Remembers immense contribution of the ‘Utkal Keshari’
Pays tribute to Odisha’s Contribution to the freedom struggle
History evolved with people, foreign thought process turned the stories of dynasties and palaces into history: PM
History of Odisha represents the historical strength of entire India: PM

ಜೈ ಜಗನ್ನಾಥ್!

ಈ ಸಮಾರಂಭದಲ್ಲಿ ನನ್ನೊಂದಿಗೆ ಹಾಜರಿರುವ ಭರ್ತ್ರುಹರಿ ಮಹತಾಬ್ ಜಿ, ಅವರು ಕೇವಲ ಲೋಕಸಭೆಯಲ್ಲಿ ಸದಸ್ಯರಲ್ಲ, ಉತ್ತಮ ಸಂಸದರು ತಮ್ಮ ಕರ್ತವ್ಯಗಳನ್ನು ಹೇಗೆ ನಿರ್ವಹಿಸಬಲ್ಲರು ಎನ್ನುವುದಕ್ಕೆ ಜೀವಂತ ಉದಾಹರಣೆ ಅವರು, ಧರ್ಮೇಂದ್ರ ಪ್ರಧಾನ್ ಜಿ, ಇತರ ಹಿರಿಯ ಗಣ್ಯರು, ಮಹಿಳೆಯರೆ ಮತ್ತು ಮಹನೀಯರೆ!  ‘ಉತ್ಕಲ್ ಕೇಶರಿ’ಹರೇಕೃಷ್ಣಾ ಮಹತಾಬ್ ಜಿ ಅವರೊಂದಿಗೆ ಸಂಬಂಧಿಸಿದ ಈ ಕಾರ್ಯಕ್ರಮಕ್ಕೆ ಹಾಜರಾಗಲು   ಅವಕಾಶ ಸಿಕ್ಕಿದ್ದು ನನಗೆ ಬಹಳ ಸಂತೋಷದ ಸಂಗತಿಯಾಗಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ನಾವೆಲ್ಲರೂ ‘ಉತ್ಕಲ್ ಕೇಸರಿ’ ಹರೇಕೃಷ್ಣಾ   ಮಹತಾಬ್ ಜಿ ಅವರ 120 ನೇ ಜನ್ಮ ದಿನಾಚರಣೆಯನ್ನು ಬಹಳ ಸ್ಪೂರ್ತಿದಾಯಕ ಸಂದರ್ಭವಾಗಿ ಆಚರಿಸಿದ್ದೇವೆ. ಇಂದು ನಾವು ಅವರ ಪ್ರಸಿದ್ಧ ಪುಸ್ತಕ ‘ಒಡಿಶಾ ಇತಿಹಾಸ್’(ಇತಿಹಾಸ) ನ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಒಡಿಶಾದ ವಿಶಾಲ ಮತ್ತು ವೈವಿಧ್ಯಮಯ ಇತಿಹಾಸವು ದೇಶದ ಜನರನ್ನು ತಲುಪುವುದು ಬಹಳ ಮುಖ್ಯ.  ಒಡಿಯಾ ಮತ್ತು ಇಂಗ್ಲಿಷ್ ನಂತರ ಹಿಂದಿ ಆವೃತ್ತಿಯ ಮೂಲಕ ನೀವು ಇದರ ಅಗತ್ಯವನ್ನು ಪೂರೈಸಿದ್ದೀರಿ.  ಈ ನವೀನ ಪ್ರಯತ್ನಕ್ಕಾಗಿ ಭಾಯಿ ಭರ್ತ್ರುಹರಿ ಮಹತಾಬ್ ಜಿ, ಹರೇಕೃಷ್ಣಾ ಮಹತಾಬ್ ಫೌಂಡೇಶನ್ ಮತ್ತು ವಿಶೇಷವಾಗಿ ಶಂಕರ್ ಲಾಲ್ ಪುರೋಹಿತ್ ಜಿ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ಸ್ನೇಹಿತರೇ,

ಈ ಪುಸ್ತಕವನ್ನು ಬಿಡುಗಡೆ ಮಾಡಲು ಕೇಳುವಾಗ ಭರ್ತ್ರುಹರಿಜಿ ಅವರು ನನಗೆ ಒಂದು ಪ್ರತಿಯನ್ನು ಸಹ ನೀಡಿದ್ದರು. ನಾನು ಅದನ್ನು ಸಂಪೂರ್ಣವಾಗಿ ಓದಲು ಸಾಧ್ಯವಾಗಲಿಲ್ಲ, ಆದರೆ ನಾನು ಅಲ್ಲಲ್ಲಿ  ಓದಿರುವೆ. ಅದರ ಹಿಂದಿ ಪ್ರಕಟಣೆಯು ಅನೇಕ ಸಂತೋಷದ ಸಂದರ್ಭಗಳೊಂದಿಗೆ ಸಂಬಂಧಿಸಿದೆ ಎಂದು ನನ್ನ ಮನಸ್ಸಿಗೆ ಬಂದಿತು.  ಅಮೃತ ಮಹೋತ್ಸವವನ್ನು ದೇಶವು ಆಚರಿಸುತ್ತಿರುವ ವರ್ಷದಲ್ಲಿ ಈ ಪುಸ್ತಕವನ್ನು ಪ್ರಕಟಿಸಲಾಗಿದೆ. ಹರೇಕೃಷ್ಣಾ ಮಹತಾಬ್ ಜಿ ಕಾಲೇಜು ಬಿಟ್ಟು ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿ ನೂರು ವರ್ಷ.  ಈ ವರ್ಷ 100 ನೇ ವರ್ಷವಾಗಿದ್ದು ದೇಶ ಅದನ್ನೂ ಆಚರಿಸುತ್ತದೆ. ಗಾಂಧಿಜಿ ಉಪ್ಪು ಸತ್ಯಾಗ್ರಹಕ್ಕಾಗಿ ದಾಂಡಿ ಮಾರ್ಚ್ ಪ್ರಾರಂಭಿಸಿದಾಗ, ಹರೇಕೃಷ್ಣಾಜಿ ಒಡಿಶಾದಲ್ಲಿ ಈ ಚಳವಳಿಯನ್ನು ಮುನ್ನಡೆಸಿದರು. 'ಒಡಿಶಾ ಇತಿಹಾಸ್' ಪ್ರಕಟಣೆಯು 2023 ರಲ್ಲಿ ತನ್ನ 75 ವರ್ಷಗಳನ್ನು ಪೂರೈಸುತ್ತಿದೆ ಎನ್ನುವುದು ಕೂಡ ಕಾಕತಾಳೀಯವಾಗಿದೆ. ದೇಶಕ್ಕೆ ಸೇವೆಯ ಅಗತ್ಯವಿದ್ದಾಗ ಅಥವಾ ಒಂದು ಕಲ್ಪನೆಯ ಹೃದಯಭಾಗದಲ್ಲಿ ಸಾಮಾಜಿಕ ಸೇವೆ ಇದ್ದಾಗ ಇಂತಹ ಕಾಕತಾಳೀಯಗಳು ಮುಂದುವರಿಯುತ್ತಲೇ ಇರುತ್ತವೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ಈ ಪುಸ್ತಕದ ಮುನ್ನುಡಿಯಲ್ಲಿ, ಭರ್ತುಹರಿ ಜಿ ಅವರು "ಡಾ. ಹರೇಕೃಷ್ಣಾ ಮಹತಾಬ್ ಜಿ ಅವರು ಇತಿಹಾಸ ನಿರ್ಮಿಸಿದ ವ್ಯಕ್ತಿ, ಅದನ್ನು ರಚಿಸುವುದನ್ನು ನೋಡಿದ್ದಾರೆ ಮತ್ತು ಅದನ್ನು ಬರೆದಿದ್ದಾರೆ" ಎಂದು ಬರೆದಿದ್ದಾರೆ. ವಾಸ್ತವವಾಗಿ, ಅಂತಹ ಐತಿಹಾಸಿಕ ವ್ಯಕ್ತಿಗಳು ಬಹಳ ವಿರಳ. ಅಂತಹ ಮಹಾನ್ ಪುರುಷರು ಸ್ವತಃ ಇತಿಹಾಸದ ಪ್ರಮುಖ ಅಧ್ಯಾಯಗಳಾಗಿರುತ್ತಾರೆ. ಮಹತಾಬ್ ಜಿ ತಮ್ಮ ಜೀವನವನ್ನು ಮತ್ತು ತಮ್ಮ ಯೌವನ ಕಾಲವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅರ್ಪಿಸಿದರು. ಅವರು ತಮ್ಮ ಜೀವನವನ್ನು ಜೈಲಿನಲ್ಲಿ ಕಳೆದರು. ಆದರೆ ಮುಖ್ಯವಾದ ಸಂಗತಿಯೆಂದರೆ ಸ್ವಾತಂತ್ರ್ಯ ಹೋರಾಟದ ಜೊತೆಗೆ ಅವರು ಸಮಾಜಕ್ಕಾಗಿಯೂ ಹೋರಾಡಿದರು!  ಜಾತಿವಾದ ಮತ್ತು ಅಸ್ಪೃಶ್ಯತೆಯ ವಿರುದ್ಧದ ಆಂದೋಲನದಲ್ಲಿ, ಅವರು ತಮ್ಮ ಪೂರ್ವಜರ ದೇವಾಲಯವನ್ನು ಎಲ್ಲಾ ಜಾತಿಯವರಿಗೆ ತೆರೆದರು. ಆ ಸಮಯದಲ್ಲಿ ಒಬ್ಬರ ಸ್ವಂತ ನಡವಳಿಕೆಯಿಂದ ಯಾರಾದರೂ ಅಂತಹ ಉದಾಹರಣೆಯನ್ನು ತೋರಬಹುದು ಎಂಬ ಶಕ್ತಿಯನ್ನು ನಾವು ಊಹಿಸಲೂ ಸಾಧ್ಯವಿಲ್ಲ.  ಆ ಯುಗದಲ್ಲಿ ಇದು ಬಹಳ ಧೈರ್ಯಶಾಲಿ ನಿರ್ಧಾರವಾಗಿತ್ತು.  ಅವರು ಆ ನಿರ್ಧಾರವನ್ನು ತೆಗೆದುಕೊಂಡಾಗ ಕುಟುಂಬದಲ್ಲಿ ಯಾವ ರೀತಿಯ ವಾತಾವರಣ ಇದ್ದೀತು?  ಸ್ವಾತಂತ್ರ್ಯದ ನಂತರ, ಒಡಿಶಾದ ಮುಖ್ಯಮಂತ್ರಿಯಾಗಿ ಅವರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡರು, ಒಡಿಶಾದ ಭವಿಷ್ಯವನ್ನು ರೂಪಿಸಲು ಹಲವಾರು ಪ್ರಯತ್ನಗಳನ್ನು ಮಾಡಿದರು. ನಗರಗಳು, ಬಂದರುಗಳು, ಉಕ್ಕಿನ ಕಾರ್ಖಾನೆಗಳು ಇತ್ಯಾದಿಗಳನ್ನು ಆಧುನೀಕರಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಸ್ನೇಹಿತರೇ,

