Ladies and Gentlemen,

I take this opportunity to welcome the Big Tent event of Google and the Activate Summit of the Guardian to my country. I am sure the discussions in this forum would give a new direction to the meaningful use of technology for society at large.

Friends, Alvin Tofler said, “The Illiterate of the 21st Century will not be those who cannot read and write, but those who cannot learn, unlearn and relearn.” This applies to everyone and every field, but more so to politics and the political class.

The crux of politics lies in connecting to the people.

If one looks back over the years, politicians readily adopted technology that connected them to the people better. From the simple pen and paper - to microphones and public address systems. From motion pictures – to the era of Television.

All these tools have been extensively used for political purposes since their respective introductions. They have greatly influenced politics, and in turn been greatly shaped by it as well. Overtime, they have become synonymous with politics.

Today’s web-connected world has brought about another paradigm shift with the Internet. This is not just impacting politics, but is in a sense fundamentally redefining it.

Earlier technological evolutions helped the politicians more. They could take advantage of new means and dimensions. Information technology has led to empowerment of people as well – each and every one of us!

This is very important for a large democracy like India. I have been saying IT + IT = IT : Indian Talent + Information technology = India Tomorrow.

Information in the pre-internet era was more one-dimensional. It was limited to politicians bombarding their thoughts and views on citizens.

Now it is a two way process. Citizens are empowered with wide access to information – from multiple channels.

This information moreover, is real time and updated.

Importantly, these informed citizens also have avenues of voicing their opinion and influencing policy. Citizens now have a direct say!

In India earlier, a citizen’s connect to politics was limited to once in every five years - from one election to another.

Now, he engages with, and is a part of the polity every moment! He shares information, raises questions, comments, and connects with others. He voices his opinion and gives his feedback.

The internet has therefore truly empowered the citizen. It has forced the politician to perform, not just promise. In a way, it has become a challenge for the political class.

The time has come for the political class to adapt to this change and reinvent itself! It needs to stop running away. It needs to embrace the internet’s many powerful facets. The political class needs to stop seeing technology as a problem creator, and start harnessing it in the right spirit.

Friends! As a politician, I use technology extensively – from the simple to the cutting edge.

In the 2012 elections I pioneered the using of 3D Holographic technology to reach out to multiple geographies. I addressed voters at 53 places across the state all at once. This unique concept not only helped me reach out to more geographies and voters, but also helped reduce the cost, time and energy required.

At a personal level I interact with lakhs of my fellow countrymen and women through social media.

I share my thoughts with them, as well as listen and learn from them.

I understand their concerns as well as connect with their dreams and aspirations.

Friends, the internet has become the new public sphere. Former President Clinton aptly called it the new town square. In this age of internet democracy, citizens are netizens, who transcend the geographical borders of countries and continents. No wonder it is called the Wired Republic.

Today, technology has merged politics with governance. They cannot be separated as the focus of the public sphere is on accountability, and transparency. Good governance is the key political agenda now, be it in the developed or developing world. Internet, new communication media and digital convergence have been major drivers of this.

The internet has been a game changer in the realm of information-based decision making.

It has transformed the policy making process. It has ushered in an age of direct democracy - where the common citizen directly engages in the policy making process and affects the policy outcomes, rather than being limited to doing so through his elected representative.

I would like to give you a few examples from my Gujarat experience.

Listening to people’s voice is a very important element in democracy. To ensure this we use ICT for redressing grievances. I personally host SWAGAT sessions in my office.

The unique aspect of this project is that the grievance of the common man is addressed in real time. Solutions are provided online to him immediately. It also acts as a feedback mechanism. We modify policies and systems based on repeated grievances.

Our efforts have been applauded by the UN, receiving the UN Public Service Award in 2010 for 'Improving Transparency, Accountability and Responsiveness in Public Service'.

Gujarat is strategically using satellite mapping for better decision making. We have institutionalised this in the form of BISAG - Bhaskaracharya Institute for Space Applications and Geo-Informatics.

We use this technology extensively - from our most modern, large scale projects like building Special Investment Regions and smart cities … to giving rights of forest land to tribals.

Earlier, when politicians used to lobby for infrastructure like schools and hospitals in their constituencies, we did not have any scientific method of deciding the allocations. Today, we map the demography, the need and the availability using GIS. We thus bring parity among the local communities. This has also given a new direction to local politics.

Gujarat is the first state to apply GIS to fully plan, implement and monitor its watershed management.

Friends! Resurvey of lands is very important for better land management and ensuring less disputes. It is required to be done every 30 years. Unfortunately, this has not happened in the last 100 years in India. Gujarat has undertaken resurvey of lands using state of the art technology - Differential Global Positioning System and Electronic Total Station Machines.

Further, our e-Gram Vishvagram project connects all the district, taluka and village panchayats across the state with broadband. This enables video conferencing facilities at all villages, issuing of documents and certificates and a host of other e-services.

We use simple technology in disaster management services. Merely sending timely SMSs to citizens during the 2006 floods ensured that not a single life was lost in spite of heavy rains and flooding.

Friends! Voting is the bloodline of the political process in a democratic polity.

India’s Electronic Voting Machines (EVMs) have simplified voting and counting - making it easy and fast.

In Gujarat, we have graduated from EVM voting to eVoting - launching on a pilot scale in Municipal elections. Our pioneering efforts have been acknowledged with many awards including the National award for excellence in government process reengineering.

Advanced technology is rapidly transforming the government-citizen relationship. Social media in particular, provides a great platform for the government to engage with citizens.

To give you an example, when we organised the Sabarmati Riverfront Photography Competition on social media, several thousands participated. Amateurs as well as professionals sent entries in large numbers. The competition reached out to more than two hundred thousand (2,00,000) citizens and helped increase the popularity of the riverfront in a manner no paid ad campaign could have.

I find it extremely interesting to see how Netizens have evolved their own language and dictionary of words. Here neither the spelling nor the grammar matters. 140 characters can convey it all.

This dimension also plays a very important role in empowerment. It gives people from different parts of the world the confidence to overcome their limitations in language. It enables them to go ahead to freely express and connect.

In conclusion, let me say that technology in itself is neither good nor bad. That depends on how it is harnessed.

While ‘Technology in Politics’ plays a crucial role … it would do us great good to stay away from letting ‘Politics into Technology’!

Deployed in the right way, technology can be an extremely powerful force, capable of bringing about great change! The challenge is how better we can connect the common man to this WWW world. We need to find solutions by which he can connect in his local language. We must focus our technological policies and innovations on the greater good – empowering people and nurturing a development-based agenda.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
'Housing for all' by 2029: Centre approves Rs 10,021 crore fund for PMAY-G in 12 states

Media Coverage

'Housing for all' by 2029: Centre approves Rs 10,021 crore fund for PMAY-G in 12 states
NM on the go

Nm on the go

Always be the first to hear from the PM. Get the App Now!
...
In the National Senior Athletics Federation Competition held in Ranchi, Jharkhand, four national records were broken in four different events: PM Modi
My dear countrymen, it is very hot in most parts of the country right now. Strong sun, hot winds, it is very important to take care of yourself in such weather: PM Modi
Sattu sherbet in Bihar, Jharkhand and Eastern Uttar Pradesh is simply amazing – it fills the stomach and provides strength: PM Modi
Service doesn't require vast resources - what's needed is a good intent and consistent effort: PM Modi
In a special ceremony held in the Netherlands, ancient copper plates from the Chola period were returned to India: PM Modi
Astronomy has aroused curiosity in every generation in our country. It has inspired exploration; a lot of enthusiasm is visible in today’s youth: PM Modi
Dolphin rescue ambulance has been designed like a mobile hospital. It has arrangements for keeping the dolphin safe: PM Modi
Friends, when we save the Gangetic dolphin, we don't just save a species; we save the biodiversity of the Ganga: PM Modi
Girija Amma ji’s patriotic spirit inspires every Indian. Inspired by 'Mann Ki Baat', she pledged to contribute to many soldiers in the country: PM Modi

ನನ್ನ ಪ್ರಿಯ ದೇಶ ಬಾಂಧವರೆ, ನಮಸ್ಕಾರ. ‘ಮನದ ಮಾತಿನ’ ಮೂಲಕ ಮತ್ತೊಮ್ಮೆ ನಿಮ್ಮನ್ನು ಸಂಪರ್ಕಿಸುತ್ತಿರುವುದು ನನಗೆ ಬಹಳ ಸಂತೋಷವೆನಿಸಿದೆ. ದೇಶದ ವಿವಿಧ ಭಾಗಗಳಲ್ಲಿ, ನಮ್ಮ ಜನರು ರಾಷ್ಟ್ರ ಮತ್ತು ಸಮಾಜದ ಹಿತದೃಷ್ಟಿಯಿಂದ ಸಾಕಷ್ಟು ಗಮನಾರ್ಹ ಕೆಲಸಗಳನ್ನು ಮಾಡುತ್ತಿದ್ದಾರೆ ಮತ್ತು ಅವರ ಪ್ರಯತ್ನಗಳ ಬಗ್ಗೆ ಕೇಳಿದಾಗ, ನಮ್ಮಲ್ಲಿ ಹೊಸ ಸ್ಫೂರ್ತಿಯ ಸೆಲೆ ಹುಟ್ಟುತ್ತದೆ. ಇಂದು, ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಅಂತಹ ಒಂದು ರಾಷ್ಟ್ರೀಯ ಸಾಧನೆಯ ಕುರಿತು ಪ್ರಸ್ತಾಪಿಸುವ ಮೂಲಕ ನಾನು ಈ ಕಾರ್ಯಕ್ರಮವನ್ನು ಪ್ರಾರಂಭಿಸಲು ಬಯಸುತ್ತೇನೆ. ಕೆಲವೇ ದಿನಗಳ ಹಿಂದೆ, ಜಾರ್ಖಂಡ್‌ನ ರಾಂಚಿಯಲ್ಲಿ ರಾಷ್ಟ್ರೀಯ ಹಿರಿಯ ಅಥ್ಲೆಟಿಕ್ಸ್ ಫೆಡರೇಶನ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಸುಮಾರು 800 ಕ್ರೀಡಾಪಟುಗಳು ಭಾಗವಹಿಸಿದ್ದರು. ದೇಶದ ಮೂಲೆ ಮೂಲೆಗಳಿಂದ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ, ನಾಲ್ಕು ವಿಭಿನ್ನ ಸ್ಪರ್ಧೆಗಳಲ್ಲಿ ನಾಲ್ಕು ರಾಷ್ಟ್ರೀಯ ದಾಖಲೆಗಳನ್ನು ಮುರಿಯಲಾಯಿತು. ಗುರಿಂದರ್‌ವೀರ್ ಸಿಂಗ್, ವಿಶಾಲ್ ಟಿ.ಕೆ., ತೇಜಸ್ವಿನ್ ಶಂಕರ್, ದೇವ್ ಮೀನಾ ಮತ್ತು ಕುಲದೀಪ್ ಕುಮಾರ್ - ಈ ಕ್ರೀಡಾಪಟುಗಳು ತಮ್ಮ ತಮ್ಮ ವಿಭಾಗಗಳಲ್ಲಿ ಹೊಸ ದಾಖಲೆಗಳನ್ನು ಸ್ಥಾಪಿಸಿದರು. ಮೊದಲನೆಯದಾಗಿ, ಅವರೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ, ದೇಶಾದ್ಯಂತ 100 ಮೀಟರ್ ಓಟದ ಸ್ಪರ್ಧೆ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. ಕೇವಲ ಎರಡು ದಿನಗಳ ಅವಧಿಯಲ್ಲಿ, ಪುರುಷರ 100 ಮೀಟರ್ ಓಟದ ರಾಷ್ಟ್ರೀಯ ದಾಖಲೆಯನ್ನು ಮೂರು ಬಾರಿ ಮುರಿಯಲಾಯಿತು. ಗುರಿಂದರ್‌ವೀರ್ ಸಿಂಗ್ ಮತ್ತು ಅನಿಮೇಶ್ ಕುಜುರ್ ಈ ಅಸಾಧಾರಣ ಸಾಧನೆ ಮಾಡಿದ ಇಬ್ಬರು ಕ್ರೀಡಾಪಟುಗಳಾಗಿದ್ದಾರೆ. ಈ ಬಾರಿಯ 'ಮನದ ಮಾತು' ನಲ್ಲಿ ಈ ಇಬ್ಬರು ಕ್ರೀಡಾಪಟುಗಳೊಂದಿಗೆ ಮಾತನಾಡಬೇಕೆಂದು ನಾನು ಬಯಸಿದೆ.

(PHONE CALL)

ಪ್ರಧಾನ ಮಂತ್ರಿ: ಅನಿಮೇಶ್-ಜಿ, ನಮಸ್ಕಾರ. ಗುರಿಂದರ್‌ವೀರ್, ನಿಮಗೂ ನಮಸ್ಕಾರ—ಸತ್ ಶ್ರೀ ಅಕಾಲ್.

ಅನಿಮೇಶ್, ಗುರಿಂದರ್‌ವೀರ್: ನಮಸ್ಕಾರ, ಸರ್. ನಮಸ್ಕಾರ, ಸರ್.

