ಐ.ಎನ್.ಎಸ್. ಅಗ್ರೇ, ಐ.ಎನ್.ಎಸ್. ದುನಗಿರಿ ಮತ್ತು ಐ.ಎನ್.ಎಸ್. ಸಂಶೋಧಕ್ ಗಳನ್ನು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ: ಪ್ರಧಾನಮಂತ್ರಿ
ಇಂದು, ಜೂನ್ 21 ಅನ್ನು ವಿಶ್ವ ಹೈಡ್ರೋಗ್ರಫಿ ದಿನವಾಗಿಯೂ ಆಚರಿಸಲಾಗುತ್ತದೆ ಮತ್ತು ಈ ದಿನದಂದು ನಾವು ಭಾರತದ ಅತ್ಯಾಧುನಿಕ ಹೈಡ್ರೋಗ್ರಫಿ ಹಡಗು ಐಎನ್ಎಸ್ ಸಂಶೋಧಕ್ ಅನ್ನು ಕಾರ್ಯಾರಂಭಗೊಳಿಸಿರುವುದು ನಿಜವಾಗಿಯೂ ಗಮನಾರ್ಹ ಕಾಕತಾಳೀಯವಾದ ಸಂಗತಿಯಾಗಿದೆ : ಪ್ರಧಾನಮಂತ್ರಿ
ಕಡಲ ಶಕ್ತಿ ಸದೃಢವಾಗಿರುವ ದೇಶದಲ್ಲಿ, ಅದರ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವು ಅಷ್ಟೇ ದೃಢವಾಗಿರುತ್ತದೆ; ಭಾರತ ಈ ವಾಸ್ತವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ, ಇದಕ್ಕಾಗಿ ಭಾರತ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳುತ್ತಿದೆ: ಪ್ರಧಾನಮಂತ್ರಿ.
ಐಎನ್ಎಸ್ ವಿಕ್ರಾಂತ್ ನಿಂದ ಇಂದಿನವರೆಗಿನ ಪ್ರಯಾಣವು ಕೇವಲ ಹೊಸ ಯುದ್ಧನೌಕೆಗಳ ಪ್ರಯಾಣವಲ್ಲ; ಇದು ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯ ಪ್ರಯಾಣ, ಇಂದು, ಐಎನ್ಎಸ್ ಅಗ್ರೇ, ಐಎನ್ಎಸ್ ದುನಗಿರಿ ಮತ್ತು ಐಎನ್ಎಸ್ ಸಂಶೋಧಕ್ ಈ ಪ್ರಯಾಣಕ್ಕೆ ಹೊಸ ವೇಗವನ್ನು ನೀಡುತ್ತಿವೆ: ಪ್ರಧಾನಮಂತ್ರಿ
ಹಡಗು ನಿರ್ಮಾಣ ಕ್ಷೇತ್ರದಲ್ಲಿ ಭಾರತ ಹೊಸ ದೃಷ್ಟಿಕೋನದೊಂದಿಗೆ ಮುಂದುವರಿಯಲು ಪ್ರಾರಂಭಿಸಿದೆ; ದೇಶೀಯ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ: ಪ್ರಧಾನಮಂತ್ರಿ
ಹಡಗು ನಿರ್ಮಾಣ, ಹಡಗು ದುರಸ್ತಿ ಮತ್ತು ಎಂ.ಆರ್.ಒ. ಅನ್ನು ಪ್ರಮುಖ ರಾಷ್ಟ್ರೀಯ ಅಭಿಯಾನದ ಭಾಗವಾಗಿ ನೋಡಲಾಗುತ್ತಿದೆ: ಪ್ರಧಾನಮಂತ್ರಿ
ಭಾರತವು ಸದಾ ಸಾಗರವನ್ನು ಸಹಕಾರದ ಮಾಧ್ಯಮವೆಂದು ಪರಿಗಣಿಸಿದೆ, ಆದರೆ ಶಾಂತಿಯನ್ನು ಕಾಪಾಡಲು ಶಕ್ತಿ ಅತ್ಯಗತ್ಯ ಎಂದು ಭಾರತಕ್ಕೆ ತಿಳಿದಿದೆ; ಸಮೃದ್ಧಿಯನ್ನು ರಕ್ಷಿಸಲು ಭದ್ರತೆ ಅಗತ್ಯ ಮತ್ತು ಭವಿಷ್ಯವನ್ನು ನಿರ್ಮಿಸಲು ಸ್ವಾವಲಂಬನೆ ಅತ್ಯಗತ್ಯ: ಪ್ರಧಾನಮಂತ್ರಿ
ಇಂದು, ಐಎನ್ಎಸ್ ಅಗ್ರೇ, ಐಎನ್ಎಸ್ ದುನಾಗಿರಿ ಮತ್ತು ಐಎನ್ಎಸ್ ಸಂಶೋಧಕ್ ಈ ಸ್ಫೂರ್ತಿಯ ಸಂಕೇತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿವೆ: ಪ್ರಧಾನಮಂತ್ರಿ

