ಸಮಾವೇಶವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ
ಎಂಬ ಮೂರು ವಿಷಯಗಳ ಬಗ್ಗೆ ವಿವರವಾದ ಚರ್ಚೆಗಳು: ಎನ್ಇಪಿ, ನಗರ ಆಡಳಿತ ಮತ್ತು ಬೆಳೆ ವೈವಿಧ್ಯೀಕರಣ ಮತ್ತು ಕೃಷಿ-ಸರಕುಗಳಲ್ಲಿ ಸ್ವಾವಲಂಬನೆ ಸಾಧಿಸುವುದು
ಪ್ರಸ್ತುತಪಡಿಸಬೇಕಾದ ಪ್ರತಿಯೊಂದು ವಿಷಯದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಿಂದ ಉತ್ತಮ ಅಭ್ಯಾಸಗಳು
'ಆಜಾದಿ ಕಾ ಅಮೃತ ಮಹೋತ್ಸವ: ಮಾರ್ಗಸೂಚಿ 2047' ಕುರಿತು ವಿಶೇಷ ಅಧಿವೇಶನ
ವ್ಯವಾಹಾರಕ್ಕೆ ಪೂರಕ ವಾತಾವರಣ ಸೃಷ್ಟಿಸುವ ಕುರಿತ ನಾಲ್ಕು ಹೆಚ್ಚುವರಿ ವಿಷಯಾಧಾರಿತ ಅಧಿವೇಶನಗಳು; ಯೋಜನೆಗಳ ತೃಪ್ತಿದಾಯಕ ವ್ಯಾಪ್ತಿಯನ್ನು ಸಾಧಿಸುವುದು ಮತ್ತು ಕೊನೆಯ ಮೈಲಿ ವಿತರಣೆಯನ್ನು ಖಚಿತಪಡಿಸುವುದು; ಪಿಎಂ ಗತಿ ಶಕ್ತಿಯ ಮೂಲಕ ಭಾರತದ ಮೂಲಸೌಕರ್ಯವನ್ನು ಪರಿವರ್ತಿಸುವುದು; ಮತ್ತು ಸಾಮರ್ಥ್ಯ ವರ್ಧನೆ
ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಬಗ್ಗೆಯೂ ಅಧಿವೇಶನ
ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಲು ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಸಮ್ಮೇಳನದ ಫಲಿತಾಂಶಗಳನ್ನು ಚರ್ಚಿಸಲಾಗುವುದು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜೂನ್ 16 ಮತ್ತು 17ರಂದು ಹಿಮಾಚಲ ಪ್ರದೇಶದ ಧರ್ಮಶಾಲಾದ ಎಚ್ ಪಿಸಿಎ ಕ್ರೀಡಾಂಗಣದಲ್ಲಿ ಮುಖ್ಯ ಕಾರ್ಯದರ್ಶಿಗಳ ಪ್ರಥಮ ರಾಷ್ಟ್ರೀಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಮುಖ್ಯ ಕಾರ್ಯದರ್ಶಿಗಳ ರಾಷ್ಟ್ರೀಯ ಸಮ್ಮೇಳನವು 2022 ರ ಜೂನ್ 15 ರಿಂದ 17 ರವರೆಗೆ ನಡೆಯಲಿದೆ. ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ಡೊಮೇನ್ (ಕಾರ್ಯಕ್ಷೇತ್ರದ) ತಜ್ಞರನ್ನು ಪ್ರತಿನಿಧಿಸುವ 200 ಕ್ಕೂ ಹೆಚ್ಚು ಜನರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮೂರು ದಿನಗಳಲ್ಲಿ ವ್ಯಾಪಿಸಿರುವ ಇದು ರಾಜ್ಯಗಳ ಸಹಭಾಗಿತ್ವದಲ್ಲಿ ತ್ವರಿತ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆಯತ್ತ ಗಮನ ಹರಿಸಲಿದೆ. ಭಾರತ ತಂಡವಾಗಿ ಕೆಲಸ ಮಾಡುವ ಈ ಸಮ್ಮೇಳನವು ಸುಸ್ಥಿರತೆ, ಉದ್ಯೋಗಗಳ ಸೃಷ್ಟಿ, ಶಿಕ್ಷಣ, ಸುಲಭ ಜೀವನ ಮತ್ತು ಕೃಷಿಯಲ್ಲಿ ಆತ್ಮನಿರ್ಭರದೊಂದಿಗೆ ಉನ್ನತ ಬೆಳವಣಿಗೆಗಾಗಿ ಸಹಯೋಗದ ಕ್ರಮಕ್ಕೆ ಅಡಿಪಾಯ ಹಾಕುತ್ತದೆ. ಜನರ ಆಶೋತ್ತರಗಳನ್ನು ಸಾಧಿಸಲು ಒಂದು ಸಾಮಾನ್ಯ ಅಭಿವೃದ್ಧಿ ಕಾರ್ಯಸೂಚಿ ಮತ್ತು ಒಗ್ಗಟ್ಟಿನ ಕ್ರಮದ ನೀಲನಕ್ಷೆಯ ವಿಕಸನ ಮತ್ತು ಅನುಷ್ಠಾನಕ್ಕೆ ಈ ಸಮ್ಮೇಳನ ಒತ್ತು ನೀಡಲಿದೆ.