ಪ್ರಧಾನ ಮಂತ್ರಿ: ಸರಿ, ಸೋದರನೆ, ನೀವಂತೂ ನಿಜವಾಗಿಯೂ ಅದ್ಭುತವಾದ ಸಾಧನೆಗೈಯ್ದಿದ್ದೀರಿ. ನಿಮ್ಮಿಬ್ಬರ ಜೋಡಿ ಅಪಾರ ಸಾಧನೆ ಮೆರೆದಿದೆ. ಸಂಗೀತ ಕ್ಷೇತ್ರದಲ್ಲಿ ನಾವು ಅನೇಕ ಬಾರಿ *ಜುಗಲ್ಬಂದಿ* ಗಳನ್ನು ನೋಡಿದ್ದೇವೆ, ಆದರೆ ಈಗ ನಾವು ಕ್ರೀಡಾ ಕ್ಷೇತ್ರದಲ್ಲಿಯೂ *ಜುಗಲ್ಬಂದಿ* ಯನ್ನು ನೋಡುತ್ತಿದ್ದೇವೆ - ಅಲ್ಲಿ ಒಬ್ಬ ವ್ಯಕ್ತಿ ಸವಾಲನ್ನು ಒಡ್ಡಿದರೆ, ಇನ್ನೊಬ್ಬರು ತಕ್ಷಣವೇ ಅದನ್ನು ಎದುರಿಸಲು ಸನ್ನದ್ಧರಾಗಿ ನಿಲ್ಲುತ್ತಾರೆ, ಆದರೆ ಮೊದಲಿಗರು ಮತ್ತೊಮ್ಮೆ ಉಚ್ಚ ಮಟ್ಟವನ್ನು ಏರುತ್ತಾರೆ. ಇದು ನಿಜವಾಗಿಯೂ ಆಸಕ್ತಿಕರ ಸಾಹಸಗಾಥೆಯಾಗಿದೆ. 'ಮನದ ಮಾತು' ಕೇಳುಗರು ನಿಮ್ಮಿಬ್ಬರ ಬಗ್ಗೆ ಚೆನ್ನಾಗಿ ಅರಿತುಕೊಳ್ಳಬೇಕು ಮತ್ತು ನಿಮ್ಮ ಅಸಾಧಾರಣ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ನಾನು ಬಯಸುತ್ತೇನೆ.

ಅನಿಮೇಶ್: ನಮಸ್ತೆ, ಸರ್. ನನ್ನ ಹೆಸರು ಅನಿಮೇಶ್ ಕುಜುರ್. ನಾನು 200 ಮೀಟರ್ ಮತ್ತು 400 ಮೀಟರ್ ಓಟಗಳಲ್ಲಿ ರಾಷ್ಟ್ರೀಯ ದಾಖಲೆ ಮಾಡಿದ್ದೇನೆ, ಮತ್ತು ನಾನು ಛತ್ತೀಸ್‌ಗಢ ಮೂಲದವನು ಸರ್. ಪ್ರಸ್ತುತ, ನಾನು ಒಡಿಶಾವನ್ನು ಪ್ರತಿನಿಧಿಸುತ್ತಾ ಸ್ಪರ್ಧಿಸುತ್ತಿದ್ದೇನೆ.

2021 ರಲ್ಲಿ ನಾನು ಶಾಲೆಯಿಂದ ಪಾಸಾದ ತಕ್ಷಣ ಅಥ್ಲೆಟಿಕ್ಸ್‌ನಲ್ಲಿ ನನ್ನ ಪಯಣ ಆರಂಭವಾಯಿತು. ನಾನು ಅಂಬಿಕಾಪುರದ ಸೈನಿಕ್ ಶಾಲೆಯ ಹಳೆಯ ವಿದ್ಯಾರ್ಥಿ. ಹಿಂದೆ, ನಾನು ಫುಟ್ಬಾಲ್ ಆಡುತ್ತಿದ್ದೆ. ಆದಾಗ್ಯೂ, COVID-19 ಸಾಂಕ್ರಾಮಿಕ ಸಮಯದಲ್ಲಿ, ನನ್ನ ಪೋಷಕರು ನನಗೆ, ಓಡಲು ಅಥವಾ ಆಟವಾಡಲು ಹೊರಗೆ ಹೋಗಲು ಸ್ವಲ್ಪ ಅವಕಾಶ ನೀಡುತ್ತಿದ್ದರು. ಸಾಂಕ್ರಾಮಿಕ ರೋಗ ಕಡಿಮೆಯಾಗಲಾರಂಭಿಸಿದಾಗ, ಫುಟ್ಬಾಲ್ ತಂಡದ ನನ್ನ ಸ್ನೇಹಿತರು ರಾಜ್ಯ ಕ್ರೀಡಾಕೂಟ ನಡೆಯಲಿದೆ ಎಂದು ನನಗೆ ಮಾಹಿತಿ ನೀಡಿದರು ಮತ್ತು ಭಾಗವಹಿಸಲು ನನ್ನನ್ನು ಪ್ರೋತ್ಸಾಹಿಸಿದರು. ನಾನು ಭಾಗವಹಿಸಿದ್ದೆ - ಆ ಸಮಯದಲ್ಲಿ ಈ ಸ್ಪರ್ಧೆಯು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೆ ವೇದಿಕೆ ಎಂಬುದು ನನಗೆ ತಿಳಿದಿರಲಿಲ್ಲ. ಅಲ್ಲಿಂದ, ನಾನು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದೆ, ಮತ್ತು ಇಂದು, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಸೌಭಾಗ್ಯ ನನಗೆ ಲಭಿಸಿದೆ.

ಪ್ರಧಾನ ಮಂತ್ರಿ: ಮತ್ತು ಗುರಿಂದರ್‌ವೀರ್ ಅವರೇ ನಿಮ್ಮ ಬಗ್ಗೆ ಹೇಳುವಿರಾ?

ಗುರಿಂದರ್‌ವೀರ್: ನಮಸ್ತೆ, ಸರ್. ನನ್ನ ಹೆಸರು ಗುರಿಂದರ್‌ವೀರ್. ನಾನು ಭಾರತೀಯ ನೌಕಾಪಡೆಯಲ್ಲಿ Patty Officer ಆಗಿ ಸೇವೆ ಸಲ್ಲಿಸುತ್ತಿದ್ದೇನೆ. ಪ್ರಸ್ತುತ ನಾನು ಭಾರತದ ಅತ್ಯಂತ ವೇಗದ ಓಟಗಾರನಾಗಿದ್ದೇನೆ. ನಾನು ಇತ್ತೀಚೆಗೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ 10.09 ಸೆಕೆಂಡುಗಳ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದೇನೆ. 10.1-ಸೆಕೆಂಡ್ ನ ಸವಾಲನ್ನು ಮುರಿದ ಮೊದಲ ಭಾರತೀಯ ಕ್ರೀಡಾಪಟು ನಾನು. ಟ್ರ್ಯಾಕ್‌ನಲ್ಲಿ ಜೊತೆಗೆ ಸಮವಸ್ತ್ರದ ಧರಿಸಿ ಕೂಡಾ ನನ್ನ ದೇಶಕ್ಕೆ ಸೇವೆ ಸಲ್ಲಿಸಲು ಶ್ರಮಿಸುತ್ತಿದ್ದೇನೆ. ನನ್ನ ತಂದೆ ಮತ್ತು ಅಜ್ಜ ಇಬ್ಬರೂ ಕ್ರೀಡಾಪಟುಗಳಾಗಿದ್ದರು. ದೀಪಾವಳಿ ಅಥವಾ ಹೊಸ ವರ್ಷದಂತಹ ಹಬ್ಬ ಬಂದಾಗಲೆಲ್ಲಾ ನಾವು ನಮ್ಮ ಮನೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು ಭಾರತದ ಸಾಂಸ್ಕೃತಿಕ ಸಂಪ್ರದಾಯ. ಹಾಗಾಗಿ, ನಾನು ನನ್ನ ತಂದೆಯ ಟ್ರೋಫಿಗಳು ಮತ್ತು ಪದಕಗಳನ್ನು ಆಗ ಸ್ವಚ್ಛಗೊಳಿಸುತ್ತಿದ್ದೆ. ಆ ಕೆಲಸವು ನನಗೆ ತುಂಬಾ ಆನಂದದಾಯಕವಾಗಿತ್ತು ಮತ್ತು ಅದು ನನಗೆ ತುಂಬಾ ಸಂತೋಷವನ್ನುಂಟುಮಾಡಿತು. ನಾನು ಯಾವುದೇ ಒಂದು ನಿರ್ದಿಷ್ಟ ಟ್ರೋಫಿಯನ್ನು ಸ್ವಚ್ಛಗೊಳಿಸಿದಾಗಲೆಲ್ಲಾ, ನಾನು ಅವರನ್ನು ಕೇಳುತ್ತಿದ್ದೆ: "ಅಪ್ಪಾ, ನೀವು ಈ ಟ್ರೋಫಿಯನ್ನು ಎಲ್ಲಿ ಗೆದ್ದಿದ್ದೀರಿ? ನೀವು ಈ ಪದಕವನ್ನು ಎಲ್ಲಿ ಗೆದ್ದಿದ್ದೀರಿ? ಈ ಛಾಯಾಚಿತ್ರವನ್ನು ಯಾವಾಗ ತೆಗೆಯಲಾಗಿದೆ?" ಪ್ರತಿಕ್ರಿಯೆಯಾಗಿ, ಅವರು ತಮ್ಮ ಕಥೆಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದರು - ಸ್ಪರ್ಧಿಸಲು ನಾನು ಇಲ್ಲಿಗೆ ಆಡಲು ಹೋಗಿದ್ದೆ, ನಾನು ಈ ರಾಷ್ಟ್ರೀಯ ಪದಕ ಗೆದ್ದೆ, ನನ್ನ ತಂಡವನ್ನು ಈ ರೀತಿ ಗೆಲ್ಲಿಸಿದೆ, ಎಂದೆಲ್ಲ ವಿವರಿಸುತ್ತಿದ್ದರು. ಅವರ ಕಥೆಗಳಿಂದ ಪ್ರೇರಿತನಾಗಿ, "ಅಪ್ಪಾ, ನಾನು ಕೂಡ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬಯಸುತ್ತೇನೆ" ಎಂದು ಹೇಳುತ್ತಿದ್ದೆ. ಅವರು ಪ್ರತಿದಿನ ಬೆಳಿಗ್ಗೆ ಓಟಕ್ಕೆ ಹೋಗುತ್ತಿದ್ದರಿಂದ, ನಾನು ಅವರನ್ನು "ಅಪ್ಪಾ, ದಯವಿಟ್ಟು ನಿಮ್ಮೊಂದಿಗೆ ನನ್ನನ್ನು ಕರೆದುಕೊಂಡು ಹೋಗು" ಎಂದು ಕೇಳಲು ಪ್ರಾರಂಭಿಸಿದೆ. ಆದ್ದರಿಂದ, ಅವರು ನನ್ನನ್ನು ಕರೆದುಕೊಂಡು ಹೋಗಲು ಪ್ರಾರಂಭಿಸುತ್ತಿದ್ದಂತೆ, ತಾವು ಕ್ರೀಡೆಯಲ್ಲಿ ಕಲಿತ ಕೌಶಲ್ಯಗಳನ್ನು ನನಗೆ ಹೇಳಿಕೊಡಲಾರಂಭಿಸಿದರು. ಹಾಗಾಗಿ, ಅದರಲ್ಲಿ ನನ್ನ ಆಸಕ್ತಿ ಬೆಳೆಯಲಾರಂಭಿಸಿತು. ಉಸೇನ್ ಬೋಲ್ಟ್ ಅವರ ವಿಶ್ವ ದಾಖಲೆ ಮುರಿಯುವುದನ್ನು ನಾನು ಕಣ್ಣಾರೆ ಕಂಡೆ. ಇದಕ್ಕೆ ಸಂಬಂಧಿಸಿದ ಒಂದು ಮೋಜಿನ ಸಂಗತಿಯಿದೆ. ಒಂದು ದಿನ ನಾನು ಟಿವಿ ನೋಡುತ್ತಿದ್ದಾಗ ನನ್ನ ತಾಯಿ ಅದನ್ನು ಆಫ್ ಮಾಡಿ, "ಮಗನೇ, ಈಗ ಓದುವ ಸಮಯ; ಓದಿಕೊಳ್ಳಲು ಹೋಗು" ಎಂದು ಹೇಳಿದರು. ಆಗ, ನಾನು "ಸರಿ, ನೀನು ಈಗ ನನಗೆ ಟಿವಿ ನೋಡಲು ಬಿಡುವುದಿಲ್ಲ, ಆದರೆ ಒಂದು ದಿನ ನೀನು ಟಿವಿ ಪರದೆಯ ಮೇಲೆ ನನ್ನನ್ನು ಹುಡುಕುವೆ - ನನ್ನನ್ನು ತೋರಿಸಿ 'ನೋಡಿ, ಗುರಿಂದರ್ ಓಡುತ್ತಿದ್ದಾನೆ!' ಎಂದು ಹೇಳುವ ದಿನ ಬರುತ್ತದೆ" ಎಂದು ಸವಾಲು ಹಾಕಿದೆ. ಮತ್ತು ನಿಜಕ್ಕೂ, ನನ್ನ ತಾಯಿ ನಾನು ದೂರದರ್ಶನದಲ್ಲಿ ಓಡುವುದನ್ನು ನೋಡಿದಾಗಲೆಲ್ಲಾ ಅದು ನನಗೆ ಅಪಾರ ಸಂತೋಷವಾಗುತ್ತದೆ.

ಪ್ರಧಾನ ಮಂತ್ರಿ: ವಾಹ್, ವಾವ್, ವಾವ್! ನಿಮ್ಮದಂತೂ ಬಹಳ ಅದ್ಭುತವಾದ ಭಾವನೆ!

