"ಕಾಶಿಯು ಜ್ಞಾನ, ಕರ್ತವ್ಯ ಮತ್ತು ಸತ್ಯದ ನಿಧಿ ಎಂದು ಹೆಸರುವಾಸಿಯಾಗಿದೆ. ಇದು ನಿಜವಾಗಿಯೂ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ"
"ಭಾರತದಲ್ಲಿ ನಾವು ನಮ್ಮ ಅನಂತ ಮತ್ತು ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ತುಂಬಾ ಹೆಮ್ಮೆ ಹೊಂದಿದ್ದೇವೆ. ನಮ್ಮ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ನಾವು ಹೆಚ್ಚಿನ ಮೌಲ್ಯವನ್ನು ನೀಡುತ್ತೇವೆ"
'ಯುಗೆ ಯುಗೀನ್‌ ಭಾರತ್‌' ರಾಷ್ಟ್ರೀಯ ವಸ್ತುಸಂಗ್ರಹಾಲಯವು ಪೂರ್ಣಗೊಂಡ ನಂತರ 5,000 ವರ್ಷಗಳ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುವ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗಿ ನಿಲ್ಲುತ್ತದೆ
"ಸ್ಪಷ್ಟ ಪರಂಪರೆಯು ಭೌತಿಕ ಮೌಲ್ಯ ಮಾತ್ರವಲ್ಲ, ಅದು ರಾಷ್ಟ್ರದ ಇತಿಹಾಸ ಮತ್ತು ಹೆಗ್ಗುರುತಾಗಿದೆ"
"ಪರಂಪರೆಯು ಆರ್ಥಿಕ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕೆ ಪ್ರಮುಖ ಆಸ್ತಿಯಾಗಿದೆ, ಮತ್ತು ಇದು ಭಾರತದ 'ವಿಕಾಸ್ ಭಿ ವಿರಾಸತ್ ಭಿ' ಮಂತ್ರದಲ್ಲಿ ಪ್ರತಿಧ್ವನಿಸುತ್ತದೆ"
"ಭಾರತದ ರಾಷ್ಟ್ರೀಯ ಡಿಜಿಟಲ್ ಜಿಲ್ಲಾ ಭಂಡಾರವು ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಮರುಶೋಧಿಸಲು ಸಹಾಯ ಮಾಡುತ್ತಿದೆ"
"ಕಾರ್ಯ ಪಡೆಯು ʻಕಲ್ಚರ್‌ʼ(ಸಂಸ್ಕೃತಿ), ʻಕ್ರಿಯೇಟಿವಿಟಿʼ(ಸೃಜನಶೀಲತೆ), ʻಕಾಮರ್ಸ್‌ʼ(ವಾಣಿಜ್ಯ) ಮತ್ತು ʻಕಲ್ಯಾಬರೇಷನ್‌ʼ(ಸಹಯೋಗ) ಎಂಬ ನಾಲ್ಕು ʻಸಿʼಗಳ ಮಹ

ನಮಸ್ಕಾರ!

