Quoteವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಚೆನಾಬ್ ಸೇತುವೆ ಮತ್ತು ಭಾರತದ ಮೊದಲ ಕೇಬಲ್ ಆಧಾರಿತ ರೈಲು ಸೇತುವೆ ಅಂಜಿ ಸೇತುವೆಯನ್ನು ಉದ್ಘಾಟಿಸಿದ‌ ಪ್ರಧಾನಮಂತ್ರಿ
Quoteಇಂದು ಮಾಡಲಾದ ಬೃಹತ್ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಯ ಪಯಣದಲ್ಲಿ ಮಹತ್ವದ ತಿರುವು: ಪ್ರಧಾನಮಂತ್ರಿ
Quote’ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ' ಎಂದು ನಾವು ಸದಾ ಮಾತೆ ಭಾರತಿಯನ್ನು ಆಳವಾದ ಗೌರವದಿಂದ ಪ್ರಾರ್ಥಿಸಿದ್ದೇವೆ, ಇಂದು, ಇದು ನಮ್ಮ ರೈಲ್ವೆ ಜಾಲದಲ್ಲಿಯೂ ವಾಸ್ತವವಾಗಿದೆ: ಪ್ರಧಾನಮಂತ್ರಿ
Quoteಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗ ಯೋಜನೆ ಹೊಸ, ಸಶಕ್ತ ಜಮ್ಮು ಮತ್ತು ಕಾಶ್ಮೀರದ ಸಂಕೇತವಾಗಿದೆ ಮತ್ತು ಭಾರತದ ವರ್ಧಿಸುತ್ತಿರುವ ಶಕ್ತಿಯ ಪ್ರತಿಧ್ವನಿಸುವ ಘೋಷಣೆಯಾಗಿದೆ: ಪ್ರಧಾನಮಂತ್ರಿ
Quoteಚೆನಾಬ್ ಮತ್ತು ಅಂಜಿ ಸೇತುವೆಗಳು ಜಮ್ಮು ಮತ್ತು ಕಾಶ್ಮೀರದ ಸಮೃದ್ಧಿಯ ಹೆಬ್ಬಾಗಿಲುಗಳಾಗಿ ಕಾರ್ಯನಿರ್ವಹಿಸಲಿವೆ: ಪ್ರಧಾನಮಂತ್ರಿ
Quoteಜಮ್ಮು ಮತ್ತು ಕಾಶ್ಮೀರ ಭಾರತದ ಮುಕುಟ ರತ್ನ: ಪ್ರಧಾನಮಂತ್ರಿ
Quoteಭಾರತ ಭಯೋತ್ಪಾದನೆಗೆ ತಲೆಬಾಗುವುದಿಲ್ಲ, ಜಮ್ಮು ಮತ್ತು ಕಾಶ್ಮೀರದ ಯುವಜನರು ಈಗ ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡಲು ಮನಸ್ಸು ಮಾಡಿದ್ದಾರೆ: ಪ್ರಧಾನಮಂತ್ರಿ
Quoteಪಾಕಿಸ್ತಾನಕ್ಕೆ ಆಪರೇಷನ್ ಸಿಂದೂರ್ ಎಂಬ ಹೆಸರು ಕೇಳಿದಾಗಲೆಲ್ಲಾ ಅದು ಅದರ ನಾಚಿಕೆಗೇಡಿನ ಸೋಲನ್ನು ನೆನಪಿಸುತ್ತದೆ: ಪ್ರಧಾನಮಂತ್ರಿ

ಓಂ ಮಾತಾ ವೈಷ್ಣೋ ದೇವಿಗೆ ನಮಸ್ಕರಿಸಿ, ಜೈ ಮಾತೆ

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಿ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜಿ, ಕೇಂದ್ರ ಸಂಪುಟದ ನನ್ನ ಸಹೋದ್ಯೋಗಿಗಳಾದ ಅಶ್ವಿನಿ ವೈಷ್ಣವ್ ಜಿ, ಜಿತೇಂದ್ರ ಸಿಂಗ್ ಜಿ, ವಿ. ಸೋಮಣ್ಣ ಜಿ, ಉಪಮುಖ್ಯಮಂತ್ರಿ ಸುರೇಂದ್ರ ಕುಮಾರ್ ಜಿ, ಜಮ್ಮು-ಕಾಶ್ಮೀರ ವಿಧಾನಸಭೆಯ ವಿಪಕ್ಷ ನಾಯಕ ಸುನಿಲ್ ಜಿ, ಸಂಸತ್ತಿನ ನನ್ನ ಸಹೋದ್ಯೋಗಿ ಜುಗಲ್ ಕಿಶೋರ್ ಜಿ, ಇಲ್ಲಿರುವ ಜನಪ್ರತಿನಿಧಿಗಳೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ. ಇದು ವೀರ್ ಜೋರಾವರ್ ಸಿಂಗ್ ಜಿ ಅವರ ಭೂಮಿ, ನಾನು ಈ ಭೂಮಿಗೆ ನಮಸ್ಕರಿಸುತ್ತೇನೆ.

ಸ್ನೇಹಿತರೆ,

ಇಂದಿನ ಕಾರ್ಯಕ್ರಮವು ಭಾರತದ ಏಕತೆ ಮತ್ತು ಇಚ್ಛಾಶಕ್ತಿಯ ದೊಡ್ಡ ಆಚರಣೆಯಾಗಿದೆ. ಮಾತಾ ವೈಷ್ಣೋದೇವಿಯ ಆಶೀರ್ವಾದದಿಂದ, ಇಂದು ಕಾಶ್ಮೀರ ಕಣಿವೆಯನ್ನು ಭಾರತದ ರೈಲು ಜಾಲಕ್ಕೆ ಸಂಪರ್ಕ ಒದಗಿಸಲಾಗಿದೆ. ಭಾರತ ಮಾತೆಯನ್ನು ವಿವರಿಸುವಾಗ, ನಾವು ಭಕ್ತಿಯಿಂದ ಹೇಳುತ್ತಿದ್ದೇವೆ - ಕಾಶ್ಮೀರದಿಂದ ಕನ್ಯಾಕುಮಾರಿಗೆ. ಇದು ಈಗ ರೈಲ್ವೆ ಜಾಲಕ್ಕೂ ವಾಸ್ತವವಾಗಿದೆ. ಉಧಂಪುರ, ಶ್ರೀನಗರ, ಬಾರಾಮುಲ್ಲಾ, ಈ ರೈಲು ಮಾರ್ಗ ಯೋಜನೆಗಳು, ಇವು ಕೇವಲ ಹೆಸರುಗಳಲ್ಲ. ಇವು ಜಮ್ಮು-ಕಾಶ್ಮೀರದ ಹೊಸ ಶಕ್ತಿಯ ಗುರುತು. ಇದು ಭಾರತದ ಹೊಸ ಶಕ್ತಿಯ ಘೋಷಣೆಯಾಗಿದೆ. ಸ್ವಲ್ಪ ಸಮಯದ ಹಿಂದೆ ನನಗೆ ಚೆನಾಬ್ ಸೇತುವೆ ಮತ್ತು ಅಂಜಿ ಸೇತುವೆಯನ್ನು ಉದ್ಘಾಟಿಸುವ ಅವಕಾಶ ಸಿಕ್ಕಿತು. ಇಂದು ಜಮ್ಮು-ಕಾಶ್ಮೀರಕ್ಕೆ 2 ಹೊಸ ವಂದೇ ಭಾರತ್ ರೈಲುಗಳು ಬಂದಿವೆ. ಇಲ್ಲಿ ಜಮ್ಮುವಿನಲ್ಲಿ, ಹೊಸ ವೈದ್ಯಕೀಯ ಕಾಲೇಜಿನ ಶಂಕುಸ್ಥಾಪನೆ ನೆರವೇರಿಸಲಾಗಿದೆ. 46 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳು ಜಮ್ಮ-ಕಾಶ್ಮೀರದ ಅಭಿವೃದ್ಧಿಗೆ ಹೊಸ ಉತ್ತೇಜನ ನೀಡಲಿವೆ. ಅಭಿವೃದ್ಧಿಯ ಹೊಸ ಯುಗಕ್ಕಾಗಿ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ. ಇದು ಹಾಜಿಯ ನಾಡು. ನಾನು ಈ ಭೂಮಿಗೆ ವಂದಿಸುತ್ತೇನೆ.

ಸ್ನೇಹಿತರೆ,

ಜಮ್ಮು-ಕಾಶ್ಮೀರದ ಹಲವು ತಲೆಮಾರುಗಳು ರೈಲು ಸಂಪರ್ಕದ ಕನಸು ಕಾಣುತ್ತಾ ನಿಧನರಾದರು. ನಿನ್ನೆ ನಾನು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಜಿ ಅವರ ಹೇಳಿಕೆಯನ್ನು ನೋಡುತ್ತಿದ್ದೆ, ಅವರು 7-8ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಈ ಯೋಜನೆಯ ಪೂರ್ಣವಾಗುವುದಕ್ಕೆ ಕಾಯುತ್ತಿದ್ದೆ ಎಂದು ಹೇಳಿದ್ದರು, ಇದನ್ನು ಭಾಷಣದಲ್ಲಿ ಉಲ್ಲೇಖಿಸಿದ್ದೇನೆ. ಇಂದು ಜಮ್ಮು-ಕಾಶ್ಮೀರದ ಲಕ್ಷಾಂತರ ಜನರ ಕನಸು ನನಸಾಗಿದೆ. ಎಲ್ಲಾ ಒಳ್ಳೆಯ ಕೆಲಸಗಳು ಇನ್ನೂ ನನ್ನ ಬಳಿ ಉಳಿದಿವೆ ಎಂಬುದು ನಿಜ.

ಸ್ನೇಹಿತರೆ,

ನಮ್ಮ ಅಧಿಕಾರಾವಧಿಯಲ್ಲಿ ಈ ಯೋಜನೆಗೆ ವೇಗ ಸಿಕ್ಕಿದ್ದು ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದು ನಮ್ಮ ಸರ್ಕಾರದ ಅದೃಷ್ಟ. ಈ ನಡುವೆ, ಕೋವಿಡ್ ಅವಧಿಯಲ್ಲಿ ಅನೇಕ ತೊಂದರೆಗಳು ಬಂದವು, ಆದರೆ ನಾವು ದೃಢವಾಗಿ ನಿಂತೆವು.

