ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಂದು ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಉತ್ತರ ಪ್ರದೇಶದ ವಾರಣಾಸಿ ನಗರದ ವಾಹನ ದಟ್ಟಣೆಯನ್ನು ನಿವಾರಿಸಲು ಗಂಗಾ ನದಿಯ ಉದ್ದಕ್ಕೂ ನದಿ ದಂಡೆಯ ಸಂಪರ್ಕದೊಂದಿಗೆ ರಾಷ್ಟ್ರೀಯ ಹೆದ್ದಾರಿ-19 (NH-19) ಮತ್ತು ವಾರಣಾಸಿ ರಿಂಗ್ ರಸ್ತೆ ನಡುವೆ ಲಿಂಕ್/ಕನೆಕ್ಟರ್ ಕಾರಿಡಾರ್ ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಆರು ಪಥಗಳ ಎತ್ತರದ ಮುಖ್ಯ ಕ್ಯಾರೇಜ್‌ವೇ, ಐಕಾನಿಕ್ ಕೇಬಲ್-ಸ್ಟೇಯ್ಡ್ ಸೇತುವೆ, ಎಕ್ಸ್‌ಟ್ರಾಡೋಸ್ಡ್ ಫುಟ್ ಓವರ್ ಬ್ರಿಡ್ಜ್-ಕಮ್-ಮೇಜರ್ ಬ್ರಿಡ್ಜ್, ಲೂಪ್‌ಗಳು, ಇಳಿಜಾರುಗಳು, ಲಿಂಕ್ ರಸ್ತೆಗಳು ಮತ್ತು ಸೇವಾ ರಸ್ತೆಗಳನ್ನು ಒಳಗೊಂಡಿರುವ 46.039 ಕಿ.ಮೀ ಯೋಜನೆಯನ್ನು ಹೈಬ್ರಿಡ್ ಅನ್ಯುಟಿ ಮಾದರಿ (HAM) ಅಡಿಯಲ್ಲಿ14,447.64 ಕೋಟಿ ರೂ. ಒಟ್ಟು ಬಂಡವಾಳ ವೆಚ್ಚದಲ್ಲಿ ಜಾರಿಗೊಳಿಸಲಾಗುವುದು, ಇದರಲ್ಲಿ ಸಿವಿಲ್ ಕಾಮಗಾರಿ ವೆಚ್ಚ 6,037.85 ಕೋಟಿ ರೂ. (ಯುಟಿಲಿಟಿ ಶಿಫ್ಟಿಂಗ್ ಸೇರಿದಂತೆ, ಜಿಎಸ್‌ಟಿ ಹೊರತುಪಡಿಸಿ) ಮತ್ತು 541.11 ಕೋಟಿ ರೂ. ಭೂಸ್ವಾಧೀನ ವೆಚ್ಚ ಸೇರಿವೆ.

ಈ ಯೋಜನೆಯು NH-19 ಮತ್ತು ವಾರಣಾಸಿ ರಿಂಗ್ ರಸ್ತೆಯ ನಡುವೆ ತಡೆರಹಿತ ಸಂಪರ್ಕ ಒದಗಿಸುತ್ತದೆ ಇದು ನಗರದ ರಸ್ತೆ ಜಾಲವನ್ನು ಗಮನಾರ್ಹವಾಗಿ ತಗ್ಗಿಸುತ್ತದೆ ಮತ್ತು ನಗರದ ಸಂಚಾರವನ್ನು ಸುಧಾರಿಸುತ್ತದೆ. ಗಂಟೆಗೆ 80–100 ಕಿ.ಮೀ. ಕಾರ್ಯಾಚರಣೆಯ ವೇಗಕ್ಕಾಗಿ ವಿನ್ಯಾಸಗೊಳಿಸಲಾದ ಇದು ಯೋಜನೆಯ ಪ್ರಭಾವದ ಪ್ರದೇಶದಾದ್ಯಂತ ಸರಾಸರಿ ಪ್ರಯಾಣದ ಸಮಯ ಸರಿಸುಮಾರು 60 ನಿಮಿಷಗಳಿಂದ 20 ನಿಮಿಷಗಳವರೆಗೆ ಕಡಿತವಾಗುತ್ತದೆ, ಇದು ಸುಮಾರು ಶೇ.67 ರಷ್ಟು ಕಡಿತಕ್ಕೆ ಸಮನವಾಗಿದೆ. NH-19 ಮತ್ತು ಕಾಶಿ ರೈಲು ನಿಲ್ದಾಣದ ನಡುವಿನ ಪ್ರಯಾಣದ ಸಮಯ ಸರಿಸುಮಾರು 50 ನಿಮಿಷಗಳಿಂದ ಸುಮಾರು 25 ನಿಮಿಷಗಳಿಗೆ ಇಳಿಸಲಾಗುತ್ತದೆ, ಇದರಿಂದಾಗಿ ಸುಮಾರು 25 ನಿಮಿಷಗಳು (ಸುಮಾರು ಶೇಕಡ 50) ಉಳಿತಾಯವಾಗುತ್ತದೆ.

