The spirit of standing with courage and truth is as relevant today as it was in the time of Sri Guru Teg Bahadur Sahib Ji: PM

ಜೋ ಬೋಲೆ ಸೋ ನಿಹಾಲ್, ಸತ್ ಶ್ರೀ ಅಕಾಲ್! ಇಂದು, ನಾವು 'ಹಿಂದ್ ದಿ ಚಾದರ್' ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ 350ನೇ ಶಹೀದಿ ಸಮಾಗಮದಂದು ಭಕ್ತಿಪೂರ್ವಕವಾಗಿ  ನೆನಪಿಸಿಕೊಳ್ಳುತ್ತಿದ್ದೇವೆ. ಈ ಹುತಾತ್ಮರ ವಾರ್ಷಿಕೋತ್ಸವದಲ್ಲಿ ಹಾಜರಿರುವ ಎಲ್ಲರಿಗೂ ನನ್ನ ನಮನಗಳು. 

ಈ ಐತಿಹಾಸಿಕ ಮತ್ತು ಪವಿತ್ರ ಕಾರ್ಯಕ್ರಮದ ಭಾಗವಾಗುವುದು ಒಂದು ಸೌಭಾಗ್ಯ.

ಸ್ನೇಹಿತರೇ, 

ಭಾರತದ ಇತಿಹಾಸವು ಶೌರ್ಯ, ಸಮನ್ವಯ ಮತ್ತು ಸಹಕಾರದ ಇತಿಹಾಸವಾಗಿದೆ. ಮಹಾರಾಷ್ಟ್ರದ ನೆಲದಲ್ಲಿ ಈ ಕಾರ್ಯಕ್ರಮದ ಮೂಲಕ, ನಾವು ಆ ಮಹಾನ್ ಪರಂಪರೆಗೆ ಸಾಕ್ಷಿಯಾಗುತ್ತಿದ್ದೇವೆ. ನಮ್ಮ ಗುರುಗಳು ತ್ಯಾಗದ ಪರಾಕಾಷ್ಠೆಯನ್ನು ಸಾಧಿಸಿದಾಗ, ನಮ್ಮ ಸಾಮಾಜಿಕ ಏಕತೆಯು ಪ್ರಮುಖ ಪಾತ್ರವನ್ನು ವಹಿಸಿತು. ಪ್ರತಿಯೊಂದು ವರ್ಗ ಮತ್ತು ಪ್ರತಿಯೊಂದು ಸಮುದಾಯದ ಜನರು ನಮ್ಮ ಗುರುಗಳಿಂದ ಸ್ಫೂರ್ತಿ ಪಡೆದರು. ಸಮಾಜವು ಎಲ್ಲಾ ಸಂದರ್ಭಗಳಲ್ಲಿಯೂ ಸತ್ಯ ಮತ್ತು ಸಂಸ್ಕೃತಿಯಲ್ಲಿ ದೃಢವಾಗಿರಲು ಕಲಿತಿದೆ. ಶ್ರೀ ಗುರು ಗೋಬಿಂದ್ ಸಿಂಗ್ ಜಿ ಅವರ ಗುರು ನಾನಕ್ ನಾಮ್ಲೇವ ಸಂಗತ್ನಂತಹ ಆಚರಣೆಗಳು ಮಹತ್ವದ ಪಾತ್ರ ವಹಿಸಿದ ಸಾಮಾಜಿಕ ಏಕತೆಯ ಆ ಮಹಾನ್ ಯಜ್ಞ. ಇಂದು, ದೇಶಕ್ಕೆ ಮತ್ತೊಮ್ಮೆ ಸಾಮಾಜಿಕ ಏಕತೆಯ ಅಗತ್ಯವಿರುವಾಗ, ಸಂಗತ್ ನ ಈ ಅದ್ಭುತ ಘಟನೆಯು ನಮ್ಮ ಗುರುಗಳು ಮತ್ತು ಸಂತರ ಆಶೀರ್ವಾದಗಳು ನಮ್ಮೊಂದಿಗಿವೆ ಎಂದು ನಮಗೆ ಭರವಸೆ ನೀಡುತ್ತದೆ.

