केंद्र और राज्य सरकार को बिहार के विकास के लिए मिलकर काम करना चाहिए: प्रधानमंत्री मोदी
प्रधानमंत्री मोदी ने मोकामा में नमामि गंगे के तहत एवं विभिन्न राजमार्ग परियोजनाओं का शिलान्यास किया
हम एक योजना की शुरूआत करते हैं तो यह भी सुनिश्चित करते हैं कि उसे पूरा करने की रूपरेखा तैयार करें: प्रधानमंत्री
जिन परियोजनाओं का शिलान्यास किया जा रहा है, उससे बिहार के विकास को गति मिलेगी: प्रधानमंत्री मोदी

 

ಭಾರತ ಮಾತಾ ಕಿ ಜೈ. (ಭಾರತ ಮಾತೆಗೆ ಜಯವಾಗಲಿ) – ಭಾರತ ಮಾತಾ ಕಿ ಜೈ (ಭಾರತ ಮಾತೆಗೆ ಜಯವಾಗಲಿ).

ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ನೆರೆದಿರುವ ನನ್ನ ಪ್ರೀತಿಯ ಸಹೋದರ ಮತ್ತು ಸಹೋದರಿಯರೇ

ಇಡೀ ದೇಶವೇ ದೀಪಾವಳಿ ಆಚರಿಸಲು ಸನ್ನದ್ಧವಾಗುತ್ತಿದೆ. ಛಾತ್ ಪೂಜೆಗೂ ಸಿದ್ಧತೆ ನಡೆದಿದೆ. ನಾನು ದೀಪಾವಳಿ ಮತ್ತು ಛಾತ್ ಪೂಜೆಗಾಗಿ ನಿಮಗೆ ಮೊದಲೇ ಶುಭಾಶಯ ಸಲ್ಲಿಸುತ್ತೇನೆ. ಈ ಪವಿತ್ರ ಸಂದರ್ಭದಲ್ಲಿ ಬಿಹಾರಕ್ಕೆ ಹೆಚ್ಚುಕಡಿಮೆ 4 ಸಾವಿರ ಕೋಟಿ ರೂಪಾಯಿ ಕೊಡುಗೆಯನ್ನು ನೀಡಲಾಗುತ್ತಿದೆ.

ಸೋದರ ಮತ್ತು ಸೋದರಿಯರೇ, ಕೆಲವೇ ಹೊತ್ತಿನ ಮೊದಲು ಗಡ್ಕರಿ ಅವರು, ಎಷ್ಟು ರಸ್ತೆ ಯೋಜನೆಗಳು, ಹೆದ್ದಾರಿ ಯೋಜನೆಗಳನ್ನು ಭಾರತ ಸರ್ಕಾರ ಆರಂಭಿಸಿದೆ ಎಂಬ ಬಗ್ಗೆ ವರ್ಣಿಸುತ್ತಿದ್ದರು. ಅವರ ವರ್ಣನೆ ದೀರ್ಘವಾಗಿತ್ತು, ನಾನು ನೋಡಿದೆ, ನೀವೂ ಕೂಡ ಇಷ್ಟು ಕಡಿಮೆ ಅವಧಿಯಲ್ಲಿ ಬಿಹಾರದ ಭಾಗ್ಯವನ್ನು ಬದಲಿಸಲು ಇಷ್ಟೊಂದು ಯೋಜನೆಗಳು ಜಾರಿಯಾಗಿವೆ ಎಂದು ನೀವೂ ಕೂಡ ಅಚ್ಚರಿಪಟ್ಟಿದ್ದೀರಿ.

ಭಾರತ ಸರ್ಕಾರದ ಎಲ್ಲ ಯೋಜನೆಗಳಿಗೆ ಎಲ್ಲ ಸಾಧ್ಯ ಮಾರ್ಗದಲ್ಲಿ ಬೆಂಬಲ ನೀಡುತ್ತಿರುವ ನಿತೀಶ್ ಕುಮಾರ್ ಅವರಿಗೆ ಮತ್ತು ಅವರ ತಂಡಕ್ಕೆ ನಾನು ಆಭಾರಿಯಾಗಿದ್ದೇನೆ. ನಾವು ಕಠಿಣವೆನಿಸಿದಾಗ ಅವರು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ಬರುತ್ತಾರೆ ಮತ್ತು ಇಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಿಹಾರದ ಕನಸುಗಳನ್ನು ನನಸು ಮಾಡಲು ಹೆಗಲಿಗೆ ಹೆಗಲು ಕೊಟ್ಟು ಸಮರ್ಪಣಾಭಾವದಿಂದ ಶ್ರಮಿಸುತ್ತಿವೆ. ಇದರ ಫಲಿತಾಂಶವನ್ನು ನೀವೂ ಕಾಣುತ್ತಿದ್ದೀರಿ. ನಿತೀಶ್ ಅವರು ಹಲವು ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಅವರು ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಅವರು ಹಲವು ವರ್ಷಗಳ ಕಾಲ ಈ ಪ್ರದೇಶದಿಂದ ಸಂಸತ್ ಸದಸ್ಯರಾಗಿದ್ದರು. ಹೀಗಾಗಿ ಸಹಜವಾಗೇ ಅವರಿಗೆ ನಿಮ್ಮೊಂದಿಗೆ ಭಾವನಾತ್ಮಕ ಸಂಪರ್ಕವಿದೆ. ಈ ಭಾವನಾತ್ಮಕ ಬಾಂಧವ್ಯದಿಂದಾಗಿ, ಅವರು ಅವಿಶ್ರಾಂತವಾಗಿ ಅದು ಆಗಬೇಕು, ಇದು ಆಗಬೇಕು ಎಂದು ಕೆಲಸ ಮಾಡುತ್ತಿದ್ದಾರೆ. ನಾನು ಅವರ ಭಾವನೆಗಳಿಗೆ ಗೌರವ ನೀಡುತ್ತೇನೆ ಮತ್ತು ಬಿಹಾರದ ಲಕ್ಷಾಂತರ ಜನತೆಯ ಕನಸುಗಳನ್ನು ನನಸು ಮಾಡಲು ಭಾರತ ಸರ್ಕಾರ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತದೆ ಎಂದು ಭರವಸೆ ನೀಡುತ್ತೇನೆ ಮತ್ತು ಇದು ಅಭಿವೃದ್ಧಿಯ ಪಯಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.

 

ಸಹೋದರ ಸಹೋದರಿಯರೇ, ಇಂದು ಮೊಕಾಮಾದ ನೆಲಕ್ಕೆ ಆಗಮಿಸುವ ಉತ್ತಮ ಅವಕಾಶ ನನಗೆ ದೊರೆತಿದೆ. ಇಂದು ಶಂಕುಸ್ಥಾಪನೆ ನೆರವೇರುತ್ತಿರುವ ಸೇತುವೆಯ ವಿನ್ಯಾಸವನ್ನು ನಾವು ಇಲ್ಲಿಗೆ ಬರುವಾಗ ನಿತೀಶ್ ಅವರು ನನಗೆ ಮೇಲಿನಿಂದ ತೋರಿಸಿದರು. ಅವರು ನನಗೆ ಮಾದರಿಯನ್ನೂ ತೋರಿಸಿದರು ಮತ್ತು ಇಂಥ ಸೇತುವೆ ಇಡೀ ಬಿಹಾರಕ್ಕೆ ಆಕರ್ಷಣೆಯ ಕೇಂದ್ರಬಿಂದುವಾಗುತ್ತದೆ ಎಂಬ ವಿಶ್ವಾಸ ನನಗಿದೆ. ಈ ಸೇತುವೆಯು ಬಿಹಾರದ ಪ್ರಥಮ ಮುಖ್ಯಮಂತ್ರಿ ಡಾ. ಶ್ರೀ. ಕೃಷ್ಣ ಅವರ ಕರ್ಮಭೂಮಿ ಬೆಗುಸರಾಯ್ ನಿಂದ ರಾಜ್ಯದ ರಾಜಧಾನಿ ಪಾಟ್ನಾಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಂಸ್ಕರಣ ಘಟಕ, ರಸಗೊಬ್ಬರ ಘಟಕ, ಶಾಖೋತ್ಪನ್ನ ವಿದ್ಯುತ್ ಸ್ಥಾವರ ಮತ್ತು ಬರೌನಿ ಡೈರಿಯನ್ನು ಸ್ಥಾಪಿಸುವ ಮೂಲಕ ಬೆಗುಸರಾಯ್ ಅನ್ನು ಬಿಹಾರದ ಕೈಗಾರಿಕಾ ರಾಜಧಾನಿ ಮಾಡಿದ ಶ್ರೀ ಬಾಬು ಅವರಿಗೆ ನಾನು ಇಂದಿಗೂ ನಮಿಸುತ್ತೇನೆ.

