ವಡೋದರ ಮುಂಬೈ ವಲಯದ ರಾಷ್ಟ್ರೀಯ ಮಹತ್ವದ ಎಕ್ಸ್‌ ಪ್ರೆಸ್‌ ಹೆದ್ದಾರಿ ದೇಶಕ್ಕೆ ಸರ್ಮಪಣೆ
ಕಕ್ರಾಪರ್‌ ಅಣು ಇಂಧನ ಕೇಂದ್ರದಲ್ಲಿ ಎರಡು ಹೊಸ ಒತ್ತಡದ ಭಾರೀ ಜಲ ರಿಯಾಕ್ಟರ್‌ ಗಳು ದೇಶಕ್ಕೆ ಅರ್ಪಣೆ : ಕೆಎಪಿಎಸ್‌ -3 ಮತ್ತು ಕೆಎಪಿಎಸ್‌ -4
ನವ್ಸಾರಿಯಲ್ಲಿ ಪಿಎಂ ಮಿತ್ರ ಪಾರ್ಕ್‌ ನಿರ್ಮಾಣ ಕಾಮಗಾರಿ ಆರಂಭ
ಸೂರತ್‌ ನಗರ ಪಾಲಿಕೆ, ಸೂರತ್‌ ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಡ್ರೀಮ್‌ ಸಿಟಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ
ರಸ್ತೆ, ರೈಲು, ಶಿಕ್ಷಣ ಮತ್ತು ನೀರು ಪೂರೈಕೆ ಯೋಜನೆಗಳಿಗೆ ಶಿಲಾನ್ಯಾಸ
“ನವಸಾರಿಯಲ್ಲಿರುವುದು ಯಾವಾಗಲೂ ಒಂದು ದೊಡ್ಡ ಭಾವನೆ. ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿರುವುದರಿಂದ ಗುಜರಾತ್‌ ನ ಅಭಿವೃದ್ಧಿಯಾನವನ್ನು ಬಲಗೊಳಿಸಲಿದೆ”
“ಎಲ್ಲಿ ಇತರರ ವಾಗ್ದಾನ ಅಸ್ತಿತ್ವದಲ್ಲಿಲ್ಲವೋ ಅಲ್ಲಿ ಮೋದಿ ಗ್ಯಾರೆಂಟಿ ಪ್ರಾರಂಭವಾಗಲಿದೆ”
“ಅದು ಬಡವರು ಇಲ್ಲವೆ ಮಧ್ಯಮ ವರ್ಗದವರು ಅಥವಾ ಗ್ರಾಮೀಣ, ನಗರ ಪ್ರದೇಶವಿರಬಹುದು, ನಾಗರಿಕರ ಜೀವನದ ಗುಣಮಟ್ಟ ಸುಧಾರಿಸುವುದು ನಮ್ಮ ಸರ್ಕಾರದ ಪ್ರಯತ್ನವಾಗಿದೆ
“ಇಂದು ದೇಶದ ಸಣ್ಣ ನಗರಗಳಲ್ಲಿಯೂ ಅತ್ಯುತ್ತಮ ಮೂಲ ಸೌಕರ್ಯ ಸಂಪರ್ಕ ಕಲ್ಪಿಸಲಾಗುತ್ತಿದೆ”
“ಜಗತ್ತು ಇಂದು ಡಿಜಿಟಲ್‌ ಇಂಡಿಯಾಗೆ ಮಾನ್ಯತೆ ನೀಡಿದೆ”

ಭಾರತ್ ಮಾತಾ ಕೀ ಜೈ!

ಭಾರತ್ ಮಾತಾ ಕೀ ಜೈ!

ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ರಾಜ್ಯ ಸರ್ಕಾರದ ಗೌರವಾನ್ವಿತ ಸಚಿವರೆ, ನನ್ನ ಸಂಸದೀಯ ಸಹೋದ್ಯೋಗಿಗಳೆ, ಇಲ್ಲಿನ ಜನಪ್ರತಿನಿಧಿಗಳೆ ಮತ್ತು ಗುಜರಾತ್‌ನ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸಿ.ಆರ್. ಪಾಟೀಲ್ ಜಿ, ಗೌರವಾನ್ವಿತ ಸಂಸದರೆ, ಶಾಸಕರೆ ಮತ್ತು ನನ್ನ ಪ್ರೀತಿಯ ಸಹೋದರ ಸಹೋದರಿಯರೆ, ನೀವೆಲ್ಲರೂ ಹೇಗಿದ್ದೀರಾ?

ಗುಜರಾತ್‌ನಲ್ಲಿಂದು ಇದು ನನ್ನ 3ನೇ ಕಾರ್ಯಕ್ರಮವಾಗಿದೆ. ಈ ಮುಂಜಾನೆ, ಗುಜರಾತಿನಾದ್ಯಂತ ಪಶುಸಂಗೋಪನೆ ಮತ್ತು ಡೇರಿ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ವ್ಯಕ್ತಿಗಳನ್ನು ಅಹಮದಾಬಾದ್‌ನಲ್ಲಿ ಭೇಟಿಯಾಗಿ ಸಂವಾದ ನಡೆಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಅದರ ನಂತರ, ಮೆಹ್ಸಾನಾದ ವಲಿನಾಥ ದೇವಾಲಯದ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸುವ ಗೌರವ ನನಗೆ ಸಿಕ್ಕಿತು. ಈಗ, ನವಸಾರಿಯಲ್ಲಿ ಅಭಿವೃದ್ಧಿಯಲ್ಲಿನ ಪ್ರಗತಿ ಆಚರಿಸಲು ನಿಮ್ಮೆಲ್ಲರೊಂದಿಗೆ ಸೇರಿರುವುದಕ್ಕೆ ನಾನು ಸಂತೋಷಪಡುತ್ತೇನೆ. ಭೂಪೇಂದ್ರ ಭಾಯ್ ಪ್ರಸ್ತಾಪಿಸಿದಂತೆ, ಬಹುಶಃ ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ, ಗಣನೀಯ ಮೊತ್ತದ ಇಂತಹ ವ್ಯಾಪಕ ಅಭಿವೃದ್ಧಿ ಕಾರ್ಯಗಳನ್ನು ಒಂದೇ ಬಾರಿಗೆ ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ, ಅಭಿವೃದ್ಧಿಯ ಈ ಭವ್ಯವಾದ ಆಚರಣೆಯ ಉತ್ಸಾಹದಲ್ಲಿ, ವಿಕಾಸ್ ಉತ್ಸವದ (ಅಭಿವೃದ್ಧಿ ಉತ್ಸವ) ಭಾಗವಾಗುವಂತೆ ನಾನು ನಿಮ್ಮಲ್ಲಿ ಪ್ರತಿಯೊಬ್ಬರನ್ನು, ನಿಮ್ಮ ಮೊಬೈಲ್ ಫೋನ್‌ಗಳನ್ನು ಹೊರತೆಗೆದು ಅವುಗಳ ಬ್ಯಾಟರಿ ಆನ್ ಮಾಡಲು ಒತ್ತಾಯಿಸುತ್ತೇನೆ. ಭಾರತ್ ಮಾತಾ ಕಿ ಜೈ... ಈ ಕ್ಷಣವನ್ನು ಉತ್ಸಾಹದಿಂದ ತುಂಬಿಸೋಣ. ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಭಾರತ್ ಮಾತಾ ಕೀ ಜೈ! ಚೆನ್ನಾಗಿದೆ. ಇಂದು ನವಸಾರಿಯಲ್ಲಿ ವಜ್ರವೊಂದು ಹೊಳೆಯುತ್ತಿರುವಂತೆ ಭಾಸವಾಗುತ್ತಿದೆ. ಇತ್ತೀಚೆಗೆ, ವಡೋದರಾ, ನವಸಾರಿ, ಭರೂಚ್, ಸೂರತ್ ಮತ್ತು ಇತರ ಪ್ರದೇಶಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದ ಹೊಸ ಯೋಜನೆಗಳು ಜವಳಿ, ವಿದ್ಯುತ್ ಮತ್ತು ನಗರಾಭಿವೃದ್ಧಿ ವಲಯವನ್ನು ವ್ಯಾಪಿಸಿವೆ. ಒಟ್ಟಾರೆಯಾಗಿ 40 ಸಾವಿರ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆಗಳು.