 

ಸ್ನೇಹಿತರೇ,

ಈ ಸಮಾಗಮವು  ಒಂದು ನಿರಂತರ ಯಜ್ಞವಾಗಿದೆ. ಈ ಪ್ರಯಾಣವು ಕಳೆದ ವರ್ಷ ನಾಗ್ಪುರದ ಪವಿತ್ರ ಭೂಮಿಯಲ್ಲಿ ಪ್ರಾರಂಭವಾಯಿತು. ನಂತರ, ನಾಂದೇಡ್ ನ ತಖ್ತ್ ಶ್ರೀ ಹಜೂರ್ ಸಾಹಿಬ್ ನ ಐತಿಹಾಸಿಕ ಭೂಮಿಯಲ್ಲಿ, ನಾವೆಲ್ಲರೂ ಆ ಭಾವನೆಯ ಆಳವನ್ನು ಕಂಡಿದ್ದೇವೆ. ಮತ್ತು ಇಂದು, ಈ ಪ್ರಯಾಣವು ನವಿ ಮುಂಬೈನಲ್ಲಿ ಒಂದು ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಈ ಪ್ರಯಾಣದ ಸಂದೇಶವು ಈ ಮೂರು ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ. ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಜಿ ಅವರ ವೀರ ಇತಿಹಾಸವು ಮಹಾರಾಷ್ಟ್ರದ ಪ್ರತಿಯೊಂದು ಮೂಲೆಗೂ, ಸಾವಿರಾರು ಹಳ್ಳಿಗಳು ಮತ್ತು ಸಣ್ಣ ವಸಾಹತುಗಳಿಗೆ ಹರಡಿದೆ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ಮಹಾರಾಷ್ಟ್ರ ಸರ್ಕಾರವನ್ನು ವಿಶೇಷವಾಗಿ ಅಭಿನಂದಿಸುತ್ತೇನೆ.

ಸ್ನೇಹಿತರೇ,

ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ ಈ ಮಹಾನ್ ತ್ಯಾಗವನ್ನು ಸ್ಮರಿಸಲು, ದೇಶದ ವಿವಿಧ ಭಾಗಗಳಲ್ಲಿ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇತ್ತೀಚೆಗೆ, ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ಒಂದು ಭವ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಭಾಗ್ಯ ನನಗೆ ಸಿಕ್ಕಿತು. ಕೇಂದ್ರ ಸರ್ಕಾರವು ನಮ್ಮ ಗುರು ಸಾಹಿಬ್ ಗಳಿಗೆ ಸಂಬಂಧಿಸಿದ ಪ್ರತಿಯೊಂದು ಐತಿಹಾಸಿಕ ಸಂದರ್ಭವನ್ನು ರಾಷ್ಟ್ರೀಯ ಮಟ್ಟದಲ್ಲಿ ಆಚರಿಸುತ್ತಿದೆ. ನಿಮಗೆಲ್ಲರಿಗೂ ತಿಳಿದಿರುವಂತೆ, ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಜಿ ಅವರ 400 ನೇ ಜನ್ಮ ದಿನಾಚರಣೆಯಿಂದ, ಶ್ರೀ ಗುರು ತೇಜ್ ಬಹದ್ದೂರ್ ಜಿ ಅವರಿಗೆ ಸಮರ್ಪಿತವಾದ ಸ್ಮರಣಾರ್ಥ ಅಂಚೆ ಚೀಟಿಗಳು ಮತ್ತು ವಿಶೇಷ ನಾಣ್ಯಗಳ ಬಿಡುಗಡೆಯಿಂದ ಹಿಡಿದು ಗುರು ನಾನಕ್ ದೇವ್ ಜಿ ಅವರ 550 ನೇ ಜನ್ಮ ದಿನಾಚರಣೆಯವರೆಗೆ, ನಾವು ನಮ್ಮ ಗುರುಗಳಿಗೆ ಸಂಬಂಧಿಸಿದ ಪ್ರತಿಯೊಂದು ಹಬ್ಬ ಮತ್ತು ಸಂದರ್ಭವನ್ನು ಅತ್ಯಂತ ಭಕ್ತಿಯಿಂದ ಆಚರಿಸಿದ್ದೇವೆ. ಸಾಹಿಬ್ ಜಾ ದಾಸ್ ಅವರ ಗೌರವಾರ್ಥವಾಗಿ ಪ್ರತಿ ವರ್ಷ ವೀರ್ ಬಾಲ್ ದಿವಸ್ ಆಚರಿಸುವ ರಾಷ್ಟ್ರೀಯ ಸಂಪ್ರದಾಯವನ್ನು ಸಹ ನಾವು ಪ್ರಾರಂಭಿಸಿದ್ದೇವೆ.