ರಾಷ್ಟ್ರಕವಿ ದಿನಕರ್ ಅವರಿಗೆ ಅವರ ಬಾಲ್ಯದಲ್ಲಿ ಮೌಲ್ಯಗಳನ್ನು ತುಂಬಿದ ಶಿಕ್ಷಣದ ದೇವಾಲಯಕ್ಕೆ ಕೆಲವೇ ನೂರು ಮೀಟರು ದೂರದಿಂದ ಆ ನೆಲಕ್ಕೆ ನಾನು ಇಂದು ಬಂದಿದ್ದೇನೆ. ದಿನಕರ್ ಅವರ ಭಾವನೆಗಳು ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತವೆ. ಅವು ನಮಗೆ ಅಂಧಶ್ರದ್ಧೆಗಳಿಂದ ವಿಮೋಚನೆಯ ಹಾದಿಯನ್ನು ತೋರುತ್ತವೆ. ಇದು ದಲಿತರು, ತುಳಿತಕ್ಕೊಳಗಾದ ವ್ಯಕ್ತಿಗಳು ಅಥವಾ ಕಿರುಕುಳಕ್ಕೆ ಒಳಗಾದವರು,ವಂಚಿತರು, ಗ್ರಾಮೀಣರು,ರೈತರು, ಕಾರ್ಮಿಕರು ಯಾರೇ ಆಗಿರಲಿ ಅವರೆಲ್ಲರ ಬಗ್ಗೆ ಆದರದ ಭಾವನೆ ಮೂಡುವಂತೆದೀನಕರ್ ಅವರ ಭಾವನೆಗಳು ನಮಗೆ ಪ್ರೇರಣೆ ನೀಡುತ್ತೇವೆ. ಇದು ದಿನಕರ್ ಅವರು ಬೆಳೆದರು, ದಿನಕರ್ ಅವರು ಹೇಳುತ್ತಾರೆ:

‘ಆರತಿ ಲಿಯೇ ತೋ ಕೈಸೆ ಡೂಂಡ್ತಾ ಹೆ ಮೂರಖ್, ಅಂಧ ಶ್ರದ್ಧ ಕೆ ಕಿಲಾಫ್ ಛೋಟ್ ಪಹುಂಚಾತೆ ಥೆ’

‘ಆರತಿ ಲಿಯೇ ತೋ ಕೈಸೆ ಡೂಂಡ್ತಾ ಹೆ ಮೂರಖ್, ಮಂದಿರೋ, ರಾಜ್ ಪ್ರಸಾದೋಮೇ, ತಪಖಾನೋ ಮೇನ್’

‘ಅರೆ ದೇವತಾ ಕಹಿ ಸಡ್ಕೋ ಪರ್ ಗಿಟ್ಟಿ ತೋಡ್ ರಹೇ, ದೇವತಾ ಮಿಲೇಂಗೇ ಖೇತೋಮೆ, ಖಲಿಹಾನೋ ಮೇ’.

ಇಂದು, ಯೋಜನೆಗಳಿಗೆ ಚಾಲನೆ ನೀಡಲು ಅಲ್ಲಿ ಕಲ್ಲು ಒಡೆಯುವವರು ನಮ್ಮ ದೇವತೆಗಳು, ಅವರು ನಮ್ಮ ಭವಿಷ್ಯವನ್ನು ರೂಪಿಸುತ್ತಾರೆ. ಭಾರತ ಸರ್ಕಾರ ದಿನಕರ್ ಅವರ ಕನಸುಗಳನ್ನು ನನಸು ಮಾಡಲು ಬಹು ದೊಡ್ಡ ಹೆಜ್ಜೆ ಇಟ್ಟಿದೆ.

ಸಹೋದರ ಸಹೋದರಿಯರೇ, ಈ ಭೂಮಿಯು ಭಗವಾನ್ ಪರಶುರಾಮರ ತಪೋಭೂಮಿಯೂ ಆಗಿದೆ. ಪ್ರಾಚೀನ ಇತಿಹಾಸದಲ್ಲಿನ ಅಂಗ್, ಮಗದ್ ಮತ್ತು ಮಿಥಿಲಾ ನಗರಗಳು ಪವಿತ್ರ ಗಂಗಾ ನದಿಯ ಸಿಮಿರಿಯಾ ತಟದಲ್ಲಿದ್ದುದನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಪವಿತ್ರ ಸಿಮರಿಯಾ ತಟಕ್ಕೆ ಆಗಮಿಸುವ ಅವಕಾಶ ನನಗೆ ದೊರೆತಿದೆ, ಈ ವೇದಿಕೆಯಿಂದ ನಾನು ಇದಕ್ಕೆ ಗೌರವಪೂರ್ವಕವಾಗಿ ತಲೆಬಾಗುತ್ತೇನೆ. ಇದು ವೀರ ಪರಾಕ್ರಮಿ ಬಾಬಾ ಚೌಹರ್ ಮಲ್ ಅವರ ನೆಲವೂ ಆಗಿದೆ. ಇಲ್ಲಿಂದ ಸ್ವಲ್ಪವೇ ದೂರದಲ್ಲಿ ಪ್ರತಿ ವರ್ಷ ಅವರ ನೆನಪಿನಲ್ಲಿ ಇಲ್ಲಿ ಮೇಳ ನಡೆಯುತ್ತದೆ. ಬೃಹತ್ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ನಾನು ಕೂಡ ಈ ಪವಿತ್ರ ಭೂಮಿಗೆ ಶ್ರದ್ಧೆಯಿಂದ ನಮಿಸುತ್ತೇನೆ.

