"ಯುವಶಕ್ತಿಯೇ ವಿಕಸಿತ ಭಾರತದ ಆಧಾರ"
“ಮಹಾದೇವರ ಆಶೀರ್ವಾದದಿಂದ ಕಳೆದ 10 ವರ್ಷಗಳಿಂದ ‘ವಿಕಾಸದ ಡಮರುಗ’ ಕಾಶಿಯಲ್ಲಿ ಪ್ರತಿಧ್ವನಿಸುತ್ತಿದೆ.
"ಕಾಶಿ ನಮ್ಮ ನಂಬಿಕೆಯ ತೀರ್ಥಯಾತ್ರಾ ಸ್ಥಳ ಮಾತ್ರವಲ್ಲ, ಇದು ಭಾರತದ ಶಾಶ್ವತ ಪ್ರಜ್ಞೆಯ ಚೈತನ್ಯದ ಕೇಂದ್ರವಾಗಿದೆ"
"ವಿಶ್ವನಾಥ್ ಧಾಮ್ ನಿರ್ಣಾಯಕ ನಿರ್ದೇಶನವನ್ನು ನೀಡುತ್ತದೆ ಮತ್ತು ಭಾರತವನ್ನು ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯುತ್ತದೆ”
"ಹೊಸ ಕಾಶಿಯು ನವ ಭಾರತಕ್ಕೆ ಸ್ಫೂರ್ತಿಯಾಗಿ ಹೊರಹೊಮ್ಮಿದೆ"
“ಭಾರತವು ಒಂದು ಕಲ್ಪನೆ, ಮತ್ತು ಸಂಸ್ಕೃತವು ಅದರ ಮುಖ್ಯ ಅಭಿವ್ಯಕ್ತಿಯಾಗಿದೆ. ಭಾರತವು ಒಂದು ಪ್ರಯಾಣ, ಸಂಸ್ಕೃತವು ಅದರ ಇತಿಹಾಸದ ಮುಖ್ಯ ಅಧ್ಯಾಯವಾಗಿದೆ. ಭಾರತವು ವಿವಿಧತೆಯಲ್ಲಿ ಏಕತೆಯ ನಾಡಾಗಿದೆ, ಸಂಸ್ಕೃತವು ಅದರ ಮೂಲವಾಗಿದೆ.
"ಇಂದು, ಕಾಶಿಯನ್ನು ಪರಂಪರೆ ಮತ್ತು ಅಭಿವೃದ್ಧಿಯ ಮಾದರಿಯಾಗಿ ನೋಡಲಾಗುತ್ತಿದೆ. ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆಯ ಸುತ್ತ ಆಧುನಿಕತೆಯು ಹೇಗೆ ವಿಸ್ತರಿಸುತ್ತದೆ ಎಂಬುದನ್ನು ಜಗತ್ತು ಇಂದು ನೋಡುತ್ತಿದೆ.
"ಕಾಶಿ ಮತ್ತು ಕಂಚಿಯಲ್ಲಿ ವೇದಗಳ ಪಠಣವು 'ಏಕ ಭಾರತ ಶ್ರೇಷ್ಠ ಭಾರತ'ದ ಧ್ವನಿಯಾಗಿದೆ"

ನಮಃ ಪಾರ್ವತಿ ಪತಯೇ ….. ಹರ ಹರ ಮಹದೇವ !

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಜಿ, ಕಾಶಿ ವಿದ್ವತ್ ಪರಿಷತ್ ನ ಅಧ್ಯಕ್ಷ ಪ್ರೊ. ವಿಶಿಷ್ಟ ತ್ರಿಪಾಠಿ ಜಿ, ಕಾಶಿ ವಿಶ್ವನಾಥ ನ್ಯಾಸ ಪರಿಷತ್ ನ ಅಧ್ಯಕ್ಷ ಪ್ರೊ. ನಾಗೇಂದ್ರ ಜಿ, ರಾಜ್ಯ ಸಚಿವ ಸಂಪುಟದ ಸದಸ್ಯರೇ ಮತ್ತು ಇತರ ಗಣ್ಯರೇ, ಗೌರವಾನ್ವಿತ ವಿದ್ವಾಂಸರೇ ಹಾಗೂ ಮಹಿಳೆಯರೆ, ಮಹನೀಯರೇ,