ಪಶ್ಚಿಮ ಬಂಗಾಳದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆರ್.ಎನ್.ರವಿ ಜೀ, ಉತ್ಸಾಹಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಜೀ, ನೌಕಾಪಡೆಯ ಮುಖ್ಯಸ್ಥ ಕೃಷ್ಣ ಸ್ವಾಮಿನಾಥನ್ ಜೀ, ಇಲ್ಲಿ ಉಪಸ್ಥಿತರಿರುವ ಗೌರವಾನ್ವಿತ ಮಹಿಳೆಯರೇ ಮತ್ತು ಮಹನೀಯರೇ!

ಇಂದಿನ ದಿನ  ಹಲವು ವಿಧಗಳಲ್ಲಿ ವಿಶೇಷವಾಗಿದೆ. ಇಡೀ ಜಗತ್ತು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಬಂಗಾಳದ ಈ ಶ್ರೇಷ್ಠ ಭೂಮಿಗೆ ಬರುವ ಅವಕಾಶ ನನಗೆ ಸಿಕ್ಕಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಭೂಮಿ ಭಾರತದ ಆಲೋಚನೆಗಳಿಗೆ ಹೊಸ ದಿಕ್ಕನ್ನು ನೀಡಿತು, ಭಾರತದ ಪುನರುಜ್ಜೀವನವನ್ನು ವೇಗಗೊಳಿಸಿತು ಮತ್ತು ಶತಮಾನಗಳಿಂದ ಭಾರತವನ್ನು ಸಮುದ್ರದ ಮೂಲಕ ಜಗತ್ತಿಗೆ ಸಂಪರ್ಕಿಸಿತು. ಇಂದು, ಇದೇ ನೆಲದಲ್ಲಿ, ಆತ್ಮನಿರ್ಭರ ಭಾರತ, ಸುರಕ್ಷಿತ ಭಾರತ ಮತ್ತು ವಿಕಸಿತ ಭಾರತಕ್ಕೆ ಸಂಬಂಧಿಸಿದ ಪ್ರಮುಖ ಕಾರ್ಯಕ್ರಮ ನಡೆಯುತ್ತಿದೆ. ಸ್ವಲ್ಪ ಸಮಯದ ಹಿಂದೆ, ಐಎನ್ಎಸ್ ಅಗ್ರೇ, ಐಎನ್ಎಸ್ ದುನಾಗಿರಿ ಮತ್ತು ಐಎನ್ಎಸ್ ಸಂಶೋಧಕ್ ನ್ನು ಭಾರತೀಯ ನೌಕಾಪಡೆಗೆ ಸೇರಿಸಲಾಗಿದೆ. ಕಾಕತಾಳೀಯವೆಂಬಂತೆ, ಜೂನ್ 21 ನ್ನು "ವಿಶ್ವ ಹೈಡ್ರೋಗ್ರಫಿ ದಿನ" ಎಂದೂ ಆಚರಿಸಲಾಗುತ್ತದೆ. ಮತ್ತು ಈ ದಿನದಂದು, ಭಾರತದ ಅತ್ಯಂತ ಸುಧಾರಿತ ಹೈಡ್ರೋಗ್ರಫಿ ಹಡಗು ಐಎನ್ಎಸ್ ಸಂಶೋಧಕ್ ಅನ್ನು ಕಾರ್ಯಾರಂಭ ಮಾಡಿರುವುದು ಗಮನಾರ್ಹ ಕಾಕತಾಳೀಯವಾದ ಸಂಗತಿಯಾಗಿದೆ. ಇದೊಂದು ಯೋಗಾ ಯೋಗ. ಭಾರತೀಯ ನೌಕಾಪಡೆಗೆ, ಈ ಯೋಜನೆಗಳಿಗೆ ಸಂಬಂಧಿಸಿದ ಎಲ್ಲಾ ವಿಜ್ಞಾನಿಗಳು, ಎಂಜಿನಿಯರ್ಗಳು, ಕಾರ್ಮಿಕರು ಮತ್ತು ನನ್ನ ಪ್ರೀತಿಯ ದೇಶವಾಸಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಕಡಲ ಸಾಮರ್ಥ್ಯವಿಲ್ಲದೆ ಯಾವುದೇ ರಾಷ್ಟ್ರವು ದೊಡ್ಡ ಶಕ್ತಿಯಾಗಲು ಸಾಧ್ಯವಿಲ್ಲ ಎಂಬುದಕ್ಕೆ ಜಗತ್ತು ಸಾಕ್ಷಿಯಾಗಿದೆ. ಅಭಿವೃದ್ಧಿಯು ಸಮುದ್ರಗಳೊಂದಿಗೆ ಸಂಬಂಧ ಹೊಂದಿದೆ, ಭದ್ರತೆಯು