ಆಧುನಿಕ ವಿಮಾನ ನಿಲ್ದಾಣಗಳು ಮತ್ತು ಸುಧಾರಿತ ಸಂಪರ್ಕ ಮೂಲಸೌಕರ್ಯಗಳು ಯಾವುದೇ ರಾಜ್ಯಕ್ಕೆ ಹೊಸ ಸಾಧ್ಯತೆಗಳು ಮತ್ತು ಹೊಸ ಅವಕಾಶಗಳಿಗೆ ಮಹಾದ್ವಾರಗಳಾಗಿ ಕಾರ್ಯನಿರ್ವಹಿಸುತ್ತವೆ: ಪ್ರಧಾನಮಂತ್ರಿ
ಇಂದು, ಅಸ್ಸಾಂ ಮತ್ತು ಇಡೀ ಈಶಾನ್ಯವು ಭಾರತದ ಅಭಿವೃದ್ಧಿಯ ಹೊಸ ಮಹಾದ್ವಾರವಾಗಿ ಹೊರಹೊಮ್ಮುತ್ತಿದೆ: ಪ್ರಧಾನಮಂತ್ರಿ
ಈಶಾನ್ಯವು ಭಾರತದ ಭವಿಷ್ಯದ ಬೆಳವಣಿಗೆಯ ನಾಯಕತ್ವ ವಹಿಸಲಿದೆ: ಪ್ರಧಾನಮಂತ್ರಿ

ನಮಸ್ಕಾರ,

ಅಸ್ಸಾಂ ರಾಜ್ಯಪಾಲರಾದ ಶ್ರೀ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಜಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಜಿ, ಕೇಂದ್ರ ಸರ್ಕಾರದ ನನ್ನ ಸಹೋದ್ಯೋಗಿಗಳೆ, ನಮ್ಮ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಜಿ, ರಾಮ್ ಮೋಹನ್ ನಾಯ್ಡು ಜಿ, ಮುರಳೀಧರ್ ಮೊಹೋಲ್ ಜಿ, ಪಬಿತ್ರ ಮಾರ್ಗರಿಟಾ ಜಿ, ಅಸ್ಸಾಂ ಸರ್ಕಾರದ ಸಚಿವರೆ, ಇತರ ಗಣ್ಯರೆ, ಸಹೋದರ ಸಹೋದರಿಯರೆ.

ನನ್ನ ಭಾಷಣ ಆರಂಭಿಸುವ ಮೊದಲು, ಇಂದು ವಿಜಯೋತ್ಸವದ ದಿನ ಎಂದು ನಾನು ನಿಮ್ಮೆಲ್ಲರನ್ನೂ ವಿನಂತಿಸುತ್ತೇನೆ, ಒಂದು ರೀತಿಯಲ್ಲಿ ಇದು ಅಭಿವೃದ್ಧಿಯ ಆಚರಣೆಯ ದಿನ. ಇದು ಅಸ್ಸಾಂನ ಅಭಿವೃದ್ಧಿಯ ಆಚರಣೆಯಾಗದೆ, ಇಡೀ ಈಶಾನ್ಯದ ಅಭಿವೃದ್ಧಿಯ ಆಚರಣೆಯಾಗಿದೆ. ಆದ್ದರಿಂದ ನಾನು ನಿಮ್ಮ ಮೊಬೈಲ್ ಫೋನ್ ತೆಗೆದುಕೊಂಡು, ಅದರ ಮೇಲೆ ಬ್ಯಾಟರಿ ದೀಪ ಆನ್ ಮಾಡಿ, ನೀವೆಲ್ಲರೂ ಈ ಅಭಿವೃದ್ಧಿ ಉತ್ಸವದ ಭಾಗವಾಗಬೇಕೆಂದು ವಿನಂತಿಸುತ್ತೇನೆ. ಪ್ರತಿಯೊಬ್ಬರ ಮೊಬೈಲ್ ಫೋನ್ ದೀಪಗಳು ಬೆಳಗುತ್ತಿರಬೇಕು! ನೋಡಿ, ಪ್ರತಿಧ್ವನಿಸುವ ಚಪ್ಪಾಳೆಯ ಮೂಲಕ, ಅಸ್ಸಾಂ ಅಭಿವೃದ್ಧಿಯ ಹಬ್ಬವನ್ನು ಇಡೀ ದೇಶವೇ ಆಚರಿಸುತ್ತಿದೆ ಎಂಬುದನ್ನು ನೋಡುತ್ತದೆ. ಅಭಿವೃದ್ಧಿಯ ಬೆಳಕು ಚೆಲ್ಲಿದಾಗ, ಜೀವನದ ಪ್ರತಿಯೊಂದು ಮಾರ್ಗವು ಹೊಸ ಎತ್ತರ ಮುಟ್ಟಲು ಪ್ರಾರಂಭಿಸುತ್ತದೆ. ಎಲ್ಲರಿಗೂ ತುಂಬು ಧನ್ಯವಾದಗಳು.

ಸ್ನೇಹಿತರೆ,

ಅಸ್ಸಾಂ ಭೂಮಿಯೊಂದಿಗಿನ ನನ್ನ ದೀರ್ಘ ಸಂಪರ್ಕ, ಇಲ್ಲಿನ ಜನರ ಪ್ರೀತಿ ಮತ್ತು ವಾತ್ಸಲ್ಯ, ವಿಶೇಷವಾಗಿ ಅಸ್ಸಾಂ ಮತ್ತು ಈಶಾನ್ಯದ ನನ್ನ ತಾಯಂದಿರು ಮತ್ತು ಸಹೋದರಿಯರಿಂದ ನಾನು ಪಡೆಯುವ ಪ್ರೀತಿ ಮತ್ತು ಒಳಗೊಳ್ಳುವಿಕೆಯ ಭಾವನೆ, ನನಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತದೆ, ಈಶಾನ್ಯದ ಅಭಿವೃದ್ಧಿಗಾಗಿ ನಮ್ಮ ಸಂಕಲ್ಪವನ್ನು ಬಲಪಡಿಸುತ್ತದೆ. ಇಂದು  ಅಸ್ಸಾಂನ ಅಭಿವೃದ್ಧಿಗೆ ಹೊಸ ಅಧ್ಯಾಯ ಸೇರಿಸಲಾಗುತ್ತಿದೆ. ಈ ಸಂದರ್ಭದಲ್ಲಿ, ಭಾರತ ರತ್ನ ಭೂಪೇನ್ ದಾ (ಹಜಾರಿಕಾ) ಅವರ ಮಾತುಗಳು ಬಹಳ ಪ್ರಸ್ತುತವಾಗುತ್ತಿವೆ.  ಲುಯಿಡೋರ್ ಪಾರ ಜಿಲಿಕೈ ತುಲಿಬೋಲೋಯಿ, ಆಮಿ ಪ್ರೋತಿಜ್ಞಾಬೋದ್ಧ! ಆಮಿ ಹಾನ್ಕಲ್ಪಬೋದ್ಧ! ಇದರರ್ಥ ಲುಯಿಟ್ (ಲೋಹಿತ್) ನದಿಯ ದಡಗಳು ಬೆಳಗುತ್ತವೆ, ಕತ್ತಲೆಯ ಪ್ರತಿಯೊಂದು ಗೋಡೆಯೂ ಉರುಳುತ್ತದೆ ಮತ್ತು ಇದು ಸಂಭವಿಸುತ್ತದೆ. ಇದು ನಮ್ಮ ಸಂಕಲ್ಪ, ಇದೇ ನಮ್ಮ ಭರವಸೆ.