 

|

ಸ್ನೇಹಿತರೆ,

ಪ್ರಯಾಣದಲ್ಲಿ ತೊಂದರೆಗಳು, ಹವಾಮಾನ ಸಮಸ್ಯೆಗಳು, ಪರ್ವತಗಳಿಂದ ನಿರಂತರವಾಗಿ ಹಿಮ ಕಲ್ಲುಗಳು ಬೀಳುತ್ತಿದ್ದವು, ಈ ಯೋಜನೆಯನ್ನು ಪೂರ್ಣಗೊಳಿಸುವುದು ಕಷ್ಟಕರ ಮತ್ತು ಸವಾಲಿನದ್ದಾಗಿತ್ತು. ಆದರೆ ನಮ್ಮ ಸರ್ಕಾರವು ಸವಾಲನ್ನೇ ಸವಾಲು ಮಾಡುವ ಮಾರ್ಗವನ್ನು ಆರಿಸಿಕೊಂಡಿದೆ. ಇಂದು, ಜಮ್ಮು-ಕಾಶ್ಮೀರದಲ್ಲಿ ನಿರ್ಮಿಸಲಾಗುತ್ತಿರುವ ಅನೇಕ ಸರ್ವಋತು ಮೂಲಸೌಕರ್ಯ ಯೋಜನೆಗಳು ಇದಕ್ಕೆ ಉದಾಹರಣೆಯಾಗಿವೆ. ಸೋನ್‌ಮಾರ್ಗ್ ಸುರಂಗ ಮಾರ್ಗವನ್ನು ಕೆಲವೇ ತಿಂಗಳ ಹಿಂದೆ ಪ್ರಾರಂಭಿಸಲಾಯಿತು. ಸ್ವಲ್ಪ ಸಮಯದ ಹಿಂದೆ, ನಾನು ಚೆನಾಬ್ ಮತ್ತು ಅಂಜಿ ಸೇತುವೆಯ ಮೂಲಕ ನಿಮ್ಮೊಂದಿಗೆ ಬಂದೆ. ಈ ಸೇತುವೆಗಳ ಮೇಲೆ ನಡೆಯುವಾಗ, ಭಾರತದ ದೃಢ ಸಂಕಲ್ಪ, ನಮ್ಮ ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ಕೌಶಲ್ಯ ಮತ್ತು ಧೈರ್ಯವನ್ನು ನಾನು ಅನುಭವಿಸಿದ್ದೇನೆ. ಚೆನಾಬ್ ಸೇತುವೆ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆಯಾಗಿದೆ. ಜನರು ಐಫೆಲ್ ಟವರ್ ನೋಡಲು ಫ್ರಾನ್ಸ್‌ನ ಪ್ಯಾರಿಸ್‌ಗೆ ಹೋಗುತ್ತಾರೆ. ಆದರೆ ಈ ಸೇತುವೆ ಐಫೆಲ್ ಟವರ್‌ಗಿಂತ ಹೆಚ್ಚು ಎತ್ತರವಾಗಿದೆ. ಈಗ ಜನರು ಚೆನಾಬ್ ಸೇತುವೆಯ ಮೂಲಕ ಕಾಶ್ಮೀರ ನೋಡಲು ಹೋಗುವುದಲ್ಲದೆ, ಈ ಸೇತುವೆ ಸ್ವತಃ ಆಕರ್ಷಕ ಪ್ರವಾಸಿ ತಾಣವಾಗಲಿದೆ. ಎಲ್ಲರೂ ಸೆಲ್ಫಿ ಪಾಯಿಂಟ್‌ಗೆ ಹೋಗಿ ಸೆಲ್ಫಿ ತೆಗೆದುಕೊಳ್ಳುತ್ತಾರೆ. ನಮ್ಮ ಅಂಜಿ ಸೇತುವೆ ಎಂಜಿನಿಯರಿಂಗ್‌ನ ಉತ್ತಮ ಉದಾಹರಣೆಯಾಗಿದೆ. ಇದು ಭಾರತದ ಮೊದಲ ಕೇಬಲ್-ಬೆಂಬಲಿತ ರೈಲ್ವೆ ಸೇತುವೆ. ಈ ಎರಡೂ ಸೇತುವೆಗಳು ಕೇವಲ ಇಟ್ಟಿಗೆ, ಸಿಮೆಂಟ್, ಉಕ್ಕು ಮತ್ತು ಕಬ್ಬಿಣದ ರಚನೆಗಳಲ್ಲ, ಅವು ಪಿರ್ ಪಂಜಾಲ್‌ನ ದುರ್ಗಮ ಬೆಟ್ಟಗಳ ಮೇಲೆ ನಿಂತಿರುವ ಭಾರತದ ಶಕ್ತಿಯ ಜೀವಂತ ಸಂಕೇತವಾಗಿದೆ. ಇದು ಭಾರತದ ಉಜ್ವಲ ಭವಿಷ್ಯದ ಘರ್ಜನೆ. ಅಭಿವೃದ್ಧಿ ಹೊಂದಿದ ಭಾರತದ ಕನಸು ಎಷ್ಟು ದೊಡ್ಡದಾಗಿದೆಯೋ, ನಮ್ಮ ಧೈರ್ಯ ಮತ್ತು ನಮ್ಮ ಸಾಮರ್ಥ್ಯವು ಅಷ್ಟೇ ದೊಡ್ಡದಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಒಳ್ಳೆಯ ಉದ್ದೇಶ ಮತ್ತು ಅಪಾರ ಪ್ರಯತ್ನದ ಫಲ ಇದಾಗಿದೆ.

ಸ್ನೇಹಿತರೆ,

ಅದು ಚೆನಾಬ್ ಸೇತುವೆಯಾಗಿರಲಿ ಅಥವಾ ಅಂಜಿ ಸೇತುವೆಯಾಗಿರಲಿ, ಇವು ಜಮ್ಮು-ಕಾಶ್ಮೀರದ ಎರಡೂ ಪ್ರದೇಶಗಳಿಗೆ ಸಮೃದ್ಧಿಯ ಸಾಧನವಾಗುತ್ತವೆ. ಇದು ಪ್ರವಾಸೋದ್ಯಮವನ್ನು ಹೆಚ್ಚಿಸುವುದಲ್ಲದೆ, ಆರ್ಥಿಕತೆಯ ಇತರ ವಲಯಗಳಿಗೂ ಪ್ರಯೋಜನ ನೀಡುತ್ತದೆ. ಜಮ್ಮು-ಕಾಶ್ಮೀರ ನಡುವಿನ ರೈಲು ಸಂಪರ್ಕವು ಎರಡೂ ಪ್ರದೇಶಗಳ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಇದು ಇಲ್ಲಿನ ಉದ್ಯಮಕ್ಕೆ ಉತ್ತೇಜನ ನೀಡುತ್ತದೆ, ಈಗ ಕಾಶ್ಮೀರ ಸೇಬುಗಳು ಕಡಿಮೆ ವೆಚ್ಚದಲ್ಲಿ ದೇಶದ ದೊಡ್ಡ ಮಾರುಕಟ್ಟೆಗಳನ್ನು ತಲುಪಲು ಸಾಧ್ಯವಾಗುತ್ತದೆ, ಅಲ್ಲದೆ ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತದೆ. ಅದು ಒಣ ಹಣ್ಣುಗಳು ಅಥವಾ ಪಾಶ್ಮಿನಾ ಶಾಲುಗಳಾಗಿರಬಹುದು, ಇಲ್ಲಿನ ಕರಕುಶಲ ವಸ್ತುಗಳು ಈಗ ದೇಶದ ಯಾವುದೇ ಭಾಗವನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ಇದು ಜಮ್ಮು-ಕಾಶ್ಮೀರದ ಜನರಿಗೆ ದೇಶದ ಇತರ ಭಾಗಗಳಿಗೆ ಪ್ರಯಾಣಿಸಲು ತುಂಬಾ ಸುಲಭವಾಗುತ್ತದೆ.

ನಾನು ಇಲ್ಲಿನ ಸಂಗಲ್ಡನ್‌ನ ವಿದ್ಯಾರ್ಥಿಯೊಬ್ಬ ಪತ್ರಿಕೆಯಲ್ಲಿ ಬರೆದ ಕಾಮೆಂಟ್  ಓದುತ್ತಿದ್ದೆ. ಆ ವಿದ್ಯಾರ್ಥಿ ಹೇಳಿದ್ದು, ಹಳ್ಳಿಯಿಂದ ಹೊರಗೆ ಹೋಗುತ್ತಿದ್ದ ತನ್ನ ಹಳ್ಳಿಯ ಜನರು ಮಾತ್ರ ಇಲ್ಲಿಯವರೆಗೆ ರೈಲು ನೋಡಿದ್ದಾರೆ. ಹಳ್ಳಿಯ ಹೆಚ್ಚಿನ ಜನರು ರೈಲಿನ ವೀಡಿಯೊವನ್ನು ಮಾತ್ರ ನೋಡಿದ್ದರು. ನಿಜವಾದ ರೈಲು ಅವರ ಕಣ್ಣುಗಳ ಮುಂದೆ ಹಾದುಹೋಗುತ್ತದೆ ಎಂದು ಅವರಿಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಅನೇಕ ಜನರು ನೆನಪಿಸಿಕೊಳ್ಳುತ್ತಿದ್ದಾರೆ ಎಂದು ನಾನು ಓದಿದ್ದೇನೆ. ಇನ್ನೊಬ್ಬ ಮಗಳು ತುಂಬಾ ಒಳ್ಳೆಯ ಮಾತು ಹೇಳಿದಳು, ಅದೇನೆಂದರೆ - ಈಗ ಹವಾಮಾನವು ರಸ್ತೆಗಳು ತೆರೆಯುತ್ತವೆಯೇ ಅಥವಾ ಮುಚ್ಚಲ್ಪಡುತ್ತವೆಯೇ ಎಂದು ನಿರ್ಧರಿಸುವುದಿಲ್ಲ, ಈಗ ಈ ಹೊಸ ರೈಲು ಸೇವೆಯು ಪ್ರತಿ ಋತುವಿನಲ್ಲಿಯೂ ಜನರಿಗೆ ಸಹಾಯ ಮಾಡುತ್ತಲೇ ಇರುತ್ತದೆ.

ಸ್ನೇಹಿತರೆ,

ಜಮ್ಮು-ಕಾಶ್ಮೀರವು ಭಾರತ ಮಾತೆಯ ಕಿರೀಟವಾಗಿದೆ. ಈ ಕಿರೀಟವು ಸುಂದರವಾದ ರತ್ನಗಳಿಂದ ತುಂಬಿದೆ. ಈ ವಿಭಿನ್ನ ರತ್ನಗಳೇ ಜಮ್ಮು-ಕಾಶ್ಮೀರದ ಶಕ್ತಿ. ಇಲ್ಲಿನ ಪ್ರಾಚೀನ ಸಂಸ್ಕೃತಿ, ಇಲ್ಲಿನ ಸಂಪ್ರದಾಯಗಳು, ಇಲ್ಲಿನ ಆಧ್ಯಾತ್ಮಿಕ ಪ್ರಜ್ಞೆ, ಪ್ರಕೃತಿಯ ಸೌಂದರ್ಯ, ಇಲ್ಲಿನ ಗಿಡಮೂಲಿಕೆಗಳ ಜಗತ್ತು, ಹಣ್ಣುಗಳು ಮತ್ತು ಹೂವುಗಳ ಸಮೃದ್ಧಿ, ಇಲ್ಲಿನ ಯುವಕರಲ್ಲಿ ಇರುವ ಪ್ರತಿಭೆ, ನಿಮ್ಮಲ್ಲಿ, ಅದು ಕಿರೀಟದಲ್ಲಿನ ರತ್ನದಂತೆ ಹೊಳೆಯುತ್ತಿದೆ.