ಸಮುದ್ರಗಳೊಂದಿಗೆ ಸಂಬಂಧ ಹೊಂದಿದೆ, ಸಮೃದ್ಧಿ ಸಮುದ್ರಗಳೊಂದಿಗೆ ಸಂಬಂಧ ಹೊಂದಿದೆ. ಇಂದು, ವಿಶ್ವದ ಹೆಚ್ಚಿನ ವ್ಯಾಪಾರವು ಕಡಲ ಮಾರ್ಗಗಳ ಮೂಲಕ ಸಾಗುತ್ತದೆ. ಜಗತ್ತನ್ನು ಸಂಪರ್ಕಿಸುವ ಡೇಟಾದ ವಿಶಾಲ ಜಾಲಗಳು ಸಾಗರಗಳ ಕೆಳಗೆ ಹಾದುಹೋಗುತ್ತವೆ. ಮುಂಬರುವ ದಿನಗಳಲ್ಲಿ, ನಿರ್ಣಾಯಕ ಖನಿಜಗಳು, ಆಳ ಸಮುದ್ರ ಸಂಪನ್ಮೂಲಗಳು ಮತ್ತು ಹೊಸ ಇಂಧನ ಮೂಲಗಳನ್ನು ಸಹ ಸಮುದ್ರಗಳಿಗೆ ಸಂಪರ್ಕಿಸಲಾಗುವುದು. ಆದ್ದರಿಂದ, ರಾಷ್ಟ್ರದ ಕಡಲ ಶಕ್ತಿ ಬಲವಾದಷ್ಟೂ, ಅದರ ಆರ್ಥಿಕ ಮತ್ತು ಕಾರ್ಯತಂತ್ರದ ಪ್ರಭಾವವು ಬಲವಾಗಿರುತ್ತದೆ. ಭಾರತವು ಈ ವಾಸ್ತವವನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಅದಕ್ಕಾಗಿ ಭಾರತ ತನ್ನನ್ನು ತಾನು ಸಜ್ಜುಗೊಳಿಸಿಕೊಳ್ಳುತ್ತಿದೆ. ಮತ್ತು ಇಂದು ನಮ್ಮ ಸಾಮರ್ಥ್ಯ ಏನು, ನಮ್ಮ ಕೌಶಲ್ಯ ಏನು ಎಂಬುದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಕೆಲವು ವರ್ಷಗಳ ಹಿಂದೆ, ನಾವು ಐಎನ್ಎಸ್ ವಿಕ್ರಾಂತ್ ನ್ನು ರಾಷ್ಟ್ರಕ್ಕೆ ಸಮರ್ಪಿಸಿದಾಗ, ಭಾರತವು ತನ್ನ ಕಡಲ ಶಕ್ತಿಯ ಹೊಸ ಅಧ್ಯಾಯವನ್ನು ಘೋಷಿಸಿತು. ಇದು ಪ್ರಪಂಚದ ಮುಂದೆ ನಮ್ಮ ಸಾಮರ್ಥ್ಯದ ಘೋಷಣೆಯಾಗಿತ್ತು. ಐಎನ್ಎಸ್ ವಿಕ್ರಾಂತ್ ನಿಂದ ಇಂದಿನವರೆಗಿನ ಪ್ರಯಾಣವು ಕೇವಲ ಹೊಸ ಯುದ್ಧನೌಕೆಗಳ ಬಗ್ಗೆ ಸೀಮಿತವಾದುದಲ್ಲ. ಇದು ಭಾರತದ ಬೆಳೆಯುತ್ತಿರುವ ಸ್ವಾವಲಂಬನೆಯ ಪ್ರಯಾಣವೂ ಆಗಿದೆ. ಇಂದು, ಐಎನ್ ಎಸ್ ಅಗ್ರೇ, ಐಎನ್ಎಸ್ ದುನಾಗಿರಿ ಮತ್ತು ಐಎನ್ಎಸ್ ಸಂಶೋಧಕ್ ಆ ಪ್ರಯಾಣಕ್ಕೆ ಹೊಸ ವೇಗವನ್ನು ನೀಡುತ್ತಿವೆ. ಈ ಮೂರು ಹಡಗುಗಳು ಭಾರತದ ಮೂರು ಪ್ರಮುಖ ಸಂಕಲ್ಪಗಳ ಸಂಕೇತಗಳಾಗಿವೆ. ಅವುಗಳನ್ನು ಭಾರತದಲ್ಲಿ ನಿರ್ಮಿಸಲಾಗಿದೆ. ಅವುಗಳ  ವಿನ್ಯಾಸಗಳನ್ನು ಭಾರತದಲ್ಲಿ ತಯಾರಿಸಲಾಯಿತು. ಅವುಗಳ  ನಿರ್ಮಾಣವು ಭಾರತೀಯ ಕೈಗಾರಿಕೆಗಳ ಪ್ರತಿಭೆ, ಭಾರತೀಯ ಎಂಜಿನಿಯರ್ಗಳ ಕೌಶಲ್ಯ ಮತ್ತು ಭಾರತೀಯ ಕಾರ್ಮಿಕರ ಕಠಿಣ ಪರಿಶ್ರಮವನ್ನು ಒಳಗೊಂಡಿತ್ತು. ಮತ್ತು ಇದು ನವ ಭಾರತದ ದೊಡ್ಡ ಶಕ್ತಿಯಾಗಿದೆ.

