I. ಒಪ್ಪಂದಗಳು / ತಿಳಿವಳಿಕೆ ಒಪ್ಪಂದಗಳು

ಕ್ರ.ಸಂ.ದಾಖಲೆಗಳು

ಪ್ರದೇಶಗಳು

1.

ದ್ವಿಪಕ್ಷೀಯ ರಕ್ಷ ಣಾ ಕೈಗಾರಿಕಾ ಸಹಕಾರವನ್ನು ಬಲಪಡಿಸುವ ಉದ್ದೇಶದ ಜಂಟಿ ಘೋಷಣೆ

ರಕ್ಷಣೆ ಮತ್ತು ಭದ್ರತೆ

2.

ಭಾರತ-ಜರ್ಮನಿ ಆರ್ಥಿಕ ಮತ್ತು ಹೂಡಿಕೆ ಜಂಟಿ ಸಮಿತಿಯ ಭಾಗವಾಗಿ ಮತ್ತು ಅದರೊಳಗೆ ಸಂಯೋಜಿಸಲ್ಪಟ್ಟ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವೇದಿಕೆಯನ್ನು ಸ್ಥಾಪಿಸುವ ಮೂಲಕ ದ್ವಿಪಕ್ಷೀಯ ಆರ್ಥಿಕ ಸಹಕಾರವನ್ನು ಬಲಪಡಿಸುವ ಉದ್ದೇಶದ ಜಂಟಿ ಘೋಷಣೆ

ವ್ಯಾಪಾರ ಮತ್ತು ಆರ್ಥಿಕತೆ

3.

ಭಾರತ-ಜರ್ಮನಿ ಸೆಮಿಕಂಡಕ್ಟರ್‌ ಪರಿಸರ ವ್ಯವಸ್ಥೆ ಪಾಲುದಾರಿಕೆಯ ಉದ್ದೇಶದ ಜಂಟಿ ಘೋಷಣೆ

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು

4.

ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು

5.

ದೂರಸಂಪರ್ಕ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು

6.

ರಾಷ್ಟ್ರೀಯ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ಇನಾಧಿರ್ಮೆಷನ್‌ ಟೆಕ್ನಾಲಜೀಸ್‌ ಎಜಿ ನಡುವೆ ತಿಳಿವಳಿಕೆ ಒಪ್ಪಂದ           

ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು

7.

ಅಖಿಲ ಭಾರತ ಆಯುರ್ವೇದ ಸಂಸ್ಥೆ ಮತ್ತು ಜರ್ಮನಿಯ ಚಾರೈಟ್‌ ವಿಶ್ವವಿದ್ಯಾಲಯ ನಡುವೆ ತಿಳಿವಳಿಕೆ ಒಪ್ಪಂದ

ಸಾಂಪ್ರದಾಯಿಕ ಔಷಧಗಳು

8.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (ಪಿ.ಎನ್‌.ಜಿ.ಆರ್‌.ಬಿ.) ಮತ್ತು ಅನಿಲ ಮತ್ತು ಜಲ ಕೈಗಾರಿಕೆಗಳ ಜರ್ಮನಿಯ ತಾಂತ್ರಿಕ ಮತ್ತು ವೈಜ್ಞಾನಿಕ ಸಂಘ (ಡಿ.ವಿ.ಜಿ.ಡಬ್ಲ್ಯು.) ನಡುವೆ ತಿಳಿವಳಿಕೆ ಒಪ್ಪಂದ 

ನವೀಕರಿಸಬಹುದಾದ ಇಂಧನ

9.

ಭಾರತೀಯ ಕಂಪನಿ, ಎಎಂ ಗ್ರೀನ್‌ ಮತ್ತು ಜರ್ಮನ್‌ ಕಂಪನಿ, ಯುನಿಪರ್‌ ಗ್ಲೋಬಲ್‌ ಕಮೋಡಿಟೀಸ್‌ ನಡುವೆ ಹಸಿರು ಅಮೋನಿಯಾಕ್ಕಾಗಿ ಆಫ್ಟೇಕ್‌ ಒಪ್ಪಂದ

ಹಸಿರು ಹೈಡ್ರೋಜನ್‌

10.