ಕುಟುಂಬದ ಎಲ್ಲ ಸದಸ್ಯರಿಗೆ ನನ್ನ ಶುಭಾಶಯಗಳು, ಎಲ್ಲ ವಿದ್ವಾಂಸರ ನಡುವೆ ವಿಶೇಷವಾಗಿ ಯುವ ವಿದ್ವಾಂಸರ ನಡುವೆ ಮಹಾಮಾನದ ಈ ಪವಿತ್ರ ಸಂದರ್ಭದಲ್ಲಿ ಜ್ಞಾನದ ನದಿಯಲ್ಲಿ ಮಿಂದೇಳುತ್ತಿರುವಂತಹ ಅನುಭವ ನನಗಾಗುತ್ತಿದೆ. ಒಂದು ಕಾಲದಲ್ಲಿ ವಿದ್ವತ್ತಿಗೆ ಹೆಸರಾದ ಕಾಶಿಯನ್ನು ನಮ್ಮ ಆಧುನಿಕ ಯುವಜನತೆ ಅದರೊಂದಿಗೆ ಬೆಸೆದುಕೊಂಡಿರುವ ಅಸ್ಮಿತೆಯನ್ನು ಮತ್ತಷ್ಟು ಬಲವರ್ಧನೆಗೊಳಿಸುವ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ. ಇದು ಹೃದಯಕ್ಕೆ ತೃಪ್ತಿ ತರುವುದಷ್ಟೇ ಅಲ್ಲದೆ, ಹೆಮ್ಮೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಅಮೃತಕಾಲದ ಸಮಯದಲ್ಲಿ ದೇಶದ ಭವಿಷ್ಯವನ್ನು ಮತ್ತಷ್ಟು ಎತ್ತರಕ್ಕೆ ನಮ್ಮ ಯುವಜನತೆ ಕೊಂಡೊಯ್ಯಲಿದ್ದಾರೆ ಎಂಬ ನಂಬಿಕೆ ಪುನಃ ಖಚಿತವಾಗಿದೆ ಮತ್ತು ಕಾಶಿ ಜ್ಞಾನದ ರಾಜಧಾನಿಯಾಗಿದೆ. ಇಂದು ಕಾಶಿಯ ಸಾಮರ್ಥ್ಯವನ್ನು ಮತ್ತೊಮ್ಮೆ ನಿರೂಪಿಸಲಾಗುತ್ತಿದೆ. ಇದು ಇಡೀ ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ ಮತ್ತು ನನಗೆ ಕಾಶಿ ಸಂಸದ್ ಸಂಸ್ಕೃತ ಪ್ರತಿಯೋಗಿತ, ಕಾಶಿ ಸಂಸದ್ ಗ್ಯಾನ್ ಪ್ರತಿಯೋಗಿತ ಮತ್ತು ಕಾಶಿ ಸಂಸದ್ ಫೋಟೋಗ್ರಫಿ ಪ್ರತಿಯೋಗಿತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಅವಕಾಶ ನನಗೆ ದೊರೆತಿದೆ. ಎಲ್ಲ ವಿಜೇತರಿಗೆ ಅವರ ಪರಿಶ್ರಮಕ್ಕೆ, ಅವರ ಪ್ರತಿಭೆಗೆ ನಾನು ಅಭಿನಂದನೆಗಳನ್ನು ಹೇಳಲು ಬಯಸುತ್ತೇನೆ. ಜತೆಗೆ ಅವರ ಕುಟುಂಬದವರೂ ಹಾಗೂ ಅವರ ಮಾರ್ಗದರ್ಶಿಗಳನ್ನೂ ಸಹ ನಾನು ಅಭಿನಂದಿಸುತ್ತೇನೆ. ಸಾಧನೆಗೆ ಕೆಲವೇ ಮೆಟ್ಟಿಲುಗಳು ಹಿಂದುಳಿದಿರುವಂತಹವರು, 4ನೇ ಸ್ಥಾನ ತಲುಪಿದಂತವರನ್ನೂ ಸಹ ನಾನು ಅಭಿನಂದಿಸುತ್ತೇನೆ. ಜ್ಞಾನ ಪರಂಪರೆಯ ಕಾಶಿಯಲ್ಲಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ಹೆಮ್ಮೆಯ ವಿಷಯವಾಗಿದೆ. ಇಲ್ಲಿ ಯಾರೊಬ್ಬರೂ ಸೋತಿಲ್ಲ ಅಥವಾ ಹಿಂದೆ ಬಿದ್ದಿಲ್ಲ, ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ನೀವು ಸಾಕಷ್ಟು ಕಲಿತಿದ್ದೀರಿ ಮತ್ತು ಹಲವು ಹೆಜ್ಜೆಗಳನ್ನು ಮುಂದಿಟ್ಟಿದ್ದೀರಿ. ಆದ್ದರಿಂದ ಈ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಪ್ರತಿಯೊಬ್ಬರೂ ಕೂಡ ಅಭಿನಂದನೆಗಳಿಗೆ ಅರ್ಹರಾಗಿದ್ದೀರಿ.

 