ಪಿಎಂ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಕಾರಿಡಾರ್ ಪ್ರಮುಖ ಹೆದ್ದಾರಿಗಳು, ರೈಲು ನಿಲ್ದಾಣಗಳು, ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ ಮತ್ತು ರಾಮ್ ನಗರ್  IWAI ಬಂದರುಗಳಿಗೆ ತಡೆರಹಿತ ಪ್ರವೇಶವನ್ನು ಒದಗಿಸುವ ಮೂಲಕ ಬಹುಮಾದರಿ ಸಂಪರ್ಕ ಬಲಪಡಿಸುತ್ತದೆ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ, ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ ಯು), ನಮೋ ಘಾಟ್, ರಾಮ್ ನಗರ್  ಕೋಟೆ ಮತ್ತು ವಾರಣಾಸಿಯ ಘಾಟ್‌ಗಳು ಸೇರಿದಂತೆ ಪ್ರಮುಖ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಪ್ರಮುಖ ಆರ್ಥಿಕ, ಸಾಮಾಜಿಕ ಮತ್ತು ಲಾಜಿಸ್ಟಿಕ್ಸ್ ನೋಡ್‌ಗಳನ್ನು ಸಂಪರ್ಕಿಸುವ ಮೂಲಕ, ಯೋಜನೆಯು ಲಾಜಿಸ್ಟಿಕ್ಸ್ ದಕ್ಷತೆ ಸುಧಾರಿಸುತ್ತದೆ, ರಸ್ತೆ ಸುರಕ್ಷತೆ ಹೆಚ್ಚಿಸುತ್ತದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯನ್ನು ಸುಗಮಗೊಳಿಸುತ್ತದೆ ಮತ್ತು ಪೂರ್ವ ಉತ್ತರ ಪ್ರದೇಶದಾದ್ಯಂತ ಸುಸ್ಥಿರ ಪ್ರಾದೇಶಿಕ ಆರ್ಥಿಕ ಬೆಳವಣಿಗೆ  ಬೆಂಬಲಿಸುತ್ತದೆ.