 

|

ಸ್ನೇಹಿತರೆ,

ನಾನು ದಶಕಗಳಿಂದ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡುತ್ತಿದ್ದೇನೆ ಎಂಬು ನಿಮಗೆ ಚೆನ್ನಾಗಿ ತಿಳಿದಿದೆ. ಒಳನಾಡಿಗೆ ಭೇಟಿ ನೀಡಲು ಮತ್ತು ವಾಸಿಸಲು ನನಗೆ ಅವಕಾಶ ಸಿಕ್ಕಿದೆ. ನಾನು ಈ ಸಾಮರ್ಥ್ಯವನ್ನು ನಿರಂತರವಾಗಿ ನೋಡಿದ್ದೇನೆ, ಅನುಭವಿಸಿದ್ದೇನೆ.  ಅದಕ್ಕಾಗಿಯೇ ನಾನು ಜಮ್ಮು-ಕಾಶ್ಮೀರದ ಅಭಿವೃದ್ಧಿಯ ಕಡೆಗೆ ಸಂಪೂರ್ಣ ಸಮರ್ಪಣೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ.

ಸ್ನೇಹಿತರೆ,

ಜಮ್ಮು-ಕಾಶ್ಮೀರವು ಭಾರತದ ಶಿಕ್ಷಣ ಮತ್ತು ಸಂಸ್ಕೃತಿಯ ಹೆಮ್ಮೆಯಾಗಿದೆ. ಇಂದು, ನಮ್ಮ ಜಮ್ಮು-ಕಾಶ್ಮೀರ ವಿಶ್ವದ ಅತಿದೊಡ್ಡ ಜ್ಞಾನ ಕೇಂದ್ರಗಳಲ್ಲಿ ಒಂದಾಗುತ್ತಿದೆ, ಆದ್ದರಿಂದ ಭವಿಷ್ಯದಲ್ಲಿ ಜಮ್ಮು-ಕಾಶ್ಮೀರದ ಭಾಗವಹಿಸುವಿಕೆಯೂ ಹೆಚ್ಚಾಗಲಿದೆ. ಇಲ್ಲಿ ಐಐಟಿ, ಐಐಎಂ, ಏಮ್ಸ್ ಮತ್ತು ಎನ್ಐಟಿಯಂತಹ ಸಂಸ್ಥೆಗಳಿವೆ. ಜಮ್ಮು, ಶ್ರೀನಗರದಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳಿವೆ. ಜಮ್ಮು-ಕಾಶ್ಮೀರದಲ್ಲಿ ಸಂಶೋಧನಾ ಪರಿಸರ ವ್ಯವಸ್ಥೆಯೂ ವಿಸ್ತರಿಸುತ್ತಿದೆ.

ಸ್ನೇಹಿತರೆ,

ಅಧ್ಯಯನದ ಜತೆಗೆ, ವೈದ್ಯಕೀಯ ಕ್ಷೇತ್ರಕ್ಕೂ ಇಲ್ಲಿ ಅಭೂತಪೂರ್ವ ಕೆಲಸಗಳು ನಡೆಯುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ, 2 ರಾಜ್ಯ ಮಟ್ಟದ ಕ್ಯಾನ್ಸರ್ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಕಳೆದ 5 ವರ್ಷಗಳಲ್ಲಿ 7 ಹೊಸ ವೈದ್ಯಕೀಯ ಕಾಲೇಜುಗಳನ್ನು ಇಲ್ಲಿ ಪ್ರಾರಂಭಿಸಲಾಗಿದೆ. ವೈದ್ಯಕೀಯ ಕಾಲೇಜು ತೆರೆದಾಗ, ರೋಗಿಗಳು ಮಾತ್ರವಲ್ಲದೆ, ಆ ಪ್ರದೇಶದ ಯುವಕರು ಸಹ ಅದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂಬುದು ನಿಮಗೆ ತಿಳಿದಿದೆ. ಈಗ ಜಮ್ಮು-ಕಾಶ್ಮೀರದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ 500ರಿಂದ 1,300ಕ್ಕೆ ಏರಿದೆ. ಈಗ ರಿಯಾಸಿ ಜಿಲ್ಲೆಗೂ ಹೊಸ ವೈದ್ಯಕೀಯ ಕಾಲೇಜು ಸಿಗಲಿದೆ ಎಂದು ನನಗೆ ಸಂತೋಷವಾಗಿದೆ. ಶ್ರೀ ಮಾತಾ ವೈಷ್ಣೋ ದೇವಿ ವೈದ್ಯಕೀಯ ಶ್ರೇಷ್ಠತಾ ಸಂಸ್ಥೆ, ಇದು ಆಧುನಿಕ ಆಸ್ಪತ್ರೆ ಮಾತ್ರವಲ್ಲ, ಇದು ನಮ್ಮ ದಾನ ಸಂಸ್ಕೃತಿಯ ಉದಾಹರಣೆಯೂ ಆಗಿದೆ. ಈ ವೈದ್ಯಕೀಯ ಕಾಲೇಜನ್ನು ನಿರ್ಮಿಸಲು ಖರ್ಚು ಮಾಡಿದ ಹಣವನ್ನು ಭಾರತದ ಮೂಲೆ ಮೂಲೆಗಳಿಂದ ಮಾತೆ ವೈಷ್ಣೋ ದೇವಿಯ ಪಾದಗಳಿಗೆ ನಮನ ಸಲ್ಲಿಸಲು ಬರುವ ಜನರು ದಾನ ಮಾಡಿದ್ದಾರೆ. ಈ ಪವಿತ್ರ ಕಾರ್ಯಕ್ಕಾಗಿ ಶ್ರೀ ಮಾತಾ ವೈಷ್ಣೋ ದೇವಿ ದೇವಾಲಯ ಮಂಡಳಿ ಮತ್ತು ಅದರ ಅಧ್ಯಕ್ಷ ಮನೋಜ್ ಜಿ ಅವರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಈ ಆಸ್ಪತ್ರೆಯ ಸಾಮರ್ಥ್ಯವನ್ನು 300 ಹಾಸಿಗೆಗಳಿಂದ 500 ಹಾಸಿಗೆಗಳಿಗೆ ಹೆಚ್ಚಿಸಲಾಗುತ್ತಿದೆ. ಕತ್ರಾದಲ್ಲಿ ಮಾತೆ ವೈಷ್ಣೋದೇವಿಯ ದರ್ಶನಕ್ಕೆ ಬರುವ ಜನರಿಗೆ ಇದು ತುಂಬಾ ಅನುಕೂಲಕರವಾಗಿರುತ್ತದೆ.

ಸ್ನೇಹಿತರೆ,

ಕೇಂದ್ರದಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರ 11 ವರ್ಷಗಳಿಂದ ಅಧಿಕಾರದಲ್ಲಿದೆ. ಈ 11 ವರ್ಷಗಳನ್ನು ಬಡವರ ಕಲ್ಯಾಣಕ್ಕಾಗಿ ಮೀಸಲಿಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ 4 ಕೋಟಿ ಬಡವರಿಗೆ ಕಾಂಕ್ರೀಟ್ ಮನೆಯ ಕನಸು ನನಸಾಗಿದೆ. ಉಜ್ವಲ ಯೋಜನೆ 10 ಕೋಟಿ ಅಡುಗೆ ಮನೆಗಳಲ್ಲಿ ಹೊಗೆ ಕೊನೆಗೊಳಿಸಿದೆ, ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. ಆಯುಷ್ಮಾನ್ ಭಾರತ ಯೋಜನೆಯು 5 ಲಕ್ಷ ರೂ.ಗಳಿಂದ 50 ಕೋಟಿ ಬಡವರಿಗೆ ಉಚಿತ ಚಿಕಿತ್ಸೆ ಒದಗಿಸಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯು ಪ್ರತಿ ತಟ್ಟೆಯಲ್ಲಿ ಸಾಕಷ್ಟು ಆಹಾರವನ್ನು ಖಚಿತಪಡಿಸಿದೆ. ಮೊದಲ ಬಾರಿಗೆ, ಜನ್ ಧನ್ ಯೋಜನೆಯು 50 ಕೋಟಿಗೂ ಹೆಚ್ಚು ಬಡವರಿಗೆ ಬ್ಯಾಂಕುಗಳ ಬಾಗಿಲು ತೆರೆದಿದೆ. ಸೌಭಾಗ್ಯ ಯೋಜನೆಯು ಕತ್ತಲೆಯಲ್ಲಿ ವಾಸಿಸುವ 2.5 ಕೋಟಿ ಕುಟುಂಬಗಳಿಗೆ ವಿದ್ಯುತ್ ತಂದಿದೆ. ಸ್ವಚ್ಛ ಭಾರತ ಮಿಷನ್ ಅಡಿ ನಿರ್ಮಿಸಲಾದ 12 ಕೋಟಿ ಶೌಚಾಲಯಗಳು ಜನರನ್ನು ಬಯಲು ಮಲ ವಿಸರ್ಜನೆಯಿಂದ ಮುಕ್ತಗೊಳಿಸಿವೆ. ಜಲಜೀವನ್ ಮಿಷನ್ 12 ಕೋಟಿ ಹೊಸ ಮನೆಗಳಿಗೆ ನಲ್ಲಿ ನೀರು ತಂದಿದ್ದು, ಮಹಿಳೆಯರ ಜೀವನವನ್ನು ಸುಲಭಗೊಳಿಸಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ 10 ಕೋಟಿ ಸಣ್ಣ ರೈತರಿಗೆ ನೇರ ಆರ್ಥಿಕ ನೆರವು ನೀಡಿದೆ.

 