 

ಸ್ನೇಹಿತರೆ,

ಭುಪೇನ್ ದಾ ಅವರ ಈ ಸಾಲುಗಳು ಕೇವಲ ಹಾಡಾಗಿರಲಿಲ್ಲ, ಇದು ಅಸ್ಸಾಂ ಅನ್ನು ಪ್ರೀತಿಸಿದ ಪ್ರತಿಯೊಬ್ಬ ಮಹಾನ್ ಆತ್ಮದ ಸಂಕಲ್ಪವಾಗಿತ್ತು. ಇಂದು ಈ ಸಂಕಲ್ಪವು ನಮ್ಮ ಮುಂದೆ ಸಾಬೀತಾಗುತ್ತಿದೆ. ಬ್ರಹ್ಮಪುತ್ರ ನದಿ ಅಸ್ಸಾಂ ಮೂಲಕ ನಿರಂತರವಾಗಿ ಹರಿಯುವಂತೆಯೇ, ಬಿಜೆಪಿಯ ಡಬಲ್-ಎಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಸಹ ಇಲ್ಲಿ ನಿರಂತರವಾಗಿ ಹರಿಯುತ್ತಿದೆ. ಇಂದು ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಯು ನಮ್ಮ ಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಈ ಹೊಸ ಟರ್ಮಿನಲ್ ಕಟ್ಟಡಕ್ಕಾಗಿ ಅಸ್ಸಾಂನ ಎಲ್ಲಾ ಜನರಿಗೆ ಮತ್ತು ಇಡೀ ರಾಷ್ಟ್ರಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸಹೋದರ ಸಹೋದರಿಯರೆ,

ಸ್ವಲ್ಪ ಸಮಯದ ಹಿಂದೆ, ಗೋಪಿನಾಥ್ ಬೋರ್ಡೊಲೊಯ್ ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಸೌಭಾಗ್ಯ ನನಗೆ ಸಿಕ್ಕಿತು. ಬೋರ್ಡೊಲೊಯ್ ಜಿ ಅಸ್ಸಾಂನ ಮೊದಲ ಮುಖ್ಯಮಂತ್ರಿಯಾಗಿದ್ದರು, ಅವರು ಅಸ್ಸಾಂನ ಹೆಮ್ಮೆಯಾಗಿದ್ದರು, ಅವರು ಅಸ್ಸಾಂನ ಗುರುತು, ಅಸ್ಸಾಂನ ಭವಿಷ್ಯ ಮತ್ತು ಅಸ್ಸಾಂನ ಹಿತಾಸಕ್ತಿಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಅವರ ಈ ಪ್ರತಿಮೆಯು ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ, ಅಸ್ಸಾಂ ಬಗ್ಗೆ ಅವರು ಹೊಂದಿದ್ದ ಹೆಮ್ಮೆಯ ಭಾವನೆಯನ್ನು ಜಾಗೃತಗೊಳಿಸುತ್ತದೆ.

ಸ್ನೇಹಿತರೆ,

ಆಧುನಿಕ ವಿಮಾನ ನಿಲ್ದಾಣ ಸೌಲಭ್ಯಗಳು ಮತ್ತು ಅತ್ಯಾಧುನಿಕ ಸಂಪರ್ಕ ಮೂಲಸೌಕರ್ಯಗಳು ಯಾವುದೇ ರಾಜ್ಯಕ್ಕೆ ಹೊಸ ಸಾಧ್ಯತೆಗಳು ಮತ್ತು ಅವಕಾಶಗಳಿಗೆ ದ್ವಾರಗಳಾಗಿವೆ. ರಾಜ್ಯದ ವಿಶ್ವಾಸ ಮತ್ತು ಜನರ ವಿಶ್ವಾಸ ಹೆಚ್ಚುತ್ತಿರುವ ಆಧಾರಸ್ತಂಭಗಳು ಇವಾಗಿವೆ. ಅಸ್ಸಾಂನಲ್ಲಿ ಇಂತಹ ಭವ್ಯವಾದ ಹೆದ್ದಾರಿಗಳು ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿರುವುದನ್ನು ನೀವು ನೋಡಿದಾಗ, ನೀವು ಸಹ ಹೇಳುತ್ತೀರಿ - ಈಗ ಅಸ್ಸಾಂಗೆ ನ್ಯಾಯ ದೊರಕವುದು ಶುರುವಾಗಿದೆ.

 

ಸ್ನೇಹಿತರೆ,

ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿ ಕಾಂಗ್ರೆಸ್ ಸರ್ಕಾರಗಳ ಕಾರ್ಯಸೂಚಿಯಲ್ಲಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರಗಳು ಮತ್ತು ಅದರಲ್ಲಿರುವ ನಾಯಕರು, ಅಸ್ಸಾಂ ಮತ್ತು ಈಶಾನ್ಯಕ್ಕೆ ಯಾರು ಹೋಗುತ್ತಾರೆ ಎಂದು ಹೇಳುತ್ತಿದ್ದರು? ಕಾಂಗ್ರೆಸ್ ಹೇಳುತ್ತಿತ್ತು... ಅಸ್ಸಾಂ ಸೇರಿದಂತೆ ಈಶಾನ್ಯ ಭಾಗಕ್ಕೆ ಆಧುನಿಕ ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ಉತ್ತಮ ರೈಲ್ವೆಗಳು ಏಕೆ ಬೇಕು? ಈ ಮನಸ್ಥಿತಿಯಿಂದಾಗಿ, ಕಾಂಗ್ರೆಸ್ ಈ ಇಡೀ ಪ್ರದೇಶವನ್ನು ದಶಕಗಳಿಂದ ನಿರ್ಲಕ್ಷಿಸಿತು.