ಸ್ನೇಹಿತರೇ,

ಇಂದು, ಭಾರತವು ರಕ್ಷಣಾ ಕ್ಷೇತ್ರದಲ್ಲಿ ಕೇವಲ ಖರೀದಿದಾರನಾಗಿ ಉಳಿಯಲು ಬಯಸುವುದಿಲ್ಲ. ನಮ್ಮ ಮಿಲಿಟರಿ ಶಕ್ತಿಯನ್ನು ವಿಶ್ವಕ್ಕೆ ಮಾರುಕಟ್ಟೆಯಾಗಿ ಮಾತ್ರವೇ ಸೀಮಿತಗೊಳಿಸಲಾಗದು. ನಮ್ಮ ಶಕ್ತಿಯ ಗುರುತು ಮಾರುಕಟ್ಟೆಯಾಗುವುದರಲ್ಲಿಲ್ಲ, ಬದಲು  ನಮ್ಮ ಸ್ವಾವಲಂಬನೆಯಲ್ಲಿದೆ. ಭಾರತವು ಉತ್ಪಾದಕನಾಗಲು ಬಯಸುತ್ತದೆ. ಮತ್ತು ನಾವು ಉತ್ಪಾದಕರಾದ ದಿನ, ನಾವು ಸಹ ನಿರ್ಣಾಯಕರಾಗುತ್ತೇವೆ. ನಾವು ಈ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ, 40 ಕ್ಕೂ ಹೆಚ್ಚು ಮೇಡ್ ಇನ್ ಇಂಡಿಯಾ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ನೌಕಾಪಡೆಗೆ ಸೇರಿಸಲಾಗಿದೆ. ಇದರರ್ಥ ಪ್ರತಿ ಕೆಲವು ವಾರಗಳಿಗೊಮ್ಮೆ ಭಾರತೀಯ ನೌಕಾದಳಕ್ಕೆ ಹೊಸ ಶಕ್ತಿ ದೊರೆಯುತ್ತಿದೆ. ಈಗಲೂ ಸಹ, 45 ಪ್ರಮುಖ ನೌಕಾ ವೇದಿಕೆಗಳು ನಿರ್ಮಾಣ ಹಂತದಲ್ಲಿವೆ. ಇದು ಕೇವಲ ಸಂಖ್ಯೆಯಲ್ಲ. ಇದು ಭಾರತದ ಕೈಗಾರಿಕಾ ಸಾಮರ್ಥ್ಯಕ್ಕೆ ಪುರಾವೆಯಾಗಿದೆ. ಇದು ಭಾರತದ ಭವಿಷ್ಯದ ಸಂಕೇತವಾಗಿದೆ.