ಜೈವಿಕ ಆರ್ಥಿಕತೆಯ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿಜಂಟಿ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ   

ವಿಜ್ಞಾನ ಮತ್ತು ಸಂಶೋಧನೆ

11.

ಭಾರತ-ಜರ್ಮನಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ (ಐಜಿಎಸ್‌ಟಿಸಿ)ಯ ಅವಧಿ ವಿಸ್ತರಣೆ ಕುರಿತ ಉದ್ದೇಶಿತ ಜಂಟಿ ಘೋಷಣೆ

ವಿಜ್ಞಾನ ಮತ್ತು ಸಂಶೋಧನೆ

12.

ಉನ್ನತ ಶಿಕ್ಷ ಣದ ಕುರಿತು ಇಂಡೋ-ಜರ್ಮನ್‌ ಮಾರ್ಗಸೂಚಿ

ಶಿಕ್ಷಣ

13.

ನ್ಯಾಯೋಚಿತ, ನೈತಿಕ ಮತ್ತು ಸುಸ್ಥಿರ ಆರೋಗ್ಯ ವೃತ್ತಿಪರರ ನೇಮಕಾತಿಗಾಗಿ ಜಾಗತಿಕ ಕೌಶಲ್ಯ ಸಹಭಾಗಿತ್ವದ ಚೌಕಟ್ಟು ಷರತ್ತುಗಳ ಉದ್ದೇಶದ ಜಂಟಿ ಘೋಷಣೆ

ಕೌಶಲ್ಯ ಮತ್ತು ಚಲನಶೀಲತೆ

14.

ಹೈದ್ರಾಬಾದ್‌ನ ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆಯಲ್ಲಿನವೀಕರಿಸಬಹುದಾದ ಇಂಧನದಲ್ಲಿಕೌಶಲ್ಯಕ್ಕಾಗಿ ರಾಷ್ಟ್ರೀಯ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದ ಜಂಟಿ ಘೋಷಣೆ

ಕೌಶಲ್ಯ ಮತ್ತು ಚಲನಶೀಲತೆ

15.

ಭಾರತ ಗಣರಾಜ್ಯ ಸರ್ಕಾರದ ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯದ ಲೋಥಾಲ್‌ನ ರಾಷ್ಟ್ರೀಯ ಕಡಲ ಪರಂಪರೆ ಸಂಕೀರ್ಣ ಮತ್ತು ಜರ್ಮನಿಯ ಬ್ರೆಮರ್ಹೆವೆನ್ನ ಜರ್ಮನ್‌ ಕಡಲ ವಸ್ತುಸಂಗ್ರಹಾಲಯ -ಲೈಬ್ನಿಜ್‌ ಕಡಲ ಇತಿಹಾಸ ಕುರಿತ ರಾಷ್ಟ್ರೀಯ ಕಡಲ ಪರಂಪರೆಯ ಸಂಕೀರ್ಣ (ಎನ್‌.ಎಂ.ಎಚ್‌.ಸಿ.), ಗುಜರಾತ್‌ ನ ಲೋಥಾಲ್‌ ಅಭಿವೃದ್ಧಿಗಾಗಿ ತಿಳಿವಳಿಕೆ ಒಪ್ಪಂದ     

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

16.

ಕ್ರೀಡಾ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ      

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

17.

ಅಂಚೆ ಸೇವೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಉದ್ದೇಶಿತ ಜಂಟಿ ಘೋಷಣೆ

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

18.

ಅಂಚೆ ಇಲಾಖೆ, ಸಂವಹನ ಸಚಿವಾಲಯ ಮತ್ತು ಡಾಯ್ಚರ್‌ ಪೋಸ್ಟ್‌ ಎಜಿ ನಡುವೆ ಆಶಯ ಪತ್ರ

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

19.