ಗುರಿಂದರ್ ವೀರ್: ಹೌದು, ಸರ್. ನನ್ನದು ಮಧ್ಯಮ ವರ್ಗದ ಕುಟುಂಬ. ಇದಲ್ಲದೆ, ನನ್ನ ತಂದೆ ಸ್ವತಃ ವಾಲಿಬಾಲ್ ಆಡುತ್ತಿದ್ದರು; ಆದರೆ, ಮನೆಯ ಸಮಸ್ಯೆಗಳಿಂದಾಗಿ, ಅವರು ತಮ್ಮ ಕ್ರೀಡಾ ವೃತ್ತಿಜೀವನವನ್ನು ತ್ಯಜಿಸಬೇಕಾಯಿತು. ಅವರ ಸ್ವಂತ ಕನಸು ನನಸಾಗಲಿಲ್ಲ. ನನ್ನ ಮೂಲಕ ಆ ಕನಸನ್ನು ನನಸಾಗಿಸುವ ಸಾಮರ್ಥ್ಯವನ್ನು ಅವರು ಕಂಡರು - ಅವರ ಮಗ ಅದನ್ನು ನನಸಾಗಿಸುವವನು ಎಂದು ನಂಬಿದ್ದರು. ನಾನು ಆಗಾಗ್ಗೆ ಅವರೊಂದಿಗೆ ಚರ್ಚಿಸುತ್ತಿದ್ದೆ, ಮತ್ತು ಮಿಲ್ಖಾ ಸಿಂಗ್‌ ಎಷ್ಟು ಶ್ರಮಿಸುತ್ತಿದ್ದರು ಎಂಬುದರ ಕುರಿತು ಕಥೆಗಳನ್ನು ನಾನು ಗಮನವಿಟ್ಟು ಕೇಳುತ್ತಿದ್ದೆ. ನಾನು ನನ್ನ ತಂದೆಗೆ, "ಒಂದು ದಿನ, ನಾನು ನಿಮ್ಮ ಕನಸನ್ನು ನನಸು ಮಾಡುವೆ” ಎಂದು ಹೇಳುತ್ತಿದ್ದೆ.

ಆಗ ತಂದೆಯವರು, ಕನಸುಗಳು ಹಾಗೆ ನನಸಾಗುವುದಿಲ್ಲ, ಅವುಗಳಿಗೆ ಅಪಾರ ಪ್ರಮಾಣದ ಕಠಿಣ ಪರಿಶ್ರಮ - ಸಂಪೂರ್ಣ ಏಕಾಗ್ರತೆ ಮತ್ತು ಪ್ರಯತ್ನ ಬೇಕಾಗುತ್ತದೆ ಎಂದು ಹೇಳಿದರು. ಮಿಲ್ಖಾ ಸಿಂಗ್ ಅವರು ಕಠಿಣ ಪರಿಶ್ರಮದಿಂದಾಗಿ ರಕ್ತವನ್ನು ವಾಂತಿ ಮಾಡಿಕೊಳ್ಳುತ್ತಿದ್ದರು. ಬಿರು ಬಿಸಿಲಿನಲ್ಲಿ ಓಡುತ್ತಿದ್ದರು. ಅವರು ದಿನವಿಡೀ ತರಬೇತಿ ಪಡೆಯುತ್ತಿದ್ದರು; ಅವೆಲ್ಲ ನನಗೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದ್ದವು. ನಾನು ಓಡಿದರೆ, ನನ್ನ ದೇಶಕ್ಕಾಗಿ ಓಡುತ್ತೇನೆ - ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತರುತ್ತೇನೆ ಎಂಬ ನಂಬಿಕೆಯನ್ನು ನನ್ನಲ್ಲಿ ತುಂಬಿದ ನನ್ನ ತಂದೆ ನಿರಂತರ ಸ್ಫೂರ್ತಿಯ ಸೆಲೆಯಾಗಿದ್ದರು, ಇದಲ್ಲದೆ, ನಾನು 100 ಮೀಟರ್ ಓಟವನ್ನು ನನ್ನ ಸ್ಪರ್ಧೆಯಾಗಿ ಆರಿಸಿಕೊಂಡಾಗ, ಎಲ್ಲರೂ ನನ್ನನ್ನು ತಡೆಯಲು ಯತ್ನಿಸಿದರು, "100 ಮೀಟರ್ ಓಟವನ್ನು ಆಯ್ಕೆ ಮಾಡಬೇಡಿ; ಇದು ಭಾರತೀಯರಿಗಾಗಿ ಅಲ್ಲ. ಭಾರತೀಯರ ದೇಹ ರಚನೆ 100 ಮೀಟರ್ ಓಟಕ್ಕಾಗಿ ಸೂಕ್ತವಲ್ಲ" ಎಂದು ಹೇಳಿದರು. ಆದರೆ ನನ್ನ ತಂದೆ ಮತ್ತು ನಾನು ಯಾವಾಗಲೂ ದೃಢವಾಗಿದ್ದೆವು, "ಗುರಿಂದರ್, ನಾವು ನಮ್ಮ ಆಯ್ಕೆಯನ್ನು ಮಾಡಿದ್ದೇವೆ ಮತ್ತು ಹಿಂದೆ ಸರಿಯುವ ಮಾತೇ ಇಲ್ಲ. ನಾವದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಳ್ಳುವವರಿಗೆ, ಖಂಡಿತ ಮಾಡಿ ತೋರಿಸುವ ಮೂಲಕ ಅವರು ತಪ್ಪು ಎಂದು ಸಾಬೀತುಪಡಿಸೋಣ. ನೀನು ಸಾದಿಸಿ ತೋರಿಸುವೆ. ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ." ಎಂದು ತಂದೆ ಹೇಳುತ್ತಿದ್ದರು. ನನ್ನ ತಂದೆ ನನ್ನ ಮೇಲೆ ಅಷ್ಟೊಂದು ನಂಬಿಕೆಯನ್ನು ಇಟ್ಟಾಗ, ನಾನು ಆ ನಂಬಿಕೆಯನ್ನು ನನ್ನ ಆಂತರಿಕ ಶಕ್ತಿಯಾಗಿಸಿಕೊಂಡು ಮುನ್ನಡೆದಿದ್ದೇನೆ. ಇಂದು, ಪ್ರತಿಯೊಬ್ಬ ಭಾರತೀಯನೂ Sprint ರನ್ನಿಂಗ್ ನಲ್ಲಿ ಮುಂದುವರಿಯುವಂತೆ ಹುರಿದುಂಬಿಸುತ್ತಿದ್ದಾನೆ.

ಪ್ರಧಾನ ಮಂತ್ರಿ: ನೋಡಿ, ನೀವಿಬ್ಬರೂ ನಿಜವಾಗಿಯೂ ಅಸಾಧಾರಣವಾದದ್ದನ್ನು ಸಾಧಿಸಿದ್ದೀರಿ. ಕೇವಲ ಎರಡು ದಿನಗಳ ಅವಧಿಯಲ್ಲಿ, ನೀವು ಜೊತೆಯಾಗಿ ಮೂರು ಬಾರಿ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದೀರಿ. 100 ಮೀಟರ್ ಓಟದ ಬಗ್ಗೆ - ಗುರಿಂದರ್‌ವೀರ್ ಹೇಳಿದಂತೆ - ಜನರು ಸಾಮಾನ್ಯವಾಗಿ ಭಾರತೀಯ ದೇಹವು ಈ ಸ್ಪರ್ಧೆಗೆ ಸೂಕ್ತವಲ್ಲ ಎಂದು ಹೇಳಿಕೊಳ್ಳುತ್ತಾರೆ. ಇಷ್ಟೆಲ್ಲ ಸಂಕಷ್ಟಗಳ ಮಧ್ಯೆಯೂ, ನೀವು ಪರಿಶ್ರಮಪಟ್ಟು ಈ ಸಾಧನೆಗೈದಿದ್ದೀರಿ. “ನಿಮ್ಮ ಯಶಸ್ಸಿನ ಹಿಂದಿನ ಉತ್ಸಾಹ, ದೃಢನಿಶ್ಚಯ, ಮನಸ್ಥಿತಿ ಎಂಥದ್ದು, ಏನು ಯೋಚಿಸಿದ್ದೀರಿ? ಹೇಗೆ ಅಭ್ಯಾಸ ಮಾಡುತ್ತಿದ್ದಿರಿ ಎಷ್ಟು ಕಷ್ಟಕರ ಈ ಪ್ರಕ್ರಿಯೆ?” ಎಂದು ನಿಮ್ಮಿಬ್ಬರನ್ನೂ ನಾನು - ಮತ್ತು 'ಮನದ ಮಾತು' ಕೇಳುಗರೂ ಸಹ ಆಲಿಸಬಯಸುತ್ತಾರೆ.

ಗುರಿಂದರ್‌ವೀರ್: ಹೌದು ಸರ್. ನಾನು ಗುರಿಂದರ್. ಆರಂಭದಲ್ಲಿ, ಸರ್, ಬಹಳಷ್ಟು ಸಂಕಷ್ಟಗಳನ್ನು ಎದುರಿಸಿದೆ. ನಾನು ಸರಿಯಾದ ಮಾರ್ಗದಲ್ಲಿದ್ದೇನೆಯೇ ಅಥವಾ ನಾನು ಸರಿಯಾದ ಆಯ್ಕೆ ಮಾಡಿದ್ದೇನೆಯೇ ಎಂಬ ಸಂದೇಹಗಳು ಹಲವು ಬಾರಿ ಮೂಡಿದವು - ಏಕೆಂದರೆ ಪ್ರತಿ ಬಾರಿಯೂ ನೀವು ಗೆಲ್ಲುವುದಿಲ್ಲ; ಕೆಲವೊಮ್ಮೆ, ನೀವು ಸರಳವಾಗಿ ಕಲಿಯುತ್ತೀರಿ. ನಾನು ಸೋಲನ್ನು ಅನುಭವಿಸಿದಾಗಲೆಲ್ಲಾ, ನನ್ನ ಪ್ರದರ್ಶನವು ನಿರೀಕ್ಷೆಗಳನ್ನು ತಲುಪಲು ಸಾಧ್ಯವಾಗದಿದ್ದಾಗಲೆಲ್ಲಾ, ಅಥವಾ ನಾನು ಗಾಯಗೊಂಡಾಗಲೆಲ್ಲಾ, ನನ್ನ ಕುಟುಂಬವು ನನ್ನೊಂದಿಗೆ ನಿಂತು ಬೆಂಬಲವನ್ನು ನೀಡುತ್ತಿತ್ತು. ಅವರು ನನಗೆ ಧೈರ್ಯ ತುಂಬುತ್ತಾ, "ಪರವಾಗಿಲ್ಲ, ಒಂದು ದಿನ ಉತ್ತಮವಾಗಿಲ್ಲ ಅಥವಾ ಒಂದು ವರ್ಷ ಅಷ್ಟೊಂದು ಉತ್ತಮವಾಗಿಲ್ಲ ಎಂದರೆ ನಿಮ್ಮ ಇಡೀ ಜೀವನ ಹಾಳಾಯ್ತು ಎಂದಲ್ಲ."ಎಂದಿಗೂ ಕನಸು ಕಾಣುವುದನ್ನು ನಿಲ್ಲಿಸಬಾರದು. ಎಂದು ಹುರಿದುಂಬಿಸುತ್ತಿದ್ದರು. ನನ್ನ ತರಬೇತುದಾರ ಕೂಡ ನನಗೆ ಈ ಪಾಠವನ್ನು ಕಲಿಸಿದರು: "ನೀನು ಇದನ್ನು ಸಾಧಿಸಲಾಗದಿದ್ದರೆ, ಬೇರೆ ಯಾರಿಗೂ ಇದು ಸಾಧ್ಯವಿಲ್ಲ." ಹೀಗಾಗಿ, ನಮ್ಮ ಸಮುದಾಯ - ನಮ್ಮ ಸುತ್ತಮುತ್ತಲಿನ ಜನರು - ಈ ರೀತಿ ನಮ್ಮನ್ನು ಪ್ರೋತ್ಸಾಹಿಸಿದಾಗ ಮತ್ತು ಹುರಿದುಂಬಿಸಿದಾಗ, ನಮ್ಮ ಪ್ರೇರಣೆಗೆ ಎಂದಿಗೂ ಧಕ್ಕೆಯಾಗುವುದಿಲ್ಲ.