ಸ್ನೇಹಿತರೇ,

ಮುಂಬರುವ ವರ್ಷಗಳಲ್ಲಿ, ಭಾರತದ ಕಡಲ ವಲಯವು ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಅದಕ್ಕಾಗಿಯೇ ನಾವು ಕಡಲ ವಲಯವನ್ನು ಪ್ರತ್ಯೇಕ ವಲಯವಾಗಿ ನೋಡುವುದಿಲ್ಲ. ನಾವು ಇದನ್ನು ಅಭಿವೃದ್ಧಿ ಹೊಂದಿದ ಭಾರತದ ಉದ್ಯೋಗ ಎಂಜಿನ್ ಆಗಿ ನೋಡುತ್ತೇವೆ. ಆಧುನಿಕ ಹಡಗಿಗೆ ನೂರಾರು ಟನ್ ಉಕ್ಕು, ಎಲೆಕ್ಟ್ರಾನಿಕ್ಸ್, ಯಂತ್ರೋಪಕರಣಗಳು ಮತ್ತು ಸಾವಿರಾರು ಘಟಕಗಳು ಬೇಕಾಗುತ್ತವೆ. ಇದೆಲ್ಲದರ ಹಿಂದೆ, ಸಾವಿರಾರು ಕಂಪನಿಗಳು ಕೆಲಸ ಮಾಡುತ್ತವೆ - ಅಂದರೆ ಸಾವಿರಾರು ಯುವಜನರಿಗೆ ಉದ್ಯೋಗ ಸಿಗುತ್ತದೆ. ಇಂದು ನಿಯೋಜಿಸಲಾದ ಮೂರು ಹಡಗುಗಳ ನಿರ್ಮಾಣದಲ್ಲಿ, 200 ಕ್ಕೂ ಹೆಚ್ಚು ಎಂಎಸ್ಎಂಇಗಳು ಕೊಡುಗೆ ನೀಡಿವೆ. ಈ 200 ಎಂಎಸ್ಎಂಇಗಳಲ್ಲಿ, ಈ ಸಣ್ಣ ಕೈಗಾರಿಕೆಗಳಲ್ಲಿ ಅಪಾರ ಸಂಖ್ಯೆಯ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ನಾವು ಊಹಿಸಬಹುದು.

ಸ್ನೇಹಿತರೇ,

ಭಾರತವು ಕಡಲ ಶಕ್ತಿಯ ಮುಂದಿನ ಹಂತವನ್ನು ಪ್ರವೇಶಿಸುವ ಸಮಯ ಬಂದಿದೆ. ಆದ್ದರಿಂದ, ಭಾರತವು ಹಡಗು ನಿರ್ಮಾಣ ಕ್ಷೇತ್ರಕ್ಕೆ ಹೊಸ ದೃಷ್ಟಿಕೋನದೊಂದಿಗೆ ಮುಂದುವರಿಯಲು ಪ್ರಾರಂಭಿಸಿದೆ. ಇತ್ತೀಚಿನ ವರ್ಷಗಳಲ್ಲಿ, ಹಲವಾರು ನೀತಿ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಹಡಗು ನಿರ್ಮಾಣ, ಹಡಗು ದುರಸ್ತಿ, ಹಡಗು ಮರುಬಳಕೆ ಮತ್ತು ಎಂಆರ್ ಒ ಅನ್ನು ಈಗ ಪ್ರಮುಖ ರಾಷ್ಟ್ರೀಯ ಮಿಷನ್ ನ ಭಾಗವಾಗಿ ನೋಡಲಾಗುತ್ತಿದೆ.

ಸ್ನೇಹಿತರೇ,

ಹಡಗು ವಲಯಕ್ಕೆ ಘೋಷಿಸಲಾದ ₹70,000 ಕೋಟಿ ಪ್ರೋತ್ಸಾಹಕ ಪ್ಯಾಕೇಜ್ ಕೇವಲ ಆರ್ಥಿಕ ನಿರ್ಧಾರವಲ್ಲ. ಇದು ಭಾರತದ ಸಾಗರ ಭವಿಷ್ಯದಲ್ಲಿ ಹೂಡಿಕೆಯಾಗಿದೆ. ಇದು ಭಾರತದ ಕೈಗಾರಿಕಾ ವಿಸ್ತರಣೆಯಲ್ಲಿ  ಮಾಡಿದ ಹೂಡಿಕೆಯಾಗಿದೆ.

ಸ್ನೇಹಿತರೇ,

ಇಂದು, ಭಾರತವು ತನ್ನ ಸಂಪೂರ್ಣ ಕಡಲ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ. ಅದಕ್ಕಾಗಿಯೇ ಭಾರತವು ತನ್ನ ಬಂದರುಗಳನ್ನು ಆಧುನೀಕರಿಸುತ್ತಿದೆ, ಹೊಸ ಸಾಮರ್ಥ್ಯವನ್ನು ಸೃಷ್ಟಿಸುತ್ತಿದೆ, ಹೊಸ ಸಂಪರ್ಕವನ್ನು ನಿರ್ಮಿಸುತ್ತಿದೆ, ನದಿ ಜಲಮಾರ್ಗಗಳನ್ನು ವಿಸ್ತರಿಸುತ್ತಿದೆ ಮತ್ತು ಬಹು-ಮಾದರಿ ಲಾಜಿಸ್ಟಿಕ್ಸ್ ಜಾಲವನ್ನು ಅಭಿವೃದ್ಧಿಪಡಿಸುತ್ತಿದೆ. ಸಾಗರಮಾಲಾದಂತಹ ಅಭಿಯಾನಗಳು ಈ ಸಮಗ್ರ ದೃಷ್ಟಿಕೋನದ ಭಾಗವಾಗಿದೆ. ಇದು ವ್ಯಾಪಾರದ ವೆಚ್ಚವನ್ನು ಕಡಿಮೆ ಮಾಡುತ್ತಿದೆ, ಕೈಗಾರಿಕೆಗಳಿಗೆ ಹೊಸ ವೇಗವನ್ನು ನೀಡುತ್ತಿದೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೇ,