ಅಧಿಕಾರದಲ್ಲಿದ್ದರೂ, ಅವರು ಯಾವಾಗಲೂ ತಮ್ಮನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಗಣಿಸುತ್ತಿದ್ದರು ಮತ್ತು ತಮ್ಮ ಜೀವನದುದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರಾಗಿಯೇ ಉಳಿದಿದ್ದರು. ಅವರು ಮುಖ್ಯಮಂತ್ರಿಯಾದ ಅದೇ ಪಕ್ಷವನ್ನು ವಿರೋಧಿಸಿ ತುರ್ತು ಪರಿಸ್ಥಿತಿಯಲ್ಲಿ ಅವರು ಜೈಲಿಗೆ ಹೋದರು ಎನ್ನುವುದು ಇಂದಿನ ಜನ ಪ್ರತಿನಿಧಿಗಳಿಗೆ ಆಶ್ಚರ್ಯವಾಗಬಹುದು. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಮತ್ತು ದೇಶದ ಪ್ರಜಾಪ್ರಭುತ್ವವನ್ನು ಉಳಿಸಲು ಜೈಲಿಗೆ ಹೋದ ಅಪರೂಪದ ನಾಯಕರಾಗಿದ್ದರು. ತುರ್ತು ಪರಿಸ್ಥಿತಿ ಮುಗಿದ ನಂತರ ನಾನು ಅವರನ್ನು ಒಡಿಶಾದಲ್ಲಿ ಭೇಟಿಯಾಗಲು ಹೋಗಿದ್ದು ನನ್ನ ಪುಣ್ಯ.  ನನಗೆ ಯಾವುದೇ ಗುರುತು ಪರಿಚಯ ಇರಲಿಲ್ಲ. ಆದರೆ ಅವರು ನನಗೆ ಸಮಯವನ್ನು ನೀಡಿದರು ಮತ್ತು ಇದು ಊಟಕ್ಕೂ ಮೊದಲಿನ ಸಮಯ ಎಂದು ನನಗೆ ಸ್ಪಷ್ಟವಾಗಿ ನೆನಪಿದೆ. ಊಟದ ಸಮಯದ ಹೊತ್ತಿಗೆ ಸಭೆ ಮುಗಿಯುತ್ತದೆ ಎಂದು ಒಬ್ಬರು ಭಾವಿಸಿರುವುದು ಸಹಜ, ಆದರೆ ಇಂದು ನಾನು ನೆನಪಿಸಿಕೊಂಡಾಗ, ಅವರು ಎರಡೂವರೆ ಗಂಟೆಗಳ ಕಾಲ ಊಟ ಮಾಡಲು ಹೋಗದೆ, ದೀರ್ಘಕಾಲದವರೆಗೆ ನನಗೆ ಬಹಳಷ್ಟು ವಿಷಯಗಳನ್ನು ಹೇಳುತ್ತಲೇ ಇದ್ದರು ಎಂದು ನಾನು ಅಂದುಕೊಂಡಿದ್ದೇನೆ. ನಾನು ಯಾರಿಗೋ ಸಂಶೋಧನೆ ನಡೆಸುತ್ತಿದ್ದೆ ಮತ್ತು ಕೆಲವು ವಿಷಯಗಳನ್ನು ಸಂಗ್ರಹಿಸುತ್ತಿದ್ದರಿಂದ ನಾನು ಅವನ ಬಳಿಗೆ ಹೋಗಿದ್ದೆ.  ಇದು ನನ್ನ ಅನುಭವ ಮತ್ತು ಕೆಲವೊಮ್ಮೆ ನಾನು ನೋಡಿದಾಗ ಮತ್ತು ಒಂದು ಪ್ರಮುಖ ಕುಟುಂಬದಲ್ಲಿ ಜನಿಸಿದ ಮಕ್ಕಳು ಮತ್ತು ಅದೂ ವಿಶೇಷವಾಗಿ ರಾಜಕೀಯ ಕುಟುಂಬಗಳಲ್ಲಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.  ಆದರೆ ಭರ್ತುಹರಿ ಜಿ ಅವರನ್ನು ಭೇಟಿಯಾದ ನಂತರ ಆ ರೀತಿ ಎಂದಿಗೂ ಕಾಣುವುದಿಲ್ಲ ಮತ್ತು ಇದಕ್ಕೆ ಕಾರಣವೆಂದರೆ ನಾವು ಭರ್ತುಹರಿಯಂತಹ ಸಹಚರರನ್ನು ಕಂಡುಕೊಳ್ಳುತ್ತೇವೆ ಏಕೆಂದರೆ ಹರೇಕೃಷ್ಣಾಜಿ  ಕುಟುಂಬದಲ್ಲಿನ ಸಭ್ಯತೆ, ಶಿಸ್ತು ಮತ್ತು ನೀತಿಗಳಿಗೆ ಸಮಾನ ಒತ್ತು ನೀಡಿದ್ದಾರೆ.