ರಾಷ್ಟ್ರೀಯ ಹೆದ್ದಾರಿ ಎನ್ ಎಚ್-19, ವಾರಣಾಸಿ ರಿಂಗ್ ರಸ್ತೆ (NH-135B), ರಾಮ್ ನಗರ್ / BHU ಮತ್ತು ಇತರ ಪ್ರಮುಖ ನಗರ ತಾಣಗಳ ನಡುವೆ ಹೆಚ್ಚಿನ ವೇಗದ, ಅಡೆತಡೆರಹಿತ ಸಂಪರ್ಕವನ್ನು ಒದಗಿಸುವ ಮೂಲಕ ವಾರಣಾಸಿ ಮತ್ತು ಚಂದೌಲಿಯ ರಸ್ತೆ ಜಾಲ ತಗ್ಗಿಸಲು ಕಾರಿಡಾರ್ ಅನ್ನು ನಗರ ಸಾರಿಗೆಯ ಪರಿವರ್ತಕ ಯೋಜನೆಯಾಗಿ ಕಲ್ಪಿಸಲಾಗಿದೆ. ಪ್ರತಿ ವರ್ಷ 15 ಕೋಟಿಗೂ ಅಧಿಕ ಪ್ರವಾಸಿಗರು ಮತ್ತು ಯಾತ್ರಿಕರು ವಾರಣಾಸಿಗೆ ಭೇಟಿ ನೀಡುತ್ತಿರುವುದರಿಂದ, ಈ ಯೋಜನೆಯು ಕಾಶಿ ವಿಶ್ವನಾಥ ದೇವಸ್ಥಾನ, ಬನಾರಸ್ ಹಿಂದೂ ವಿಶ್ವವಿದ್ಯಾಲಯ (BHU), ನಮೋ ಘಾಟ್, ರಾಮ್ ನಗರ್  ಕೋಟೆ, ವಾರಣಾಸಿಯ ಘಾಟ್‌ಗಳು ಮತ್ತು ಕಾಶಿ ರೈಲು ನಿಲ್ದಾಣ ಸೇರಿದಂತೆ ಪ್ರಮುಖ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ, ಜೊತೆಗೆ ಅಸ್ತಿತ್ವದಲ್ಲಿರುವ ನಗರ ರಸ್ತೆ ಜಾಲದಲ್ಲಿನ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. BHU/ಲಂಕಾ ಮತ್ತು ಸಾಮ್ನೆ ಘಾಟ್ ನಡುವಿನ ಎತ್ತರದ ಮಾರ್ಗವು ಸ್ಥಳೀಯ ಸಂಚಾರದಟ್ಟಣೆಗಳಿಂದ ವಾಹನಗಳನ್ನು ಬೇರ್ಪಡಿಸುವ ಮೂಲಕ ಹೆಚ್ಚು ವಾಹನ ದಟ್ಟಣೆಯ ಲಂಕಾ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆಯನ್ನು ಮತ್ತಷ್ಟು ಕಡಿಮೆ ಮಾಡಲಾಗುವುದು.

ಈ ಯೋಜನೆಯು ನಿಯಂತ್ರಿತ-ಪ್ರವೇಶ ಸಾಗಾಣೆಯ ಮೂಲಕ ರಸ್ತೆ ಸುರಕ್ಷತೆಯನ್ನು ಸುಧಾರಿಸುತ್ತದೆ, ವಾಹನ ನಿರ್ವಹಣಾ ವೆಚ್ಚಗಳು ಮತ್ತು ಇಂಗಾಲ ಹೊರಸೂಸುವಿಕೆ ತಗ್ಗಿಸುತ್ತದೆ, ಪ್ರಯಾಣದ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ಪ್ರಯಾಣಿಕರ ಮತ್ತು ಸರಕು ಸಾಗಣೆಯ ದಟ್ಟಣೆಯ ದಟ್ಟಣೆಯನ್ನು ಸುಗಮಗೊಳಿಸುತ್ತದೆ. ಇದು ಜನನಿಬಿಡ ನಗರ ಕೇಂದ್ರದಿಂದ ವಾಹನ ದಟ್ಟಣೆಯನ್ನು ಬೇರೆಡೆಗೆ ತಿರುಗಿಸುವ ಮೂಲಕ NH-19, BHU-ರಾಮ್ ನಗರ್  ಕಾರಿಡಾರ್ ಮತ್ತು NH-35 ಅನ್ನು ಸಹ ಕಡಿಮೆ ಮಾಡುತ್ತದೆ.