ಹಾಕಿ ಇಂಡಿಯಾ ಮತ್ತು ಜರ್ಮನಿಯ ಹಾಕಿ ಫೆಡರೇಶನ್‌ (ಡಾಯ್ಚರ್‌ ಹಾಕಿ ಬಂಡ್‌ ಇ.ವಿ.) ನಡುವೆ ಯುವ ಹಾಕಿ ಅಭಿವೃದ್ಧಿ ಕುರಿತ ತಿಳಿವಳಿಕೆ

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

II. ಪ್ರಕಟಣೆಗಳು

ಕ್ರ. ಸಂಖ್ಯೆಪ್ರಕಟಣೆಗಳುಪ್ರದೇಶಗಳು

20.

ಭಾರತೀಯ ಪಾಸ್‌ ಪೋರ್ಟ್‌ ಹೊಂದಿರುವವರಿಗೆ ಜರ್ಮನಿಯ ಮೂಲಕ ಸಂಚಾರ ಮಾಡಲು ವೀಸಾ ಮುಕ್ತ ಸಂಚಾರ ಘೋಷಣೆ

ಜನರ ನಡುವಿನ ಸಂಬಂಧ

21.

ಟ್ರ್ಯಾಕ್‌ 1.5 ವಿದೇಶಾಂಗ ನೀತಿ ಮತ್ತು ಭದ್ರತಾ ಮಾತುಕತೆ ಸ್ಥಾಪನೆ

ವಿದೇಶಾಂಗ ನೀತಿ ಮತ್ತು ಭದ್ರತೆ

22.

ಇಂಡೋ-ಪೆಸಿಫಿಕ್‌ ಕುರಿತು ದ್ವಿಪಕ್ಷೀಯ ಮಾತುಕತೆ ಕಾರ್ಯವಿಧಾನದ ಸ್ಥಾಪನೆ

ಇಂಡೋ-ಪೆಸಿಫಿಕ್‌

23.

ಭಾರತ-ಜರ್ಮನಿ ಡಿಜಿಟಲ್‌ ಸಂವಾದದ ಕಾರ್ಯ ಯೋಜನೆ ಅಳವಡಿಕೆ (2025-2027)

ತಂತ್ರಜ್ಞಾನ ಮತ್ತು ನಾವೀನ್ಯತೆ

24.

ಪ್ರಮುಖ ದ್ವಿಪಕ್ಷೀಯ ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ (ಜಿಎಸ್‌ಡಿಪಿ) ಅಡಿಯಲ್ಲಿ1.24 ಬಿಲಿಯನ್‌(ಶತಕೋಟಿ) ಯುರೋಗಳ ಹೊಸ ಧನಸಹಾಯ ಬದ್ಧತೆಗಳು, ನವೀಕರಿಸಬಹುದಾದ ಇಂಧನ, ಹಸಿರು ಹೈಡ್ರೋಜನ್‌, ಪಿಎಂ ಇ-ಬಸ್‌ ಸೇವೆ ಮತ್ತು ಹವಾಮಾನ-ಸ್ಥಿತಿಸ್ಥಾಪಕ ನಗರ ಮೂಲಸೌಕರ್ಯಗಳಲ್ಲಿಆದ್ಯತೆಯ ಯೋಜನೆಗಳನ್ನು ಬೆಂಬಲಿಸುತ್ತವೆ

ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ

25.

ವಿಶ್ವಾದ್ಯಂತ ನವೀಕರಿಸಬಹುದಾದ ಇಂಧನದಲ್ಲಿಹೂಡಿಕೆಗಾಗಿ ಭಾರತ-ಜರ್ಮನಿ ವೇದಿಕೆಯ ಅಡಿಯಲ್ಲಿಬ್ಯಾಟರಿ ಸ್ಟೋರೇಜ್‌ ಕಾರ್ಯಕಾರಿ ಗುಂಪಿನ ಆರಂಭ   

ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ

26.