ಸ್ನೇಹಿತರೇ,

ಮುಖ್ಯಮಂತ್ರಿಯಾಗಿ ಒಡಿಶಾದ ಭವಿಷ್ಯದ ಬಗ್ಗೆ ಚಿಂತೆ ಮಾಡುತ್ತಿರುವಾಗಲೂ ಹರೇಕೃಷ್ಣಾಜಿ  ಅವರು ಒಡಿಶಾದ ಇತಿಹಾಸದತ್ತ ಬಹಳ ಆಕರ್ಷಿತರಾಗಿದ್ದರು ಎಂಬುದು ನಮಗೆ ತಿಳಿದಿದೆ. ಒಡಿಶಾದ ಇತಿಹಾಸವನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಅವರು ಭಾರತೀಯ ಇತಿಹಾಸ ಕಾಂಗ್ರೆಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ಒಡಿಶಾದ ವಸ್ತುಸಂಗ್ರಹಾಲಯಗಳು, ದಾಖಲೆಗಳು, ಪುರಾತತ್ವ ವಿಭಾಗಗಳೇ ಆಗಿರಲಿ, ಮಹತಾಬ್‌ ಜಿಯ ಐತಿಹಾಸಿಕ ದೃಷ್ಟಿ ಮತ್ತು ಅವರ ಕೊಡುಗೆಯಿಂದ ಮಾತ್ರ ಇವೆಲ್ಲವೂ ಸಾಧ್ಯವಾಯಿತು.

ಸ್ನೇಹಿತರೇ,

ಮಹತಾಬ್‌ ಜಿಯವರ ಒಡಿಶಾ ಇತಿಹಾಸವನ್ನು ನೀವು ಓದಿದ್ದರೆ, ಒಡಿಶಾದ ಬಗ್ಗೆ ನಿಮಗೆ ಎಲ್ಲವೂ ತಿಳಿದಿದೆ ಮತ್ತು ನೀವು ಒಡಿಶಾವನ್ನು ಉಸಿರಾಡಿದ್ದೀರಿ ಎಂದು ನಾನು ಅನೇಕ ವಿದ್ವಾಂಸರಿಂದ ಕೇಳಿದ್ದೇನೆ. ಮತ್ತು ಇದು ನಿಜ ಕೂಡಾ. ಇತಿಹಾಸವು ಗತ ಕಾಲದ ವಿಷಯ ಮಾತ್ರವಲ್ಲ, ಭವಿಷ್ಯದ ಕನ್ನಡಿಯೂ ಆಗಿದೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ದೇಶವು ಅಮೃತ ಮಹೋತ್ಸವದಲ್ಲಿ ಸ್ವಾತಂತ್ರ್ಯದ ಇತಿಹಾಸವನ್ನು ಪುನರುಜ್ಜೀವಗೊಳಿಸುತ್ತಿದೆ.  ಇಂದು ನಾವು ಸ್ವಾತಂತ್ರ್ಯ ಹೋರಾಟಗಾರರ ಮತ್ತು ಅವರ ತ್ಯಾಗದ ಕಥೆಗಳನ್ನು ಪುನರುಜ್ಜೀವಗೊಳಿಸುತ್ತಿದ್ದೇವೆ ಇದರಿಂದ ನಮ್ಮ ಯುವಕರು ಅದನ್ನು ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ಅನುಭವಿಸುತ್ತಾರೆ ಮತ್ತು ಹೊಸ ಆತ್ಮವಿಶ್ವಾಸದಿಂದ ಬೆಳೆಯುತ್ತಾರೆ ಮತ್ತು ಏನಾದರೂ ಮಾಡುವ ಗುರಿ ಹಾಗು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಾರೆ. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಹಲವು ಕಥೆಗಳು ದೇಶದ ಮುಂದೆ ನಿಜವಾದ ರೂಪದಲ್ಲಿ ಬರಲು ಸಾಧ್ಯವಾಗಲಿಲ್ಲ. ಭರ್ತ್ರುಹರಿ ಜಿ ಹೇಳುತ್ತಿದ್ದಂತೆಯೇ ಭಾರತದ ಇತಿಹಾಸವು ಅರಮನೆಗಳ ಇತಿಹಾಸವಲ್ಲ. ಭಾರತದ ಇತಿಹಾಸ ಕೇವಲ ರಾಜ್‌ಪತ್‌ನ ಇತಿಹಾಸವಲ್ಲ. ಜನರ ಜೀವನದೊಂದಿಗೆ ಇತಿಹಾಸವನ್ನು ರಚಿಸಲಾಗಿದೆ ಮತ್ತು ಅದಕ್ಕಾಗಿಯೇ ನಾವು ಸಾವಿರಾರು ವರ್ಷಗಳ ಈ ಮಹಾನ್ ಸಂಪ್ರದಾಯದೊಂದಿಗೆ ಬದುಕಿದ್ದಿರಬೇಕು. ರಾಜವಂಶದ ಸುತ್ತಮುತ್ತಲಿನ ಘಟನೆಗಳನ್ನು ಮಾತ್ರ ಇತಿಹಾಸವೆಂದು ಒಪ್ಪಿಕೊಂಡುದು ವಿದೇಶಿ ಚಿಂತನೆ. ನಾವು ಆ   ಜನರಲ್ಲ. ಇಡೀ ರಾಮಾಯಣ ಮತ್ತು ಮಹಾಭಾರತದ ಮೂಲಕ ನೋಡಿ ಮತ್ತು ಅದರಲ್ಲಿ 80 ಪ್ರತಿಶತವು ಸಾಮಾನ್ಯ ಜನರಿಗೆ ಸಂಬಂಧಿಸಿದೆ ಎನ್ನುವುದನ್ನು ನೀವು ಕಾಣಬಹುದು. ಆದ್ದರಿಂದ, ಸಾರ್ವಜನಿಕರು ನಮ್ಮ ಜೀವನದಲ್ಲಿ ಕೇಂದ್ರಬಿಂದುವಾಗಿದ್ದಾರೆ.  ಇಂದು, ನಮ್ಮ ಯುವಕರು ಇತಿಹಾಸದ ಆ ಅಧ್ಯಾಯಗಳನ್ನು ಹೊಸ ಪೀಳಿಗೆಗೆ ಕೊಂಡೊಯ್ಯಲು ಸಂಶೋಧನೆ ನಡೆಸುತ್ತಿದ್ದಾರೆ. ಈ ಪ್ರಯತ್ನಗಳಿಂದ ಅನೇಕ ಸ್ಫೂರ್ತಿಗಳು ಹೊರಹೊಮ್ಮುತ್ತವೆ, ದೇಶದ ವೈವಿಧ್ಯದ ಹಲವು ಬಣ್ಣಗಳನ್ನು ನಾವು ಪರಿಚಯ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸ್ನೇಹಿತರೇ,

