ಗೌರವಾನ್ವಿತ ಪ್ರಧಾನಮಂತ್ರಿ  ಶ್ರೀ ಸೋನೆಕ್ಸೆ ಸಿಫಾಂಡೋನ್ ಅವರೇ,

ಮಹಾರಾಜ ಅವರೇ,

ಮಹನೀಯರುಗಳೇ,

ಎಲ್ಲರಿಗೂ ನಮಸ್ಕಾರ.

ಇಂದು, ಆಸಿಯಾನ್ ಕುಟುಂಬದೊಂದಿಗೆ ಹನ್ನೊಂದನೇ ಬಾರಿಗೆ ಈ ಸಭೆಯಲ್ಲಿ ಭಾಗವಹಿಸಲು ನನಗೆ ಗೌರವ ವಿಷಯವಾಗಿದೆ.

ಹತ್ತು ವರ್ಷಗಳ ಹಿಂದೆ, ನಾನು ಭಾರತದ ‘ಆಕ್ಟ್ ಈಸ್ಟ್’ ನೀತಿಯನ್ನು ಘೋಷಿಸಿದೆ. ಕಳೆದ ದಶಕದಲ್ಲಿ, ಈ ಉಪಕ್ರಮವು ಭಾರತ ಮತ್ತು ಆಸಿಯಾನ್ ದೇಶಗಳ ನಡುವಿನ ಐತಿಹಾಸಿಕ ಸಂಬಂಧಗಳನ್ನು ಪುನರುಜ್ಜೀವನಗೊಳಿಸಿದೆ, ಅವುಗಳನ್ನು ಈಗ ನವೀಕರಿಸಿ ಇನ್ನೂ ಉತ್ತಮ  ಶಕ್ತಿ, ನಿರ್ದೇಶನ ಮತ್ತು ಆವೇಗದೊಂದಿಗೆ ರೂಪಿಸಿದ್ದೇವೆ.

ಆಸಿಯಾನ್ ದೇಶಗಳ ಕೇಂದ್ರೀಕರಣಕ್ಕೆ ಪ್ರಾಮುಖ್ಯತೆಯನ್ನು ನೀಡುತ್ತಾ, ನಾವು 2019 ರಲ್ಲಿ ಇಂಡೋ-ಪೆಸಿಫಿಕ್ ಸಾಗರಗಳ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಈ ಉಪಕ್ರಮವು "ಇಂಡೋ-ಪೆಸಿಫಿಕ್‌ನಲ್ಲಿ ಆಸಿಯಾನ್  ಔಟ್‌ಲುಕ್" ಗೆ ಪೂರಕವಾಗಿದೆ.

ಕಳೆದ ವರ್ಷ, ನಾವು ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಕಡಲ ಅಭ್ಯಾಸಕ್ರಮಗಳನ್ನು ಪ್ರಾರಂಭಿಸಿದ್ದೇವೆ.

ಕಳೆದ 10 ವರ್ಷಗಳಲ್ಲಿ, ಆಸಿಯಾನ್ ಪ್ರದೇಶದೊಂದಿಗಿನ ನಮ್ಮ ವ್ಯಾಪಾರವು ಸುಮಾರು ದ್ವಿಗುಣಗೊಂಡಿದೆ, 130 ಶತಕೋಟಿ ಯು.ಎಸ್.‌ ಡಾಲರ್‌ ಅನ್ನು ಮೀರಿದೆ.

ಇಂದು, ಭಾರತವು ಏಳು ಆಸಿಯಾನ್ ದೇಶಗಳೊಂದಿಗೆ ನೇರ ವಿಮಾನ ಸಂಪರ್ಕವನ್ನು ಹೊಂದಿದೆ ಮತ್ತು ಶೀಘ್ರದಲ್ಲೇ, ಬ್ರೂನೈಗೆ ಸಹ ನೇರ ವಿಮಾನಗಳ ಸಂಪರ್ಕ ಪ್ರಾರಂಭವಾಗಲಿವೆ.

ಹೆಚ್ಚುವರಿಯಾಗಿ, ನಾವು ಟಿಮೋರ್-ಲೆಸ್ಟೆಯಲ್ಲಿ ಹೊಸ ರಾಯಭಾರ ಕಚೇರಿಯನ್ನು ತೆರೆದಿದ್ದೇವೆ.

