Nari Shakti of India is touching new heights of progress in every field: PM Modi
During the last few years, through the efforts of the government, the number of tigers in the country has increased: PM Modi
The beauty of India lies in the diversity and in the different hues of our culture: PM Modi
Great to see countless people selflessly making efforts to preserve Indian culture: PM Modi
Social media has helped a lot in showcasing people’s skills and talents. Youngsters in India are doing wonders in the field of content creation: PM Modi
A few days ago, the Election Commission has started another campaign – ‘Mera Pehla Vote – Desh Ke Liye’: PM Modi
The more our youth participate in the electoral process, the more beneficial its results will be for the country: PM Modi

ನನ್ನ ಪ್ರೀತಿಯ ದೇಶವಾಸಿಗಳಿಗೆ ನಮಸ್ಕಾರ. ‘ಮನದ ಮಾತು’ ೧೧೦ನೇ ಸಂಚಿಕೆಗೆ ಸುಸ್ವಾಗತ. ಎಂದಿನಂತೆ, ಈ ಬಾರಿಯೂ ನಿಮ್ಮ ಸಾಕಷ್ಟು ಸಲಹೆಗಳು, ಮಾಹಿತಿ ಮತ್ತು ಟೀಕೆ ಟಿಪ್ಪಣಿಗಳನ್ನು ನಾವು ಸ್ವೀಕರಿಸಿದ್ದೇವೆ. ಮತ್ತು ಎಂದಿನಂತೆ, ಈ ಬಾರಿಯೂ ಸಹ ಸಂಚಿಕೆಯಲ್ಲಿ ಯಾವ ವಿಷಯಗಳನ್ನು ಸೇರಿಸಬೇಕು ಎಂಬುದು ಸವಾಲಾಗಿದೆ. ನನಗೆ ಧನಾತ್ಮಕತೆಯ ಬಹಳಷ್ಟು ಮಾಹಿತಿ ದೊರೆತಿವೆ. ಇವುಗಳಲ್ಲಿ ಇತರರಿಗೆ ಭರವಸೆಯ ಆಶಾ ಕಿರಣವನ್ನು ಮೂಡಿಸುವ ಮೂಲಕ ಅವರ ಜೀವನ ಸುಧಾರಿಸುವಲ್ಲಿ ಶ್ರಮಿಸುತ್ತಿರುವ ಅನೇಕ ದೇಶವಾಸಿಗಳ ಉಲ್ಲೇಖವಿದೆ.

ಸ್ನೇಹಿತರೇ, ಇನ್ನೇನು ಕೆಲ ದಿನಗಳ ನಂತರ ಮಾರ್ಚ್ 8 ರಂದು ನಾವು 'ಮಹಿಳಾ ದಿನ'ವನ್ನು ಆಚರಿಸಲಿದ್ದೇವೆ. ಈ ವಿಶೇಷ ದಿನ ದೇಶದ ಅಭಿವೃದ್ಧಿ ಪಯಣದಲ್ಲಿ ಮಹಿಳಾ ಶಕ್ತಿಯ ಕೊಡುಗೆಗೆ ವಂದನೆ ಸಲ್ಲಿಸಲು ಒಂದು ಅವಕಾಶವಾಗಿದೆ. ಮಹಿಳೆಗೆ ಸಮಾನ ಅವಕಾಶ ಸಿಕ್ಕಾಗ ಮಾತ್ರ ಜಗತ್ತು ಅಭ್ಯುದಯವಾಗುತ್ತದೆ ಎಂದು ಮಹಾಕವಿ ಭಾರತಿಯಾರ್ ಅವರು ಹೇಳಿದ್ದಾರೆ. ಇಂದು ಭಾರತದ ಮಹಿಳಾ ಶಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯ ಹೊಸ ಎತ್ತರಕ್ಕೆ ಏರುತ್ತಿದೆ. ನಮ್ಮ ದೇಶದಲ್ಲಿ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರೂ ಡ್ರೋನ್‌ಗಳನ್ನು ಹಾರಿಸುತ್ತಾರೆ ಎಂದು ಕೆಲವು ವರ್ಷಗಳ ಹಿಂದೆ ಯಾರು ಭಾವಿಸಿದ್ದರು? ಆದರೆ ಇಂದು ಇದು ಕಾರ್ಯರೂಪಕ್ಕೆ ಬರುತ್ತಿದೆ. ಇಂದು ಪ್ರತಿ ಹಳ್ಳಿಯಲ್ಲೂ ಡ್ರೋಣ್ ದೀದಿಯ ಬಗ್ಗೆ ಬಹಳ ಚರ್ಚೆ ನಡೆಯುತ್ತಿದೆ, ಇಂದು ಎಲ್ಲರ ಬಾಯಲ್ಲೂ ನಮೋ ಡ್ರೋಣ್ ದೀದಿ, ನಮೋ ಡ್ರೋಣ್ ದೀದಿ ಎಂಬ ಮಾತು ಕೇಳಿಬರುತ್ತಿದೆ. ಎಲ್ಲರೂ ಅವರ ಬಗ್ಗೆ ಚರ್ಚಿಸುತ್ತಿದ್ದಾರೆ. ಭಾರೀ ಕುತೂಹಲ ಹುಟ್ಟಿಕೊಂಡಿದೆ ಮತ್ತು ಅದಕ್ಕಾಗಿಯೇ, ಈ ಬಾರಿಯ 'ಮನದ ಮಾತಿನಲ್ಲಿ ನಮೋ ಡ್ರೋನ್ ದೀದಿಯೊಂದಿಗೆ ಏಕೆ ಮಾತನಾಡಬಾರದು ಎಂದು ನಾನು ಯೋಚಿಸಿದೆ. ಉತ್ತರ ಪ್ರದೇಶದ ಸೀತಾಪುರದವರಾದ ನಮೋ ಡ್ರೋನ್ ದೀದಿ ಸುನೀತಾ  ಅವರು ಈಗ ನಮ್ಮೊಂದಿಗೆ ಇದ್ದಾರೆ ಬನ್ನಿ, ಅವರ ಜೊತೆ ಮಾತನಾಡೋಣ.

