PM Modi campaigns in Hardoi & Barabanki, urges people to elect a BJP Govt
SP, BSP and the Congress never thought welfare of people and always focused on political gains: PM
What is the reason that Uttar Pradesh tops the chart in the entire nation in crime rates? This must change: PM
Our Govt is committed to empower the poor: PM Modi

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರ ಪ್ರದೇಶದ ಹರ್ದೋಯಿ ಮತ್ತು ಬಾರಾಬಂಕಿ ಜಿಲ್ಲೆಗಳಲ್ಲಿ ಬೃಹತ್ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದ ಚುನಾವಣೆಯಲ್ಲಿ ಮೊದಲ ಎರಡು ಹಂತಗಳಲ್ಲಿ ದಾಖಲೆಯನ್ನು ಬದಲಾಯಿಸಿದಕ್ಕೆ ಜನರಿಗೆ ಧನ್ಯವಾದ ಹೇಳಿದರು . ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯಾದಾಗ ದೇಶ ಪ್ರಗತಿಯ ಪಥದಲ್ಲಿ ಚಲಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು .

ಸಮಾಜವಾದಿ ಪಕ್ಷ , ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷವನ್ನು ಉತ್ತರ ಪ್ರದೇಶದಿಂದ ತೆಗೆದು ಹಾಕದೆ , ರಾಜ್ಯ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ . " ಸಮಾಜವಾದಿ ಪಕ್ಷ , ಬಹುಜನ ಸಮಾಜ ಪಕ್ಷ ಮತ್ತು ಕಾಂಗ್ರೆಸ್ ಪಕ್ಷ ಎಂದೂ ಜನರ ಕಲ್ಯಾಣಕ್ಕಾಗಿ ಯೋಚಿಸಿಲ್ಲ ಮತ್ತು ಅವರು ಯಾವಾಗಲೂ ರಾಜಕೀಯ ಲಾಭಕ್ಕಾಗಿ ಗಮನ ನೀಡಿದ್ದಾರೆ . ಇದು ಬದಲಾಗಬೇಕು " ಎಂದು ಶ್ರೀ ಮೋದಿ ಹೇಳಿದರು.”

ಸಮಾಜವಾದಿ ಪಕ್ಷದವನ್ನು ಟೀಕಿಸುತ್ತಾ , ರಾಜ್ಯದಲ್ಲಿ ಅಪರಾಧ ಪ್ರಮಾಣವು ನಿರಂತರವಾಗಿ ಏರುತ್ತಿದೆ ಎಂದು ಮೋದಿ ಹೇಳಿಕೆ ನೀಡಿದರು . " ರಾಜ್ಯ ಸರ್ಕಾರ ಏರುತ್ತಿರುವ ಅಪರಾಧ ಪ್ರಮಾಣ ಬಗ್ಗೆ ಗಮನಹರಿಸಿದೆಯೇ ? ಮಹಿಳೆಯರು ಕತ್ತಲೆಯ ನಂತರ ಮನೆಯಿಂದ ಹೊರಗೆ ಹೋಗುವುದು ಸುರಕ್ಷಿತವೆಂದು ಭಾವಿಸುವುದಿಲ್ಲ . ಪ್ರಾಮಾಣಿಕ ಜನರ ಶೋಷಣೆಯಾಗುತ್ತಿದೆ . ಅಪರಾಧ ದರಗಳ ರಾಷ್ಟ್ರದ ಪಟ್ಟಿಯಲ್ಲಿ ಉತ್ತರ ಪ್ರದೇಶ ಮೇಲ್ತುದಿಯಲ್ಲಿದೆ . ಆರ್ಮ್ಸ್ ಆಕ್ಟ್ ಸಂಬಂಧಿಸಿದ ಪ್ರಕರಣಗಳಲ್ಲಿ 50 ಶೇಕಡಾ ಪ್ರಕರಣಗಳು ಕೇವಲ ಉತ್ತರ ಪ್ರದೇಶಕ್ಕೆ ಸಂಬಂಧಿಸಿದೆ " ಎಂದು ಹೇಳಿದರು ”