ಆಸಿಯಾನ್ ಪ್ರದೇಶದಲ್ಲಿ, ನಾವು ಫಿನ್‌ ಟೆಕ್‌  ಸಂಪರ್ಕವನ್ನು ಸ್ಥಾಪಿಸಿದ ಮೊದಲ ದೇಶ ಸಿಂಗಾಪುರವಾಗಿದೆ, ಮತ್ತು ಈ ಯಶಸ್ಸನ್ನು ಈಗ ಇತರ ರಾಷ್ಟ್ರಗಳಲ್ಲಿ ಅನುಕರಿಸಲಾಗುತ್ತಿದೆ.

ನಮ್ಮ ಅಭಿವೃದ್ಧಿ ಪಾಲುದಾರಿಕೆಯು ಜನಕೇಂದ್ರಿತ ವಿಧಾನದ ಮೇಲೆ ಸ್ಥಾಪಿತವಾಗಿದೆ. 300 ಕ್ಕೂ ಹೆಚ್ಚು ಆಸಿಯಾನ್ ವಿದ್ಯಾರ್ಥಿಗಳು ನಳಂದ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿವೇತನದೊಂದಿಗೆ ಪ್ರಯೋಜನ ಪಡೆದಿದ್ದಾರೆ. ವಿಶ್ವವಿದ್ಯಾನಿಲಯಗಳ ಬೃಹತ್‌ ಜಾಲವನ್ನು ಪ್ರಾರಂಭಿಸಲಾಗಿದೆ.

ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ, ಮ್ಯಾನ್ಮಾರ್ ಮತ್ತು ಇಂಡೋನೇಷ್ಯಾದಲ್ಲಿ ನಮ್ಮ ಪರಂಪರೆಯನ್ನು ಸಂರಕ್ಷಿಸಲು ನಾವು ಕೆಲಸ ಮಾಡಿದ್ದೇವೆ.

ಕೋವಿಡ್‌ ಸಾಂಕ್ರಾಮಿಕ ಸಮಯದಲ್ಲಿ ಅಥವಾ ನೈಸರ್ಗಿಕ ವಿಕೋಪಗಳಿಗೆ ಪ್ರತಿಕ್ರಿಯೆಯಾಗಿ, ನಾವು ಪರಸ್ಪರ ಸಹಾಯವನ್ನು ಒದಗಿಸಿದ್ದೇವೆ ಮತ್ತು ನಮ್ಮ ಮಾನವೀಯ ಜವಾಬ್ದಾರಿಗಳನ್ನು ಪೂರೈಸಿದ್ದೇವೆ.

ವಿಜ್ಞಾನ ಮತ್ತು ತಂತ್ರಜ್ಞಾನ ನಿಧಿ, ಡಿಜಿಟಲ್ ನಿಧಿ ಮತ್ತು ಹಸಿರು ನಿಧಿ ಸೇರಿದಂತೆ ವಿವಿಧ ವಲಯಗಳಲ್ಲಿ ಸಹಯೋಗಕ್ಕಾಗಿ ನಿಧಿಗಳನ್ನು ಸ್ಥಾಪಿಸಲಾಗಿದೆ. ಈ ಉಪಕ್ರಮಗಳಿಗೆ ಭಾರತವು 30 ಮಿಲಿಯನ್‌‌ ಯು.ಎಸ್.‌ ಡಾಲರ್‌ ಗಿಂತಲೂ ಹೆಚ್ಚಿನ ಕೊಡುಗೆ ನೀಡಿದೆ. ಪರಿಣಾಮವಾಗಿ, ನಮ್ಮ ಸಹಕಾರವು ಈಗ ನೀರೊಳಗಿನ ಯೋಜನೆಗಳಿಂದ ಪ್ರಾರಂಭವಾಗಿ ಬಾಹ್ಯಾಕಾಶ ಪರಿಶೋಧನೆಯವರೆಗೆ ವ್ಯಾಪಿಸಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕಳೆದ ದಶಕದಲ್ಲಿ ನಮ್ಮ ಪಾಲುದಾರಿಕೆಯು ಪ್ರತಿಯೊಂದು ಅಂಶದಲ್ಲೂ ಗಮನಾರ್ಹವಾಗಿ ವಿಸ್ತರಿಸಿದೆ.

ಮತ್ತು, 2022 ರಲ್ಲಿ ನಾವು ಅದನ್ನು 'ಸಮಗ್ರ ಕಾರ್ಯತಂತ್ರದ ಸಹಭಾಗಿತ್ವ'ದ ಸ್ಥಾನಮಾನಕ್ಕೆ ಏರಿಸಿದ್ದೇವೆ ಎಂಬುದು ಬಹಳ ತೃಪ್ತಿಯ ವಿಷಯವಾಗಿದೆ.