ಕಾಶಿ ಎಂದೂ ಕರೆಯಲ್ಪಡುವ ವಾರಣಾಸಿಗೆ ಸುಸ್ವಾಗತ.  ನನ್ನ ಸಂಸದೀಯ ಕ್ಷೇತ್ರವಾಗಿರುವ ವಾರಣಾಸಿಯಲ್ಲಿ ನೀವೆಲ್ಲರೂ ಭೇಟಿಯಾಗುತ್ತಿರುವುದು ನನಗೆ ಸಂತಸ ತಂದಿದೆ.  ಕಾಶಿ ಕೇವಲ ವಿಶ್ವದ ಅತ್ಯಂತ ಹಳೆಯ ಜೀವಂತ ನಗರವಲ್ಲ.  ಇಲ್ಲಿಂದ ಸ್ವಲ್ಪ ದೂರದಲ್ಲಿ ಬುದ್ಧನು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ ಸಾರನಾಥ ಇದೆ.  ಕಾಶಿಯನ್ನು "सुज्ञान, धर्म, और सत्यराशि'’ (ಸುಜ್ಞಾನ್, ಧರ್ಮ, ಔರ್ ಸತ್ಯರಾಶಿ)  ಎಂದರೆ,  ಜ್ಞಾನ, ಕರ್ತವ್ಯ ಮತ್ತು ಸತ್ಯದ ನಿಧಿ ನಗರ ಎಂದು ಕೂಡಾ ಹೇಳಲಾಗುತ್ತದೆ. ಇದು ನಿಜವಾಗಿಯೂ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ರಾಜಧಾನಿಯಾಗಿದೆ. ಗಂಗಾ ಆರತಿಯನ್ನು ವೀಕ್ಷಿಸಲು, ಸಾರನಾಥಕ್ಕೆ ಭೇಟಿ ನೀಡಲು ಮತ್ತು ಕಾಶಿಯ ಖಾದ್ಯಭಕ್ಷ್ಯಗಳ ಸವಿರುಚಿ ಆಸ್ವಾದನೆ ಮಾಡಲು ನಿಮ್ಮ ಕಾರ್ಯಕ್ರಮಗಳ ನಡುವೆ ಸ್ವಲ್ಪ ಸಮಯವನ್ನು ಇಟ್ಟುಕೊಂಡಿದ್ದೀರಿ ಎಂದು ನಾನು ಭಾವಿಸುತ್ತೇನೆ.

ಗೌರವಾನ್ವಿತರೇ,

ಸಂಸ್ಕೃತಿಯು ಒಂದುಗೂಡಿಸುವ ಅಂತರ್ಗತ ಸಾಮರ್ಥ್ಯವನ್ನು ಹೊಂದಿದೆ.  ಇದು ವೈವಿಧ್ಯಮಯ ಹಿನ್ನೆಲೆ ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ.  ಆದ್ದರಿಂದ, ನಿಮ್ಮ ಕೆಲಸವು ಇಡೀ ಮಾನವೀಯತೆಗೆ ಕೊಡುಗೆ ನೀಡುವ ಅಪಾರ ಮಹತ್ವವನ್ನು ಹೊಂದಿದೆ. ಭಾರತದಲ್ಲಿ ನಾವು ನಮ್ಮ ಸನಾತನ ಮತ್ತು ವೈವಿಧ್ಯಮಯ ಸಂಸ್ಕೃತಿಯ ಬಗ್ಗೆ ಬಹಳ ಹೆಮ್ಮೆಪಡುತ್ತೇವೆ. ನಾವು ನಮ್ಮ ಅಮೂರ್ತ ಸಾಂಸ್ಕೃತಿಕ ಪರಂಪರೆಗೆ ಹೆಚ್ಚಿನ ಮೌಲ್ಯವನ್ನು ನೀಡುತ್ತೇವೆ.  ನಮ್ಮ ಪಾರಂಪರಿಕ ತಾಣಗಳನ್ನು ಸಂರಕ್ಷಿಸಲು ಮತ್ತು ಪುನರುಜ್ಜೀವನಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ನಾವು ನಮ್ಮ ಸಾಂಸ್ಕೃತಿಕ ಆಸ್ತಿಗಳು ಮತ್ತು ಕಲಾವಿದರನ್ನು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಭಾರತದ ಎಲ್ಲಾ ಹಳ್ಳಿಗಳ ಮಟ್ಟದಲ್ಲಿಯೂ ನಕ್ಷೆ ಮಾಡಿದ್ದೇವೆ.  ನಾವು ನಮ್ಮ ಸಂಸ್ಕೃತಿಯನ್ನು ಆಚರಿಸಲು ಹಲವಾರು ಕೇಂದ್ರಗಳನ್ನು ನಿರ್ಮಿಸುತ್ತಿದ್ದೇವೆ.  ಅವುಗಳಲ್ಲಿ ಪ್ರಧಾನವಾದದ್ದು ದೇಶದ ವಿವಿಧ ಭಾಗಗಳಲ್ಲಿರುವ ಬುಡಕಟ್ಟು ವಸ್ತುಸಂಗ್ರಹಾಲಯಗಳು. ಈ ವಸ್ತುಸಂಗ್ರಹಾಲಯಗಳು ಭಾರತದ ಬುಡಕಟ್ಟು ಸಮುದಾಯಗಳ ರೋಮಾಂಚಕ ಸಂಸ್ಕೃತಿಯನ್ನು ಪ್ರದರ್ಶಿಸುತ್ತವೆ. ನವದೆಹಲಿಯಲ್ಲಿ, ನಾವು ಪ್ರಧಾನಮಂತ್ರಿಗಳ ವಸ್ತುಸಂಗ್ರಹಾಲಯವನ್ನು ಹೊಂದಿದ್ದೇವೆ. ಇದು ಭಾರತದ ಪ್ರಜಾಸತ್ತಾತ್ಮಕ ಪರಂಪರೆಯನ್ನು ಪ್ರದರ್ಶಿಸುವ ಒಂದು ರೀತಿಯ ಪ್ರಯತ್ನವಾಗಿದೆ.  ನಾವು ಯುಗ ಯುಗಾಂತರದ ಭಾರತ ( 'ಯುಗೇ ಯುಗೀನ್ ಭಾರತ್') ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಸಹ ನಿರ್ಮಿಸುತ್ತಿದ್ದೇವೆ.  ಒಮ್ಮೆ ಪೂರ್ಣಗೊಂಡರೆ, ಇದು ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯವಾಗಿ ನಿಲ್ಲುತ್ತದೆ.  ಇದು 5000 ವರ್ಷಗಳ ಭಾರತದ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸುತ್ತದೆ.


