ಶೇರ್
 
Comments
ಈಶಾನ್ಯ ರಾಜ್ಯಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿ ತೋರಿದ ಪ್ರಧಾನಮಂತ್ರಿ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿಗಳು: ಕೋವಿಡ್ ಸಾಂಕ್ರಾಮಿಕ ನಿಭಾಯಿಸುವಲ್ಲಿ ಕೈಗೊಂಡ ಸಕಾಲಿಕ ಕ್ರಮಕ್ಕೆ ಧನ್ಯವಾದ ಸಲ್ಲಿಕೆ
ಪರಿಸ್ಥಿತಿ ಮೇಲೆ ಕಠಿಣ ನಿಗಾ ಇಡಬೇಕು ಮತ್ತು ಎಲ್ಲಾ ರೂಪಾಂತರವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದು ಒತ್ತಿ ಹೇಳಿದ ಪ್ರಧಾನಮಂತ್ರಿ
ಸೂಕ್ತ ಮುನ್ನೆಚ್ಚರಿಕೆ ಇಲ್ಲದೇ ಗಿರಿಧಾಮಗಳಲ್ಲಿ ಜನಸಂದಣಿಯಾಗುತ್ತಿರುವ ಬಗ್ಗೆ ಬಲವಾದ ಎಚ್ಚರಿಕೆ ರವಾನೆ
ಮೂರನೇ ಅಲೆ ನಿಯಂತ್ರಿಸುವುದು ಹೇಗೆ ಎಂಬುದು ನಮ್ಮ ಮನಸ್ಸಿನಲ್ಲಿರುವ ಮುಖ್ಯ ಪ್ರಶ್ನೆ: ಪ್ರಧಾನಮಂತ್ರಿ
ಲಸಿಕೆ ವಿರುದ್ಧದ ತಪ್ಪು ಕಲ್ಪನೆ ನಿವಾರಿಸಲು ಸಾಮಾಜಿಕ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ವ್ಯಕ್ತಿಗಳು, ಧಾರ್ಮಿಕ ಸಂಘಟನೆಗಳ ನಂಬಿಕಸ್ಥರ ನೆರವು ಪಡೆಯಿರಿ - ಪ್ರಧಾನಮಂತ್ರಿ
“ಎಲ್ಲರಿಗೂ ಲಸಿಕೆ – ಎಲ್ಲರಿಗೂ ಉಚಿತ“ ಅಭಿಯಾನಕ್ಕೆ ಈಶಾನ್ಯ ರಾಜ್ಯಗಳಿಗೆ ಪ್ರಮುಖವಾದ್ದದ್ದು: ಪ್ರಧಾನಮಂತ್ರಿ
ವೈದ್ಯಕೀಯ ಮೂಲ ಸೌಕರ್ಯ ಸುಧಾರಣೆ ಮಾಡಲು ಇತ್ತೀಚೆಗೆ 23,000 ಕೋಟಿ ರೂಪಾಯಿ ಪ್ಯಾಕೇಜ್ ಗೆ ಅನುಮೋದನೆ: ಪ್ರಧಾನಮಂತ್ರಿ
ಪಿ.ಎಂ. ಕೇರ್ಸ್ ಆಮ್ಲಜನಕ ಘಟಕಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ

ನಿಮಗೆಲ್ಲರಿಗೂ ನಮಸ್ಕಾರ ! 

ಮೊದಲಿಗೆ ನಾನು ಹೊಸ ಜವಾಬ್ದಾರಿಗಳನ್ನು ಹೊಂದಿರುವ ವ್ಯಕ್ತಿಗಳನ್ನು ಪರಿಚಯಿಸುತ್ತೇನೆ, ಯಾಕೆಂದರೆ ಇದು ನಿಮಗೂ ಉತ್ತಮ. ಶ್ರೀ ಮನ್ ಸುಖ್ ಭಾಯಿ ಮಾಂಡವೀಯ, ಅವರು ಇತ್ತೀಚೆಗಷ್ಟೇ ನಮ್ಮ ಆರೋಗ್ಯ ಸಚಿವರಾಗಿದ್ದಾರೆ. ಅವರ ಜೊತೆ ಕುಳಿತುಕೊಂಡಿರುವ ಡಾ. ಭಾರತೀ ಪವಾರ್ ಜೀ ಅವರು ಎಂ.ಒ.ಎಸ್. ಆಗಿದ್ದಾರೆ. ಅವರು ನಮ್ಮ ಆರೋಗ್ಯ ಇಲಾಖೆಯಲ್ಲಿ ಎಂ.ಒ.ಎಸ್. ಆಗಿ ಕಾರ್ಯ ನಿರ್ವಹಿಸುತ್ತಾರೆ. ನಿಮ್ಮೊಂದಿಗೆ ನಿಯಮಿತವಾಗಿ ವ್ಯವಹರಿಸುವ ಇನ್ನಿಬ್ಬರು ಇಲ್ಲಿದ್ದಾರೆ. ಅವರೆಂದರೆ ಡಿ.ಒ.ಎನ್.ಇ.ಆರ್. ಸಚಿವಾಲಯದ ಹೊಸ ಸಚಿವರಾದ ಶ್ರೀ ಕಿಶನ್ ರೆಡ್ಡಿ ಜೀ ಮತ್ತು ಅವರೊಂದಿಗೆ ಕುಳಿತಿರುವ ಎಂ.ಒ.ಎಸ್. ಶ್ರೀ ಬಿ.ಎಲ್.ವರ್ಮಾ ಜೀ. ಈ ಪರಿಚಯ ನಿಮಗೂ ಅವಶ್ಯಕ.

