ನನ್ನ ಆತ್ಮೀಯ ಸ್ನೇಹಿತರು, ಪ್ರಧಾನ ಮಂತ್ರಿ ಕಿಶಿದಾ ಜೀ ಅವರೇ,

ಎರಡೂ ದೇಶಗಳ ಪ್ರತಿನಿಧಿಗಳೇ,

ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳೇ,

ಗುಜರಾತ್‌ನ ಹಣಕಾಸು ಸಚಿವ ಶ್ರೀ ಕನುಭಾಯಿ ದೇಸಾಯಿ,

ಭಾರತ-ಜಪಾನ್ ಉದ್ಯಮ ಮುಖಂಡರ ವೇದಿಕೆಯ ಎಲ್ಲಾ ಸದಸ್ಯರೇ,

ನಿಮಗೆಲ್ಲರಿಗೂ ಸ್ವಾಗತ,

ಎಲ್ಲರಿಗೂ ನಮಸ್ಕಾರ! 

ಪ್ರಧಾನಮಂತ್ರಿ ಕಿಶಿದಾ ಜೀ ಮತ್ತು ಜಪಾನ್‌ನಿಂದ ಭಾರತಕ್ಕೆ ಬಂದಿರುವ ಎಲ್ಲಾ ಸ್ನೇಹಿತರಿಗೆ ಹಾರ್ದಿಕ ಸ್ವಾಗತ. ಎರಡು ವರ್ಷಗಳ ಅಂತರದ ನಂತರ ನಾವು ಭಾರತ ಮತ್ತು ಜಪಾನ್ ನಡುವಿನ ಶೃಂಗಸಭೆ ಮಟ್ಟದ ಸರಣಿ ಸಭೆಗಳನ್ನು ಪುನರಾರಂಭಿಸಲು ಸಾಧ್ಯವಾಗಿರುವುದು ನನಗೆ ತುಂಬಾ ಸಂತೋಷವಾಗಿದೆ. ನಮ್ಮ ಆರ್ಥಿಕ ಸಂಬಂಧಗಳು ಕೋವಿಡ್ ನಂತರದ ಯುಗದಲ್ಲಿ ಭಾರತ-ಜಪಾನ್ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿ ಬಲವಾದ ಆಧಾರ ಸ್ತಂಭಗಳಾಗಿವೆ.  ಆರ್ಥಿಕ ಚೇತರಿಕೆ ಮತ್ತು ಆರ್ಥಿಕ ಭದ್ರತೆಗಾಗಿ ಭಾರತ-ಜಪಾನ್ ಆರ್ಥಿಕ ಪಾಲುದಾರಿಕೆಯು ಎರಡೂ ದೇಶಗಳಿಗೆ ಮಾತ್ರವಲ್ಲದೆ, ಈ ಇಡೀ ಪ್ರದೇಶ ಮತ್ತು ವಿಶ್ವಕ್ಕೆ ವಿಶ್ವಾಸ ಹಾಗೂ ಸ್ಥಿತಿಸ್ಥಾಪಕತ್ವವನ್ನು ಒದಗಿಸುತ್ತದೆ. ಭಾರತದಲ್ಲಿ ವ್ಯಾಪಕವಾಗಿ ಕೈಗೊಳ್ಳಲಾಗುತ್ತಿರುವ ಸುಧಾರಣೆಗಳು ಮತ್ತು ನಮ್ಮ ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕ ಯೋಜನೆಗಳು ಹಿಂದೆಂದಿಗಿಂತಲೂ ಹೆಚ್ಚು ಸಕಾರಾತ್ಮಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತಿವೆ. 

ಘನತೆವೆತ್ತವರೇ, 

ಭಾರತದ ರಾಷ್ಟ್ರೀಯ ಮೂಲಸೌಕರ್ಯ ಕೊಳವೆ ಮಾರ್ಗವು 1.8 ಟ್ರಿಲಿಯನ್ ಡಾಲರ್ ಮೌಲ್ಯದ 9000ಕ್ಕೂ ಹೆಚ್ಚು ಯೋಜನೆಗಳನ್ನು ಹೊಂದಿದ್ದು, ಇದು ಸಹಕಾರಕ್ಕೆ ಅನೇಕ ಅವಕಾಶಗಳನ್ನು ಒದಗಿಸುತ್ತದೆ. ಜಪಾನಿನ ಕಂಪನಿಗಳು ನಮ್ಮ ಪ್ರಯತ್ನಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಮತ್ತು ಇದಕ್ಕಾಗಿ, ಭಾರತದಲ್ಲಿ ಜಪಾನಿನ ಕಂಪನಿಗಳಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ವಿಸ್ತರಿಸಲು ನಾವು ಬದ್ಧರಾಗಿದ್ದೇವೆ. 


ಸ್ನೇಹಿತರೇ, 
ಪ್ರಗತಿ, ಸಮೃದ್ಧಿ ಮತ್ತು ಪಾಲುದಾರಿಕೆ ಭಾರತ-ಜಪಾನ್ ಬಾಂಧವ್ಯದ ತಿರುಳಾಗಿದೆ. ಭಾರತ ಜಪಾನ್ ಉದ್ಯಮ ಮುಖಂಡರ ವೇದಿಕೆಯು ಎರಡೂ ದೇಶಗಳ ಆರ್ಥಿಕ ಸಂಬಂಧಗಳನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ, ನಾನು ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ ಮತ್ತು ನನ್ನ ಶುಭ ಹಾರೈಕೆಗಳನ್ನು ತಿಳಿಸಲು ಬಯಸುತ್ತೇನೆ. 

ತುಂಬ ಧನ್ಯವಾದಗಳು!

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian banks see exponential growth in deposits and loans since FY05: SBI Report

Media Coverage

Indian banks see exponential growth in deposits and loans since FY05: SBI Report
NM on the go

Nm on the go

Always be the first to hear from the PM. Get the App Now!
...
PM Modi shares a Sanskrit Subhashitam urging citizens to to “Arise, Awake” for Higher Purpose
January 13, 2026

The Prime Minister Shri Narendra Modi today shared a Sanskrit Subhashitam urging citizens to embrace the spirit of awakening. Success is achieved when one perseveres along life’s challenging path with courage and clarity.

In a post on X, Shri Modi wrote:

“उत्तिष्ठत जाग्रत प्राप्य वरान्निबोधत।

क्षुरस्य धारा निशिता दुरत्यया दुर्गं पथस्तत्कवयो वदन्ति॥”