ಶ್ರೇಷ್ಠತೆಗಳು,

ಸಾಂಸ್ಕೃತಿಕ ಆಸ್ತಿಯ ಮರುಸ್ಥಾಪನೆಯ ವಿಷಯವು ಒಂದು ಪ್ರಮುಖ ವಿಷಯವಾಗಿದೆ.  ಮತ್ತು, ಈ ನಿಟ್ಟಿನಲ್ಲಿ ನಿಮ್ಮ ಪ್ರಯತ್ನಗಳನ್ನು ನಾನು ಸ್ವಾಗತಿಸುತ್ತೇನೆ.  ಸ್ಪಷ್ಟವಾದ ಪರಂಪರೆಯು ವಸ್ತು ಮೌಲ್ಯವನ್ನು ಮಾತ್ರವಲ್ಲ.  ಇದು ರಾಷ್ಟ್ರದ ಇತಿಹಾಸ ಮತ್ತು ಗುರುತು ಕೂಡ.  ಪ್ರತಿಯೊಬ್ಬರಿಗೂ ಅವರ ಸಾಂಸ್ಕೃತಿಕ ಪರಂಪರೆಯನ್ನು ಅರಿಯುವ, ಅನುಭವಿಸುವ ಮತ್ತು ಆನಂದಿಸುವ ಹಕ್ಕಿದೆ.  2014 ರಿಂದ, ಭಾರತವು ನಮ್ಮ ಪ್ರಾಚೀನ ನಾಗರಿಕತೆಯ ವೈಭವವನ್ನು ಪ್ರದರ್ಶಿಸುವ ನೂರಾರು ಕಲಾಕೃತಿಗಳನ್ನು ಮರಳಿ ತಂದಿದೆ.  'ಜೀವಂತ ಪರಂಪರೆ' ಮತ್ತು 'ಜೀವನಕ್ಕಾಗಿ ಸಂಸ್ಕೃತಿ' ಈ  ನಿಟ್ಟಿನಲ್ಲಿ  ನಿಮ್ಮ ಕೊಡುಗೆಗಳ ಕಡೆಗೆ ನಿಮ್ಮ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ.  ಸಾಂಸ್ಕೃತಿಕ ಪರಂಪರೆ ಕೇವಲ ಕಲ್ಲಿನಲ್ಲಿ ಎರಕಹೊಯ್ದದ್ದಲ್ಲ.  ಇದು ಸಂಪ್ರದಾಯಗಳು, ಆಚರಣೆಗಳು ಮತ್ತು ಹಬ್ಬಗಳು ಹೀಗೆ ತಲೆಮಾರುಗಳಿಂದ ಪ್ರಾಯೋಗಿಕವಾಗಿ ಜನರು ಜೊತೆಗೆ ಬಂದಿವೆ.  ನಿಮ್ಮ ಪ್ರಯತ್ನಗಳು ಸುಸ್ಥಿರ ಅಭ್ಯಾಸಗಳು ಮತ್ತು ಜೀವನಶೈಲಿಯನ್ನು ಬೆಳೆಸುತ್ತವೆ ಎಂದು ನನಗೆ ವಿಶ್ವಾಸವಿದೆ.