ಸ್ನೇಹಿತರೇ,

ಈಶಾನ್ಯದಲ್ಲಿ ಕೊರೊನಾ ನಿಭಾಯಿಸಲು ಹೇಗೆ ಕಠಿಣ ಪರಿಶ್ರಮ ಹಾಕಲಾಯಿತು ಎಂಬ ಬಗ್ಗೆ ಮತ್ತು ಕೆಲವು ನವೀನ ಚಿಂತನೆಗಳು ಹಾಗು ಯೋಜನೆಗಳನ್ನು ಜಾರಿಗೆ ತರಲಾಯಿತು, ಅದರಿಂದ ಏನು ಸಾಧನೆಯಾಯಿತು ಎಂಬ ಬಗ್ಗೆ ನೀವು ವಿವರಿಸಿದ್ದೀರಿ. ನೀವು, ನಮ್ಮ ಇಡೀ ದೇಶ ಅದರಲ್ಲೂ ವಿಶೇಷವಾಗಿ ನಮ್ಮ ಆರೋಗ್ಯ ಕಾರ್ಯಕರ್ತರು ತಮ್ಮ ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಲು ಕಳೆದ ಒಂದೂವರೆ ವರ್ಷಗಳಿಂದ ವಿಶ್ರಾಂತಿ ಇಲ್ಲದೆ ದುಡಿದಿದ್ದೀರಿ. ಈಶಾನ್ಯದ ಭೌಗೋಳಿಕ ಸವಾಲುಗಳ ನಡುವೆಯೂ ಪರೀಕ್ಷೆಯಿಂದ ಹಿಡಿದು ಚಿಕಿತ್ಸೆ, ಲಸಿಕಾ ಕಾರ್ಯಕ್ರಮದವರೆಗೆ ಮೂಲಸೌಕರ್ಯ ಒದಗಿಸುವಲ್ಲಿ ನೀವು ದುಡಿದ ಪರಿ ಅನನ್ಯ.....ನಾಲ್ಕು ರಾಜ್ಯಗಳು ಇನ್ನಷ್ಟು ಸುಧಾರಿಸಬೇಕಾಗಿದೆ. ಆದರೆ ಉಳಿದವುಗಳು ಅತ್ಯಂತ ಸೂಕ್ಷ್ಮತ್ವದೊಂದಿಗೆ ಲಸಿಕೆಗಳು ಪೋಲಾಗದಂತೆ ತಡೆದಿವೆ. ನೀವು ಪ್ರತೀ ಲಸಿಕೆಯ ಬಾಟಲಿಯನ್ನು ಗರಿಷ್ಟ ರೀತಿಯಲ್ಲಿ ಬಳಸಿಕೊಂಡಿದ್ದೀರಿ. ನಾನು ನಿಮ್ಮ ಪ್ರಯತ್ನವನ್ನು ಶ್ಲಾಘಿಸುತ್ತೇನೆ, ಅದರಲ್ಲೂ ನಮ್ಮ ವೈದ್ಯಕೀಯ ರಂಗದ ಜನರನ್ನು  ಅವರು ಲಸಿಕೆ ನೀಡಿಕೆಯನ್ನು ತಮ್ಮ ಕೌಶಲ ಬಳಸಿ ಸೂಕ್ಷ್ಮತ್ವದೊಂದಿಗೆ ನಿಭಾಯಿಸಿದ್ದಾರೆ. ಯಾಕೆಂದರೆ ಲಸಿಕೆ ಬಹಳ ಮುಖ್ಯ. ಆರೋಗ್ಯ ವಲಯದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ನಿಮ್ಮ ಸಹೋದ್ಯೋಗಿಗಳನ್ನು ನಾನು ಅಭಿನಂದಿಸುತ್ತೇನೆ ಮತ್ತು ಕೆಲವು  ವೈಫಲ್ಯಗಳಾಗಿರುವ ನಾಲ್ಕು ರಾಜ್ಯಗಳಲ್ಲಿ  ಇನ್ನಷ್ಟು ಉತ್ತಮವಾಗಿ ಇದನ್ನು ಮಾಡಬಹುದು ಎಂಬ ಬಗ್ಗೆ ನನಗೆ ಖಾತ್ರಿ ಇದೆ.

ಸ್ನೇಹಿತರೇ,

ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಮಗೆಲ್ಲರಿಗೂ ಅರಿವಿದೆ. ಕೋವಿಡ್ ಎರಡನೆ ಅಲೆಯ ಸಂದರ್ಭದಲ್ಲಿ  ವಿವಿಧ ಸರಕಾರಗಳು ಕೈಗೊಂಡ ಸಾಮೂಹಿಕ ಪ್ರಯತ್ನಗಳ ಫಲ ಕಾಣಿಸುತ್ತಿದೆ. ಆದರೆ ಈಶಾನ್ಯದ ಕೆಲವು ರಾಜ್ಯಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಸಂಕೇತಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಾವು ಹೆಚ್ಚು ಜಾಗರೂಕರಾಗಿರಬೇಕು ಮತ್ತು ಜನರಿಗೆ ಕೂಡಾ ಸತತವಾಗಿ ಜಾಗರೂಕರಾಗಿರುವಂತೆ ಹೇಳಬೇಕು. ಸೋಂಕು ಹರಡುವುದನ್ನು ತಡೆಯಲು ತಳ ಮಟ್ಟದಲ್ಲಿಯೂ ಹೆಚ್ಚು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಹಿಮಂತ ಜೀ ಹೇಳುತ್ತಿದ್ದಂತೆ ಅವರು ಲಾಕ್ ಡೌನ್ ದಾರಿಯನ್ನು ಅನುಸರಿಸಲಿಲ್ಲ. ಬದಲು ಕಿರು ಕಂಟೈನ್ ಮೆಂಟ್ ವಲಯಗಳ ಬಗ್ಗೆ ಗಮನ ಹರಿಸಿದರು. ಅವರು 6000 ಕ್ಕೂ ಅಧಿಕ ಕಿರು ಕಂಟೈನ್ ಮೆಂಟ್ ವಲಯಗಳನ್ನು ರಚಿಸಿದರು. ಈ ರೀತಿ ಕೂಡಾ ಜವಾಬ್ದಾರಿಯನ್ನು ನಿಗದಿ ಮಾಡಬಹುದು. ನಾವು ಆ ಕಿರು ಕಂಟೈನ್ ಮೆಂಟ್ ವಲಯದ ಮುಖ್ಯಸ್ಥರನ್ನು ಅದು ಹೇಗೆ ಉತ್ತಮವಾಗಿ ಕಾರ್ಯ ನಿರ್ವಹಣೆ ಮಾಡಿತು ಅಥವಾ ಇದರಿಂದ ಏನು ಹಾನಿಯಾಯಿತು ಎಂಬ ಬಗ್ಗೆ ಕೇಳಿ ತಿಳಿದುಕೊಳ್ಳಬಹುದು. ಆದುದರಿಂದ ನಾವು ಕಿರು ಕಂಟೈನ್ ಮೆಂಟ್ ವಲಯಗಳ ಬಗ್ಗೆ ಹೆಚ್ಚು ಒತ್ತು ನೀಡಿದಂತೆ, ನಾವು ಈ ಪರಿಸ್ಥಿತಿಯಿಂದ ಬಹಳ ಬೇಗ ಹೊರ ಬರುತ್ತೇವೆ. ನಾವು ಕಳೆದ ಒಂದೂವರೆ ವರ್ಷಗಳಲ್ಲಿ ಗಳಿಸಿದ ಅನುಭವವನ್ನು ಪೂರ್ಣವಾಗಿ ಬಳಸಿಕೊಳ್ಳಬೇಕು. ಮತ್ತು ನೋಡಿದ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ವಿವಿಧ ರಾಜ್ಯಗಳು ನವೀನ ನವೀನ ವಿಧಾನಗಳನ್ನು ಅಳವಡಿಸಿಕೊಂಡಿವೆ. ಈ ಪರಿಸ್ಥಿತಿಯನ್ನು ಬಹಳ ನವೀನ ರೀತಿಯಲ್ಲಿ ನಿಭಾಯಿಸಿದ ಕೆಲವು ಜಿಲ್ಲೆಗಳು, ಕೆಲವು ಗ್ರಾಮಗಳು, ಕೆಲವು ಅಧಿಕಾರಿಗಳು ನಿಮ್ಮ ರಾಜ್ಯದಲ್ಲಿರಬಹುದು. ಈ ಉತ್ತಮ ಪದ್ಧತಿಗಳನ್ನು ಗುರುತಿಸಿ ಅವುಗಳನ್ನು ಪ್ರಚುರಪಡಿಸಿದರೆ ನಮಗೆ ಹೆಚ್ಚಿನ ಪ್ರಯೋಜನವಾಗುತ್ತದೆ