ಪ್ರಧಾನ ಮಂತ್ರಿ: ಅನಿಮೇಶ್-ಅವರೆ…

ಅನಿಮೇಶ್: ಸರ್, 2021 ರಲ್ಲಿ, ನಾನು ಮೊದಲು ಅಥ್ಲೆಟಿಕ್ಸ್‌ ಪ್ರಾರಂಭಿಸಿದಾಗ, ಎಲ್ಲರೂ ನನಗೆ, "ನೋಡಿ, ಇದು ಹೊಸ ಕ್ಷೇತ್ರ; ನಿಮ್ಮಿಂದ ಇದು ಸಾಧ್ಯವೋ ಇಲ್ಲವೋ ಎಂದು ಸಂಶಯ ವ್ಯಕ್ತಪಡಿಸುತ್ತಿದ್ದರು. ಆಗ ನಾನು, "ಈ ಕ್ಷೇತ್ರಕ್ಕೆ ನಾನು ಕಾಲಿಟ್ಟಿದ್ದೇನೆ, ನಾನು ಅದನ್ನು ನಿಭಾಯಿಸಿಯೇ ತೀರುತ್ತೇನೆ." ಎಂದು ಹೇಳುತ್ತಿದ್ದೆ. ನನ್ನ ತಂದೆ ಕೂಡ ನನಗೆ ನಿರಂತರವಾಗಿ ನೆನಪಿಸುತ್ತಿದ್ದರು: "ನೀನು ಈ ಕ್ಷೇತ್ರಕ್ಕೆ ಪ್ರವೇಶಿಸಿ ಆಗಿದೆ ಎಂದಾದ ಮೇಲೆ, ಎಂದಿಗೂ ಹಿಂತಿರುಗಿ ನೋಡಬೇಡಿ. ಎಲ್ಲರೂ ಇದನ್ನು ಮಾಡುವ ಅಥವಾ ಅದನ್ನು ಮಾಡುವ ಬಗ್ಗೆ ಯೋಚಿಸುತ್ತಾರೆ, ಆದರೆ ಬಹಳ ಕಡಿಮೆ ಜನರು ಮಾತ್ರ ಅದನ್ನು ಅನುಸರಿಸುತ್ತಾರೆ ಮತ್ತು ಅದನ್ನು ಸಾಧಿಸುತ್ತಾರೆ. ನೀನು ಈ ಕ್ಷೇತ್ರ ಪ್ರವೇಶಿಸಿದ್ದೀಯಾದ್ದರಿಂದ, ಅದಕ್ಕೆ ಬದ್ಧವಾಗಿರು; ಇದರಲ್ಲೇ ಮುಂದುವರಿ ಎಂದು ಹೇಳುತ್ತಿದ್ದರು. ನಿನಗೆ ಬೇಕಾದ ಎಲ್ಲವನ್ನೂ ನಾವು ಒದಗಿಸುತ್ತೇವೆ. ಕುಟುಂಬ ಬೆಂಬಲ, ಆರ್ಥಿಕ ಬೆಂಬಲ - ನಾವು ಎಲ್ಲವನ್ನೂ ನೋಡಿಕೊಳ್ಳುತ್ತೇವೆ. ನೀನು ಕಷ್ಟಪಟ್ಟು ಅಭ್ಯಾಸ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸು ಮತ್ತು ಭಾರತೀಯರು ಸಹ ಓಡಬಹುದು ಎಂದು ಭಾರತಕ್ಕೆ ತೋರಿಸು ಎನ್ನುತ್ತಿದ್ದರು. ಜನರು ನನಗೆ ಮತ್ತು ಇತರರಿಗೆ ಹೇಳುತ್ತಿದ್ದರು - 'ಸಬ್-10' ಅಥವಾ 'ಸಬ್-10.1' ಸ್ಪ್ರಿಂಟ್ ರನ್ನಿಂಗ್ ಗೆ ಭಾರತೀಯರ ಆನುವಂಶಿಕ ರಚನೆ ಸೂಕ್ತವಾಗಿಲ್ಲ ಎಂದು. ಆದರೆ ಈಗ, ಭಾರತೀಯರು ನಿಜವಾಗಿಯೂ ಅದನ್ನು ಮಾಡಬಹುದು ಎಂದು ನಾವಿಬ್ಬರೂ ಸಾಬೀತುಪಡಿಸಿದ್ದೇವೆ. ಇದು ನಮಗೆ ತುಂಬಾ ಕಷ್ಟಕರವೇನಲ್ಲ. ನಾವು ಏನನ್ನಾದರೂ ಸಾಧಿಸಲು ಸಮರ್ಥರಾಗಿದ್ದೇವೆ." ಆದ್ದರಿಂದ, ಸರ್, ಈ ಎಲ್ಲಾ ವಿಷಯಗಳು ನನ್ನನ್ನು ಬಹಳ ಪ್ರೇರೇಪಿಸುತ್ತವೆ. ನಾವು ನಮ್ಮ ತರಬೇತಿಯನ್ನು ಮುಂದುವರಿಸುತ್ತಿದ್ದಂತೆ, ನಿರಂತರವಾಗಿ ನಮ್ಮ ವೈಯಕ್ತಿಕ ದಾಖಲೆಗಳನ್ನು ಮುರಿಯುತ್ತಿದ್ದೇವೆ. ಇದು ಇತರ ಭಾರತೀಯರಿಗೂ - ಅವರು ಸಹ ಅಂತಹ ಸಾಧನೆಗಳನ್ನು ಸಾಧಿಸಬಹುದು ಎಂಬುದನ್ನು ಸ್ಪಷ್ಪಡಿಸುತ್ತಿದೆ. ನಾವು ಇನ್ನೂ ಹೆಚ್ಚಿನದನ್ನು ಸಾಧಿಸುವ ಉದ್ದೇಶ ಹೊಂದಿದ್ದೇವೆ, ಸರ್. ಇದಲ್ಲದೆ, ಮುಂಬರುವ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ನಾವಿಬ್ಬರೂ ಆಯ್ಕೆಯಾಗಿರುವುದರಿಂದ, ಆ ಸ್ಪರ್ಧೆಯಲ್ಲಿ ಇನ್ನೂ ಉತ್ತಮ ಪ್ರದರ್ಶನ ನೀಡಲು ದೃಢನಿಶ್ಚಯ ಕೈಗೊಂಡಿದ್ದೇವೆ.

ಪ್ರಧಾನ ಮಂತ್ರಿ: ಸರಿ, ನೋಡಿ— ನನ್ನ ಮನದಲ್ಲೂ ಒಂದು ಕುತೂಹಲವಿದೆ, ಮತ್ತು ಇತರರಿಗೂ ಹಾಗೆಯೇ ಇರಬಹುದು ಎಂದುಕೊಳ್ಳುತ್ತೇನೆ. ನೀವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ನಾನು ಕೇಳಿದ್ದೇನೆ. ನಿಮ್ಮಿಬ್ಬರ ನಡುವೆ ಏನಾದರೂ ಒಪ್ಪಂದ ಅಥವಾ ಸ್ನೇಹಪರ ಪೈಪೋಟಿ ನಡೆಯುತ್ತಿದೆಯೇ - "ನೀನು ನನ್ನ ದಾಖಲೆಯನ್ನು ಮುರಿದರೆ, ನಾನು ನಿನ್ನ ದಾಖಲೆಯನ್ನು ಮುರಿಯುತ್ತೇನೆ"? ಎಂದು. ಅನಿಮೇಶ್, ನೀವೇಕೆ ಈ ಕುರಿತು ಮೊದಲು ಹೇಳಬಾರದು?

ಅನಿಮೇಶ್: ಸರ್, ಹಿಂದಿನ ದಾಖಲೆ 10.18 ಸೆಕೆಂಡುಗಳದ್ದಾಗಿತ್ತು - ಅದು ನಾನೇ ಮಾಡಿದ ದಾಖಲೆ. ನಂತರ, ಸೆಮಿಫೈನಲ್‌ನಲ್ಲಿ, ಸೋದರ ಗುರಿಂದರ್‌ವೀರ್ 10.17 ಸೆಕೆಂಡುಗಳ ಸಮಯದೊಂದಿಗೆ ಅದನ್ನು ಮುರಿದರು. ತರುವಾಯ, ಎರಡನೇ ಸೆಮಿಫೈನಲ್‌ನಲ್ಲಿ, ನಾನು 10.15 ಸೆಕೆಂಡುಗಳ ಸಮಯದೊಂದಿಗೆ ಮತ್ತೊಮ್ಮೆ ದಾಖಲೆ ಮಾಡಿದೆ. ಆದ್ದರಿಂದ, ಆ ಕ್ಷಣದಲ್ಲಿ - ನನ್ನ ಸೆಮಿಫೈನಲ್ ನಡೆದಾಗ - ನಾವಿಬ್ಬರೂ ನಿಜವಾಗಿಯೂ ಸಂತೋಷಪಟ್ಟೆವು. "ಹೌದು, ಇದು ಅದ್ಭುತ! ಇಂದು ದಾಖಲೆ ಮುರಿಯಿತು. ಮತ್ತು ನಾವಿಬ್ಬರೂ - ಒಟ್ಟಿಗೆ ಅದನ್ನು ಮುರಿದಿದ್ದೇವೆ” ಎಂದು. ಏಕೆಂದರೆ, ಸ್ಪರ್ಧೆಯ ಸಮಯದಲ್ಲಿ ಸ್ವಾಭಾವಿಕವಾಗಿ ಪೈಪೋಟಿಯ ಭಾವನೆ ಇದ್ದರೂ, ನಾವಿಬ್ಬರೂ ಮೊದಲೇ ದೃಢ ನಿರ್ಧಾರವನ್ನು ಮಾಡಿದ್ದೆವು. ವಾಸ್ತವವಾಗಿ, ಇದಕ್ಕೂ ಮೊದಲು, ನಾವು ಸೌದಿ ಅರೇಬಿಯಾಕ್ಕೆ ಸ್ಪರ್ಧಿಸಲು ಪ್ರಯಾಣಿಸಿದ್ದೆವು ಮತ್ತು ನಾವು ಅಲ್ಲಿಯೂ ರೂಮ್‌ಮೇಟ್‌ಗಳಾಗಿದ್ದೆವು. ಆಗಲೂ, ಭಾರತೀಯ spint running ಮುಂದಕ್ಕೆ ಕೊಂಡೊಯ್ಯುವುದು ನಮ್ಮ ಕರ್ತವ್ಯ, ಆ ಜವಾಬ್ದಾರಿ ನಮ್ಮ ಮೇಲಿದೆ ಮತ್ತು ನಮ್ಮ ಸಾಧನೆ ಎಲ್ಲರನ್ನೂ ಪ್ರೇರೇಪಿಸಲು ಸಹಾಯ ಮಾಡುತ್ತದೆ ಎಂದು ನಾವು ಚರ್ಚಿಸುತ್ತಿದ್ದೆವು.

ಪ್ರಧಾನ ಮಂತ್ರಿ: ಗುರಿಂದರ್‌ವೀರ್, ನೀವು ಏನು ಹೇಳ ಬಯಸುತ್ತೀರಿ?

ಪ್ರಧಾನ ಮಂತ್ರಿ: ನಾವಿಬ್ಬರೂ ಅಸಾಧಾರಣ ಪ್ರದರ್ಶನ ನೀಡುವುದೆಂದು ನಿರ್ಧರಿಸಿದ್ದೆವು. ಆದ್ದರಿಂದ, ನಮ್ಮಲ್ಲಿ ಯಾರಿಗಾದರೂ ಏನಾದರೂ ಅಗತ್ಯವಿದ್ದಾಗ - ಸರ್ - ನಾವು ಪರಸ್ಪರ ಬೆಂಬಲಕ್ಕೆ ನಿಲ್ಲುತ್ತೇವೆ. ಉದಾಹರಣೆಗೆ, ದಾಖಲೆ ಸ್ಥಾಪಿಸುವ ಮುನ್ನ- ಮೊದಲು ನಾನು ದಾಖಲೆಯನ್ನು ಮುರಿದೆ, ನಂತರ ಅನಿಮೇಶ್ ದಾಖಲೆ ಮಾಡಿದರು. ನಾವು ಅಭ್ಯಾಸ ಮಾಡುತ್ತಿದ್ದಾಗ, ನಾನು ಅನಿಮೇಶ್‌ಗೆ ಪಾಯಿಂಟರ್‌ಗಳನ್ನು ನೀಡುತ್ತಿದ್ದೆ: "ಅನಿಮೇಶ್, ಆ ಆರಂಭಿಕ ಬ್ಲಾಕ್ ಸರಿಯಾಗಿ ಕಾಣುತ್ತದೆ; ಅಲ್ಲಿ ಕುಳಿತು stride ಅಭ್ಯಾಸ ಮಾಡು. ಇಲ್ಲಿ ನಮ್ಮ ಅಭ್ಯಾಸ ಮಾಡೋಣ - ಈ ಸ್ಥಳ ಅದಕ್ಕೆ ಸೂಕ್ತವಾಗಿದೆ." ಎಂದು. ಆದ್ದರಿಂದ, ನಾವು ಒಬ್ಬರಿಗೊಬ್ಬರು ಸಹಾಯ ಮಾಡುತ್ತೇವೆ; ನಾವು ಪರಸ್ಪರ ಸಹಾಯ ಮಾಡಿದಾಗ, ಇನ್ನೊಬ್ಬ ವ್ಯಕ್ತಿ ಸುಧಾರಿಸುತ್ತಾನೆ ಮತ್ತು ನಾವು ಸಹ ಸುಧಾರಿಸುತ್ತೇವೆ. ಆ ಸ್ನೇಹಭಾವ ಅತ್ಯಗತ್ಯ. ಆದರೆ ಸರ್, ನಾವು ಟ್ರ್ಯಾಕ್‌ನಿಂದ ಹೊರಗಿದ್ದಾಗ - ಸ್ಪರ್ಧೆಯ ಕ್ಷೇತ್ರದ ಹೊರಗೆ ನಾವು ಸ್ನೇಹಿತರು. ಆದರೆ ನಾವು ಟ್ರ್ಯಾಕ್‌ಗೆ ಕಾಲಿಟ್ಟ ಕ್ಷಣ, ನಾವು ಸ್ಪರ್ಧಿಗಳಾಗುತ್ತೇವೆ. ಆ ಸಮಯದಲ್ಲಿ, ಮನಸ್ಥಿತಿಯು "ನಾನು ಅವನಿಗಿಂತ ವೇಗವಾಗಿ ಓಡಲಿದ್ದೇನೆ" ಮತ್ತು "ನಾನು ಇವನಿಗಿಂತ ವೇಗವಾಗಿ ಓಡಲಿದ್ದೇನೆ!" ಎಂಬುದಕ್ಕೆ ಬದಲಾಗುತ್ತದೆ.