ಈ ಸಮ್ಮೇಳನದ ಪರಿಕಲ್ಪನೆ ಮತ್ತು ಕಾರ್ಯಸೂಚಿಯನ್ನು ಆರು ತಿಂಗಳ ಕಾಲ ನಡೆದ 100 ಕ್ಕೂ ಹೆಚ್ಚು ಸುತ್ತಿನ ಚರ್ಚೆಗಳ ನಂತರ ಸಂಗ್ರಹಿಸಲಾಗಿದೆ. ಸಮ್ಮೇಳನದಲ್ಲಿ ವಿವರವಾದ ಚರ್ಚೆಗಳಿಗಾಗಿ ಮೂರು ವಿಷಯಗಳನ್ನು ಗುರುತಿಸಲಾಗಿದೆ: (i) ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ; (ii) ನಗರ ಆಡಳಿತ; ಮತ್ತು (iii) ಬೆಳೆ ವೈವಿಧ್ಯೀಕರಣ ಮತ್ತು ಎಣ್ಣೆಕಾಳುಗಳು, ದ್ವಿದಳ ಧಾನ್ಯಗಳು ಮತ್ತು ಇತರ ಕೃಷಿ ಸರಕುಗಳಲ್ಲಿ ಸ್ವಾವಲಂಬನೆ ಸಾಧಿಸುವುದು. ರಾಷ್ಟ್ರೀಯ ಶಿಕ್ಷಣ ನೀತಿಯ ಅಡಿಯಲ್ಲಿ, ಶಾಲಾ ಮತ್ತು ಉನ್ನತ ಶಿಕ್ಷಣ ಎರಡನ್ನೂ ಚರ್ಚಿಸಲಾಗುವುದು. ಪರಸ್ಪರ ಕಲಿಕೆಗಾಗಿ ಸಮ್ಮೇಳನದಲ್ಲಿ ಪ್ರತಿಯೊಂದು ವಿಷಯದ ಅಡಿಯಲ್ಲಿ ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಉತ್ತಮ ಅಭ್ಯಾಸಗಳನ್ನು ಪ್ರಸ್ತುತಪಡಿಸಬೇಕು.

ನಿರ್ದಿಷ್ಟ ಜಿಲ್ಲೆಗಳಲ್ಲಿ ಯುವ ಜಿಲ್ಲಾಧಿಕಾರಿಗಳು ಪ್ರಸ್ತುತಪಡಿಸಿದ ದತ್ತಾಂಶ ಆಧಾರಿತ ಆಡಳಿತ ಸೇರಿದಂತೆ ಯಶಸ್ವಿ ಪ್ರಕರಣ ಅಧ್ಯಯನಗಳೊಂದಿಗೆ ಇದುವರೆಗಿನ ಸಾಧನೆಗಳ ಕುರಿತು ಉದ್ದೇಶಪೂರ್ವಕವಾಗಿ ಮಹತ್ವಾಕಾಂಕ್ಷೆಯ ಜಿಲ್ಲೆಗಳ ಕಾರ್ಯಕ್ರಮದ ಕುರಿತು ಅಧಿವೇಶನ ನಡೆಯಲಿದೆ.

