ಸಾರಿಗೆ ಯಾವುದೇ ನಗರ ಮತ್ತು ಯಾವುದೇ ದೇಶಕ್ಕೆ ಅಭಿವೃದ್ಧಿಗೆ ಪ್ರಮುಖವಾಗಿದೆ. ನಗರಸಭೆ ವೇಗವಾಗಿ ನಡೆಯುತ್ತಿರುವ ವಿಶ್ವದ ರಾಷ್ಟ್ರಗಳಲ್ಲಿ ಭಾರತ ಒಂದು: ಪ್ರಧಾನಿ ಮೋದಿ
75ನೇ ಸ್ವಾತಂತ್ರ್ಯವನ್ನು 2022 ರ ವೇಳೆಗೆ ಭಾರತ ಆಚರಿಸುವಾಗ 'ಎಲ್ಲರಿಗೂ ವಸತಿ' ಎಂಬ ಸರ್ಕಾರದ ದೃಷ್ಟಿಕೋನವನ್ನು ಮೋದಿ ಪುನರುಚ್ಚರಿಸಿದ್ದಾರೆ.
2014 ರ ನಂತರ ಮೆಟ್ರೊ ಲೈನ್ ಅನ್ನು ಹಾಕುವ ವೇಗ ಕೂಡ ಹೆಚ್ಚಾಗುತ್ತದೆ ಮತ್ತು ಅದರ ಪ್ರಮಾಣ ಹೆಚ್ಚಾಗಲಿದೆ ಎಂದು ನಾವು ನಿರ್ಧರಿಸಿದ್ದೇವೆ: ಪ್ರಧಾನಿ
ಕಾರ್ಗಿಲ್ನಿಂದ ಕನ್ಯಾಕುಮಾರಿಯವರೆಗೆ, ಕಚ್ ನಿಂದ ಕಾಮ್ರೂಪ್ ಗೆ ಪ್ರಯಾಣಿಸಿದರೆ, ನೀವು ಯಾವ ವೇಗದಲ್ಲಿ ಮತ್ತು ಎಷ್ಟು ಮಟ್ಟದಲ್ಲಿ ಕೆಲಸ ನಡೆಯುತ್ತಿದೆ ಎಂದು ತಿಳಿದಿರುತ್ತೀರಿ: ಪ್ರಧಾನಿ ಮೋದಿ
ಮುಂದಿನ ಪೀಳಿಗೆಯ ಮೂಲಸೌಕರ್ಯವನ್ನು ರಚಿಸುವಲ್ಲಿ ನಮ್ಮ ಗಮನವು ಕೇಂದ್ರಿತವಾಗಿದೆ : ಪ್ರಧಾನಿ ಮೋದಿ
ಪ್ರಧಾನಿ ಮೋದಿ 2022 ರ ಹೊತ್ತಿಗೆ "ಹೌಸಿಂಗ್ ಫ಼ಾರ್ ಆಲ್ " ಎಂಬ ಕೇಂದ್ರ ಸರಕಾರದ ದೃಷ್ಟಿಕೋನವನ್ನು ಪುನರುಚ್ಚರಿಸಿದ್ದಾರೆ

ಮಹಾರಾಷ್ಟ್ರ ಭೇಟಿ ವೇಳೆಯಲ್ಲಿ ಅಲ್ಲಿನ ವಸತಿ ಮತ್ತು ನಗರಾಭಿವೃದ್ಧಿ ಸಂಬಂಧಿತ ಪ್ರಮುಖ ಯೋಜನೆಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅನಾವರಣ ಮಾಡಿದರು.