ಆದ್ದರಿಂದ ಸಹೋದರ ಮತ್ತು ಸಹೋದರಿಯರೇ,

ವಿಶ್ವನಾಥಧಾಮದ ಉದ್ಘಾಟನೆಯ ಸಂದರ್ಭದಲ್ಲಿ ನಾನು ‘ವಿಶ್ವನಾಥಧಾಮ ಭಾರತಕ್ಕೆ ನಿರ್ಣಾಯಕ ದಿಕ್ಸೂಚಿಯನ್ನು ನೀಡಲಿದೆ. ಅದು ಭಾರತವನ್ನು ಉಜ್ವಲ ಭವಿಷ್ಯದತ್ತ ಕೊಂಡೊಯ್ಯಲಿದೆ’ ಎಂದು ಹೇಳಿದ್ದೆ ಎಂದು ಸ್ಮರಿಸಿಕೊಂಡರು. ಇಂದು ಅದನ್ನು ನೋಡುತ್ತಿದ್ದೇವೆಯೋ ಇಲ್ಲವೋ ಅಥವಾ ಅದು ಘಟಿಸಿದೆಯೋ ಇಲ್ಲವೋ,  ವಿಶ್ವನಾಥಧಾಮ ಮತ್ತೊಮ್ಮೆ ಭಾರತದ ನಿರ್ಣಾಯಕ ಭವಿಷ್ಯದಲ್ಲಿ ರಾಷ್ಟ್ರೀಯ ಪಾತ್ರವನ್ನು ವಹಿಸುತ್ತಿದೆ. ವಿಶ್ವನಾಥಧಾಮದ ಆವರಣದಲ್ಲಿ ದೇಶದ ಎಲ್ಲೆಡೆಯ ವಿದ್ವಾಂಸರ ಸಮ್ಮೇಳನಗಳು ನಡೆಯುತ್ತಿವೆ. ವಿಶ್ವನಾಥ ದೇವಾಲಯ ನ್ಯಾಯಶಾಸ್ತ್ರ ಪ್ರವಚನ ಪರಂಪರೆಯನ್ನು ಪುನರುಜ್ಜೀವನಗೊಳಿಸುತ್ತಿದೆ. ಶಾಸ್ತ್ರೀಯ ತಾಳಗಳೊಂದಿಗೆ ಕಾಶಿಯಲ್ಲಿ ವಿದ್ವಾಂಸರ ಚಿಂತನ ಮಂಥನಗಳು ಅನುರಣಿಸುತ್ತಿವೆ. ಇದು ದೇಶಾದ್ಯಂತ ಇರುವ ವಿದ್ವಾಂಸರ ನಡುವೆ ಹೊಸ ಆಲೋಚನೆಗಳ ವಿನಿಮಯವನ್ನು ಹೆಚ್ಚಿಸಿದೆ. ಇದು ಪ್ರಾಚೀನ ಜ್ಞಾನವನ್ನು ಸಂರಕ್ಷಿಸುತ್ತದೆ ಮತ್ತು ಹೊಸ ಆಲೋಚನೆಗಳನ್ನು ಸೃಷ್ಟಿಸುತ್ತದೆ. ಆ ನಿಟ್ಟಿನಲ್ಲಿ ಕಾಶಿ ಸಂಸದ್ ಸಂಸ್ಕೃತಿ ಪ್ರತಿಯೋಗಿತ ಮತ್ತು ಕಾಶಿ ಸಂಸದ್ ಗ್ಯಾನ ಪ್ರತಿಯೋಗಿತ ಆ ನಿಟ್ಟಿನಲ್ಲಿ ಒಂದು ಭಾಗವಾಗಿದೆ. 

ಸಾವಿರಾರು ಯುವ ಸಂಸ್ಕೃತ ಕಲಿಕಾರ್ಥಿಗಳಿಗೆ ಪುಸ್ತಕ, ವಸ್ತ್ರ ಮತ್ತು ಅಗತ್ಯ ಸಂಪನ್ಮೂಲಗಳ ಜತೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಶಿಕ್ಷಕರಿಗೂ ಸಹ ಅಗತ್ಯ ನೆರವು ನೀಡಲಾಗುತ್ತಿದೆ. ಇದಷ್ಟೇ ಅಲ್ಲ, ವಿಶ್ವನಾಥ ಧಾಮ ತಮಿಳು ಸಂಗಮಮ್ ಮತ್ತು ಗಂಗಾ ಪುಷ್ಕರಾಲು ಉತ್ಸವದ ಮೂಲಕ ‘ಏಕ ಭಾರತ್ ಶ್ರೇಷ್ಠ ಭಾರತ್’ ಅಭಿಯಾನಗಳ ಭಾಗವಾಗಿದೆ. ಆದಿವಾಸಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸಾಮಾಜಿಕ ಸೇರ್ಪಡೆಯ ಸಂಕಲ್ಪದೊಂದಿಗೆ ನಂಬಿಕೆಯ ಕೇಂದ್ರವಾಗಿ ಬಲವರ್ಧನೆಗೊಂಡಿದೆ. ಕಾಶಿಯ ವಿದ್ವಾಂಸರಿಂದ ಪ್ರಾಚೀನ ಜ್ಞಾನದ ಬಗ್ಗೆ ಹೊಸ ಸಂಶೋಧನೆಗಳೂ ಸಹ ನಡೆಯುತ್ತಿವೆ ಮತ್ತು ವಿದ್ವತ್ ಪರಿಷತ್ ನಿಂದ ಆಧುನಿಕ ವಿಜ್ಞಾನದ ಸಂಭವನೀಯತೆ ಬಗ್ಗೆ ಸಂಶೋಧನೆ ನಡೆಯುತ್ತಿದೆ. ದೇವಾಲಯದ ಟ್ರಸ್ಟ್ ಸದ್ಯದಲ್ಲೇ ನಗರದ ಹಲವೆಡೆ ಉಚಿತ ಊಟದ ವ್ಯವಸ್ಥೆಯನ್ನು ಆರಂಭಿಸಲಿದೆ ಎಂದು ನಾನು ಕೇಳಲ್ಪಟ್ಟಿದ್ದೇನೆ. ಮಾತೆ ಅನ್ನಪೂರ್ಣಾದೇವಿಯ ನಗರದಲ್ಲಿ ಯಾರೊಬ್ಬರೂ ಹಸಿವಿನಿಂದ ಇರಬಾರದು ಎಂಬುದು ದೇವಾಲಯದ ಉದ್ದೇಶವಾಗಿದೆ. ಹೊಸ ಕಾಶಿ, ನವಭಾರತಕ್ಕೆ ಸ್ಫೂರ್ತಿ ನೀಡುವ ಕೇಂದ್ರವಾಗಿ ಹೊರಹೊಮ್ಮಿದೆ. ಜತೆಗೆ ಅದು ಹೇಗೆ ವಿಶ್ವಾಸದ ಕೇಂದ್ರ, ಶಕ್ತಿಯ ಕೇಂದ್ರವಾಗಿ, ಸಾಮಾಜಿಕ ಮತ್ತು ರಾಷ್ಟ್ರೀಯ ಸಂಕಲ್ಪಗಳಿಗೆ ಕಾರಣವಾಗುತ್ತದೆ ಎಂಬುದನ್ನು ತೋರಿಸಿದೆ. ಇಲ್ಲಿಂದ ತೇರ್ಗಡೆ ಹೊಂದಿ ಹೊರ ಹೋಗುವ ಯುವಜನತೆ ಭಾರತೀಯ ಜ್ಞಾನ, ಪರಂಪರೆ ಮತ್ತು ಸಂಸ್ಕೃತಿಯನ್ನು ಇಡೀ ವಿಶ್ವಕ್ಕೆ ಕೊಂಡೊಯ್ಯುವ ಧ್ವಜದಾರಿಗಳಾಗಲಿದ್ದಾರೆ ಎಂಬ ಭರವಸೆ ನನಗಿದೆ. ಬಾಬಾ ವಿಶ್ವನಾಥನ ಭೂಮಿ ಜಾಗತಿಕ ಕಲ್ಯಾಣದ ಸಂಕಲ್ಪಕ್ಕೆ ಸಾಕ್ಷಿಯಾಗಿದೆ.

