ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಕಾರ್ಯಾಚರಣೆಗಳು ದೇಶಾದ್ಯಂತ ಹತ್ತಿಬೆಳೆಯುವ ರೈತರನ್ನು ಹತ್ತಿ ಕೃಷಿಯಲ್ಲಿ ತಮ್ಮ ಆಸಕ್ತಿಯನ್ನು ಉಳಿಸಿಕೊಳ್ಳಲು ಪ್ರೇರೇಪಿಸುತ್ತವೆ ಮತ್ತು ಭಾರತವನ್ನು ಗುಣಮಟ್ಟದ ಹತ್ತಿಯಲ್ಲಿ ಆತ್ಮನಿರ್ಭರ ಮಾಡಲು ಸಹಾಯ ಮಾಡುತ್ತವೆ
152 ಹತ್ತಿ ಬೆಳೆಯುವ ಜಿಲ್ಲೆಗಳಲ್ಲಿ 508 ಖರೀದಿ ಕೇಂದ್ರಗಳ ಮೂಲಕ ಸಿ.ಸಿ.ಐ.ಎಲ್ಲಾ 11 ಪ್ರಮುಖ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಮೂಲಸೌಕರ್ಯವನ್ನು ಹೊಂದಿದೆ

ರೈತರ ಕಲ್ಯಾಣವನ್ನು ಬಲಪಡಿಸುವ ಮತ್ತು ಆತ್ಮನಿರ್ಭರ್ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವ ಮಹತ್ವದ ಹೆಜ್ಜೆಯಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು 2023–24ನೇ ಸಾಲಿನ ಹತ್ತಿ ಋತುವಿಗಾಗಿ ಭಾರತೀಯ ಹತ್ತಿ ನಿಗಮಕ್ಕೆ (ಸಿ.ಸಿ.ಐ.) 1,718.56 ಕೋಟಿ ರೂ.ಗಳ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ನಿಧಿಯನ್ನು ಅನುಮೋದಿಸಿದೆ. ಈ ನಿಧಿಯು ದೇಶಾದ್ಯಂತ ಹತ್ತಿ ರೈತರಿಗೆ ನೇರ ಬೆಲೆ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಹತ್ತಿ ರೈತರ ಹಿತಾಸಕ್ತಿಗಳನ್ನು ಕಾಪಾಡಲು, ವಿಶೇಷವಾಗಿ ಮಾರುಕಟ್ಟೆ ಬೆಲೆಗಳು ಎಂ.ಎಸ್.ಪಿ.ಗಿಂತ ಕಡಿಮೆಯಾದ ಅವಧಿಯಲ್ಲಿ ಎಂ.ಎಸ್.ಪಿ.ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುತ್ತದೆ. ಈ ಮಧ್ಯಸ್ಥಿಕೆಗಳು ಹತ್ತಿ ಬೆಲೆಗಳನ್ನು ಸ್ಥಿರಗೊಳಿಸುವಲ್ಲಿ, ಮಾರಾಟ ಸಂಕಷ್ಟವನ್ನು ತಡೆಗಟ್ಟುವಲ್ಲಿ ಮತ್ತು ರೈತರಿಗೆ ಲಾಭದಾಯಕ ಆದಾಯವನ್ನು ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಕೃಷಿ ಮಾರುಕಟ್ಟೆಗಳಲ್ಲಿ ಒಳಗೊಳ್ಳುವಿಕೆಯನ್ನು ಹೆಚ್ಚಿಸುವ ಮೂಲಕ, ಎಂ.ಎಸ್.ಪಿ. ಕಾರ್ಯಾಚರಣೆಗಳು ಹತ್ತಿ ಬೆಳೆಯುವ ಸಮುದಾಯಗಳ ಆರ್ಥಿಕ ಭದ್ರತೆಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತವೆ.

ಹತ್ತಿ ಭಾರತದ ಅತ್ಯಂತ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿದ್ದು, ಸುಮಾರು 60 ಲಕ್ಷ ರೈತರ ಜೀವನೋಪಾಯವನ್ನು ಉಳಿಸಿಕೊಳ್ಳುತ್ತದೆ ಮತ್ತು ಸಂಸ್ಕರಣೆ, ವ್ಯಾಪಾರ ಮತ್ತು ಜವಳಿ ಸೇರಿದಂತೆ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿರುವ 400–500 ಲಕ್ಷ ಜನರನ್ನು ಬೆಂಬಲಿಸುತ್ತದೆ.

2023–24 ಹತ್ತಿ ಋತುವಿನಲ್ಲಿ, ಸಾಗುವಳಿ ಪ್ರದೇಶವನ್ನು 114.47 ಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ, ಉತ್ಪಾದನೆಯು 325.22 ಲಕ್ಷ ಬೇಲ್ಗಳಿಗೆ ನಿಗದಿಪಡಿಸಲಾಗಿದೆ, ಇದು ಜಾಗತಿಕ ಹತ್ತಿ ಉತ್ಪಾದನೆಯ ಸುಮಾರು 25% ರಷ್ಟಿದೆ. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸುಗಳ ಆಧಾರದ ಮೇಲೆ ಭಾರತ ಸರ್ಕಾರ ಬೀಜ ಹತ್ತಿಗೆ (ಕಪಾಸ್) ಎಂ.ಎಸ್.ಪಿ. ಅನ್ನು ನಿಗದಿಪಡಿಸುತ್ತದೆ.