ಒಂದು ಕಾಲದಲ್ಲಿ ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಆಮದುದಾರರಲ್ಲಿ ಒಂದಾಗಿತ್ತು. ಈ ಅವಲಂಬನೆಯು ವ್ಯೂಹಾತ್ಮಕ ಮತ್ತು ಭದ್ರತಾ ಸವಾಲುಗಳನ್ನು ಒಡ್ಡಿತು. 2014ರಲ್ಲಿ ಸರ್ಕಾರ ರಚನೆಯಾದ ನಂತರ, ನಾವು ಈ ಪರಿಸ್ಥಿತಿಯನ್ನು ಬದಲಾಯಿಸಲು ನಿರ್ಧರಿಸಿದೆವು. ಪ್ರಮುಖ ನೀತಿ ಸುಧಾರಣೆಗಳನ್ನು ಕೈಗೊಳ್ಳಲಾಯಿತು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಗೆ ಆದ್ಯತೆ ನೀಡಲಾಯಿತು. ಇದರ ಪರಿಣಾಮವಾಗಿ, ಇಂದು ರಕ್ಷಣಾ ವಿನ್ಯಾಸ, ಉತ್ಪಾದನೆ ಮತ್ತು ರಫ್ತುಗಳಲ್ಲಿ ಹೊಸ ಸಾಧ್ಯತೆಗಳು ಹೊರಹೊಮ್ಮಿವೆ. 2014 ರವರೆಗೆ, ದೇಶದ ಒಟ್ಟು ರಕ್ಷಣಾ ಉತ್ಪಾದನೆಯು ಸುಮಾರು 40,000 ಕೋಟಿ ರೂ.ಗಳಷ್ಟಿತ್ತು. ಇಂದು, ಇದು ಸುಮಾರು 1,80,000 ಕೋಟಿ ರೂ.ಗೆ ಏರಿದೆ.

ಮತ್ತು ಸ್ನೇಹಿತರೇ,

ಒಂದೆಡೆ, ದೇಶದಲ್ಲಿ ರಕ್ಷಣಾ ಉತ್ಪಾದನೆಯು ವೇಗವಾಗಿ ಬೆಳೆದಿದೆ, ಮತ್ತೊಂದೆಡೆ, ನಮ್ಮ ರಕ್ಷಣಾ ರಫ್ತು ಅಭೂತಪೂರ್ವ ವೇಗದಲ್ಲಿ ಹೆಚ್ಚಾಗಿದೆ. 2014 ರವರೆಗೆ, ಭಾರತವು ಸುಮಾರು 700 ಕೋಟಿ ರೂ. ಮೌಲ್ಯದ ರಕ್ಷಣಾ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಇಂದು, ಈ ಅಂಕಿಅಂಶವು ಸುಮಾರು 40,000 ಕೋಟಿ ರೂ.ಗೆ ಏರಿದೆ. ಭಾರತದಲ್ಲಿ ತಯಾರಾದ ರಕ್ಷಣಾ ಸಲಕರಣೆಗಳು ಈಗ ಜಗತ್ತಿನ 80 ಕ್ಕೂ ಅಧಿಕ ದೇಶಗಳನ್ನು ತಲುಪುತ್ತಿವೆ.

ಸ್ನೇಹಿತರೇ,

ಸ್ವಾವಲಂಬನೆಯ ಪ್ರಯಾಣದಲ್ಲಿ, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ. ನನ್ನ ದೃಷ್ಟಿಯಲ್ಲಿ, ಇದು ಕೇವಲ ಆರಂಭ ಮಾತ್ರ. ಆದರೆ 12 ವರ್ಷಗಳಲ್ಲಿ ಸಾಧಿಸಿದ ಪ್ರಗತಿಯು ನೀತಿಗಳು ಸ್ಪಷ್ಟವಾಗಿದ್ದಾಗ, ಸರಿಯಾದ ದಿಕ್ಕು ಇದ್ದಾಗ ಮತ್ತು ನಾವು ಒಟ್ಟಾಗಿ ಕೆಲಸ ಮಾಡಿದಾಗ, ದೇಶದಲ್ಲಿ ಅಂತಹ ಬೃಹತ್ ಪರಿವರ್ತನೆ ಸಂಭವಿಸಬಹುದು ಎಂಬುದನ್ನು ತೋರಿಸುತ್ತದೆ.