 

ಮಿತ್ರರೇ,

ನಮ್ಮ ಜ್ಞಾನ, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯು ಹಲವು ಭಾಷೆಗಳಿಂದ ಗಮನಾರ್ಹವಾಗಿ ಶ್ರೀಮಂತವಾಗಿದೆ, ಅವುಗಳಲ್ಲಿ ಸಂಸ್ಕೃತವು ಅಗ್ರಗಣ್ಯವಾಗಿದೆ. ಭಾರತವು ಒಂದು ಚಿಂತನೆಯಾಗಿದೆ ಮತ್ತು ಸಂಸ್ಕೃತವು ಅದರ ಪ್ರಾಥಮಿಕ ಅಭಿವ್ಯಕ್ತಿಯಾಗಿದೆ. ಭಾರತವು ಒಂದು ಯಾತ್ರೆ (ಪಯಣ), ಮತ್ತು ಸಂಸ್ಕೃತವು ಅದರ ಇತಿಹಾಸದ ಪ್ರಾಥಮಿಕ ಅಧ್ಯಾಯವಾಗಿದೆ. ಭಾರತವು ವಿವಿಧತೆಯಲ್ಲಿ ಏಕತೆಯ ಭೂಮಿಯಾಗಿದೆ ಮತ್ತು ಸಂಸ್ಕೃತವು ಅದರ ಮೂಲವಾಗಿದೆ. ಆದ್ದರಿಂದ ಇಲ್ಲಿ ಹೇಳಲಾಗಿದೆ, "ಭಾರತಸ್ಯ ಪ್ರತಿಷ್ಠೆ ದ್ವೇ ಸಂಸ್ಕೃತಿ-ಸ್ತಥಾ"॥ "भारतस्य प्रतिष्ठे द्वे संस्कृतम् संस्कृति-स्तथा"॥ ಅಂದರೆ, ಭಾರತದ ಪ್ರತಿಷ್ಠೆಯಲ್ಲಿ ಸಂಸ್ಕೃತವು ಮಹತ್ವದ ಪಾತ್ರವನ್ನು ವಹಿಸುತ್ತದೆ. ನಮ್ಮ ದೇಶದಲ್ಲಿ ಸಂಸ್ಕೃತವು ವೈಜ್ಞಾನಿಕ ಸಂಶೋಧನೆಯ ಭಾಷೆಯಾಗಿದ್ದ ಕಾಲವಿತ್ತು ಮತ್ತು ಅದು ಶಾಸ್ತ್ರೀಯ ಜ್ಞಾನದ ಭಾಷೆಯೂ ಆಗಿತ್ತು. ಖಗೋಳಶಾಸ್ತ್ರದಲ್ಲಿ ಸೂರ್ಯ ಸಿದ್ಧಾಂತ, ಗಣಿತದಲ್ಲಿ ಆರ್ಯಭಟಿಯ ಮತ್ತು ಲೀಲಾವತಿ, ವೈದ್ಯಕೀಯ ವಿಜ್ಞಾನದಲ್ಲಿ ಚರಕ ಮತ್ತು ಸುಶ್ರುತ ಸಂಹಿತೆ ಅಥವಾ ಬೃಹತ್ ಸಂಹಿತೆಯಂತಹ ಪಠ್ಯಗಳು ಸಂಸ್ಕೃತದಲ್ಲಿ ಬರೆಯಲ್ಪಟ್ಟವು. ಇದರೊಂದಿಗೆ ಸಾಹಿತ್ಯ, ಸಂಗೀತ ಮತ್ತು ಕಲೆಗಳ ಹಲವು ಪ್ರಕಾರಗಳು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿವೆ. ಈ ರೂಪಗಳ ಮೂಲಕವೇ ಭಾರತವನ್ನು ಗುರುತಿಸಲಾಗಿದೆ. ಕಾಶಿಯಲ್ಲಿ ಯಾವ ವೇದಗಳನ್ನು ಹೇಳಲಾಗುತ್ತದೆಯೋ, ಅದೇ ಸಂಸ್ಕೃತದಲ್ಲಿ ನಾವು ಕಂಚಿಯಲ್ಲಿ ಕೇಳಬೇಕು. ಇವು ‘ಏಕ್ ಭಾರತ್, ಶ್ರೇಷ್ಠ ಭಾರತ’ದ ಶಾಶ್ವತ ಧ್ವನಿಗಳು, ಸಾವಿರಾರು ವರ್ಷಗಳಿಂದ ಭಾರತವನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿವೆ.