ಮೋದಿಜಿ: ಸುನೀತಾ ದೇವಿಯವರೆ ನಮಸ್ಕಾರ.

ಸುನಿತಾ ದೇವಿ: ನಮಸ್ಕಾರ ಸರ್.

ಮೋದಿಜೀ: ಸರಿ ಸುನೀತಾ ಅವರೆ, ಮೊದಲು ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ, ನಿಮ್ಮ ಕುಟುಂಬದ ಬಗ್ಗೆ ತಿಳಿದುಕೊಳ್ಳಬಯಸುತ್ತೇನೆ. ನಮ್ಮೊಂದಿಗೆ ಈ ವಿಷಯಗಳನ್ನು ಹಂಚಿಕೊಳ್ಳುವಿರಾ?

ಸುನೀತಾದೇವಿ: ಸರ್, ನಮ್ಮ ಕುಟುಂಬದಲ್ಲಿ ಇಬ್ಬರು ಮಕ್ಕಳಿದ್ದಾರೆ, ನಾನಿದ್ದೇನೆ, ನನ್ನ ಪತಿ ಇದ್ದಾರೆ, ತಾಯಿ ಇದ್ದಾರೆ.

ಮೋದಿಜೀ: ಸುನೀತಾ ಅವರೆ ನಿಮ್ಮ ಶಿಕ್ಷಣ ಎಲ್ಲಿವರೆಗೆ ಆಗಿದೆ?

ಸುನಿತಾ ದೇವಿ: ಸರ್, ನಾನು ಬಿಎ (ಫೈನಲ್) ವರೆಗೆ ಓದಿದ್ದೇನೆ.

ಮೋದಿ ಜೀ: ಮತ್ತು ಮನೆಯಲ್ಲಿ ವ್ಯಾಪಾರ ಇತ್ಯಾದಿ ಯಾವ ತರಹದ್ದಿದೆ?

ಸುನೀತಾ ದೇವಿ: ಕೃಷಿ  ಮತ್ತು ಕೃಷಿ ಸಂಬಂಧಿತ ವ್ಯಾಪಾರ ಇತ್ಯಾದಿ ಮಾಡುತ್ತೇವೆ.

ಮೋದಿ ಜಿ: ಸರಿ ಸುನೀತಾ ಅವರೆ, ಈ ಡ್ರೋನ್ ದೀದಿ ಆಗುವ ನಿಮ್ಮ ಪ್ರಯಾಣ ಹೇಗೆ ಪ್ರಾರಂಭವಾಯಿತು? ನೀವು ಎಲ್ಲಿ ತರಬೇತಿ ಪಡೆದಿದ್ದೀರಿ? ಯಾವ ರೀತಿಯ ಬದಲಾವಣೆಗಳು ಸಂಭವಿಸಿದವು, ಏನಾಯಿತು, ಆರಂಭದಿಂದ ಎಲ್ಲವನ್ನೂ ನಾನು ತಿಳಿಯಬಯಸುತ್ತೇನೆ.

ಸುನಿತಾ ದೇವಿ: ಹೌದು ಸರ್, ನಮ್ಮ ತರಬೇತಿ ಅಲಹಾಬಾದ್‌ನಲ್ಲಿರುವ ಫುಲ್‌ಪುರ್ ಇಫ್ಕೋ ಕಂಪನಿಯಲ್ಲಿ ಆಯಿತು ಮತ್ತು ನಾವು ಅಲ್ಲಿಂದಲೇ ಸಂಪೂರ್ಣ ತರಬೇತಿ ಪಡೆದಿದ್ದೇವೆ.

ಮೋದಿಜಿ: ಹಾಗಾದರೆ ಅಲ್ಲಿಯವರೆಗೆ ನೀವು ಡ್ರೋನ್‌ಗಳ ಬಗ್ಗೆ ಎಂದಾದರೂ ಕೇಳಿದ್ದೀರಾ?

ಸುನೀತಾ ದೇವಿ: ಸರ್, ನಾವು ಎಂದೂ ಕೇಳಿರಲಿಲ್ಲ, ಆದರೆ ಒಮ್ಮೆ ಅಂತಹದನ್ನು ನೋಡಿದ್ದೆ,  ಸೀತಾಪುರದ ಕೃಷಿ ವಿಜ್ಞಾನ ಕೇಂದ್ರದಲ್ಲಿ, ನಾವು ಮೊದಲ ಬಾರಿಗೆ ಡ್ರೋನ್ ನೋಡಿದ್ದೆವು.