ಬಿಹಾರದ ನನ್ನ ಆತ್ಮೀಯ ಸಹೋದರ ಮತ್ತು ಸಹೋದರಿಯರೇ, ನನಗೆ ಎಲ್ಲಿಯವರೆಗೆ ಕಣ್ಣು ಹಾಯಿಸಲು ಸಾಧ್ಯವಾಗುತ್ತಿದೆಯೋ ಅಲ್ಲಿಯ ತನಕ ನೋಡುತ್ತಿದ್ದೇನೆ, ಎಲ್ಲ ಕಡೆ ಜನರೇ ಕಾಣಿಸುತ್ತಿದ್ದಾರೆ. ಈ ಶಾಮಿಯಾನದ ಒಳಗೆ ಎಷ್ಟು ಜನ ಇದ್ದಾರೋ, ಅದರ ಎರಡು ಮೂರು ಪಟ್ಟು ಜನರು ಹೊರಗೆ ಇದ್ದಾರೆ. ಅವರು ಕೆಲವು ಸಮಯದಿಂದ ಬಿರು ಬಿಸಿಲಲ್ಲಿ ತೊಂದರೆ ಅನುಭವಿಸುತ್ತಿದ್ದರೂ, ನಮ್ಮನ್ನು ಹರಸಲು ಬಂದಿದ್ದಾರೆ, ನಾನು ಅವರೆಲ್ಲರಿಗೂ ನಮನ ಸಲ್ಲಿಸುತ್ತೇನೆ. ನಾನು ನಿಮ್ಮನ್ನು ಸ್ವಾಗತಿಸುತ್ತೇನೆ. ಆದರೆ ಬಿಹಾರದ ನನ್ನ ಪ್ರೀತಿಯ ಸಹೋದರ ಸಹೋದರಿಯರೇ, ನಾನು ನಿಮಗೆ ಭಾರತ ಸರ್ಕಾರ ಮತ್ತು ಬಿಹಾರ ಸರ್ಕಾರ ನಿಮ್ಮ ಈ ಶ್ರಮ, ಕಷ್ಟ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಭರವಸೆ ನೀಡುತ್ತೇನೆ. ನಮ್ಮ ದೇಶದಲ್ಲಿ ಎಂಥ ಕೆಲವು ಜನರೂ ಇದ್ದಾರೆ ಎಂದರೆ ಅವರ ಯೋಚನೆ ದೇಶವನ್ನು ಹಿಂದಕ್ಕೆ ತೆಗೆದುಕೊಂಡು ಹೋಗುತ್ತದೆ. ನಾನು ಇಂಥ ರಾಜಕಾರಣಿಗಳ ಬಗ್ಗೆ ಓದಿದ್ದೇನೆ, ಯಾರಾದರೂ ರಸ್ತೆ ನಿರ್ಮಾಣದ ಬಗ್ಗೆ ಮಾತನಾಡಿದರೆ, ಅವರು ಹೇಗೆ ಉತ್ತರ ಕೊಡುತ್ತಾರೆ ಎಂದರೆ: ‘ನಮಗೆ ರಸ್ತೆಯ ಅಗತ್ಯ ಏನಿದೆ, ಯಾರ ಬಳಿ ಕಾರು ಇದೆಯೋ ಅವರಿಗೆ ರಸ್ತೆ ಬೇಕು, ಬಡವರ ಬಳಿ ಕಾರುಗಳಿವೆಯೇ, ನಮಗೆ ಏಕೆ ರಸ್ತೆ ಬೇಕು?’ ಇಂಥ ನೇತ್ಯಾತ್ಮಕ, ವಿಕೃತ ಮನೋಭಾವವನ್ನು ಹೊಂದಿರುವ ಇಂಥವರು, ದೇಶವನ್ನು ಹೀಗೆ ಹಾಳುಗೆಡವಿದ್ದಾರೆ. ಇಂದು ನೀವು ಹಳ್ಳಿಗಳಿಗೆ ಹೋದರೆ, ಅಲ್ಲಿ ರಸ್ತೆ ಇರುವುದಿಲ್ಲ... ನನ್ನನ್ನು ಭೇಟಿ ಮಾಡಲು ಬರುವ ಕೆಲವು ಸಂಸತ್ ಸದಸ್ಯರು, ತಮ್ಮ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿಯಲ್ಲಿ ಕೆಲವು ರಸ್ತೆಗಳು ನಿರ್ಮಾಣ ಆಗಿಲ್ಲ, ತಮ್ಮ ಕ್ಷೇತ್ರಕ್ಕೆ ಆದ್ಯತೆ ನೀಡಿ ಎಂದು ಹೇಳುತ್ತಾರೆ. ಗ್ರಾಮೀಣ ಪ್ರದೇಶದಿಂದ ಬಂದು ನನ್ನನ್ನು ಭೇಟಿ ಮಾಡುವವರು, ಪ್ರಧಾನಮಂತ್ರಿ ಗ್ರಾಮೀಣ ರಸ್ತೆ ಯೋಜನೆ ಅಡಿ ರಸ್ತೆ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸುತ್ತಾರೆ.

ಸಹೋದರ ಮತ್ತು ಸಹೋದರಿಯರೇ, ಕಳೆದ ಮೂರು ವರ್ಷಗಳಲ್ಲಿ, ನಾವು ಆಯವ್ಯಯದಲ್ಲಿ ಎಷ್ಟು ಹೆಚ್ಚಳ ಮಾಡಿದ್ದೇವೆ ಎಂದರೆ, ಕಾಮಗಾರಿಯಲ್ಲಿ ಎಷ್ಟು ವೇಗ ತಂದಿದ್ದೇವೆ ಎಂದರೆ, ಹಿಂದೆ ಒಂದು ದಿನಕ್ಕೆ ಎಷ್ಟು ಉದ್ದದ ರಸ್ತೆ ನಿರ್ಮಾಣ ಆಗುತ್ತಿತ್ತೋ, ಇಂದು ಅದರ ದುಪ್ಪಟ್ಟು ರಸ್ತೆ ನಿರ್ಮಾಣಮಾಡುವಲ್ಲಿ ಯಶಸ್ವಿಯಾಗಿದ್ದೇವೆ, ಇದು ಗ್ರಾಮೀಣ ಬದುಕನ್ನೇ ಬದಲಾಯಿಸುತ್ತಿದೆ. ಆದಾಗ್ಯೂ, ಕೇವಲ ಗ್ರಾಮೀಣ ರಸ್ತೆಗಳಷ್ಟೇ ಸಾಲದು. ನಾವು ಆರ್ಥಿಕತೆಗೆ ಚಾಲನೆ ನೀಡುವ ದೊಡ್ಡ ದೊಡ್ಡ ಆರ್ಥಿಕ ಕೇಂದ್ರಗಳನ್ನು ಅಭಿವೃದ್ಧಿ ಕೇಂದ್ರಗಳನ್ನು ಈ ರಸ್ತೆಯ ಮೂಲಕ ಒಳನಾಡಿಗೆ ಸಂಪರ್ಕಿಸಬೇಕಾಗಿದೆ,

ಇಂದು, ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆಶಂಕುಸ್ಥಾಪನೆ ನೆರವೇರಿಸಲಾಗಿದೆ, ಈ ಯೋಜನೆಗಳು ಕೇವಲ ವಾಹನಗಳು ಅದರ ಮೇಲೆ ಓಡಾಡಲು ಮಾತ್ರವೇ ಅಲ್ಲ. ಈ ರಸ್ತೆಗಳ ನಿರ್ಮಾಣ ಈ ಪ್ರದೇಶದ ಆರ್ಥಿಕತೆಯನ್ನು ಬದಲಾಯಿಸುವ ಉದ್ದೇಶವನ್ನೂ ಹೊಂದಿದೆ. ಇದು ರಸ್ತೆಗಳ ಮೂಲಕ ಇಲ್ಲಿ ಪ್ರಗತಿಯನ್ನು ತರುವ ನಮ್ಮ ಪ್ರಯತ್ನವಾಗಿದೆ ಮತ್ತು ಈ ರಸ್ತೆಗಳು ಪ್ರಗತಿಯನ್ನು ಎಳೆಯುತ್ತವೆ ಮತ್ತು ಈ ಪ್ರದೇಶದ ಪ್ರಗತಿಗೂ ಕೊಡುಗೆ ನೀಡುತ್ತವೆ.