ಹರೇಕೃಷ್ಣಾಜಿ ಅವರು ಸ್ವಾತಂತ್ರ್ಯ ಹೋರಾಟದ ಅನೇಕ ಅಧ್ಯಾಯಗಳನ್ನು ನಮಗೆ ಪರಿಚಯಿಸಿದ್ದಾರೆ, ಅದು ಒಡಿಶಾದ ಹೊಸ ತಿಳಿವಳಿಕೆ ಮತ್ತು ಸಂಶೋಧನೆಯ ಆಯಾಮಗಳನ್ನು ತೆರೆದಿಟ್ಟಿದೆ. ಪೈಕಾ ಹೋರಾಟ, ಗಂಜಾಂ ಚಳವಳಿ ಮತ್ತು ಲಾರ್ಜಾ ಕೋಲ್ಹಾ ಚಳುವಳಿಯಿಂದ ಸಂಬಲ್ಪುರ ಯುದ್ಧದವರೆಗೆ ಒಡಿಶಾ ಭೂಮಿ ಯಾವಾಗಲೂ ವಿದೇಶಿ ಆಡಳಿತದ ವಿರುದ್ಧ ಕ್ರಾಂತಿಯ ಜ್ವಾಲೆಗೆ ಹೊಸ ಶಕ್ತಿಯನ್ನು ನೀಡಿತು. ಎಷ್ಟೋ ಹೋರಾಟಗಾರರನ್ನು ಬ್ರಿಟಿಷರು ಜೈಲಿಗೆ ಹಾಕಿದರು, ಹಿಂಸಿಸಿದರು, ಮತ್ತು ಹೋರಾಟಗಾರರು ಅನೇಕ ತ್ಯಾಗಗಳನ್ನು ಮಾಡಿದರು! ಆದರೆ ಸ್ವಾತಂತ್ರ್ಯದ ಉತ್ಸಾಹವು ದುರ್ಬಲಗೊಳ್ಳಲಿಲ್ಲ. ಸಂಬಲ್ಪುರ ಯುದ್ಧದ ಧೈರ್ಯಶಾಲಿ ಕ್ರಾಂತಿಕಾರಿ ಸುರೇಂದ್ರ ಸಾಯಿ ಇನ್ನೂ ನಮಗೆ ದೊಡ್ಡ ಸ್ಫೂರ್ತಿ. ಗಾಂಧಿ ಜಿ ನಾಯಕತ್ವದಲ್ಲಿ ಗುಲಾಮಗಿರಿಯ ವಿರುದ್ಧ ದೇಶವು ತನ್ನ ಕೊನೆಯ ಹೋರಾಟವನ್ನು ಪ್ರಾರಂಭಿಸಿದಾಗ, ಒಡಿಶಾ ಮತ್ತು ಅದರ ಜನರು ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದರು. ಅಸಹಕಾರ ಚಳುವಳಿ, ಕಾನೂನು ಅಸಹಕಾರ ಮತ್ತು ಉಪ್ಪು ಸತ್ಯಾಗ್ರಹದಂತಹ ಚಳವಳಿಗಳಲ್ಲಿ ಪಂಡಿತ್ ಗೋಪಬಂಧು, ಆಚಾರ್ಯ ಹರಿಹಾರ್ ಮತ್ತು ಹರೇಕೃಷ್ಣಾ  ಮಹತಾಬ್ ಮುಂತಾದ ವೀರರು ಒಡಿಶಾವನ್ನು ಮುನ್ನಡೆಸುತ್ತಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ನಿರ್ದೇಶನ ನೀಡಿದ ರಾಮಾದೇವಿ, ಮಾಲ್ಟಿ ದೇವಿ, ಕೋಕಿಲಾ ದೇವಿ ಮತ್ತು ರಾಣಿ ಭಾಗ್ಯವತಿಯಂತಹ ಅನೇಕ ತಾಯಂದಿರು ಇದ್ದರು. ಅದೇ ರೀತಿ, ಒಡಿಶಾದ ನಮ್ಮ ಬುಡಕಟ್ಟು ಸಮಾಜದ ಕೊಡುಗೆಯನ್ನು ಯಾರು ಮರೆಯಲು ಸಾಧ್ಯ? ನಮ್ಮ ಬುಡಕಟ್ಟು ಜನಾಂಗದವರು ವಿದೇಶಿ ಆಡಳಿತಗಾರರಿಗೆ ತಮ್ಮ ಶೌರ್ಯ ಮತ್ತು ದೇಶಭಕ್ತಿಯಿಂದಾಗಿ ನಿದ್ರೆ ಮಾಡಲೂ ಕೂಡ ಅವಕಾಶ ನೀಡಲಿಲ್ಲ. ಭವಿಷ್ಯದ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮುದಾಯವು ಪಾತ್ರವಹಿಸಿರುವ ರಾಜ್ಯಗಳಲ್ಲಿ ವಸ್ತುಸಂಗ್ರಹಾಲಯವನ್ನು ನಿರ್ಮಿಸುವುದು ನನ್ನ ಪ್ರಯತ್ನ ಎಂದು ಬಹುಶಃ ನಿಮಗೆ ತಿಳಿದಿರಬಹುದು.  ಅಸಂಖ್ಯಾತ ತ್ಯಾಗದ ಅಸಂಖ್ಯಾತ  ವೀರರ ಕಥೆಗಳಿವೆ. ಅವರು ಯುದ್ಧವನ್ನು ಹೇಗೆ ನಡೆಸಿದರು ಮತ್ತು ಅವರು ಹೇಗೆ ಗೆದ್ದರು? ಅವರು ಬ್ರಿಟಿಷರಿಗೆ ದೀರ್ಘಕಾಲ ಕಾಲಿಡಲು ಅವಕಾಶ ನೀಡಲಿಲ್ಲ. ಬುಡಕಟ್ಟು ಸಮಾಜದ ಈ ವಿಷಯಗಳನ್ನು ಮುಂದಿನ ಪೀಳಿಗೆಗೆ ಹಂಚಿಕೊಳ್ಳುವುದು ಬಹಳ ಮುಖ್ಯ. ದೇಶಾದ್ಯಂತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಸಮಾಜದ ನಾಯಕತ್ವವನ್ನು ಮುನ್ನೆಲೆಗೆ ತರುವುದು ಅವಶ್ಯಕ. ಮತ್ತು ಇತಿಹಾಸದಿಂದ ಬಹುಶಃ ಅನ್ಯಾಯಕ್ಕೊಳಗಾದ ಅಸಂಖ್ಯಾತ ಕಥೆಗಳಿವೆ. ಇದು ನಮ್ಮ ಸ್ವಭಾವವಾಗಿರುವುದರಿಂದ, ಸ್ವಲ್ಪ ಅಲಂಕಾರಗಳೊಂದಿಗೆ ಬರುವ ವಿಷಯಗಳಿಂದ ನಾವು ಆಕರ್ಷಣೆಗೊಳಗಾಗುತ್ತೇವೆ. ಪರಿಣಾಮವಾಗಿ, ತ್ಯಾಗ ಮತ್ತು ಬಲಿದಾನದಂತಹ ಇಂತಹ ಕಥೆಗಳು ಜನರ ಮುಂದೆ ಬರುವುದಿಲ್ಲ. ಅದನ್ನು ಜನರ ಮುಂದೆ ತರಲು ಪ್ರಯತ್ನಿಸಬೇಕು. ಕ್ವಿಟ್ ಇಂಡಿಯಾ ಚಳವಳಿಯ ಮಹಾನ್ ಬುಡಕಟ್ಟು ನಾಯಕ ಲಕ್ಷ್ಮಣ್ ನಾಯಕ್ ಜಿ ಅವರನ್ನೂ ನಾವು ನೆನಪಿನಲ್ಲಿಡಬೇಕು. ಆತನನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಸ್ವಾತಂತ್ರ್ಯದ ಕನಸಿನೊಂದಿಗೆ ತಾಯಿ ಭಾರತಿಯ  ಮಡಿಲಲ್ಲಿ ಮಲಗಲು ಹೋದನು!

