ಮುನ್ನುಡಿಯೇ ಧೈರ್ಯ ಎಂದು ಪ್ರಧಾನಿ ಹೇಳಿದರು. ಐ ಕ್ರಿಯೇಟ್ ನಲ್ಲಿ ನಾವಿನ್ಯ ಚಟುವಟಿಕೆಯಲ್ಲಿ ತೊಡಗಿರುವ ಧೈರ್ಯಶಾಲಿ ಯುವಜನರನ್ನು ಪ್ರಧಾನಿ ಅಭಿನಂದಿಸಿದರು.

ಕಾಳಿದಾಸನ ಉಲ್ಲೇಖ ಮಾಡಿದ, ಪ್ರಧಾನಮಂತ್ರಿಯವರು, ರೂಢಿ ಮತ್ತು ನಾವೀನ್ಯತೆ ನಡುವಿನ ಸಂದಿಗ್ಧತೆಯ ಬಗ್ಗೆ ಪ್ರಸ್ತಾಪಿಸಿದರು. ದೇಶ ಇಂದು ಎದುರಿಸುತ್ತಿರುವ ಸವಾಲುಗಳಿಂದ ಹೊರಬರಲು ಮತ್ತು ಶ್ರೀಸಾಮಾನ್ಯನ ಜೀವನ ಮಟ್ಟವನ್ನು ಸಾಧ್ಯವಾದಷ್ಟು ಕಡಿಮೆ ವೆಚ್ಚದಲ್ಲಿ ಸುಧಾರಿಸಲು ನಾವಿನ್ಯತೆಯ ಶೋಧಕ್ಕೆ ಯುವಕರಿಗೆ ಕರೆ ನೀಡಿದರು.

ಆಹಾರ, ಆರೋಗ್ಯ, ಜಲ ಮತ್ತು ಇಂಧನ ಕ್ಷೇತ್ರಗಳಲ್ಲಿನ ನಾವಿನ್ಯತೆಗಾಗಿ ಭಾರತ ಮತ್ತು ಇಸ್ರೇಲ್ ನಡುವಿನ ಸಹಕಾರದ ಬಗ್ಗೆ ಪ್ರಧಾನಿ ಮಾತನಾಡಿದರು. ಎರಡೂ ರಾಷ್ಟ್ರಗಳ ನಡುವಿನ ಈ ಸಹಕಾರ 21ನೇ ಶತಮಾನದ ಮನುಕುಲದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದೂ ಹೇಳಿದರು.

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Qatar launches new UPI route to send money to India

Media Coverage

Qatar launches new UPI route to send money to India
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the importance of self-respect, courage and steadfastness
August 18, 2026

The Prime Minister, Shri Narendra Modi has shared a Sanskrit Subhashitam highlighting the importance of living with self-respect, courage and dignity. He emphasised that true valour and strength lie in remaining steadfast in one’s principles and values, without compromising them under any circumstances.

The Prime Minister shared a Sanskrit Subhashitam-

“उद्यच्छेदेव न नमेदुद्यमो ह्येव पौरुषम्।
अप्यपर्वणि भज्येत न नमत्वेव कस्यचित्॥”

The Subhashitam conveys that a person should always live with self-respect, courage and dignity. True valor and strength lie in never compromising one's principles and values under any circumstances, but remaining steadfast in one's ideals with truth, patience and self-pride.

The Prime Minister wrote on X;

“उद्यच्छेदेव न नमेदुद्यमो ह्येव पौरुषम्।

अप्यपर्वणि भज्येत न नमत्वेव कस्यचित्॥”