ಸ್ನೇಹಿತರೆ,

ಕಾಂಗ್ರೆಸ್ 6-7 ದಶಕಗಳಿಂದ ಮಾಡುತ್ತಾ ಬಂದ ತಪ್ಪುಗಳನ್ನು ಮೋದಿ ಒಂದೊಂದಾಗಿ ಸರಿಪಡಿಸುತ್ತಿದ್ದಾರೆ. ಮೋದಿ ಹೇಳುತ್ತಾರೆ... ಕಾಂಗ್ರೆಸ್ ಜನರು ಈಶಾನ್ಯಕ್ಕೆ ಹೋಗಲಿ ಅಥವಾ ಹೋಗದಿರಲಿ, ನಾನು ಈಶಾನ್ಯ ಮತ್ತು ಅಸ್ಸಾಂಗೆ ಬಂದ ತಕ್ಷಣ ನಾನು ನನ್ನ ಜನರೊಂದಿಗೆ ಇದ್ದೇನೆ ಎಂದು ನನಗೆ ಅನಿಸುತ್ತದೆ. ಮೋದಿಗೆ ಅಸ್ಸಾಂನ ಅಭಿವೃದ್ಧಿ ಒಂದು ಅಗತ್ಯ, ಜವಾಬ್ದಾರಿ ಮತ್ತು ಹೊಣೆಗಾರಿಕೆಯೂ ಆಗಿದೆ.

ಅದಕ್ಕಾಗಿಯೇ ಸ್ನೇಹಿತರೆ,

ಕಳೆದ 11 ವರ್ಷಗಳಲ್ಲಿ, ಅಸ್ಸಾಂ ಮತ್ತು ಈಶಾನ್ಯಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇಂದು ಅಸ್ಸಾಂ ಪ್ರಗತಿ ಸಾಧಿಸುತ್ತಿದೆ ಮತ್ತು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಭಾರತೀಯ ನ್ಯಾಯ ಸಂಹಿತವನ್ನು ಅನುಷ್ಠಾನಗೊಳಿಸುವಲ್ಲಿ ಅಸ್ಸಾಂ ದೇಶದಲ್ಲಿಯೇ ನಂಬರ್ 1 ರಾಜ್ಯವಾಗಿದೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ. 50 ಲಕ್ಷಕ್ಕೂ ಹೆಚ್ಚು ಸ್ಮಾರ್ಟ್ ಪ್ರಿ-ಪೇಯ್ಡ್ ಮೀಟರ್‌ಗಳನ್ನು ಅಳವಡಿಸುವ ಮೂಲಕ ಅಸ್ಸಾಂ ಹೊಸ ದಾಖಲೆ ಸೃಷ್ಟಿಸಿದೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ, ಲಂಚ ಮತ್ತು ಪಕ್ಷಪಾತವಿಲ್ಲದೆ ಅಸ್ಸಾಂನಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯುವುದು ಅಸಾಧ್ಯವಾಗಿತ್ತು. ಆದರೆ ಇಂದು ಯಾವುದೇ ಲಂಚ ಅಥವಾ ಪಕ್ಷಪಾತವಿಲ್ಲದೆ ಸಾವಿರಾರು ಯುವಕರು ಇಲ್ಲಿ ಉದ್ಯೋಗಗಳನ್ನು ಪಡೆಯುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲಿ, ಅಸ್ಸಾಂ ಸಂಸ್ಕೃತಿಯನ್ನು ಪ್ರತಿಯೊಂದು ವೇದಿಕೆಯಲ್ಲಿಯೂ ಪ್ರಚಾರ ಮಾಡಲಾಗುತ್ತಿದೆ. ಕಳೆದ ವರ್ಷ ಏಪ್ರಿಲ್ 13 ರಂದು ಗುವಾಹತಿ  ಕ್ರೀಡಾಂಗಣದಲ್ಲಿ 11,000ಕ್ಕೂ ಹೆಚ್ಚು ಕಲಾವಿದರು ಒಟ್ಟಾಗಿ ಬಿಹು ನೃತ್ಯ ಪ್ರದರ್ಶಿಸಿದ ಕಾರ್ಯಕ್ರಮವನ್ನು ನಾನು ಮರೆಯಲು ಸಾಧ್ಯವಿಲ್ಲ. ಈ ಕಾರ್ಯಕ್ರಮ ಗಿನ್ನೆಸ್ ವಿಶ್ವ ದಾಖಲೆಗಳಲ್ಲಿ ದಾಖಲಾಗಿದೆ. ಈ ರೀತಿಯ ಹೊಸ ದಾಖಲೆಗಳನ್ನು ಸೃಷ್ಟಿಸುವ ಮೂಲಕ ಅಸ್ಸಾಂ ವೇಗವಾಗಿ ಮುನ್ನಡೆಯುತ್ತಿದೆ.

 