 

ಸಹೋದರ ಮತ್ತು ಸಹೋದರಿಯರೇ, ಗಂಗೆ ನಮ್ಮ ಜೀವದೊಂದಿಗೆ ಕೂಡಿದೆ, ಆಕೆಯ ಮೇಲೆ ಹಲವರು ಅವಲಂಬಿತರಾಗಿದ್ದಾರೆ. ಇಂದು ಮಾತೆ ಗಂಗೆ ಇಲ್ಲದಿದ್ದರೆ, ಭಯಂಕರ ಪರಿಸ್ಥಿತಿ ಅನುಭವಿಸಬೇಕಾಗಿತ್ತು ಗೊತ್ತೆ? ಆದಾಗ್ಯೂ ನಾವು ಗಂಗೆಯನ್ನು ರಕ್ಷಿಸುವ ಪ್ರಯತ್ನ ಮಾಡಿಲ್ಲ, ಗಂಗೆಯನ್ನು ಉಳಿಸುವುದು ನಮ್ಮ ಮುಂದಿನ ಪೀಳಿಗೆಯನ್ನು ಉಳಿಸಿದಂತೆ. ಗಂಗೆಯನ್ನು ಶುದ್ಧಗೊಳಿಸಿದರೆ, ಆಗ ಆಕೆಯ ಹರಿವನ್ನು ಯಾರೂ ತಡೆಯಲು ಸಾಧ್ಯವಿಲ್ಲ ಹೀಗಾಗಿಯೇ ಕೇಂದ್ ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಗಂಗಾಶುದ್ಧೀಕರಣಕ್ಕೆ ಮುಂದಾಗಿದೆ. ಇದು ಕೇವಲ ಒಂದು ನದಿಯ ಹೆಸರಲ್ಲ. ನಾವು ನದಿಗಳ ಬಗ್ಗೆ ಇದೇ ರೀತಿಯ ಭಾವನೆ ಮೂಡಿಸಿಕೊಂಡರೆ, ನದಿಗಳನ್ನು ಉಳಿಸಲು ಉಪಕ್ರಮ ಕೈಗೊಂಡರೆ, ಭಾರತದ ಎಲ್ಲ ನದಿಗಳ ಬಗ್ಗೆ ಜಾಗೃತಿ ಮೂಡುತ್ತದೆ. ನಾವು ಭಾರತದಲ್ಲಿ ಭವಿಷ್ಯದಲ್ಲಿ ನೀರಿನ ವಿವಾದ ತಪ್ಪಿಸಬೇಕು ಎಂದರೆ, ಇದು ಏಕೈಕ ಮಾರ್ಗವಾಗಿದೆ ಮತ್ತು ನಾವು ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿಯೇ ಈಗ ಗಂಗೋತ್ರಿಯಿಂದ ಬೆಂಗಾಲ್ ಸಾಗರ್ ವರೆಗೆ ಎಲ್ಲ ರಾಜ್ಯಗಳಲ್ಲಿ ಆರಂಭಿಸಿರುವ ಸ್ವಚ್ಛತೆಯ ಅಭಿಯಾನ, ಈ ಅಭಿಯಾನದೊಂದಿಗೆ ಸಂಪರ್ಕ ಹೊಂದಿರುವವರಿಗೆ ಜವಾಬ್ದಾರಿಯನ್ನು ಹಂಚಲಾಗಿದ್ದು, ಗಂಗೆ ಮಲಿನವಾಗದಂತೆ ತಡೆಯುವುದು ಅವರ ಪ್ರಥಮ ಆದ್ಯತೆಯ ಕ್ರಮ ಮತ್ತು ಜವಾಬ್ದಾರಿಯಾಗಿದೆ. ರಾಸಾಯನಿಕಗಳಿಂದ ಮಲಿನವಾದ, ಚರಂಡಿಯ ತ್ಯಾಜ್ಯ ನೀರಿನಿಂದ ಮಲಿನವಾದ ಜಲ ಗಂಗೆ ಸೇರದಂತೆ ಈಗ ಅಭಿಯಾನ ಕೈಗೊಳ್ಳಲಾಗಿದೆ. ಇಂದು ಬಿಹಾರದಲ್ಲಿ ಏಕಕಾಲದಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ, ಹೀಗಾಗಿ ಮುಂದಿನ ದಿನಗಳಲ್ಲಿ ನಾವು ಗಂಗೆಯ ಬಗ್ಗೆ ಹೇಗೆ ಶ್ರದ್ಧೆಯ ಭಾವನೆ ಇಟ್ಟುಕೊಂಡಿದ್ದೇವೋ ಅದೇ ರೂಪದಲ್ಲಿ ಕಾಣಬಹುದಾಗಿದೆ. ಗಂಗೆಮಾತೆ ನಮ್ಮ ಕನಸಿನಂತೆ ಹರಿದರೆ, ಛಾತ್ ಪೂಜೆಯಲ್ಲಿ ವಿಶೇಷ ಸಂಭ್ರಮ ಇರುತ್ತದೆ ಮತ್ತು ಆಗ ಶ್ರದ್ಧೆಯ ಭಾವನೆಯಲ್ಲಿ ಅನನ್ಯತೆ ಇರತ್ತದೆ.

ಸಹೋದರ ಸಹೋದರಿಯರೇ, ಕಳೆದ ಕೆಲವು ದಿನಗಳಿಂದ, ಭಾರತ ಸರ್ಕಾರದ ರೈಲ್ವೆ ಸಚಿವಾಲಯವು, ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಜನತೆಗಾಗಿ ಮಹತ್ವದ ರೈಲು ಸಂಚಾರ ಆರಂಭಿಸಿದೆ. ಇದು ದೀಪಾವಳಿ ಮತ್ತು ಛತ್ ಪೂಜೆಯ ಸಂದರ್ಭದಲ್ಲಿ ತುಂಬಾ ಅನುಕೂಲವಾಗಲಿದೆ. ಮುಂಬೈನಿಂದ ಗೋರಕ್ಪುರ ನಡುವಿನ ಅಂತ್ಯೋದಯ ಎಕ್ಸ್ ಪ್ರೆಸ್. ದೇಶದ ಪ್ರಥಮ ಅಂತ್ಯೋದಯ ಎಕ್ಸ್ ಪ್ರೆಸ್ ಇದಾಗಿದೆ, ಒಂದು ವಾರದ ಹಿಂದೆ ನಾನು ಎರಡನೇ ಅಂತ್ಯೋದಯ ಎಕ್ಸ್ ಪ್ರೆಸ್ ಗೆ ಸೂರತ್ ನಲ್ಲಿ ಹಸಿರು ನಿಶಾನೆ ತೋರಿದೆ. ಇದು ಸೂರತ್ ಮತ್ತು ಪಾಟ್ನಾದ ಜಯನಗರ್ ನಡುವೆ ಸಂಚರಿಸಲಿದೆ. ಬಡವರಲ್ಲೇ ಕಡು ಬಡವರು ಕೂಡ ಕೊನೆಯ ಕ್ಷಣದಲ್ಲಿ ಯಾವುದೇ ಕಾಯ್ದಿರಿಸುವ ಗೊಡವೆ ಇಲ್ಲದೆ ಪ್ರಯಾಣಿಸಲಿ ಎಂಬ ಕಾರಣದಿಂದ ನಾವು ಈ ವ್ಯವಸ್ಥೆ ಮಾಡಿದ್ದೇವೆ. ನಾವು ಬರೋಡಾ ಮತ್ತು ಬನಾರಸ್ ಗಳನ್ನು ಮಹಾಮನ ಎಕ್ಸ್ ಪ್ರೆಸ್ ಮೂಲಕ ಜೋಡಿಸಿದ್ದೇವೆ. ಸೂರತ್ ನಲ್ಲಿ, ಬರೋಡಾದಲ್ಲಿ ಮತ್ತು ಅಂಕಲೇಶ್ವರದಲ್ಲಿ ಕೆಲಸ ಮಾಡುವವರು, ಮಹಾರಾಷ್ಟ್ರದಲ್ಲಿ ಕೆಲಸ ಮಾಡುವವರು, ದೀಪಾವಳಿ ಮತ್ತು ಛತ್ ಪೂಜೆಗೆ ಆರಾಮದಾಯಕವಾಗಿ ತಮ್ಮ ಮನೆಗಳಿಗೆ ಹೋಗಬಹುದಾಗಿದೆ. ಈ ಸರ್ಕಾರ ಈ ನಾಲ್ಕು ರೈಲುಗಳನ್ನು ಅತಿ ವೇಗವಾಗಿ ಬಿಹಾರ ಮತ್ತು ಉತ್ತರ ಪ್ರದೇಶದ ಪೂರ್ವ ಭಾಗವನ್ನು ಸಂಪರ್ಕಿಸಲು ಕೆಲವೇ ದಿನಗಳ ಹಿಂದೆ ಆರಂಭಿಸಿದೆ, ಇದರಿಂದ ಖಂಡಿತವಾಗಿ ಛಾತ್ ಪೂಜೆ ಮತ್ತು ದೀಪಾವಳಿ ಸಂದರ್ಭದಲ್ಲಿ ನಮ್ಮ ಜನತೆಗೆ ಲಾಭವಾಗಲಿದೆ.