ಸ್ನೇಹಿತರೇ,

ಸ್ವಾತಂತ್ರ್ಯದ ಇತಿಹಾಸದ ಜೊತೆಗೆ, ಅಮೃತ ಮಹೋತ್ಸವದ ಒಂದು ಪ್ರಮುಖ ಆಯಾಮವೆಂದರೆ ಭಾರತದ ಸಾಂಸ್ಕೃತಿಕ ವೈವಿಧ್ಯ ಮತ್ತು ಸಾಂಸ್ಕೃತಿಕ ಆಸ್ತಿ. ಒಡಿಶಾ ನಮ್ಮ ಸಾಂಸ್ಕೃತಿಕ ವೈವಿಧ್ಯದ ಸಂಪೂರ್ಣ ಚಿತ್ರ. ಇಲ್ಲಿನ ಕಲೆ, ಆಧ್ಯಾತ್ಮಿಕತೆ ಮತ್ತು ಬುಡಕಟ್ಟು ಸಂಸ್ಕೃತಿ ಇಡೀ ದೇಶದ ಪರಂಪರೆಯಾಗಿದೆ. ಇಡೀ ದೇಶವು ಅದರೊಂದಿಗೆ ಪರಿಚಿತರಾಗಿರಬೇಕು ಮತ್ತು ಅದರೊಂದಿಗೆ ಸಂಪರ್ಕ ಹೊಂದಬೇಕು. ಮತ್ತು ಹೊಸ ಪೀಳಿಗೆ ಅದರ ಬಗ್ಗೆ ತಿಳಿದಿರಬೇಕು. ನಾವು ‘ಒಡಿಶಾ ಇತಿಹಾಸ್’ ಅನ್ನು ಆಳವಾಗಿ ಅರ್ಥಮಾಡಿಕೊಂಡು ಅದನ್ನು ಜಗತ್ತಿನ ಮುಂದೆ ತರುತ್ತೇವೆ, ಮಾನವೀಯತೆಯನ್ನು ಅರ್ಥಮಾಡಿಕೊಳ್ಳಲು ನಾವು ಹೆಚ್ಚು ಸಮಗ್ರ ದೃಷ್ಟಿಕೋನವನ್ನು ಪಡೆಯುತ್ತೇವೆ. ಹರೇಕೃಷ್ಣಾ ಜಿ ಅವರು ತಮ್ಮ ಪುಸ್ತಕದಲ್ಲಿ ಒಡಿಶಾದ ನಂಬಿಕೆ, ಕಲೆ ಮತ್ತು ವಾಸ್ತುಶಿಲ್ಪದ ಮೇಲೆ ಬೆಳಕು ಚೆಲ್ಲಿದ್ದಾರೆ.

ಸ್ನೇಹಿತರೇ,

ನೀವು ಒಡಿಶಾದ ಭೂತಕಾಲವನ್ನು ಅಗೆದರೆ, ಒಡಿಶಾದ ಐತಿಹಾಸಿಕ ಶಕ್ತಿಯನ್ನು ಮಾತ್ರವಲ್ಲದೆ ಇಡೀ ಭಾರತದನ್ನೂ ನೀವು ಕಾಣಬಹುದು. ಇತಿಹಾಸದಲ್ಲಿ ಬರೆಯಲ್ಪಟ್ಟ ಈ ಸಾಮರ್ಥ್ಯವು ವರ್ತಮಾನ ಮತ್ತು ಭವಿಷ್ಯದ ಸಾಧ್ಯತೆಗಳೊಂದಿಗೆ ಸಂಪರ್ಕ ಹೊಂದಿದೆ, ಇದು ಭವಿಷ್ಯಕ್ಕೆ ನಮಗೆ ಮಾರ್ಗದರ್ಶನ ನೀಡುತ್ತದೆ. ಒಡಿಶಾದ ವಿಶಾಲ ಕಡಲ ಗಡಿಯು ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಬಂದರುಗಳು ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಕೇಂದ್ರವಾಗಿತ್ತು. ಇಂಡೋನೇಷ್ಯಾ, ಮಲೇಷಿಯಾ, ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಶ್ರೀಲಂಕಾದಂತಹ ದೇಶಗಳೊಂದಿಗೆ ಇಲ್ಲಿಂದ ನಡೆದ ವ್ಯಾಪಾರವು ಒಡಿಶಾ ಮತ್ತು ಭಾರತದ ಸಮೃದ್ಧಿಗೆ ಪ್ರಮುಖ ಕಾರಣವಾಗಿದೆ. ಕೆಲವು ಇತಿಹಾಸಕಾರರ ಸಂಶೋಧನೆಯು ಒಡಿಶಾದ ಕೊನಾರ್ಕ್ ದೇವಾಲಯದಲ್ಲಿ ಜಿರಾಫೆಗಳ ಚಿತ್ರಗಳಿವೆ ಎಂದು ಸೂಚಿಸುತ್ತದೆ, ಅಂದರೆ ಒಡಿಶಾದ ವ್ಯಾಪಾರಿಗಳು ಆಫ್ರಿಕಾದವರೆಗೆ ವ್ಯಾಪಾರ ಮಾಡುತ್ತಿದ್ದರು. ಆ ಸಮಯದಲ್ಲಿ, ವಾಟ್ಸಾಪ್ ಇರಲಿಲ್ಲ. ಒಡಿಶಾದ ಹೆಚ್ಚಿನ ಸಂಖ್ಯೆಯ ಜನರು ವ್ಯಾಪಾರಕ್ಕಾಗಿ ಇತರ ದೇಶಗಳಲ್ಲಿ ವಾಸಿಸುತ್ತಿದ್ದರು ಮತ್ತು ಅವರನ್ನು ಡೇರಿಯಾ ಪಾರೆ ಒಡಿಯಾ ಎಂದು ಕರೆಯಲಾಯಿತು. ಓಡಿಯಾವನ್ನು ಹೋಲುವ ಸ್ಕ್ರಿಪ್ಟ್‌ಗಳು ಅನೇಕ ದೇಶಗಳಲ್ಲಿ ಕಂಡುಬರುತ್ತವೆ.. ಅದೇ ಕಡಲ ವ್ಯಾಪಾರದ ಮೇಲೆ ಹಿಡಿತ ಸಾಧಿಸಲು ಚಕ್ರವರ್ತಿ ಅಶೋಕನು ಕಳಿಂಗದ ಮೇಲೆ ಆಕ್ರಮಣ ಮಾಡಿದನೆಂದು ಇತಿಹಾಸಕಾರರು ಹೇಳುತ್ತಾರೆ. ಈ ಆಕ್ರಮಣವು ಅಶೋಕ ಚಕ್ರವರ್ತಿಯನ್ನು ಧಮ್ಮ ಅಶೋಕನನ್ನಾಗಿ ಮಾಡಿತು. ಮತ್ತು ಒಂದು ರೀತಿಯಲ್ಲಿ ಇದು ಭಾರತದಿಂದ ವ್ಯಾಪಾರ ಮತ್ತು ಬೌದ್ಧ ಸಂಸ್ಕೃತಿಯ ಹರಡುವಿಕೆಯ ಮಾಧ್ಯಮವಾಯಿತು.