ಪ್ರಧಾನ ಮಂತ್ರಿ: ನೋಡಿ, ನಿಮ್ಮಲ್ಲಿ ಸ್ಪರ್ಧೆ ಎಂಬುದು ರಾಷ್ಟ್ರದ ಪ್ರತಿಷ್ಠೆಯನ್ನು ಹೆಚ್ಚಿಸಲು - ಭವಿಷ್ಯದಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಕೈಗೊಳ್ಳಲಾಗಿದೆ ಮತ್ತು ನೀವು ನಿಜವಾಗಿಯೂ ಸಕಾರಾತ್ಮಕ ಮನೋಭಾವದಿಂದ ಅದರಲ್ಲಿ ತೊಡಗಿಸಿಕೊಂಡಿದ್ದೀರಿ. ನಿಮ್ಮ ಈ "ಕ್ರೀಡಾ ಮನೋಭಾವ" - ಸ್ಪರ್ಧಿಸುವುದು, ಪರಸ್ಪರ ಸವಾಲು ಹಾಕುವುದು, ಮುಂದೆ ಸಾಗಲು ಶ್ರಮಿಸುವುದು ಮತ್ತು ಪರಸ್ಪರ ಮುಂದುವರಿಯಲು ಸಹಾಯ ಮಾಡುವುದರ ನಡುವಿನ ಸಮತೋಲನ - ನಿಜವಾಗಿಯೂ ಗಮನಾರ್ಹವಾಗಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ನೀವು ಅದ್ಭುತವಾದ ಕೆಲಸ ಮಾಡಿದ್ದೀರಿ. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ. ನೀವು ರಾಷ್ಟ್ರಕ್ಕೆ ಕೀರ್ತಿ ತರುತ್ತೀರಿ ಎಂದು ನನಗೆ ಸಂಪೂರ್ಣ ನಂಬಿಕೆ ಇದೆ. ಇದೇ ರೀತಿ ಶ್ರಮಿಸುತ್ತಿರಿ; ನೀವು ಹೆಚ್ಚಿನ ಪ್ರಗತಿಯನ್ನು ಸಾಧಿಸುವ ಗುರಿ ಹೊಂದಿದ್ದೀರಿ. ನಿಮ್ಮಿಬ್ಬರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು.

ಗುರಿಂದರ್‌ವೀರ್ / ಅನಿಮೇಶ್: ಧನ್ಯವಾದಗಳು ಸರ್. ತುಂಬಾ ಧನ್ಯವಾದಗಳು.

ಪ್ರಧಾನ ಮಂತ್ರಿ: ತುಂಬಾ ಧನ್ಯವಾದಗಳು.

#####

ನನ್ನ ಪ್ರೀತಿಯ ದೇಶಬಾಂಧವರೆ,

ಈ ಸಮಯದಲ್ಲಿ, ದೇಶದ ಬಹು ಭಾಗಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸುಡುವ ಸೂರ್ಯ ಮತ್ತು ಬಿಸಿ ಗಾಳಿಯಂತಹ ಹವಾಮಾನದ ಸಮಯದಲ್ಲಿ ನಿಮ್ಮನ್ನು ನೀವು ಕಾಪಾಡಿಕೊಳ್ಳುವುದು ಅತ್ಯಗತ್ಯ. ನೀರು ಕುಡಿಯುತ್ತಿರಿ. ನೀವು ಬಿಸಿಲಿನಲ್ಲಿ ಹೊರಗೆ ಹೋಗಬೇಕಾದರೆ, ಎಚ್ಚರಿಕೆಯಿಂದ ಹೋಗಿ. ಅಲ್ಲದೆ, ಈ ನಿಟ್ಟಿನಲ್ಲಿ ವಿವಿಧ ಸರ್ಕಾರಿ ಇಲಾಖೆಗಳು ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಮರೆಯಬೇಡಿ.

ಸ್ನೇಹಿತರೇ,

ನಮ್ಮ ದೇಶದಲ್ಲಿ ಬೇಸಿಗೆಯನ್ನು ಎದುರಿಸಲು ಪರಿಹಾರಗಳು ಹೆಚ್ಚಾಗಿ ನಮ್ಮ ಅಡುಗೆಮನೆಗಳಲ್ಲಿ ಕಂಡುಬರುತ್ತವೆ. ತಾಪಮಾನ ತೀವ್ರಗೊಳ್ಳುತ್ತಿದ್ದಂತೆ, ನಮ್ಮ ಮನೆಗಳಲ್ಲಿನ ಸ್ವಾದ ಬದಲಾಗುವುದನ್ನು, ಪಾಕ ಪದ್ಧತಿ ರೂಪಾಂತರಗೊಳ್ಳುವುದನ್ನು ನೀವು ಸಹ ಗಮನಿಸಿರಬಹುದು. ಕೆಲವು ಸ್ಥಳಗಳಲ್ಲಿ, ನೀರಿಗಾಗಿ ಮಣ್ಣಿನ ಮಡಕೆಗಳನ್ನು ಬಳಸಲಾರಂಭಿಸಿದರೆ, ಇನ್ನು ಕೆಲವೆಡೆ, ಮೊಸರನ್ನು ಹೆಪ್ಪು ಹಾಕಿ ಸಿದ್ಧಪಡಿಸಲಾಗುತ್ತದೆ. ಇನ್ನು ಕೆಲವೆಡೆ, ಮಾವಿನ ಕಾಯಿಗಳನ್ನು ಕುದಿಸಲಾಗುತ್ತದೆ - ಇದು ಸ್ಥಳೀಯ ಪಾನೀಯಗಳ ಋತುವಿನ ಆರಂಭವನ್ನು ಸೂಚಿಸುತ್ತದೆ. ನೀವು ಖಂಡಿತವಾಗಿಯೂ ಈ ಸ್ಥಳೀಯ ಪಾನೀಯಗಳ ಬಗ್ಗೆ ನಿಮಗೂ ಗೊತ್ತಿರಬಹುದು. ನೀವು ಉತ್ತರ ಭಾರತಕ್ಕೆ ಪ್ರಯಾಣಿಸಿದರೆ, ಅನೇಕ ಸ್ಥಳಗಳಲ್ಲಿ ನೀವು 'ಆಮ್ ಪನ್ನಾ'ವನ್ನು ಕಾಣಬಹುದು - ಇದು ಮಾವಿನ ಕಾಯಿಯ ರುಚಿ ಜೊತೆಗೆ ಬಿಸಿಲಿನ ತಾಪದಿಂದ ಉಪಶಮನ ಒದಗಿಸುತ್ತದೆ. ಪಂಜಾಬ್ ಅಥವಾ ಹರಿಯಾಣಕ್ಕೆ ಹೋದರೆ ನೀವು ದೊಡ್ಡ ಲೋಟಗಳಲ್ಲಿ ನೀಡುವ 'ಲಸ್ಸಿ'ಯ ಸ್ವಾದವನ್ನು ಕಾಣುತ್ತೀರಿ - ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಮಜ್ಜಿಗೆ ಬಹುತೇಕ ಎಲ್ಲಾ ಊಟಗಳಿಗೆ ಅತ್ಯಗತ್ಯ ಸಂಗಾತಿಯಾಗಿರುತ್ತದೆ. ಮತ್ತು ಬಿಹಾರ, ಜಾರ್ಖಂಡ್ ಮತ್ತು ಪೂರ್ವ ಉತ್ತರ ಪ್ರದೇಶದಲ್ಲಿ, 'ಸತ್ತು ಶರ್ಬತ್' ಲಭಿಸುತ್ತದೆ- ಅದರ ಸ್ವಾದ ನಿಜವಾಗಿಯೂ ಹೋಲಿಸಲಾಗದಂತಹದ್ದು, ಏಕೆಂದರೆ ಅದು ನಿಮ್ಮ ಹಸಿವನ್ನು ನೀಗಿಸುವುದಲ್ಲದೆ ನಿಮಗೆ ಶಕ್ತಿಯನ್ನು ಕೊಡುತ್ತದೆ. ಕೊಂಕಣ ಪ್ರದೇಶ ಮತ್ತು ಗೋವಾದಲ್ಲಿ, ನಿಮಗೆ 'ಕೋಕಮ್ ಶರ್ಬತ್' ಮತ್ತು 'ಸೋಲ್ ಕಡಿ' ಸಿಗುತ್ತದೆ. ದಕ್ಷಿಣ ಭಾರತದಲ್ಲಿ, 'ಪಾನಕಂ', 'ನೀರ್ ಮೋರ್' ಮತ್ತು 'ಸಾಂಬಾರ್' ಇವೆ; ಮತ್ತು ಒಡಿಶಾದಲ್ಲಿ, 'ಬೇಲ್ ಪನಾ' ಅಂದರೆ ಬಳುವಲಕಾಯಿಯ ಪಾನಕ. ಇವು ಕೇವಲ ಪಾನೀಯಗಳಲ್ಲ; ಅವು ಭಾರತದ ವೈವಿಧ್ಯಮಯ ಪ್ರದೇಶಗಳ ಸಾಂಸ್ಕೃತಿಕ ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಇದಲ್ಲದೆ, ಅವು 'ಏಕ್ ಭಾರತ್, ಶ್ರೇಷ್ಠ ಭಾರತ' ದ ಚೈತನ್ಯದ ಕುರುಹೂ ಆಗಿದೆ. ಒಂದು ವಿಷಯವನ್ನು ಖಂಡಿತ ನೆನಪಿನಲ್ಲಿಡಿ: ಇವುಗಳಲ್ಲಿ ಬಹಳಷ್ಟು ಸಿದ್ಧತೆಗಳು ನಮ್ಮ ಅಡುಗೆಮನೆಗಳು ಮತ್ತು ನಮ್ಮ ಹೊಲಗದ್ದೆಗಳಿಂದಲೇ ಹುಟ್ಟಿಕೊಂಡಿರುವಂಥವಾಗಿವೆ. ಅವುಗಳಿಗೆ ಪ್ರಮುಖ ವಾಣಿಜ್ಯ ಬ್ರ್ಯಾಂಡಿಂಗ್‌ನ ಬೆಂಬಲವಿಲ್ಲದಿರಬಹುದು, ಆದರೆ ಅವು ತಲೆಮಾರುಗಳ ಅನುಭವ ಇದರಲ್ಲಿ ಮಿಳಿತವಾಗಿದೆ. ಈ ಬೇಸಿಗೆ ಋತುವಿನಲ್ಲಿ ಈ ಸ್ಥಳೀಯ ಪಾನೀಯಗಳನ್ನು ಎಲ್ಲರೂ ಸಂಪೂರ್ಣವಾಗಿ ಆನಂದಿಸಿ.

ಸ್ನೇಹಿತರೇ,

ಬೇಸಿಗೆ ಬರುತ್ತಿದ್ದಂತೆಯೇ ಪ್ರತಿಯೊಂದು ಮನೆಯಲ್ಲಿಯೂ ಮಾತಿನ ಮಧ್ಯೆ ಬರುವ ಮತ್ತೊಂದು ವಿಷಯವೆಂದರೆ ಅದು ಮಾವು. ಮನೆಗಳಲ್ಲಿ,  ಮಾವು ಮಾತುಕತೆಯ ವಿಷಯವಾಗುತ್ತದೆ. ಭಾರತದಲ್ಲಿ ಬೇಸಿಗೆ ಋತುವಿನಲ್ಲಿ ಮಾವಿನ ಬಗ್ಗೆ ಮಾತುಕತೆಯಾಡದ ಮನೆಯೇ ಇಲ್ಲ ಎಂದರೆ ತಪ್ಪಾಗಲಾರದು. ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಮಾವು, ತನ್ನದೇ ಆದ ರುಚಿ, ತನ್ನದೇ ಆದ ಪರಿಮಳ ಇರುತ್ತದೆ. ಮಹಾರಾಷ್ಟ್ರ ಮತ್ತು ಕೊಂಕಣದ ಹಾಪಸ್, ಅಲ್ಫಾನ್ಸೊ, ಗುಜರಾತ್‌ ನ ಕೇಸರ್,  ಇದಂತೂ ಮಾವಿನ ರಸದ ಜೀವಾಳ, ಉತ್ತರ ಪ್ರದೇಶದ ದಶಹರೀ, ಮತ್ತು ನನ್ನ ಕಾಶಿಯ ಲಂಗ್ಡಾ. ಅಂದಹಾಗೆ, ಲಂಗ್ಡಾ ಮಾವಿಗೆ ಒಂದು ವಿಶೇಷತೆಯಿದೆ. ಹಣ್ಣಾದ ನಂತರವೂ, ಅದರ ಬಣ್ಣ ಕೆಲವೊಮ್ಮೆ ಹಸಿರಾಗಿಯೇ ಇರುತ್ತದೆ. ಬಿಹಾರದ ಜರ್ದಾಲು ಹಣ್ಣಿನ ಸುವಾಸನೆಯನ್ನು ದೂರದಿಂದಲೇ ಗುರುತಿಸಬಹುದು. ಚೌಸಾ, ಮಾಲ್ಡಾ - ಪ್ರತಿಯೊಂದು ಹೆಸರಿಗೂ ಅದರೊಂದಿಗೆ ಸಂಬಂಧಿಸಿದ ನೆನಪುಗಳಿವೆ. ದಕ್ಷಿಣ ಭಾರತಕ್ಕೆ ಹೋಗಿ ನೋಡಿ, ಅಲ್ಲಿ ಬಂಗನಪಲ್ಲಿ, ತೋತಾಪುರಿ, ನೀಲಂ, ಮಲ್ಗೋವಾ, ಬಂಗಾಳದಲ್ಲಿ ಹಿಮಸಾಗರ್, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸುವರ್ಣರೇಖಾ ಇವೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ, ಸ್ಥಳ ಬದಲಾದಂತೆ, ಮಾವಿನ ರೂಪ, ಬಣ್ಣ ಮತ್ತು ರುಚಿಯೂ ಬದಲಾಗುತ್ತದೆ. ಸ್ನೇಹಿತರೇ ಮಾವಿನ ಈ ಪಯಣ ಈಗ ಗ್ರಾಮದಿಂದ, ಜಾಗತಿಕ ಮಾರುಕಟ್ಟೆಯವರೆಗೂ ತಲುಪುತ್ತಿದೆ. ಇಂದು ‘ಮನದ ಮಾತಿನ’ ಮೂಲಕ ನಾನು ಮಾವು ಕೃಷಿಯಲ್ಲಿ ತೊಡಗಿರುವ ರೈತ ಸೋದರ-ಸೋದರಿಯರನ್ನು ಪ್ರಶಂಸಿಸುತ್ತೇನೆ. ನೀವು ದೇಶದ ಕೃಷಿ ಅರ್ಥ ವ್ಯವಸ್ಥೆಗೆ ಕೇವಲ ಸಾಮಾನ್ಯ ರೈತರಲ್ಲ, ನೀವು ವಿಶೇಷ ರೈತರು. ಇದನ್ನು ಹೀಗೆಯೇ ಮುಂದವರಿಸಿ.