ಸ್ನೇಹಿತರೇ,

ಕೊರೊನಾ ವೈರಾಣುವಿನ ಪ್ರತೀ ರೂಪಾಂತರದ ಬಗ್ಗೆಯೂ ನಾವು ಕಣ್ಗಾವಲು ಇರಿಸಬೇಕು. ಯಾಕೆಂದರೆ ಇದು ಬಹುರೂಪಿ. ಅದು ತನ್ನ ರೂಪವನ್ನು ಆಗಾಗ ಬದಲಿಸುತ್ತಿರುತ್ತದೆ ಮತ್ತು ಇದರ ಪರಿಣಾಮವಾಗಿ ಹೊಸ ಸವಾಲುಗಳನ್ನು ಹಾಕುತ್ತಿದೆ ಹಾಗು ಇದರಿಂದಾಗಿ ನಾವು ಪ್ರತೀ ರೂಪಾಂತರಿತ ತಳಿಯ ಬಗ್ಗೆಯೂ ನಿಕಟ ನಿಗಾ ಇರಿಸಬೇಕಾಗುತ್ತದೆ. ರೂಪಾಂತರಿತ ತಳಿಯ ಬಳಿಕ ಅದು ಹೇಗೆ ಅಪಾಯಕಾರಿ ಎಂಬ ಬಗ್ಗೆ ತಜ್ಞರು ನಿರಂತರವಾಗಿ ಅಧ್ಯಯನ ನಡೆಸುತ್ತಿದ್ದಾರೆ. ಇಡೀ ತಂಡ ಪರಿಸ್ಥಿತಿಯನ್ನು ನಿಕಟವಾಗಿ ಅವಲೋಕನ ಮಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಡೆಯುವುದು ಮತ್ತು ಚಿಕಿತ್ಸೆ ಬಹಳ ಮುಖ್ಯ. ನಾವು ನಮ್ಮ ಇಡೀ ಶಕ್ತಿಯನ್ನು ಮತ್ತು ಗಮನವನ್ನು ಈ ಎರಡು ಕ್ರಮಗಳಲ್ಲಿ  ಹಾಕಬೇಕಾಗುತ್ತದೆ. ನಾವು ಎರಡು ಯಾರ್ಡ್ ದೂರವನ್ನು ಕಾಯ್ದುಕೊಂಡರೆ, ಮುಖಗವಸುಗಳನ್ನು ಧರಿಸಿದರೆ, ಮತ್ತು ಲಸಿಕೆ ಹಾಕಿಸಿಕೊಂಡರೆ ವೈರಾಣುವಿನ ತೀವ್ರತೆ ಕಡಿಮೆಯಾಗುತ್ತದೆ. ಮತ್ತು ನಾವಿದನ್ನು ಕಳೆದ ಒಂದೂವರೆ ವರ್ಷಗಳ ನಮ್ಮ ಅನುಭವದಲ್ಲಿ ಕಂಡುಕೊಂಡಿದ್ದೇವೆ. ನಾವು ನಮ್ಮ ಪರೀಕ್ಷೆ, ಪತ್ತೆ ಮತ್ತು ಚಿಕಿತ್ಸೆ ತಂತ್ರವನ್ನು ಮುಂದುವರೆಸಿಕೊಂಡು ಹೋದರೆ ಮತ್ತು ನಮ್ಮ ಮೂಲಸೌಕರ್ಯವನ್ನು ಸುಧಾರಿಸಿದರೆ ನಾವು ಇನ್ನೂ ಹೆಚ್ಚು ಜೀವಗಳನ್ನು ಉಳಿಸಬಹುದು. ಇದು ಇಡೀ ಜಗತ್ತಿನಲ್ಲಿ ಅನುಭವದಿಂದ ಸಿದ್ಧವಾಗಿದೆ ಮತ್ತು ಆದುದರಿಂದ ನಾವು ಪ್ರತಿಯೊಬ್ಬ ನಾಗರಿಕರೂ ಕೊರೊನಾ ತಡೆಗೆ ಮಾಡಿರುವ ನಿಯಮಗಳನ್ನು ಅನುಸರಿಸುವಂತೆ ಉತ್ತೇಜಿಸಬೇಕು. ನಾವು ನಾಗರಿಕ ಸಮಾಜ ಮತ್ತು ಧಾರ್ಮಿಕ ಸಂಘಟನೆಗಳ ಮುಖ್ಯಸ್ಥರು ಭಾಗಿಯಾಗುವಂತೆ ಪ್ರಯತ್ನಗಳನ್ನು ನಡೆಸಬೇಕು.