ಸ್ನೇಹಿತರೆ,

ಈ ಹೊಸ ಟರ್ಮಿನಲ್ ಕಟ್ಟಡವು ಗುವಾಹತಿ ಮತ್ತು ಅಸ್ಸಾಂನ ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಪ್ರತಿ ವರ್ಷ 12.5 ಕೋಟಿಗೂ ಹೆಚ್ಚು ಪ್ರಯಾಣಿಕರು ಈ ಟರ್ಮಿನಲ್ ಮೂಲಕ ಪ್ರಯಾಣಿಸಲು ಸಾಧ್ಯವಾಗುತ್ತದೆ! ಇದರರ್ಥ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಸ್ಸಾಂಗೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಮಾತೆ ಕಾಮಾಕ್ಯಳನ್ನು ಭೇಟಿ ಮಾಡುವ ಸೌಲಭ್ಯವು ಭಕ್ತರಿಗೆ ಸುಲಭವಾಗುತ್ತದೆ. ಈ ಹೊಸ ವಿಮಾನ ನಿಲ್ದಾಣ ಟರ್ಮಿನಲ್‌ಗೆ ಹೆಜ್ಜೆ ಹಾಕಿದಾಗ, "ಅಭಿವೃದ್ಧಿ ಮತ್ತು ಪರಂಪರೆ" ಮಂತ್ರದ ನಿಜವಾದ ಅರ್ಥವೇನೆಂದು ಸ್ಪಷ್ಟವಾಗುತ್ತದೆ. ಈ ವಿಮಾನ ನಿಲ್ದಾಣವನ್ನು ಅಸ್ಸಾಂನ ಪ್ರಕೃತಿ ಮತ್ತು ಸಂಸ್ಕೃತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಟರ್ಮಿನಲ್ ಒಳಗೆ ಹಸಿರು ಇದೆ, ಇದು ಒಳಾಂಗಣ ಅರಣ್ಯದಂತಹ ವಿನ್ಯಾಸ ಹೊಂದಿದೆ. ವಿನ್ಯಾಸವು ಸುತ್ತಲೂ ಪ್ರಕೃತಿಯಿಂದ ಪ್ರೇರಿತವಾಗಿದೆ, ಪ್ರತಿಯೊಬ್ಬ ಪ್ರಯಾಣಿಕರು ಶಾಂತಿ ಮತ್ತು ನೆಮ್ಮದಿಯ ಭಾವನೆಯನ್ನು ಅನುಭವಿಸುತ್ತಾರೆ ಎಂಬುದನ್ನು ಖಚಿತಪಡಿಸುತ್ತದೆ. ಬಿದಿರನ್ನು ಅದರ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗಿದೆ. ಬಿದಿರು ಅಸ್ಸಾಂನಲ್ಲಿ ಜೀವನದ ಅವಿಭಾಜ್ಯ ಅಂಗವಾಗಿದೆ, ಇದು ಇಲ್ಲಿ ಶಕ್ತಿ ಮತ್ತು ಸೌಂದರ್ಯ ಎರಡನ್ನೂ ತೋರಿಸುತ್ತದೆ. ದೆಹಲಿಯಲ್ಲಿ ಕುಳಿತಿರುವ ಹಿಂದಿನ ಸರ್ಕಾರಗಳ ನಾಯಕರಿಗೆ ಈ ಬಿದಿರು ಏನೆಂಬುದು ತಿಳಿದಿರಲಿಲ್ಲ. ನಿಮಗೆ ಆಶ್ಚರ್ಯವಾಗುತ್ತದೆ, 2014ರಲ್ಲಿ ನೀವು ನನಗೆ ಕೆಲಸ ನೀಡುವ ಮೊದಲು, ನಮ್ಮ ದೇಶದಲ್ಲಿ ಒಂದು ಕಾನೂನು ಇತ್ತು, ಈ ಕಾನೂನು ಬಿದಿರನ್ನು ಕತ್ತರಿಸಲು ಸಾಧ್ಯವಿಲ್ಲ ಎಂಬುದಾಗಿತ್ತು. ಈಗ ಯಾರಾದರೂ ದಯವಿಟ್ಟು ನನಗೆ ಏಕೆ ವಿವರಿಸಿ? ಏಕೆಂದರೆ ಅವರು ಬಿದಿರು ಒಂದು ಮರ, ಅದು ಒಂದು ಮರ ಎಂದಷ್ಟೇ ಹೇಳಿದರು. ಒಮ್ಮೆ ಅದು ಒಂದು ಮರ ಎಂದು ಹೇಳಿ, ಎಲ್ಲಾ ಬಾಗಿಲುಗಳನ್ನು ಮುಚ್ಚಲಾಯಿತು. ಆದರೆ ಜಗತ್ತು ಬಿದಿರು ಒಂದು ಸಸ್ಯ ಎಂದು ನಂಬುತ್ತದೆ, ನಾವು ಕಾನೂನನ್ನು ತೆಗೆದುಹಾಕಿ ಅದನ್ನು ಹುಲ್ಲಿನ ವರ್ಗಕ್ಕೆ ತಂದಿದ್ದೇವೆ, ಅದು ವಾಸ್ತವವಾಗಿ ಬಿದಿರಿನ ಗುರುತಾಗಿ, ಇಂದು ಬಿದಿರಿನಿಂದ ಇಷ್ಟು ದೊಡ್ಡ ಭವ್ಯ ಕಟ್ಟಡ ನಿರ್ಮಿಸಲಾಗಿದೆ. ಇಂದು ನೀವು ಸಾಮಾಜಿಕ ಮಾಧ್ಯಮವನ್ನು ನೋಡಿದರೆ, ಭಾರತೀಯ ವಿಮಾನ ನಿಲ್ದಾಣಗಳ ವಿನ್ಯಾಸಗಳನ್ನು ಇಡೀ ವಿಶ್ವಾದ್ಯಂತ ಚರ್ಚಿಸಲಾಗುತ್ತಿದೆ.

ಸ್ನೇಹಿತರೆ,

ಮೂಲಸೌಕರ್ಯದ ಈ ಅಭಿವೃದ್ಧಿಯು ಒಂದು ದೊಡ್ಡ ಸಂದೇಶವನ್ನು ರವಾನಿಸುತ್ತಿದೆ, ಇದು ಭಾರತದ ಅಭಿವೃದ್ಧಿ ಪ್ರಯಾಣದ ವಿಶಿಷ್ಟ ಲಕ್ಷಣವಾಗುತ್ತಿದೆ. ಇದು ಉದ್ಯಮವನ್ನು ಉತ್ತೇಜಿಸುತ್ತದೆ, ಹೂಡಿಕೆದಾರರಿಗೆ ಸಂಪರ್ಕದಲ್ಲಿ ವಿಶ್ವಾಸವನ್ನು ಒದಗಿಸುತ್ತದೆ, ಸ್ಥಳೀಯ ಉತ್ಪನ್ನಗಳನ್ನು ವಿಶ್ವಾದ್ಯಂತ ರಫ್ತು ಮಾಡಲು ದಾರಿ ತೆರೆಯುತ್ತದೆ. ಹೊಸ ಅವಕಾಶ ಪಡೆಯುವ ಯುವಕರಿಂದ ಹೆಚ್ಚಿನ ವಿಶ್ವಾಸವನ್ನು ಪಡೆಯಲಾಗುತ್ತದೆ. ಅದಕ್ಕಾಗಿಯೇ ಇಂದು ನಾವು ಅಸ್ಸಾಂ ಅಪಾರ ಸಾಧ್ಯತೆಗಳ ಈ ಹಾದಿಯಲ್ಲಿ ಮೇಲೇರುತ್ತಿರುವುದನ್ನು ನೋಡುತ್ತೇವೆ.