ಸ್ನೇಹಿತರೇ,

ಬೇಸಿಗೆಯ ಈ ದಿನಗಳಲ್ಲಿ, ಶಾಲೆಗಳಿಗೆ ರಜೆಯಂತೂ ಇದ್ದೇ ಇರುತ್ತದೆ, ಆದರೆ, ನಿಮಗೂ ಪ್ರವೇಶ ಪಡೆದುಕೊಳ್ಳಬೇಕೆಂದು ಮನಸ್ಸಾಗುವ ಒಂದು ತರಗತಿಯ ಬಗ್ಗೆ ನಾನು ಈಗ ಹೇಳುತ್ತೇವೆ. ಸ್ನೇಹಿತರೇ, ಮಕ್ಕಳು, ಯುವಜನರು ಮತ್ತು ವೃದ್ಧರು ಬರುವ, ಯಾವುದೇ ಶುಲ್ಕವಿಲ್ಲದ, ದೊಡ್ಡ ಕಟ್ಟಡವಿಲ್ಲದ, ತರಗತಿ ಕೊಠಡಿಗಳಿಲ್ಲದ, ಆದರೆ ನದಿಯಲ್ಲಿ ನಡೆಯುವಂತಹ ಒಂದು ಆಸಕ್ತಿದಾಯಕ ಶಾಲೆಯ ಬಗ್ಗೆ ಕಲ್ಪನೆ ಮಾಡಿಕೊಳ್ಳಿ.

ಸ್ನೇಹಿತರೇ,

ಇದೊಂದು ಕತೆಯಲ್ಲ. ಇದೊಂದು ಪ್ರಾಮಾಣಿಕ ಪ್ರಯತ್ನ. ಕೇರಳದ ಆಲುವಾದಲ್ಲಿ, ಸಾಜಿ ವಲಾಶೇರಿಲ್ ಅವರು ಇಂತಹದ್ದೇ ಒಂದು swimming club ನಡೆಸುತ್ತಿದ್ದಾರೆ. ಇಲ್ಲಿಯವರೆಗೂ 15 ಸಾವಿರಕ್ಕೂ ಅಧಿಕ ಮಂದಿ ಇಲ್ಲಿ ಈಜುವುದನ್ನು ಕಲಿತಿದ್ದಾರೆ. ಸಾಜೀ ಅವರು ದಿವ್ಯಾಂಗ ಮಕ್ಕಳಿಗೆ ಕೂಡಾ ಈಜು ಕಲಿಸಿದ್ದಾರೆ. ಈ ಪ್ರಯತ್ನದ ಹಿಂದೆ, ಒಂದು ನೋವು ಕೂಡಾ ಅಡಗಿದೆ. ಕೆಲವು ವರ್ಷಗಳ ಹಿಂದೆ, ಒಂದು ದೋಣಿ ಅಪಘಾತದಲ್ಲಿ ಹಲವಾರು ವಿದ್ಯಾರ್ಥಿಗಳ ಸಾವು ಸಂಭವಿಸಿತ್ತು. ಈ ದುರ್ಘಟನೆಯು ಸಾಜೀ ಅವರನ್ನು ತೀವ್ರವಾಗಿ ಬೆಚ್ಚಿಬೀಳಿಸಿತು. ಆ ಮಕ್ಕಳಿಗೆ ಈಜುವುದು ಹೇಗೆಂದು ತಿಳಿದಿದ್ದರೆ, ಬಹುಶಃ ಬದುಕುಳಿಯುತ್ತಿದ್ದರೇನೋ ಎಂಬ  ಯೋಚನೆಯಿಂದಲೇ ಆರಂಭವಾದದ್ದು -  ಅವರ ಈ ಅಭಿಯಾನ.

ಸ್ನೇಹಿತರೇ,

ಸಾಜಿ ವಲಾಶೇರಿಲ್ ಅವರ ಜೀವನವು ನಮಗೆ ಒಂದು ದೊಡ್ಡ ಪಾಠವನ್ನು ಕಲಿಸುತ್ತದೆ. ಜನರಿಗೆ ಸೇವೆ ಸಲ್ಲಿಸಲು ಅಪಾರ ಸಂಪನ್ಮೂಲಗಳು ಬೇಕಾಗಿಲ್ಲ - ಬೇಕಾಗಿರುವುದು ಒಳ್ಳೆಯ ಉದ್ದೇಶ ಮತ್ತು ಸ್ಥಿರವಾದ ಪ್ರಯತ್ನ. ಇವುಗಳಿಂದ ಸಾವಿರಾರು ಜನರ ಜೀವನದಲ್ಲಿ ಪರಿವರ್ತನೆ ತರಬಹುದು.

ನನ್ನ ಪ್ರೀತಿಯ ದೇಶವಾಸಿಗೇಳ,

ಕಳೆದ ಕೆಲವು ದಿನಗಳಲ್ಲಿ ನನಗೆ ಯುರೋಪ್ ಮತ್ತು ನೆದರ್ ಲ್ಯಾಂಡ್ಸ್ ಗೆ ಹೋಗುವ ಅವಕಾಶ ದೊರೆತಿತ್ತು. ನಾನು ಅಲ್ಲಿ ಹಲವಾರು ಸಭೆಗಳಲ್ಲಿ ಪಾಲ್ಗೊಂಡಿದ್ದೆ. ಆ ವೇಳೆ ಪ್ರತಿಯೊಬ್ಬ ಭಾರತೀಯನ ಮನಸ್ಸನ್ನೂ ಹೆಮ್ಮೆಯಿಂದ ತುಂಬುವಂತೆ ಮಾಡುವ ಘಳಿಗೆಯೊಂದು ಬಂದಿತ್ತು. ನೆದರ್ ಲ್ಯಾಂಡ್ಸ್ ನಲ್ಲಿ ಆಯೋಜನೆಯಾಗಿದ್ದ ಒಂದು ವಿಶೇಷ ಸಮಾರಂಭದಲ್ಲಿ ಚೋಳರ ಕಾಲದ ಪ್ರಾಚೀನ ತಾಮ್ರದ ಫಲಕಗಳನ್ನು ಭಾರತಕ್ಕೆ ಹಿಂದಿರುಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ನೆದರ್ ಲ್ಯಾಂಡ್ಸ್ ನ ಪ್ರಧಾನಿಯವರೂ ಉಪಸ್ಥಿತರಿದ್ದರು. ಈ ತಾಮ್ರ ಫಲಕಗಳ ಕುರಿತಂತೆ ನನಗೆ ದೇಶ ವಿದೇಶಗಳಿಂದ ಸತತವಾಗಿ ಸಂದೇಶಗಳು ಬರುತ್ತಲೇ ಇವೆ. ಜನರು ಸಂತಸ, ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಪ್ರಪಂಚದಾದ್ಯಂತದ ತಮಿಳು ಸಮುದಾಯದಲ್ಲಿ ಇದರ ಬಗ್ಗೆ ವಿಶೇಷ ಉತ್ಸಾಹವಿದೆ.

ಸ್ನೇಹಿತರೇ,

ಈ ತಾಮ್ರ ಫಲಕಗಳ ಬಗ್ಗೆ ಜನರಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಆದ್ದರಿಂದ ಇಂದು ಅವುಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ನಾನು ಹಂಚಿಕೊಳ್ಳಲು ಬಯಸುತ್ತೇನೆ. ಇದರಲ್ಲಿ 21 ದೊಡ್ಡ ಮತ್ತು ಮೂರು ಸಣ್ಣ ತಾಮ್ರದ ಫಲಕಗಳಿವೆ. ಅವು ಮುಖ್ಯವಾಗಿ ಮೊದಲನೇ ರಾಜ ರಾಜೇಂದ್ರ ಚೋಳ ಅವರ ತಂದೆ ರಾಜ ರಾಜರಾಜ ಚೋಳ ನೀಡಿದ ವಾಗ್ದಾನವನ್ನು ಈಡೇರಿಸುವುದಕ್ಕೆ ಸಂಬಂಧಿಸಿವೆ. ಅವು ಆನೈಮಂಗಲಂ ಗ್ರಾಮವನ್ನು ಬೌದ್ಧ ಮಠಕ್ಕೆ ದಾನ ಮಾಡಿದ್ದನ್ನು ಉಲ್ಲೇಖಿಸುತ್ತವೆ. ಈ ತಾಮ್ರ ಫಲಕಗಳು ಚೋಳ ರಾಜವಂಶದ ಸಾಧನೆಗಳನ್ನೂ ವಿವರಿಸುತ್ತವೆ. ಅವು ಚೋಳ ಸಾಮ್ರಾಜ್ಯದ ಬಲವಾದ ಸಮುದ್ರ ಶಕ್ತಿಯನ್ನು ಬಹಿರಂಗಪಡಿಸುತ್ತವೆ. ಅವು ಆಗ್ನೇಯ ಏಷ್ಯಾದ ದೇಶಗಳೊಂದಿಗಿನ ಅವರ ಸಂಬಂಧಗಳ ಬಗ್ಗೆಯೂ ಮಾಹಿತಿಯನ್ನು ಒದಗಿಸುತ್ತವೆ.

ಚೋಳ ಸಾಮ್ರಾಜ್ಯದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮೆಲ್ಲರಿಗೂ ಬಹಳ ಹೆಮ್ಮೆಯಿದೆ. ಸ್ನೇಹಿತರೆ, ನಮ್ಮ ಸರ್ಕಾರವು ಭಾರತದ ಈ ಅಮೂಲ್ಯ ಪರಂಪರೆಯನ್ನು ಸಂರಕ್ಷಿಸಲು ಸತತವಾಗಿ ಪ್ರಯತ್ನ ಮಾಡುತ್ತಲೇ ಇದೆ. ಈ ಅನುಕ್ರಮದಲ್ಲಿ ‘ಜ್ಞಾನ ಭಾರತಂ ಅಭಿಯಾನ’ ದ ಅಡಿಯಲ್ಲಿ ಛತ್ತೀಸ್ ಗಢ್ ನ ಮಲ್ಹಾರ್ ನಲ್ಲಿ ಕೂಡಾ ಒಂದು ಮಹತ್ವಪೂರ್ಣ ಅನ್ವೇಷಣೆ ಮಾಡಲಾಗಿದೆ. ಇಲ್ಲಿ ಮೂರು ಅಪರೂಪದ ತಾಮ್ರದ ಫಲಕಗಳು ಪತ್ತೆಯಾಗಿವೆ. ಇವು ಪಾಂಡುವಂಶೀ ರಾಜವಂಶದ ಮಹರ್ಷಿ ಬಾಲಾರ್ಜುನನ ಆಳ್ವಿಕೆಯ ಕಾಲದ್ದೆಂದು ನಂಬಲಾಗಿದೆ. ಈ ಶಾಸನಗಳು ಆರು-ಏಳನೇ ಶತಮಾನದ್ದು ಅಂದರೆ ಹದಿನಾಲ್ಕು ನೂರರಿಂದ ಹದಿನೈದು ನೂರರಷ್ಟು ಹಳೆಯದೆಂದೂ, ಈ ತಾಮ್ರದ ಫಲಕಗಳನ್ನು ಪ್ರಾಚೀನ ಬ್ರಾಹ್ಮಿ ಲಿಪಿ ಮತ್ತು ಪಾಲಿ ಭಾಷೆಯಲ್ಲಿ ಬರೆಯಲಾಗಿದೆಯೆಂದೂ ತಜ್ಞರು ನಂಬುತ್ತಾರೆ. ಇವುಗಳಿಂದ ಆ ಕಾಲದ ಆಡಳಿತ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಪ್ರಮುಖ ಮಾಹಿತಿ ದೊರೆಯುತ್ತವೆ.