'ಆಜಾದಿ ಕಾ ಅಮೃತ್ ಮಹೋತ್ಸವ: 2047ಕ್ಕೆ ಮಾರ್ಗಸೂಚಿ' ಎಂಬ ವಿಷಯದ ಬಗ್ಗೆ ವಿಶೇಷ ಅಧಿವೇಶನ ಮತ್ತು ವ್ಯವಹಾರವನ್ನು ಸುಲಭಗೊಳಿಸಲು ಅನುಸರಣಾ ಹೊರೆಯನ್ನು ಕಡಿಮೆ ಮಾಡುವುದು ಮತ್ತು ಸಣ್ಣ ಅಪರಾಧಗಳ ಅಪರಾಧಗಳನ್ನು ಅಪರಾಧಮುಕ್ತಗೊಳಿಸುವುದು ಕುರಿತು ನಾಲ್ಕು ಹೆಚ್ಚುವರಿ ವಿಷಯಾಧಾರಿತ ಗೋಷ್ಠಿಗಳು ನಡೆಯಲಿವೆ. ಯೋಜನೆಗಳ ತೃಪ್ತಿದಾಯಕ ಮಟ್ಟದ ವ್ಯಾಪ್ತಿಯನ್ನು ಸಾಧಿಸಲು ಮತ್ತು ಕೊನೆಯ ಮೈಲಿ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ - ರಾಜ್ಯ ಸಮನ್ವಯ; ಪಿಎಂ ಗತಿ ಶಕ್ತಿಯ ಮೂಲಕ ಭಾರತದ ಮೂಲಸೌಕರ್ಯವನ್ನು ಪರಿವರ್ತಿಸುವುದು; ಮತ್ತು ಸಾಮರ್ಥ್ಯ ವರ್ಧನೆ: ಐಜಿಒಟಿ ಅನುಷ್ಠಾನ - ಮಿಷನ್ ಕರ್ಮಯೋಗಿ.

ಸಮ್ಮೇಳನದ ಫಲಿತಾಂಶಗಳನ್ನು ನಂತರ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು, ಅಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಮತ್ತು ಆಡಳಿತಗಾರರು ಉಪಸ್ಥಿತರಿರುತ್ತಾರೆ, ಇದರಿಂದ ಉನ್ನತ ಮಟ್ಟದಲ್ಲಿ ವ್ಯಾಪಕ ಒಮ್ಮತದೊಂದಿಗೆ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಬಹುದು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Defence ministry inks Rs 5,083 cr pact for acquisition of six Mk-III light helicopters and missiles

Media Coverage

Defence ministry inks Rs 5,083 cr pact for acquisition of six Mk-III light helicopters and missiles
NM on the go

Nm on the go

Always be the first to hear from the PM. Get the App Now!
...
Prime Minister welcomes President of Finland Alexander Stubb to India
March 04, 2026

The Prime Minister, Shri Narendra Modi, today welcomed the President of the Republic of Finland, Mr. Alexander Stubb, who is on a State Visit to India.

Shri Modi expressed confidence that the visit would further strengthen the bilateral relations between India and Finland.

President Stubb had earlier posted on social media platform X that he is travelling on a State Visit to India and will meet the President of India and the Prime Minister, as well as other members of the state leadership. He noted that the visit will further strengthen relations between Finland and India, including in the area of trade.

Responding to X post of President of Finland, Shri Modi said;

“Welcome to India, President Alexander Stubb. I fully agree with you, your visit will take India-Finland relations to new heights. I eagerly look forward to our meeting tomorrow and to your keynote address at the Raisina Dialogue 2026.

@alexstubb”