ಹತ್ತಿ ಬೆಳೆಯಲ್ಲಿ ಎಂ.ಎಸ್.ಪಿ. ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರವು ಭಾರತೀಯ ಹತ್ತಿ ನಿಗಮವನ್ನು ಕೇಂದ್ರ ನೋಡಲ್ ಏಜೆನ್ಸಿಯಾಗಿ ನೇಮಿಸಿದೆ. ಮಾರುಕಟ್ಟೆ ಬೆಲೆಗಳು ಎಂ.ಎಸ್.ಪಿ. ಮಟ್ಟಕ್ಕಿಂತ ಕಡಿಮೆಯಾದಾಗಲೆಲ್ಲಾ ಸಿ.ಸಿ.ಐ. ರೈತರಿಂದ ಯಾವುದೇ ಪರಿಮಾಣಾತ್ಮಕ ಮಿತಿಯಿಲ್ಲದೆ ಎಲ್ಲಾ ನ್ಯಾಯಯುತ ಸರಾಸರಿ ಗುಣಮಟ್ಟದ (ಎಫ್.ಎ.ಕ್ಯೂ.) ಹತ್ತಿಯನ್ನು ಖರೀದಿಸುತ್ತದೆ, ಇದರಿಂದಾಗಿ ರೈತರಿಗೆ ಖಚಿತವಾದ ಸುರಕ್ಷತಾ ಜಾಲವನ್ನು ಒದಗಿಸುತ್ತದೆ.

ತನ್ನ ಸನ್ನದ್ಧತೆಯ ಭಾಗವಾಗಿ, ಸಿಸಿಐ ಎಲ್ಲಾ 11 ಪ್ರಮುಖ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ದೃಢವಾದ ಖರೀದಿ ಜಾಲವನ್ನು ಸ್ಥಾಪಿಸಿದೆ, 152 ಜಿಲ್ಲೆಗಳಲ್ಲಿ 508 ಕ್ಕೂ ಹೆಚ್ಚು ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ, ಇದು ರೈತರಿಗೆ ತಡೆರಹಿತ ಮತ್ತು ಪ್ರವೇಶಿಸಬಹುದಾದ ಖರೀದಿಯನ್ನು ಖಚಿತಪಡಿಸುತ್ತದೆ.

ಇದಲ್ಲದೆ, ಸಿಸಿಐ ಎಂ.ಎಸ್.ಪಿ. ಕಾರ್ಯಾಚರಣೆಗಳ ದಕ್ಷತೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು ಹಲವಾರು ತಂತ್ರಜ್ಞಾನ-ಚಾಲಿತ ಮತ್ತು ರೈತ-ಕೇಂದ್ರಿತ ಉಪಕ್ರಮಗಳನ್ನು ಕೈಗೊಂಡಿದೆ. ಇವುಗಳಲ್ಲಿ ಎಂ.ಎಸ್.ಪಿ. -ಸಂಬಂಧಿತ ಮಾಹಿತಿಯನ್ನು ಪ್ರಸಾರ ಮಾಡುವುದು, ಬೇಲ್ ಗುರುತಿಸುವಿಕೆ ಮತ್ತು ಪತ್ತೆಹಚ್ಚುವಿಕೆ ವ್ಯವಸ್ಥೆ (ಬಿಟ್ಸ್ ) ಅನ್ನು ಕಾರ್ಯಗತಗೊಳಿಸುವುದು ಮತ್ತು "ಕಾಟ್-ಆಲಿ" ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸುವುದು ಸೇರಿವೆ, ಇದು ರೈತರಿಗೆ ಉತ್ತಮ ಸಂಪರ್ಕ ಮತ್ತು ಸೇವಾ ವಿತರಣೆಯನ್ನು ಸಕ್ರಿಯಗೊಳಿಸುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Commendable performance of India’s marine exports amid uncertain times

Media Coverage

Commendable performance of India’s marine exports amid uncertain times
NM on the go

Nm on the go

Always be the first to hear from the PM. Get the App Now!
...
Prime Minister congratulates Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog
May 02, 2026

Prime Minister Shri Narendra Modi has congratulated Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog.

The Prime Minister noted that their rich experience and deep understanding of various issues will greatly strengthen policymaking. Shri Modi expressed confidence that their contributions will help drive innovation and growth across sectors. He also wished them a very productive and impactful tenure ahead.

The Prime Minister posted on X:

"Congratulations to Dr. R. Balasubramaniam Ji and Dr. Joram Aniya Ji on being appointed as Full-time Members of NITI Aayog. Their rich experience and deep understanding of various issues will greatly strengthen policy making. I am confident their contributions will help drive innovation and growth across sectors. Wishing them a very productive and impactful tenure ahead."