ಸ್ನೇಹಿತರೇ,

ಆ ದಿನಗಳಲ್ಲಿ ನಾವು ಹೊಂದಿದ್ದ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರಕೃತಿ ಇಂದಿಗೂ ನಮಗೆ ನೀಡಿದೆ. ನಮ್ಮಲ್ಲಿ ಇನ್ನೂ ಅಂತಹ ವಿಶಾಲ ಕಡಲ ಗಡಿ, ಮಾನವ ಸಂಪನ್ಮೂಲ, ವ್ಯಾಪಾರ ಭವಿಷ್ಯವಿದೆ!  ಅದೇ ಸಮಯದಲ್ಲಿ, ಆಧುನಿಕ ವಿಜ್ಞಾನದ ಶಕ್ತಿಯನ್ನು ನಾವು ಇಂದು ಹೊಂದಿದ್ದೇವೆ. ಈ ಪ್ರಾಚೀನ ಅನುಭವಗಳು ಮತ್ತು ಆಧುನಿಕ ಸಾಧ್ಯತೆಗಳನ್ನು ನಾವು ಒಟ್ಟಿಗೆ ಸೇರಿಸಿದರೆ, ಒಡಿಶಾ ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪಬಹುದು. ಇಂದು, ದೇಶವು ಈ ದಿಕ್ಕಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ. ಅಂತಹ ಹೆಚ್ಚಿನ ಪ್ರಯತ್ನಗಳನ್ನು ಮಾಡುವ ಪ್ರಜ್ಞೆಯೂ ನಮಗಿದೆ. ನಾನು ಪ್ರಧಾನಿಯಾಗದಿದ್ದಾಗ ಮತ್ತು ಚುನಾವಣೆಯನ್ನು ಸಹ ಘೋಷಿಸದಿದ್ದಾಗ, ನಾನು ಬಹುಶಃ 2013 ರಲ್ಲಿ ಭಾಷಣ ಮಾಡಿದ್ದೇನೆ. ಅದು ನನ್ನ ಪಕ್ಷದ ಕಾರ್ಯಕ್ರಮವಾಗಿತ್ತು. ಮತ್ತು ಅದರಲ್ಲಿ ನಾನು ಭಾರತದ ಭವಿಷ್ಯವನ್ನು ಹೇಗೆ ಕಾಣುತ್ತೇನೆ ಎಂದು ಹೇಳಿದ್ದೆ. ಭಾರತದಲ್ಲಿ ಸಮತೋಲಿತ ಅಭಿವೃದ್ಧಿ ಇಲ್ಲದಿದ್ದರೆ ಬಹುಶಃ ನಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ನಾನು ಹೇಳಿದ್ದೆ. ಆ ಸಮಯದಿಂದ ನಾವು ಭಾರತದ ನಕ್ಷೆಯಲ್ಲಿ ಭಾರತದ ಪಶ್ಚಿಮ ಭಾಗಗಳ ನಡುವೆ ರೇಖೆಯನ್ನು ಎಳೆದರೆ, ಈ ದಿನಗಳಲ್ಲಿ ನೀವು ಪಶ್ಚಿಮದಲ್ಲಿ ಪ್ರಗತಿ ಮತ್ತು ಸಮೃದ್ಧಿಯನ್ನು ನೋಡುತ್ತೀರಿ ಎಂದು ನಾನು ಭಾವಿಸುತ್ತೇನೆ. ಆರ್ಥಿಕ ಚಟುವಟಿಕೆಯ ರೇಖೆಯು ಕೆಳಗಿನಿಂದ ಮೇಲಕ್ಕೇರಿರುವುದು ಗೋಚರಿಸುತ್ತದೆ.  ಪೂರ್ವದಲ್ಲಿ ಎಷ್ಟೊಂದು ನೈಸರ್ಗಿಕ ಸಂಪನ್ಮೂಲಗಳಿವೆ, ಎಷ್ಟೊಂದು ಸೃಜನಶೀಲ ಮನಸ್ಸುಗಳಿವೆ, ನಮ್ಮಲ್ಲಿ ಅದ್ಭುತ ಮಾನವ ಸಂಪನ್ಮೂಲಗಳಿವೆ, ಅದು ಒಡಿಶಾ, ಬಿಹಾರ, ಪೂರ್ವದಲ್ಲಿ ಬಂಗಾಳ ಮತ್ತು ಅಸ್ಸಾಂ ಅಥವಾ ಈಶಾನ್ಯ ಭಾಗದಲ್ಲಿರಬಹುದು. ಇದು ಅದ್ಭುತ ಸಾಮರ್ಥ್ಯದಿಂದ ತುಂಬಿದೆ. ಈ ಪ್ರದೇಶವನ್ನು ಮಾತ್ರ ಅಭಿವೃದ್ಧಿಪಡಿಸಿದರೆ ಸಾಕು, ಭಾರತ ಹಿಂದುಳಿಯಲು ಸಾಧ್ಯವಿಲ್ಲ. ಇಲ್ಲಿ ತುಂಬಾ ಸಾಮರ್ಥ್ಯವಿದೆ. ಆದ್ದರಿಂದ ನೀವು ನೋಡಿರಬೇಕು ಮತ್ತು ಕಳೆದ 6 ವರ್ಷಗಳ ಬಗ್ಗೆ ಯಾರಾದರೂ ವಿಶ್ಲೇಷಣೆ ಮಾಡಿದರೆ, ಅಭಿವೃದ್ಧಿಯ ಉಪಕ್ರಮಗಳಿಗೆ ಸಂಬಂಧಪಟ್ಟಂತೆ ಪೂರ್ವ ಭಾರತಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎನ್ನುವುದು ತಿಳಿಯುತ್ತದೆ. ಮೂಲಸೌಕರ್ಯಕ್ಕೆ ಗರಿಷ್ಠ ಒತ್ತು ನೀಡಲಾಗಿದ್ದು, ಇದು ಅಭಿವೃದ್ಧಿಯ ಅತಿದೊಡ್ಡ ಉಪಕ್ರಮವಾಗಿದ್ದು, ಇದರಿಂದ ದೇಶದಲ್ಲಿ ಸಮತೋಲಿತ ಬೆಳವಣಿಗೆ ಕಂಡುಬರುತ್ತದೆ. ನೈಸರ್ಗಿಕ ಕಾರಣಗಳಿಂದ ಪೂರ್ವ ಮತ್ತು ಪಶ್ಚಿಮಗಳ ನಡುವಿನ 19-20 ವ್ಯತ್ಯಾಸವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಒಡಿಶಾ, ಬಿಹಾರ ಅಥವಾ ಕೋಲ್ಕತಾ ಆಗಿರಲಿ, ಪೂರ್ವವು ಭಾರತವನ್ನು ಮುನ್ನಡೆಸುತ್ತಿದ್ದಾಗ ಅದು ಭಾರತದ ಸುವರ್ಣಯುಗವಾಗಿತ್ತು. ಇವು ಭಾರತವನ್ನು ಮುನ್ನಡೆಸುವ ಕೇಂದ್ರ ಬಿಂದುಗಳಾಗಿದ್ದವು. ಭಾರತದ ಸುವರ್ಣ ಅವಧಿಯನ್ನು ಗಮನಿಸಿದರೆ, ಇಲ್ಲಿ ಅಪರಿಮಿತ ಸಾಮರ್ಥ್ಯವಿದೆ ಎಂದರ್ಥ.  ನಮ್ಮ ಈ ಸಾಮರ್ಥ್ಯದೊಂದಿಗೆ ನಾವು ಮುಂದೆ ಸಾಗಿದರೆ, ನಾವು ಭಾರತವನ್ನು ಮತ್ತೊಮ್ಮೆ ಆ ಎತ್ತರಕ್ಕೆ ಕೊಂಡೊಯ್ಯಬಹುದು.