ಸ್ನೇಹಿತರೇ,

ಕರ್ತಾರ್ಪುರ್ ಸಾಹಿಬ್ ಕಾರಿಡಾರ್ ನಿರ್ಮಾಣವನ್ನು ದಾಖಲೆಯ ಸಮಯದಲ್ಲಿ ಪೂರ್ಣಗೊಳಿಸುವುದು, ಶ್ರೀ ಹೇಮಕುಂಡ್ ಸಾಹಿಬ್ ಯಾತ್ರೆಗೆ ಹೊಸ ಸೌಲಭ್ಯಗಳನ್ನು ನಿರ್ಮಿಸುವುದು, ಎಫ್ ಸಿ ಆರ್ ಎ   ಅಡಿಯಲ್ಲಿ ಗುರುದ್ವಾರಗಳೊಂದಿಗೆ ಸಂಬಂಧಿಸಿದ ಸಿಖ್ ಸಂಸ್ಥೆಗಳು ಮತ್ತು ಸಂಸ್ಥೆಗಳಿಗೆ ಪರಿಹಾರವನ್ನು ನೀಡುವುದು, ಪಠ್ಯಕ್ರಮ ಮತ್ತು ಸಾಂಸ್ಕೃತಿಕ ಪ್ರವಚನದಲ್ಲಿ ಸಿಖ್ ಇತಿಹಾಸವನ್ನು ಅಳವಡಿಸುವುದು - ನಮ್ಮ ಸಿಖ್ ಸಹೋದರರು ಮತ್ತು ಸಹೋದರಿಯರು ದಶಕಗಳಿಂದ ಕಾಯುತ್ತಿದ್ದ ಅನೇಕ ಕಾರ್ಯಗಳನ್ನು ಸಾಧಿಸುವ ಅದೃಷ್ಟ ನಮಗಿದೆ.

 

ಸಹೋದರರೇ ಮತ್ತು ಸಹೋದರಿಯರೇ,

ಸಿಖ್ಖರಿಗೆ ಗೌರವ ಮತ್ತು ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರ ಬದ್ಧವಾಗಿ ಕೆಲಸ ಮಾಡುತ್ತಿದೆ. ಈ ಬದ್ಧತೆಯಿಂದಾಗಿ, 1984ರ ಗಲಭೆಗಳ ತನಿಖೆಗಾಗಿ ನಾವು ಎಸ್ ಐ ಟಿಯನ್ನು ರಚಿಸಿದ್ದೇವೆ. 1984ರ ಮುಚ್ಚಿದ ಗಲಭೆ ಪ್ರಕರಣಗಳನ್ನು ಮತ್ತೆ ತೆರೆಯಲಾಯಿತು. ಅನೇಕ ಸಂದರ್ಭಗಳಲ್ಲಿ, ಅಪರಾಧಿಗಳನ್ನು ನ್ಯಾಯಕ್ಕೆ ತರಲಾಯಿತು. 1984ರ ಸಂತ್ರಸ್ತ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರವನ್ನು ಘೋಷಿಸಲಾಯಿತು. ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗಕ್ಕೆ ಹೆಚ್ಚು ಸಕ್ರಿಯ ಪಾತ್ರವನ್ನು ನೀಡಲಾಯಿತು. ಅದೇ ರೀತಿ, ಅಫ್ಘಾನಿಸ್ತಾನದಲ್ಲಿ ಸಿಖ್ಖರ ಸುರಕ್ಷತೆ ಮತ್ತು ಗುರು ಗ್ರಂಥ ಸಾಹಿಬ್ನ ಗೌರವದ ವಿಷಯಕ್ಕೆ ಬಂದಾಗ, ನಮ್ಮ ಸರ್ಕಾರವು ಮಿಷನ್ ಮೋಡ್ ನಲ್ಲಿ ಕೆಲಸ ಮಾಡಿತು. ನಾವು ಗುರು ಗ್ರಂಥ ಸಾಹಿಬ್ ಸ್ವರೂಪ್ ಗಳನ್ನು ಸುರಕ್ಷಿತವಾಗಿ ಮತ್ತು ಘನತೆಯಿಂದ ಮರಳಿ ತಂದಿದ್ದೇವೆ. ನಾವು ಅಫ್ಘಾನ್ ಸಿಖ್ಖರು ಮತ್ತು ಹಿಂದೂಗಳಿಗೆ ಪೌರತ್ವಕ್ಕೆ ದಾರಿ ಮಾಡಿಕೊಟ್ಟಿದ್ದೇವೆ. ಸಿಎಎ ಮೂಲಕ ಕಿರುಕುಳಕ್ಕೊಳಗಾದ ಸಿಖ್ ನಿರಾಶ್ರಿತರಿಗೆ ನಾವು ಪರಿಹಾರವನ್ನು ಒದಗಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಖ್ ಕುಟುಂಬಗಳಿಗೆ ಪುನರ್ವಸತಿ ಪ್ಯಾಕೇಜ್ ಗಳನ್ನು ಸಹ ಜಾರಿಗೆ ತರಲಾಯಿತು. ಅದೇ ರೀತಿ, ಒಸಿಐ ಮತ್ತು ವೀಸಾ ನಿಯಮಗಳನ್ನು ಸರಳೀಕರಿಸಲಾಯಿತು. ಕಪ್ಪುಪಟ್ಟಿಗೆ ಸೇರಿಸಲಾದ ಸಾವಿರಾರು ಸಿಖ್ಖರನ್ನು ಕಪ್ಪುಪಟ್ಟಿಯಿಂದ ತೆಗೆದುಹಾಕಲಾಯಿತು. ವಲಸಿಗ ಸಿಖ್ಖರಿಗೆ ಭಾರತಕ್ಕೆ ಮತ್ತು ಅಲ್ಲಿಂದ ಪ್ರಯಾಣದ ಪ್ರಕ್ರಿಯೆಯನ್ನು ಬಹಳ ಸರಳಗೊಳಿಸಲಾಯಿತು.