ಸ್ನೇಹಿತರೇ,

ನಾವು ನೆರೆಹೊರೆಯವರು, ಜಾಗತಿಕ ದಕ್ಷಿಣದಲ್ಲಿ ಪಾಲುದಾರರು ಮತ್ತು ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಭೌಗೋಳಿಕ ಪ್ರದೇಶದಲ್ಲಿದ್ದೇವೆ. ನಾವು ಶಾಂತಿ-ಪ್ರೀತಿಯ ರಾಷ್ಟ್ರಗಳು, ಅದು ಪರಸ್ಪರರ ರಾಷ್ಟ್ರೀಯ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಗೌರವಿಸುತ್ತದೆ ಮತ್ತು ನಮ್ಮ ಯುವಕರಿಗೆ ಉಜ್ವಲ ಭವಿಷ್ಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ.

21 ನೇ ಶತಮಾನವು ಭಾರತ ಮತ್ತು ಆಸಿಯಾನ್ ದೇಶಗಳಿಗೆ "ಏಷ್ಯನ್ ಶತಮಾನ" ಎಂದು ನಾನು ನಂಬುತ್ತೇನೆ. ಇಂದು, ಪ್ರಪಂಚದ ಅನೇಕ ಭಾಗಗಳಲ್ಲಿ ಸಂಘರ್ಷ ಮತ್ತು ಉದ್ವಿಗ್ನತೆ ಇರುವಾಗ, ಭಾರತ ಮತ್ತು ಆಸಿಯಾನ್ ನಡುವಿನ ಸ್ನೇಹ, ಸಮನ್ವಯ, ಮಾತುಕತೆ ಮತ್ತು ಸಹಕಾರವು ಅತ್ಯಂತ ಮಹತ್ವದ್ದಾಗಿದೆ.

ಆಸಿಯಾನ್  ನ ಯಶಸ್ವಿ ಅಧ್ಯಕ್ಷ ಸ್ಥಾನಕ್ಕಾಗಿ ಲಾವೊ ಪಿಡಿಆರ್ ನ ಪ್ರಧಾನಮಂತ್ರಿ ಶ್ರೀ ಸೋನೆಕ್ಸೆ ಸಿಫಾಂಡೋನ್  ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಇಂದಿನ ಸಭೆಯು ಭಾರತ-ಆಸಿಯಾನ್ ಪಾಲುದಾರಿಕೆಗೆ ಹೊಸ ಆಯಾಮಗಳನ್ನು ತರುತ್ತದೆ ಎಂಬ ವಿಶ್ವಾಸ ನನಗಿದೆ.

ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s seafood exports cross ₹72,325.82 crore in FY26 on shrimp led growth, market diversification

Media Coverage

India’s seafood exports cross ₹72,325.82 crore in FY26 on shrimp led growth, market diversification
NM on the go

Nm on the go

Always be the first to hear from the PM. Get the App Now!
...
Prime Minister marks opening of Shri Kedarnath Dham and commencement of Chardham Yatra
April 22, 2026
Prime Minister conveys his sentiments through a letter addressed to all devotees

The Prime Minister today expressed deep reverence on the sacred occasion of the opening of the doors of Shri Kedarnath Dham in Devbhoomi Uttarakhand, marking the commencement of this year’s Chardham Yatra. On the occasion, the Prime Minister shared his heartfelt sentiments through a letter addressed to all devotees visiting Uttarakhand for the Yatra, and extend his best wishes and prayers for their well-being.

Highlighting the spiritual significance of the occasion, Shri Modi noted that the journey to Kedarnath Dham and the Chardham is a divine celebration of India’s enduring faith, unity, and rich cultural traditions. He emphasized that such pilgrimages offer a glimpse into the country’s eternal heritage and spiritual consciousness.

The Prime Minister posted on X:

"देवभूमि उत्तराखंड की पवित्र धरती पर आज श्री केदारनाथ धाम के कपाट पूरे विधि-विधान के साथ हम सभी श्रद्धालुओं के लिए खोल दिए गए हैं।

केदारनाथ धाम और चारधाम की यह यात्रा हमारी आस्था, एकता और समृद्ध परंपराओं का दिव्य उत्सव है। इन यात्राओं से हमें भारत की सनातन संस्कृति के दर्शन भी होते हैं।

इस वर्ष चारधाम यात्रा के आरंभ उत्सव पर, उत्तराखंड आने वाले सभी श्रद्धालुओं के लिए मैंने एक पत्र के माध्यम से अपनी भावनाएं व्यक्त की हैं।

मेरी कामना है कि बाबा केदार सभी पर अपनी कृपा बनाए रखें और आपकी यात्राओं को शुभ करें।

हर-हर महादेव!"