ಸ್ನೇಹಿತರೇ,

ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಮೂಲಸೌಕರ್ಯವು ಮೊದಲ ಅವಶ್ಯಕತೆಯಾಗಿದೆ. ಇಂದು, ಒಡಿಶಾದಲ್ಲಿ ಸಾವಿರಾರು ಕಿ.ಮೀ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ, ಕರಾವಳಿ ಹೆದ್ದಾರಿಗಳನ್ನು ನಿರ್ಮಿಸಲಾಗಿದ್ದು ಅದು ಬಂದರುಗಳನ್ನು ಜೋಡಿಸುತ್ತದೆ.  ಕಳೆದ 6-7 ವರ್ಷಗಳಲ್ಲಿ ನೂರಾರು ಕಿಲೋಮೀಟರ್ ಹೊಸ ರೈಲ್ವೆ ಮಾರ್ಗಗಳನ್ನು ಹಾಕಲಾಗಿದೆ. ಸಾಗರಮಾಲಾ ಯೋಜನೆಗಾಗಿ ಸಹ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ. ಮೂಲಸೌಕರ್ಯದ ನಂತರದ ಮುಂದಿನ ಪ್ರಮುಖ ಅಂಶವೆಂದರೆ ಉದ್ಯಮ!  ಈ ದಿಕ್ಕಿನಲ್ಲಿ ಕೈಗಾರಿಕೆಗಳು ಮತ್ತು ಕಂಪನಿಗಳನ್ನು ಉತ್ತೇಜಿಸುವ ಕೆಲಸ ನಡೆಯುತ್ತಿದೆ.  ಒಡಿಶಾದಲ್ಲಿ ಅಸ್ತಿತ್ವದಲ್ಲಿರುವ ಬೃಹತ್ ತೈಲ ಮತ್ತು ಅನಿಲ ಸಾಮರ್ಥ್ಯಕ್ಕಾಗಿ ಸಹ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ತೈಲ ಸಂಸ್ಕರಣಾಗಾರಗಳು ಅಥವಾ ಎಥೆನಾಲ್ ಜೈವಿಕ ಸಂಸ್ಕರಣಾಗಾರಗಳು ಇರಲಿ, ಒಡಿಶಾದಲ್ಲಿ ಇಂದು ಹೊಸ ಸ್ಥಾವರಗಳನ್ನು ಸ್ಥಾಪಿಸಲಾಗುತ್ತಿದೆ. ಅಂತೆಯೇ, ಉಕ್ಕಿನ ಉದ್ಯಮದ ವಿಶಾಲ ಸಾಮರ್ಥ್ಯವನ್ನೂ ಸಹ ರೂಪಿಸಲಾಗುತ್ತಿದೆ. ಒಡಿಶಾದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗಿದೆ. ಕಡಲ ಸಂಪನ್ಮೂಲಗಳಿಂದ ಒಡಿಶಾಗೆ ಅಪಾರ ಅವಕಾಶಗಳಿವೆ. ಈ ಸಂಪನ್ಮೂಲಗಳನ್ನು ಬ್ಲೂ ರೆವೊಲ್ಯೂಶನ್ ಅಂದರೆ ನೀಲಿ ಕ್ರಾಂತಿಯ ಮೂಲಕ ಒಡಿಶಾದ ಪ್ರಗತಿಗೆ ಆಧಾರವಾಗಿಸುವುದು ದೇಶದ ಪ್ರಯತ್ನ, ಇದರಿಂದ ಮೀನುಗಾರರು ಮತ್ತು ರೈತರ ಜೀವನ ಮಟ್ಟ ಸುಧಾರಿಸುತ್ತದೆ.

ಸ್ನೇಹಿತರೇ,

ಮುಂದಿನ ದಿನಗಳಲ್ಲಿ ಈ ವಿಶಾಲ ಸಾಮರ್ಥ್ಯಗಳಲ್ಲಿ ಕೌಶಲ್ಯಗಳ ಅವಶ್ಯಕತೆಯಿದೆ. ಒಡಿಶಾದ ಯುವಕರಿಗೆ ಈ ಅಭಿವೃದ್ಧಿಯ ಗರಿಷ್ಠ ಲಾಭವನ್ನು ಖಚಿತಪಡಿಸಿಕೊಳ್ಳಲು, ಐಐಟಿ ಭುವನೇಶ್ವರ, ಐಐಎಸ್ಇಆರ್ ಬೆರ್ಹಾಂಪುರ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಕಿಲ್ ಸಂಸ್ಥೆಗಳ ಅಡಿಪಾಯವನ್ನು ಹಾಕಲಾಗಿದೆ. ಈ ವರ್ಷದ ಜನವರಿಯಲ್ಲಿ, ಒಡಿಶಾದಲ್ಲಿ ಐಐಎಂ ಸಂಬಲ್ಪುರದ ಅಡಿಪಾಯ ಹಾಕುವ ಭಾಗ್ಯವೂ ನನಗೆ ದೊರಕಿತು. ಈ ಸಂಸ್ಥೆಗಳು ಮುಂಬರುವ ವರ್ಷಗಳಲ್ಲಿ ಒಡಿಶಾದ ಭವಿಷ್ಯವನ್ನು ನಿರ್ಮಿಸುತ್ತವೆ ಮತ್ತು ಅಭಿವೃದ್ಧಿಗೆ ಹೊಸ ಪ್ರಚೋದನೆಯನ್ನು ನೀಡುತ್ತವೆ.

ಸ್ನೇಹಿತರೇ,

ಉತ್ಕಲ್ಮಣಿ ಗೋಪಬಂಧು ದಾಸ್ ಜಿ ಬರೆದಿದ್ದಾರೆ:

“ಜಗತ್ ಸರ್ಸೆ ಭಾರತ್ ಕನಲ್. ತಾ ಮಧೆ ಪುಣ್ಯ ನೀಲಾಚಲ್.”