ಸ್ನೇಹಿತರೇ,

ನಾವು ಕಡಲ ಪರಂಪರೆಯ ಬಗ್ಗೆ ಮಾತನಾಡುವಾಗ, ಬಂಗಾಳದ ಹೆಸರು ಸ್ವಾಭಾವಿಕವಾಗಿ ನೆನಪಿಗೆ ಬರುತ್ತದೆ. ಭಾರತದ ಕಡಲ ಸಂಪರ್ಕಗಳಲ್ಲಿಯೂ ಈ ಭೂಮಿ ಮಹತ್ವದ್ದಾಗಿದೆ. ಹೂಗ್ಲಿಯ ಪ್ರವಾಹಗಳು ಇತಿಹಾಸವನ್ನು ಮರುರೂಪಿಸಲಾಗಿರುವುದನ್ನು, ವ್ಯಾಪಾರದ ಹೊಸ ಅಧ್ಯಾಯಗಳನ್ನು ಬರೆಯಲಾಗುತ್ತಿರುವುದನ್ನು ಮತ್ತು ಅಭಿವೃದ್ಧಿಯ ಹೊಸ ಪ್ರಯಾಣಗಳು ತೆರೆದುಕೊಳ್ಳುತ್ತಿರುವುದನ್ನು ಸಾಕ್ಷೀಕರಿಸಿವೆ. ಕಾಕತಾಳೀಯವೆಂದರೆ,  ನೋಡಿ - ಈ ಬಂದರಿಗೆ ಬಂಗಾಳದ ಪುತ್ರ, ದೇಶದ ಮೊದಲ ಕೈಗಾರಿಕಾ ಸಚಿವ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೆಸರನ್ನು ಇಡಲಾಗಿದೆ.

ಸ್ನೇಹಿತರೇ,

ಭಾರತವು ಹೊಸ ಕಡಲ ಯುಗದಲ್ಲಿ ಸಾಗುತ್ತಿರುವಾಗ, ಪಶ್ಚಿಮ ಬಂಗಾಳದ ಪಾತ್ರ ಬಹಳ ಮುಖ್ಯವಾಗಿದೆ. ಇಲ್ಲಿ, ಬಂದರು ಸಾಮರ್ಥ್ಯ, ಕೈಗಾರಿಕಾ ಸಾಮರ್ಥ್ಯ, ಪ್ರತಿಭೆ, ಕೌಶಲ್ಯ ಮತ್ತು ಕಡಲ ಆರ್ಥಿಕತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯವಿದೆ. ಮುಂಬರುವ ವರ್ಷಗಳಲ್ಲಿ, ಪಶ್ಚಿಮ ಬಂಗಾಳವು ಭಾರತದ ನೀಲಿ ಆರ್ಥಿಕತೆ, ಕಡಲ ಉತ್ಪಾದನೆ, ಲಾಜಿಸ್ಟಿಕ್ಸ್ ಮತ್ತು ಕರಾವಳಿ ಅಭಿವೃದ್ಧಿಗೆ ಪ್ರಮುಖ ಕೇಂದ್ರವಾಗಲಿದೆ ಎಂಬ ವಿಶ್ವಾಸ ನನಗಿದೆ.

