ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 77ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಕೆಂಪುಕೋಟೆಯಲ್ಲಿ ಭಾಷಣ ಮಾಡಿದರು. “ನಮ್ಮೆಲ್ಲರ ಕನಸುಗಳು ನನಸಾಗಬೇಕಾದರೆ, ನಾವು ತೊಟ್ಟಿರುವ ಸಂಕಲ್ಪಗಳನ್ನು ಸಾಧಿಸಬೇಕಾದರೆ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ – ಈ 3 ಅನಿಷ್ಟಗಳ ವಿರುದ್ಧ ಹೋರಾಡುವುದು ಇಂದಿನ ಅಗತ್ಯವಾಗಿದೆ" ಎಂದರು.

ನಮ್ಮ ದೇಶದ ಎಲ್ಲಾ ಸಮಸ್ಯೆಗಳಿಗೆ ಮೂಲವಾಗಿರುವ ಭ್ರಷ್ಟಾಚಾರವೇ ಮೊದಲ ದುಷ್ಟತನವಾಗಿದೆ. “ಪ್ರತಿಯೊಂದು ಕ್ಷೇತ್ರ ಮತ್ತು ಪ್ರತಿಯೊಂದು ವಲಯದಲ್ಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ಮತ್ತು ಭ್ರಷ್ಟಾಚಾರವನ್ನು ಮುಕ್ತಿಗೊಳಿಸುವುದು  ಇಂದಿನ ಅಗತ್ಯವಾಗಿದೆ. ದೇಶವಾಸಿಗಳೇ, ನನ್ನ ಪ್ರೀತಿಯ ಕುಟುಂಬದ ಸದಸ್ಯರೇ, ಇದು ಮೋದಿಯವರ ಬದ್ಧತೆ, ಭ್ರಷ್ಟಾಚಾರದ ವಿರುದ್ಧ ನಾನು ಹೋರಾಟ ಮುಂದುವರಿಸುತ್ತೇನೆ ಎಂಬುದು ನನ್ನ ವೈಯಕ್ತಿಕ ಬದ್ಧತೆಯಾಗಿದೆ” ಎಂದು ಪ್ರಧಾನಿ ಹೇಳಿದರು.

ಎರಡನೆಯದಾಗಿ, ವಂಶ ಪಾರಂಪರ್ಯದ ರಾಜಕಾರಣ ನಮ್ಮ ದೇಶವನ್ನು ನಾಶ ಮಾಡಿದೆ. "ಈ ವಂಶ ಪಾರಂಪರ್ಯ ವ್ಯವಸ್ಥೆಯು ದೇಶವನ್ನು ಹಿಡಿದಿಟ್ಟುಕೊಂಡು ದೇಶದ ಜನರ ಹಕ್ಕುಗಳನ್ನು ಕಸಿದುಕೊಂಡಿದೆ" ಎಂದರು.

ಮೂರನೇ ಕೆಡುಕೆಂದರೆ, ತುಷ್ಟೀಕರಣ ಅಥವಾ ಓಲೈಕೆಯ ರಾಜಕಾರಣ. “ಈ ತುಷ್ಟೀಕರಣವು ದೇಶದ ಮೂಲಭೂತ ಚಿಂತನೆ, ನಮ್ಮ ಸಾಮರಸ್ಯದ ರಾಷ್ಟ್ರೀಯ ಪಾತ್ರವನ್ನು ಸಹ ಕಳಂಕಗೊಳಿಸಿದೆ. ಈ ಜನರು ಎಲ್ಲವನ್ನೂ ನಾಶಪಡಿಸಿದರು. ಆದ್ದರಿಂದ ನಾವು ಈ 3 ಅನಿಷ್ಟಗಳಾದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ವಿರುದ್ಧ ನಮ್ಮೆಲ್ಲಾ ಶಕ್ತಿಯಿಂದ ಹೋರಾಡಬೇಕು. ನಮ್ಮ ದೇಶದ ಜನರ ಆಕಾಂಕ್ಷೆಗಳನ್ನು ಹತ್ತಿಕ್ಕುವ ಈ ಸವಾಲುಗಳು ಪ್ರವರ್ಧಮಾನಕ್ಕೆ ಬಂದಿವೆ ಎಂದರು.

 ಈ ಅನಿಷ್ಟಗಳು ನಮ್ಮ ದೇಶವನ್ನು ಕೆಲವು ಜನರಲ್ಲಿರುವ ಸಾಮರ್ಥ್ಯಗಳನ್ನು ಕಸಿದುಕೊಳ್ಳುತ್ತಿವೆ. “ಇವು ನಮ್ಮ ಜನರ ಭರವಸೆ ಮತ್ತು ಆಕಾಂಕ್ಷೆಗಳ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸುತ್ತಿವೆ. ನಮ್ಮ ಬಡವರಿರಲಿ, ದಲಿತರಾಗಿರಲಿ, ಹಿಂದುಳಿದವರಿರಲಿ, ಪಸ್ಮಾಂಡ ಸಮುದಾಯಗಳಿರಲಿ, ನಮ್ಮ ಬುಡಕಟ್ಟು ಬಂಧುಗಳಿರಲಿ ಅಥವಾ ನಮ್ಮ ತಾಯಂದಿರಿರಲಿ ಅಥವಾ ಸಹೋದರಿಯರಾಗಿರಲಿ, ಅವರ ಹಕ್ಕುಗಳಿಗಾಗಿ ನಾವೆಲ್ಲರೂ ಈ 3 ಅನಿಷ್ಟಗಳನ್ನು ತೊಡೆದುಹಾಕಬೇಕು.