 

ಮಿತ್ರರೇ ,

ಇಂದು ಕಾಶಿಯನ್ನು ‘ವಿರಾಸತ್’ (ಪರಂಪರೆ) ಮತ್ತು ‘ವಿಕಾಸ’ (ಅಭಿವೃದ್ಧಿ) ಮಾದರಿಯಾಗಿ ನೋಡಲಾಗುತ್ತಿದೆ. ಸಂಪ್ರದಾಯಗಳು ಮತ್ತು ಆಧ್ಯಾತ್ಮಿಕತೆಯ ಸುತ್ತ ಆಧುನಿಕತೆಯ ವಿಸ್ತರಣೆಯು ಜಾಗತಿಕವಾಗಿ ಸಾಕ್ಷಿಯಾಗಿದೆ. ಭವ್ಯವಾದ ಹೊಸ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ನಂತರ, ಅಯೋಧ್ಯೆ ಕೂಡ ಅದೇ ರೀತಿಯಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ದೇಶದಾದ್ಯಂತ ಭಗವಾನ್ ಬುದ್ಧನಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆಧುನಿಕ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕುಶಿನಗರದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದಿಂದ ಉತ್ತರ ಪ್ರದೇಶಕ್ಕೆ ಲಾಭವಾಗಿದೆ. ಇಂತಹ ಹಲವು ಯೋಜನೆಗಳು  ದೇಶದಲ್ಲಿಂದು ಜಾರಿಯಾಗಿವೆ. ಮುಂದಿನ ಐದು ವರ್ಷಗಳಲ್ಲಿ, ರಾಷ್ಟ್ರವು ಅದೇ ವಿಶ್ವಾಸದೊಂದಿಗೆ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ, ಯಶಸ್ಸಿನ ಹೊಸ ಮಾನದಂಡಗಳನ್ನು ನಿಗದಿಪಡಿಸುತ್ತದೆ ಮತ್ತು ಇದು ಮೋದಿಯವರ ಗ್ಯಾರಂಟಿ ಮತ್ತು ಮೋದಿಯವರ ಗ್ಯಾರಂಟಿ ಎಂದರೆ ಆ ಗ್ಯಾರಂಟಿ ಖಂಡಿತಾ ಈಡೇರಲಿದೆ ಎಂದು ನಿಮಗೆ ತಿಳಿದಿದೆ. ಒಬ್ಬ ಸಂಸದನಾಗಿ ಪ್ರತಿ ಬಾರಿ ನನಗಾಗಿ ಮತ್ತು ನಿಮಗಾಗಿಯೂ ಒಂದಿಷ್ಟು ಕೆಲಸ ತರುತ್ತೇನೆ... ನೀನು ಮಾಡುತ್ತೀಯಾ? ನಾನು ಅನೇಕ ವಿಷಯಗಳನ್ನು ಪ್ರಸ್ತಾಪಿಸಿದ್ದೇನೆ ಮತ್ತು ಇಲ್ಲಿನ ಜನರು ಅವುಗಳನ್ನು ತುಂಬಾ ಅದ್ಭುತವಾಗಿ ಸ್ವೀಕರಿಸಿದ್ದಾರೆ. ಎಲ್ಲವನ್ನೂ ಅದ್ಧೂರಿಯಾಗಿ ಸ್ವೀಕರಿಸಿ, ಎಲ್ಲರೂ ಅದರೊಂದಿಗೆ ಸಂಪರ್ಕ ಹೊಂದಿದ್ದು, ಹೊಸ ಪೀಳಿಗೆಯಲ್ಲಿ ಹೊಸ ಪ್ರಜ್ಞೆಯನ್ನು ತುಂಬಿದ್ದಾರೆ. ಈ ಸ್ಪರ್ಧೆಗಳು ಸಾಮಾನ್ಯವಲ್ಲ. ನನ್ನ ಗುರಿಯಾದ ‘ಸಬ್ ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ಯಶಸ್ವಿ ಪ್ರಯೋಗವಾಗಿದೆ. ಮುಂದಿನ ದಿನಗಳಲ್ಲಿ, ಪ್ರತಿ ಪ್ರವಾಸಿ ಸ್ಥಳದಲ್ಲಿ ಏನಾಗುತ್ತದೆ ಎಂಬುದನ್ನು ನಾನು ನೋಡುತ್ತೇನೆ. ಜನರು ಪೋಸ್ಟ್‌ಕಾರ್ಡ್‌ಗಳನ್ನು ಮುದ್ರಿಸುತ್ತಾರೆ, ಅಲ್ಲಿ ವಿಶೇಷ ಚಿತ್ರವಿದೆ ಮತ್ತು ಏನನ್ನಾದರೂ ಬರೆಯಲು ಅದರ ಹಿಂಭಾಗದಲ್ಲಿ ಸ್ವಲ್ಪ ಜಾಗವನ್ನು ಬಿಡಲಾಗುತ್ತದೆ. ಆದರೆ ನಡೆದಿರುವ ಛಾಯಾಚಿತ್ರ ಸ್ಪರ್ಧೆಯಲ್ಲಿ ಕಾಶಿಯಲ್ಲಿ ಅತ್ಯುತ್ತಮ ಚಿತ್ರದ ಆಯ್ಕೆಯಾಗಿ ಮತದಾನ ಆಗಬೇಕು ಎಂಬುದು ನನ್ನ ಬಯಕೆ. ಜನರು ಮತದಾನ ಮಾಡಬೇಕು ಮತ್ತು ಅತಿ ಹೆಚ್ಚು ಮತ ಪಡೆದ ಟಾಪ್ 10 ಚಿತ್ರಗಳನ್ನು ಅಂಚೆ ಕಾರ್ಡ್‌ಗಳಾಗಿ ಮುದ್ರಿಸಿ ಪ್ರವಾಸಿಗರಿಗೆ ಮಾರಾಟ ಮಾಡಬೇಕು. ಮತ್ತು ಈ ಫೋಟೋ ಸ್ಪರ್ಧೆಯನ್ನು ಪ್ರತಿ ವರ್ಷ ನಡೆಸಬೇಕು ಮತ್ತು ಪ್ರತಿ ವರ್ಷ 10 ಹೊಸ ಫೋಟೋಗಳು ಇರುತ್ತವೆ. ಆದರೆ ಅದನ್ನು ಮತದಾನದ ಮೂಲಕ ಮಾಡಬೇಕು. ಕಾಶಿಯ ಜನರು ಉತ್ತಮ ಫೋಟೋಗಳನ್ನು ಆಯ್ಕೆ ಮಾಡಲು ಮತ ಚಲಾಯಿಸಬೇಕು. ಹೊರಬಂದ ಎಲ್ಲಾ ಫೋಟೋಗಳಿಗೆ ನಾವು ಆನ್‌ಲೈನ್ ಸ್ಪರ್ಧೆಯನ್ನು ಹೊಂದಬಹುದೇ? ನಾವು ಅದನ್ನು ಮಾಡಬಹುದೇ? ಅದನ್ನು ಮಾಡೋಣ.