ಸ್ನೇಹಿತರೇ,

ಭಾರತವು ಸದಾ ಸಮುದ್ರವನ್ನು ಸಹಕಾರದ ಮಾಧ್ಯಮವೆಂದು ಪರಿಗಣಿಸಿದೆ. ಜೊತೆಗೆ ಶಾಂತಿಯನ್ನು ಕಾಪಾಡಲು ಶಕ್ತಿಯೂ ಅಷ್ಟೇ ಅಗತ್ಯ ಎಂದು ಭಾರತಕ್ಕೆ ತಿಳಿದಿದೆ. ಸಮೃದ್ಧಿಯನ್ನು ರಕ್ಷಿಸಲು ಭದ್ರತೆ ಅತ್ಯಗತ್ಯ. ಮತ್ತು ಭವಿಷ್ಯವನ್ನು ನಿರ್ಮಿಸಲು ಸ್ವಾವಲಂಬನೆ ಅನಿವಾರ್ಯವಾಗಿದೆ. ಇಂದು, ಐಎನ್ಎಸ್ ಅಗ್ರೇ, ಐಎನ್ಎಸ್ ದುನಾಗಿರಿ ಮತ್ತು ಐಎನ್ಎಸ್ ಸಂಶೋಧಕ್ ಈ ಸ್ಫೂರ್ತಿಯ ಸಂಕೇತವಾಗಿ ಭಾರತೀಯ ನೌಕಾಪಡೆಗೆ ಸೇರಿಕೊಂಡಿವೆ. ಅವು  21 ನೇ ಶತಮಾನದಲ್ಲಿ ತನ್ನ ಶಕ್ತಿಯನ್ನು ಗುರುತಿಸುತ್ತಿರುವ ಭಾರತವನ್ನು ಪ್ರತಿನಿಧಿಸುತ್ತವೆ, ತನ್ನದೇ ಆದ ಸಾಮರ್ಥ್ಯಗಳನ್ನು ನಂಬುತ್ತ ಮತ್ತು ಹೊಸ ವಿಶ್ವಾಸದಿಂದ, ವೇಗ, ಶಕ್ತಿ ಮತ್ತು ದೃಢನಿಶ್ಚಯದೊಂದಿಗೆ ವಿಶ್ವದ ಮುಂದೆ ಮುನ್ನಡೆಯುತ್ತಿವೆ.

ಸ್ನೇಹಿತರೇ,

ಈ ಶುಭ ಸಂದರ್ಭದಲ್ಲಿ, ನೌಕಾಪಡೆಯ ನನ್ನ ಎಲ್ಲಾ ಸಹಚರರಿಗೆ, ನನ್ನ ಎಲ್ಲಾ ಸಹ ನಾಗರಿಕರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಮತ್ತೊಮ್ಮೆ, ನಾನು ಭಾರತೀಯ ನೌಕಾಪಡೆ, ಎಲ್ಲಾ ವಿಜ್ಞಾನಿಗಳು, ಎಂಜಿನಿಯರ್ಗಳು, ಕಾರ್ಮಿಕರು ಮತ್ತು ರಾಷ್ಟ್ರದ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಧನ್ಯವಾದಗಳು.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Modi Govt’s Rs 1,083-Crore Boost To Chandrababu’s Amaravati Project In Andhra

Media Coverage

Modi Govt’s Rs 1,083-Crore Boost To Chandrababu’s Amaravati Project In Andhra
NM on the go

Nm on the go

Always be the first to hear from the PM. Get the App Now!
...
Seven years of the abrogation of Articles 370 and 35(A)
August 05, 2026

Today the nation marks seven years since the historic abrogation of Articles 370 and 35(A) on 5th August 2019. Prime Minister Modi described it as a defining milestone in India's journey towards inclusive development.

Shri Modi noted that over the past seven years, the people of Jammu and Kashmir and Ladakh have witnessed wide-ranging transformation across sectors. Infrastructure has expanded significantly, while new opportunities have emerged in education, healthcare, entrepreneurship and sports. "The women and members of marginalised communities, who had been deprived of several constitutional rights for decades, have now been empowered through the full application of the Constitution of India", Shri Modi added.

The Prime Minister observed that this year's anniversary assumes even greater significance as the nation commemorates the 125th birth anniversary of Dr. Syama Prasad Mookerjee. He said that Dr. Mookerjee's lifelong commitment to national unity continues to inspire generations, and that the vision he championed found historic fulfilment on 5th August 2019.

Reaffirming the Government's unwavering commitment to the development of Jammu and Kashmir and Ladakh, the Prime Minister said that every citizen must have the opportunity to dream big, realise their aspirations and contribute to the vision of a Viksit Bharat.

The Prime Minister posted on X:

Seven years ago, on this day, Articles 370 and 35(A) became history, marking a decisive new chapter in the journey of Jammu and Kashmir as well as Ladakh.

Since then, the lives of the people of J&K and Ladakh have witnessed wide-ranging transformation. Infrastructure has expanded, opportunities in areas such as education, healthcare, entrepreneurship and sports have grown. Be it the women or the marginalised communities, those who were denied their basic constitutional rights for decades have been empowered thanks to the full application of the Constitution of India.

5th August this year assumes even greater significance as this is the year our nation commemorates the 125th birth anniversary of Dr. Syama Prasad Mookerjee. His lifelong commitment to national unity continues to inspire generations. What he envisioned decades ago found historic fulfilment on 5th August 2019.

We reaffirm our commitment to the progress of Jammu and Kashmir as well as Ladakh and to ensure that every citizen has the opportunity to dream big, achieve and contribute to the making of a Viksit Bharat.

#Article370Abrogation