ಸಹೋದರ ಮತ್ತು ಸಹೋದರಿಯರೇ, ಕೆಲವೇ ಹೊತ್ತಿನ ಮೊದಲು ನಿತಿಶ್ ಅವರು ಗಡ್ಕರಿ ಅವರು ನಿಮಗೆ ಹೇಳುತ್ತಿದ್ದರು, ಇಂಥ ಮೂಲಸೌಕರ್ಯ ನಿರ್ಮಾಣದ ಬೃಹತ್ ಕಾರ್ಯ ಇಷ್ಟು ಕಡಿಮೆ ಅವಧಿಯಲ್ಲಿ ಬಿಹಾರದಲ್ಲಿ ಹಿಂದೆಂದೂ ಆಗಿರಲಿಲ್ಲ. ಈಗ ನಿತಿನ್ ಅವರು ಹೇಳುತ್ತಿದ್ದಂತೆ, ರಸ್ತೆಗಳ ಕಾಮಗಾರಿ ಒಂದರಲ್ಲೇ, 53 ಸಾವಿರ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳು ಅನುಮೋದನೆ ಪಡೆದಿವೆ ಇಲ್ಲ ಕಾಮಗಾರಿ ಆರಂಭವಾಗಿವೆ. ಈ ಮೂಲಸೌಕರ್ಯಗಳಿಂದ ಎಂಥ ಅನುಕೂಲ ದೊರಕಲಿದೆ ಯೋಚಿಸಿ.

ಭವಿಷ್ಯವು ನಮಗೆ ಸಂಪರ್ಕವಿಲ್ಲದೆ ಅಭಿವೃದ್ಧಿ ಹೊಂದಲು ಅವಕಾಶ ನೀಡುವುದಿಲ್ಲ ಎಂಬುದನ್ನು ನಾವೆಲ್ಲ ತಿಳಿದಿದ್ದೇವೆ. ರಸ್ತೆ ಸಂಪರ್ಕ, ರೈಲು ಸಂಪರ್ಕ, ಅಂತರ್ಜಾಲ ಸಂಪರ್ಕ, ಅನಿಲ ಗ್ರಿಡ್, ವಿದ್ಯುತ್ ಸಂಪರ್ಕ ಮತ್ತು ಶುದ್ಧ ಕುಡಿಯುವ ನೀರಿನ ಕೊಳಾಯಿಗಳು ಅತ್ಯಗತ್ಯವಾಗಿವೆ. ಈ ಸಂಪರ್ಕದ ವಿಷಯಗಳು ಬಡ ಜನರಿಗೆ ಸಂಬಂಧಿದ್ದೇ ಆಗಿದೆ ಮತ್ತು ಗಡ್ಕರಿ ಅವರ ನೇತೃತ್ವದಲ್ಲಿ ನಾವು ಜಲ ಮಾರ್ಗ ಯೋಜನೆಗಳನ್ನೂ ಆರಂಭಿಸಿದ್ದೇವೆ. ನಾವು ಯಶಸ್ವಿಯಾಗಿ ಜಲ ಮಾರ್ಗಗಳನ್ನು ಅನುಷ್ಠಾನಕ್ಕೆ ತಂದರೆ, ಆಗ ನೀವು ನದಿಗಳ ಮಹತ್ವವನ್ನು ಕಣ್ಣಾರೆ ಕಾಣುತ್ತೀರಿ. ಆರ್ಥಿಕ ಕ್ಷೇತ್ರದ ಜನರು ಕೂಡ ತಮ್ಮನ್ನು ನದಿಗಳೊಂದಿಗೆ ಶ್ರದ್ಧಾಭಾವದೊಂದಿಗೆ ಜೋಡಿಸಿಕೊಳ್ಳಲು ಮುಂದೆ ಬಾರದೆ ಇರಲು ಸಾಧ್ಯವೇ ಇಲ್ಲ. ದೇಶದ ಆರ್ಥಿಕ ಕ್ಷೇತ್ರದಲ್ಲಿ, ಸರಕುಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಬಡವರಿಗೆ ತಲುಪಿಸುವ, ಇಂಥ ಒಂದು ಬದಲಾವಣೆ ಜಲ ಮಾರ್ಗದ ಕಾರಣದಿಂದ ಆಗಲಿದೆ. ಇದು ತಾಯಿ ಗಂಗೆಯ ತಟದಲ್ಲಿ ಜಲ ಮಾರ್ಗದಿಂದ ಸಾಧ್ಯವಾಗಲಿದೆ.

ಬ್ರಿಟಿಷರ ಆಡಳಿತ ಕಾಲದಲ್ಲಿ, ಜಲ ಮಾರ್ಗಗಳು ಇದ್ದವು, ಆ ಸಮಯದಲ್ಲಿ ಮೋಕಾಮ ಮಿನಿ ಕೋಲ್ಕತ್ತ ಎಂದು ಕರೆಸಿಕೊಂಡಿತ್ತು. ಇದು ದೊಡ್ಡ ಆರ್ಥಿಕತೆಯ ಮತ್ತು ಸಾಗಣೆಯ ಚಟುವಟಿಕೆಯ ಕೇಂದ್ರವಾಗಿ ಮಾರ್ಪಟ್ಟಿತ್ತು. ಭಾರತ ಸರ್ಕಾರ, ಈ ಪ್ರತಿಷ್ಠೆಯನ್ನು ಮರುಸ್ಥಾಪಿಸುವ ಕಾರ್ಯವನ್ನು ಕೈಗೊಂಡಿದೆ ಮತ್ತು ನಾವು ಈ ಪ್ರತಿಷ್ಠೆಯನ್ನು ಮರು ಸ್ಥಾಪನೆ ಮಾಡಿಯೇ ಮಾಡುತ್ತೇವೆ ಎಂದು ನಿಮಗೆ ಭರವಸೆ ನೀಡುತ್ತೇನೆ.