ಕಲ್ಯಾಣ್ ನಲ್ಲಿ ಜರುಗಿದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಮಂತ್ರಿ ಅವರು ಎರಡು ಪ್ರಧಾನ ಮೆಟ್ರೋ ಕಾರಿಡಾರ್ ಗಳನ್ನು ಉದ್ಘಾಟಿಸಿದರು. ಇವು ಠಾಣೆ-ಭೀವಂಡಿ-ಕಲ್ಯಾಣ್ ಮೆಟ್ರೋ ಮತ್ತು ದಹಿಸರ್ – ಮೀರಾ-ಭಯಂದರ್ ಮೆಟ್ರೋ ಕಾರಿಡಾರ್ ಗಳಾಗಿವೆ. ಎರಡು ಕಾರಿಡಾರ್ ಗಳ ಕಾಮಗಾರಿ ಪೂರ್ಣಗೊಂಡಾಗ, ಈ ಪ್ರದೇಶದಲ್ಲಿ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಾಧ್ಯವಾಗಲಿದೆ.

ಕಲ್ಯಾಣ್ ನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಇ.ಡಬ್ಲೂ.ಎಸ್. ಮತ್ತು ಎಲ್.ಐ.ಜಿ. ವಸತಿ ಯೋಜನೆಗಳ 90,000 ವಸತಿಗಳನ್ನು ಪ್ರಧಾನಮಂತ್ರಿ ಅವರು ಪ್ರಾರಂಭಿಸಿದರು. ಕಲ್ಯಾಣ್ ನಲ್ಲಿ ಒಟ್ಟು ಮೌಲ್ಯ ರೂ 33000 ಕೋಟಿಯ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಿದರು.

ಪೂನಾದಲ್ಲಿ ಪ್ರಧಾನಮಂತ್ರಿ ಅವರು ಪೂನಾ ಮೆಟ್ರೋ ಹಂತ 3 ಕ್ಕೆ ಶಂಕುಸ್ಥಾಪನೆ ಮಾಡಿದರು.

ಕಲ್ಯಾಣ್ ನಲ್ಲಿ ನರೆದ ಸಭಿಕರನ್ನುದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಮೂಲಸೌಕರ್ಯ ಮತ್ತು ಸಾರ್ವಜನಿಕ ಸಾರಿಗೆ ರಂಗದ ಅಭಿವೃದ್ಧಿಯ ಗತಿಯನ್ನು ಕೇಂದ್ರ ಸರ್ಕಾರ ಹೇಗೆ ವೇಗಗೊಳಿಸಿದೆ ಎಂದು ವಿವರಿಸಿದರು. ಕೇಂದ್ರ ಸರಕಾರದ 2022 ಅವಧಿಯೊಳಗೆ “ಎಲ್ಲರಿಗೂ ವಸತಿ” ಸಂಕಲ್ಪವನ್ನು ಪ್ರಧಾನಮಂತ್ರಿ ಅವರು ಪುನರುಚ್ಚರಿಸಿದರು.

ಪೂನಾದಲ್ಲಿ ನೆರೆದ ಸಭಿಕರನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸಂಪರ್ಕ ಮೂಲಸೌಕರ್ಯಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ ಹಾಗೂ, ಅತ್ಯಾಧುನಿಕ ಮೂಲಸೌಕರ್ಯ ಒದಗಿಸುವುದು ಮತ್ತು ಸಾರಿಗೆ ಕ್ಷೇತ್ರವನ್ನು ಏಕೀಕರಣಗೊಳಿಸುವುದಕ್ಕೆ ಆದ್ಯತೆ ನೀಡಲಾಗಿದೆ. ಸ್ಟಾರ್ಟ್ ಆಪ್ ಇಂಡಿಯಾ ಮತ್ತು ಅಟಲ್ ಇನ್ನೊವೇಷನ್ ಮಿಷನ್ ಮೂಲಕ ಭಾರತವು ತಂತ್ರಜ್ಞಾನದ ಕೇಂದ್ರಸ್ಥಾನವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Click here to read full text speech at Kalyan, Maharashtra

Click here to read full text speech at Pune, Maharashtra

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
National Technology Day Special: India’s patent boom is rewiring the auto industry

Media Coverage

National Technology Day Special: India’s patent boom is rewiring the auto industry
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮೇ 2026
May 12, 2026

Building a Trusted India: Modi's Leadership in Finance, Manufacturing, and Global Partnerships