 ಮೋದಿ ಜಿ: ಸುನೀತಾ ಅವರೆ, ನಿಮ್ಮ ಮೊದಲ ದಿನದ ಅನುಭವ ಹೇಗಿತ್ತು ಎಂದು ನಾನು ತಿಳಿಯಬಯಸುತ್ತೇನೆ.

ಸುನೀತಾದೇವಿ: ಸರಿ ಸರ್.

ಮೋದಿ ಜೀ: ನಿಮಗೆ ಮೊದಲ ದಿನ ಡ್ರೋನ್ ಅನ್ನು ತೋರಿಸಿರಬೇಕು, ನಂತರ ಬೋರ್ಡ್ ಮೇಲೆ ಏನನ್ನಾದರೂ ಬರೆದು ಕಲಿಸಿರಬೇಕು, ಪೇಪರ್‌ ಮೂಲಕ ಕಲಿಸಿರಬೇಕು, ನಂತರ ಮೈದಾನಕ್ಕೆ ಕರೆದೊಯ್ದು ಅಭ್ಯಾಸ ಮಾಡಿಸಿರಬಹುದು, ಏನೇನು ನಡೆಯಿತು. ನೀವು ನನಗೆ ಸಂಪೂರ್ಣವಾಗಿ ವಿವರಿಸುವಿರಾ?

ಸುನೀತಾ ದೇವಿ: ಹೌದು ಸರ್, ಮೊದಲ ದಿನ ನಾವು ಅಲ್ಲಿಗೆ ಹೋದೆವು. ಎರಡನೇ ದಿನದಿಂದ ನಮ್ಮ ತರಬೇತಿ ಆರಂಭವಾಯಿತು. ಮೊದಲು ಥಿಯರಿ ಕಲಿಸಿ ನಂತರ ಎರಡು ದಿನ ತರಗತಿ ಅಭ್ಯಾಸ ನಡೆಯಿತು. ತರಗತಿಯಲ್ಲಿ, ಡ್ರೋನ್‌ನ ಭಾಗಗಳು ಯಾವುವು, ನೀವು ಹೇಗೆ ಮತ್ತು ಏನೇನು ಮಾಡಬೇಕು - ಈ ಎಲ್ಲಾ ವಿಷಯಗಳನ್ನು ಥಿಯರಿಯಲ್ಲಿ ಕಲಿಸಲಾಯಿತು. ಮೂರನೆ ದಿನ ಸರ್ ನಮ್ಮ ಪರೀಕ್ಷೆ ಇತ್ತು ಸರ್. ಆಮೇಲೆ ಕಂಪ್ಯೂಟರಿನಲ್ಲಿ ಕೂಡ ಪರೀಕ್ಷೆ ಬರೆಯುವುದಿತ್ತು. ಅಂದರೆ ಮೊದಲು ಕ್ಲಾಸ್ ನಡೀತು ಆಮೇಲೆ ಪರೀಕ್ಷೆ ತೆಗೆದುಕೊಳ್ಳಲಾಯಿತು. ನಂತರ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು, ನಾವು ಡ್ರೋನ್ ಅನ್ನು ಹೇಗೆ ಹಾರಿಸಬೇಕು, ನಿಯಂತ್ರಣ ಹೇಗೆ ನಿರ್ವಹಿಸಬೇಕು, ಎಲ್ಲವನ್ನೂ ಪ್ರಾಯೋಗಿಕ ರೂಪದಲ್ಲಿ ಕಲಿಸಲಾಯಿತು.

ಮೋದಿಜಿ: ಹಾಗಾದರೆ ಡ್ರೋನ್ ಯಾವ ಕೆಲಸ ಮಾಡುತ್ತದೆ, ಎಂಬುದನ್ನು ಹೇಗೆ ಕಲಿಸಲಾಯಿತು?

ಸುನೀತಾದೇವಿ: ಸರ್, ಡ್ರೋನ್ ಹೇಗೆ ಕೆಲಸ ಮಾಡುತ್ತದೆ ಎಂದರೆ ಉದಾಹರಣೆಗಾಗಿ ಈಗ ಬೆಳೆ ಬೆಳೆದು ದೊಡ್ಡದಾಗುತ್ತಿದೆ. ಮಳೆಗಾಲ ಅಥವಾ ಇನ್ನೇನಾದರೂ ಮಳೆಗಾಲದಲ್ಲಿ ಸಮಸ್ಯೆ ಉಂಟಾಗಿ ಬೆಳೆ ಕಟಾವು ಮಾಡಲು ಗದ್ದೆಗೆ ಹೋಗಲು ಆಗುತ್ತಿಲ್ಲ ಎಂದಾದರೆ, ಕೂಲಿಕಾರರು ಹೇಗೆ ಒಳಗೆ ಹೋಗುತ್ತಾರೆ, ಆಗ ಇದರ ಮೂಲಕ ರೈತರಿಗೆ ಬಹಳ ಅನುಕೂಲವಾಗಲಿದೆ. ಅಲ್ಲದೆ ಹೊಲದೊಳಗೂ ಹೋಗುವ  ಅವಶ್ಯಕತೆಯಿರುವುದಿಲ್ಲ. ನಮ್ಮ ಡ್ರೋನ್ ಬಳಸಿ ಗದ್ದೆಯ ಬದುಚಿನ ಮೇಲೆ ನಿಂತು ಕೂಲಿಕಾರರಿಂದ ಕೆಲಸ ಮಾಡಿಸಿಕೊಳ್ಳಬಹುದು, ಹೊಲದೊಳಗೆ ಕ್ರಿಮಿ ಕೀಟಗಳ ಬಾಧೆ ಕಂಡುಬಂದರೆ ಡ್ರೋನ್ ಬಳಸಿ ಜಾಗ್ರತೆ ವಹಿಸಬಹುದು, ಯಾವುದೇ ತೊಂದರೆ ಇಲ್ಲ, ರೈತರಿಗೂ ತುಂಬಾ ಸಹಾಯಕಾರಿಯಾಗಿದೆ. ಸರ್, ಇಲ್ಲಿಯವರೆಗೆ 35 ಎಕರೆಗೆ ಔಷಧಿ ಸಿಂಪಡಿಸಿದ್ದೇವೆ.