ಮಹನೀಯರೇ,

ಆರ್ಥಿಕ ಬೆಳವಣಿಗೆ ಮತ್ತು ವೈವಿಧ್ಯೀಕರಣಕ್ಕೆ ಪರಂಪರೆಯು ಒಂದು ಪ್ರಮುಖ ಆಸ್ತಿ ಎಂದು ನಾವು ನಂಬುತ್ತೇವೆ.  ಇದು ನಮ್ಮ ಮಂತ್ರವಾದ 'ವಿಕಾಸ್ ಭಿ ವಿರಾಸತ್ ಭಿ' - ಅಭಿವೃದ್ಧಿ ಮತ್ತು ಪರಂಪರೆಯಲ್ಲಿ ಪ್ರತಿಧ್ವನಿಸುತ್ತದೆ.  ಭಾರತವು ತನ್ನ 2,000 ವರ್ಷಗಳ ಹಳೆಯ ಕರಕುಶಲ ಪರಂಪರೆಯ ಬಗ್ಗೆ ಹೆಮ್ಮೆಪಡುತ್ತದೆ, ಸುಮಾರು 3,000 ಅನನ್ಯ ಕಲೆಗಳು ಮತ್ತು ಕರಕುಶಲ ವಸ್ತುಗಳು.  ನಮ್ಮ 'ಒಂದು ಜಿಲ್ಲೆ, ಒಂದು ಉತ್ಪನ್ನ' ಉಪಕ್ರಮವು ಭಾರತೀಯ ಕರಕುಶಲತೆಯ ಅನನ್ಯತೆಯನ್ನು ಪ್ರದರ್ಶಿಸುತ್ತದೆ ಮತ್ತು ಸ್ವಾವಲಂಬನೆಯನ್ನು ಉತ್ತೇಜಿಸುತ್ತದೆ.  ಸಾಂಸ್ಕೃತಿಕ ಮತ್ತು ಸೃಜನಶೀಲ ಕೈಗಾರಿಕೆಗಳನ್ನು ಉತ್ತೇಜಿಸುವ ನಿಮ್ಮ ಪ್ರಯತ್ನಗಳು ಆಳವಾದ ಮಹತ್ವವನ್ನು ಹೊಂದಿವೆ.  ಇವುಗಳು ಅಂತರ್ಗತ ಆರ್ಥಿಕ ಅಭಿವೃದ್ಧಿಯನ್ನು ಸುಗಮಗೊಳಿಸುತ್ತದೆ ಮತ್ತು ಸೃಜನಶೀಲತೆ ಮತ್ತು ನಾವೀನ್ಯತೆಯನ್ನು ಬೆಂಬಲಿಸುತ್ತದೆ.  ಮುಂಬರುವ ತಿಂಗಳಲ್ಲಿ ಭಾರತವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಹೊರತರಲಿದೆ. 1.8 ಬಿಲಿಯನ್ ಡಾಲರ್‌ಗಳ ಆರಂಭಿಕ ವೆಚ್ಚದೊಂದಿಗೆ, ಇದು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಬೆಂಬಲದ ಪರಿಸರ ವ್ಯವಸ್ಥೆಯನ್ನು ರಚಿಸುತ್ತದೆ.  ಇದು ಅವರ ಕರಕುಶಲ ಕಲೆಗಳಲ್ಲಿ ಪ್ರವರ್ಧಮಾನಕ್ಕೆ ಬರಲು ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಕೊಡುಗೆ ನೀಡುತ್ತದೆ.