ಭಾರತ-ಜರ್ಮನಿ ತ್ರಿಕೋನ ಅಭಿವೃದ್ಧಿ ಸಹಕಾರದಡಿಯಲ್ಲಿಘಾನಾ (ಬಿದಿರು ವಿನ್ಯಾಸ ಮತ್ತು ಸಂಸ್ಕರಣೆಗಾಗಿ ಡಿಜಿಟಲ್‌ ತಂತ್ರಜ್ಞಾನ ಕೇಂದ್ರ), ಕ್ಯಾಮರೂನ್‌ (ರಾಷ್ಟ್ರವ್ಯಾಪಿ ಆಲೂಗಡ್ಡೆ ಬೀಜ ನಾವೀನ್ಯತೆಗಾಗಿ ಹವಾಮಾನ ಹೊಂದಾಣಿಕೆಯ ಆರ್‌ಎಸಿ ತಂತ್ರಜ್ಞಾನ ಪ್ರಯೋಗಾಲಯ) ಮತ್ತು ಮಲವಿ (ಮಹಿಳೆಯರು ಮತ್ತು ಯುವಕರಿಗಾಗಿ ಕೃಷಿ ಮೌಲ್ಯ ಸರಪಳಿಯಲ್ಲಿತಾಂತ್ರಿಕ ನಾವೀನ್ಯತೆ ಮತ್ತು ಉದ್ಯಮಶೀಲತೆ ಕೇಂದ್ರ) ಯೋಜನೆಗಳನ್ನು ಹೆಚ್ಚಿಸುವುದು

ಹಸಿರು ಮತ್ತು ಸುಸ್ಥಿರ ಅಭಿವೃದ್ಧಿ

27.

ಅಹಮದಾಬಾದ್‌ನಲ್ಲಿ ಜರ್ಮನಿಯ ಗೌರವ ರಾಯಭಾರ ಕಚೇರಿ ಉದ್ಘಾಟನೆ          

ಸಾಂಸ್ಕೃತಿಕ ಮತ್ತು ಜನರ ನಡುವಿನ ಸಂಬಂಧಗಳು

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India to add 100 merchant ships to its fleet in 5 years: Sarbananda Sonowal

Media Coverage

India to add 100 merchant ships to its fleet in 5 years: Sarbananda Sonowal
NM on the go

Nm on the go

Always be the first to hear from the PM. Get the App Now!
...
ಆಗಸ್ಟ್ 27ರಂದು 'ಖೇಲೋ ಇಂಡಿಯಾ' ಸಂವಾದದಲ್ಲಿ ಯುವಜನರನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಮಂತ್ರಿ
August 26, 2026
'ಖೇಲೋ ಇಂಡಿಯಾ' ಸಂವಾದವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂಸೇವೆ, ಫಿಟ್‌ನೆಸ್‌ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ
'ಖೇಲೋ ಇಂಡಿಯಾ' ಸಂವಾದದ ಅಡಿಯಲ್ಲಿ ನಡೆಯುವ 'ಯುವ ಸಂವಾದ'ವು ಐದು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲಿದೆ: ಕ್ರೀಡೆ, ಒಲಿಂಪಿಕ್ ಆಕಾಂಕ್ಷೆಗಳು, ಯುವ ನಾಯಕತ್ವ, 'ವಿಕಸಿತ ಭಾರತ' ಮತ್ತು 'ನಶಾ ಮುಕ್ತ ಯುವ' ಅಭಿಯಾನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಗಸ್ಟ್ 27ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 'ಖೇಲೋ ಇಂಡಿಯಾ' ಸಂವಾದವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮವು ಯುವಕರಿಗೆ ಭಾರತದ ಕ್ರೀಡಾ ಪ್ರಯಾಣದಲ್ಲಿ ತೊಡಗಿಸಿಕೊಳ್ಳಲು, ಅವರ ಆಕಾಂಕ್ಷೆಗಳನ್ನು ಹಂಚಿಕೊಳ್ಳಲು ಮತ್ತು ಬಲವಾದ ಯುವಕರ ನೇತೃತ್ವದ 'ವಿಕಸಿತ ಭಾರತ'ಕ್ಕಾಗಿ ತಮ್ಮ ವಿಚಾರಗಳನ್ನು ನೀಡಲು ಸಹಾಯ ಮಾಡುವುದು ಕಾರ್ಯಕ್ರಮದ ಉದ್ದೇಶವಾಗಿದೆ.