ಎರಡನೆಯ ಕೆಲಸ- ಕೆಲವರು ತಮ್ಮ ಮೊಬೈಲ್ ಫೋನ್‌ಗಳಿಂದ ಫೋಟೋಗಳನ್ನು ತೆಗೆದು ಫೋಟೋಗ್ರಾಫಿ ಸ್ಪರ್ಧೆಯಲ್ಲಿ ಭಾಗವಹಿಸಿರಬಹುದು. ಈಗ ಜನರು ವಿವಿಧ ಸ್ಥಳಗಳಲ್ಲಿ ಕುಳಿತು ನಿಗದಿತ ಗಾತ್ರದ ಕಾಗದದ ಮೇಲೆ ರೇಖಾಚಿತ್ರಗಳನ್ನು ಬಿಡಿಸುವ ಕಾರ್ಯಕ್ರಮವನ್ನು ಆಯೋಜಿಸೋಣ. ಮತ್ತು ಉತ್ತಮ ರೇಖಾಚಿತ್ರಗಳಿಗೆ ಬಹುಮಾನಗಳನ್ನು ಸಹ ನೀಡಬೇಕು ಮತ್ತು ನಂತರ ಆ ರೇಖಾಚಿತ್ರಗಳಿಂದ ಉತ್ತಮ 10 ಪೋಸ್ಟ್‌ಕಾರ್ಡ್‌ಗಳನ್ನು ಆಯ್ಕೆ ಮಾಡಬೇಕು. ನಾವು ಅದನ್ನು ಮಾಡೋಣವೇ? ಏಕೆ ನಿಮ್ಮ ಧ್ವನಿ ಏಕೆ ತಗ್ಗಿತು... ಹೌದು ಅಲ್ಲವೇ!

 