ಸ್ನೇಹಿತರೇ,

ನಾವು ಭಾರತೀಯರಲ್ಲಿ ಖಗೋಳವಿಜ್ಞಾನ ಅಂದರೆ astronomy ಬಗ್ಗೆ ಯಾವಾಗಲೂ ವಿಶೇಷ ಆಕರ್ಷಣೆಯಿದೆ. ನಮ್ಮ ದೇಶದಲ್ಲಿ ಇಂದಿಗೂ ಶತಮಾನಗಳಷ್ಟು ಹಳೆಯದಾದ ವೀಕ್ಷಣಾಲಯಗಳಿವೆ. ಇಲ್ಲಿ ಗಣಿತ ಶಾಸ್ತ್ರದ ಅದ್ಭುತ ಆವಿಷ್ಕಾರಗಳಾಗಿವೆ. Navigation ಆಗಿರಲಿ, ಪಂಚಾಂಗವಿರಲಿ, ಅಥವಾ ನಮ್ಮ ಹಬ್ಬ-ಹರಿದಿನಗಳಿರಲಿ, ಇವುಗಳೆಲ್ಲದರ ಸಂಬಂಧ ಆಕಾಶ ಮತ್ತು ನಕ್ಷತ್ರಗಳೊಂದಿಗಿದೆ. ನಮ್ಮ ದೇಶದಲ್ಲಿ ಈ ಖಗೋಳ ಶಾಸ್ತ್ರವು ಪ್ರತಿ ಪೀಳಿಗೆಯಲ್ಲೂ ಕುತೂಹಲ ಹುಟ್ಟು ಹಾಕಿದೆ. ಅವರನ್ನು ಅನ್ವೇಷಣೆಗೆ ಪ್ರೇರೇಪಿಸಿದೆ ಮತ್ತು ಇಂದಿನ ಯುವಜನರಲ್ಲಿ ಕೂಡಾ ಇದರ ಬಗ್ಗೆ ಸಾಕಷ್ಟು ಉತ್ಸಾಹ, ಕುತೂಹಲ ಕಂಡು ಬರುತ್ತದೆ. ಇತ್ತೀಚಿನ ದಿನಗಳಲ್ಲಿ, ದೇಶಾದ್ಯಂತ astronomy Clubs ಬಹಳ ಜನಪ್ರಿಯವಾಗುತ್ತಿರುವುದನ್ನು ನೀವು ನೋಡಿಯೇ ಇರುತ್ತೀರಿ. ದೊಡ್ಡ ನಗರಗಳಿಂದ ಹಿಡಿದು ಸಣ್ಣ ಪಟ್ಟಣಗಳವರೆಗೂ, ಶಾಲೆಗಳಿಂದ ಹಿಡಿದು ಉದ್ಯಾನವನಗಳವರೆಗೂ ಈ ಸಂಬಂಧ ಚಟುವಟಿಕೆಗಳು ಕಂಡುಬರುತ್ತವೆ. ನನಗೆ ಬೆಂಗಳೂರು Astronomical Society ಬಗ್ಗೆ ತಿಳಿದುಬಂದಿತು. ಇಲ್ಲಿ ವೀಕ್ಷಣಾ ಸೆಷನ್ ಗಳನ್ನು ಆಯೋಜಿಸಲಾಗುತ್ತದೆ. ಈ ಸಂಸ್ಥೆಯು ಗ್ರಾಮೀಣ ಪ್ರದೇಶಗಳಲ್ಲಿ ಖಗೋಳಶಾಸ್ತ್ರವನ್ನು ಜನಪ್ರಿಯಗೊಳಿಸುವ ಅಭಿಯಾನವನ್ನು ಕೂಡಾ ಆರಂಭಿಸಿದೆ. ‘ಖಗೋಳ್ ಮಂಡಲ್ (खगोल मण्डल’) ಹೆಸರಿನ ಒಂದು ತಂಡವು 30 ಗಂಟೆಗಳ ಅವಧಿಯ ಒಂದು ದೊಡ್ಡ innovative course ಆರಂಭಿಸಿದೆ.

ಸ್ನೇಹಿತರೇ,

ರಾತ್ರಿಯ ವೇಳೆ ನಕ್ಷತ್ರಗಳನ್ನು ವೀಕ್ಷಿಸುವುದು ಬಹಳ ಅದ್ಭುತ ಅನುಭವ ಎನಿಸುತ್ತದೆ. Astro Kerala ಹೆಸರಿನ ಒಂದು ಸಂಸ್ಥೆಯು Night Observation Camps ಮತ್ತು ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಇಲ್ಲಿ ಯುವ ಸ್ನೇಹಿತರು Telescope ತಯಾರಿಕೆ ಮತ್ತು star maps ನ ಉಪಯೋಗವನ್ನು ಕಲಿಯುತ್ತಾರೆ. ರಾಜಕೋಟ್ ನ Big Bang Astronomy Club  ಗಿರ್ ನ ಅರಣ್ಯಗಳಿಂದ ಹಿಡಿದು ಕಚ್ ನ ರಣ್ ವರೆಗೂ ಅನೇಕ astronomy ಕಾರ್ಯಕ್ರಮಗಳನ್ನು ಆಯೋಜಿಸಿದೆ. ‘ಜ್ಯೋತಿರ್ವಿದ್ಯಾ ಪರಿಸಂಸ್ಥಾ (ज्योतिर्विद्या परिसंस्था’) ಕೂಡಾ ಅತ್ಯಂತ ಪುರಾತನ ಖಗೋಳಶಾಸ್ತ್ರ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ವೀಕ್ಷಣಾ ಸೌಲಭ್ಯಗಳೊಂದಿಗೆ ಪುಸ್ತಕಗಳು, ಗ್ರಂಥಾಲಯ ಮತ್ತು ಟೆಲಿಸ್ಕೋಪ್ ಲೈಬ್ರರಿ ಸೌಲಭ್ಯವೂ ಇದೆ. ನಾನು ISAAC (आईसैक) ಅನ್ನು ಕೂಡಾ ಉಲ್ಲೇಖಿಸಲು ಬಯಸುತ್ತೇನೆ. ಇದೊಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿ-ನೇತೃತ್ವದ ನೆಟ್ವರ್ಕ್ ಆಗಿದ್ದು, ಖಗೋಳಶಾಸ್ತ್ರ ಮತ್ತು ಆಸ್ಟ್ರೋಫಿಸಿಕ್ಸ್ ಕ್ಲಬ್ ಗಳನ್ನು ಪರಸ್ಪರ ಸಂಪರ್ಕಿಸುತ್ತದೆ.

ಸ್ನೇಹಿತರೇ,

ನಿಮ್ಮ ಹವ್ಯಾಸಕ್ಕಾಗಿ ಸಮಯ ಮೀಸಲಿಡುವುದು ಮತ್ತು ಯಾವಾಗಲೂ ಏನನ್ನೂದರೂ ಹೊಸದನ್ನು ಕಲಿಯುತ್ತಲೇ ಇರುವುದು ಬಹಳ ಅಗತ್ಯ. ಈ ರಜಾದಿನಗಳಲ್ಲಿ ಯುವಜನರು ಖಗೋಳಶಾಸ್ತ್ರ ಕ್ಲಬ್‌ ಗೆ ಸೇರಿಕೊಳ್ಳಬೇಕೆಂದೂ ಮತ್ತು ತಾರಾಲಯಕ್ಕೆ ಭೇಟಿ ನೀಡಬೇಕೆಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರೇ,

‘ಮನದ ಮಾತು’ ಕಾರ್ಯಕ್ರಮವನ್ನು ಟಿವಿಯಲ್ಲಿ ವೀಕ್ಷಿಸುತ್ತಿರುವವರಿಗೆ ಒಂದು ವಿಡಿಯೋ ಖಂಡಿತವಾಗಿಯೂ ವೀಕ್ಷಿಸಬೇಕೆಂದು ಹೇಳುತ್ತೇನೆ. ಈ ವಿಡಿಯೋ ಕಳೆದ ಕೆಲವು ದಿನಗಳಲ್ಲಿ ಬಹಳ ಚರ್ಚೆಗೆ ಕಾರಣವಾಗಿತ್ತು. ಇದರಲ್ಲಿ ಕೆಲವರು ಬಹಳ ಧೈರ್ಯದಿಂದ, ಬಹಳ ಜಾಗರೂಕತೆಯಿಂದ ಒಂದು ಗಂಗಾ ಡಾಲ್ಫಿನ್ ಅನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಈ ಸಂಪೂರ್ಣ ಪ್ರಯತ್ನಕ್ಕೆ ಸುಮಾರು 13 ಗಂಟೆಗಳ ಕಾಲ ಹಿಡಿಯಿತೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಕೊನೆಯಲ್ಲಿ ಆ ಡಾಲ್ಫಿನ್ ರಕ್ಷಿಸಲ್ಪಟ್ಟಿತು.

ಸ್ನೇಹಿತರೇ,

ಭಾರತದ ಮೊದಲ ಗಂಗಾ ಡಾಲ್ಫಿನ್ ರಕ್ಷಣಾ ಆಂಬ್ಯುಲೆನ್ಸ್ (dolphin rescue ambulance) ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ಸಂಭವಿಸಿದೆ. ಅಲ್ಲಿನ ಕಾಲುವೆಯಲ್ಲಿ ಗಂಗಾ ಡಾಲ್ಫಿನ್ ಸಿಲುಕಿ ಕೊಂಡಿತ್ತು. ಆ ಸಮಯದಲ್ಲಿ, 'ನಮಾಮಿ ಗಂಗಾ ಅಭಿಯಾನ'ದ ಅಡಿಯಲ್ಲಿ ನಿರ್ಮಿಸಲಾದ ಈ ಆಂಬ್ಯುಲೆನ್ಸ್, ಅದಕ್ಕೆ ಒಂದು  ಭರವಸೆಯ ಕಿರಣದಂತೆ ಅದರ ಬಳಿ ತಲುಪಿತು. ನಂತರ ಅದನ್ನು ಎಚ್ಚರಿಕೆಯಿಂದ ರಕ್ಷಿಸಲಾಯಿತು. ಅದನ್ನು ಪರೀಕ್ಷಿಸಿ, ಚಿಕಿತ್ಸೆ ನೀಡಲಾಯಿತು ಮತ್ತು ನಂತರ ಸುರಕ್ಷಿತವಾಗಿ ರಾಪ್ತಿ ನದಿಯಲ್ಲಿ ಬಿಡಲಾಯಿತು. ಒಂದು ರೀತಿಯಲ್ಲಿ ಹೇಳಬೇಕೆಂದರೆ,  ಒಂದು ಜೀವ ಪುನಃ ತನ್ನ ಮನೆಗೆ ಮರಳಿತು.

ಸ್ನೇಹಿತರೇ,

ಈ dolphin rescue ambulance ಬಹಳ ವಿಶೇಷವಾದುದು. ಇದನ್ನು ಒಂದು ನಡೆದಾಡುವ ಆಸ್ಪತ್ರೆಯ ರೀತಿಯಲ್ಲಿ ಸಿದ್ಧಪಡಿಸಲಾಗಿದೆ. ಇದರಲ್ಲಿ Dolphin ಅನ್ನು ಸುರಕ್ಷಿತವಾಗಿ ಇರಿಸುವಂತಹ ವ್ಯವಸ್ಥೆಯಿದೆ. ಆಮ್ಲಜನಕ ಪೂರೈಕೆಯ ಸೌಲಭ್ಯವಿದೆ, ವಿಶೇಷ stretcher ಇದೆ, ರಕ್ಷಿಸುವ ಉಪಕರಣವಿದೆ ಅಂದರೆ, ಯಾವುದಾದರೂ ಡಾಲ್ಫಿನ್ ಗಾಯಗೊಂಡರೆ, ಕಾಲುವೆಯಲ್ಲಿ ಸಿಲುಕಿಕೊಂಡರೆ ಅಥವಾ ನದಿಯಿಂದ ಹೊರಬಂದರೆ, ತಕ್ಷಣವೇ ಅದಕ್ಕೆ ಸಹಾಯ ಮಾಡಬಹುದಾಗಿದೆ.

ಸ್ನೇಹಿತರೇ,

ನಾವು ಗಂಗಾ ಡಾಲ್ಫಿನ್ ಅನ್ನು ರಕ್ಷಿಸಿದಾಗ, ನಾವು ಕೇವಲ ಒಂದು ಜಾತಿಯನ್ನಷ್ಟೇ ಅಲ್ಲದೇ,  ಗಂಗೆಯ ಜೀವವೈವಿಧ್ಯವನ್ನು ಉಳಿಸಿದಂತಾಗುತ್ತದೆ. ನಾವು ನದಿಯ ಸಂಪೂರ್ಣ ಜೀವನ ವ್ಯವಸ್ಥೆಯನ್ನು ಉಳಿಸುತ್ತೇವೆ ಮತ್ತು ನಮ್ಮ ಭವಿಷ್ಯದ ಪೀಳಿಗೆಗಾಗಿ ಪ್ರಕೃತಿಯ ಅಮೂಲ್ಯ ಪರಂಪರೆಯನ್ನು ಕಾಪಾಡುತ್ತೇವೆ.

ನನ್ನ ಪ್ರೀತಿಯ ದೇಶಬಾಂಧವರೇ,

ನಿಮ್ಮಲ್ಲಿ ಅನೇಕರಿಗೆ ನದಿ, ಕೆರೆ ಅಥವಾ ಬಾವಿಯ ನೀರಿನೊಂದಿಗಿನ ನೆನಪು ಖಂಡಿತವಾಗಿಯೂ ಇದ್ದೇ ಇರುತ್ತದೆ. ಕೆಲವರಿಗೆ ಕೆರೆಯಲ್ಲಿ ಈಜಿದ ನೆನಪಿರಬಹುದು, ಕೆಲವರಿಗೆ ಗೆಳೆಯರೊಂದಿಗೆ ಕೆರೆಯ ಸಮೀಪ ಆಟವಾಡಿದ ನೆನಪಿರಬಹುದು, ಕೆಲವರಿಗೆ ಆ ಮಣ್ಣಿನ ಸುವಾಸನೆ ನೆನಪಿರಬಹುದು. ಬಾಲ್ಯಕಾಲದ ಇಂತಹ ನೆನಪುಗಳು ಜೀವನದುದ್ದಕ್ಕೂ ಮನಸ್ಸಿನಲ್ಲಿ ಹಾಗೆಯೇ ಉಳಿದಿರುತ್ತವೆ.