 

ಭಾರತದ ಬಗ್ಗೆ ವಿಶ್ವದ ಗ್ರಹಿಕೆ ಇಂದು ಬದಲಾಗಿದೆ, ಭಾರತದ ಪಾತ್ರವೂ ಬದಲಾಗಿದೆ. ಭಾರತವು ಈಗ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಇದು ಕೇವಲ 11 ವರ್ಷಗಳಲ್ಲಿ ಹೇಗೆ ಸಂಭವಿಸಿತು?

ಸ್ನೇಹಿತರೆ,

ಆಧುನಿಕ ಮೂಲಸೌಕರ್ಯದ ಅಭಿವೃದ್ಧಿ ಇದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತ 2047ಕ್ಕೆ ತಯಾರಿ ನಡೆಸುತ್ತಿದೆ, ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು, ನಾವು ಮೂಲಸೌಕರ್ಯದ ಮೇಲೆ ಗಮನ ಕೇಂದ್ರೀಕರಿಸುತ್ತಿದ್ದೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ, ದೇಶದ ಪ್ರತಿಯೊಂದು ರಾಜ್ಯ ಮತ್ತು ಪ್ರತಿಯೊಂದು ಪ್ರದೇಶವು ಅಭಿವೃದ್ಧಿಯ ಈ ಮಹಾನ್ ಅಭಿಯಾನದಲ್ಲಿ ಭಾಗವಹಿಸುತ್ತಿದೆ. ನಾವು ಸವಲತ್ತುರಹಿತರಿಗೆ ಆದ್ಯತೆ ನೀಡುತ್ತಿದ್ದೇವೆ, ನಮ್ಮ ಸರ್ಕಾರ ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಇದರಿಂದ ದೇಶದ ಪ್ರತಿಯೊಂದು ರಾಜ್ಯವು ಒಟ್ಟಾಗಿ ಪ್ರಗತಿ ಸಾಧಿಸುತ್ತದೆ, ಅಭಿವೃದ್ಧಿ ಹೊಂದಿದ ಭಾರತದ ಧ್ಯೇಯಕ್ಕೆ ಕೊಡುಗೆ ನೀಡುತ್ತದೆ. ಇಂದು ಅಸ್ಸಾಂ ಮತ್ತು ಈಶಾನ್ಯವು ನಮ್ಮ ಈ ಧ್ಯೇಯವನ್ನು ಮುನ್ನಡೆಸುತ್ತಿರುವುದು ನನಗೆ ಸಂತೋಷ ತಂದಿದೆ. ನಾವು ಆಕ್ಟ್ ಈಸ್ಟ್ ನೀತಿಯ ಮೂಲಕ ಈಶಾನ್ಯಕ್ಕೆ ಆದ್ಯತೆ ನೀಡಿದ್ದೇವೆ. ಇಂದು, ಅಸ್ಸಾಂ ಭಾರತದ ಪೂರ್ವ ದ್ವಾರವಾಗಿ ಹೊರಹೊಮ್ಮುವುದನ್ನು ನಾವು ನೋಡುತ್ತೇವೆ. ಭಾರತವನ್ನು ಆಸಿಯಾನ್ ದೇಶಗಳೊಂದಿಗೆ ಸಂಪರ್ಕಿಸಲು ಅಸ್ಸಾಂ ಸಂಪರ್ಕಸೇತುವಾಗಿ ಪಾತ್ರ ವಹಿಸುತ್ತಿದೆ. ಈ ಆರಂಭವು ಬಹು ದೂರ ಸಾಗುತ್ತದೆ. ಅಸ್ಸಾಂ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಎಂಜಿನ್ ಆಗಲಿದೆ.

ಸ್ನೇಹಿತರೆ,

ಇಂದು ಅಸ್ಸಾಂ ಮತ್ತು ಇಡೀ ಈಶಾನ್ಯವು ಭಾರತದ ಅಭಿವೃದ್ಧಿಗೆ ಹೊಸ ದ್ವಾರವಾಗುತ್ತಿದೆ. ಬಹು-ಮಾದರಿ ಸಂಪರ್ಕದ ಬದ್ಧತೆಯು ಈ ಪ್ರದೇಶದ ದಿಕ್ಕು ಮತ್ತು ಸ್ಥಿತಿಯನ್ನು ಪರಿವರ್ತಿಸಿದೆ. ಅಸ್ಸಾಂನಲ್ಲಿ ಹೊಸ ಸೇತುವೆಗಳನ್ನು ನಿರ್ಮಿಸುವ ವೇಗ, ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ವೇಗ ಮತ್ತು ಪ್ರತಿ ಅಭಿವೃದ್ಧಿ ಯೋಜನೆಯ ಆವೇಗವು ಕನಸುಗಳನ್ನು ವಾಸ್ತವಕ್ಕೆ ತಿರುಗಿಸುತ್ತಿದೆ. ಬ್ರಹ್ಮಪುತ್ರ ನದಿಯ ಮೇಲೆ ನಿರ್ಮಿಸಲಾದ ಸೇತುವೆಗಳು ಅಸ್ಸಾಂನ ಸಂಪರ್ಕಕ್ಕೆ ಹೊಸ ಶಕ್ತಿ ಮತ್ತು ಹೊಸ ವಿಶ್ವಾಸ ನೀಡಿವೆ. ಸ್ವಾತಂತ್ರ್ಯದ ನಂತರ 6-7 ದಶಕಗಳಲ್ಲಿ, ಇಲ್ಲಿ ಕೇವಲ 3 ಪ್ರಮುಖ ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ ಕಳೆದ ದಶಕದಲ್ಲಿ 4 ಹೊಸ ಬೃಹತ್ ಸೇತುವೆಗಳು ಪೂರ್ಣಗೊಂಡಿವೆ, ಹಲವಾರು ಇತರೆ ಐತಿಹಾಸಿಕ ಯೋಜನೆಗಳು ರೂಪುಗೊಳ್ಳುತ್ತಿವೆ. ಬೋಗಿಬೀಲ್ ಮತ್ತು ಧೋಲಾ-ಸಾದಿಯಾ ಸೇತುವೆಗಳಂತಹ ಅತಿ ಉದ್ದದ ಸೇತುವೆಗಳು ಅಸ್ಸಾಂ ಅನ್ನು ಕಾರ್ಯತಂತ್ರ ಸ್ಥಳವಾಗಿ ಇನ್ನಷ್ಟು ಬಲಪಡಿಸಿವೆ. ರೈಲ್ವೆ ಸಂಪರ್ಕವು ಕ್ರಾಂತಿಕಾರಿ ಪರಿವರ್ತನೆಗೆ ಒಳಗಾಗಿದೆ. ಬೋಗಿಬೀಲ್ ಸೇತುವೆಯ ಉದ್ಘಾಟನೆಯು ಅಪ್ಪರ್ ಅಸ್ಸಾಂ ಮತ್ತು ದೇಶದ ಉಳಿದ ಭಾಗಗಳ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಗುವಾಹತಿಯಿಂದ ನ್ಯೂ ಜಲ್ಪೈಗುರಿಗೆ ಚಲಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣದ ಸಮಯವನ್ನು ಮತ್ತಷ್ಟು ಕಡಿಮೆ ಮಾಡಿದೆ. ದೇಶದಲ್ಲಿ ಜಲಮಾರ್ಗಗಳ ಅಭಿವೃದ್ಧಿಯ ಪ್ರಯೋಜನವನ್ನು ಅಸ್ಸಾಂ ಪಡೆಯುತ್ತಿದೆ. ಸರಕು ಸಾಗಣೆಯು ಶೇ.140ರಷ್ಟು ಹೆಚ್ಚಾಗಿದೆ, ಬ್ರಹ್ಮಪುತ್ರ ಕೇವಲ ನದಿಯಲ್ಲ, ಆರ್ಥಿಕ ಶಕ್ತಿಯ ಹರಿವು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪಾಂಡುವಿನಲ್ಲಿ ಮೊದಲ ಹಡಗು ದುರಸ್ತಿ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಈಶಾನ್ಯವನ್ನು ಜಾಗತಿಕ ಕ್ರೂಸ್ ಪ್ರವಾಸೋದ್ಯಮ ನಕ್ಷೆಯಲ್ಲಿ ಇರಿಸಿದ್ದು, ವಾರಾಣಸಿಯಿಂದ ದಿಬ್ರುಗಢಕ್ಕೆ ಗಂಗಾ ವಿಕಾಸ್ ಕ್ರೂಸ್ ನಿರ್ಮಾಣದ ಬಗ್ಗೆಯೂ ಉತ್ಸಾಹವಿದೆ.