|

ಸ್ನೇಹಿತರೆ,

ಕಳೆದ 11 ವರ್ಷಗಳಲ್ಲಿ ಸರ್ಕಾರದ ಇಂತಹ ಅನೇಕ ಪ್ರಯತ್ನಗಳಿಂದಾಗಿ, 25 ಕೋಟಿಗೂ ಹೆಚ್ಚು ಬಡವರು, ನಮ್ಮದೇ ಬಡ ಸಹೋದರ ಸಹೋದರಿಯರು ಬಡತನದ ವಿರುದ್ಧ ಹೋರಾಡಿದ್ದಾರೆ, 25 ಕೋಟಿ ಬಡವರು ಬಡತನವನ್ನು ಸೋಲಿಸಿ ಜಯಿಸುವ ಮೂಲಕ ಹೊರಬಂದಿದ್ದಾರೆ. ಈಗ ಅವರು ಹೊಸ ಮಧ್ಯಮ ವರ್ಗದ ಭಾಗವಾಗಿದ್ದಾರೆ. ತಮ್ಮನ್ನು ಸಾಮಾಜಿಕ ವ್ಯವಸ್ಥೆಯ ತಜ್ಞರು, ದೊಡ್ಡ ತಜ್ಞರು, ಹಿಂದಿನ ಮತ್ತು ಭವಿಷ್ಯದ ರಾಜಕೀಯದಲ್ಲಿ ಮುಳುಗಿರುವವರು, ದಲಿತರ ಹೆಸರಿನಲ್ಲಿ ರಾಜಕೀಯ ಲಾಭ ಗಳಿಸುತ್ತಿರುವವರು, ನಾನು ಈಗ ಉಲ್ಲೇಖಿಸಿರುವ ಯೋಜನೆಗಳನ್ನು ನೋಡೋಣ. ಈ ಸೌಲಭ್ಯಗಳನ್ನು ಪಡೆದ ಜನರು ಯಾರು, ಸ್ವಾತಂತ್ರ್ಯದ ನಂತರ 7 ದಶಕಗಳ ಕಾಲ ಈ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಜನರು ಯಾರು? ಇವರು ನನ್ನ ದಲಿತ ಸಹೋದರ ಸಹೋದರಿಯರು, ಇವರು ನನ್ನ ಬುಡಕಟ್ಟು ಸಹೋದರ ಸಹೋದರಿಯರು, ಇವರು ನನ್ನ ಹಿಂದುಳಿದ ಸಹೋದರ ಸಹೋದರಿಯರು, ಇವರು ಪರ್ವತಗಳಲ್ಲಿ ವಾಸಿಸುವ ಜನರು, ಇವರು ಕಾಡಿನಲ್ಲಿ ವಾಸಿಸುವ ಜನರು, ಇವರು ತಮ್ಮ ಇಡೀ ಜೀವನವನ್ನು ಕೊಳೆಗೇರಿಗಳಲ್ಲಿ ಕಳೆಯುವ ಜನರು, ಇವರು ಮೋದಿ ತಮ್ಮ 11 ವರ್ಷಗಳನ್ನು ಕಳೆದ ಕುಟುಂಬಗಳು ಇವಾಗಿವೆ. ಕೇಂದ್ರ ಸರ್ಕಾರವು ಈ ಬಡವರಿಗೆ, ಹೊಸ ಮಧ್ಯಮ ವರ್ಗಕ್ಕೆ ಗರಿಷ್ಠ ಶಕ್ತಿ ನೀಡಲು ಪ್ರಯತ್ನಿಸುತ್ತಿದೆ. ಅದು ಒಂದು ಶ್ರೇಣಿ ಒಂದು ಪಿಂಚಣಿಯಾಗಿರಲಿ, 12 ಲಕ್ಷ ರೂ.ವರೆಗೆ ಸಂಬಳವನ್ನು ತೆರಿಗೆ ಮುಕ್ತಗೊಳಿಸುವುದಿರಲಿ, ಮನೆ ಖರೀದಿಸಲು ಆರ್ಥಿಕ ನೆರವು ನೀಡುವುದಿರಲಿ, ಅಗ್ಗದ ವಿಮಾನ ಪ್ರಯಾಣಕ್ಕೆ ಸಹಾಯ ಮಾಡುವುದಿರಲಿ, ಎಲ್ಲ ರೀತಿಯಲ್ಲೂ ಸರ್ಕಾರವು ಬಡವರು ಮತ್ತು ಮಧ್ಯಮ ವರ್ಗದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆಯುತ್ತಿದೆ.

ಸ್ನೇಹಿತರೆ,

ಬಡವರ ಬಡತನ ತೊಡೆದುಹಾಕಲು ಸಹಾಯ ಮಾಡುವುದರ ಜತೆಗೆ ಪ್ರಾಮಾಣಿಕವಾಗಿ ಬದುಕುವ ಮತ್ತು ದೇಶಕ್ಕಾಗಿ ಕಾಲ ಕಾಲಕ್ಕೆ ತೆರಿಗೆ ಪಾವತಿಸುವ ಮಧ್ಯಮ ವರ್ಗದವರ ಸಾಮರ್ಥ್ಯವನ್ನು ಹೆಚ್ಚಿಸುವುದು, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಇದಕ್ಕಾಗಿ ತುಂಬಾ ಕೆಲಸ ಮಾಡಲಾಗಿದೆ, ಅದನ್ನು ನಾವು ಮಾಡಿದ್ದೇವೆ.

ನಮ್ಮ ಯುವಕರಿಗೆ ನಾವು ನಿರಂತರವಾಗಿ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದೇವೆ. ಇದರ ಒಂದು ಪ್ರಮುಖ ಸಾಧನವೆಂದರೆ ಪ್ರವಾಸೋದ್ಯಮ. ಪ್ರವಾಸೋದ್ಯಮವು ಉದ್ಯೋಗವನ್ನು ಒದಗಿಸುತ್ತದೆ, ಪ್ರವಾಸೋದ್ಯಮವು ಜನರನ್ನು ಸಂಪರ್ಕಿಸುತ್ತದೆ. ಆದರೆ ದುರದೃಷ್ಟವಶಾತ್, ನಮ್ಮ ನೆರೆಯ ದೇಶವು ಮಾನವತೆಯ ವಿರುದ್ಧ, ಸಾಮರಸ್ಯದ ವಿರುದ್ಧ, ಪ್ರವಾಸೋದ್ಯಮದ ವಿರುದ್ಧವಾಗಿದೆ, ಇದು ಮಾತ್ರವಲ್ಲ, ಇದು ಬಡವರ ಜೀವನೋಪಾಯಕ್ಕೂ ವಿರುದ್ಧವಾಗಿದೆ. ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದದ್ದು ಇದಕ್ಕೆ ಉದಾಹರಣೆಯಾಗಿದೆ. ಪಾಕಿಸ್ತಾನವು ಪಹಲ್ಗಾಮ್‌ನಲ್ಲಿ ಮಾನವತೆ ಮತ್ತು ಕಾಶ್ಮೀರಿಯತೆ ಎರಡರ ಮೇಲೂ ದಾಳಿ ಮಾಡಿತು. ಭಾರತದಲ್ಲಿ ಗಲಭೆಗಳನ್ನು ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಕಾಶ್ಮೀರದ ಕಷ್ಟಪಟ್ಟು ದುಡಿಯುವ ಜನರ ಗಳಿಕೆಯನ್ನು ನಿಲ್ಲಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿಯೇ ಪಾಕಿಸ್ತಾನ ಪ್ರವಾಸಿಗರ ಮೇಲೆ ದಾಳಿ ಮಾಡಿತು. ಕಳೆದ 4-5 ವರ್ಷಗಳಲ್ಲಿ ನಿರಂತರವಾಗಿ ಬೆಳೆಯುತ್ತಿದ್ದ ಪ್ರವಾಸೋದ್ಯಮ, ಪ್ರತಿ ವರ್ಷ ದಾಖಲೆ ಸಂಖ್ಯೆಯ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದರು. ಜಮ್ಮು-ಕಾಶ್ಮೀರದ ಬಡವರ ಮನೆಗಳನ್ನು ಪೋಷಿಸುವ ಪ್ರವಾಸೋದ್ಯಮವನ್ನು ಪಾಕಿಸ್ತಾನ ಗುರಿಯಾಗಿಸಿಕೊಂಡಿತ್ತು. ಕೆಲವರು ಕುದುರೆ ಸವಾರರು, ಕೆಲವರು ಕೂಲಿಕಾರರು, ಕೆಲವರು ಮಾರ್ಗದರ್ಶಕರು, ಕೆಲವರು ಅತಿಥಿ ಗೃಹ ಮಾಲೀಕರು, ಕೆಲವರು ಅಂಗಡಿ-ಡಾಬಾ ಮಾಲೀಕರು, ಅವರೆಲ್ಲರನ್ನೂ ನಾಶ ಮಾಡುವುದು ಪಾಕಿಸ್ತಾನದ ಪಿತೂರಿಯಾಗಿತ್ತು. ಭಯೋತ್ಪಾದಕರಿಗೆ ಸವಾಲು ಹಾಕಿದ ಯುವಕ ಆದಿಲ್, ಅವನು ಕೂಡ ಅಲ್ಲಿಗೆ ಕೂಲಿ ಕೆಲಸ ಮಾಡಲು ಹೋಗಿದ್ದ, ಆದರೆ ಅವನು ತನ್ನ ಕುಟುಂಬವನ್ನು ನೋಡಿಕೊಳ್ಳಲು ಕೆಲಸ ಮಾಡುತ್ತಿದ್ದ. ಭಯೋತ್ಪಾದಕರು ಆದಿಲ್‌ನನ್ನು ಸಹ ಕೊಂದರು.

ಸ್ನೇಹಿತರೆ,

ಪಾಕಿಸ್ತಾನದ ಈ ಪಿತೂರಿಯ ವಿರುದ್ಧ ಜಮ್ಮು-ಕಾಶ್ಮೀರದ ಜನರು ಎದ್ದು ನಿಂತ ರೀತಿ, ಈ ಬಾರಿ ಜಮ್ಮು-ಕಾಶ್ಮೀರದ ಜನರು ತೋರಿಸಿದ ಶಕ್ತಿ, ಜಮ್ಮು-ಕಾಶ್ಮೀರದ ಜನರು ಪಾಕಿಸ್ತಾನಕ್ಕೆ ಮಾತ್ರವಲ್ಲದೆ, ಇಡೀ ಪ್ರಪಂಚದ ಭಯೋತ್ಪಾದಕ ಮನಸ್ಥಿತಿಗೆ ಬಲವಾದ ಸಂದೇಶ ನೀಡಿದ್ದಾರೆ. ಜಮ್ಮು-ಕಾಶ್ಮೀರದ ಯುವಕರು ಈಗ ಭಯೋತ್ಪಾದನೆಗೆ ಸೂಕ್ತ ಉತ್ತರ ನೀಡಲು ಮನಸ್ಸು ಮಾಡಿದ್ದಾರೆ. ಇದು ಕಣಿವೆಯಲ್ಲಿ ಶಾಲೆಗಳನ್ನು ಸುಟ್ಟು ಹಾಕಿದ ಭಯೋತ್ಪಾದನೆ, ಶಾಲೆಗಳು ಅಥವಾ ಕಟ್ಟಡಗಳನ್ನು ಮಾತ್ರವಲ್ಲ, ಎರಡು ತಲೆಮಾರುಗಳ ಭವಿಷ್ಯವನ್ನು ಸುಟ್ಟು ಹಾಕಿದ ಭಯೋತ್ಪಾದನೆ. ಆಸ್ಪತ್ರೆಗಳು ನಾಶವಾದವು. ಇದು ಅನೇಕ ತಲೆಮಾರುಗಳನ್ನು ಹಾಳು  ಮಾಡಿತು. ಇಲ್ಲಿನ ಜನರು ತಮ್ಮ ಆಯ್ಕೆಯ ಪ್ರತಿನಿಧಿಗಳನ್ನು ಆಯ್ಕೆ ಮಾಡಬಹುದು, ಇಲ್ಲಿ ಚುನಾವಣೆಗಳನ್ನು ನಡೆಸಬಹುದು, ಇದು ಕೂಡ ಭಯೋತ್ಪಾದನೆಯಿಂದಾಗಿ ದೊಡ್ಡ ಸವಾಲಾಗಿತ್ತು.