ಮೋದಿಜಿ: ಹಾಗಾದರೆ ರೈತರಿಗೆ ಲಾಭವಿದೆ ಎಂದರ್ಥ?

ಸುನೀತಾದೇವಿ: ಹೌದು ಸರ್, ರೈತರು ತುಂಬಾ ಸಂತೃಪ್ತರಾಗಿದ್ದಾರೆ ಮತ್ತು ಇದು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದ್ದಾರೆ. ಸಮಯವೂ ಉಳಿತಾಯವಾಗುತ್ತದೆ, ಅವರು ಬಂದು ಜಮೀನು ತೋರಿಸಬೇಕಷ್ಟೆ, ಎಲ್ಲಿಂದ ಎಲ್ಲಿವರೆಗೆ ತಮ್ಮ ತೋಟವಿದೆ ಎಂದು ಹೇಳಿದರೆ ಸಾಕು. ನೀರು, ಔಷಧಿ, ಎಲ್ಲವನ್ನು ಒಟ್ಟಿಗೇ ಇಟ್ಟುಕೊಂಡು ನಾನೇ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದೇನೆ, ಮತ್ತು ಅರ್ಧ ಗಂಟೆಯೊಳಗೆ ಇಡೀ ಕೆಲಸ ಮುಗಿಸಿಕೊಡುತ್ತೇನೆ.

ಮೋದಿ ಜಿ: ಹಾಗಾದರೆ ಈ ಡ್ರೋನ್ ನೋಡಲು ಬೇರೆಯವರು ಕೂಡ ಬರುತ್ತಿರಬಹುದಲ್ಲವೇ?

ಸುನಿತಾ ದೇವಿ: ಸರ್, ದೊಡ್ಡ ಜನಸಂದಣಿ ಸೇರುತ್ತಿದೆ, ಡ್ರೋನ್ ನೋಡಲು ಅನೇಕ ಜನರು ಬರುತ್ತಾರೆ. ದೊಡ್ಡ ದೊಡ್ಡ ರೈತರು, ನಾವೂ ಸಿಂಪಡಣೆಗೆ ಕರೆಯುತ್ತೇವೆ ಎಂದು ನಂಬರ್ ತೆಗೆದುಕೊಳ್ಳುತ್ತಾರೆ.

ಮೋದಿಜಿ: ಸರಿ. ನಾನು ಲಖ್ಪತಿ ದೀದಿಯನ್ನು ಮಾಡುವ ಗುರಿಯನ್ನು ಹೊಂದಿದ್ದೇನೆ, ಇಂದು ದೇಶಾದ್ಯಂತ ಸಹೋದರಿಯರು ಮನದ ಮಾತು ಕೇಳುತ್ತಿದ್ದರೆ, ಡ್ರೋನ್ ದೀದಿ ನನ್ನೊಂದಿಗೆ ಮೊದಲ ಬಾರಿಗೆ ಮಾತನಾಡುತ್ತಿದ್ದಾರೆ, ನೀವು ಏನು ಹೇಳಲು ಬಯಸುತ್ತೀರಿ?

ಸುನೀತಾ ದೇವಿ: ಇಂದು ನಾನು ಒಬ್ಬಳೇ ಡ್ರೋನ್ ದೀದಿ ಇದ್ದೀನಿ, ಸಾವಿರಾರು ಸಹೋದರಿಯರು ನನ್ನಂತೆ ಡ್ರೋನ್ ದೀದಿಯಾಗಲು ಮುಂದೆ ಬಂದರೆ ಮತ್ತು ನಾನು ಒಬ್ಬಂಟಿಯಾಗಿರುವಾಗ ಇನ್ನೂ ಸಾವಿರಾರು ಜನರು ನನ್ನೊಂದಿಗೆ ನಿಲ್ಲುತ್ತಾರೆ ಎಂದಾದರೆ ನನಗೆ ತುಂಬಾ ಸಂತೋಷವಾಗುತ್ತದೆ. ನಾನು ಒಬ್ಬಂಟಿಯಾಗಿಲ್ಲ, ಅನೇಕ ಜನರು ನನ್ನೊಂದಿಗೆ ಡ್ರೋನ್ ದೀದಿಯಾಗಿ ಗುರುತಿಸಿಕೊಳ್ಳುತ್ತಿದ್ದಾರೆ  ಎಂದರೆ ಬಹಳ ಆನಂದವಾಗುತ್ತದೆ.