 

ಸ್ನೇಹಿತರೆ,

ಕಾಂಗ್ರೆಸ್ ಸರ್ಕಾರಗಳು ಅಸ್ಸಾಂ ಮತ್ತು ಈಶಾನ್ಯವನ್ನು ಅಭಿವೃದ್ಧಿಯಿಂದ ದೂರವಿಟ್ಟ ಪಾಪದಿಂದಾಗಿ ದೇಶದ ಭದ್ರತೆ, ಏಕತೆ ಮತ್ತು ಸಮಗ್ರತೆಯಲ್ಲಿ ಭಾರಿ ನಷ್ಟ ಅನುಭವಿಸಬೇಕಾಯಿತು. ಕಾಂಗ್ರೆಸ್ ಆಳ್ವಿಕೆಯಲ್ಲಿ ದಶಕಗಳ ಕಾಲ ಹಿಂಸಾಚಾರವು ಪ್ರವರ್ಧಮಾನಕ್ಕೆ ಬಂದಿದ್ದರೂ, ನಾವು ಈಗ ಕೇವಲ 10-11 ವರ್ಷಗಳಲ್ಲಿ ಅದನ್ನು ಕೊನೆಗೊಳಿಸುವತ್ತ ಸಾಗುತ್ತಿದ್ದೇವೆ. ಒಂದು ಕಾಲದಲ್ಲಿ ಹಿಂಸಾಚಾರ ಮತ್ತು ರಕ್ತಪಾತ ಸಾಮಾನ್ಯವಾಗಿದ್ದ ಈಶಾನ್ಯದಲ್ಲಿ, ಡಿಜಿಟಲ್ ಸಂಪರ್ಕವು ಈಗ 4ಜಿ ಮತ್ತು 5ಜಿ ತಂತ್ರಜ್ಞಾನದೊಂದಿಗೆ ಅತ್ಯಂತ ದೂರದ ಪ್ರದೇಶಗಳನ್ನು ಸಹ ತಲುಪುತ್ತಿದೆ. ಒಂದು ಕಾಲದಲ್ಲಿ ಹಿಂಸಾಚಾರಕ್ಕೆ ಗುರಿಯಾಗಿದ್ದ ಜಿಲ್ಲೆಗಳು ಇಂದು ಮಹತ್ವಾಕಾಂಕ್ಷೆಯ ಜಿಲ್ಲೆಗಳಾಗಿ ಅಭಿವೃದ್ಧಿ ಹೊಂದುತ್ತಿವೆ. ಮುಂಬರುವ ವರ್ಷಗಳಲ್ಲಿ, ಈ ಪ್ರದೇಶಗಳು ಕೈಗಾರಿಕಾ ಕಾರಿಡಾರ್‌ಗಳಾಗುತ್ತವೆ. ಅದಕ್ಕಾಗಿಯೇ ಈಶಾನ್ಯದ ಬಗ್ಗೆ ಹೊಸ ವಿಶ್ವಾಸ ಮೂಡಿದೆ. ನಾವು ಇದನ್ನು ಮತ್ತಷ್ಟು ಬಲಪಡಿಸಬೇಕು.