ನಾವು ವಿದ್ಯುತ್ ಸಂಪರ್ಕವೇ ಇಲ್ಲದ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಬೃಹತ್ ಅಭಿಯಾನವನ್ನು ಕೈಗೊಂಡಿರುವುದನ್ನು ನೀವು ನೋಡಿರಬಹುದು. ಸುಮಾರು 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ. 1000 ದಿನಗಳಲ್ಲಿ ಈ ಹಳ್ಳಿಗಳಿಗೆ ವಿದ್ಯುತ್ ನೀಡುವ ಕನಸಿನೊಂದಿಗೆ ನಾವು ಯೋಜನೆ ಆರಂಭಿಸಿದೆವು. ಇನ್ನು ಕೆಲವು ತಿಂಗಳುಗಳ ಬಾಕಿ ಇದೆ. ಈವರೆಗೆ ನಾವು 15 ಸಾವಿರ ಹಳ್ಳಿಗಳಿಗೆ ವಿದ್ಯುತ್ ನೀಡಿದ್ದೇವೆ. ಉಳಿದ ಎರಡೂವರೆಯಿಂದ 3 ಸಾವಿರ ಹಳ್ಳಿಗಳಿಗೆ ವಿದ್ಯುತ್ ಪೂರೈಸಲು ತ್ವರಿತವಾಗಿ ಕಾರ್ಯ ನಡೆಸುತ್ತಿದ್ದೇವೆ. ಅದರೊಂದಿಗೆ, ನಾವು ಇತ್ತೀಚೆಗೆ ಪ್ರಧಾನಮಂತ್ರಿ ಸೌಭಾಗ್ಯ ಯೋಜನೆ ಆರಂಭಿಸಿದ್ದೇವೆ. ಈ ಪ್ರಧಾನಮಂತ್ರಿ ಸೌಭಾಗ್ಯ ಯೋಜನೆಯ ಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ನಾನು ಬಿಹಾರಕ್ಕೆ ಆಗ್ರಹಿಸುತ್ತೇನೆ. ಈ ಯೋಜನೆಯಡಿ ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಯಾವ ಮನೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲವೋ ಅವರಿಗೆ ವಿದ್ಯುತ್ ಸಂಪರ್ಕ ಒದಗಿಸಲಿವೆ. ಯಾರು ಇನ್ನೂ ಕತ್ತಲಲ್ಲಿ ಬುಡ್ಡಿ ದೀಪದಲ್ಲಿ ಜೀವನ ಸಾಗಿಸುತ್ತಿದ್ದಾರೋ ಅವರಿಗೆ ಇನ್ನು ಮುಂದೆ ವಿದ್ಯುತ್ ಬಲ್ಬ್ ದೊರಕಲಿದೆ. ಈ ಮುನ್ನ, ಯಾರಾದರೂ ವಿದ್ಯುತ್ ಸಂಪರ್ಕ ಕೇಳಿದರೆ, ಆಗ ಸರ್ಕಾರಗಳು, ಆ ಕಡೆ ವಿದ್ಯುತ್ ಕಂಬ ಇದೆ, ಇಲ್ಲಿಯವರೆಗೆ ವಿದ್ಯುತ್ ಕೊಡಬೇಕಾದರೆ, 10 ವಿದ್ಯುತ್ ಕಂಬ ಹಾಕಬೇಕು, ಇದಕ್ಕೆ ಕನಿಷ್ಠ 30 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಿದ್ದವು. ನೀವು 30 ಸಾವಿರ ಪಾವತಿ ಮಾಡುವುದಾದರೆ, ಆಗ ಮಾತ್ರವೇ ನೀವು ವಿದ್ಯುತ್ ಸಂಪರ್ಕ ಪಡೆಯಬಹುದು ಎನ್ನುತ್ತಿದ್ದರು. ಹೀಗಾಗಿ ಕೆಳವರ್ಗದವರು, ಮಧ್ಯಮ ವರ್ಗದ ಜನರು, ಬಡ ಜನರು ತಾವು 30 ಸಾವಿರ ರೂಪಾಯಿ ಭರಿಸಲು ಸಾಧ್ಯವಿಲ್ಲ ಎಂದು ತಮಗೆ ವಿದ್ಯುತ್ತೇ ಬೇಡ ಎನ್ನುತ್ತಿದ್ದರು. ನನ್ನ ಸಹೋದರ ಸಹೋದರಿಯರೇ, ನಾವು ಭಾರತದ ಯಾವುದೇ ಕುಟುಂಬ 18ನೇ ಶತಮಾನದಲ್ಲಿದ್ದ ಸ್ಥಿತಿಯಲ್ಲಿ ಜೀವಿಸಲು ಬಿಡುವುದಿಲ್ಲ, ಉಚಿತವಾಗಿ ವಿದ್ಯುತ್ ಸಂಪರ್ಕ ಒದಗಿಸುತ್ತಿದ್ದೇವೆ. ವಿದ್ಯುತ್ ಕಂಬ ಅಳವಡಿಸುವ ಅಗತ್ಯವಿದ್ದರೆ, ಸರ್ಕಾರವೇ ಹಾಕಿಸುತ್ತದೆ. ಅದಕ್ಕೆ ತಂತಿಗಳನ್ನೂ ಸರ್ಕಾರವೇ ಅಳವಡಿಸುತ್ತದೆ. ಮತ್ತು ಮೊದಲ ಸಂಪರ್ಕವನ್ನು ಉಚಿತವಾಗಿಯೇ ನೀಡುತ್ತದೆ. ಇದರಿಂದ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಜೀವನದ ಬಗ್ಗೆ ಚಿಂತಿಸಬಹುದು ಮತ್ತು ಬದಲಾವಣೆಯ ಮಾರ್ಗದೆಡೆಗೆ ಸಾಗಬಹುದು.

ಸೋದರ ಸೋದರಿಯರೇ, ಇದು ಸರ್ಕಾರದ ವಿಶೇಷತೆ ಇದೆ. ಮೂರು ವರ್ಷಗಳ ನಂತರ, ನಮ್ಮ ಬಗ್ಗೆ ಟೀಕೆ ಮಾಡುವವರೂ ಇದನ್ನು ಒಪ್ಪಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹಿಂದಿನ ಸರ್ಕಾರಗಳು ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಘೋಷಣೆಗಳನ್ನು ಮಾತ್ರ ಮಾಡುತ್ತಿದ್ದವು ಮತ್ತು ನಂತರ ಯೋಜನೆಗಳನ್ನು ಹಾಗೂ ಜನತೆಯನ್ನು ಮರೆತುಬಿಡುತ್ತಿದ್ದವು. ಇಂದು, ದೆಹಲಿಯಲ್ಲಿ ಎಂಥ ಸ್ವಭಾವದ ಸರ್ಕಾರ ಇದೆ ಎಂದರೆ, ನಾವು ಯೋಜನೆಯ ಕಲ್ಪನೆ ಮಾಡಿದರೆ, ಅದರ ನೀಲನಕ್ಷೆ ಸಿದ್ಧಪಡಿಸುತ್ತೇವೆ, ಸರ್ಕಾರ ಇದಕ್ಕೆ ಸಂಪನ್ಮೂಲ ಕ್ರೋಡೀಕರಿಸಲು ಸಮರ್ಪಿತವಾಗುತ್ತದೆ, ಆ ಯೋಜನೆಗಳನ್ನು ಕಾಲಮಿತಿಯೊಳಗೆ ತನ್ನದೇ ಅಧಿಕಾರಾವಧಿಯಲ್ಲಿ ಅನುಷ್ಠಾನಕ್ಕೂ ತರುತ್ತಿದೆ. ಬಡವರಲ್ಲೇ ಅತಿ ಬಡ ಕುಟುಂಬಗಳಿಗೂ ನಾವು ಅಡುಗೆ ಅನಿಲ ಸಂಪರ್ಕ ನೀಡುತ್ತಿರುವುದನ್ನು ನೀವು ನೋಡಿರಬಹುದು. ಈವರೆಗೆ ನಾವು 3 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಿದ್ದೇವೆ. ಈಗ ಬಡವರ ಮನೆಗಳಲ್ಲೂ ಗ್ಯಾಸ್ ಒಲೆಗಳಲ್ಲಿ ಚಪಾತಿ ಬೇಯುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ಇನ್ನೂ 2 ಕೋಟಿ ಬಡ ಕುಟುಂಬಗಳಿಗೆ ಅಡುಗೆ ಅನಿಲ ಪೂರೈಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ, ನಿಗದಿದ ಕಾಲಮಿತಿಯೊಳಗೆ ನಾವು ಬಡ ಜನರ ಬದುಕಿನಲ್ಲಿ ಪರಿವರ್ತನೆಯನ್ನು ತರುತ್ತೇವೆ.