ಮೋದಿಜೀ: ಸುನೀತಾ ಅವರೆ, ನಿಮಗೆ ಅನಂತ ಅಭಿನಂದನೆಗಳು. ನಮೋ ಡ್ರೋನ್ ದೀದಿ, ಇಂದು ದೇಶದಲ್ಲಿ ಕೃಷಿಯನ್ನು ಆಧುನೀಕರಿಸಲು ಉತ್ತಮ ಮಾಧ್ಯಮವಾಗುತ್ತಿದ್ದಾರೆ. ಅನಂತ  ಶುಭಾಶಯಗಳು.

ಸುನೀತಾ ದೇವಿ: ಧನ್ಯವಾದಗಳು, ಧನ್ಯವಾದಗಳು ಸರ್.

ಮೋದಿಜಿ: ಧನ್ಯವಾದಗಳು! 

ಸ್ನೇಹಿತರೇ, ಇಂದು ದೇಶದ ಮಹಿಳಾ ಶಕ್ತಿ ಹಿಂದೆ ಬಿದ್ದ ಯಾವುದೇ ಕ್ಷೇತ್ರವೇ ಇಲ್ಲ. ನೈಸರ್ಗಿಕ ಕೃಷಿ, ನೀರಿನ ಸಂರಕ್ಷಣೆ ಮತ್ತು ನೈರ್ಮಲ್ಯ ಮಹಿಳೆಯರು ತಮ್ಮ ನಾಯಕತ್ವದ ಸಾಮರ್ಥ್ಯವನ್ನು ಪ್ರದರ್ಶಿಸಿದ ಮತ್ತೊಂದು ಕ್ಷೇತ್ರವಾಗಿದೆ. ರಾಸಾಯನಿಕಗಳಿಂದಾಗಿ ನಮ್ಮ ಭೂಮಿ ತಾಯಿ ಎದುರಿಸುತ್ತಿರುವ ನೋವು ಮತ್ತು ಸಂಕಟಗಳಿಂದ - ನಮ್ಮ ಭೂ ತಾಯಿಯನ್ನು ಉಳಿಸುವಲ್ಲಿ ದೇಶದ ಮಾತೃಶಕ್ತಿ ದೊಡ್ಡ ಪಾತ್ರವನ್ನು ವಹಿಸುತ್ತಿದೆ. ಮಹಿಳೆಯರು ಈಗ ದೇಶದ ಮೂಲೆ ಮೂಲೆಗಳಲ್ಲಿ ನೈಸರ್ಗಿಕ ಕೃಷಿಯನ್ನು ಪಸರಿಸುತ್ತಿದ್ದಾರೆ. ಇಂದು ‘ಜಲ ಜೀವನ್ ಮಿಷನ್’ ಅಡಿಯಲ್ಲಿ ದೇಶದಲ್ಲಿ ಇಷ್ಟೊಂದು ಕೆಲಸಗಳು ನಡೆಯುತ್ತಿದ್ದರೆ ಅದರಲ್ಲಿ ಜಲ ಸಮಿತಿಗಳ ಪಾತ್ರ ದೊಡ್ಡದಿದೆ. ಈ ಜಲಸಮಿತಿಯ ನಾಯಕತ್ವ ಮಹಿಳೆಯರದ್ದೇ ಆಗಿದೆ. ಇದರ ಹೊರತಾಗಿ, ಸಹೋದರಿಯರು ಮತ್ತು ಹೆಣ್ಣುಮಕ್ಕಳು ಜಲ ಸಂರಕ್ಷಣೆಗಾಗಿ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅಂತಹ ಓರ್ವ ಮಹಿಳೆ ಕಲ್ಯಾಣಿ ಪ್ರಫುಲ್ಲ ಪಾಟೀಲ್ ಅವರು ನನ್ನೊಂದಿಗೆ ಫೋನ್ ಲೈನ್‌ನಲ್ಲಿದ್ದಾರೆ. ಅವರು  ಮಹಾರಾಷ್ಟ್ರದ ನಿವಾಸಿ. ಬನ್ನಿ, ಕಲ್ಯಾಣಿ ಪ್ರಫುಲ್ಲ ಪಾಟೀಲರೊಂದಿಗೆ ಮಾತನಾಡಿ ಅವರ ಅನುಭವವನ್ನು ತಿಳಿದುಕೊಳ್ಳೋಣ.

ಪ್ರಧಾನ ಮಂತ್ರಿ - ಹಲೋ ಕಲ್ಯಾಣಿ ಅವರೆ.

ಕಲ್ಯಾಣಿ  - ನಮಸ್ಕಾರ ಸರ್,

ಪ್ರಧಾನ ಮಂತ್ರಿ - ಕಲ್ಯಾಣಿ ಅವರೆ, ಮೊದಲು ನಿಮ್ಮ ಬಗ್ಗೆ, ನಿಮ್ಮ ಕುಟುಂಬದ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ತಿಳಿಸಿ.

