ಭಾರತದ ಮಾಜಿ ಉಪರಾಷ್ಟ್ರಪತಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರ 75ನೇ ಜನ್ಮದಿನದ ಮುನ್ನಾದಿನವಾದ, ಜೂನ್ 30ರಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅವರ ಜೀವನ ಮತ್ತು ಪಯಣ ಕುರಿತಾದ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಿದ್ದಾರೆ. ಹೈದರಾಬಾದ್ ನ ಗಚಿಬೌಲಿಯಲ್ಲಿರುವ ಅನ್ವಯ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಪುಸ್ತಕಗಳು ಬಿಡುಗಡೆಯಾಗಲಿವೆ.

ಪ್ರಧಾನಮಂತ್ರಿಯವರು ಬಿಡುಗಡೆ ಮಾಡಲಿರುವ ಪುಸ್ತಕಗಳು ಈ ಕೆಳಗಿನಂತಿವೆ:

(i) ದಿ ಹಿಂದೂ ಪತ್ರಿಕೆಯ, ಹೈದರಾಬಾದ್ ಆವೃತ್ತಿಯ ಮಾಜಿ ಸ್ಥಾನಿಕ ಸಂಪಾದಕರಾದ ಶ್ರೀ ಎಸ್ ನಾಗೇಶ್ ಕುಮಾರ್ ಅವರು ಬರೆದ "ವೆಂಕಯ್ಯ ನಾಯ್ಡು - ಸೇವೆಯಲ್ಲಿ ಜೀವನ" ಎಂಬ ಶೀರ್ಷಿಕೆಯ ಮಾಜಿ ಉಪರಾಷ್ಟ್ರಪತಿಯವರ ಜೀವನಚರಿತ್ರೆ

(ii) "ಭಾರತ ಸಂಭ್ರಮಾಚರಣೆ - ಭಾರತದ 13ನೇ ಉಪರಾಷ್ಟ್ರಪತಿಯಾಗಿ ಶ್ರೀ ಎಂ.ವೆಂಕಯ್ಯ ನಾಯ್ಡು ಅವರ ಧ್ಯೇಯ ಮತ್ತು ಸಂದೇಶ", ಭಾರತದ ಉಪರಾಷ್ಟ್ರಪತಿಯವರ ಮಾಜಿ ಕಾರ್ಯದರ್ಶಿ ಡಾ. ಐ. ವಿ. ಸುಬ್ಬರಾವ್ ಅವರು ಸಂಗ್ರಹಿಸಿದ ಕಾಲಾನುಕ್ರಮ ಫೋಟೋ ಸಂಗ್ರಹ.

(iii) ಶ್ರೀ ಸಂಜಯ್ ಕಿಶೋರ್ ಅವರು ಬರೆದ "ಮಹಾನೇತಾ - ಶ್ರೀ ಎಂ. ವೆಂಕಯ್ಯ ನಾಯ್ಡು ಅವರ ಜೀವನ ಮತ್ತು ಪಯಣ" ಎಂಬ ಶೀರ್ಷಿಕೆಯ ತೆಲುಗಿನ ಚಿತ್ರಾತ್ಮಕ ಜೀವನಚರಿತ್ರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s GDP To Grow 7% In FY26: Crisil Revises Growth Forecast Upward

Media Coverage

India’s GDP To Grow 7% In FY26: Crisil Revises Growth Forecast Upward
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the power of collective effort
December 17, 2025

The Prime Minister, Shri Narendra Modi, shared a Sanskrit Subhashitam-

“अल्पानामपि वस्तूनां संहतिः कार्यसाधिका।

तृणैर्गुणत्वमापन्नैर्बध्यन्ते मत्तदन्तिनः॥”

The Sanskrit Subhashitam conveys that even small things, when brought together in a well-planned manner, can accomplish great tasks, and that a rope made of hay sticks can even entangle powerful elephants.

The Prime Minister wrote on X;

“अल्पानामपि वस्तूनां संहतिः कार्यसाधिका।

तृणैर्गुणत्वमापन्नैर्बध्यन्ते मत्तदन्तिनः॥”