ಬಿಜೆಪಿ ಅಧಿಕಾರಕ್ಕೆ ಬಂದರೆ , ಸಣ್ಣ ವ್ಯಾಪಾರಿಗಳ ಪ್ರಯೋಜನಕ್ಕಾಗಿ ವಿಶ್ವಕರ್ಮ ಶ್ರಮ ಸಮ್ಮಾನ ಯೋಜನೆಯನ್ನು ಪ್ರಾರಂಭಿಸುತ್ತದೆ ಮತ್ತು ವ್ಯಾಪಾರ ಕಲ್ಯಾಣ ಯೋಜನೆ ಬಗ್ಗೆ ಶ್ರೀ ಮೋದಿ ಮಾತನಾಡಿದರು . ಹಿಂದಿನ ಸರ್ಕಾರ ರಸಗೊಬ್ಬರಗಳ ದರವನ್ನು ಕಡಿಮೆ ಮಾಡಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ . ಚೌಧರಿ ಚರಣ್ ಸಿಂಗ್ ಜಿ ಇದ್ದಾಗ , ಅವರು ಗೊಬ್ಬರಗಳ ಬೆಳೆಯನ್ನು ಕಡಿಮೆ ಮಾಡಿದ್ದರು . ಅವರಿಂದ ಸ್ಫೂರ್ತಿಗೊಂಡು ಮತ್ತು ರೈತರ ಕಲ್ಯಾಣಕ್ಕೆ ಅತ್ಯಂತ ಪ್ರಾಮುಖ್ಯತೆ ನೀಡಲಾಗಿದೆ, ನಾವು ರಸಗೊಬ್ಬರಗಳ ದರವನ್ನು ಕಡಿಮೆ ಮಾಡಲು ಕ್ರಮಗಳನ್ನು ಕೈಗೊಂಡಿದ್ದೇವೆ . ಯಾವುದೇ ಇತರ ಪಕ್ಷ ಇಂತಹ ಕ್ರಮಗಳನ್ನು ಕೈಗೊಂಡಿಲ್ಲ " ಎಂದು ಒತ್ತಿ ಹೇಳಿದರು”

ಯೂರಿಯಾ ನೀಮ್ ಕೋಟಿಂಗ್ ಮೂಲಕ ಹೇಗೆ ಹಲವಾರು ಗೋಧಿ ಬೆಳೆಸುವ ರೈತರಿಗೆ ಪ್ರಯೋಜನವಾಯಿತು ಎಂದು ಶ್ರೀ ಮೋದಿ ಸುದೀರ್ಘವಾಗಿ ಮಾತನಾಡಿದರು . ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿವಿಧ ಅಂಶಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು . ಇದು ಅತ್ಯಂತ ಸಮಗ್ರ ಬೆಳೆ ವಿಮಾ ಯೋಜನೆಯಾಗಿದೆ ಎಂದೂ ಹೇಳಿದರು.

ಯೂರಿಯಾ ನೀಮ್ ಕೋಟಿಂಗ್ ಮೂಲಕ ಹೇಗೆ ಹಲವಾರು ಗೋಧಿ ಬೆಳೆಸುವ ರೈತರಿಗೆ ಪ್ರಯೋಜನವಾಯಿತು ಎಂದು ಶ್ರೀ ಮೋದಿ ಸುದೀರ್ಘವಾಗಿ ಮಾತನಾಡಿದರು . ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ವಿವಿಧ ಅಂಶಗಳ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು . ಇದು ಅತ್ಯಂತ ಸಮಗ್ರ ಬೆಳೆ ವಿಮಾ ಯೋಜನೆಯಾಗಿದೆ ಎಂದೂ ಹೇಳಿದರು”

ಬಡವರ ಸಬಲೀಕರಣಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು ." ಸಮಾಜದಿಂದ ಭ್ರಷ್ಟಾಚಾರವನ್ನು ತೆಗೆದುಹಾಕಿದಾಗ ಮಾತ್ರ ಬಡವರ ಸಬಲೀಕರಣ ಸಾಧ್ಯ ". ಎಂದು ಶ್ರೀ ಮೋದಿ ಹೇಳಿಕೆ ನೀಡಿದರು . " ಕೇಂದ್ರ ಸರ್ಕಾರ ಸ್ಟೆಂಟ್ ದರವನ್ನು ಕಡಿಮೆ ಮಾಡಿದೆ , ಇದು ನೇರವಾಗಿ ಜನರ ಚಿಕಿತ್ಸೆ ಬೆಳೆಯನ್ನು ಕಡಿಮೆ ಮಾಡಲಿದೆ " ಎಂದು ಪ್ರಧಾನ ಮಂತ್ರಿ ಹೇಳಿದರು.

ಶ್ರೀ ಮೋದಿ ಬಿಜೆಪಿಗಾಗಿ ಮತ ನೀಡಲು ಹೇಳಿದರು ಮತ್ತು ಈ ಚುನಾವಣೆ ಉತ್ತರ ಪ್ರದೇಶದ ಅದೃಷ್ಟವನ್ನು ಬದಲಾಯಿಸಲಿದೆ ಎಂದು ಹೇಳಿದರು . ಪಕ್ಷದ ಹಲವಾರು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು .

ಹರ್ದೋಯಿ ಭಾಷಣದ  ಪೂರ್ಣ ಪಠ್ಯ ವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Modi Govt’s 12 years are transformational for industry’

Media Coverage

‘Modi Govt’s 12 years are transformational for industry’
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಜೂನ್ 2026
June 12, 2026

Breaking Barriers, Building Bharat: PM Modi’s Historic Push for Gender Equality and Inclusive Growth