ಕಲ್ಯಾಣಿ - ಸರ್, ನಾನು MSc ಮೈಕ್ರೋಬಯಾಲಜಿ ಓದಿದ್ದೇನೆ ಮತ್ತು ನನ್ನ ಮನೆಯಲ್ಲಿ ನನ್ನ ಪತಿ, ನನ್ನ ಅತ್ತೆ ಮತ್ತು ನನ್ನ ಇಬ್ಬರು ಮಕ್ಕಳಿದ್ದಾರೆ ಮತ್ತು ನಾನು ಮೂರು ವರ್ಷಗಳಿಂದ ಗ್ರಾಮ ಪಂಚಾಯತ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ.

ಪ್ರಧಾನ ಮಂತ್ರಿ - ಮತ್ತು ನಂತರ ನೀವು ಹಳ್ಳಿಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೀರಿ? ಏಕೆಂದರೆ ನೀವು ಮೂಲ ಜ್ಞಾನವನ್ನೂ ಹೊಂದಿದ್ದೀರಿ, ನೀವೂ ಇದೇ ಕ್ಷೇತ್ರದಲ್ಲಿ  ಅಧ್ಯಯನ ಮಾಡಿದ್ದೀರಿ. ಈಗ ಕೃಷಿ ಕೈಗೊಂಡಿದ್ದೀರಿ ಹಾಗಾದರೆ ಏನು ಹೊಸ ಪ್ರಯೋಗ ಮಾಡಿದ್ದೀರಿ?

ಕಲ್ಯಾಣಿ ಜೀ – ಸರ್, ನಮ್ಮಲ್ಲಿರುವ ಹತ್ತು ವಿಧದ ವನಸ್ಪತಿಗಳನ್ನುಅಂದರೆ ಔಷಧೀಯ ಸಸ್ಯಗಳನ್ನು ಸಂಗ್ರಹಿಸಿ, ಅದರಿಂದ ಸಾವಯವ ಸಿಂಪರಣೆ ತಯಾರು ಮಾಡಿದ್ದೇನೆ, ನಾವು ಕೀಟನಾಶಕಗಳನ್ನು ಸಿಂಪಡಿಸಿದಾಗ, ಇತರ ಕೀಟಗಳ ಜೊತೆಗೆ ನಮ್ಮ ಮಿತ್ರ ಕೀಟಗಳು ಸಹ ನಾಶವಾಗುತ್ತವೆ ಮತ್ತು ನಮ್ಮ ಮಣ್ಣಿನ ಮಾಲಿನ್ಯತೆ ಹೆಚ್ಚುತ್ತದೆ, ನೀರಿನಲ್ಲಿ ರಾಸಾಯನಿಕಗಳು ಮಿಶ್ರಣವಾಗುವುದರಿಂದ ನಮ್ಮ ದೇಹದ ಮೇಲೆ ಕೂಡ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಹಾಗಾಗಿ ಪರಿಸ್ಥಿತಿಗೆ ಅನುಗುಣವಾಗಿ, ನಾವು ಕನಿಷ್ಟ ಕೀಟನಾಶಕಗಳನ್ನು ಬಳಸಿದ್ದೇವೆ.

ಪ್ರಧಾನಮಂತ್ರಿ - ಹಾಗಾದರೆ ನೀವು ಒಂದು ರೀತಿಯಲ್ಲಿ ಸಂಪೂರ್ಣವಾಗಿ ನೈಸರ್ಗಿಕ ಕೃಷಿಯತ್ತ ಸಾಗುತ್ತಿದ್ದೀರಿ.

ಕಲ್ಯಾಣಿ - ಹೌದು, ನಾವು ಕಳೆದ ವರ್ಷದಿಂದ ಸಾಂಪ್ರದಾಯಿಕ ಕೃಷಿಯನ್ನೇ, ಕೈಗೊಂಡಿದ್ದೇವೆ.

ಪ್ರಧಾನಮಂತ್ರಿ - ನೈಸರ್ಗಿಕ ಕೃಷಿಯಲ್ಲಿ ನಿಮಗೆ ಯಾವ ಬಗೆಯ ಅನುಭವವಾಯಿತು?

ಕಲ್ಯಾಣಿ – ಸರ್, ನಮ್ಮ ಮಹಿಳೆಯರು ಮಾಡುವ ಖರ್ಚು ಕಡಿಮೆ ಆಯಿತು, ಉತ್ಪನ್ನಗಳೂ ಉತ್ತಮವಾಗಿದ್ದವು ಸರ್, ಆ ಪರಿಹಾರ ಸಿಕ್ಕ ಮೇಲೆ ಕೀಟಬಾಧೆ ಇಲ್ಲದೇ ಕೃಷಿ ಕೈಗೊಂಡೆವು ಯಾಕೆಂದರೆ ಈಗ ನಗರ ಪ್ರದೇಶಗಳಲ್ಲಿ ಕ್ಯಾನ್ಸರ್‌ನ ಪುರಾವೆಗಳು ಹೆಚ್ಚಾಗುತ್ತಿವೆ. ಆದರೆ ನಮ್ಮ ಹಳ್ಳಿಗಳಲ್ಲಿಯೂ ಈ ಪ್ರಕರಣಗಳು ಹೆಚ್ಚುತ್ತಿವೆ, ಆದ್ದರಿಂದ ನಾವು ನಮ್ಮ ಭವಿಷ್ಯದ ಕುಟುಂಬವನ್ನು ರಕ್ಷಿಸಲು ಬಯಸಿದರೆ, ಈ ಮಾರ್ಗವನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ, ಅದರಂತೆ, ಆ ಮಹಿಳೆಯರೂ ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ಪ್ರಧಾನಮಂತ್ರಿ - ಸರಿ ಕಲ್ಯಾಣಿ ಅವರೆ, ನೀವೂ ಜಲ ಸಂರಕ್ಷಣೆಯಲ್ಲಿ ಏನಾದರೂ ಕೆಲಸ ಮಾಡಿದ್ದೀರಾ? ಅದರಲ್ಲಿ ನೀವು ಯಾವ ರೀತಿ ಕೆಲಸ ಮಾಡಿದ್ದೀರಿ?