ಈ ಯೋಜನೆಯು ಹಲವಾರು ಮಹತ್ವದ ಎಂಜಿನಿಯರಿಂಗ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ, ಅವುಗಳಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಐಕಾನಿಕ್ 910 ಮೀ ಕೇಬಲ್-ಸ್ಟೇಡ್ ಸೇತುವೆ, ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಸುಗಮ ಪಾದಚಾರಿ ಸಂಪರ್ಕ ಒದಗಿಸುವ ಪ್ರಯಾಣಿಕರೊಂದಿಗೆ 1.32 ಕಿಮೀ ಎಕ್ಸ್‌ಟ್ರಾಡೋಸ್ಡ್ ಫುಟ್ ಓವರ್ ಬ್ರಿಡ್ಜ್-ಕಮ್-ಮೇಜರ್ ಸೇತುವೆ, ಅಸ್ತಿತ್ವದಲ್ಲಿರುವ/ಉದ್ದೇಶಿತ ಮಾಲ್ವಿಯಾ ಸೇತುವೆಯ ಮೇಲೆ ರೈಲು ಓವರ್ ಬ್ರಿಡ್ಜ್, ಮೀಸಲಾದ ತುರ್ತು ಪಾರ್ಕಿಂಗ್ ಬೇಗಳು, ಶಬ್ದ ತಡೆಗೋಡೆಗಳು, ಮುಂಭಾಗದ ಬೆಳಕು ಮತ್ತು ವಾರಣಾಸಿಯ ಸಾಂಸ್ಕೃತಿಕ ಪರಂಪರೆಯಿಂದ ಪ್ರೇರಿತವಾದ ವಾಸ್ತುಶಿಲ್ಪದ ಅಂಶಗಳು ಸೇರಿವೆ. ಈ ವೈಶಿಷ್ಟ್ಯಗಳು ಸಾರಿಗೆ ದಕ್ಷತೆ ಸುಧಾರಿಸುವುದಲ್ಲದೆ ನಗರದ ಆಯಾಮವನ್ನು ಬದಲಿಸುತ್ತವೆ, ವಾರಣಾಸಿಯ ಸ್ಕೈಲೈನ್‌ಗೆ ಒಂದು ಐಕಾನಿಕ್ ಸೇರ್ಪಡೆಯನ್ನು ಸೃಷ್ಟಿಸುತ್ತವೆ ಮತ್ತು ಭಾರತದ ಪ್ರಮುಖ ಧಾರ್ಮಿಕ ಮತ್ತು ಸಾಂಸ್ಕೃತಿಕ ತಾಣಗಳಲ್ಲಿ ಒಂದಾಗಿ ಅದರ ಸ್ಥಾನವನ್ನು ಬಲಪಡಿಸುತ್ತವೆ.

ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಯೋಜಿಸಲಾದ ಈ ಕಾರಿಡಾರ್, ಒಂದು ಆರ್ಥಿಕ ನೋಡ್ (ಚಂದೌಲಿ SEZ), ಒಂದು ಸಾಮಾಜಿಕ ನೋಡ್ (ಚಂದೌಲಿ ಮಹತ್ವಾಕಾಂಕ್ಷೆಯ ಜಿಲ್ಲೆ) ಮತ್ತು ಆರು ಪ್ರಮುಖ ಲಾಜಿಸ್ಟಿಕ್ಸ್ ನೋಡ್‌ಗಳನ್ನು ಸಂಪರ್ಕಿಸುವ ಮೂಲಕ ಬಹುಮಾದರಿ ಸಂಪರ್ಕವನ್ನು ಬಲಪಡಿಸುತ್ತದೆ, ಅವುಗಳೆಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ, ಕಾಶಿ ರೈಲು ನಿಲ್ದಾಣ, ಬನಾರಸ್ ರೈಲು ನಿಲ್ದಾಣ, ವಾರಣಾಸಿ ನಗರ ರೈಲು ನಿಲ್ದಾಣ, ಪಿಟಿ. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಮತ್ತು ರಾಮನಗರ ಐಡಬ್ಲ್ಯುಎಐ ಬಂದರು. ಈ ಸಾರಿಗೆ ಕೇಂದ್ರಗಳು ಮತ್ತು ಕಾಶಿ ವಿಶ್ವನಾಥ ದೇವಸ್ಥಾನ, ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು), ನಮೋ ಘಾಟ್, ರಾಮನಗರ ಕೋಟೆ ಮತ್ತು ವಾರಣಾಸಿಯ ಘಾಟ್‌ಗಳಂತಹ ಪ್ರಮುಖ ತಾಣಗಳ ನಡುವೆ ತಡೆರಹಿತ ಸಂಪರ್ಕವನ್ನು ಒದಗಿಸುವ ಮೂಲಕ, ಈ ಯೋಜನೆಯು ಬಹುಮಾದರಿ ಏಕೀಕರಣವನ್ನು ಹೆಚ್ಚಿಸುತ್ತದೆ, ಲಾಜಿಸ್ಟಿಕ್ಸ್ ದಕ್ಷತೆಯನ್ನು ಸುಧಾರಿಸುತ್ತದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯನ್ನು ಸುಗಮಗೊಳಿಸುತ್ತದೆ ಮತ್ತು ಪೂರ್ವ ಉತ್ತರ ಪ್ರದೇಶದಾದ್ಯಂತ ಸುಸ್ಥಿರ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.

ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ಗೆ ಅನುಗುಣವಾಗಿ ಯೋಜಿಸಲಾದ ಈ ಕಾರಿಡಾರ್, ಒಂದು ಆರ್ಥಿಕ ನೋಡ್ (ಚಂದೌಲಿ SEZ), ಒಂದು ಸಾಮಾಜಿಕ ನೋಡ್ (ಚಂದೌಲಿ ಮಹತ್ವಾಕಾಂಕ್ಷೆಯ ಜಿಲ್ಲೆ) ಮತ್ತು ಆರು ಪ್ರಮುಖ ಲಾಜಿಸ್ಟಿಕ್ಸ್ ನೋಡ್‌ಗಳನ್ನು ಸಂಪರ್ಕಿಸುವ ಮೂಲಕ ಬಹುಮಾದರಿ ಸಂಪರ್ಕವನ್ನು ಬಲಪಡಿಸುತ್ತದೆ, ಅವುಗಳೆಂದರೆ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣ, ಕಾಶಿ ರೈಲು ನಿಲ್ದಾಣ, ಬನಾರಸ್ ರೈಲು ನಿಲ್ದಾಣ, ವಾರಣಾಸಿ ನಗರ ರೈಲು ನಿಲ್ದಾಣ, ಪಿಟಿ. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಮತ್ತು ರಾಮ್ ನಗರ್  ಐಡಬ್ಲ್ಯುಎಐ ಬಂದರು. ಈ ಸಾರಿಗೆ ಕೇಂದ್ರಗಳು ಮತ್ತು ಕಾಶಿ ವಿಶ್ವನಾಥ ದೇವಸ್ಥಾನ, ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು), ನಮೋ ಘಾಟ್, ರಾಮ್ ನಗರ್ ಕೋಟೆ ಮತ್ತು ವಾರಣಾಸಿಯ ಘಾಟ್‌ಗಳಂತಹ ಪ್ರಮುಖ ತಾಣಗಳ ನಡುವೆ ತಡೆರಹಿತ ಸಂಪರ್ಕ ಒದಗಿಸುವ ಮೂಲಕ, ಈ ಯೋಜನೆಯು ಬಹುಮಾದರಿ ಸಂಯೋಜನೆ ಹೆಚ್ಚಿಸುತ್ತದೆ, ಲಾಜಿಸ್ಟಿಕ್ಸ್ ದಕ್ಷತೆ ಸುಧಾರಿಸುತ್ತದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯನ್ನು ಸುಗಮಗೊಳಿಸುತ್ತದೆ ಮತ್ತು ಪೂರ್ವ ಉತ್ತರ ಪ್ರದೇಶದಾದ್ಯಂತ ಸುಸ್ಥಿರ ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ.

ಒಟ್ಟಾರೆ, ಉದ್ದೇಶಿತ ಗಂಗಾ ಎಲಿವೇಟೆಡ್ ಕಾರಿಡಾರ್ ಆಧುನಿಕ, ಹೆಚ್ಚಿನ ಸಾಮರ್ಥ್ಯದ ನಗರ ಸಾರಿಗೆ ಕಾರಿಡಾರ್ ಅನ್ನು ರಚಿಸುತ್ತದೆ, ಇದು ವೇಗವಾದ, ಸುರಕ್ಷಿತ ಮತ್ತು ಹೆಚ್ಚು ವಿಶ್ವಾಸಾರ್ಹ ಸಂಪರ್ಕ ಒದಗಿಸುತ್ತದೆ, ವಾಹನ  ದಟ್ಟಣೆಯನ್ನು ಗಮನಾರ್ಹವಾಗಿ ತಗ್ಗಿಸುತ್ತದೆ, ಬಹುಮಾದರಿ ಸಂಯೋಜನೆಯನ್ನು ಬಲಪಡಿಸುತ್ತದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಯ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ಪ್ರಧಾನ ಮಂತ್ರಿ ಗತಿ ಶಕ್ತಿ ಮತ್ತು ವಿಕಸಿತ ಭಾರತದ  ದೂರದೃಷ್ಟಿಗೆ ಅನುಗುಣವಾಗಿ ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಕಾರಿಡಾರ್ ನಕ್ಷೆ:

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's forex reserves hit all-time high of $729.33 billion after $12.42 billion jump

Media Coverage

India's forex reserves hit all-time high of $729.33 billion after $12.42 billion jump
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಆಗಸ್ಟ್ 2026
August 29, 2026

New India, New Speed, New Stage: Missiles, Medals, Multilateralism under PM Modi