ಮೂರನೆಯ ಕೆಲಸ – ನೋಡಿ, ಈಗ ಲಕ್ಷಾಂತರ ಜನ ಕಾಶಿಗೆ ಬರುವುದರಿಂದ ಮಾರ್ಗದರ್ಶಕರ ಅಗತ್ಯ ಬಹಳ ಇದೆ. ಯಾರಾದರೂ ವಿವರಿಸಲು, ತಿಳಿಸಲು ಜನರು ಬಯಸುತ್ತಾರೆ. ಕಾಶಿ ಇಲ್ಲಿಗೆ ಬರಲು ಪ್ರಯತ್ನಿಸುವ ಪ್ರಯಾಣಿಕರ ಹೃದಯ ಮತ್ತು ಮನಸ್ಸಿನಲ್ಲಿ ಮುಳುಗಬೇಕು. ಅದಕ್ಕಾಗಿ ಅತ್ಯುತ್ತಮ ಮಾರ್ಗದರ್ಶಕರ ಅವಶ್ಯಕತೆ ಇದೆ. ಅದಕ್ಕಾಗಿಯೇ ಉತ್ತಮ ಮಾರ್ಗದರ್ಶಕರ ಸ್ಪರ್ಧೆ ನಡೆಯಬೇಕು, ಅಲ್ಲಿ ಎಲ್ಲರೂ ಮಾರ್ಗದರ್ಶಕರಾಗಿ ಭಾಗವಹಿಸಿ ತಮ್ಮ ಅತ್ಯುತ್ತಮ ಸಾಧನೆ ಮಾಡಬೇಕು, ಉತ್ತಮ ಮಾರ್ಗದರ್ಶಕರಾದವರಿಗೆ ಪುರಸ್ಕಾರ, ಪ್ರಮಾಣಪತ್ರ ನೀಡಬೇಕು ಎಂದು ಹೇಳಿದ್ದೆ. ಭವಿಷ್ಯದಲ್ಲಿ, ಮಾರ್ಗದರ್ಶಿ(ಗೈಡ್) ಆಗುವುದು ಜೀವನೋಪಾಯದ ಮೂಲವಾಗಬಹುದು, ಹೊಸ ಕ್ಷೇತ್ರವು ಅಭಿವೃದ್ಧಿಗೊಳ್ಳುತ್ತದೆ. ನೀವು ಅದನ್ನು ಮಾಡುತ್ತೀರಾ? ನೀವು ನಿರಾಕರಿಸುವುದಿಲ್ಲ, ನೀವು ಪರೀಕ್ಷೆಗಳಲ್ಲಿ ಕುಳಿತುಕೊಳ್ಳಲು ಹೋಗುತ್ತಿಲ್ಲವೇ? ಆಗ ನಿಮ್ಮ ಶಿಕ್ಷಕರು ಎಂಪಿ (ಸಂಸತ್ ಸದಸ್ಯ) ನಮ್ಮ ಮಕ್ಕಳ ವಿದ್ಯಾಭ್ಯಾಸದತ್ತ ಗಮನ ಹರಿಸುವ ಬದಲು ಅವರನ್ನು ಬೇರೆ ಕೆಲಸ ಮಾಡುವಂತೆ ಮಾಡುತ್ತಾರೆ ಎಂದು ಹೇಳುತ್ತಾರೆ. ನೋಡಿ, ನಮ್ಮೊಳಗೆ ಎಷ್ಟು ಕೌಶಲ ಅಭಿವೃದ್ಧಿ ಆಗಬಹುದು, ಅದು ಆಗಬೇಕು. ಪ್ರತಿಭೆ ಅರಳಲು ಎಲ್ಲ ಅವಕಾಶ ಸಿಗಬೇಕು. ದೇವರು ಎಲ್ಲರಿಗೂ ಎಲ್ಲಾ ರೀತಿಯ ಸಾಮರ್ಥ್ಯಗಳನ್ನು ನೀಡಿದ್ದಾನೆ, ಕೆಲವರು ಅದನ್ನು ಪೋಷಿಸುತ್ತಾರೆ ಮತ್ತು ಕೆಲವರು ಅದನ್ನು ತಣ್ಣನೆಯ ಪೆಟ್ಟಿಗೆಯಲ್ಲಿ ಇಡುತ್ತಾರೆ. ಕಾಶಿ ಮತ್ತಷ್ಟು ಸುಂದರಗೊಳ್ಳುತ್ತಿದೆ. ಸೇತುವೆಗಳು ನಿರ್ಮಾಣವಾಗುತ್ತವೆ, ರಸ್ತೆಗಳು ನಿರ್ಮಾಣವಾಗುತ್ತವೆ, ಕಟ್ಟಡಗಳು ನಿರ್ಮಾಣವಾಗುತ್ತವೆ, ಆದರೆ ನಾನು ಎಲ್ಲರನ್ನೂ ಸುಧಾರಿಸಬೇಕು, ಪ್ರತಿ ಮನಸ್ಸನ್ನು ಪರಿಷ್ಕರಿಸಬೇಕು ಮತ್ತು ಸೇವಕನಾಗಿ ಸೇವೆ ಸಲ್ಲಿಸಬೇಕು, ಒಡನಾಡಿಯಾಗಿ ನಮ್ಮ ಗುರಿಯನ್ನು ತಲುಪಬೇಕು ಮತ್ತು ಪರಸ್ಪರರ ಬೆರಳುಗಳನ್ನು ಹಿಡಿದು ಗುರಿಯನ್ನು ತಲುಪಬೇಕು. ಎಲ್ಲಾ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಾನು ಕಾರ್ಯಕ್ರಮಕ್ಕೆ ತಡವಾಗಿ ಹೋಗುತ್ತಿರಬಹುದು, ಆದರೆ ಈ ಕಾರ್ಯಕ್ರಮದ ಮೂಲಕ ನಿಮ್ಮೊಂದಿಗೆ ಸ್ವಲ್ಪ ಹೆಚ್ಚು ಸಮಯ ಕಳೆಯಬೇಕು ಎಂಬುದು ನನ್ನ ಭಾವನೆಯಾಗಿದೆ. ಅನೇಕ ಜನರು ನನ್ನೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ ಎಂದು ನಾನು ನೋಡಿದ್ದೇನೆ, ಆದರೆ ನಿಮ್ಮೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳಬೇಕೆಂಬುದು ನನ್ನ ಆಸೆ ಕೂಡ. ಆದ್ದರಿಂದ, ನೀವು ನನಗೆ ಸಹಾಯ ಮಾಡುತ್ತೀರಾ? ನೋಡಿ, ನಾನು ಏನು ಹೇಳುತ್ತೇನೋ ಅದೆಲ್ಲವನ್ನೂ ನೀವು ಅನುಸರಿಸಿದಾಗ ಸಹಾಯವಾಗುತ್ತದೆ, ಸರಿಯೇ? ನಾನು ಇಲ್ಲಿಂದ ಹೊರಡುವ ತನಕ ಯಾರೂ ನಿಲ್ಲಬೇಕಿಲ್ಲ... ಸರಿ. ನಾನು ಅಲ್ಲಿಗೆ ಹಿಂತಿರುಗುತ್ತೇನೆ, ಪ್ರತಿ ಬ್ಲಾಕ್‌ನಲ್ಲಿ ನಿಲ್ಲುತ್ತೇನೆ, ಮತ್ತು ಕ್ಯಾಮೆರಾ ಹೊಂದಿರುವ ಎಲ್ಲರೂ ವೇದಿಕೆಯ ಮೇಲೆ ಬರುತ್ತಾರೆ, ಅವರು ಅಲ್ಲಿಂದ ಫೋಟೋಗಳನ್ನು ತೆಗೆದುಕೊಳ್ಳುತ್ತಾರೆ ... ಸರಿನಾ! ಆದರೆ ನಾನು ಆ ಫೋಟೋಗಳನ್ನು ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ, ನೀವು ಏನು ಮಾಡುತ್ತೀರಿ,... ನೀವು ಏನು ಮಾಡುತ್ತೀರಿ? ಅದಕ್ಕೆ ಪರಿಹಾರವಿದೆ, ನಾನು ನಿಮಗೆ ಹೇಳುತ್ತೇನೆ. ನೀವು ನಿಮ್ಮ ಮೊಬೈಲ್ ಫೋನ್‌ನಲ್ಲಿ ನಮೋ ಅಪ್ಲಿಕೇಷನ್‌ಗೆ ಹೋಗಿ, ನಮೋ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿ, ಅದರಲ್ಲಿ ಫೋಟೋಗಳಿಗಾಗಿ ಒಂದು ವಿಭಾಗವಿದೆ, ಸೆಲ್ಫಿ ತೆಗೆದುಕೊಂಡು ಅದನ್ನು ಅಲ್ಲಿ ಅಪ್‌ಲೋಡ್ ಮಾಡಿ, ಬಟನ್ ಒತ್ತಿರಿ ಮತ್ತು ನೀವು ಎಲ್ಲಿದ್ದರೂ, ನೀವು ಹೊಂದಿರುವ ಎಲ್ಲಾ ಫೋಟೋಗಳನ್ನು ನನ್ನೊಂದಿಗೆ ತೆಗೆಸಿಕೊಳ್ಳುವುದನ್ನು ಕೃತಕ ಬುದ್ದಿಮತ್ತೆ (ಎಐ) ಮೂಲಕ ನಿಮಗೆ ಕಳುಹಿಸಲಾಗುತ್ತದೆ. ಹಾಗಾಗಿ ನಮ್ಮ ಕಾಶಿಯಲ್ಲಿ ಸಂಸ್ಕೃತದ ಜೊತೆಗೆ ವಿಜ್ಞಾನವೂ ಇರುತ್ತದೆ. ಆದ್ದರಿಂದ, ನೀವು ಖಂಡಿತವಾಗಿಯೂ ನನಗೆ ಸಹಾಯ ಮಾಡುತ್ತೀರಿ ಅಲ್ಲವೇ? ಸರಿ... ನೀವು ಕುಳಿತುಕೊಳ್ಳಿ. ಯಾರೂ ನಿಲ್ಲಬೇಕಿಲ್ಲ, ಎಲ್ಲರ ಫೋಟೋ ಬರುವಂತೆ ತಲೆ ಎತ್ತಿ ಕುಳಿತು, ನಗುವವರ ಫೋಟೋಗಳನ್ನು ನನ್ನಲ್ಲಿರುವ ಕ್ಯಾಮರಾ ತೆಗೆಯುತ್ತದೆ.