 

|

ಸ್ನೇಹಿತರೆ,

ವರ್ಷಗಳ ಕಾಲ ಭಯೋತ್ಪಾದನೆಯನ್ನು ಸಹಿಸಿಕೊಂಡ ನಂತರ, ಜಮ್ಮು-ಕಾಶ್ಮೀರವು ತುಂಬಾ ವಿನಾಶ ಕಂಡಿತ್ತು, ಜಮ್ಮು-ಕಾಶ್ಮೀರದ ಜನರು ಕನಸು ಕಾಣುವುದನ್ನು ನಿಲ್ಲಿಸಿ, ಭಯೋತ್ಪಾದನೆಯನ್ನು ತಮ್ಮ ಹಣೆಬರಹವೆಂದು ಒಪ್ಪಿಕೊಂಡಿದ್ದರು. ಈ ಪರಿಸ್ಥಿತಿಯಿಂದ ಜಮ್ಮು-ಕಾಶ್ಮೀರವನ್ನು ಹೊರತರುವುದು ಅಗತ್ಯವಾಗಿತ್ತು, ಈಗ ನಾವು ಅದನ್ನು ಮಾಡಿದ್ದೇವೆ. ಇಂದು, ಜಮ್ಮು-ಕಾಶ್ಮೀರದ ಯುವಕರು ಹೊಸ ಕನಸುಗಳನ್ನು ಕಾಣುತ್ತಿದ್ದಾರೆ, ಅವುಗಳನ್ನು ನನಸಾಗಿಸುತ್ತಿದ್ದಾರೆ. ಈಗ ಕಾಶ್ಮೀರದ ಯುವಕರು ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳು, ಸಿನಿಮಾ ಮಂದಿರಗಳು ಗಿಜಿಗುಡುತ್ತಿರುವುದನ್ನು ನೋಡಿ ಸಂತೋಷಪಡುತ್ತಿದ್ದಾರೆ. ಇಲ್ಲಿನ ಜನರು ಜಮ್ಮು-ಕಾಶ್ಮೀರ ಮತ್ತೆ ಚಲನಚಿತ್ರ ಚಿತ್ರೀಕರಣದ ಪ್ರಮುಖ ಕೇಂದ್ರವಾಗುವುದನ್ನು ನೋಡಲು ಬಯಸುತ್ತಾರೆ, ಈ ಪ್ರದೇಶವು ಕ್ರೀಡಾ ಕೇಂದ್ರವಾಗುವುದನ್ನು ನೋಡಲು ಬಯಸುತ್ತಾರೆ. ಮಾತೆ ಖೀರ್ ಭವಾನಿ ಜಾತ್ರೆಯಲ್ಲೂ ನಾವು ಅದೇ ಭಾವನೆ ನೋಡಿದ್ದೇವೆ. ಸಾವಿರಾರು ಜನರು ಮಾತೆ ದೇವಾಲಯವನ್ನು ತಲುಪಿದ ರೀತಿ, ಇದು ಹೊಸ ಜಮ್ಮು-ಕಾಶ್ಮೀರದ ಚಿತ್ರವನ್ನು ತೋರಿಸುತ್ತಿದೆ. ಈಗ ಅಮರನಾಥ ಯಾತ್ರೆಯೂ 3ರಿಂದ ಪ್ರಾರಂಭವಾಗಲಿದೆ. ಎಲ್ಲೆಡೆ ಈದ್‌ನ ಸಂಭ್ರಮವನ್ನು ನಾವು ನೋಡುತ್ತಿದ್ದೇವೆ. ಜಮ್ಮು-ಕಾಶ್ಮೀರದಲ್ಲಿ ಸೃಷ್ಟಿಯಾದ ಅಭಿವೃದ್ಧಿ ವಾತಾವರಣವು ಪಹಲ್ಗಾಮ್ ದಾಳಿಯಿಂದ ಅಲುಗಾಡುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿರುವ ನಿಮ್ಮೆಲ್ಲರಿಗೂ ಮತ್ತು ನಿಮ್ಮೆಲ್ಲರಿಗೂ ನರೇಂದ್ರ ಮೋದಿ ಅವರು ನೀಡಿರುವ ಭರವಸೆಯೆಂದರೆ, ಅಭಿವೃದ್ಧಿ ಇಲ್ಲಿಗೆ ನಿಲ್ಲಲು ನಾನು ಬಿಡುವುದಿಲ್ಲ. ಇಲ್ಲಿನ ಯುವಕರು ತಮ್ಮ ಕನಸುಗಳನ್ನು ನನಸಾಗಿಸಲು ಯಾವುದೇ ಅಡಚಣೆ ಎದುರಾದರೆ, ಆ ಅಡಚಣೆಯನ್ನು ಎದುರಿಸುವ ಮೊದಲ ವ್ಯಕ್ತಿ ಮೋದಿ ಆಗಿದ್ದಾರೆ.

 

ಸ್ನೇಹಿತರೆ,

ಇಂದು ಜೂನ್ 6, ಒಂದು ತಿಂಗಳ ಹಿಂದೆ, ನಿಖರವಾಗಿ 1 ತಿಂಗಳ ಹಿಂದೆ, ಮೇ 6ರ ಆ ರಾತ್ರಿ, ಪಾಕಿಸ್ತಾನದ ಭಯೋತ್ಪಾದಕರು ನಾಶವಾದರು ಎಂಬುದನ್ನು ನೆನಪಿಡಿ. ಈಗ ಪಾಕಿಸ್ತಾನ ಆಪರೇಷನ್ ಸಿಂದೂರ್ ಹೆಸರನ್ನು ಕೇಳಿದಾಗಲೆಲ್ಲಾ, ಅದು ತನ್ನ ನಾಚಿಕೆಗೇಡಿನ ಸೋಲನ್ನು ನೆನಪಿಸಿಕೊಳ್ಳುತ್ತದೆ. ಪಾಕಿಸ್ತಾನದ ಸೈನ್ಯ ಮತ್ತು ಭಯೋತ್ಪಾದಕರ ಮೇಲೆ ಭಾರತವು ಪಾಕಿಸ್ತಾನದೊಳಗೆ ನೂರಾರು ಕಿಲೋಮೀಟರ್ ಹೋಗಿ ಈ ರೀತಿ ದಾಳಿ ಮಾಡುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಅವರು ವರ್ಷಗಳ ಕಠಿಣ ಪರಿಶ್ರಮದಿಂದ ನಿರ್ಮಿಸಿದ್ದ ಭಯೋತ್ಪಾದನೆಯ ಕಟ್ಟಡಗಳು ಕೆಲವೇ ನಿಮಿಷಗಳಲ್ಲಿ ಅವಶೇಷಗಳಾಗಿ ಮಾರ್ಪಟ್ಟಿವೆ. ಇದನ್ನು ನೋಡಿದ ಪಾಕಿಸ್ತಾನವು ತುಂಬಾ ಉದ್ರಿಕ್ತವಾಯಿತು. ಜಮ್ಮು, ಪೂಂಚ್ ಮತ್ತು ಇತರ ಜಿಲ್ಲೆಗಳ ಜನರ ಮೇಲೂ ತನ್ನ ಕೋಪವನ್ನು ಹೊರಹಾಕಿತು. ಪಾಕಿಸ್ತಾನವು ಇಲ್ಲಿ ಮನೆಗಳನ್ನು ಹೇಗೆ ನಾಶಪಡಿಸಿತು, ಮಕ್ಕಳ ಮೇಲೆ ಶೆಲ್‌ಗಳನ್ನು ಎಸೆದಿತು, ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಾಶ ಮಾಡಿತು, ದೇವಾಲಯಗಳು, ಮಸೀದಿಗಳು ಮತ್ತು ಗುರುದ್ವಾರಗಳನ್ನು ನಾಶ ಮಾಡಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಪಾಕಿಸ್ತಾನದ ದಾಳಿಯನ್ನು ನೀವು ಹೇಗೆ ಎದುರಿಸಿದ್ದೀವಿ ಎಂಬುದನ್ನು ದೇಶದ ಪ್ರತಿಯೊಬ್ಬ ನಾಗರಿಕನು ನೋಡಿದ್ದಾನೆ. ಅದಕ್ಕಾಗಿಯೇ ದೇಶದ ಪ್ರತಿಯೊಬ್ಬ ನಾಗರಿಕನು ತಮ್ಮ ಕುಟುಂಬಗಳೊಂದಿಗೆ ಪೂರ್ಣ ಶಕ್ತಿಯಿಂದ ನಿಂತಿದ್ದಾನೆ.

ಸ್ನೇಹಿತರೆ,

ಕೆಲವು ದಿನಗಳ ಹಿಂದೆ, ಗಡಿಯಾಚೆಗಿನ ಗುಂಡಿನ ದಾಳಿಯಲ್ಲಿ ಮಡಿದವರ ಕುಟುಂಬ ಸದಸ್ಯರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸಲಾಯಿತು. ಶೆಲ್ ದಾಳಿಯಿಂದ ಹಾನಿಗೊಳಗಾದ 2 ಸಾವಿರಕ್ಕೂ ಹೆಚ್ಚು ಕುಟುಂಬಗಳ ನೋವು ನಮ್ಮದೇ ನೋವು. ಶೆಲ್ ದಾಳಿಯ ನಂತರ ಈ ಕುಟುಂಬಗಳಿಗೆ ಅವರ ಮನೆಗಳನ್ನು ದುರಸ್ತಿ ಮಾಡಲು ಆರ್ಥಿಕ ಸಹಾಯ ನೀಡಲಾಯಿತು. ಈಗ ಕೇಂದ್ರ ಸರ್ಕಾರವು ಈ ಸಹಾಯವನ್ನು ಮತ್ತಷ್ಟು ಹೆಚ್ಚಿಸಲು ನಿರ್ಧರಿಸಿದೆ. ಇಂದಿನ ಕಾರ್ಯಕ್ರಮದಲ್ಲಿ, ನಾನು ನಿಮಗೆ ಇದರ ಬಗ್ಗೆ ಮಾಹಿತಿ ನೀಡಲು ಬಯಸುತ್ತೇನೆ.

ಸ್ನೇಹಿತರೆ,

ಈಗ, ವ್ಯಾಪಕ ಹಾನಿಗೊಳಗಾದ ಮನೆಗಳಿಗೆ 2 ಲಕ್ಷ ರೂ. ಮತ್ತು ಭಾಗಶಃ ಹಾನಿಗೊಳಗಾದ ಮನೆಗಳಿಗೆ 1 ಲಕ್ಷ ರೂ. ಅನ್ನು ಹೆಚ್ಚುವರಿ ಸಹಾಯವಾಗಿ ನೀಡಲಾಗುವುದು. ಇದರರ್ಥ ಈಗ ಅವರು ಮೊದಲ ಬಾರಿಗೆ ಸಹಾಯದ ನಂತರ ಈ ಹೆಚ್ಚುವರಿ ಮೊತ್ತ ಪಡೆಯುತ್ತಾರೆ.