ಸ್ನೇಹಿತರೆ,

ನಾವು ಅಸ್ಸಾಂ ಮತ್ತು ಈಶಾನ್ಯದ ಅಭಿವೃದ್ಧಿಯಲ್ಲಿ ಯಶಸ್ಸನ್ನು ಪಡೆಯುತ್ತಿದ್ದೇವೆ, ಏಕೆಂದರೆ ನಾವು ಈ ಪ್ರದೇಶದ ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸುತ್ತಿದ್ದೇವೆ. ಕಾಂಗ್ರೆಸ್ ಮತ್ತೊಂದು ಪಾಪ ಮಾಡಿತ್ತು, ಅದು ಈ ಸ್ಥಳದ ಗುರುತು ಅಳಿಸಲು ಪಿತೂರಿ ಮಾಡಿತ್ತು. ಈ ಪಿತೂರಿ ಕೇವಲ ಕೆಲವು ವರ್ಷಗಳ ವಿಷಯವಲ್ಲ! ಕಾಂಗ್ರೆಸ್‌ನ ಈ ಪಾಪದ ಬೇರುಗಳು ಸ್ವಾತಂತ್ರ್ಯಕ್ಕೂ ಮುಂಚೆಯೇ ಸಂಬಂಧ ಹೊಂದಿವೆ. ಆ ಸಮಯದಲ್ಲಿ, ಮುಸ್ಲಿಂ ಲೀಗ್ ಮತ್ತು ಬ್ರಿಟಿಷ್ ಸರ್ಕಾರ ಒಟ್ಟಾಗಿ ಭಾರತದ ವಿಭಜನೆಗೆ ವೇದಿಕೆ ಸಿದ್ಧಪಡಿಸಲು ಕೆಲಸ ಮಾಡುತ್ತಿದ್ದಾಗ, ಅಸ್ಸಾಂ ಅನ್ನು ಅವಿಭಜಿತ ಬಂಗಾಳದ ಭಾಗವಾಗಿ, ಅಂದರೆ ಪೂರ್ವ ಪಾಕಿಸ್ತಾನದ ಭಾಗವಾಗಿ ಮಾಡುವ ಯೋಜನೆ ಇತ್ತು. ಕಾಂಗ್ರೆಸ್ ಪಕ್ಷವು ಆ ಪಿತೂರಿಯ ಭಾಗವಾಗಲು ಸಿದ್ಧವಾಗಿತ್ತು. ಆಗ ಬೋರ್ಡೊಲೋಯ್ ಜಿ ತಮ್ಮದೇ ಪಕ್ಷದ ವಿರುದ್ಧ ಎದ್ದು ನಿಂತರು. ಅಸ್ಸಾಂನ ಗುರುತು ನಾಶ ಮಾಡುವ ಈ ಪಿತೂರಿಯನ್ನು ಅವರು ವಿರೋಧಿಸಿದರು, ಅಸ್ಸಾಂ ಅನ್ನು ದೇಶದಿಂದ ಬೇರ್ಪಡಿಸದಂತೆ ಉಳಿಸಿದರು. ಬಿಜೆಪಿ ಪಕ್ಷವು ಯಾವಾಗಲೂ ಪಕ್ಷಗಳನ್ನು ಮೀರಿ ನಿಲ್ಲುತ್ತದೆ, ಪ್ರತಿಯೊಬ್ಬ ದೇಶಭಕ್ತನನ್ನು ಗೌರವಿಸುತ್ತದೆ. ಅಟಲ್ ಜಿ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ, ಅವರಿಗೆ ಭಾರತ ರತ್ನ ನೀಡಲಾಯಿತು.

ಸಹೋದರ ಸಹೋದರಿಯರೆ,

ಬೋರ್ಡೊಲೋಯ್ ಜಿ ಸ್ವಾತಂತ್ರ್ಯದ ಮೊದಲು ಅಸ್ಸಾಂ ಅನ್ನು ಉಳಿಸಿದ್ದರು, ಆದರೆ ಅವರ ನಂತರ, ಕಾಂಗ್ರೆಸ್ ಮತ್ತೆ ಅಸ್ಸಾಂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ಪ್ರಾರಂಭಿಸಿತು. ಕಾಂಗ್ರೆಸ್ ತನ್ನ ಮತ ಬ್ಯಾಂಕ್ ಹೆಚ್ಚಿಸಲು ಧಾರ್ಮಿಕ ಸಂತೃಪ್ತ ಪಿತೂರಿಗಳನ್ನು ರೂಪಿಸಿದೆ. ಬಂಗಾಳ ಮತ್ತು ಅಸ್ಸಾಂನಲ್ಲಿ, ತಮ್ಮ ಮತ ಬ್ಯಾಂಕ್ ಆಗಿರುವ ಒಳನುಸುಳುಕೋರರಿಗೆ ಮುಕ್ತ ಹಸ್ತ ನೀಡಲಾಗಿದೆ. ಈ ಪ್ರದೇಶದ ಜನಸಂಖ್ಯೆಯನ್ನು ಬದಲಾಯಿಸಲಾಗಿದೆ. ಈ ಒಳನುಸುಳುಕೋರರು ನಮ್ಮ ಕಾಡುಗಳನ್ನು ಅತಿಕ್ರಮಿಸಿ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಪರಿಣಾಮವಾಗಿ, ಇಡೀ ಅಸ್ಸಾಂ ರಾಜ್ಯದ ಭದ್ರತೆ ಮತ್ತು ಗುರುತು ಅಪಾಯದಲ್ಲಿದೆ.

 

ಸ್ನೇಹಿತರೆ,

ಇಂದು ಹಿಮಂತ ಜಿ ಅವರ ಸರ್ಕಾರ ಮತ್ತು ಅವರ ಎಲ್ಲಾ ತಂಡದ ಸದಸ್ಯರು ಈ ಅಕ್ರಮ ಮತ್ತು ರಾಷ್ಟ್ರವಿರೋಧಿ ಅತಿಕ್ರಮಣದಿಂದ ಅಸ್ಸಾಂನ ಸಂಪನ್ಮೂಲಗಳನ್ನು ಮುಕ್ತಗೊಳಿಸಲು ಬಹಳ ಶ್ರಮಿಸುತ್ತಿದ್ದಾರೆ. ಅಸ್ಸಾಂನ ಸಂಪನ್ಮೂಲಗಳು ಅಸ್ಸಾಂನ ಜನರಿಗೆ ಉಪಯುಕ್ತವಾಗುವಂತೆ ಖಚಿತಪಡಿಸಲು ಪ್ರತಿಯೊಂದು ಹಂತದಲ್ಲೂ ಕೆಲಸ ಮಾಡಲಾಗುತ್ತಿದೆ. ಒಳನುಸುಳುವಿಕೆ ತಡೆಯಲು ಕೇಂದ್ರ ಸರ್ಕಾರವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಅಕ್ರಮ ಒಳನುಸುಳುಕೋರರನ್ನು ಹೊರಹಾಕಲು ಅವರನ್ನು ಗುರುತಿಸಲಾಗುತ್ತಿದೆ.