 

ಸ್ನೇಹಿತರೆ,

ಪ್ರಸ್ತುತ ರಾಷ್ಟ್ರಾದ್ಯಂತ, ಸಂಸತ್ತಿನಲ್ಲಿ ಮತ್ತು ಹಾದಿ ಬೀದಿಗಳಲ್ಲಿ ಒಂದೇ ರೀತಿಯ ಚರ್ಚೆ ನಡೆಯುತ್ತಿದೆ. ಆ ಚರ್ಚೆ “ಮೋದಿ ಅವರ ಗ್ಯಾರಂಟಿ” ಸುತ್ತ ಸುತ್ತಿದೆ. ಮೋದಿ ಏನೇ ಭರವಸೆ ನೀಡಿದರೂ ಅದನ್ನು ಈಡೇರಿಸುತ್ತಾರೆ ಎಂಬುದನ್ನು ಪ್ರತಿಯೊಬ್ಬ ನಾಗರಿಕನೂ ಒಪ್ಪಿಕೊಳ್ಳುತ್ತಿದ್ದಾರೆ. ಬಹುಶಃ ಇದು ದೇಶದ ಉಳಿದ ಭಾಗಗಳಿಗೆ ಹೊಸ ಪರಿಕಲ್ಪನೆಯಾಗಿದೆ. ಆದರೆ ಗುಜರಾತ್ ಜನರಿಗೆ ಮೋದಿ ಅವರ ಮಾತು ಅವರ ಬಂಧ - ಭರವಸೆಗಳನ್ನು ಈಡೇರಿಸುವ ಭರವಸೆ ಎಂಬುದು ಹಲವುವರ್ಷಗಳ ಹಿಂದಿನಿಂದಲೇ ತಿಳಿದಿದ್ದಾರೆ. ನಾನು ಗುಜರಾತಿನಲ್ಲಿದ್ದಾಗ ಆಗಾಗ ಫೈವ್ ಎಫ್‌ಗಳ ಬಗ್ಗೆ ಮಾತನಾಡುತ್ತಿದ್ದೆ, ನೆನಪಿದೆಯೇ? ಈ 5 ಎಫ್‌ಗಳು "ಫಾರ್ಮ್‌ನಿಂದ ಫೈಬರ್, ಫೈಬರ್‌ನಿಂದ ಫ್ಯಾಕ್ಟರಿ, ಫ್ಯಾಕ್ಟರಿಯಿಂದ ಫ್ಯಾಶನ್, ಫ್ಯಾಶನ್‌ನಿಂದ ಫಾರಿನ್‌" ಪ್ರಯಾಣವನ್ನು ಪ್ರತಿನಿಧಿಸುತ್ತವೆ. ಅಂದರೆ, ರೈತ ಹತ್ತಿ ಬೆಳೆಯುತ್ತಾನೆ, ಹತ್ತಿ ಕಾರ್ಖಾನೆಗೆ ಹೋಗುತ್ತದೆ, ಕಾರ್ಖಾನೆಯಲ್ಲಿ ಮಾಡಿದ ಎಳೆಗಳನ್ನು ಉಡುಪುಗಳಾಗಿ ಮಾಡಲಾಗುತ್ತದೆ, ಈ ಉಡುಪುಗಳನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.

ಜವಳಿ ವಲಯದಲ್ಲಿ ಸಂಪೂರ್ಣ ಪೂರೈಕೆ ಮತ್ತು ಮೌಲ್ಯ ಸರಪಳಿ ಸ್ಥಾಪಿಸುವುದು ನನ್ನ ದೃಷ್ಟಿಯಾಗಿತ್ತು. ಇದು ಸಂಭವಿಸಬೇಕು, ಸರಿ? ಇಂದು, ನಾವು ಸ್ವಾವಲಂಬಿ ಭಾರತವನ್ನು ಬೆಳೆಸಲು ಇದೇ ರೀತಿಯ ಕಾರ್ಯತಂತ್ರಗಳನ್ನು ಜಾರಿಗೆ ತರುತ್ತಿದ್ದೇವೆ. ನವಸಾರಿಯಲ್ಲಿ ಪಿಎಂ ಮಿತ್ರ ಪಾರ್ಕ್ ಉದ್ಘಾಟನೆ, ಇದು ಜವಳಿ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲನೆಯದು. ಈ ಗುರಿಯತ್ತ ಮಹತ್ವದ ಹೆಜ್ಜೆಯಾಗಿದೆ. ಈ ಉಪಕ್ರಮವು ಜವಳಿ ಉದ್ಯಮವನ್ನು ಉತ್ತೇಜಿಸುತ್ತದೆ, ಜವಳಿ ರಫ್ತಿನಲ್ಲಿ ಭಾರತದ ಪಾಲನ್ನು ಹೆಚ್ಚಿಸುತ್ತದೆ. ಜಾಗತಿಕ ಫ್ಯಾಷನ್ ಮಾರುಕಟ್ಟೆಯಲ್ಲಿ ಗುಜರಾತ್‌ನ ಪ್ರಾಮುಖ್ಯತೆಯನ್ನು ಪ್ರದರ್ಶಿಸುವ ಸೂರತ್‌ನ ವಜ್ರಗಳು ಮತ್ತು ನವಸಾರಿಯ ಉಡುಪುಗಳನ್ನು ನೀವೇ ಊಹಿಸಿ. ಗುಜರಾತಿನ ಪ್ರತಿಧ್ವನಿ ಪ್ರಪಂಚದಾದ್ಯಂತ ಪ್ರತಿಧ್ವನಿಸುವುದನ್ನು ನಾವು ಕೇಳುತ್ತಿಲ್ಲವೇ?

ಸ್ನೇಹಿತರೆ,

ಇಂದು ಮೂಲಭೂತವಾಗಿ, ಸೂರತ್ ಸಿಲ್ಕ್ ಸಿಟಿ ತನ್ನ ವ್ಯಾಪ್ತಿಯನ್ನು ನವಸಾರಿಗೆ ವಿಸ್ತರಿಸುತ್ತಿದೆ. ಭಾರತವು ಈ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಉತ್ಪಾದಕರು ಮತ್ತು ರಫ್ತುದಾರರಿಗೆ ಪ್ರತಿಸ್ಪರ್ಧಿಯಾಗಲು ಪ್ರಾರಂಭಿಸಿದೆ. ಗುಜರಾತ್‌ನ ಜವಳಿ ಉದ್ಯಮವು ಈ ಸಾಧನೆಗೆ ಮಹತ್ವದ ಕೊಡುಗೆ ನೀಡಿದೆ. ಅನೇಕ ವರ್ಷಗಳಿಂದ, ಸೂರತ್‌ನ ಜವಳಿ ತನ್ನದೇ ಆದ ಬಲವಾದ ಗುರುತು ಸ್ಥಾಪಿಸಿದೆ. ಒಮ್ಮೆ ಪಿಎಂ ಮಿತ್ರ ಪಾರ್ಕ್ ಇಲ್ಲಿ ಪೂರ್ಣಗೊಂಡರೆ, ಈ ಸಂಪೂರ್ಣ ಪ್ರದೇಶದ ಭೂದೃಶ್ಯವು ಪರಿವರ್ತನೆಗೆ  ಒಳಗಾಗುತ್ತದೆ. ಈ ಪಾರ್ಕ್ ನಿರ್ಮಾಣಕ್ಕೆ ಬರೋಬ್ಬರಿ 3000 ಕೋಟಿ ರೂಪಾಯಿ ಹೂಡಿಕೆ ಮಾಡಲಾಗುವುದು. ನೂಲುವ, ನೇಯ್ಗೆ, ಜಿನ್ನಿಂಗ್, ಗಾರ್ಮೆಂಟ್ ಉತ್ಪಾದನೆ, ತಾಂತ್ರಿಕ ಜವಳಿ ಮತ್ತು ಜವಳಿ ಯಂತ್ರೋಪಕರಣಗಳಂತಹ ಚಟುವಟಿಕೆಗಳನ್ನು ಒಳಗೊಂಡಿರುವ ಮೌಲ್ಯ ಸರಪಳಿ ಪರಿಸರ ವ್ಯವಸ್ಥೆಯನ್ನು ಇಲ್ಲಿ ಸ್ಥಾಪಿಸಲಾಗುವುದು. ಇದರರ್ಥ ಸಾವಿರಾರು ಕುಶಲಕರ್ಮಿಗಳು ಮತ್ತು ಕಾರ್ಮಿಕರು ಇಲ್ಲಿ ಕೆಲಸ ಮಾಡಲು ಅವಕಾಶ ಹೊಂದಿರುತ್ತಾರೆ. ಹೆಚ್ಚುವರಿಯಾಗಿ, ಉದ್ಯಾನವನವು ವಸತಿ, ಸರಕು ಸಾಗಣೆ ಅಥವಾ ಲಾಜಿಸ್ಟಿಕ್ಸ್ ಪಾರ್ಕ್, ಗೋದಾಮಿನ ಸೌಲಭ್ಯಗಳು, ಆರೋಗ್ಯ ಸೇವೆಗಳು ಮತ್ತು ಕಾರ್ಮಿಕರಿಗೆ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಂತಹ ಸೌಕರ್ಯಗಳನ್ನು ಒಳಗೊಂಡಿರುತ್ತದೆ. ಈ ಉದ್ಯಾನವನವು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಸೂಚಿಸುತ್ತದೆ.

 

ಸ್ನೇಹಿತರೆ,

ಇಂದು ಸೂರತ್ ಜನತೆಗೆ ಮತ್ತೊಂದು ಮಹತ್ವದ ಯೋಜನೆ ಆರಂಭವಾಗಿದೆ. 800 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಾಪಿ ನದಿ ಬ್ಯಾರೇಜ್‌ಗೆ ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ತಾಪಿ ನದಿಯ ಬ್ಯಾರೇಜ್‌ ನಿರ್ಮಾಣವು ಮುಂದಿನ ಹಲವು ವರ್ಷಗಳಿಂದ ಸೂರತ್‌ನಲ್ಲಿ ನೀರಿನ ಪೂರೈಕೆಯ ದೀರ್ಘಕಾಲದ ಸವಾಲನ್ನು ಪರಿಹರಿಸುತ್ತದೆ. ಇದು ಪ್ರವಾಹದಂತಹ ಬೆದರಿಕೆಗಳನ್ನು ತಗ್ಗಿಸಲು ಸಹ ಸಹಾಯ ಮಾಡುತ್ತದೆ.

ಸ್ನೇಹಿತರೆ,

ಸಾಮಾಜಿಕ ಜೀವನ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ವಿದ್ಯುಚ್ಛಕ್ತಿಯ ಮಹತ್ವವನ್ನು ಗುಜರಾತ್ ಅರ್ಥ ಮಾಡಿಕೊಂಡಿದೆ. 20ರಿಂದ 25 ವರ್ಷಗಳ ಹಿಂದೆ, ಗುಜರಾತ್ ಸುದೀರ್ಘ ವಿದ್ಯುತ್ ಕಡಿತ ಎದುರಿಸಿತು. ಪ್ರಸ್ತುತ 25-30 ವರ್ಷ ವಯಸ್ಸಿನ ಯುವಕರಿಗೆ ನಾವು ಅನುಭವಿಸಿದ ಕರಾಳ ಕಾಲದ ಬಗ್ಗೆ ತಿಳಿದಿದಿಲ್ಲ. ನಾನು ಮುಖ್ಯಮಂತ್ರಿಯ ಹುದ್ದೆ ವಹಿಸಿಕೊಂಡಾಗ, ಜನರು ವಿಶೇಷವಾಗಿ ಸಂಜೆ ಊಟದ ಸಮಯದಲ್ಲಿ ವಿದ್ಯುತ್ತಿಗಾಗಿ ನನ್ನ ಬಳಿಗೆ ಬರುತ್ತಿದ್ದರು. ಆ ದಿನಗಳಲ್ಲಿ ಅಂತಹ ಸಂಕಷ್ಟ ಪರಿಸ್ಥಿತಿಗಳು ಇದ್ದವು ಎಂದು ನಂಬುವುದು ಕಷ್ಟ. ಆ ಸಮಯದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಹಲವಾರು ಸವಾಲುಗಳಿದ್ದವು. ಕಲ್ಲಿದ್ದಲನ್ನು ದೂರದ ಸ್ಥಳಗಳಿಂದ ಪಡೆಯಬೇಕಾಗಿತ್ತು ಅಥವಾ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿತ್ತು. ಅನಿಲ-ಉತ್ಪಾದಿತ ವಿದ್ಯುತ್ ಕೂಡ ಆಮದು ಅವಲಂಬಿಸಿದೆ. ನೀರಿನಿಂದ ವಿದ್ಯುತ್ ಉತ್ಪಾದಿಸುವುದು ಕಾರ್ಯಸಾಧ್ಯವಾದ ಆಯ್ಕೆಯಾಗಿರಲಿಲ್ಲ. ಈ ಬಿಕ್ಕಟ್ಟುಗಳ ನಡುವೆ ಗುಜರಾತ್‌ನ ಅಭಿವೃದ್ಧಿ ಅಸಂಭವನೀಯವೆನಿಸಿತ್ತು. ಆದರೆ, ಮೋದಿ ಈ ಅಡೆತಡೆಗಳನ್ನು ನಿವಾರಿಸಲು ನಿರ್ಧರಿಸಿದ್ದರು. ಹೀಗಾಗಿ, ಗುಜರಾತ್‌ನಲ್ಲಿನ ವಿದ್ಯುತ್ ಬಿಕ್ಕಟ್ಟನ್ನು ನೀಗಿಸಲು ನಾವು ಆಧುನಿಕ ತಂತ್ರಜ್ಞಾನ ಅಳವಡಿಕೆಗೆ ಆದ್ಯತೆ ನೀಡಿದ್ದೇವೆ. ಸೌರ ಮತ್ತು ಪವನ ಶಕ್ತಿಯು ನಮ್ಮ ಕಾರ್ಯತಂತ್ರದ ಕೇಂದ್ರ ಬಿಂದುಗಳಾಗಿವೆ. ಇಂದು, ಗುಜರಾತ್ ಸೌರ ಮತ್ತು ಗಾಳಿ ಮೂಲಗಳಿಂದ ಗಮನಾರ್ಹ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಸ್ನೇಹಿತರೆ,

21 ನೇ ಶತಮಾನದ ಭಾರತಕ್ಕೆ ವಿದ್ಯುತ್ ಸರಬರಾಜು ಮಾಡುವಲ್ಲಿ ನಮ್ಮ ಪರಮಾಣು ವಿದ್ಯುತ್ ಸ್ಥಾವರಗಳ ಪಾತ್ರವು ಮತ್ತಷ್ಟು ವಿಸ್ತರಿಸಲಿದೆ. ಇಂದು ತಾಪಿಯ ಕಕ್ರಾಪರ್ ಅಣು ವಿದ್ಯುತ್ ಸ್ಥಾವರದಲ್ಲಿ 2 ಹೊಸ ರಿಯಾಕ್ಟರ್‌ಗಳನ್ನು ಉದ್ಘಾಟಿಸಲಾಗಿದೆ. ಈ ಎರಡೂ ರಿಯಾಕ್ಟರ್‌ಗಳನ್ನು 'ಮೇಡ್ ಇನ್ ಇಂಡಿಯಾ' ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ. ಒಮ್ಮೆ ಭಾರತ್ ಮಾತಾ ಕೀ ಜೈ ಎಂದು ಜಪಿಸೋಣ, ಈ ಸ್ವಾವಲಂಬನೆಗಾಗಿ ಹೆಮ್ಮೆಯಿಂದ ಕೈ ಎತ್ತೋಣ - ಭಾರತ್ ಮಾತಾ ಕೀ ಜೈ! ಇದು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆಯತ್ತ ಭಾರತದ ಪಯಣವನ್ನು ಒತ್ತಿ ಹೇಳುತ್ತದೆ. ಈ ಬೆಳವಣಿಗೆಯೊಂದಿಗೆ ಗುಜರಾತ್ ಈ ಸ್ಥಾವರದಿಂದ ಹೆಚ್ಚಿನ ವಿದ್ಯುತ್ ಪೂರೈಕೆ ಪಡೆಯುತ್ತದೆ. ಜತೆಗೆ, ಅದರ ಕೈಗಾರಿಕಾ ಬೆಳವಣಿಗೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ.

 

ಸ್ನೇಹಿತರೆ,

ಅದು ನವಸಾರಿಯೇ ಆಗಿರಲಿ ಅಥವಾ ವಲ್ಸಾದ್ ಆಗಿರಲಿ, ದಕ್ಷಿಣ ಗುಜರಾತ್ ಪ್ರದೇಶವು ಪ್ರಸ್ತುತ ಅಭೂತಪೂರ್ವ ಅಭಿವೃದ್ಧಿಯನ್ನು ಅನುಭವಿಸುತ್ತಿದೆ. ಇಲ್ಲಿನ ಮೂಲಸೌಕರ್ಯಗಳನ್ನು ನಿರಂತರವಾಗಿ ಆಧುನೀಕರಣಗೊಳಿಸಲಾಗುತ್ತಿದೆ. ಸೌರಶಕ್ತಿಯ ಬಗ್ಗೆ ಹೇಳುವುದಾದರೆ, ನಮ್ಮ ಗುಜರಾತ್ ಅನ್ನು ನಾವು ಪರಿಗಣಿಸಿದಾಗ, ನಮ್ಮ ಗುಜರಾತಿಗಳು ಹಣಕಾಸಿನ ವಿಷಯಗಳ ಬಗ್ಗೆ ತಮ್ಮ ನಿಖರವಾದ ಗಮನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಲೆಕ್ಕ ಪರಿಶೋಧನೆಯಲ್ಲಿ ಮಿಂಚುತ್ತಾರೆ. ಈಗ, ಮೋದಿ ಅವರು ಮತ್ತೊಂದು ಭರವಸೆ ನೀಡಿದ್ದಾರೆ, ಇದು ನಿಮಗೆ ಅಪಾರ ಪ್ರಯೋಜನಕಾರಿಯಾಗಿದೆ-ಪ್ರಧಾನಿ ಸೂರ್ಯ ಘರ್ ಎಂದು ಕರೆಯಲ್ಪಡುವ 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ಯೋಜನೆ. ಪ್ರಧಾನ ಮಂತ್ರಿ ಸೂರ್ಯ ಘರ್ ಅಡಿ, 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಇದು ಎಸಿಗಳು, ಫ್ಯಾನ್‌ಗಳು, ಫ್ರಿಜ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳಂತಹ ಅಗತ್ಯ ಗೃಹೋಪಯೋಗಿ ಉಪಕರಣಗಳನ್ನು ಒಳಗೊಂಡಿರುತ್ತದೆ. ಇದು ಪ್ರತಿಯೊಂದು ಮಧ್ಯಮ ವರ್ಗದ ಕುಟುಂಬಕ್ಕೆ ಪ್ರವೇಶಿಸುವಂತೆ ಮಾಡುತ್ತದೆ. ಇದಲ್ಲದೆ, ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸರ್ಕಾರವೇ ಹಣ ನೀಡುತ್ತದೆ. ಬ್ಯಾಂಕ್‌ಗಳ ಮೂಲಕ ಸಾಲ ನೀಡುತ್ತದೆ. ಹೆಚ್ಚುವರಿಯಾಗಿ, ನೀವು 300 ಯೂನಿಟ್‌ಗಳಿಗಿಂತ ಹೆಚ್ಚು ವಿದ್ಯುತ್ ಉತ್ಪಾದಿಸಿದರೆ, ಮಾರಾಟ ಮಾಡಲು ಹೆಚ್ಚುವರಿ ವಿದ್ಯುತ್ ಇದ್ದರೆ, ಹೆಚ್ಚುವರಿ ವಿದ್ಯುತ್ ಅನ್ನು ಸರ್ಕಾರವು ನಿಮ್ಮಿಂದ ಖರೀದಿಸುತ್ತದೆ. ಅದು ಲಾಭದಾಯಕವಲ್ಲವೇ? ಗುಜರಾತಿನಲ್ಲಿ ಸೌರ ವಿದ್ಯುತ್ ಸರಬರಾಜು, ಸೂರ್ಯನ ಶಕ್ತಿಯನ್ನು ಬಳಸಿಕೊಳ್ಳುವ ಮತ್ತು ಪ್ರತಿ ಮನೆಗೆ ಉಚಿತ ವಿದ್ಯುತ್ ಒದಗಿಸುವ ಪ್ರಯತ್ನದಲ್ಲಿ ತೊಡಗಿಸಿಕೊಳ್ಳಿ. ಇದು ಮೋದಿ ಅವರ ಗ್ಯಾರಂಟಿ. ಇದಲ್ಲದೆ, ದೇಶದ ಮೊದಲ ಬುಲೆಟ್ ರೈಲು ಈ ಪ್ರದೇಶದ ಮೂಲಕ ಹಾದುಹೋಗುತ್ತದೆ. ಇದು ಮುಂಬೈ ಮತ್ತು ಸೂರತ್‌ನಂತಹ ಪ್ರಮುಖ ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸುತ್ತದೆ.

ಸ್ನೇಹಿತರೆ,

ನವಸಾರಿ ಈಗ ತನ್ನ ಕೈಗಾರಿಕಾ ಅಭಿವೃದ್ಧಿಗೆ ಮನ್ನಣೆ ನೀಡುತ್ತಿದೆ, ಆದರೆ ನವಸಾರಿ ಸೇರಿದಂತೆ ಇಡೀ ದಕ್ಷಿಣ ಗುಜರಾತ್ ಪ್ರದೇಶವು ಕೃಷಿಯಲ್ಲೂ ಗಣನೀಯವಾಗಿ ಮುಂದುವರೆದಿದೆ. ಬಿಜೆಪಿ ಸರ್ಕಾರವು ಇಲ್ಲಿ ರೈತರಿಗೆ ಸೌಲಭ್ಯಗಳನ್ನು ನೀಡಲು ಪ್ರಾರಂಭಿಸಿದಾಗ, ಹಣ್ಣಿನ ಕೃಷಿ ಪದ್ಧತಿಯು ಗಮನಾರ್ಹ ಏರಿಕೆ ಕಂಡಿತು. ಈ ಪ್ರದೇಶದ ಹ್ಯಾಪಸ್ ಮಾವಿನ ಹಣ್ಣುಗಳು, ಜೊತೆಗೆ ವಲ್ಸಾದ್ ಮಾವಿನ ಹಣ್ಣುಗಳು ಮತ್ತು ನವಸಾರಿ ಚಿಕೂಸ್ ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ. ನಾನು ಎಲ್ಲಿಗೆ ಹೋದರೂ ಜನರು ನನ್ನ ಬಳಿ ಉಲ್ಲೇಖಿಸುತ್ತಾರೆ. ಡಬಲ್ ಇಂಜಿನ್ ಸರ್ಕಾರವು ಪ್ರಸ್ತುತ ಪ್ರತಿ ಹಂತದಲ್ಲೂ ರೈತರಿಗೆ ಸಹಾಯ ಮಾಡುತ್ತಿದೆ. ನವಸಾರಿಯ ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮೂಲಕ 350 ಕೋಟಿ ರೂ. ಪಡೆದಿದ್ದಾರೆ.

ಸ್ನೇಹಿತರೆ,

ದೇಶಾದ್ಯಂತ ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಮೋದಿ ವಾಗ್ದಾನ ಮಾಡಿದ್ದಾರೆ. ಈ ಗ್ಯಾರಂಟಿ ಕೇವಲ ಯೋಜನೆಗಳನ್ನು ರೂಪಿಸುವುದನ್ನು ಮೀರಿ ವಿಸ್ತರಿಸಿದೆ. ಅರ್ಹ ವ್ಯಕ್ತಿಗಳು ಈ ಉಪಕ್ರಮಗಳ ಸಂಪೂರ್ಣ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ಖಚಿತಪಡಿಸಿಕೊಳ್ಳುವುದನ್ನು ಇದು ಒಳಗೊಳ್ಳುತ್ತದೆ. ಮೋದಿ ಅವರ ಬದ್ಧತೆಯು ರಾಷ್ಟ್ರದ ಪ್ರತಿಯೊಂದು ಮನೆಯಿಂದಲೂ ಬಡತನ ಮತ್ತು ಅಭಾವ ನಿರ್ಮೂಲನೆ ಮಾಡುವ ಗುರಿ ಹೊಂದಿದೆ. ಆದ್ದರಿಂದ, ಸರ್ಕಾರವು ಫಲಾನುಭವಿಗಳನ್ನು ಸಕ್ರಿಯವಾಗಿ ತಲುಪುತ್ತಿದೆ, ಅವರನ್ನು ಗುರುತಿಸುತ್ತದೆ ಮತ್ತು ಸಂಬಂಧಿತ ಯೋಜನೆಗಳೊಂದಿಗೆ ಅವರನ್ನು ಸಂಪರ್ಕಿಸುತ್ತದೆ.

 

ಸ್ನೇಹಿತರೆ,

ಹಲವು ವರ್ಷಗಳಿಂದ, ರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಬುಡಕಟ್ಟು ಪ್ರದೇಶಗಳು ಮತ್ತು ಕರಾವಳಿ ಗ್ರಾಮಗಳನ್ನು ನಿರ್ಲಕ್ಷಿಸಿವೆ. ಆದಾಗ್ಯೂ, ಇಲ್ಲಿ ಗುಜರಾತ್‌ನಲ್ಲಿ, ಉಮರ್ಗಾಮ್‌ನಿಂದ ಅಂಬಾಜಿವರೆಗೆ ಇಡೀ ಬುಡಕಟ್ಟು ಪ್ರದೇಶದಾದ್ಯಂತ ಅಗತ್ಯ ಸೌಕರ್ಯಗಳನ್ನು ಒದಗಿಸಲು ಬಿಜೆಪಿ ಸರ್ಕಾರವು ಶ್ರದ್ಧೆಯಿಂದ ಕೆಲಸ ಮಾಡಿದೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಹಾಗಾಗಲಿಲ್ಲ. 2014ರ ವರೆಗೆ, ದೇಶಾದ್ಯಂತ 100ಕ್ಕೂ ಹೆಚ್ಚು ಜಿಲ್ಲೆಗಳು ಹಿಂದುಳಿದರೂ, ಸ್ವಲ್ಪ ಗಮನವನ್ನು ನೀಡಲಿಲ್ಲ. ಈ ಜಿಲ್ಲೆಗಳಲ್ಲಿ ಹೆಚ್ಚಿನವು ಬುಡಕಟ್ಟು ಜನಾಂಗದವರಾಗಿದ್ದವು. ಕಳೆದ ದಶಕದಲ್ಲಿ, ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಮೂಲಕ, ಈ ಹಿಂದೆ ನಿರ್ಲಕ್ಷಿಸಲ್ಪಟ್ಟ ಪ್ರದೇಶಗಳು ಅಭಿವೃದ್ಧಿಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ.

ಸಹೋದರ, ಸಹೋದರಿಯರೆ,

ಇತರರ ಭರವಸೆಗಳು ಹುಸಿಯಾದಾಗಾ ಮೋದಿ ಅವರ ಗ್ಯಾರಂಟಿ ಪ್ರಾರಂಭವಾಗುತ್ತದೆ. ಮೊಟ್ಟಮೊದಲ ಬಾರಿಗೆ, ದೇಶದ ಬಡವರಿಗೆ ಪಕ್ಕಾ ಮನೆಯ ಆಶ್ವಾಸನೆ ಸಿಕ್ಕಿದೆ. ಮೋದಿ ಅವರ ಭರವಸೆಗೆ ಧನ್ಯವಾದಗಳು. ಮೋದಿ ಅವರ ಗ್ಯಾರಂಟಿಯಿಂದಾಗಿ ಅವರು ಹಸಿವಿನಿಂದ ಮಲಗುತ್ತಿಲ್ಲ ಅಥವಾ ನೋವನ್ನು ಎದುರಿಸುತ್ತಿಲ್ಲ ಎಂದು ಅವರು ಖಚಿತವಾಗಿ ಹೇಳಬಹುದು. ದೂರದ ಹಳ್ಳಿಗಳಲ್ಲಿ ನೆಲೆಸಿರುವ ಸಹೋದರಿಯರಿಗೂ ಕೂಡ ಮೋದಿ ಅವರ ಭರವಸೆಯಿಂದಾಗಿ ತಮ್ಮ ಮನೆಗಳಿಗೆ ವಿದ್ಯುತ್ ಮತ್ತು ನಲ್ಲಿ ನೀರು ಸಿಗುತ್ತದೆ ಎಂಬ ವಿಶ್ವಾಸವಿದೆ. ಬಡವರು, ರೈತರು, ಅಂಗಡಿಯವರು ಮತ್ತು ಕಾರ್ಮಿಕರು ವಿಮೆ ಮತ್ತು ಪಿಂಚಣಿ ಯೋಜನೆಗಳು ಅವರಿಗೆ ಅನುಗುಣವಾಗಿರುತ್ತವೆ ಎಂದು ಎಂದಿಗೂ ಊಹಿಸಿರಲಿಲ್ಲ. ಆದರೂ, ಇಂದು, ಇದು ವಾಸ್ತವವಾಗಿದೆ. ಮೋದಿ ಅವರ ಭರವಸೆಗೆ ಧನ್ಯವಾದಗಳು. ಎರಡೂ ಕೈಗಳನ್ನು ಎತ್ತಿ ಒಪ್ಪಿಕೊಳ್ಳೋಣ- ಇದು ಮೋದಿ ಅವರ ಖಾತರಿಯಿಂದಾಗಿ ಎಂದು.

 

ಸ್ನೇಹಿತರೆ,

ಕುಡುಗೋಲು ಕಣ ರಕ್ತಹೀನತೆ ರೋಗವು ಬುಡಕಟ್ಟು ಪ್ರದೇಶಗಳಲ್ಲಿ ಗಮನಾರ್ಹ ಸವಾಲನ್ನು ಒಡ್ಡಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, ಈ ಸಮಸ್ಯೆ ಪರಿಹರಿಸಲು ನಾವು ಹಲವಾರು ಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಆದಾಗ್ಯೂ, ಈ ರೋಗವನ್ನು ಸಮಗ್ರವಾಗಿ ಎದುರಿಸಲು ರಾಷ್ಟ್ರೀಯ ಪ್ರಯತ್ನಗಳು ಕಡ್ಡಾಯವಾಗಿದೆ. ಪರಿಣಾಮವಾಗಿ, ಕುಡಗೋಲು ಕಣ ರಕ್ತಹೀನತೆ ನಿರ್ಮೂಲನೆ ಮಾಡಲು ನಾವು ರಾಷ್ಟ್ರೀಯ ಮಿಷನ್ ಪ್ರಾರಂಭಿಸಿದ್ದೇವೆ. ಈ ಉಪಕ್ರಮದ ಅಡಿ, ದೇಶದಾದ್ಯಂತ ಬುಡಕಟ್ಟು ಪ್ರದೇಶಗಳಲ್ಲಿ ಕುಡಗೋಲು ಕಣ ರಕ್ತಹೀನತೆಯ ತಪಾಸಣೆ ನಡೆಸಲಾಗುತ್ತಿದೆ. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯಲ್ಲಿ ಲಕ್ಷಾಂತರ ವ್ಯಕ್ತಿಗಳನ್ನು ಪರೀಕ್ಷಿಸಲಾಗಿದೆ. ಇದಲ್ಲದೆ, ಈ ಪ್ರದೇಶದಲ್ಲಿ ವೈದ್ಯಕೀಯ ಕಾಲೇಜು ನಡೆಯುತ್ತಿದೆ. ಈ ಹಿಂದೆ, ಬುಡಕಟ್ಟು ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದು ಅಸಾಧಾರಣ ಕೆಲಸವಾಗಿತ್ತು. ಇಂದು ಹಲವಾರು ಬುಡಕಟ್ಟು ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.

ಸ್ನೇಹಿತರೆ,

ಅವರು ಬಡವರಾಗಿರಲಿ ಅಥವಾ ಮಧ್ಯಮ ವರ್ಗದವರಾಗಿರಲಿ, ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿ ವಾಸಿಸುತ್ತಿರಲಿ, ನಮ್ಮ ಸರ್ಕಾರವು ಪ್ರತಿಯೊಬ್ಬ ನಾಗರಿಕನ ಜೀವನ ಮಟ್ಟ ಹೆಚ್ಚಿಸಲು ಶ್ರಮಿಸುತ್ತದೆ. ದಶಕಗಳ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಭಾರತವು ಜಾಗತಿಕ ಆರ್ಥಿಕತೆಯಲ್ಲಿ 11ನೇ ಸ್ಥಾನ ಸಾಧಿಸಲು ಮಾತ್ರ ಸಾಧ್ಯವಾಯಿತು. ಆರ್ಥಿಕ ಬೆಳವಣಿಗೆಯಲ್ಲಿ ಹಿಂದುಳಿದಿರುವುದು ರಾಷ್ಟ್ರಕ್ಕೆ ಸೀಮಿತ ಸಂಪನ್ಮೂಲಗಳನ್ನು ಅರ್ಥೈಸಿತು, ಇದರಿಂದ ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿಗೆ ಅಡ್ಡಿಯಾಯಿತು. ಆದರೆ, ಬಿಜೆಪಿ ಸರ್ಕಾರದ ನಾಯಕತ್ವದಲ್ಲಿ ಭಾರತ್ ಒಂದು ದಶಕದಲ್ಲಿ ಜಾಗತಿಕ ಆರ್ಥಿಕತೆಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಏರಿದೆ. ಇಂದು, ಭಾರತೀಯ ನಾಗರಿಕರು ಹೆಚ್ಚು ಆದಾಯ ಹೊಂದಿದ್ದಾರೆ, ಇದರಿಂದಾಗಿ ಹೆಚ್ಚಿದ ಖರ್ಚನ್ನು ಮಾಡುತ್ತಾರೆ ಎಂದು ಇದು ಸೂಚಿಸುತ್ತದೆ. ಪರಿಣಾಮವಾಗಿ, ರಾಷ್ಟ್ರವ್ಯಾಪಿ ಸಣ್ಣ ನಗರಗಳಲ್ಲಿಯೂ ಸಹ ಸದೃಢ ಸಂಪರ್ಕ ಮೂಲಸೌಕರ್ಯ ಸ್ಥಾಪಿಸಲಾಗುತ್ತಿದೆ. ಸಣ್ಣ ನಗರಗಳಿಂದ ವಿಮಾನಯಾನ ಸೌಲಭ್ಯ ಒಂದು ಕಾಲದಲ್ಲಿ ಊಹಿಸಲೂ ಅಸಾಧ್ಯವಾಗಿತ್ತು, ಆದರೆ ಅದು ಈಗ ನಿಜವಾಗಿದೆ. ಇದಲ್ಲದೆ, ಕಾಂಗ್ರೆಸ್ ಆಡಳಿತವು ನಗರಗಳಲ್ಲಿ ಕೊಳೆಗೇರಿಗಳ ಪ್ರಮಾಣವನ್ನು ಶಾಶ್ವತಗೊಳಿಸಿದರೆ, ನಮ್ಮ ಸರ್ಕಾರವು ಬಡವರಿಗೆ ಪಕ್ಕಾ ಮನೆಗಳನ್ನು ನಿರ್ಮಿಸುತ್ತಿದೆ. ಕಳೆದ ಒಂದು ದಶಕದಲ್ಲಿ ನಾವು ಬಡವರಿಗಾಗಿ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಿದ್ದೇವೆ. ನೀವೇ ಊಹಿಸಿ 4 ಕೋಟಿ ಮನೆಗಳು!

ಸ್ನೇಹಿತರೆ,

ಇಂದು, ಡಿಜಿಟಲ್ ಇಂಡಿಯಾ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿದೆ. ಕಾಂಗ್ರೆಸ್ ಒಮ್ಮೆ ಅಪಹಾಸ್ಯ ಮಾಡಿದ ಅಭಿಯಾನ ಇದು. ಡಿಜಿಟಲ್ ಇಂಡಿಯಾ ಸಣ್ಣ ನಗರಗಳನ್ನು ಕ್ರಾಂತಿಗೊಳಿಸಿದೆ, ಹೊಸ ಸ್ಟಾರ್ಟಪ್‌ಗಳ ಹೊರಹೊಮ್ಮುವಿಕೆ ಮತ್ತು ಕ್ರೀಡೆಗಳಲ್ಲಿ ಬೆಳೆಯುತ್ತಿರುವ ಯುವ ಉಪಸ್ಥಿತಿಯನ್ನು ಉತ್ತೇಜಿಸಿದೆ. ಗುಜರಾತ್‌ನಲ್ಲಿ ಸಣ್ಣ ಪಟ್ಟಣಗಳ ಬೆಳೆಯುತ್ತಿರುವ ಬೆಳವಣಿಗೆಯನ್ನು ನಾವು ನೋಡುತ್ತೇವೆ, ಇದು ನವ-ಮಧ್ಯಮ ವರ್ಗವನ್ನು ಹುಟ್ಟುಹಾಕಿದೆ. ಅದು ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಲು ಪ್ರೇರೇಪಿಸುತ್ತಿದೆ.

 

ಸಹೋದರ, ಸಹೋದರಿಯರೆ,

ಬಿಜೆಪಿ ಸರ್ಕಾರ ಅಭಿವೃದ್ಧಿಗೆ ಎಷ್ಟು ಆದ್ಯತೆ ನೀಡುತ್ತದೋ ಅಷ್ಟೇ ನಮ್ಮ ಪರಂಪರೆಯನ್ನೂ ಗೌರವಿಸುತ್ತಿದೆ. ಈ ಪ್ರದೇಶವು ನಮ್ಮ ರಾಷ್ಟ್ರದ ನಿರೂಪಣೆಯಲ್ಲಿ ಮಹತ್ವದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆ ಹೊಂದಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಥವಾ ರಾಷ್ಟ್ರ ನಿರ್ಮಾಣದ ಪ್ರಯತ್ನಗಳಲ್ಲಿ ಈ ಪ್ರದೇಶವು ಅಪಾರ ಕೊಡುಗೆಗಳನ್ನು ನೀಡಿದೆ. ಆದಾಗ್ಯೂ, ಸ್ವಜನ ಪಕ್ಷಪಾತ, ತುಷ್ಟೀಕರಣ ಮತ್ತು ಭ್ರಷ್ಟಾಚಾರವು ರಾಜಕೀಯವನ್ನು ಆವರಿಸಿದಾಗ, ಪರಂಪರೆಯನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ದುಃಖಕರವೆಂದರೆ, ದಶಕಗಳಿಂದ ಕಾಂಗ್ರೆಸ್ ನಿರಂತರವಾಗಿ ಈ ಅನ್ಯಾಯವನ್ನು ನಡೆಸಿದೆ. ಇಂದು ಭಾರತದ ಶ್ರೀಮಂತ ಪರಂಪರೆಯ ಅನುರಣನವು ವಿಶ್ವಾದ್ಯಂತ ಪ್ರತಿಧ್ವನಿಸುತ್ತದೆ. ನೀವು ಪ್ರಪಂಚದಾದ್ಯಂತ ಎಲ್ಲಿಗೆ ಹೋದರೂ, ಜನರು ಭಾರತಕ್ಕೆ ಭೇಟಿ ನೀಡಲು ಮತ್ತು ಅದರ ಬಗ್ಗೆ ತಿಳಿದುಕೊಳ್ಳಲು ಬಯಸುತ್ತಾರೆ ಎಂಬುದನ್ನು ನೀವೇ ಕಾಣಬಹುದು. ಆದರೂ, ಕಾಂಗ್ರೆಸ್ ದಶಕಗಳ ಕಾಲ ಭಾರತದ ನಿಜವಾದ ಪರಂಪರೆಯ ಬಗ್ಗೆ ಜಗತ್ತಿಗೆ ತಿಳಿಯದಂತೆ ಮಾಡಿತು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ, ಮಹಾತ್ಮ ಗಾಂಧಿ ಅವರು ಉಪ್ಪು ಮತ್ತು ಖಾದಿಯನ್ನು ಸ್ವಾತಂತ್ರ್ಯದ ಸಂಕೇತವೆಂದು ಎತ್ತಿ ಹಿಡಿದರು, ಆದರೆ ಕಾಂಗ್ರೆಸ್ ಖಾದಿಯನ್ನು ನಿರ್ಲಕ್ಷಿಸಿತು, ಉಪ್ಪಿನ ಸತ್ಯಾಗ್ರಹ ಪರಂಪರೆಯನ್ನು ಮರೆಯಿತು. ದಂಡಿ ಉಪ್ಪಿನ ಸತ್ಯಾಗ್ರಹದ ಸ್ಥಳದಲ್ಲಿ ದಂಡಿ ಸ್ಮಾರಕ ಮತ್ತು ಸರ್ದಾರ್ ಪಟೇಲ್ ಅವರ ಕೊಡುಗೆಗಳಿಗೆ ಸಮರ್ಪಿತವಾದ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಗೌರವ ನಮ್ಮ ಸರ್ಕಾರದ್ದಾಗಿದೆ. ಆದರೆ, ಕಾಂಗ್ರೆಸ್‌ನ ಯಾವೊಬ್ಬ ಉನ್ನತ ನಾಯಕರೂ ಈ ಸ್ಥಳಗಳಲ್ಲಿ ಗೌರವ ಸಲ್ಲಿಸಿಲ್ಲ. ಗುಜರಾತಿನ ಬಗೆಗಿನ ಈ ತಿರಸ್ಕಾರವನ್ನು ಯಾವ ಗುಜರಾತಿಯೂ ಮರೆಯಲು ಸಾಧ್ಯವಿಲ್ಲ.

ಸ್ನೇಹಿತರೆ,

ಮೋದಿ ವಿರುದ್ಧ ಕಾಂಗ್ರೆಸ್ ಸದಸ್ಯರು ಹೇಗೆ ಜಾತಿ ನಿಂದನೆಗೆ ಇಳಿದಿದ್ದಾರೆ ಎಂಬುದನ್ನು ನೀವು ಕಣ್ಣಾರೆ ಕಂಡಿದ್ದೀರಿ. ಆದಾಗ್ಯೂ, ಅವರ ಅವಹೇಳನವು 400-ಆಸನಗಳ ಗಡಿಯನ್ನು ಮೀರುವ ನಮ್ಮ ನಿರ್ಣಯವನ್ನು ಬಲಪಡಿಸುತ್ತದೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದಾರೆ. ಅವರು ಎಷ್ಟು ಕೆಸರು ಎರಚುತ್ತಾರೋ ಅಷ್ಟು ಶಕ್ತಿಯ 370 ಕಮಲಗಳು ಭವ್ಯವಾಗಿ ಅರಳುತ್ತವೆ.

ಸಹೋದರ, ಸಹೋದರಿಯರೆ,

ಇಂದು ಕಾಂಗ್ರೆಸ್ ಪಕ್ಷವು ರಾಷ್ಟ್ರದ ಮುಂದೆ ನೋಡುವ ಕಾರ್ಯಸೂಚಿ ಹೊಂದಿಲ್ಲ, ಬದಲಿಗೆ ಮೋದಿ  ಮೇಲೆ ನಿರಂತರ ಟೀಕೆಗಳನ್ನು ಮಾಡುತ್ತಿದೆ. ಪಕ್ಷವು ಸ್ವಜನ  ಪಕ್ಷಪಾತಕ್ಕೆ ಬಲಿಯಾದಾಗ, ಅದು ತನ್ನ ಸ್ವಂತ ಕುಟುಂಬಕ್ಕೆ ಹೆಚ್ಚಿನ ಒಳಿತಿಗಾಗಿ ಆದ್ಯತೆ ನೀಡುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಇಂತಹ ಕುಟುಂಬ ಕೇಂದ್ರಿತ ಮನಸ್ಥಿತಿಯು ಹೊಸತನ, ಪ್ರತಿಭೆ ಮತ್ತು ಯುವಕರ ಆಕಾಂಕ್ಷೆಗಳನ್ನು ಕುಗ್ಗಿಸುತ್ತದೆ. ಅದರ ಗಮನವು ತನ್ನ ಕೌಟುಂಬಿಕ ಹಿತಾಸಕ್ತಿಗಳನ್ನು ಕಾಪಾಡಲು ಯಥಾಸ್ಥಿತಿಯನ್ನು ಕಾಪಾಡುವುದರ ಮೇಲೆ ಉಳಿದಿದೆ. ಇದು ಇಂದು ಕಾಂಗ್ರೆಸ್ ಎದುರಿಸುತ್ತಿರುವ ಸಂಕಷ್ಟ. ಇದಕ್ಕೆ ವ್ಯತಿರಿಕ್ತವಾಗಿ, ಬಿಜೆಪಿಯು ಮುಂದಿನ 25 ವರ್ಷಗಳವರೆಗೆ ಸಮಗ್ರ ಮಾರ್ಗಸೂಚಿ ರೂಪಿಸಿದೆ, ರಾಷ್ಟ್ರೀಯ ಅಭಿವೃದ್ಧಿಯ ದೃಷ್ಟಿಕೋನವನ್ನು ವಿವರಿಸಿದೆ. ಈ 25 ವರ್ಷಗಳ ಅವಧಿಯಲ್ಲಿ ನಾವು ಅಭಿವೃದ್ಧಿ ಹೊಂದಿದ ಗುಜರಾತ್ ಮತ್ತು ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸುವ ಗುರಿ ಹೊಂದಿದ್ದೇವೆ.

ಸ್ನೇಹಿತರೆ,

ತಾಯಂದಿರು ಮತ್ತು ಸಹೋದರಿಯರನ್ನು ಒಳಗೊಂಡಂತೆ ಇಂದು ನಿಮ್ಮ ಅಗಾಧ ಉಪಸ್ಥಿತಿಯು ನನ್ನಲ್ಲಿ ಆಳವಾದ ಕೃತಜ್ಞತೆಯನ್ನು ತುಂಬುತ್ತದೆ. ನಿಮ್ಮ ಆಶೀರ್ವಾದ ಮತ್ತು ಬೆಂಬಲಕ್ಕಾಗಿ ನಾನು ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು. ನೀವೆಲ್ಲರೂ ನನ್ನೊಂದಿಗೆ ಹೇಳಿ -

"ಭಾರತ್ ಮಾತಾ ಕೀ ಜೈ!"

ಎರಡೂ ಕೈಗಳನ್ನು ಮೇಲಕ್ಕೆತ್ತಿ ಉತ್ಸಾಹದಿಂದ ಹೇಳೋಣ -

"ಭಾರತ್ ಮಾತಾ ಕೀ ಜೈ!"

"ಭಾರತ್ ಮಾತಾ ಕೀ ಜೈ!"

"ಭಾರತ್ ಮಾತಾ ಕೀ ಜೈ!"

ತುಂಬು ಧನ್ಯವಾದಗಳು!

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's EV market to grow 12-fold to 30.4 mn units by 2032 under high-growth scenario: Report

Media Coverage

India's EV market to grow 12-fold to 30.4 mn units by 2032 under high-growth scenario: Report
NM on the go

Nm on the go

Always be the first to hear from the PM. Get the App Now!
...
Prime Minister pays homage to Thiru K. Kamaraj Ji on his birth anniversary
July 15, 2026

Prime Minister Shri Narendra Modi today, paid homage to Thiru K. Kamaraj Ji on his birth anniversary, remembering him as a stalwart of India's freedom movement and an exceptional public figure who dedicated his life to nation-building. Shri Modi said that Thiru K. Kamaraj Ji's unwavering commitment to education, inclusive development and the welfare of the underprivileged continues to inspire generations.

Shri Modi posted on X;

Remembering Thiru K. Kamaraj Ji on his birth anniversary. A stalwart of India’s freedom movement and an exceptional public figure, he dedicated his life to nation-building. His unwavering commitment to areas like education, inclusive development and the welfare of the underprivileged continues to guide generations.