ನಾವು ಸ್ವಚ್ಛತಾ ಅಭಿಯಾನ ಆರಂಭಿಸಿದ್ದೇವೆ. ಇದು ಬಡ ಮಹಿಳೆಯರು ಮತ್ತು ತಾಯಂದಿರಿಗಾಗಿ ಮಾಡಿದ ಯೋಜನೆ. ನಾನು ಸರ್ಕಾರದ ಉದ್ಯೋಗಿಗಳಿಗೆ ಹೇಳ ಬಯಸುತ್ತೇನೆ, ಶಿಕ್ಷಿತ ಯುವಕರಿಗೆ ಹೇಳ ಬಯಸುತ್ತೇನೆ, ಆರ್ಥಿಕವಾಗಿ ಸದೃಢರಾಗಿರುವವರಿಗೆ ಹೇಳ ಬಯಸುತ್ತೇನೆ, ನೀವು ಒಂದು ಕ್ಷಣ ಯೋಚನೆ ಮಾಡಿ, ಹಳ್ಳಿಗಳಲ್ಲಿ ವಾಸಿಸುವ, ನಗರದ ಗುಡಿಸಿಲಲ್ಲಿ ವಾಸಿಸುವ ಆ ಬಡ ತಾಯಂದಿರು, ಸೋದರಿಯರು ಬಯಲಲ್ಲಿ ಶೌಚಕ್ಕೆ ಹೋಗಬೇಕೆ? ಅವರಿಗೆ ಶೌಚಾಲಯ ವ್ಯವಸ್ಥೆ ಇಲ್ಲ, ಅವರು ಏನು ಮಾಡಬೇಕು? ಅವರು ಮನೆಯಿಂದ ಸೂರ್ಯ ಹುಟ್ಟುವ ಮೊದಲೇ ಕತ್ತಲಲ್ಲಿ ಹೊರಗೆ ಹೋಗಿ ಬರಬೇಕು. ಸೂರ್ಯ ಹುಟ್ಟಿದ ಮೇಲೆ ಅವರಿಗೆ ಹಗಲಲ್ಲಿ ಬಯಲಿಗೆ ಹೋಗಬೇಕು ಎನಿಸಿದರೆ, ಅವರು ಸೂರ್ಯ ಮುಳುಗಿ ರಾತ್ರಿ ಕತ್ತಲು ಆಗುವ ತನಕ ಕಾಯಬೇಕು, ಅಲ್ಲಿಯವರೆಗೆ ಅವರು ಆ ಬಾಧೆಯನ್ನು ತಡೆದುಕೊಳ್ಳಬೇಕು. ಇದರಿಂದ ನನ್ನ ಬಡ ತಾಯಂದಿರ, ಸೋದರಿಯರ ಆರೋಗ್ಯದ ಮೇಲೆ ಎಂಥ ಪ್ರತೀಕೂಲ ಪರಿಣಾಮ ಆಗುತ್ತದೆ? ಹೀಗಾಗಿ ನಾನು ವಿಶೇಷವಾಗಿ ಎಲ್ಲ ರಾಜ್ಯಗಳಿಗೆ ಮನವಿ ಮಾಡುತ್ತೇನೆ, ಬಡ ತಾಯಂದಿರ, ಸೋದರಿಯರ ಆರೋಗ್ಯದ ರಕ್ಷಣೆ ನಿಮ್ಮ ಜವಾಬ್ದಾರಿಯಾಗಿದ್ದು, ನೀವು ಶೌಚಾಲಯ ನಿರ್ಮಾಣದಲ್ಲಿ ನಿರ್ಲಕ್ಷ್ಯ ತೋರಬಾರದು. ನಾವು ಇದನ್ನು ಪ್ರಾಮಾಣಿಕವಾಗಿ ಮುಂದೆ ತೆಗೆದುಕೊಂಡು ಹೋಗಬೇಕು. ನಮ್ಮ ಬಡ ತಾಯಂದಿರ, ಸೋದರಿಯರ ಗೌರವ, ಘನತೆಯ ಬಗ್ಗೆ, ಆರೋಗ್ಯದ ಬಗ್ಗೆ ನಮಗೆ ಕಾಳಜಿ ಇದ್ದರೆ, ಶೌಚಾಲಯ ನಿರ್ಮಾಣವನ್ನು ಪೂರ್ಣಗೊಳಿಸಲು ಪ್ರಯತ್ನ ಮಾಡಬೇಕು.

ಇಂದು, ನಾವು 5 ಕೋಟಿ ಬಡ ಕುಟುಂಬಗಳನ್ನು ಶೌಚಾಲಯದೊಂದಿಗೆ ಜೋಡಿಸಿದ್ದೇವೆ. ಯಾವ ದೇಶದಲ್ಲಿ ಸ್ವಚ್ಛತೆಯ ಪ್ರಮಾಣ ಶೇ.50ಕ್ಕಿಂತ ಕಡಿಮೆ ಇತ್ತೋ, ಅಲ್ಲಿ ಇಂದು ಶೇ.80ರಷ್ಟು ಸ್ವಚ್ಛತೆಯ ವ್ಯವಸ್ಥೆ ಮಾಡುವಲ್ಲಿ ನಾವು ಸಫಲರಾಗಿದ್ದೇವೆ. ಇದನ್ನು ಇನ್ನೂ ಮುಂದುವರಿಸಬೇಕಾಗಿದೆ. ಹೀಗಾಗಿ ನಾನು ಬಿಹಾರದ ನಮ್ಮ ಜನತೆಯಲ್ಲಿ ಮನವಿ ಮಾಡುತ್ತೇನೆ, ನೀವು ನಿಮ್ಮ ಗ್ರಾಮದಲ್ಲಿ ಈ ಜವಾಬ್ದಾರಿ ತೆಗೆದುಕೊಳ್ಳಿ. ಇಂದು ದೇಶದಲ್ಲಿ ಸುಮಾರು 2.5ಲಕ್ಷ ಗ್ರಾಮಗಳು ತಮ್ಮನ್ನು ಬಯಲು ಶೌಚಮುಕ್ತ ಎಂದು ಘೋಷಿಸಿಕೊಂಡಿವೆ. ನಮ್ಮ ಹಳ್ಳಿಗಳನ್ನು, ನಮ್ಮ ತಹಶೀಲ್ ಗಳನ್ನು, ನಮ್ಮ ಜಿಲ್ಲೆಗಳನ್ನು ಬಯಲು ಶೌಚ ಮುಕ್ತಗೊಳಿಸಲು ಮುಂದೆ ಬನ್ನಿ ಎಂದು ನಾನು ಬಿಹಾರದ ಜನತೆಗೆ ಆಹ್ವಾನ ನೀಡುತ್ತೇನೆ. ಮುಂದಿನ ದಿನಗಳಲ್ಲಿ, ನಾವು ಮಹಾತ್ಮಾ ಗಾಂಧಿ ಅವರು ಎಲ್ಲಿ ಚಂಪಾರಣ್ ಚಳವಳಿ ಆರಂಭಿಸಿದರೋ ಅಲ್ಲಿ, ಎಲ್ಲಿ ಮಹಾತ್ಮಾ ಗಾಂಧಿ ಅವರು ಸ್ವಚ್ಥತೆಯ ಕರೆ ನೀಡಿದ್ದರೋ ಆ ನೆಲದಲ್ಲಿ, ಎಲ್ಲಿ ಮಹಾತ್ಮಾ ಗಾಂಧಿ ಅವರು ಸ್ವಾವಲಂಬನೆಯ ಸಂದೇಶ ನೀಡಿದ್ದರೋ ಆ ನಾಡಿನಲ್ಲಿ, ಇಂದು ದೇಶ ನಿಮ್ಮಿಂದ ನಿರೀಕ್ಷೆ ಇಟ್ಟುಕೊಂಡಿದೆ. ನೀವು ಕೂಡ ಈ ವಿಷಯದಲ್ಲಿ ನಾಯಕತ್ವ ತೆಗೆದುಕೊಳ್ಳಿ ಮತ್ತು ಬಿಹಾರವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿ, ಇದು ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಅಸಾಧ್ಯ. ಸರ್ಕಾರದ ಹಣದಿಂದ ಮಾತ್ರವೇ ಕಾರ್ಯಗಳು ಆಗುವುದಿಲ್ಲ, ಯಾವಾಗ ಜನರು ತೀರ್ಮಾನ ಮಾಡುತ್ತಾರೋ ಆಗ ಕೆಲಸ ತಂತಾನೆ ಆಗುತ್ತದೆ ಮತ್ತು ಹೀಗಾಗಿಯೇ ನಾನು ನಿಮ್ಮೆಲ್ಲರನ್ನೂ ಆಹ್ವಾನಿಸುತ್ತಿದ್ದೇನೆ.