ಸ್ನೇಹಿತರೇ,

ಪ್ರವಾಸೋದ್ಯಮ, ವ್ಯಾಪಾರ, ಮತ್ತು ವ್ಯವಹಾರಗಳಿಗೆ ಕೊರೊನಾದಿಂದ ಹೊಡೆತ ಬಿದ್ದಿದೆ ಎಂಬುದು ಸತ್ಯ ಸಂಗತಿ. ಆದರೆ ಇಂದು ನಾನಿಲ್ಲಿ ಒತ್ತಿ ಹೇಳುತ್ತೇನೆ, ಗಿರಿಧಾಮಗಳಿಗೆ ಮತ್ತು ಮಾರುಕಟ್ಟೆಗಳಿಗೆ ತೆರಳುತ್ತಿರುವ ಜನರು ಮುಖಗವಸುಗಳಿಲ್ಲದೆ ಹೋಗುತ್ತಿರುವುದು ಮತ್ತು ಶಿಷ್ಟಾಚಾರ ಪಾಲಿಸದೇ ಇರುವುದು ಕಳವಳಕಾರಿ ಸಂಗತಿಯಾಗಿದೆ. ಇದು ಸರಿಯಲ್ಲ. ಹಲವು ಸಂದರ್ಭಗಳಲ್ಲಿ ನಮಗೆ ಒಂದು ವಾದ ಸರಣಿ  ಕೇಳಿ ಬರುತ್ತದೆ, ಅದೆಂದರೆ ಮೂರನೇ ಅಲೆ ಅಪ್ಪಳಿಸುವುದಕ್ಕೆ ಮೊದಲು ನಾವು ಸಂತೋಷದಿಂದ ಇರುತ್ತೇವೆ ಎಂದು ಹೆಮ್ಮೆಯಿಂದ ಹೇಳುವಂತಹ ವಾದವದು. ಈ ಜನರಿಗೆ ನಾವು ವಿವರಿಸಿ ಹೇಳಬೇಕಾಗಿದೆ,  ಏನೆಂದರೆ ಮೂರನೇ ಅಲೆ ತಾನಾಗಿಯೇ ಬರುವುದಿಲ್ಲ. ಕೆಲವೊಮ್ಮೆ ಜನ ಕೇಳುತ್ತಾರೆ, ಮೂರನೇ ಅಲೆಯನ್ನು ಎದುರಿಸುವುದಕ್ಕೆ ಯಾವ ಸಿದ್ಧತೆಗಳನ್ನು ಮಾಡಲಾಗಿದೆ ಎಂಬುದಾಗಿ. ಮೂರನೇ ಅಲೆಗೆ ನೀವೇನು ಮಾಡುತ್ತೀರಿ ಎಂಬುದಾಗಿ ಅವರು ಕೇಳುತ್ತಾರೆ?. ವಾಸ್ತವವೆಂದರೆ ನಾವು ನಮ್ಮಲ್ಲಿಯೇ ಕೇಳಿಕೊಳ್ಳಬೇಕಾದ ಪ್ರಶ್ನೆ ಎಂದರೆ ಮೂರನೆ ಅಲೆಯನ್ನು ತಡೆಯುವುದು ಹೇಗೆ ಎಂಬುದು. ನಮ್ಮ ಶಿಷ್ಟಾಚಾರಗಳನ್ನು ಸಮರ್ಪಕವಾಗಿ ಜಾರಿಗೆ ತರುವುದು ಹೇಗೆ ಎಂಬುದು? ಮತ್ತು ಕೊರೊನಾ ಎಂಬುದು ತಾನಾಗಿಯೇ ಬರುವಂತಹದಲ್ಲ. ಅದನ್ನು ಜನತೆಯೇ ತರುವುದು ಅಥವಾ ತಂದುಕೊಳ್ಳುವುದು. ಆದುದರಿಂದ ನಾವು ಈ ವಿಷಯಗಳ ಬಗ್ಗೆ ಸಮಾನ ಮುನ್ನೆಚ್ಚರಿಕೆ ವಹಿಸಿದರೆ, ಆಗ ನಾವು ಮೂರನೇ ಅಲೆಯನ್ನು ತಡೆಯಲು ಸಫಲರಾಗಬಹುದು. ಮೂರನೇ ಅಲೆ ಬಂದರೆ ನಾವು ಏನು ಮಾಡಬೇಕು ಎಂಬುದು ಪ್ರತ್ಯೇಕ ವಿಷಯ. ಮುಖ್ಯ ವಿಷಯ ಎಂದರೆ ಅದನ್ನು ಹೇಗೆ ತಡೆಯಬೇಕು ಎಂಬುದು. ಆದುದರಿಂದ ನಮ್ಮ ನಾಗರಿಕರು ಜಾಗ್ರತೆಯ ವಿಷಯದಲ್ಲ್ಲಿ ರಾಜಿ ಮಾಡಿಕೊಳ್ಳಬಾರದು. ಎಚ್ಚರಿಕೆ ವಹಿಸುವಲ್ಲಿ , ಮತ್ತು ಕೋವಿಡ್ ಸಮುಚಿತ ಶಿಷ್ಟಾಚಾರದ ಅನುಸರಣೆಯಲ್ಲಿ ಹಿಂದುಳಿಯಬಾರದು.ಅಜಾಗ್ರತೆಯಿಂದ, ನಿರ್ಲಕ್ಷ್ಯದಿಂದ ಮತ್ತು ವಿಪರೀತ ಜನಜಂಗುಳಿಯಿಂದ ಕೊರೊನಾ ಸೋಂಕಿನಲ್ಲಿ ಭಾರೀ ಹೆಚ್ಚಳವಾಗಬಹುದು ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಆದುದರಿಂದ ಪ್ರತಿಯೊಂದು ಹಂತದಲ್ಲಿಯೂ ಅವಶ್ಯ ಕ್ರಮಗಳನ್ನು ಗಂಭೀರವಾಗಿ ಕೈಗೊಳ್ಳುವುದು ಅತ್ಯವಶ್ಯಕ. ಆದುದರಿಂದ ನಾವು ಜನಜಾತ್ರೆ ಸೇರುವ ಕಾರ್ಯಕ್ರಮಗಳನ್ನು ತಡೆಯಲು ಪ್ರಯತ್ನಿಸಬೇಕು.