 

ಹರ ಹರ ಮಹದೇವ !

ಹಾಗಾಗಿ ನಾನು ಇದೀಗ ಕೆಳಗಿಳಿಯುತ್ತಿದ್ದೇನೆ. ಈ ಜನರು ಅಲ್ಲಿ ಕುಳಿತುಕೊಳ್ಳುತ್ತಾರೆ ಮತ್ತು ನೀವು ಅಲ್ಲಿ ಕುಳಿತುಕೊಳ್ಳಿ. ಕ್ಯಾಮರಾ ಇರುವವರು ವೇದಿಕೆಯ ಮೇಲೆ ಹೋಗಬಹುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
How India’s sports economy crossed the $2 billion mark in 2025 and what's driving the boom

Media Coverage

How India’s sports economy crossed the $2 billion mark in 2025 and what's driving the boom
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam, seeks blessings of Maa Kaalratri
March 25, 2026

The Prime Minister, Shri Narendra Modi, sought the blessings of Maa Kaalratri and prayed that her grace enriches everyone’s life with courage, resolve and success.

The Prime Minister said that the worship of the Goddess instils renewed self-confidence among devotees and fills everyone with a new sense of energy.

The Prime Minister shared a Sanskrit verse-

“वामपादोल्लसल्लोहलताकण्टकभूषणा। वर्धन्मूर्धध्वजा कृष्णा कालरात्रिर्भयङ्करी॥”

The Prime Minister also shared a recital in praise of the Goddess.

In a post on X, Shri Modi said;

“मां कालरात्रि को नमन! उनके आशीष से सबका जीवन साहस, संकल्प और सफलता से समृद्ध हो यही कामना है।

वामपादोल्लसल्लोहलताकण्टकभूषणा।

वर्धन्मूर्धध्वजा कृष्णा कालरात्रिर्भयङ्करी॥”

“देवी मां की आराधना भक्तों में नए आत्मविश्वास का संचार करती है। उनकी साधना हर किसी को एक नई ऊर्जा से भर देती है।”