2026ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ 'ಮೇರಾ ಯುವ ಭಾರತ್' (ಮೈ ಭಾರತ್‌) ಆಯೋಜಿಸಿರುವ ಈ ಕಾರ್ಯಕ್ರಮವು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಪ್ರತಿಯೊಂದು ಜಿಲ್ಲೆಯ ಎರಡು ಕಾಲೇಜುಗಳಲ್ಲಿ ಯುವಕರ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ನಡೆಯಲಿದೆ. ಯುವಕರ ಆಕಾಂಕ್ಷೆಗಳನ್ನು ರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಭಾಗದಲ್ಲಿ ಇರಿಸಿಕೊಂಡು ಸದೃಢ, ಶಿಸ್ತುಬದ್ಧ ಮತ್ತು ಕ್ರೀಡಾ ರಾಷ್ಟ್ರವನ್ನು ನಿರ್ಮಿಸುವ ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ.

ರಾಷ್ಟ್ರವ್ಯಾಪಿ ನಡೆಯುವ 'ಖೇಲೋ ಇಂಡಿಯಾ ಸಂವಾದ'ವು ಕ್ರೀಡೆ, ಯುವ ನಾಯಕತ್ವ, ನಾಗರಿಕ ಜವಾಬ್ದಾರಿ, ಸ್ವಯಂ ಸೇವೆ, ಫಿಟ್ನೆಸ್ ಮತ್ತು ರಾಷ್ಟ್ರ ನಿರ್ಮಾಣವನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಲಿದೆ. ಭಾರತದ ಯುವ ಮತ್ತು ಕ್ರೀಡಾ ಪರಿಸರ ವ್ಯವಸ್ಥೆಯ ಕುರಿತಾದ ನಿರಂತರ ಸಂವಾದದಲ್ಲಿ ಯುವಕರ ಆಲೋಚನೆಗಳು ಮತ್ತು ದೃಷ್ಟಿಕೋನಗಳಿಗೆ ಸ್ಥಾನವನ್ನು ಖಚಿತಪಡಿಸಿಕೊಳ್ಳುವ ಜೊತೆಗೆ, ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳೊಂದಿಗೆ ಯುವಕರು ತೊಡಗಿಸಿಕೊಳ್ಳಲು ಇದು ನೇರ ಮಾರ್ಗವನ್ನು ಒದಗಿಸುತ್ತದೆ.

ರಾಷ್ಟ್ರೀಯ ಕಾರ್ಯಕ್ರಮದ ನಂತರ ಯುವ ಭಾಗಿದಾರರು, 'ಮೈ ಭಾರತ್' ಸ್ವಯಂಸೇವಕರು, ಸ್ಥಳೀಯ ಕ್ರೀಡಾಪಟುಗಳು ಮತ್ತು ಜನಪ್ರತಿನಿಧಿಗಳನ್ನು ಒಳಗೊಂಡ ಸ್ಥಳೀಯ ಸಂವಾದಗಳು ನಡೆಯಲಿವೆ. ಕ್ರೀಡೆಯಲ್ಲಿ ಆಸಕ್ತಿ ಹೊಂದಿರುವ ಯುವಕರು ಮತ್ತು ಪ್ರಮುಖ ಭಾರತೀಯ ಅಥ್ಲೀಟ್‌ಗಳು ಹಾಗೂ ಪದಕ ವಿಜೇತರ ನಡುವಿನ ನೇರ ಸಂವಾದವು ಈ ಉಪಕ್ರಮದ ಪ್ರಮುಖ ಲಕ್ಷಣವಾಗಿದೆ. 'ಯುವ ಸಂವಾದ'ವು ಈ ಕಾರ್ಯಕ್ರಮದ ಕೇಂದ್ರ ಬಿಂದುವಾಗಿದ್ದು, ಇದರಲ್ಲಿ ಯುವ ಭಾಗಿದಾರರನ್ನು ತಮ್ಮ ಸ್ವಂತ ಆಲೋಚನೆಗಳು, ದೃಷ್ಟಿಕೋನಗಳು ಮತ್ತು ಆಕಾಂಕ್ಷೆಗಳನ್ನು ವ್ಯಕ್ತಪಡಿಸಲು ಆಹ್ವಾನಿಸಲಾಗುತ್ತದೆ. ಈ ಸಂವಾದವನ್ನು ಐದು ವಿಷಯಗಳ ಸುತ್ತ ರಚಿಸಲಾಗಿದೆ:

  • ಉತ್ತಮ ಸೌಲಭ್ಯಗಳು, ತರಬೇತಿ, ಕ್ರೀಡಾ ವಿಜ್ಞಾನ ಮತ್ತು ಎಲ್ಲರನ್ನೂ ಒಳಗೊಂ ಭಾಗವಹಿಸುವಿಕೆಯ ಮೂಲಕ ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಸುಧಾರಿಸುವುದು;
  • ವೈಜ್ಞಾನಿಕ ಪ್ರತಿಭಾ ಶೋಧನೆ, ಪಾರದರ್ಶಕ ಆಯ್ಕೆ ಮತ್ತು ದೀರ್ಘಕಾಲೀನ ಕ್ರೀಡಾಪಟು ಅಭಿವೃದ್ಧಿಯ ಮೂಲಕ 2036ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಗೆ ಪ್ರತಿಭೆಗಳನ್ನು ಪೋಷಿಸುವುದು;
  • ಆಡಳಿತ ವೇದಿಕೆಗಳು ಮತ್ತು 'ಮೈ ಭಾರತ್' ನೇತೃತ್ವದ ಸ್ವಯಂಸೇವಕ ಸೇವೆಯ ಮೂಲಕ ಯುವ ನಾಯಕರನ್ನು ಸೃಷ್ಟಿಸುವುದು;
  • ನಾಗರಿಕ ಪ್ರಜ್ಞೆ, ಭವಿಷ್ಯಕ್ಕೆ ಸಿದ್ಧವಾದ ಕೌಶಲ್ಯಗಳು ಮತ್ತು ರಚನಾತ್ಮಕ ಸ್ವಯಂಸೇವಕ ಸೇವೆಯನ್ನು ಬೆಳೆಸುವ ಮೂಲಕ ವಿಕಸಿತ ಭಾರತಕ್ಕಾಗಿ ಯುವಕರನ್ನು ಸಬಲೀಕರಣಗೊಳಿಸುವುದು;
  • ಮಾದಕ ವ್ಯಸನದ ವಿರುದ್ಧ ಹೋರಾಡಲು ಕ್ರೀಡೆ ಮತ್ತು ಸಮಾನಮನಸ್ಕ ಜಾಲಗಳನ್ನು ಬಳಸಿಕೊಳ್ಳುವ 'ನಶಾ ಮುಕ್ತ ಯುವ ಆಂದೋಲ'ನವನ್ನು ಉತ್ತೇಜಿಸುವುದು. ಇದು 2026ರ ಆಗಸ್ಟ್ 2ರಂದು ಪ್ರಾರಂಭಿಸಲಾದ ಪ್ರಧಾನಮಂತ್ರಿಯವರ 100 ವಾರಗಳ ರಾಷ್ಟ್ರವ್ಯಾಪಿ ಅಭಿಯಾನದ ಅಡಿಯಲ್ಲಿ ಸಾಪ್ತಾಹಿಕ 'ಜನ ಭಾಗೀದಾರಿ' ಚಟುವಟಿಕೆಗಳಿಂದ ಬೆಂಬಲಿತವಾಗಿದೆ.