PM Modi inaugurates jungle safari, statue of Pandit Deendayal Upadhyaya and Naya Raipur BRTS project in Chhattisgarh
Despite several challenges Chhattisgarh faced, it has shown the way that it can lead when it comes to development: PM
PM Modi emphasizes extensive scope tourism has in Chhattisgarh
Initiatives of the Centre aimed at improving lives of the people: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಛತ್ತೀಸಗಢದ ನಯ ರಾಯ್ಪರಕ್ಕೆ ಭೇಟಿ ನೀಡಿದ್ದರು. ಅವರು ನಗರದ ಕಾನನ ಸಫಾರಿ ಉದ್ಘಾಟಿಸಿ, ಕೆಲ ಕಾಲ ವೀಕ್ಷಿಸಿದರು. ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಯನ್ನು ಅನಾವರಣ ಮಾಡಿದ ಪ್ರಧಾನಿ, ಸೆಂಟ್ರಲ್ ಬೌಲೆವರ್ಡ್ ಅನ್ನು ಏಕಾತ್ಮ ಪಥವಾಗಿ ಸಮರ್ಪಿಸಿದರು ಮತ್ತು ನಯ ರಾಯ್ಪರ ಬಿ.ಆರ್.ಟಿ.ಎಸ್. ಯೋಜನೆಯನ್ನು ಉದ್ಘಾಟಿಸಿದರು.

“ಹಮ್ಮಾರ್ ಛತ್ತೀಸ್ ಗಢ ಯೋಜನಾ’’ ಸ್ಪರ್ಧಿಗಳನ್ನು ಭೇಟಿ ಮಾಡಿದ ಪ್ರಧಾನಿ, ರಾಜ್ಯೋತ್ಸವವನ್ನು ಉದ್ಘಾಟಿಸಿದರು. ಓಡಿಎಫ್ ಅಭಿಯಾನದಲ್ಲಿ ಅದ್ಭುತ ಪ್ರದರ್ಶನ ನೀಡಿದ ಎರಡು ಜಿಲ್ಲೆ ಹಾಗೂ 15 ಬ್ಲಾಕ್ ಗಳ ಕಾರ್ಯಕರ್ತರಿಗೆ ಪ್ರಮಾಣ ಪತ್ರ ವಿತರಿಸಿದರು. ಉಜ್ವಲ ಯೋಜನೆ ಅಡಿಯಲ್ಲಿ ಎಲ್.ಪಿ.ಜಿ. ಸಂಪರ್ಕವನ್ನು ವಿತರಿಸಿದ ಅವರು, ಸೌರ ಉಜಾಲ ಯೋಜನೆ ಉದ್ಘಾಟನೆ ಅಂಗವಾಗಿ ಆಯ್ದ ಫಲಾನುಭವಿಗಳಿಗೆ ಸೌರ ಪಂಪ್ ವಿತರಿಸಿದರು.

ಶಾಂತಿಯುತ ಮತ್ತು ಸೌಹಾರ್ದಯುತ ಮಾದರಿಯಲ್ಲಿ ಛತ್ತೀಸಗಢ ಸೇರಿದಂತೆ ಮೂರು ಹೊಸ ರಾಜ್ಯಗಳ ರಚನೆಯ ಖಾತ್ರಿಯನ್ನು ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ್ದರು ಎಂಬುದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.

ಹೇಗೆ ಚಿಕ್ಕ ರಾಜ್ಯವೊಂದು ಅಭಿವೃದ್ಧಿಯ ಹೊಸ ಎತ್ತರಕ್ಕೆ ಏರಬಲ್ಲದು ಎಂಬುದನ್ನು ಛತ್ತೀಸಗಢ ತೋರಿದೆ ಎಂದ ಅವರು ಇದಕ್ಕಾಗಿ ಮುಖ್ಯಮಂತ್ರಿ ಡಾ. ರಮಣ ಸಿಂಗ್ ಮತ್ತು ರಾಜ್ಯಕ್ಕೆ ಅಭಿನಂದನೆ ಸಲ್ಲಿಸಿದರು. ಛತ್ತೀಸಗಢದಲ್ಲಿ ಈ ಅಭಿವೃದ್ಧಿ ಉಪಕ್ರಮಗಳು ಮುಂದಿನ ಪೀಳಿಗೆಗೂ ಲಾಭವನ್ನು ತರಲಿದೆ ಎಂದು ಪ್ರಧಾನಿ ಹೇಳಿದರು. ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಬಹು ದೊಡ್ಡ ಅವಕಾಶ ಇದೆ ಎಂದ ಅವರು, ಇದು ಬಡವರಲ್ಲೇ ಬಡವರಿಗೂ ಹೊಸ ಆರ್ಥಿಕ ಅವಕಾಶ ನೀಡುವುದಾಗಿದೆ ಎಂದು ತಿಳಿಸಿದರು.

ರೈತರಿಗಾಗಿ ಮೌಲ್ಯಯುತ ಉಪಕ್ರಮ ಕೈಗೊಂಡ ಛತ್ತೀಸಗಢ ರಾಜ್ಯವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India Post launches drone delivery pilot across Himachal, Assam

Media Coverage

India Post launches drone delivery pilot across Himachal, Assam
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 22 ಆಗಸ್ಟ್ 2026
August 22, 2026

Citizens Appreciate PM Modi’s Leadership Driving India’s Growth, Innovation and Connectivity