ಸ್ನೇಹಿತರೇ,

ಸಿಖ್ ಸಮುದಾಯದ ನಂಬಿಕೆಯನ್ನು ಗೌರವಿಸುವುದು ಮತ್ತು ಅವರ ಪ್ರಗತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಜವಾಬ್ದಾರಿ ಎಂದು ನಾವು ಪರಿಗಣಿಸುತ್ತೇವೆ ಮತ್ತು ಈ ಸೇವೆಯನ್ನು ನಮ್ಮ ಅದೃಷ್ಟ ಎಂದು ನಾವು ಪರಿಗಣಿಸುತ್ತೇವೆ.

 

 

ಸ್ನೇಹಿತರೇ,

ಧೈರ್ಯ ಮತ್ತು ಸತ್ಯದೊಂದಿಗೆ ನಿಲ್ಲುವ ಮನೋಭಾವವು ಶ್ರೀ ಗುರು ತೇಜ್ ಬಹದ್ದೂರ್ ಸಾಹಿಬ್ ಅವರ ಕಾಲದಲ್ಲಿದ್ದಂತೆಯೇ ಇಂದಿಗೂ ಪ್ರಸ್ತುತವಾಗಿದೆ. ಹೊಸ ಪೀಳಿಗೆ ಈ ಮೌಲ್ಯಗಳೊಂದಿಗೆ ಸಂಪರ್ಕ ಸಾಧಿಸಿದಾಗ, ಸಂಪ್ರದಾಯವು ಇನ್ನು ಮುಂದೆ ನೆನಪಾಗಿ ಉಳಿಯುವುದಿಲ್ಲ; ಅದು ಭವಿಷ್ಯದ ಹಾದಿಯಾಗುತ್ತದೆ. ಈ ಸಮಾಗಮದ ಉದ್ದೇಶ ಇದು: ನಾವು ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳದೆ, ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಮನೋಭಾವದಿಂದ, ಈ ಪವಿತ್ರ ಸಭೆಯೊಂದಿಗೆ ಸಂಬಂಧ ಹೊಂದಿರುವ ಎಲ್ಲಾ ಸಂಘಟಕರು ಮತ್ತು ಸಂಗತ್ ಗೆ ನಾನು ಮತ್ತೊಮ್ಮೆ ಗೌರವಯುತವಾಗಿ ವಂದಿಸುತ್ತೇನೆ.  ಈ ಐತಿಹಾಸಿಕ ಪ್ರಯತ್ನಕ್ಕಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ವಾಹೆಗುರು ಜಿ ಕಾ ಖಲ್ಸಾ, ವಾಹೆಗುರು ಜಿ ಕಿ ಫತೇ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
UPI expands international presence to Cambodia through KHQR linkage

Media Coverage

UPI expands international presence to Cambodia through KHQR linkage
NM on the go

Nm on the go

Always be the first to hear from the PM. Get the App Now!
...
Prime Minister condoles loss of lives in a fire incident in Malviya Nagar, Delhi
June 03, 2026
PM announces ex-gratia from PMNRF

Prime Minister Shri Narendra Modi today described the loss of lives due to a fire incident in Malviya Nagar, Delhi, as tragic. He extended his heartfelt condolences to those who have lost their loved ones and wished a speedy recovery to the injured. He noted that authorities are providing all possible assistance to those affected.

The Prime Minister has announced an ex-gratia of Rs. 2 lakh from the Prime Minister’s National Relief Fund (PMNRF) for the next of kin of each deceased. Shri Modi also stated that Rs. 50,000 would be provided to those who sustained injuries in the incident.

The Prime Minister posted on X:

"The loss of lives due to a fire incident in Malviya Nagar, Delhi is tragic. My condolences to those who have lost their loved ones. Wishing a speedy recovery to the injured. Authorities are providing all possible assistance to those affected.
An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi"