ಇಂದು ಪಂಚವಟಿ - ನಾಸಿಕ್ ಧಾಮ್ ನಿಂದ ಧಾರ್ಮಿಕ ಕಾರ್ಯ ಆರಂಭ
"ನಾನು ಭಾವನೆಗಳಲ್ಲಿ ಮುಳುಗಿದ್ದೇನೆ! ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ಅಂತಹ ಭಾವನೆಗಳನ್ನು ಅನುಭವಿಸುತ್ತಿದ್ದೇನೆ”
“ದೇವರು ನನ್ನನ್ನು ಭಾರತದ ಎಲ್ಲ ಜನರನ್ನು ಪ್ರತಿನಿಧಿಸುವ ಸಾಧನವನ್ನಾಗಿ ಮಾಡಿದ್ದಾರೆ. ಇದು ಬಹುದೊಡ್ಡ ಜವಾಬ್ದಾರಿ"
“ಪ್ರಾಣ ಪ್ರತಿಷ್ಠೆಯ ಕ್ಷಣವು ನಾವೆಲ್ಲರೂ ಹಂಚಿಕೊಳ್ಳುವ ಅನುಭವವಾಗಿದೆ. ರಾಮಮಂದಿರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಂಖ್ಯಾತ ವ್ಯಕ್ತಿಗಳ ಸ್ಫೂರ್ತಿಯನ್ನು ನಾನು ಸ್ವೀಕರಿಸುತ್ತೇನೆ
“ನನಗೆ ದೇವರಂತಿರುವ ಜನರು ತಮ್ಮ ಭಾವನೆಗಳನ್ನು ಮಾತಿನಲ್ಲಿ ವ್ಯಕ್ತಪಡಿಸಿ ಆಶೀರ್ವಾದ ನೀಡಿದಾಗ ನನ್ನಲ್ಲಿ ಹೊಸ ಶಕ್ತಿ ತುಂಬುತ್ತದೆ. ಇಂದು ನನಗೆ ನಿಮ್ಮ ಆಶೀರ್ವಾದ ಬೇಕು”

 ಶ್ರೀ(ಸಿಯಾವರ) ರಾಮಚಂದ್ರ ಕೀ ಜೈ!

ನನ್ನ ಪ್ರೀತಿಯ ದೇಶವಾಸಿಗಳೇ, ರಾಮ್ ರಾಮ್!

ದೇವರ ಆಶೀರ್ವಾದದಿಂದ ಜೀವನದ ಕೆಲವು ಕ್ಷಣಗಳು ಉತ್ತಮವಾಗಿ ಬದಲಾಗುತ್ತವೆ.

ಇಂದು ಎಲ್ಲಾ ಭಾರತೀಯರಿಗೆ ಮತ್ತು ವಿಶ್ವಾದ್ಯಂತ ಹರಡಿರುವ ಭಗವಾನ್ ರಾಮನ ಭಕ್ತರಿಗೆ ಇದು ಪವಿತ್ರ ಸಂದರ್ಭವಾಗಿದೆ! ಎಲ್ಲೆಲ್ಲೂ ರಾಮನ ಭಕ್ತಿಯ ಮೋಹಕ ವಾತಾವರಣ! ರಾಮನ ಸುಮಧುರ ಕೀರ್ತನೆಗಳು, ಎಲ್ಲಾ ದಿಕ್ಕುಗಳಲ್ಲಿಯೂ ರಾಮ ಭಜನೆಗಳ ಸೊಗಸಾದ ಸೌಂದರ್ಯ! ಜನವರಿ 22ರ ಆ ಐತಿಹಾಸಿಕ ಪವಿತ್ರ ಕ್ಷಣಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆಗೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿವೆ. ಈ ಶುಭ ಸಂದರ್ಭಕ್ಕೆ ಸಾಕ್ಷಿಯಾಗಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಕಲ್ಪನೆಗೂ ಮೀರಿದ ಕ್ಷಣಗಳನ್ನು ಅನುಭವಿಸುವ ಸಮಯ ಇದು.

ನಾನು ಭಾವುಕನಾಗಿದ್ದೇನೆ, ಭಾವನೆಗಳಿಂದ ಮುಳುಗಿದ್ದೇನೆ! ನನ್ನ ಜೀವನದಲ್ಲಿ ಮೊದಲ ಬಾರಿಗೆ ನಾನು ವಿಶಿಷ್ಟವಾದ ಭಾವನೆ ಮತ್ತು ಭಕ್ತಿಯನ್ನು ಅನುಭವಿಸುತ್ತಿದ್ದೇನೆ. ನನ್ನೊಳಗಿನ ಈ ಭಾವುಕ ಪಯಣ ಬರೀ ಅಭಿವ್ಯಕ್ತಿಯಲ್ಲ, ಇದು ನೈಜ ಅನುಭವದ ಒಳ್ಳೆಯ ಅವಕಾಶ. ನನ್ನ ಬಯಕೆಯ ಹೊರತಾಗಿಯೂ, ಅದರ ಆಳ, ವಿಸ್ತಾರ ಮತ್ತು ತೀವ್ರತೆಯನ್ನು ಪದಗಳಲ್ಲಿ ಹೇಳಲು ನನಗೆ ಸಾಧ್ಯವಾಗುತ್ತಿಲ್ಲ. ನನ್ನ ಪರಿಸ್ಥಿತಿಯನ್ನು ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ನಾನು ನಂಬುತ್ತೇನೆ.

ಸಂಕಲ್ಪದಂತೆ ಹಲವು ತಲೆಮಾರುಗಳು ತಮ್ಮ ಹೃದಯದಲ್ಲಿ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಕನಸನ್ನು ನನಸಾಗಿಸುವ ಭಾಗ್ಯ ನನ್ನದಾಗಿದೆ. ದೇವರು ನನ್ನನ್ನು ಎಲ್ಲ ಭಾರತೀಯರ ಪ್ರತಿನಿಧಿಯನ್ನಾಗಿ ಮಾಡಿದ್ದಾನೆ.

"ನಿಮಿತ್ ಮಾತ್ರಂ ಭಾವ ಸವ್ಯ-ಸಚಿನ್".
 
ಇದೊಂದು ಬಹುದೊಡ್ಡ ಜವಾಬ್ದಾರಿ. ನಮ್ಮ ಧರ್ಮಗ್ರಂಥಗಳಲ್ಲಿ ಹೇಳಿರುವಂತೆ, ‘ಯಜ್ಞ’ ಮತ್ತು ದೇವರ ಆರಾಧನೆಗಾಗಿ ನಾವು ನಮ್ಮೊಳಗಿನ ದೈವಿಕ ಪ್ರಜ್ಞೆಯನ್ನು ಜಾಗೃತಗೊಳಿಸಬೇಕಾಗಿದೆ. ಈ ಉದ್ದೇಶಕ್ಕಾಗಿ, ಶಾಸ್ತ್ರಗಳು ವಿಗ್ರಹ ಪ್ರತಿಷ್ಠಾಪನೆಯ ಮೊದಲು ಅನುಸರಿಸಬೇಕಾದ ಸಂಕಲ್ಪಗಳು ಮತ್ತು ಕಠಿಣ ನಿಯಮಗಳನ್ನು ಸೂಚಿಸುತ್ತವೆ. ಆದ್ದರಿಂದ, ಈ ಆಧ್ಯಾತ್ಮಿಕ ಪ್ರಯಾಣದಲ್ಲಿ ಕೆಲವು ಸಾಧು ಸಂತರು, ತಪಸ್ವಿ ಆತ್ಮಗಳು ಮತ್ತು ಮಹಾನ್ ಜೀವಿಗಳಿಂದ ನಾನು ಪಡೆದ ಮಾರ್ಗದರ್ಶನದ ಆಧಾರದ ಮೇಲೆ 'ಯಮ-ನಿಯಮ'(ನೈತಿಕ ಮತ್ತು ಸದಾಚಾರದ ನಡವಳಿಕೆಯ ತತ್ವಗಳು)ಗಳ ಆಧಾರದ ಮೇಲೆ  ಇಂದಿನಿಂದ ನಾನು 11 ದಿನಗಳ ವಿಶೇಷ ಆಚರಣೆ ಪ್ರಾರಂಭಿಸುತ್ತಿದ್ದೇನೆ.

ಈ ಪವಿತ್ರ ಸಂದರ್ಭದಲ್ಲಿ, ನಾನು ದೇವರ ಪಾದಗಳಲ್ಲಿ ಪ್ರಾರ್ಥಿಸುತ್ತೇನೆ. ನಾನು ಋಷಿಗಳು, ತಪಸ್ವಿಗಳು ಮತ್ತು ಚಿಂತನಶೀಲ ಆತ್ಮಗಳ ಪುಣ್ಯವನ್ನು ಸ್ಮರಿಸುತ್ತೇನೆ. ದೇವರ ರೂಪವಾಗಿರುವ ಜನರು ನನ್ನನ್ನು ಆಶೀರ್ವದಿಸುವಂತೆ ನಾನು ಪ್ರಾರ್ಥಿಸುತ್ತೇನೆ. ನನ್ನ ಆಲೋಚನೆಗಳು, ಮಾತುಗಳು ಮತ್ತು ಕಾರ್ಯಗಳಲ್ಲಿ ಯಾವುದೇ ಕೊರತೆಯಿಲ್ಲ.
 
ಸ್ನೇಹಿತರೆ,

ನನ್ನ 11 ದಿನಗಳ ಆಚರಣೆಯನ್ನು ನಾಸಿಕ್ ಧಾಮ-ಪಂಚವಟಿಯ ಪವಿತ್ರ ಸ್ಥಳದಿಂದ ಪ್ರಾರಂಭಿಸುತ್ತಿರುವುದು ನನ್ನ ಸೌಭಾಗ್ಯ. ಪಂಚವಟಿಯು ಭಗವಾನ್ ರಾಮನು ಅತಿ ಹೆಚ್ಚಿನ ಸಮಯವನ್ನು ಕಳೆದ ಪುಣ್ಯಭೂಮಿ ಇದಾಗಿದೆ.

ಇಂದು ಸ್ವಾಮಿ ವಿವೇಕಾನಂದರ ಜನ್ಮದಿನ. ಇದು ನನಗೆ ಸಂತೋಷದ ಕಾಕತಾಳೀಯ ಸಂದರ್ಭವಾಗಿದೆ. ಶತಮಾನಗಳ ಕಾಲ ತುಳಿತಕ್ಕೊಳಗಾದ ಭಾರತದ ಆತ್ಮಕ್ಕೆ ಮರುಜೀವ ನೀಡಿದವರು ಸ್ವಾಮಿ ವಿವೇಕಾನಂದರು. ಇಂದು ಅದೇ ಆತ್ಮಸ್ಥೈರ್ಯವು ನಮ್ಮ ಗುರುತನ್ನು ಪ್ರತಿನಿಧಿಸುವ ಭವ್ಯವಾದ ರಾಮಮಂದಿರವಾಗಿ ಎಲ್ಲರ ಮುಂದೆ ನಿಂತಿದೆ.

ಛತ್ರಪತಿ ಶಿವಾಜಿ ಮಹಾರಾಜರ ರೂಪದಲ್ಲಿ ಒಬ್ಬ ಮಹಾನ್ ಮಾನವನಿಗೆ ಜನ್ಮ ನೀಡಿದ ಮಾತಾ ಜೀಜಾಬಾಯಿ ಅವರ ಜನ್ಮದಿನವು ಈ ಶುಭ ದಿನಕ್ಕೆ ಸೇರ್ಪಡೆಯಾಗಿದೆ. ಇಂದು ನಾವು ನಮ್ಮ ಭಾರತವನ್ನು ನೋಡುತ್ತಿರುವ ಅದಮ್ಯ ರೂಪವು ಮಾತಾ ಜೀಜಾಬಾಯಿ ಅವರ ಅಪಾರ ಕೊಡುಗೆಯಿಂದ ಗಮನಾರ್ಹವಾಗಿ ಪ್ರಭಾವಿತವಾಗಿದೆ.
 
ಮತ್ತು ಸ್ನೇಹಿತರೆ,

ಮಾತಾ ಜೀಜಾಬಾಯಿ ಅವರ ಪುಣ್ಯ ಸ್ಮರಣೆಯನ್ನು ನಾನು ನೆನಪಿಸಿಕೊಳ್ಳುವಾಗ, ಅದು ಸಹಜವಾಗಿ ನನ್ನ ಸ್ವಂತ ತಾಯಿಯ ನೆನಪುಗಳನ್ನು ತರುತ್ತದೆ. ನನ್ನ ತಾಯಿ ತನ್ನ ಜೀವನದ ಕೊನೆಯವರೆಗೂ ಸೀತಾ-ರಾಮನ ಹೆಸರು ಜಪಿಸುತ್ತಿದ್ದರು.
 
ಸ್ನೇಹಿತರೆ,
 
ಪ್ರಾಣ ಪ್ರತಿಷ್ಠೆಯ ಶುಭ ಘಳಿಗೆ...

ಶಾಶ್ವತ ಸೃಷ್ಟಿಯ ಆ ಜಾಗೃತ ಕ್ಷಣ...

ಆಧ್ಯಾತ್ಮಿಕ ಅನುಭವಕ್ಕೆ ಆ ಅವಕಾಶ...

ಗರ್ಭಗುಡಿಯಲ್ಲಿ ಆ ಕ್ಷಣಕ್ಕೆ ಏನೂ ಆಗುವುದಿಲ್ಲವೇ...!!!
 
 ಸ್ನೇಹಿತರೆ,

ನಾನು ದೇಹದ ರೂಪದಲ್ಲಿ ಆ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗುತ್ತೇನೆ, ಆದರೆ 14ದ ಕೋಟಿ  ಭಾರತೀಯರು ನನ್ನ ಮನಸ್ಸಿನಲ್ಲಿ ಮತ್ತು ನನ್ನ ಪ್ರತಿ ಹೃದಯ ಬಡಿತದಲ್ಲಿ ನನ್ನೊಂದಿಗೆ ಇರುತ್ತಾರೆ. ನೀವು ನನ್ನೊಂದಿಗೆ ಇರುವಿರಿ... ರಾಮನ ಪ್ರತಿಯೊಬ್ಬ ಭಕ್ತನೂ ನನ್ನೊಂದಿಗಿರುತ್ತಾನೆ. ಆ ಪ್ರಜ್ಞಾಪೂರ್ವಕ ಕ್ಷಣವು ನಮಗೆಲ್ಲರಿಗೂ ಹಂಚಿಕೊಂಡ ಅನುಭವವಾಗಿದೆ. ರಾಮ ಮಂದಿರಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅಸಂಖ್ಯಾತ ವ್ಯಕ್ತಿಗಳಿಂದ ಸ್ಫೂರ್ತಿ ಪಡೆದು ನಾನು ಅಲ್ಲಿಗೆ ಹೋಗುತ್ತೇನೆ.
 
ಆ ತ್ಯಾಗ ಮತ್ತು ತಪಸ್ಸಿನ ಪ್ರತಿಮೆಗಳು...

500 ವರ್ಷಗಳ ತಾಳ್ಮೆ...

ಆ ದೀರ್ಘ ತಾಳ್ಮೆಯ ಅವಧಿ...

ತ್ಯಾಗ ಮತ್ತು ತಪಸ್ಸಿನ ಲೆಕ್ಕವಿಲ್ಲದಷ್ಟು ಘಟನೆಗಳು...

ದಾನಿಗಳ ಕಥೆಗಳು... ತ್ಯಾಗಗಳು... 
 
ಹೆಸರು ತಿಳಿದಿಲ್ಲದ ಅನೇಕ ಜನರಿದ್ದಾರೆ, ಆದರೂ ಅವರ ಜೀವನವು ಒಂದೇ ಗುರಿ ಹೊಂದಿದೆ - ಭವ್ಯವಾದ ರಾಮ ಮಂದಿರದ ನಿರ್ಮಾಣ. ಅಸಂಖ್ಯಾತ ವ್ಯಕ್ತಿಗಳ ನೆನಪುಗಳು ನನ್ನೊಂದಿಗೆ ಇರುತ್ತದೆ.

ಆ ಕ್ಷಣದಲ್ಲಿ 140 ಕೋಟಿ ದೇಶವಾಸಿಗಳು ತಮ್ಮ ಹೃದಯದಿಂದ ನನ್ನೊಂದಿಗೆ ಸಂಪರ್ಕ ಹೊಂದಿದಾಗ ಮತ್ತು ನಿಮ್ಮ ಶಕ್ತಿಯನ್ನು ಹೊತ್ತು ನಾನು ಗರ್ಭಗುಡಿ ಪ್ರವೇಶಿಸಿದಾಗ, ನಾನು ಒಬ್ಬಂಟಿಯಾಗಿಲ್ಲ, ಆದರೆ ನೀವೆಲ್ಲರೂ ನನ್ನೊಂದಿಗೆ ಇದ್ದೀರಿ ಎಂದು ನನಗೆ ಅನಿಸುತ್ತಿದೆ.

ಸ್ನೇಹಿತರೆ,

ಈ 11 ದಿನಗಳು ನನಗೆ ವೈಯಕ್ತಿಕ ಆಚರಣೆಯಾಗಿರುತ್ತವೆ, ಆದರೆ ನನ್ನ ಭಾವನೆಗಳು ಇಡೀ ವಿಶ್ವದೊಂದಿಗೆ ಇದೆ. ನೀವು ಸಹ ನಿಮ್ಮ ಹೃದಯದಿಂದ ನನ್ನೊಂದಿಗೆ ಸಂಪರ್ಕದಲ್ಲಿರಿ ಎಂದು ನಾನು ಪ್ರಾರ್ಥಿಸುತ್ತೇನೆ.

ರಾಮ್ ಲಲ್ಲಾನ ಪಾದಗಳಲ್ಲಿ ನನ್ನೊಳಗೆ ಪ್ರತಿಧ್ವನಿಸುವ ಅದೇ ಭಕ್ತಿಯಿಂದ ನಾನು ನಿಮ್ಮ ಭಾವನೆಗಳನ್ನು ಅರ್ಪಿಸುತ್ತೇನೆ.

ಸ್ನೇಹಿತರೆ,

ದೇವರು ನಿರಾಕಾರ ಎಂಬ ಸತ್ಯ ನಮಗೆಲ್ಲರಿಗೂ ತಿಳಿದಿದೆ. ಆದಾಗ್ಯೂ, ದೇವರು, ತನ್ನ ಭೌತಿಕ ರೂಪದಲ್ಲಿಯೂ ಸಹ, ನಮ್ಮ ಆಧ್ಯಾತ್ಮಿಕ ಪ್ರಯಾನ್ನು ಬಲಪಡಿಸುತ್ತಾನೆ. ಜನರ ರೂಪದಲ್ಲಿ ದೇವರ ಉಪಸ್ಥಿತಿಯನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ,  ಅನುಭವಿಸಿದ್ದೇನೆ. ಅದೇ ಜನರು ದೇವರ ರೂಪದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದಾಗ ಮತ್ತು ಆಶೀರ್ವಾದವನ್ನು ನೀಡಿದಾಗ, ನಾನು ಶಕ್ತಿಯ ಹೊಸ ರೂಪವನ್ನು ಅನುಭವಿಸುತ್ತೇನೆ. ಇಂದು ನಾನು ನಿಮ್ಮ ಆಶೀರ್ವಾದ ಕೋರುತ್ತೇನೆ. ಆದ್ದರಿಂದ, ನಿಮ್ಮ ಭಾವನೆಗಳನ್ನು ಪದಗಳಲ್ಲಿ, ಬರಹದಲ್ಲಿ ವ್ಯಕ್ತಪಡಿಸಿ, ನನ್ನನ್ನು ಆಶೀರ್ವದಿಸಬೇಕೆಂದು ನಾನು ಪ್ರಾರ್ಥಿಸುತ್ತೇನೆ. ನಿಮ್ಮ ಆಶೀರ್ವಾದದ ಪ್ರತಿಯೊಂದು ಪದವೂ ನನಗೆ ಕೇವಲ ಒಂದು ಪದವಲ್ಲ, ಅದು ಮಂತ್ರವಾಗಿದೆ. ಇದು ಖಂಡಿತವಾಗಿಯೂ ಮಂತ್ರದ ಶಕ್ತಿಯಾಗಿ ಕೆಲಸ ಮಾಡುತ್ತದೆ. NaMo ಅಪ್ಲಿಕೇಶನ್ ಮೂಲಕ ನಿಮ್ಮ ಮಾತುಗಳು ಮತ್ತು ಭಾವನೆಗಳೊಂದಿಗೆ ನೀವು ನೇರವಾಗಿ ನನ್ನನ್ನು ತಲುಪಬಹುದು.

ನಾವೆಲ್ಲರೂ ಶ್ರೀರಾಮನ ಭಕ್ತಿಯಲ್ಲಿ ಮುಳುಗೋಣ. ಈ ಭಾವನೆಯೊಂದಿಗೆ, ನಾನು ಎಲ್ಲಾ ರಾಮನ ಭಕ್ತರಿಗೆ ನಮಸ್ಕರಿಸುತ್ತೇನೆ.

ಜೈ ಶ್ರೀ(ಸಿಯಾ) ರಾಮ್

ಜೈ ಸಿಯಾ ರಾಮ್

ಜೈ ಸಿಯಾ ರಾಮ್

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India remains fastest-growing major economy, domestic investors power market resilience

Media Coverage

India remains fastest-growing major economy, domestic investors power market resilience
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 14 ಮಾರ್ಚ್ 2026
March 14, 2026

Heartening Resolve Meets Bold Action: PM Modi's Transformative Push for a Developed Assam.