ಕಲ್ಯಾಣಿ – ಸರ್, ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ, ನಮ್ಮ ಗ್ರಾಮ ಪಂಚಾಯ್ತಿ ಕಟ್ಟಡ, ಅಲ್ಲಿದ್ದ ಮಳೆ ನೀರನ್ನೆಲ್ಲ ಒಂದೇ ಕಡೆ ಸಂಗ್ರಹಿಸಿದ್ದೇವೆ, ಬೀಳುವ ಮಳೆ ನೀರು ನೆಲದೊಳಗೆ ಇಂಗಬೇಕು, ಅದರ ಪ್ರಕಾರ ನಾವು ನಮ್ಮ ಗ್ರಾಮದಲ್ಲಿ 20 ರೀಚಾರ್ಜ್ ಶಾಫ್ಟ್ ಗಳನ್ನು ಅಳವಡಿಸಿದ್ದೇವೆ ಮತ್ತು 50 ರೀಚಾರ್ಜ್ ಶಾಫ್ಟ್ ಗಳಿಗೆ ಮಂಜೂರಾತಿ ದೊರೆತಿದೆ. ಈಗ ಆ ಕೆಲಸವೂ ಶೀಘ್ರವೇ ಆರಂಭವಾಗಲಿದೆ.

ಪ್ರಧಾನ ಮಂತ್ರಿ - ಕಲ್ಯಾಣಿ ಅವರೆ, ನಿಮ್ಮೊಂದಿಗೆ ಮಾತನಾಡಿ ತುಂಬಾ ಸಂತೋಷವಾಯಿತು. ನಿಮಗೆ ಅನಂತ ಶುಭಾಶಯಗಳು.

ಕಲ್ಯಾಣಿ - ಧನ್ಯವಾದಗಳು ಸರ್, ಧನ್ಯವಾದಗಳು ಸರ್. ನಿಮ್ಮೊಂದಿಗೆ ಮಾತನಾಡಿ ನನಗೂ ತುಂಬಾ ಸಂತೋಷವಾಯಿತು. ನನ್ನ ಜೀವನವು ಸಂಪೂರ್ಣ ಸಾರ್ಥಕವಾಯಿತು ಎಂದು ನಾನು ಭಾವಿಸುತ್ತೇನೆ.

ಪ್ರಧಾನಮಂತ್ರಿ - ಸೇವೆ ಮಾಡುತ್ತಾ ಸಾಗಿ.

ಪ್ರಧಾನಮಂತ್ರಿ - ನಿಮ್ಮ ಹೆಸರು ಕಲ್ಯಾಣಿ, ಆದ್ದರಿಂದ ನೀವು ಕಲ್ಯಾಣ ಮಾಡಲೇಬೇಕು. ಧನ್ಯವಾದಗಳು. ನಮಸ್ಕಾರ

 ಕಲ್ಯಾಣಿ - ಧನ್ಯವಾದಗಳು ಸರ್. ಧನ್ಯವಾದ

 