 

|

ಸ್ನೇಹಿತರೆ,

ನಮ್ಮ ಸರ್ಕಾರವು ಗಡಿಯಲ್ಲಿ ವಾಸಿಸುವ ಜನರನ್ನು ದೇಶದ ಮೊದಲ ಕಾವಲುಗಾರರೆಂದು ಪರಿಗಣಿಸುತ್ತದೆ. ಕಳೆದ ದಶಕದಲ್ಲಿ, ಗಡಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಮತ್ತು ಭದ್ರತೆಗಾಗಿ ಸರ್ಕಾರವು ಅಭೂತಪೂರ್ವ ಕೆಲಸ ಮಾಡಿದೆ, ಈ ಅವಧಿಯಲ್ಲಿ ಸುಮಾರು 10 ಸಾವಿರ ಹೊಸ ಬಂಕರ್‌ಗಳನ್ನು ನಿರ್ಮಿಸಲಾಗಿದೆ. ಆಪರೇಷನ್ ಸಿಂದೂರ್ ನಂತರ ಸೃಷ್ಟಿಯಾದ ಪರಿಸ್ಥಿತಿಯಲ್ಲಿ ಜೀವಗಳನ್ನು ಉಳಿಸುವಲ್ಲಿ ಈ ಬಂಕರ್‌ಗಳು ಬಹಳಷ್ಟು ಸಹಾಯ ಮಾಡಿವೆ. ಜಮ್ಮು-ಕಾಶ್ಮೀರ ವಿಭಾಗಕ್ಕೆ ಎರಡು ಗಡಿ ಬೆಟಾಲಿಯನ್‌ಗಳನ್ನು ರಚಿಸಲಾಗಿದೆ ಎಂಬುದನ್ನು ಹೇಳಲು ನನಗೆ ಸಂತೋಷವಾಗಿದೆ. ಎರಡು ಮಹಿಳಾ ಬೆಟಾಲಿಯನ್‌ಗಳನ್ನು ಸ್ಥಾಪಿಸುವ ಕೆಲಸವೂ ಪೂರ್ಣಗೊಂಡಿದೆ.

ಸ್ನೇಹಿತರೆ,

ನಮ್ಮ ಅಂತಾರಾಷ್ಟ್ರೀಯ ಗಡಿಯ ಸಮೀಪವಿರುವ ದೂರದ ಪ್ರದೇಶಗಳಲ್ಲಿಯೂ ಸಹ, ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಹೊಸ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ. ಕಥುವಾ-ಜಮ್ಮು ಹೆದ್ದಾರಿಯನ್ನು 6 ಪಥದ ಎಕ್ಸ್‌ಪ್ರೆಸ್‌ವೇ ಮಾಡಲಾಗುತ್ತಿದೆ, ಅಖ್ನೂರ್‌ನಿಂದ ಪೂಂಚ್‌ಗೆ ಹೆದ್ದಾರಿಯನ್ನು ಸಹ ವಿಸ್ತರಿಸಲಾಗುತ್ತಿದೆ. ರೋಮಾಂಚನಕಾರಿ ಗ್ರಾಮ ಕಾರ್ಯಕ್ರಮದಡಿ,  ಗಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲಾಗುತ್ತಿದೆ. ಎಲ್ಲಾ ಹವಾಮಾನ ಸಂಪರ್ಕ ಹೊಂದಿರದ ಜಮ್ಮು-ಕಾಶ್ಮೀರದ 400 ಹಳ್ಳಿಗಳನ್ನು 1,800 ಕಿಲೋಮೀಟರ್ ಹೊಸ ರಸ್ತೆಗಳನ್ನು ನಿರ್ಮಿಸುವ ಮೂಲಕ ಸಂಪರ್ಕಿಸಲಾಗುತ್ತಿದೆ. ಸರ್ಕಾರ ಇದಕ್ಕಾಗಿ 4,200 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಿದೆ.

ಸ್ನೇಹಿತರೆ,

ಇಂದು ನಾನು ಜಮ್ಮು-ಕಾಶ್ಮೀರದ ಜನರಿಗೆ, ವಿಶೇಷವಾಗಿ ಇಲ್ಲಿನ ಯುವಕರಿಗೆ ಮತ್ತು ಜಮ್ಮು-ಕಾಶ್ಮೀರದ ಭೂಮಿಯಿಂದ, ನಾನು ದೇಶಕ್ಕೂ ಒಂದು ವಿಶೇಷ ಮನವಿ ಮಾಡಲು ಬಂದಿದ್ದೇನೆ. ಆಪರೇಷನ್ ಸಿಂದೂರ್ ಸ್ವಾವಲಂಬಿ ಭಾರತದ ಶಕ್ತಿಯನ್ನು ಹೇಗೆ ತೋರಿಸಿದೆ ಎಂಬುದನ್ನು ನೀವು ನೋಡಿದ್ದೀರಿ. ಇಂದು ಜಗತ್ತು ಭಾರತದ ರಕ್ಷಣಾ ಪರಿಸರ ವ್ಯವಸ್ಥೆಯ ಬಗ್ಗೆ ಚರ್ಚಿಸುತ್ತಿದೆ. ಇದರ ಹಿಂದೆ ಒಂದೇ ಒಂದು ಕಾರಣವಿದೆ, ನಮ್ಮ ಪಡೆಗಳು 'ಮೇಕ್ ಇನ್ ಇಂಡಿಯಾ'ದಲ್ಲಿ ನಂಬಿಕೆ ಇಟ್ಟಿವೆ. ಈಗ ಪ್ರತಿಯೊಬ್ಬ ಭಾರತೀಯರು ಪಡೆಗಳು ಮಾಡಿದ್ದನ್ನು ಪುನರಾವರ್ತಿಸಬೇಕು. ಈ ವರ್ಷದ ಬಜೆಟ್‌ನಲ್ಲಿ, ನಾವು ಮಿಷನ್ ಮ್ಯಾನುಫ್ಯಾಕ್ಚರಿಂಗ್ ಘೋಷಿಸಿದ್ದೇವೆ. ಈ ಮಿಷನ್ ಅಡಿ, ಸರ್ಕಾರವು ಉತ್ಪಾದನೆಗೆ ಹೊಸ ಉತ್ತೇಜನ ನೀಡಲು ಕೆಲಸ ಮಾಡುತ್ತಿದೆ. ಜಮ್ಮು-ಕಾಶ್ಮೀರದ ಯುವಕರಿಗೆ ನಾನು ಹೇಳಲು ಬಯಸುತ್ತೇನೆ, ಬನ್ನಿ, ಈ ಮಿಷನ್‌ನ ಭಾಗವಾಗಿರಿ. ದೇಶಕ್ಕೆ ನಿಮ್ಮ ಆಧುನಿಕ ಚಿಂತನೆ ಬೇಕು, ದೇಶಕ್ಕೆ ನಿಮ್ಮ ನಾವೀನ್ಯತೆ ಬೇಕು. ನಿಮ್ಮ ಆಲೋಚನೆಗಳು, ನಿಮ್ಮ ಕೌಶಲ್ಯಗಳು ಭಾರತದ ಭದ್ರತೆ ಮತ್ತು ಭಾರತದ ಆರ್ಥಿಕತೆಗೆ ಹೊಸ ಎತ್ತರವನ್ನು ನೀಡುತ್ತವೆ. ಕಳೆದ 10 ವರ್ಷಗಳಲ್ಲಿ, ಭಾರತವು ದೊಡ್ಡ ರಕ್ಷಣಾ ಸಾಮಗ್ರಿಗಳ ರಫ್ತುದಾರನಾಗಿದೆ. ಈಗ ನಮ್ಮ ಗುರಿ ಭಾರತದ ಹೆಸರನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಸೇರಿಸುವುದಾಗಿದೆ. ನಾವು ಈ ಗುರಿಯತ್ತ ವೇಗವಾಗಿ ಸಾಗಿದಷ್ಟೂ, ಭಾರತದಲ್ಲಿ ಲಕ್ಷಾಂತರ ಹೊಸ ಉದ್ಯೋಗಾವಕಾಶಗಳು ವೇಗವಾಗಿ ಸೃಷ್ಟಿಯಾಗುತ್ತವೆ.

 

|

ಸ್ನೇಹಿತರೆ,

ನಾವು ಮೊದಲು ಭಾರತದಲ್ಲಿ ತಯಾರಾದ ಮತ್ತು ನಮ್ಮ ದೇಶವಾಸಿಗಳ ಬೆವರು ಹರಿಸುವ ಉತ್ಪನ್ನಗಳನ್ನು ಮಾತ್ರ ಖರೀದಿಸಬೇಕು ಎಂದು ಸಂಕಲ್ಪ ತೊಡಬೇಕು. ಇದು ದೇಶಭಕ್ತಿ, ಇದು ರಾಷ್ಟ್ರ ಸೇವೆ. ಗಡಿಯಲ್ಲಿ ನಮ್ಮ ಪಡೆಗಳ ಗೌರವ ಹೆಚ್ಚಿಸಬೇಕು, ಮಾರುಕಟ್ಟೆಯಲ್ಲಿ ಮೇಡ್ ಇನ್ ಇಂಡಿಯಾದ ಹೆಮ್ಮೆಯನ್ನು ಹೆಚ್ಚಿಸಬೇಕು.

 

|

ಜಮ್ಮು-ಕಾಶ್ಮೀರಕ್ಕೆ ಸುವರ್ಣ ಮತ್ತು ಉಜ್ವಲ ಭವಿಷ್ಯ ಕಾಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುತ್ತಿವೆ, ಪರಸ್ಪರ ಬೆಂಬಲಿಸುತ್ತಿವೆ. ನಾವು ಮುಂದುವರಿಯುತ್ತಿರುವ ಶಾಂತಿ ಮತ್ತು ಸಮೃದ್ಧಿಯ ಹಾದಿಯನ್ನು ನಾವು ನಿರಂತರವಾಗಿ ಬಲಪಡಿಸಬೇಕು. ಮಾತೆ ವೈಷ್ಣೋ ದೇವಿಯ ಆಶೀರ್ವಾದದೊಂದಿಗೆ, ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಜಮ್ಮು-ಕಾಶ್ಮೀರದ ಈ ಸಂಕಲ್ಪವು ಈಡೇರಲಿ. ಈ ಆಶಯದೊಂದಿಗೆ, ಈ ಹಲವಾರು ಅಭಿವೃದ್ಧಿ ಯೋಜನೆಗಳು ಮತ್ತು ಅನೇಕ ಅದ್ಭುತ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ನಿಮ್ಮ ಎರಡೂ ಮುಷ್ಟಿಗಳನ್ನು ಮುಚ್ಚಿ ಮತ್ತು ನಿಮ್ಮೆಲ್ಲಾ ಶಕ್ತಿಯಿಂದ ನನ್ನೊಂದಿಗೆ ಹೇಳಿ –

ಭಾರತ್ ಮಾತಾ ಕಿ ಜೈ! ಭಾರತದ ಪ್ರತಿಯೊಂದು ಮೂಲೆಯಲ್ಲೂ ಧ್ವನಿ ಪ್ರತಿಧ್ವನಿಸಬೇಕು.

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ತುಂಬಾ ಧನ್ಯವಾದಗಳು!