ಸ್ನೇಹಿತರೇ,

ಕೇಂದ್ರ ಸರಕಾರ ನಡೆಸುತ್ತಿರುವ ’ಎಲ್ಲರಿಗೂ ಉಚಿತ ಲಸಿಕೆ” ಆಂದೋಲನ ಈಶಾನ್ಯದಲ್ಲಿಯೂ ಪ್ರಾಮುಖ್ಯವನ್ನು ಪಡೆದಿದೆ. ಮೂರನೇ ಅಲೆಯನ್ನು ನಿಭಾಯಿಸಲು ನಾವು ಲಸಿಕೆ ನೀಡಿಕೆಯ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಬೇಕು. ನಾವು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳ ಜನರನ್ನು , ಮತ್ತು ಸೆಲೆಬ್ರಿಟಿಗಳನ್ನು ಲಸಿಕಾಕರಣ ಕುರಿತ ಕಟ್ಟು ಕತೆಗಳನ್ನು ತಳ್ಳಿ ಹಾಕುವುದಕ್ಕಾಗಿ ಬಳಸಿಕೊಳ್ಳಬೇಕು.  ಕೊನೆಯ ಹಂತದವರೆಗೂ ಅವರಿಂದ ಇದನ್ನು ಪ್ರಚುರಪಡಿಸಬೇಕು ಮತ್ತು ಜನರನ್ನೂ ಒಗ್ಗೂಡಿಸಬೇಕು. ನಾನು ಆರಂಭದಲ್ಲಿ ಹೇಳಿದಂತೆ ಈಶಾನ್ಯದ ಕೆಲವು ರಾಜ್ಯಗಳು ಲಸಿಕಾಕರಣಕ್ಕೆ ಸಂಬಂಧಿಸಿ ಉತ್ತಮ ಕಾರ್ಯವನ್ನು ಮಾಡಿವೆ. ಕೊರೊನಾ ಸೋಂಕು ಹಬ್ಬುವ ಅಪಾಯ ಇರುವ ಸ್ಥಳಗಳಲ್ಲಿ ಲಸಿಕೆ ನೀಡುವಿಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕು.

ಸ್ನೇಹಿತರೇ,

ನಾವು ಪರೀಕ್ಷೆಗೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯ ಸುಧಾರಣೆಯ ನಿಟ್ಟಿನಲ್ಲಿ ಮುಂದಡಿ ಇಡಬೇಕು. ಈ ನಿಟ್ಟಿನಲ್ಲಿ ಸಂಪುಟವು ಇತ್ತೀಚೆಗೆ 23,000 ಕೋ.ರೂ.ಗಳ ಹೊಸ ಪ್ಯಾಕೇಜಿಗೆ ಅಂಗೀಕಾರ ನೀಡಿದೆ. ಈ ಪ್ಯಾಕೇಜ್ ಈಶಾನ್ಯ ರಾಜ್ಯಗಳ ಪ್ರತೀ ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡಲಿದೆ. ಈ ಪ್ಯಾಕೇಜ್ ಈಶಾನ್ಯದಲ್ಲಿ ಪರೀಕ್ಷೆ, ರೋಗ ಪತ್ತೆ ಮತ್ತು ತಳಿ ಅನುಕ್ರಮಣಿಕೆಗೆ  ಹೆಚ್ಚಿನ ಒತ್ತು ನೀಡಲಿದೆ. ಇದು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸ್ಥಳಗಳಲ್ಲಿ ತಕ್ಷಣವೇ ಐ.ಸಿ.ಯು. ಹಾಸಿಗೆಗಳ ಸಾಮರ್ಥ್ಯ ಹೆಚ್ಚಳಕ್ಕೆ ಸಹಾಯ ಮಾಡಲಿದೆ.ನಿರ್ದಿಷ್ಟವಾಗಿ ಹೇಳುವುದಾದರೆ ನಾವು ಆಮ್ಲಜನಕ ಮತ್ತು ಮಕ್ಕಳ ಚಿಕಿತ್ಸೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಾಗಿದೆ. ಪಿ.ಎಂ. ಕೇರ್ಸ್ ಅಡಿಯಲ್ಲಿ ದೇಶಾದ್ಯಂತ ನೂರಾರು ಹೊಸ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ಈ ನಿಟ್ಟಿನಲ್ಲಿ ಆಗುತ್ತಿರುವ ಕ್ಷಿಪ್ರ ಗತಿಯ ಪ್ರಗತಿಯ ಬಗ್ಗೆ ಮುಖ್ಯಮಂತ್ರಿಗಳು ತೃಪ್ತಿ ವ್ಯಕ್ತಪಡಿಸಿರುವುದು ನನಗೆ ಸಂತೋಷ ತಂದಿದೆ. ಈಶಾನ್ಯಕ್ಕೆ ಸುಮಾರು 150 ಸ್ಥಾವರಗಳನ್ನು ಮಂಜೂರು ಮಾಡಲಾಗಿದೆ. ಇವುಗಳು ಆದಷ್ಟು ಬೇಗ ಪೂರ್ಣಗೊಳ್ಳಬೇಕು ಮತ್ತು ಅಲ್ಲಿ ಯಾವುದೇ ಅಡೆ ತಡೆಗಳು ಎದುರಾಗಬಾರದು ಎಂಬುದಾಗಿ ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಇದರ ಮೇಲೆ ಕಣ್ಗಾವಲು ಇಡಿ  ಮತ್ತು ಸೂಕ್ತ  ಕೌಶಲ್ಯಯುಕ್ತ ಮಾನವ ಸಂಪನ್ಮೂಲವನ್ನು ಏಕಕಾಲಕ್ಕೆ ತಯಾರಾಗಿಡಬೇಕು. ಹಾಗಾದಾಗ ನಿಮಗೆ ಭವಿಷ್ಯದಲ್ಲಿ ಯಾವುದೇ ಸಮಸ್ಯೆಗಳು ಎದುರಾಗುವುದಿಲ್ಲ. ಈಶಾನ್ಯದ ಭೌಗೋಳಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾತ್ಕಾಲಿಕ ಆಸ್ಪತ್ರೆಗಳನು ಕಟ್ಟುವುದು ಕೂಡಾ ಬಹಳ ಮುಖ್ಯ. ಆರಂಭದಲ್ಲಿ ನಾನು ಪ್ರಸ್ತಾಪಿಸಿದಂತೆ ಅಲ್ಲಿ ಇನ್ನೊಂದು ಮುಖ್ಯ ವಿಷಯವೂ ಇದೆ, ಮತ್ತು ಅದು ತರಬೇತಿ ಪಡೆದ ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದುದಾಗಿದೆ. ಸ್ಥಾಪನೆಯಾಗುತ್ತಿರುವ ಆಮ್ಲಜನಕ ಸ್ಥಾವರಗಳನ್ನು ನಡೆಸಲು. ನಿರ್ಮಾಣ ಮಾಡಲಾಗುತ್ತಿರುವ ಐ.ಸಿ.ಯು. ಹಾಸಿಗೆಗಳನ್ನು ನಿರ್ವಹಿಸಲು, ಬ್ಲಾಕ್ ಮಟ್ಟದ ಆಸ್ಪತ್ರೆಗಳಿಗೆ ಸರಬರಾಜಾಗುತ್ತಿರುವ ಯಂತ್ರಗಳನ್ನು ನಿರ್ವಹಣೆ ಮಾಡಲು ನುರಿತ ಮಾನವ ಸಂಪನ್ಮೂಲ ಅವಶ್ಯಕ. ಈ ನಿಟ್ಟಿನಲ್ಲಿ ನಿಮಗೇನು ಸಹಾಯ ಬೇಕೋ ಅದನ್ನು ಕೇಂದ್ರ ಸರಕಾರ ಒದಗಿಸಲಿದೆ.