ಭ್ರಷ್ಟಾಚಾರ ಪಿಡುಗಿನ ಮೇಲೆ ವಾಗ್ದಾಳಿ ಮಾಡಿದ ಪ್ರಧಾನಿ, “ನಾವು ಭ್ರಷ್ಟಾಚಾರದ ಬಗ್ಗೆ ವಿಮುಖತೆಯ ವಾತಾವರಣ ಸೃಷ್ಟಿಸಬೇಕು. ಸಾರ್ವಜನಿಕ ಜೀವನದಲ್ಲಿ ಇದಕ್ಕಿಂತ ದೊಡ್ಡ ಕೊಳಕು ಬೇರೊಂದಿಲ್ಲ. ಭ್ರಷ್ಟಾಚಾರ ಎದುರಿಸಲು ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಬೇಕು. ವಿವಿಧ ಯೋಜನೆಗಳಿಂದ 10 ಕೋಟಿ ನಕಲಿ ಫಲಾನುಭವಿಗಳನ್ನು ಹೇಗೆ ತೆಗೆದುಹಾಕಲಾಗಿದೆ ಮತ್ತು ಆರ್ಥಿಕ ಅಪರಾಧಿಗಳ 20 ಪಟ್ಟು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಅವರು ತಿಳಿಸಿದರು.

ಸ್ವಜನಪಕ್ಷಪಾತ ಮತ್ತು ವಂಶ ಪಾರಂಪರ್ಯ ರಾಜಕಾರಣ ಪ್ರಸ್ತಾಪಿಸಿದ ಪ್ರಧಾನ ಮಂತ್ರಿ, ವಂಶ ಪಾರಂಪರ್ಯದ ರಾಜಕೀಯ ಪಕ್ಷಗಳು ಕುಟುಂಬದಿಂದ, ಕುಟುಂಬಕ್ಕೋಸ್ಕರ ಮತ್ತು ಕುಟುಂಬಕ್ಕಾಗಿ ಪ್ರತಿಭೆಗಳನ್ನು ಕೊಲ್ಲುತ್ತಿವೆ.  "ಪ್ರಜಾಪ್ರಭುತ್ವದಲ್ಲಿ ಈ ದುಷ್ಟತನ ತೊಡೆದುಹಾಕವುದು ಅನಿವಾರ್ಯವಾಗಿದೆ" ಎಂದು ಅವರು ಹೇಳಿದರು.

ಅಂತೆಯೇ, ತುಷ್ಟೀಕರಣವು ಸಾಮಾಜಿಕ ನ್ಯಾಯವನ್ನು ದೊಡ್ಡ ಪ್ರಮಾಣದಲ್ಲಿ ಹಾಳು ಮಾಡಿದೆ. “ಈ ಚಿಂತನೆ ಮತ್ತು ತುಷ್ಟೀಕರಣ ಅಥವಾ ಓಲೈಕೆ ರಾಜಕಾರಣ, ತುಷ್ಟೀಕರಣಕ್ಕಾಗಿ ಸರ್ಕಾರದ ಯೋಜನೆಗಳ ವಿಧಾನ, ಸಾಮಾಜಿಕ ನ್ಯಾಯವನ್ನು ಕೊಂದು ಹಾಕಿದೆ. ಅದಕ್ಕಾಗಿಯೇ ತುಷ್ಟೀಕರಣ ಮತ್ತು ಭ್ರಷ್ಟಾಚಾರವು ಅಭಿವೃದ್ಧಿಯ ದೊಡ್ಡ ಶತ್ರುಗಳಾಗಿವೆ. ದೇಶವು ಅಭಿವೃದ್ಧಿಯನ್ನು ಬಯಸಿದರೆ ಮತ್ತು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಬಯಸಿದರೆ, ನಾವು ಯಾವುದೇ ಪರಿಸ್ಥಿತಿಯಲ್ಲಿ ದೇಶದಲ್ಲಿ ಭ್ರಷ್ಟಾಚಾರವನ್ನು ಸಹಿಸದಿರುವುದು ನಮಗೆ ಅವಶ್ಯಕವಾಗಿದೆ, ನಾವು ಈ ಮನಸ್ಥಿತಿಯೊಂದಿಗೆ ಮುನ್ನಡೆಯಬೇಕು” ಎಂದು ಶ್ರೀ ಮೋದಿ ಹೇಳಿದರು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
PM Modi urges people to take 9 pledges on health, saving water, others

Media Coverage

PM Modi urges people to take 9 pledges on health, saving water, others
NM on the go

Nm on the go

Always be the first to hear from the PM. Get the App Now!
...
Prime Minister receives phone call from President Emmanuel Macron, discusses situation in West Asia and maritime security
April 16, 2026

The Prime Minister, Shri Narendra Modi, received a phone call from the President of France, Emmanuel Macron.

During the conversation, the two leaders discussed the prevailing situation in West Asia. They agreed on the urgent need to restore safety and ensure freedom of navigation in the Strait of Hormuz.

Both leaders reiterated their commitment to continue close cooperation in advancing peace and stability in the region and beyond.

The Prime Minister wrote on X;

“Received a phone call from my dear friend President Emmanuel Macron. We discussed the situation in West Asia and agreed on the need to urgently restore safety and freedom of navigation in the Strait of Hormuz.

We will continue our close cooperation to advance peace and stability in the region and beyond.

@EmmanuelMacron”