 

  • Gaurav munday June 19, 2025

    💚🌸🌸
  • Soumen Pal June 18, 2025

    Modi ji zindabad
  • Prafulla bhanudas bhalshankar June 18, 2025

    दहशतवाद्यांचे तुकडे करून टाकणारे प्रधानमंत्री नरेंद्र मोदी जी
  • ram Sagar pandey June 18, 2025

    🌹🙏🏻🌹जय श्रीराम🙏💐🌹🌹🌹🙏🙏🌹🌹जय श्रीकृष्णा राधे राधे 🌹🙏🏻🌹जय माँ विन्ध्यवासिनी👏🌹💐🌹🌹🙏🙏🌹🌹🌹🙏🏻🌹जय श्रीराम🙏💐🌹🌹🌹🙏🙏🌹🌹जय माता दी 🚩🙏🙏ॐनमः शिवाय 🙏🌹🙏जय कामतानाथ की 🙏🌹🙏🌹🌹🙏🙏🌹🌹जय श्रीराम 🙏💐🌹🌹🌹🙏🙏🌹🌹🌹🙏🏻🌹जय श्रीराम🙏💐🌹जय माता दी 🚩🙏🙏
  • Polamola Anji June 18, 2025

    bjp🔥🔥
  • Polamola Anji June 18, 2025

    bjp🔥
  • Virudthan June 17, 2025

    🔴🔴🔴🔴Retail inflation dropped to 2.82% in May 2025, lowest in 75 months, driven by stable food prices & favorable base effects.
  • Virudthan June 17, 2025

    🔴🔴🔴🔴 India's retail inflation in May 2025 declined to 2.82%, the lowest since February 2019, driven by a significant drop in food inflation. #RetailInflation #IndianEconomy
  • khaniya lal sharma June 17, 2025

    🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️🕉️
  • SUNIL CHAUDHARY KHOKHAR BJP June 17, 2025

    17/06/2025
Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Indian IPO market heads for busiest week with $1.7 billion in deals

Media Coverage

Indian IPO market heads for busiest week with $1.7 billion in deals
NM on the go

Nm on the go

Always be the first to hear from the PM. Get the App Now!
...
Bihar will prosper and will also play a big role in the prosperity of the country: PM Modi in Siwan
June 20, 2025
QuoteBihar will prosper and will also play a big role in the prosperity of the country: PM
QuoteA record 25 crore Indians have defeated poverty in the last decade: PM
QuoteBihar will become a big center of Made in India,today, the first engine from the Marhowra Locomotive Factory is being exported to Africa: PM

भारत माता की जय!

भारत माता की जय!

भारत माता की जय!

रऊआ सब लोगन के प्रणाम कर तानी। बाबा महेंद्र नाथ, बाबा हंसनाथ, सोहगरा धाम, मां थावे भवानी, मां अंबिका भवानी, प्रथम राष्ट्रपति देशरत्न डॉ राजेंद्र प्रसाद अऊरी लोकनायक जयप्रकाश नारायण के पावन भूमि पर रऊआ सब के अभिनंदन कर तानी!

बिहार के राज्यपाल श्रीमान आरिफ मोहम्मद खान जी, यहां की जनता की सेवा में समर्पित मुख्यमंत्री श्रीमान नीतीश कुमार जी, केंद्रीय मंत्रिमंडल में मेरे साथी जीतन राम मांझी जी, गिरिराज सिंह जी, ललन सिंह जी, चिराग पासवान जी, रामनाथ ठाकुर जी, नित्‍यानंद राय जी, सतीश चंद्र दुबे जी, राजभूषण चौधरी जी, बिहार के उपमुख्यमंत्री सम्राट चौधरी जी, विजय कुमार सिन्हा जी, संसद के मेरे साथी उपेंद्र कुशवाहा जी, बिहार बीजेपी के अध्यक्ष दिलीप जायसवाल जी, अन्य मंत्रीगण, सांसद और विधायक गण और मेरे प्यारे बिहार के भाइयों और बहनों!

सिवान की ये धरती हमारे स्वतंत्रता संग्राम की प्रेरक स्‍थली है। यह हमारे लोकतंत्र को, देश को, संविधान को ताकत देने वाली भूमि है। सिवान ने राजेंद्र बाबू जैसी महान संतान देश को दी। संविधान निर्माण से लेकर देश को दिशा दिखाने में राजेंद्र बाबू की बहुत बड़ी भूमिका रही। सिवान ने ब्रज किशोर प्रसाद जी जैसी महान समाज सुधारक भी देश को दिए। ब्रज बाबू ने महिला सशक्तिकरण को अपने जीवन का मकसद बनाया था।

|

साथियों,

मुझे खुशी है ऐसी ही महान आत्माओं के जीवन मिशन को एनडीए की यह डबल इंजन सरकार दृढ़ निश्‍चय के साथ आगे बढ़ा रही है। आज का यह कार्यक्रम इन्हीं प्रयासों का हिस्सा है। आज इस मंच से हजारों करोड़ रुपए की योजनाओं का शिलान्यास और लोकार्पण हुआ है। विकास की ये सारी परियोजनाएं बिहार को उज्ज्वल भविष्‍य की तरफ ले जाएगी, समृद्ध बिहार बनाएगी। सिवान, सासाराम, बक्सर, मोतिहारी, बेतिया और आरा जैसे बिहार के सारे इलाके फलें-फूलें, इस दिशा में ये प्रोजेक्ट बड़ी भूमिका निभाएंगे। इनसे गरीब, वंचित, दलित, महादलित, पिछड़े, अति पिछड़े, हर समाज का जीवन आसान होगा। मैं बिहार की जनता को, आप सभी को इन प्रोजेक्‍ट्स के लिए बहुत-बहुत बधाई देता हूं। मैं अभी जब आप लोगों के बीच से आ रहा था, अभी कल ही बारिश हुई। सुबह भी थोड़ा बारिश का लाभ आया, इसके बावजूद भी इतनी बड़ी मात्रा में आपका आना, हमें आशीर्वाद देना, मैं आपका हृदय से जितना धन्यवाद करूं, उतना कम है।

भाइयों और बहनों,

जैसा आप सब जानते हैं, मैं कल ही विदेश से लौटा हूं। इस दौरे में मेरी दुनिया के बड़े-बड़े समृद्ध देशों के नेताओं से बात हुई। सारे नेता भारत की तेज प्रगति से बहुत प्रभावित हैं। वो भारत को दुनिया की तीसरी बड़ी आर्थिक महाशक्ति बनते देख रहे हैं और निश्चित तौर पर इसमें बिहार की बहुत बड़ी भूमिका होने वाली है। बिहार समृद्ध होगा और देश की समृद्धि में भी बड़ी भूमिका निभाएगा।

साथियों,

मेरे इस विश्वास का कारण बिहार के आप सभी लोगों का सामर्थ्य है। आपने मिलकर बिहार में जंगलराज का सफाया किया है। यहां के हमारे नौजवानों ने तो 20 साल पहले के बिहार की बदहाली सिर्फ किस्सों और कथाओं में ही सुनी है। उन्हें बहुत अंदाजा नहीं है कि जंगलराज वालों ने बिहार की क्या हालत बना दी थी। जिस बिहार ने सदियों तक भारत की प्रगति को नेतृत्व दिया, उसको पंजे और लालटेन के शिकंजे ने पलायन का प्रतीक बना दिया था।

|

साथियों,

बिहार के रहने वाले हर व्यक्ति के लिए सबसे बड़ी बात होती है, उसका स्‍वाभिमान। मेरे बिहारी भाई-बहन कठिन से कठिन परिस्थिति में काम करके दिखा देते हैं। वह कभी अपने स्वाभिमान से समझौता नहीं करते। लेकिन पंजे और लालटेन वालों ने मिलकर बिहार के स्वाभिमान को बहुत ठेस पहुंचाई। इन लोगों ने ऐसी लूट-खसोट मचाई की गरीबी बिहार का दुर्भाग्य बन गई। अनेक चुनौतियों को पार करते हुए नीतीश जी के नेतृत्व में NDA सरकार बिहार को विकास की पटरी पर वापस लाई है और मैं बिहारवासियों को विश्वास देने आया हूं, हमने भले ही बहुत कुछ किया हो, करते रहे हैं, करते रहेंगे, लेकिन इतने से शांत होकर के चुप रहने वाला मोदी नहीं है, अब बहुत हो गया, बहुत कर लिया जी नहीं, मुझे तो बिहार के लिए और भी बहुत कुछ करना है, आपके लिए करना है, यहां के गांव-गांव के लिए करना है, यहां के घर-घर के लिए करना है, यहां के हर नौजवान के लिए करना है। अगर मैं सिर्फ बीते 10-11 साल की बात करूं तो इन 10 वर्षों में बिहार में करीब 55 हजार किलोमीटर ग्रामीण सड़कें बनी हैं, डेढ़ करोड़ से ज्यादा घरों को बिजली के कनेक्शन से जोड़ा गया है, डेढ़ करोड़ लोगों को, वहां के घरों को पानी का कनेक्शन दिया गया है, 45 हजार से ज्यादा कॉमन सर्विस सेंटर्स बनाए गए हैं, आज बिहार के छोटे-छोटे शहरों में नए-नए स्टार्ट-अप्स खुल रहे हैं।

साथियों,

बिहार की प्रगति की ये गति लगातार बढ़ती है, इसको बढ़ाते रहना है और इसी समय बिहार में जंगलराज लाने वाले मौका देख रहे हैं कि किसी भी तरह फिर से अपने पुराने कारनामे करने का मौका ढूंढ रहे हैं। बिहार के आर्थिक संसाधनों पर कब्जा करें, इसके लिए वो तरह-तरह के हथकंडे अपना रहे हैं, इसलिए मेरे बिहार के प्यारे भाइयों-बहनों, आप के उज्ज्वल भविष्‍य के लिए, आपके बच्‍चों के उज्ज्वल भविष्‍य के लिए, आपको बहुत ही सतर्क रहना है। समृद्ध बिहार की यात्रा पर ब्रेक लगाने के लिए तैयार बैठे लोगों को कोसों दूर रखना है।

साथियों,

गरीबी हटाओ के नारे हमारे देश ने दशकों तक सुने हैं, आपकी दो-दो, तीन-तीन पीढ़ी ने गरीबी हटाओ! गरीबी हटाओ! हर चुनाव में, ये आकर के बोलते थे। लेकिन जब आपने हमें मौका दिया, एनडीए को मौका दिया, तो NDA सरकार ने दिखाया है कि गरीबी कम भी हो सकती है। बीते एक दशक में रिकॉर्ड 25 करोड़ भारतीयों ने गरीबी को पराजित किया है। वर्ल्ड बैंक जैसी दुनिया की जानी-मानी संस्थाएं, भारत की इस बड़ी उपलब्धि की प्रशंसा कर रही हैं। और भारत ने जो ये कमाल किया है, इसमें बिहार का यहां हमारे नीतीश जी की सरकार का बहुत बड़ा योगदान है। पहले बिहार की आधे से अधिक आबादी, बहुत अधिक गरीब की श्रेणी में आती थी। लेकिन बीते दशक में बिहार के करीब पौने चार करोड़ साथियों ने खुद को गरीबी से मुक्त किया है।

|

साथियों,

आज़ादी के इतने दशकों तक भी इतने लोग गरीब थे, नारे गूंजते रहे, गरीबी बढ़ती रही और ये इसलिए नहीं हुआ कि बिहार के लोगों की मेहनत में कोई कमी थी, देशवासियों की मेहनत में कोई कमी थी। बल्कि इसलिए क्योंकि इनके सामने आगे बढ़ने का कोई रास्ता नहीं था। लंबे समय तक कांग्रेस के लाइसेंस राज ने देश को गरीब रखा और गरीब को अति गरीबी में धकेल दिया। जब हर चीज के लिए कोटा-परमिट फिक्स था। छोटे-छोटे काम करने के लिए परमिट चाहिए होता था। कांग्रेस-RJD के राज में गरीब को घर नहीं मिलता था, राशन, बिचौलिए खा जाते थे, इलाज गरीब की पहुंच से दूर था, पढ़ाई और कमाई के लिए संघर्ष था, बिजली-पानी का एक कनेक्शन लगाने के लिए ही सरकारी दफ्तरों के अनगिनत चक्कर लगाने पड़ते थे। गैस कनेक्शन के लिए सांसदों की सिफारिश लगानी पड़ती थी। नौकरी बिना घूस, बिना सिफारिश के मिलती ही नहीं थी। और इसके सबसे बड़े भुक्तभोगी कौन थे, इनमें से ज्यादातर साथी मेरे दलित समाज के, महादलित समाज के, पिछड़े समाज के, अति पिछड़े समाज के यही मेरे भाई-बहन इसके शिकार हुए थे। इन्हें गरीबी हटाने का सपना दिखाकर खुद कुछ परिवार करोड़पति-अरबपति हो गए।