ಸಹೋದರ ಸಹೋದರಿಯರೆ,

ಕಾಂಗ್ರೆಸ್ ಪಕ್ಷ ಮತ್ತು ಐಎನ್ ಡಿಐ ಮೈತ್ರಿಕೂಟದ ನಾಯಕರು ಬಹಿರಂಗವಾಗಿ ರಾಷ್ಟ್ರವಿರೋಧಿ ಕಾರ್ಯಸೂಚಿಗಳೊಂದಿಗೆ ಹೊರಬಂದಿದ್ದಾರೆ. ದೇಶದ ಸುಪ್ರೀಂ ಕೋರ್ಟ್ ಕೂಡ ಅಕ್ರಮ ವಲಸಿಗರನ್ನು ಹೊರಹಾಕುವ ಬಗ್ಗೆ ಮಾತನಾಡಿದೆ. ಆದರೆ ಈ ಜನರು ಈ ನುಸುಳುಕೋರರ ಪರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರ ವಕೀಲರು ನ್ಯಾಯಾಲಯದಲ್ಲಿ ನುಸುಳುಕೋರರ ಇತ್ಯರ್ಥಕ್ಕಾಗಿ ವಾದಿಸುತ್ತಿದ್ದಾರೆ. ಚುನಾವಣಾ ಆಯೋಗವು ನ್ಯಾಯಯುತ ಚುನಾವಣೆಗಳಿಗಾಗಿ ಎಸ್ಐಆರ್ ಪ್ರಕ್ರಿಯೆಯನ್ನು ನಡೆಸುತ್ತಿರುವಾಗ, ಈ ಜನರು ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಅಶಾಂತಿಯನ್ನು ಅನುಭವಿಸುತ್ತಿದ್ದಾರೆ. ಅಂತಹ ಜನರು ನಮ್ಮ ಅಸ್ಸಾಮಿ ಸಹೋದರ ಸಹೋದರಿಯರ ಹಿತಾಸಕ್ತಿಗಳನ್ನು ರಕ್ಷಿಸುವುದಿಲ್ಲ. ಈ ಜನರು ನಿಮ್ಮ ಭೂಮಿ ಮತ್ತು ಕಾಡುಗಳನ್ನು ಬೇರೆಯವರು ಆಕ್ರಮಿಸಿಕೊಳ್ಳಲು ಬಿಡುತ್ತಾರೆ, ಅವರ ರಾಷ್ಟ್ರವಿರೋಧಿ ಮನಸ್ಥಿತಿಯು ಹಳೆಯ ಕಾಲದಂತೆ ಹಿಂಸಾಚಾರ ಮತ್ತು ಅಶಾಂತಿಯನ್ನು ಸೃಷ್ಟಿಸಬಹುದು. ಆದ್ದರಿಂದ, ಅಸ್ಸಾಂನ ನನ್ನ ಸಹೋದರ ಸಹೋದರಿಯರೆ, ನಾವು ಬಹಳ ಜಾಗರೂಕರಾಗಿರಬೇಕು. ಬೋರ್ಡೊಲೊಯ್ ಜಿ ಅವರಂತಹ ಜನರು ತಮ್ಮ ಜೀವನದುದ್ದಕ್ಕೂ ಎಲ್ಲವನ್ನೂ ತ್ಯಾಗ ಮಾಡಿದ ಅಸ್ಸಾಂನ ಗುರುತನ್ನು ನಾವು ರಕ್ಷಿಸಬೇಕು. ಅಸ್ಸಾಂನ ಜನರು ಒಗ್ಗಟ್ಟಿನಿಂದ ಇರಬೇಕು. ಅಸ್ಸಾಂನ ಅಭಿವೃದ್ಧಿ ಹಳಿ ತಪ್ಪದಂತೆ ನಾವು ಉಳಿಸಬೇಕು, ಪ್ರತಿ ಕ್ಷಣ, ಪ್ರತಿ ಹೆಜ್ಜೆಯಲ್ಲೂ ಕಾಂಗ್ರೆಸ್‌ನ ಪಿತೂರಿಗಳನ್ನು ನಾವು ವಿಫಲಗೊಳಿಸಬೇಕು.

ಸ್ನೇಹಿತರೆ,

ಇಂದು ಜಗತ್ತು ಭಾರತದತ್ತ ಭರವಸೆಯಿಂದ ನೋಡುತ್ತಿದೆ. ಭಾರತದ ಭವಿಷ್ಯದ ಹೊಸ ಸೂರ್ಯೋದಯವು ಈಶಾನ್ಯದಿಂದ ಆಗಬೇಕು. ಇದಕ್ಕಾಗಿ, ನಮ್ಮ ಕನಸುಗಳನ್ನು ನನಸಾಗಿಸಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ನಾವು ಅಸ್ಸಾಂನ ಅಭಿವೃದ್ಧಿಯನ್ನು ಮುಂಚೂಣಿಯಲ್ಲಿಡಬೇಕು. ನಮ್ಮ ಸಾಮೂಹಿಕ ಪ್ರಯತ್ನಗಳು ಅಸ್ಸಾಂ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ ಎಂಬ ವಿಶ್ವಾಸ ನನಗಿದೆ. ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸುತ್ತೇವೆ. ಅಭಿವೃದ್ಧಿ ಹೊಂದಿದ ಭಾರತದ ಹಾದಿಯು ಅಭಿವೃದ್ಧಿ ಹೊಂದಿದ ಅಸ್ಸಾಂ ಮೂಲಕ ಸುಗಮವಾಗುತ್ತದೆ. ಈ ಭರವಸೆಯೊಂದಿಗೆ, ಹೊಸ ಟರ್ಮಿನಲ್‌ ಸ್ಥಾಪನೆಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ನನ್ನೊಂದಿಗೆ ಹೇಳಿ-

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

ವಂದೇ ಮಾತರಂ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Railways clears ₹755-crore project to build third line between Champa and Korba

Media Coverage

Indian Railways clears ₹755-crore project to build third line between Champa and Korba
NM on the go

Nm on the go

Always be the first to hear from the PM. Get the App Now!
...
Prime Minister hails India-UK Comprehensive Economic and Trade Agreement as a historic milestone for bilateral relations
June 17, 2026

The Prime Minister, Shri Narendra Modi, has expressed delight that the India-UK Comprehensive Economic and Trade Agreement will enter into force on 15 July 2026.

The Prime Minister said that the agreement will significantly boost bilateral trade and investment.

Shri Modi stated that the agreement will unlock numerous opportunities for Indian farmers, workers, MSMEs, startups and innovators and contribute meaningfully to the realisation of Viksit Bharat 2047.

The Prime Minister noted that both he and UK Prime Minister Keir Starmer, who are in Evian for the G7 Summit, are very happy with the significant momentum being added to India-UK economic ties.

The Prime Minister wrote on X;

“A historic milestone for India-UK relations.

Delighted to note that the India-UK Comprehensive Economic and Trade Agreement will enter into force on 15th July 2026.

This agreement will significantly boost our bilateral trade and investment.

It will also unlock numerous opportunities for Indian farmers, workers, MSMEs, startups and innovators and contribute meaningfully to the realisation of Viksit Bharat 2047.

Both PM Starmer and I, who are in Evian for the G7 Summit, are naturally very happy with the significant momentum being added to our economic ties.

@Keir_Starmer”