ನನ್ನ ಸಹೋದರ ಸಹೋದರಿಯರೇ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ಮೂಲಕ ನೀವೆಲ್ಲರೂ ನನ್ನನ್ನು ಹರಸಿದ್ದೀರಿ. ನಾನು ನಿಮ್ಮೆಲ್ಲರಿಗೂ ಮತ್ತೊಮ್ಮೆ ಆಭಾರ ವ್ಯಕ್ತಪಡಿಸುತ್ತೇನೆ. ಭಾರತ ಸರ್ಕಾರ ಪೂರ್ವ ಭಾರತದ ಅಭಿವೃದ್ಧಿಗೆ ಬದ್ಧವಾಗಿದೆ. ನಾವು ಅನುಸರಿಸುತ್ತಿರುವ ಅಭಿವೃದ್ಧಿಯ ಮಾದರಿ ಅಡಿಯಲ್ಲಿ, ಅದು ಉತ್ತರ ಪ್ರದೇಶದ ಪೂರ್ವ ಭಾಗವಾಗಿರಲಿ, ಬಿಹಾರ ಆಗಿರಲಿ ಅಥವಾ ಬೆಂಗಾಲ್ ಅಥವಾ ಅಸ್ಸಾಂ ಅಥವಾ ಒಡಿಶಾ ಅಥವಾ ಈಶಾನ್ಯವೇ ಆಗಿರಲಿ, ಈ ಎಲ್ಲ ವಲಯಗಳೂ ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಏರಬೇಕು. ನಾವು ನಿಮ್ಮ ಪ್ರದೇಶದಲ್ಲಿ ರಸಗೊಬ್ಬರ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ನಮ್ಮ ರೈತರು ಇದರ ಲಾಭ ಪಡೆಯಲಿದ್ದಾರೆ.

ಈ ವಿಸ್ತರಣೆಯೊಂದಿಗೆ ನೀವೆಲ್ಲರೂ ಅಭಿವೃದ್ಧಿಯ ಪಯಣದಲ್ಲಿ ಸೇರುತ್ತೀರಿ. ನಾನು ನಿಮ್ಮಲ್ಲರಿಗೂ ನಿಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ನನ್ನೊಂದಿಗೆ ಸೇರಿ ಕೂಗುವಂತೆ ಕರೆ ನೀಡುತ್ತೇನೆ.:

ಭಾರತ್ ಮಾತೆಗೆ ಜಯವಾಗಲಿ,

ಭಾರತ್ ಮಾತಾ ಕಿ ಜೈ

ಭಾರತ್ ಮಾತೆಗೆ ಜಯವಾಗಲಿ

ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India goes Intercontinental with landmark EU trade deal

Media Coverage

India goes Intercontinental with landmark EU trade deal
NM on the go

Nm on the go

Always be the first to hear from the PM. Get the App Now!
...
India’s democracy and demography are a beacon of hope for the world: PM Modi’s statement to the media ahead of the Budget Session of Parliament
January 29, 2026
The President’s Address Reflects Confidence and Aspirations of 140 crore Indians: PM
India-EU Free Trade Agreement Opens Vast Opportunities for Youth, Farmers, and Manufacturers: PM
Our Government believes in Reform, Perform, Transform; Nation is moving Rapidly on Reform Express: PM
India’s Democracy and Demography are a Beacon of Hope for the World: PM
The time is for Solutions, Empowering Decisions and Accelerating Reforms: PM

Greetings, Friends,

Yesterday, the Honorable President’s address was an expression of the self-confidence of 140 crore countrymen, an account of the collective endeavor of 140 crore Indians, and a very precise articulation of the aspirations of 140 crore citizens—especially the youth. It also laid out several guiding thoughts for all Members of Parliament. At the very beginning of the session, and at the very start of 2026, the expectations expressed by the Honorable President before the House, in the simplest of words and in the capacity of the Head of the Nation, reflect deep sentiments. I am fully confident that all Honorable Members of Parliament have taken them seriously. This session, in itself, is a very important one. It is the Budget Session.

A quarter of the 21st century has already passed; we are now beginning the second quarter. This marks the start of a crucial 25-year period to achieve the goal of a Developed India by 2047. This is the first budget of the second quarter of this century. And Finance Minister Nirmala ji is presenting the budget in Parliament for the ninth consecutive time—the first woman Finance Minister in the country to do so. This moment is being recorded as a matter of pride in India’s parliamentary history.

Friends,

This year has begun on a very positive note. A self-confident India today has become a ray of hope for the world and also a center of attraction. At the very beginning of this quarter, the Free Trade Agreement between India and the European Union reflects how bright the coming directions are and how promising the future of India’s youth is. This is free trade for an ambitious India, free trade for aspirational youth, and free trade for a self-reliant India. I am fully confident that, especially India’s manufacturers, will use this opportunity to enhance their capabilities.

I would say to all producers: when such a “mother of all deals,” as it is called, has been concluded between India and the European Union, our industrialists and manufacturers should not remain complacent merely thinking that a big market has opened and goods can now be sent cheaply. This is an opportunity, and the foremost mantra of seizing this opportunity is to focus on quality. Now that the market has opened, we must enter it with the very best quality. If we go with top-class quality, we will not only earn revenue from buyers across the 27 countries of the European Union, but we will also win their hearts. That impact lasts a long time—decades, in fact. Company brands, along with the nation’s brand, establish a new sense of pride.

Therefore, this agreement with 27 countries is bringing major opportunities for our fishermen, our farmers, our youth, and those in the service sector who are eager to work across the world. I am fully confident that this is a very significant step toward a confident, competitive, and productive India.

Friends,

It is natural for the nation’s attention to be focused on the budget. But this government has been identified with reform, perform, and transform. Now we are moving on the reform express—at great speed. I also express my gratitude to all colleagues in Parliament who are contributing their positive energy to accelerate this reform express, due to which it continues to gain momentum.

The country is now moving out of long-term pending problems and stepping firmly onto the path of long-term solutions. When long-term solutions are in place, predictability emerges, which creates trust across the world. In every decision we take, national progress is our objective, but all our decisions are human-centric. Our role and our schemes are human-centric. We will compete with technology, adopt technology, and accept its potential, but at the same time, we will not allow the human-centric system to be diminished in any way. Understanding the importance of sensitivities, we will move forward with a harmonious integration of technology and humanity.

Those who critique us—who may have likes or dislikes toward us—this is natural in a democracy. But one thing everyone acknowledges is that this government has emphasized last-mile delivery. There is a continuous effort to ensure that schemes do not remain confined to files but reach people’s lives. This tradition will be taken forward in the coming days through next-generation reforms on the reform express.

India’s democracy and India’s demography today represent a great hope for the world. From this temple of democracy, we should also convey a message to the global community—about our capabilities, our commitment to democracy, and our respect for decisions taken through democratic processes. The world welcomes and accepts this.

At a time when the country is moving forward, this is not an era of obstruction; it is an era of solutions. Today, the priority is not disruption, but resolution. Today is not a time to sit and lament through obstruction; it is a period that demands courageous, solution-oriented decisions. I urge all Honorable Members of Parliament to come forward, accelerate this phase of essential solutions for the nation, empower decisions, and move successfully ahead in last-mile delivery.

Thank you very much, colleagues. My best wishes to all of you.