ಸ್ನೇಹಿತರೇ,

ನೆನಪುಗಳನ್ನು ಸಂರಕ್ಷಿಸುವ ಇಂತಹ ಪ್ರೇರಣಾದಾಯಕ ವಿಷಯವೊಂದು ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಬಸ್ತಿಯ ನಿವಾಸಿ ಆಕಾಶ್ ಗುಪ್ತಾ ಅವರು ತಮ್ಮ ಗ್ರಾಮದಲ್ಲಿದ್ದ ಮನೋರಮಾ ನದಿಯನ್ನು ನೋಡಿ ಬಹಳ ದುಃಖಿತರಾಗುತ್ತಿದ್ದರು. ಏಕೆಂದರೆ ಅವರು ಬಾಲ್ಯದಿಂದಲೂ ಅವರು ಈ ನದಿಯನ್ನು ಸದಾ ಸ್ವಚ್ಛ ಹಾಗೂ ಜೀವಂತವಾಗಿ ಹರಿಯುವುದನ್ನು ನೋಡುತ್ತಾ ಬಂದಿದ್ದರು. ಕಾಲಕ್ರಮೇಣ ಈ ನದಿಯಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗತೊಡಗಿತು. ಕೊಳಕು ಹೆಚ್ಚಾಗುತ್ತಲೇ ಇತ್ತು. ಇದಕ್ಕಾಗಿ ಯಾರನ್ನೂ ದೂರದೇ ಹೊಸ ಆರಂಭಕ್ಕೆ ಶ್ರೀ ಆಕಾಶ್ ನಿರ್ಧರಿಸಿದರು. ದೂರಲ್ಲ, ಹೊಸ ಆರಂಭ ಎನ್ನುವುದು ಅವರ ಮಂತ್ರವಾಯಿತು. ಅವರು ತಮ್ಮೊಂದಿಗೆ ತಮ್ಮ ಸ್ನೇಹಿತರನ್ನು ಸೇರಿಸಿಕೊಂಡರು. ಅವರ ಬಳಿ ಇದ್ದದ್ದು ಬಲೆ, ಸಲಿಕೆ ಮತ್ತು ಬುಟ್ಟಿ ಮಾತ್ರ ಆದರೆ ಅವರಲ್ಲಿದ್ದ ಬಹು ದೊಡ್ಡ ಶಕ್ತಿಯೆಂದರೆ ಏನನ್ನಾದರೂ ಬದಲಾಯಿಸಬಹುದೆಂಬ ಸಂಕಲ್ಪ. ಈ ಯುವಕರು ನದಿಯಲ್ಲಿ ಇಳಿಯುತ್ತಿದ್ದರು ಮತ್ತು ನೀರಿನಲ್ಲಿದ್ದ ತ್ಯಾಜ್ಯ ಹೊರತೆಗೆಯುತ್ತಿದ್ದರು. ಪ್ಲಾಸ್ಟಿಕ್ ಮತ್ತು ಇನ್ನಿತರ ತ್ಯಾಜ್ಯ ವಸ್ತುಗಳನ್ನು ಹೊರತರುತ್ತಿದ್ದರು. ಅನೇಕ ಬಾರಿ ಒಂದು ದಿನದಲ್ಲಿ 50-60 ಕಿಲೋ ತ್ಯಾಜ್ಯ ನದಿಯಿಂದ ಹೊರಬರುತ್ತಿತ್ತು. ಕ್ರಮೇಣ ಮನೋರಮಾ ನದಿಯ ಆ ಭಾಗ ಸ್ವಚ್ಛವಾಗಿ ಕಾಣತೊಡಗಿತು. ಸುತ್ತಮುತ್ತಲಿನ ಜನರು ಕೂಡಾ ಈ ಕೆಲಸದತ್ತ ಗಮನ ಹರಿಸತೊಡಗಿದರು. ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಹೆಚ್ಚಾಯಿತು.

ಸ್ನೇಹಿತರೇ,

ಗೋವಾದಿಂದ ಇಂತಹದ್ದೇ ಪ್ರೇರಣಾದಾಯಕ ಕತೆಯೊಂದು ಹೊರಬಂದಿದೆ. ಗೋವಾದ ಬಾಲಕೃಷ್ಣ ಅಯ್ಯ ಅವರು ಓರ್ವ ನಿವೃತ್ತ ಶಿಕ್ಷಕರು. ಆದರೆ ಸಮಾಜಕ್ಕಾಗಿ ಕೆಲಸ ಮಾಡುವ ಅವರ ಉತ್ಸಾಹ ಇಂದಿಗೂ ಕುಗ್ಗದೆ ಅದೇ ರೀತಿ ಉಳಿದಿದೆ. ಮಡ್ಡಿ-ತೋಲಾಪ್ ಪ್ರದೇಶದಲ್ಲಿದ್ದ ನೀರಿನ ಸಮಸ್ಯೆ ಅವರನ್ನು ಬಹಳ ಚಿಂತಿತರನ್ನಾಗಿಸಿತ್ತು. ಅವರೂ ಪರಿಹಾರಕ್ಕಾಗಿ ಕೆಲಸ ಆರಂಭಿಸಿದರು. ಕೊಳವೆ ಮಾರ್ಗ ಅಳವಡಿಸುವ ಕಾರ್ಯದಲ್ಲಿ ಬಾಲಕೃಷ್ಣ ಅವರು ಮಹತ್ವದ ಪಾತ್ರ ವಹಿಸಿದರು. ಇದರಿಂದಾಗಿ ಅನೇಕ ಮನೆಗಳಿಗೆ ನೀರು ತಲುಪುವಂತಾಯಿತು. ಪ್ರತಿದಿನ ನೀರಿಗಾಗಿ ಬವಣೆ ಅನುಭವಿಸುತ್ತಿದ್ದ ಕುಟುಂಬಗಳಿಗೆ ಇದು ಅತಿ ದೊಡ್ಡ ಪರಿಹಾರ ದೊರೆತಂತಾಯಿತು.

ಸ್ನೇಹಿತರೇ,

ಕಳೆದ ವರ್ಷ ನನಗೆ ಅತ್ಯಂತ ಅದ್ಭುತ ಅನುಭವವಾಯಿತು. ಇದು ಮನ್ ಕಿ ಬಾತ್ ನೊಂದಿಗೆ ಕೂಡಾ ಸಂಬಂಧಿಸಿದೆ. ಹೀಗಾಗಿ ನಾನು ಅದರ ವಿಷಯ ಕುರಿತು ನಿಮ್ಮೊಂದಿಗೆ ಮಾತನಾಡಲು ಬಯಸುತ್ತೇನೆ. ತಮಿಳುನಾಡಿನ ನಾಗರಕೋಯಿಲ್ ನಲ್ಲಿ ಓರ್ವ ಶಿಕ್ಷಕಿಯೊಂದಿಗೆ ನನ್ನ ಭೇಟಿಯಾಯಿತು. ಸುಮಾರು ಮೂರು ದಶಕಗಳ ಹಿಂದೆಯೇ ನಾನು ಅವರನ್ನು ಭೇಟಿಯಾಗಿದ್ದೆ. ನಾನು ಮಾತನಾಡುತ್ತಿರುವುದು ಗಿರಿಜಾ ಅಮ್ಮನವರ ಬಗ್ಗೆ. ಈ ಭೇಟಿಯ ಸಮಯದಲ್ಲಿ ಕೆಲವು ಯುವ ವಿದ್ಯಾರ್ಥಿಗಳು ಕೂಡಾ ಅವರೊಂದಿಗಿದ್ದರು.

ಸ್ನೇಹಿತರೇ,

ಗಿರಿಜಾ ಅಮ್ಮಾ ಅವರು ಸುಮಾರು 15 ಶಾಲೆಗಳನ್ನು ನಡೆಸುತ್ತಾರೆ. ಇವುಗಳ ಪೈಕಿ ಚೆನ್ನೈನ ಜಯಗೋಪಾಲ್ ಗರೋಡಿಯಾ ಹಿಂದೂ ವಿದ್ಯಾಲಯ ಮುಖ್ಯವಾದುದು. ಈಕೆಯ ದೇಶಭಕ್ತಿಯ ಮನೋಭಾವ ಪ್ರತಿ ಭಾರತೀಯನಿಗೂ ಸ್ಫೂರ್ತಿದಾಯಕವಾಗಿದೆ. ಮನದ ಮಾತಿನಿಂದ ಪ್ರೇರಣೆ ಪಡೆದ ಅವರು ದೇಶದ ಅನೇಕ ಸೈನಿಕರಿಗೆ ಕೊಡುಗೆ ನೀಡುವುದಾಗಿ ಸಂಕಲ್ಪ ತೊಟ್ಟರು. ಇದಕ್ಕಾಗಿ ಅವರು ತಮ್ಮೆಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಿದರು. ಪ್ರತಿದಿನವೂ ವೀರ ಸೈನಿಕರಿಗಾಗಿ ಒಂದೊಂದು ರೂಪಾಯಿ ಕೊಡುಗೆ ನೀಡಬೇಕೆಂದು ಅವರು ಮಕ್ಕಳಲ್ಲಿ ಕೇಳಿಕೊಂಡರು. ಅಂದರೆ ಒಂದು ವರ್ಷದಲ್ಲಿ ಪ್ರತಿ ವಿದ್ಯಾರ್ಥಿಯಿಂದ 365 ರೂಪಾಯಿ ಸಂಗ್ರಹವಾಯಿತು.ಈ ಸಣ್ಣ ಸಣ್ಣ ಕೊಡುಗೆಯಿಂದ ಸರಿ ಸುಮಾರು 40 ಲಕ್ಷ ರೂಪಾಯಿ ಸಂಗ್ರಹವಾಯಿತು. ಗಿರಿಜಾ ಅಮ್ಮ ಅವರು ಈ ಸಂಪೂರ್ಣ ಮೊತ್ತದ ಚೆಕ್ ಅನ್ನು ನನಗೆ ನೀಡಿದರು. ಭಾರತ ಮಾತೆಗೆ ಅವರ ಹೃದಯದಲ್ಲಿದ್ದ ಸಮರ್ಪಣಾ ಭಾವ ಅದೆಷ್ಟು ಆಳವಾಗಿತ್ತೆಂಬುದು ಅವರೊಂದಿಗಿನ ಮಾತುಕತೆಯಿಂದ ನನಗೆ ಮನದಟ್ಟಾಯಿತು. ಕಳೆದ ವರ್ಷವಷ್ಟೇ ಚೆನ್ನೈನ ಪ್ರಥಮ ಹಿಂದೂ ವಿದ್ಯಾಲಯ ತನ್ನ 50 ವರ್ಷಗಳನ್ನು ಪೂರ್ಣಗೊಳಿಸಿತು. ದೇಶದ ಶಿಕ್ಷಣ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ, ಶಾಲೆಯ ನೆಟ್ವರ್ಕ್ ನ ಪಾತ್ರ ಅತ್ಯಂತ ಶ್ಲಾಘನೀಯವಾಗಿದೆ. ಇದರೊಂದಿಗೆ ಕೈಜೋಡಿಸಿರುವ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ವೀರ ಸೈನಿಕರಿಗಾಗಿ ಕೊಡುಗೆ ನೀಡಿದ ಆ ವಿದ್ಯಾರ್ಥಿಗಳನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುತ್ತೇನೆ.

ಸ್ನೇಹಿತರೇ,

ಭಾರತದ ಪ್ರತಿ ಗ್ರಾಮದಲ್ಲಿ, ಪ್ರತಿ ನಗರದಲ್ಲಿ, ನಮಗೆ ಸ್ಫೂರ್ತಿ-ಪ್ರೇರಣೆ ನೀಡುವಂತಹ ಏನಾದರೊಂದು ನಡೆಯುತ್ತಲೇ ಇದೆ. ಹಲವು ಬಾರಿ ಈ ಪ್ರಯತ್ನಗಳ ಬಗ್ಗೆ ಹೆಚ್ಚು ಮಾತುಕತೆ ನಡೆಯುವುದಿಲ್ಲ, ಆದರೆ ನಮಗೆ ಇವುಗಳ ಬಗ್ಗೆ ತಿಳಿದುಬಂದಾಗ, ನಮ್ಮ ದೇಶದ, ನಮ್ಮ ಜನರ ಶಕ್ತಿಯಿಂದ ದೇಶ ಪ್ರಗತಿಯ ಹಾದಿಯಲ್ಲಿ ಮುಂದೆ ಸಾಗುತ್ತಿದೆ ಎಂಬ ನಂಬಿಕೆ ಮತ್ತಷ್ಟು ಬಲಗೊಳ್ಳುತ್ತದೆ. ನಿಮ್ಮ ಸುತ್ತಮುತ್ತ ನಡೆಯುತ್ತಿರುವ ಇಂತಹ ಪ್ರಯತ್ನಗಳನ್ನು ಖಂಡಿತವಾಗಿಯೂ ನೋಡಿ ಎನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿ. ಸಮಾಜಕ್ಕಾಗಿ ಉತ್ತಮ ಕೆಲಸ-ಕಾರ್ಯ ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಪ್ರಶಂಸಿಸಿ, ಅವರಿಂದ ಕಲಿಯಿರಿ, ಹಾಗೂ ಸಾಧ್ಯವಾದಲ್ಲಿ ನೀವು ಕೂಡಾ ಯಾವುದಾದರೊಂದು ಉತ್ತಮ ಕೆಲಸದಲ್ಲಿ ಕೈಜೋಡಿಸಿ. ಮುಂದಿನ ತಿಂಗಳ ಮನದ ಮಾತಿನಲ್ಲಿ ಮತ್ತಷ್ಟು ಪ್ರೇರಣಾದಾಯಕ ವಿಷಯಗಳೊಂದಿಗೆ ಮತ್ತೆ ನಿಮ್ಮನ್ನು ಭೇಟಿಯಾಗುತ್ತೇನೆ. ಅನೇಕಾನೇಕ ಧನ್ಯವಾದ. ನಮಸ್ಕಾರ.