ಸ್ನೇಹಿತರೇ,

ಇಂದು ನಾವು ದೇಶದಲ್ಲಿ ದೈನಿಕ 20 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯವನ್ನು ತಲುಪಿದ್ದೇವೆ. ಪರೀಕ್ಷಾ ಮೂಲಸೌಕರ್ಯವನ್ನು ಈಶಾನ್ಯದ ಪ್ರತೀ ಜಿಲ್ಲೆಗಳಲ್ಲಿಯೂ ಆದ್ಯತೆಯ ಮೇಲೆ ವಿಸ್ತರಿಸಬೇಕಾಗಿದೆ. ಅದರಲ್ಲೂ ವಿಶೇಷವಾಗಿ ತೀವ್ರವಾಗಿ ಬಾಧೆಗೆ ಒಳಗಾಗಿರುವ ಜಿಲ್ಲೆಗಳಲ್ಲಿ ಇದಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಇದು ಮಾತ್ರವಲ್ಲ, ಪರೀಕ್ಷೆಯ ಜೊತೆ ಬ್ಲಾಕ್ ಗಳ ಗುಚ್ಛಗಳಲ್ಲಿ ನಾವು ಪರೀಕ್ಷೆಯನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬೇಕು. ನಾವು ನಮ್ಮ ಸಾಮೂಹಿಕ ಪ್ರಯತ್ನಗಳಿಂದ ಮತ್ತು ದೇಶದ ಜನತೆಯ ಸಹಕಾರದಿಂದ ಕೊರೊನಾ ಸೋಂಕನ್ನು ನಿಯಂತ್ರಣದಲ್ಲಿಡಲು ಸಮರ್ಥರಾಗುತ್ತೇವೆ ಎಂಬ ವಿಶ್ವಾಸ ನನಗಿದೆ. ಇಂದು ನಾವು ಈಶಾನ್ಯದ ನಿರ್ದಿಷ್ಟ ವಿಷಯಗಳ ಬಗ್ಗೆ ವಿವರವಾದ ಚರ್ಚೆ ಮಾಡಿದ್ದೇವೆ.ನನಗೆ ಭರವಸೆ ಇದೆ, ನಮ್ಮ ಇಡೀ ತಂಡ ಈಶಾನ್ಯದಲ್ಲಿ ಬರಲಿರುವ ದಿನಗಳಲ್ಲಿ ಕೊರೊನಾದ ಬೆಳವಣಿಗೆಯನ್ನು ತಡೆಯಲು ಕಾರ್ಯನಿರತವಾಗುತ್ತದೆ ಎಂಬುದಾಗಿ.ಮತ್ತು ನಮಗೆ ಯಶಸ್ಸು ದೊರೆಯುತ್ತದೆ ಎಂಬುದಾಗಿ. ನಿಮಗೆಲ್ಲರಿಗೂ ಮತ್ತೊಮ್ಮೆ ಬಹಳ ಬಹಳ ಧನ್ಯವಾದಗಳು!. ನಾನು ನಿಮಗೆಲ್ಲರಿಗೂ ಶುಭವನ್ನು ಹಾರೈಸುತ್ತೇನೆ. ಮತ್ತು ನನ್ನ ಈಶಾನ್ಯದ ಸಹೋದರರು ಹಾಗು ಸಹೋದರಿಯರು ಕೊರೊನಾದಿಂದ ಶೀಘ್ರವೇ ಮುಕ್ತರಾಗುತ್ತಾರೆ ಎಂದು ಆಶಿಸುತ್ತೇನೆ.

 

Explore More
76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ

ಜನಪ್ರಿಯ ಭಾಷಣಗಳು

76ನೇ ಸ್ವಾತಂತ್ರ್ಯೋತ್ಸವ ದಿನದಂದು ಕೆಂಪು ಕೋಟೆಯ ಮೇಲಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಭಾಷಾಂತರ
New Parliament building imbibes spirit of Ek Bharat Shreshtha Bharat

Media Coverage

New Parliament building imbibes spirit of Ek Bharat Shreshtha Bharat
...