साथियों,

बीते 11 वर्षों से हमारी सरकार, गरीब के रास्ते की हर मुश्किल को दूर करने में जुटी है और आगे भी करती रहेगी और इतनी मेहनत करते हैं, तब ऐसे अच्‍छे परिणाम आज देखने को मिल रहे हैं। अब जैसे गरीबों के लिए आवास हैं, अभी जिन परिवारों को मुझे आवास की चाबी देने का मुझे मौका मिला, वह इतने आशीर्वाद दे रहे थे, उनके चेहरे पर इतना संतोष था, भाव-विभोर थे।

साथियों,

बीते दशक में देशभर में चार करोड़ से अधिक गरीबों को पक्के घर मिल चुके हैं। मैं आपको पूछूं, जवाब देंगे आप लोग? मैं अगर पूछूं, तो आप जवाब देंगे? मैंने अभी कहा, चार करोड़ लोगों को यानी चार करोड़ परिवारों को पक्के घर, कितने लोगों को, जरा जोर से बोलिए कितने लोगों को? चार करोड़! आप कल्पना कीजिए, चार करोड़ लोगों को पक्के घर मिलना, सिर्फ वह चार दीवारें नहीं हैं, उन घरों में सपने सजते हैं, उन घरों में संकल्प पलते हैं। आने वाले समय में तीन करोड़ और पक्के घर तैयार होने जा रहे हैं। मैंने पहले कहा ना, सेवा के काम में मैं रुकने वाला नहीं हूं। जितना हुआ, पहले वालों से बहुत अच्छा हुआ, फिर भी मोदी चैन की नींद नहीं सोएगा, वह दिन-रात काम करता रहेगा, आपके लिए करता रहेगा क्योंकि आप मेरे परिवार के सदस्य हैं और मेरे परिवार का एक भी सदस्य पीछे न रहे, दुखिया न रहे, यह मैं सपना लेकर के चला हूं। इसका बहुत अधिक फायदा बिहार के मेरे गरीब भाई-बहन, दलित भाई-बहन, महादलित भाई-बहन, पिछड़े भाई-बहन, अति पिछड़े भाई-बहन, ये सारी जो योजनाएं चला रहा हूं, सबसे पहले फायदा इनको मिल रहा है। बिहार में पीएम आवास योजना से 57 लाख से ज्यादा पक्के घर बने हैं। यहां सिवान जिले में भी गरीबों के एक लाख दस हजार से ज्यादा पक्के घर बन चुके हैं, मैं एक जिले की बात बोल रहा हूं और ये काम निरंतर जारी है। आज भी बिहार के 50 हज़ार से अधिक परिवारों के लिए घर की किश्त जारी की गई है। और जानते हैं, मेरे लिए दोहरी खुशी किस बात की है? ये घर ज्यादातर माताओं-बहनों के नाम पर हैं, मेरी जिन बहनों-बेटियों के नाम पर कभी कोई भी संपत्ति नहीं होती थी, अब वो अपने घर की मालकिन बन रही हैं।

|

साथियों,

हमारी सरकार घर के साथ-साथ मुफ्त राशन, बिजली और पानी की सुविधा भी दे रही है। बीते सालों में देशभर में 12 करोड़ से अधिक नए परिवारों के घर नल पहुंचा है। इसमें सिवान के भी साढ़े चार लाख से अधिक परिवारों को पहली बार नल से जल मिला है। गांवों में हर घर में नल हो, शहरों में पीने के लिए पर्याप्त पानी हो, हम इस लक्ष्य को लेकर काम कर रहे हैं। बीते सालों में बिहार के अनेक शहरों के लिए पानी की पाइप लाइन और सीवेज ट्रीटमेंट प्रोजेक्ट बनाए गए। अब दर्जनों और शहरों के लिए पाइप लाइन और सीवेज ट्रीटमेंट प्लांट्स स्वीकृत किए गए हैं। ये सारे प्रोजेक्ट, गरीब और मध्यम वर्ग के परिवारों का जीवन और बेहतर बनाएंगे।

भाइयों और बहनों,

आरजेडी-कांग्रेस की करतूतें, इनके कारनामे, बिहार विरोधी हैं, निवेश विरोधी हैं। जब भी अपने मुंह से ये लोग विकास की बात करते हैं, तो लोगों को दुकान-कारोबार, उद्योग-धंधे, सब में ताले लटकते नजर आते हैं। इसलिए, ये बिहार के नौजवानों के दिल में कभी भी जगह नहीं बना पाए। ये लोग, बेहाल इंफ्रास्ट्रक्चर, माफिया राज, गुंडाराज और भ्रष्टाचार के पोषक रहे हैं।

|

साथियों,

बिहार का प्रतिभाशाली नौजवान आज जमीन पर होने वाले काम देख रहा है, उसे परख रहा है। NDA, कैसा बिहार बना रही है, इसका उदाहरण मढ़ौरा रेल फैक्ट्री है। आज मढ़ौरा की लोकोमोटिव फैक्ट्री से पहला इंजन, अफ्रीका को एक्सपोर्ट किया जा रहा है। यह आप ही का जाएगा, वहां की गाड़ी को खींचेगा। आप सोचिए, अफ्रीका में भी बिहार की जय-जयकार होने वाली है। ये फैक्ट्री उसी सारण जिले में बनी है, जिसको पंजे और आरजेडी वालों ने पिछड़ा कहकर अपने हाल पर छोड़ दिया था। आज ये जिला दुनिया के मैन्युफैक्चरिंग और एक्सपोर्ट मैप पर अपनी जगह बना चुका है। जंगलराज वालों ने तो बिहार का विकास इंजन ही ठप कर दिया था, अब बिहार में बना इंजन, अफ्रीका की रेल चलाएगा। ये बहुत बड़े गर्व की बात है, मुझे पक्का विश्वास है बिहार, मेड इन इंडिया का एक बड़ा सेंटर बनेगा। यहां का मखाना, यहां के फल-सब्जियां तो बाहर जाएंगी ही, बिहार के कारखानों में बनने वाला सामान भी दुनिया के बाज़ारों तक पहुंचेगा। बिहार के नौजवान जो सामान बनाएंगे, वो आत्मनिर्भर भारत को ताकत देगा।

साथियों,

इसमें बिहार में बन रहा आधुनिक इंफ्रास्ट्रक्चर बहुत काम आएगा। आज बिहार में रोड, रेल, हवाई यात्रा और जलमार्ग, हर प्रकार के इंफ्रास्ट्रक्चर पर अभूतपूर्व निवेश हो रहा है। बिहार को लगातार नई ट्रेनें मिल रही हैं। यहां वंदे भारत जैसी आधुनिक ट्रेनें चल रही हैं। आज हम एक और बड़ी शुरुआत करने जा रहे हैं। सावन शुरु होने से पहले आज बाबा हरिहरनाथ की धरती, वंदे भारत ट्रेन से बाबा गोरखनाथ की धरती से जुड़ गई है। पटना से गोरखपुर की नई वंदे भारत ट्रेन, पूर्वांचल के शिव भक्तों को मिली नई सवारी है। ये ट्रेन भगवान बुद्ध की तपोभूमि को, उनकी महापरिनिर्वाण भूमि कुशीनगर से जोड़ने का भी माध्यम है।

|

साथियों,

ऐसे प्रयासों से बिहार में उद्योग-धंधों को तो बल मिलेगा ही, इससे पर्यटन को सबसे अधिक फायदा होगा। इससे दुनिया के टूरिज्म मैप में भी बिहार और अधिक निखर कर सामने आएगा। यानी बिहार के नौजवानों के लिए रोजगार के अनगिनत अवसर बनने वाले हैं।

साथियों,

देश में सबको आगे बढ़ने के अवसर मिले, किसी के साथ भी भेदभाव न हो, ये हमारे संविधान की भावना है। हम भी इसी भाव से कहते हैं- सबका साथ, सबका विकास। लेकिन ये लालटेन और पंजे वाले कहते हैं- परिवार का साथ, परिवार का विकास। हम कहते हैं- सबका साथ, सबका विकास। वह कहते हैं- परिवार का साथ, परिवार का विकास। इनकी राजनीति का कुल जमा निचोड़ यही है। अपने-अपने परिवारों के हित के लिए ये देश के, बिहार के करोड़ों परिवारों का अहित करने से भी नहीं चूकते हैं। खुद बाबा साहेब अंबेडकर भी इस प्रकार की राजनीति के बिल्कुल खिलाफ थे। इसलिए ये लोग कदम-कदम पर बाबा साहेब का अपमान करते हैं। अभी पूरे देश ने देखा है कि RJD वालों ने बाबा साहेब की तस्वीर के साथ क्या व्यवहार किया हैं। मैं देख रहा था, बिहार में पोस्टर लगे हैं कि बाबा साहेब के अपमान पर माफी मांगो, लेकिन मैं जानता हूं, ये लोग कभी माफी नहीं मांगेंगे, क्योंकि इन लोगों के मन में दलित, महादलित, पिछड़े, अति पिछड़े के प्रति कोई सम्मान नहीं है। आरजेडी और कांग्रेस बाबा साहेब अंबेडकर की तस्वीर को पैरों में रखती है, जबकि मोदी बाबा साहेब अंबेडकर को अपने दिल में रखता है। बाबा साहेब का अपमान करके ये लोग खुद को बाबा साहेब से भी बड़ा दिखाना चाहते हैं। बिहार के लोग बाबा साहेब का ये अपमान कभी नहीं भूलेंगे।

|

साथियों,

बिहार की तेज प्रगति के लिए जो लॉन्चिंग पैड चाहिए, वो नीतीश जी के प्रयासों से तैयार हो चुका है। अब एनडीए को मिलकर, बिहार को तरक्की की नई बुलंदी देनी है। मुझे बिहार के नौजवानों पर भरोसा है। हम सभी मिलकर बिहार का प्राचीन गौरव फिर लौटाएंगे, बिहार को विकसित भारत का मजबूत इंजन बनाएंगे, इसी विश्वास के साथ, आप सभी को विकास कार्यों की फिर से अनेक-अनेक शुभकामनाएं। मेरे साथ दोनों मुट्ठी बंद करके हाथ ऊपर करके बोलिए, भारत माता की जय! जिसके पास तिरंगा है, वह तिरंगा लहराएंगे।

भारत माता की जय!

भारत माता की जय!

भारत माता की जय!

बहुत-बहुत धन्यवाद!

|