ಸ್ನೇಹಿತರೇ,

ಸಂಸ್ಕೃತಿಯನ್ನು ಆಚರಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಮಿತ್ರವಾಗಿದೆ.  ಭಾರತದಲ್ಲಿ, ನಾವು ರಾಷ್ಟ್ರೀಯ ಡಿಜಿಟಲ್ ಡಿಸ್ಟ್ರಿಕ್ಟ್ ರೆಪೊಸಿಟರಿಯನ್ನು ಹೊಂದಿದ್ದೇವೆ.  ಇದು ನಮ್ಮ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಮರುಶೋಧಿಸಲು ಸಹಾಯ ಮಾಡುತ್ತಿದೆ.  ನಮ್ಮ ಸಾಂಸ್ಕೃತಿಕ ಹೆಗ್ಗುರುತುಗಳ ಉತ್ತಮ ಸಂರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ.  ನಮ್ಮ ಸಾಂಸ್ಕೃತಿಕ ಸ್ಥಳಗಳನ್ನು ಹೆಚ್ಚು ಪ್ರವಾಸಿ ಸ್ನೇಹಿಯನ್ನಾಗಿ ಮಾಡಲು ನಾವು ತಂತ್ರಜ್ಞಾನವನ್ನು ಬಳಸುತ್ತಿದ್ದೇವೆ.

ಮಹನೀಯರು,

ನಿಮ್ಮ ಗುಂಪು 'ಸಂಸ್ಕೃತಿ ಎಲ್ಲರನ್ನೂ ಒಂದುಗೂಡಿಸುತ್ತದೆ' ಅಭಿಯಾನವನ್ನು ಪ್ರಾರಂಭಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ.  ಇದು ವಸುಧೈವ ಕುಟುಂಬಕಮ್ - ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ ಚಿಂತನೆಯನ್ನು ಒಳಗೊಂಡಿದೆ.  ಸ್ಪಷ್ಟವಾದ ಫಲಿತಾಂಶಗಳೊಂದಿಗೆ ಜಿ20 ಕ್ರಿಯಾ ಯೋಜನೆಯನ್ನು ರೂಪಿಸಲು ನೀವು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ನಾನು ಪ್ರಶಂಸಿಸುತ್ತೇನೆ.  ನಿಮ್ಮ ಕೆಲಸವು ನಾಲ್ಕು "ಸಿ"ಗಳ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ - ಸಂಸ್ಕೃತಿ, ಸೃಜನಶೀಲತೆ, ವಾಣಿಜ್ಯ ಮತ್ತು ಸಹಯೋಗ.... ಸಹಾನುಭೂತಿ, ಅಂತರ್ಗತ ಮತ್ತು ಶಾಂತಿಯುತ ಭವಿಷ್ಯವನ್ನು ನಿರ್ಮಿಸಲು ಸಂಸ್ಕೃತಿಯ ಶಕ್ತಿಯನ್ನು ಬಳಸಿಕೊಳ್ಳಲು ಇವುಗಳು ನಮಗೆ ಅನುವು ಮಾಡಿಕೊಡುತ್ತವೆ.  ನಿಮ್ಮೆಲ್ಲರಿಗೂ ಅತ್ಯಂತ ಉತ್ಪಾದಕ ಮತ್ತು ಯಶಸ್ವಿ ಸಭೆಯನ್ನು ನಾನು ಬಯಸುತ್ತೇನೆ.


 ಧನ್ಯವಾದ!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India vehicle retail sales seen steady in December as tax cuts spur demand: FADA

Media Coverage

India vehicle retail sales seen steady in December as tax cuts spur demand: FADA
NM on the go

Nm on the go

Always be the first to hear from the PM. Get the App Now!
...
Prime Minister welcomes Cognizant’s Partnership in Futuristic Sectors
December 09, 2025

Prime Minister Shri Narendra Modi today held a constructive meeting with Mr. Ravi Kumar S, Chief Executive Officer of Cognizant, and Mr. Rajesh Varrier, Chairman & Managing Director.

During the discussions, the Prime Minister welcomed Cognizant’s continued partnership in advancing India’s journey across futuristic sectors. He emphasized that India’s youth, with their strong focus on artificial intelligence and skilling, are setting the tone for a vibrant collaboration that will shape the nation’s technological future.

Responding to a post on X by Cognizant handle, Shri Modi wrote:

“Had a wonderful meeting with Mr. Ravi Kumar S and Mr. Rajesh Varrier. India welcomes Cognizant's continued partnership in futuristic sectors. Our youth's focus on AI and skilling sets the tone for a vibrant collaboration ahead.

@Cognizant

@imravikumars”