Nm on the go

Always be the first to hear from the PM. Get the App Now!
...
Tamil Nadu has been a bastion of Indian nationalism: PM Modi
May 27, 2023
ಶೇರ್
 
Comments
“Tamil Nadu has been a bastion of Indian nationalism”
“Under the guidance of Adheenam and Raja Ji we found a blessed path from our sacred ancient Tamil Culture - the path of transfer of power through the medium of Sengol”
“In 1947 Thiruvaduthurai Adheenam created a special Sengol. Today, pictures from that era are reminding us about the deep emotional bond between Tamil culture and India's destiny as a modern democracy”
“Sengol of Adheenam was the beginning of freeing India of every symbol of hundreds of years of slavery”
“it was the Sengol which conjoined free India to the era of the nation that existed before slavery”
“The Sengol is getting its deserved place in the temple of democracy”

नअनैवरुक्कुम् वणक्कम्

ऊँ नम: शिवाय, शिवाय नम:!

हर हर महादेव!

सबसे पहले, विभिन्न आदीनम् से जुड़े आप सभी पूज्य संतों का मैं शीश झुकाकर अभिनंदन करता हूं। आज मेरे निवास स्थान पर आपके चरण पड़े हैं, ये मेरे लिए बहुत सौभाग्य की बात है। ये भगवान शिव की कृपा है जिसकी वजह से मुझे एक साथ आप सभी शिव भक्तों के दर्शन करने का मौका मिला है। मुझे इस बात की भी बहुत खुशी है कि कल नए संसद भवन के लोकार्पण के समय आप सभी वहां साक्षात आकर के आशीर्वाद देने वाले हैं।

पूज्य संतगण,

हम सभी जानते हैं कि हमारे स्वतंत्रता संग्राम में तमिलनाडु की कितनी महत्वपूर्ण भूमिका रही है। वीरमंगई वेलु नाचियार से लेकर मरुदु भाइयों तक, सुब्रह्मण्य भारती से लेकर नेताजी सुभाष चंद्र बोस के साथ जुड़ने वाले अनेकों तमिल लोगों तक, हर युग में तमिलनाडु, भारतीय राष्ट्रवाद का गढ़ रहा है। तमिल लोगों के दिल में हमेशा से मां भारती की सेवा की, भारत के कल्याण की भावना रही है। बावजूद इसके, ये बहुत दुर्भाग्यपूर्ण है कि भारत की आजादी में तमिल लोगों के योगदान को वो महत्व नहीं दिया गया, जो दिया जाना चाहिए था। अब बीजेपी ने इस विषय को प्रमुखता से उठाना शुरू किया है। अब देश के लोगों को भी पता चल रहा है कि महान तमिल परंपरा और राष्ट्रभक्ति के प्रतीक तमिलनाडु के साथ क्या व्यवहार हुआ था।

जब आजादी का समय आया, तब सत्ता के हस्तांतरण के प्रतीक को लेकर प्रश्न उठा था। इसके लिए हमारे देश में अलग-अलग परंपराएं रही हैं। अलग-अलग रीति-रिवाज भी रहे हैं। लेकिन उस समय राजाजी और आदीनम् के मार्गदर्शन में हमें अपनी प्राचीन तमिल संस्कृति से एक पुण्य मार्ग मिला था। ये मार्ग था- सेंगोल के माध्यम से सत्ता हस्तांतरण का। तमिल परंपरा में, शासन चलाने वाले को सेंगोल दिया जाता था। सेंगोल इस बात का प्रतीक था कि उसे धारण करने वाले व्यक्ति पर देश के कल्याण की जिम्मेदारी है और वो कभी कर्तव्य के मार्ग से विचलित नहीं होगा। सत्ता हस्तांतरण के प्रतीक के तौर पर तब 1947 में पवित्र तिरुवावडुतुरै आदीनम् द्वारा एक विशेष सेंगोल तैयार किया गया था। आज उस दौर की तस्वीरें हमें याद दिला रही हैं कि तमिल संस्कृति और आधुनिक लोकतंत्र के रूप में भारत की नियति के बीच कितना भावुक और आत्मीय संबंध रहा है। आज उन गहरे संबंधों की गाथा इतिहास के दबे हुए पन्नों से बाहर निकलकर एक बार फिर जीवंत हो उठी है। इससे उस समय की घटनाओं को समझने का सही दृष्टिकोण भी मिलता है। और इसके साथ ही, हमें ये भी पता चलता है कि सत्ता के हस्तांतरण के इस सबसे बड़े प्रतीक के साथ क्या किया गया।

मेरे देशवासियों,

आज मैं राजाजी और विभिन्न आदीनम् की दूरदर्शिता को भी विशेष तौर पर नमन करूंगा। आदीनम के एक सेंगोल ने, भारत को सैकड़ों वर्षों की गुलामी के हर प्रतीक से मुक्ति दिलाने की शुरुआत कर दी थी। जब भारत की आजादी का प्रथम पल आया, आजादी का प्रथम पल, वो क्षण आया, तो ये सेंगोल ही था, जिसने गुलामी से पहले वाले कालखंड और स्वतंत्र भारत के उस पहले पल को आपस में जोड़ दिया था। इसलिए, इस पवित्र सेंगोल का महत्व सिर्फ इतना ही नहीं है कि ये 1947 में सत्ता हस्तांतरण का प्रतीक बना था। इस सेंगोल का महत्व इसलिए भी है क्योंकि इसने गुलामी के पहले वाले गौरवशाली भारत से, उसकी परंपराओं से, स्वतंत्र भारत के भविष्य को कनेक्ट कर दिया था। अच्छा होता कि आजादी के बाद इस पूज्य सेंगोल को पर्याप्त मान-सम्मान दिया जाता, इसे गौरवमयी स्थान दिया जाता। लेकिन ये सेंगोल, प्रयागराज में, आनंद भवन में, Walking Stick यानि पैदल चलने पर सहारा देने वाली छड़ी कहकर, प्रदर्शनी के लिए रख दिया गया था। आपका ये सेवक और हमारी सरकार, अब उस सेंगोल को आनंद भवन से निकालकर लाई है। आज आजादी के उस प्रथम पल को नए संसद भवन में सेंगोल की स्थापना के समय हमें फिर से पुनर्जीवित करने का मौका मिला है। लोकतंत्र के मंदिर में आज सेंगोल को उसका उचित स्थान मिल रहा है। मुझे खुशी है कि अब भारत की महान परंपरा के प्रतीक उसी सेंगोल को नए संसद भवन में स्थापित किया जाएगा। ये सेंगोल इस बात की याद दिलाता रहेगा कि हमें कर्तव्य पथ पर चलना है, जनता-जनार्दन के प्रति जवाबदेह बने रहना है।