ಇಂದು, 75 ವರ್ಷಗಳ ಸ್ವಾತಂತ್ರ್ಯದ ಶುಭ ಸಂದರ್ಭಕ್ಕಾಗಿ ದೇಶವು ಸಜ್ಜಾಗುತ್ತಿರುವಾಗ, ನಾವು ಈ ಮನೋಭಾವ ಮತ್ತು ನಿರ್ಣಯವನ್ನು ಮತ್ತೊಮ್ಮೆ ಅರಿತುಕೊಳ್ಳಬೇಕು. ಮತ್ತು ನಾನು ಅದನ್ನು ನೋಡಿದ್ದೇನೆ ಮತ್ತು ನಾನು ನಿಖರವಾದ ಅಂಕಿಅಂಶಗಳನ್ನು ಹೊಂದಿಲ್ಲದಿರಬಹುದು. ಆದರೆ ಕೋಲ್ಕತ್ತಾದ ನಂತರ, ಒರಿಯಾ ಜನರು ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಾಸಿಸುವ ಏಕೈಕ ನಗರ ಸೂರತ್ ಎಂದು ತೋರುತ್ತದೆ. ಮತ್ತು ಈ ಕಾರಣದಿಂದಾಗಿ, ನಾನು ಅವರೊಂದಿಗೆ ಸಹಜವಾಗಿಯೇ ಸಂಪರ್ಕವನ್ನು ಹೊಂದಿದ್ದೇನೆ. ಕನಿಷ್ಠ ವಿಧಾನಗಳು ಮತ್ತು ನಿಬಂಧನೆಗಳೊಂದಿಗೆ ವಿನೋದದಿಂದ ತುಂಬಿರುವ ಇಂತಹ ಸರಳ ಜೀವನವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಯಾವುದೇ ಗೂಂಡಾಗಿರಿ ಇಲ್ಲ. ಅವರು ತುಂಬಾ ಶಾಂತಸ್ವಭಾವದವರು. ಇಂದು, ಮುಂಬೈ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ಸ್ವಾತಂತ್ರ್ಯದ ಮೊದಲು, ಕರಾಚಿಯ ಬಗ್ಗೆ ಚರ್ಚಿಸಲಾಗುತ್ತಿತ್ತು, ಲಾಹೋರ್ ಬಗ್ಗೆ ಚರ್ಚಿಸಲಾಗುತ್ತಿತ್ತು. ಕ್ರಮೇಣ ಬೆಂಗಳೂರು ಮತ್ತು ಹೈದರಾಬಾದ್ ಬಗ್ಗೆ ಚರ್ಚಿಸಲಾಯಿತು. ಚೆನ್ನೈ ಬಗ್ಗೆ ಚರ್ಚಿಸಲು ಪ್ರಾರಂಭವಾಯಿತು. ಆದರೆ ಇಡೀ ಭಾರತದ ಪ್ರಗತಿ ಮತ್ತು ಅಭಿವೃದ್ಧಿ ಮತ್ತು ಆರ್ಥಿಕತೆಯ ಬಗ್ಗೆ ಜನರು ತುಂಬಾ ನೆನಪಿಸಿಕೊಂಡ ನಂತರ ಕೋಲ್ಕತ್ತಾದ ಬಗ್ಗೆ ಬರೆಯುತ್ತಾರೆ.  ವಾಸ್ತವವಾಗಿ ಕೋಲ್ಕತಾವು ಬಂಗಾಳವನ್ನು ಮಾತ್ರವಲ್ಲದೆ ಇಡೀ ಪೂರ್ವ ಭಾರತವನ್ನು ಅಭಿವೃದ್ಧಿಯಲ್ಲಿ ಮುನ್ನಡೆಸಬಲ್ಲದು. ಪೂರ್ವ ಭಾರತದ ಅಭಿವೃದ್ಧಿಗೆ ಒಂದು ಶಕ್ತಿಯಾಗಿ ಹೊರಹೊಮ್ಮುವಂತೆ ಕೋಲ್ಕತಾವನ್ನು ಮತ್ತೊಮ್ಮೆ ಚಲನಶೀಲ ಮಾಡಲು ನಾವು ಪ್ರಯತ್ನಿಸುತ್ತಿದ್ದೇವೆ. ಮತ್ತು ನಾವು ಈ ಸಂಪೂರ್ಣ  ರೂಪುರೇಷೆಯ ಮೇಲೆ  ಕೆಲಸ ಮಾಡುತ್ತಿದ್ದೇವೆ. ಹಾಗು ದೇಶದ ಹಿತಾಸಕ್ತಿಗೆ ಸಂಬಂಧಿಸಿದ ಈ ಎಲ್ಲಾ ನಿರ್ಧಾರಗಳಿಗೆ ಅದು ಶಕ್ತಿ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ.

ಮಹತಾಬ್ ಜಿ ಅವರ ಕೃತಿಯನ್ನು ಮುಂದೆ ತರಲು ಇದೊಂದು ಉತ್ತಮ ಅವಕಾಶ ಎಂದು ನಾನು ಇಂದು ಹರೇಕೃಷ್ಣಾ  ಮಹತಾಬ್ ಪ್ರತಿಷ್ಠಾನದ ವಿದ್ವಾಂಸರನ್ನು ವಿನಂತಿಸುತ್ತೇನೆ. ಒಡಿಶಾದ ಇತಿಹಾಸ, ಸಂಸ್ಕೃತಿ ಮತ್ತು ಭವ್ಯವಾದ ವಾಸ್ತುಶಿಲ್ಪವನ್ನು ನಾವು ದೇಶ ಮತ್ತು ವಿದೇಶಗಳಿಗೆ ಕೊಂಡೊಯ್ಯಬೇಕಾಗಿದೆ. ನಾವು ದೇಶದ ಅಮೃತ ಮಹೋತ್ಸವವನ್ನು ಸೇರಿಕೊಂಡು ಈ ಅಭಿಯಾನವನ್ನು ಜನರ ಅಭಿಯಾನವನ್ನಾಗಿ ಮಾಡೋಣ. ಈ ಅಭಿಯಾನವು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಶ್ರೀ ಹರೇ ಕೃಷ್ಣಾ   ಮಹತಾಬ್ ಜಿ ಪರಿಹರಿಸಿದ ಸೈದ್ಧಾಂತಿಕ ಶಕ್ತಿಯ ಹರಿವಿನಂತೆಯೇ ಇರುತ್ತದೆ ಎಂದು ನನಗೆ ಖಾತ್ರಿಯಿದೆ. ಈ ಶುಭ ಸಂಕಲ್ಪದೊಂದಿಗೆ, ಈ ಮಹತ್ವದ ಸಂದರ್ಭದಲ್ಲಿ ಈ ಕುಟುಂಬವನ್ನು ಸೇರಲು ನನಗೆ ಅವಕಾಶ ನೀಡಿದಕ್ಕಾಗಿ ಮತ್ತೊಮ್ಮೆ ನಿಮಗೆ ಧನ್ಯವಾದಗಳು. ಮಹತಾಬ್ ಪ್ರತಿಷ್ಠಾನಕ್ಕೆ ನಾನು ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ನಡುವೆ ಇರಲು ಮತ್ತು ಈ ಭಾವನೆಗಳನ್ನು ವ್ಯಕ್ತಪಡಿಸಲು ನನಗೆ ಅವಕಾಶ ದೊರೆತ ಸಹೋದರ ಭರ್ತ್ರುಹಾರಿ ಜಿ ಅವರಿಗೆ ನಾನು ಆಭಾರಿಯಾಗಿದ್ದೇನೆ. ಇಂದು ನಾನು ನಂಬಿಕೆ ಮತ್ತು ಗೌರವವನ್ನು ಹೊಂದಿರುವ ಇತಿಹಾಸದ ಕೆಲವು ಘಟನೆಗಳೊಂದಿಗೆ ಸಂಪರ್ಕ ಸಾಧಿಸಲು ನನಗೆ ಅವಕಾಶ ಸಿಕ್ಕಿದೆ.  ನನ್ನ ತುಂಬು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಬಹಳ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auto sector reports strong sales momentum; SUVs and exports drive growth across industry

Media Coverage

Auto sector reports strong sales momentum; SUVs and exports drive growth across industry
NM on the go

Nm on the go

Always be the first to hear from the PM. Get the App Now!
...
First Deputy PM of Russia Denis Manturov calls on PM Modi
April 02, 2026
First Deputy PM Manturov briefs PM on progress in trade, fertilizers, connectivity and people-to-people ties
PM recalls the successful visit of President Putin to India in December 2025
PM expresses satisfaction at the sustained efforts towards implementation of the Summit outcomes
PM extends warm greetings to President Putin

The First Deputy Prime Minister of the Russian Federation, H.E. Denis Manturov, called on Prime Minister Shri Narendra Modi today.

First Deputy PM Manturov briefed PM on the progress in various areas of mutually beneficial cooperation, including trade and economic partnership, fertilizers, connectivity and people-to-people ties.

PM recalled the successful visit of President Putin to India in December 2025 for the 23rd India-Russia Annual Summit.

He expressed satisfaction at the sustained efforts being made by both sides towards implementation of the outcomes from the Annual Summit, aimed at further strengthening the India- Russia Special and Privileged Strategic Partnership.

PM extended warm greetings to President Putin and said that he looked forward to their continued exchanges.