पूज्य संतगण,

आदीनम की महान प्रेरक परंपरा, साक्षात सात्विक ऊर्जा का प्रतीक है। आप सभी संत शैव परंपरा के अनुयायी हैं। आपके दर्शन में जो एक भारत श्रेष्ठ भारत की भावना है, वो स्वयं भारत की एकता और अखंडता का प्रतिबिंब है। आपके कई आदीनम् के नामों में ही इसकी झलक मिल जाती है। आपके कुछ आदीनम् के नाम में कैलाश का उल्लेख है। ये पवित्र पर्वत, तमिलनाडु से बहुत दूर हिमालय में है, फिर भी ये आपके हृदय के करीब है। शैव सिद्धांत के प्रसिद्ध संतों में से एक तिरुमूलर् के बारे में कहा जाता है कि वो कैलाश पर्वत से शिव भक्ति का प्रसार करने के लिए तमिलनाडु आए थे। आज भी, उनकी रचना तिरुमन्दिरम् के श्लोकों का पाठ भगवान शिव की स्मृति में किया जाता है। अप्पर्, सम्बन्दर्, सुन्दरर् और माणिक्का वासगर् जैसे कई महान संतों ने उज्जैन, केदारनाथ और गौरीकुंड का उल्लेख किया है। जनता जनार्दन के आशीर्वाद से आज मैं महादेव की नगरी काशी का सांसद हूं, तो आपको काशी की बात भी बताऊंगा। धर्मपुरम आदीनम् के स्वामी कुमारगुरुपरा तमिलनाडु से काशी गए थे। उन्होंने बनारस के केदार घाट पर केदारेश्वर मंदिर की स्थापना की थी। तमिलनाडु के तिरुप्पनन्दाळ् में काशी मठ का नाम भी काशी पर रखा गया है। इस मठ के बारे में एक दिलचस्प जानकारी भी मुझे पता चली है। कहा जाता है कि तिरुप्पनन्दाळ् का काशी मठ, तीर्थयात्रियों को बैकिंग सेवाएं उपलब्ध कराता था। कोई तीर्थयात्री तमिलनाडु के काशी मठ में पैसे जमा करने के बाद काशी में प्रमाणपत्र दिखाकर वो पैसे निकाल सकता था। इस तरह, शैव सिद्धांत के अनुयायियों ने सिर्फ शिव भक्ति का प्रसार ही नहीं किया बल्कि हमें एक दूसरे के करीब लाने का कार्य भी किया।

पूज्य संतगण,

सैकड़ों वर्षों की गुलामी के बाद भी तमिलनाडु की संस्कृति आज भी जीवंत और समृद्ध है, तो इसमें आदीनम् जैसी महान और दिव्य परंपरा की भी बड़ी भूमिका है। इस परंपरा को जीवित रखने का दायित्व संतजनों ने तो निभाया ही है, साथ ही इसका श्रेय पीड़ित-शोषित-वंचित सभी को जाता है कि उन्होंने इसकी रक्षा की, उसे आगे बढ़ाया। राष्ट्र के लिए योगदान के मामले में आपकी सभी संस्थाओं का इतिहास बहुत गौरवशाली रहा है। अब उस अतीत को आगे बढ़ाने, उससे प्रेरित होने और आने वाली पीढ़ियों के लिए काम करने का समय है।

पूज्य संतगण,

देश ने अगले 25 वर्षों के लिए कुछ लक्ष्य तय किए हैं। हमारा लक्ष्य है कि आजादी के 100 साल पूरे होने तक एक मजबूत, आत्मनिर्भर और समावेशी विकसित भारत का निर्माण हो। 1947 में आपकी महत्वपूर्ण भूमिका से कोटि-कोटि देशवासी पुन: परिचित हुए हैं। आज जब देश 2047 के बड़े लक्ष्यों को लेकर आगे बढ़ रहा है तब आपकी भूमिका और महत्वपूर्ण हो गई है। आपकी संस्थाओं ने हमेशा सेवा के मूल्यों को साकार किया है। आपने लोगों को एक-दूसरे से जोड़ने का, उनमें समानता का भाव पैदा करने का बड़ा उदाहरण पेश किया है। भारत जितना एकजुट होगा, उतना ही मजबूत होगा। इसलिए हमारी प्रगति के रास्ते में रुकावटें पैदा करने वाले तरह-तरह की चुनौतियां खड़ी करेंगे। जिन्हें भारत की उन्नति खटकती है, वो सबसे पहले हमारी एकता को ही तोड़ने की कोशिश करेंगे। लेकिन मुझे विश्वास है कि देश को आपकी संस्थाओं से आध्यात्मिकता और सामाजिकता की जो शक्ति मिल रही है, उससे हम हर चुनौती का सामना कर लेंगे। मैं फिर एक बार, आप मेरे यहां पधारे, आप सबने आशीर्वाद दिये, ये मेरा सौभाग्य है, मैं फिर एक बार आप सबका हृदय से आभार व्यक्त करता हूँ, आप सबको प्रणाम करता हूँ। नए संसद भवन के लोकार्पण के अवसर पर आप सब यहां आए और हमें आशीर्वाद दिया। इससे बड़ा सौभाग्य कोई हो नहीं सकता है और इसलिए मैं जितना धन्यवाद करूँ, उतना कम है। फिर एक बार आप सबको प्रणाम करता हूँ।

ऊँ नम: शिवाय!

वणक्कम!