ಸ್ನೇಹಿತರೇ,  ಅದು ಸುನೀತಾ ಅವರಾಗಿರಲಿ ಅಥವಾ ಕಲ್ಯಾಣಿಯವರಾಗಿರಲಿ, ವಿವಿಧ ಕ್ಷೇತ್ರಗಳಲ್ಲಿ ಮಹಿಳಾ ಶಕ್ತಿಯ ಯಶಸ್ಸು ತುಂಬಾ ಸ್ಪೂರ್ತಿದಾಯಕವಾಗಿದೆ. ನಮ್ಮ ಮಹಿಳಾ ಶಕ್ತಿಯ ಈ ಸ್ಫೂರ್ತಿಯನ್ನು ನಾನು ಮತ್ತೊಮ್ಮೆ ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ನಮ್ಮೆಲ್ಲರ ಜೀವನದಲ್ಲಿ ತಂತ್ರಜ್ಞಾನದ ಪ್ರಾಮುಖ್ಯತೆ ಬಹಳಷ್ಟು ಹೆಚ್ಚಾಗಿದೆ. ಮೊಬೈಲ್ ಫೋನ್, ಡಿಜಿಟಲ್ ಗ್ಯಾಜೆಟ್ ಗಳು ನಮ್ಮೆಲ್ಲರ ಜೀವನದ ಪ್ರಮುಖ ಭಾಗವಾಗಿ ಬಿಟ್ಟಿವೆ. ಆದರೆ ಡಿಜಿಟಲ್ ಗ್ಯಾಜೆಟ್ ಗಳ ನೆರವಿನಿಂದ ಈಗ ವನ್ಯ ಜೀವಿಗಳೊಂದಿಗೆ ಸಾಮರಸ್ಯ ಸಾಧಿಸಲು ಕೂಡಾ ಸಹಾಯವಾಗುತ್ತಿದೆಯೆಂದು ನೀವು ಊಹಿಸಬಹುದೇ. ಕೆಲವೇ ದಿನಗಳಲ್ಲಿ ಅಂದರೆ ಮಾರ್ಚ್ 3 ರಂದು ವಿಶ್ವ ವನ್ಯ ಜೀವಿ ದಿನ ಆಚರಿಸಲಿದ್ದೇವೆ. ವನ್ಯಜೀವಿಗಳ ಸಂರಕ್ಷಣೆ  ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ವನ್ಯ ಜೀವಿ ದಿನದ ಘೋಷವಾಕ್ಯದಲ್ಲಿ ಡಿಜಿಟಲ್ ಆವಿಷ್ಕಾರಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ನಮ್ಮ ದೇಶದಲ್ಲಿ ವಿಭಿನ್ನ ಭಾಗಗಳಲ್ಲಿ ವನ್ಯ ಜೀವಿಗಳ ಸಂರಕ್ಷಣೆಗಾಗಿ ತಂತ್ರಜ್ಞಾನದ ವ್ಯಾಪಕ ಬಳಕೆಯಾಗುತ್ತಿದೆಯೆಂದು ತಿಳಿದು ನಿಮಗೆ ಸಂತೋಷವಾಗಬಹುದು. ಕಳೆದ ಕೆಲವು ವರ್ಷಗಳಲ್ಲಿ ಸರ್ಕಾರದ ಪ್ರಯತ್ನಗಳಿಂದ ದೇಶದಲ್ಲಿ ಹುಲಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಚಂದ್ರಪುರದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಇನ್ನೂರೈವತ್ತಕ್ಕಿಂತಲೂ ಅಧಿಕವಾಗಿದೆ. ಚಂದ್ರಪುರ್ ಜಿಲ್ಲೆಯಲ್ಲಿ ಮಾನವ ಮತ್ತು ಹುಲಿಗಳ ನಡುವಿನ ಸಂಘರ್ಷ ಕಡಿಮೆ ಮಾಡುವುದಕ್ಕಾಗಿ ಕೃತಕ ಬುದ್ಧಿಮತ್ತೆಯ ನೆರವು ಪಡೆಯಲಾಗುತ್ತಿದೆ. ಇಲ್ಲಿ ಗ್ರಾಮ ಮತ್ತು ಕಾಡಿನ ಗಡಿಯಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗ್ರಾಮದ ಸಮೀಪ ಯಾವುದಾದರೊಂದು ಹುಲಿ ಬಂದಲ್ಲಿ, ಕೃತಕ ಬುದ್ಧಿಮತ್ತೆಯ ನೆರವಿನಿಂದ ಸ್ಥಳೀಯರಿಗೆ ಮೊಬೈಲ್ ನಲ್ಲಿ ಎಚ್ಚರಿಕೆ ಸಂದೇಶ ದೊರೆಯುತ್ತದೆ. ಇಂದು ಈ ಹುಲಿ ಸಂರಕ್ಷಿತ ಪ್ರದೇಶದ ಸುತ್ತ ಮುತ್ತಲಿನ 13 ಗ್ರಾಮಗಳಲ್ಲಿ ಇಂತಹ ವ್ಯವಸ್ಥೆಯಿಂದ ಜನರಿಗೆ ಬಹಳ ಅನುಕೂಲವಾಗಿದೆ ಮತ್ತು ಹುಲಿಗಳ ದಾಳಿಯ ಭಯವಿಲ್ಲದಂತೆ ರಕ್ಷಣೆಯೂ ದೊರೆತಿದೆ.

ಸ್ನೇಹಿತರೇ, ಇಂದು ಯುವ ಉದ್ಯಮಿಗಳು ಕೂಡಾ ವನ್ಯ ಜೀವಿ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕಾಗಿ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯುತ್ತಿದ್ದಾರೆ. ಉತ್ತರಾಖಂಡದ ರೂರ್ಕಿಯಲ್ಲಿ,  ರೋಟರ್ ಪ್ರೆಸಿಷನ್ ಗ್ರೂಪ್ಸ್ ಭಾರತೀಯ ವನ್ಯಜೀವಿ ಸಂಸ್ಥೆಯ ಸಹಯೋಗದೊಂದಿಗೆ ಕೆನ್ ನದಿಯಲ್ಲಿ ಮೊಸಳೆಗಳ ಮೇಲೆ ಕಣ್ಗಾವಲು ಇರಿಸಲು ಸಹಾಯ ಮಾಡುವ ಡ್ರೋನ್ ಅನ್ನು ಅಭಿವೃದ್ಧಿಪಡಿಸಿದೆ. ಇದೇ ರೀತಿ ಬೆಂಗಳೂರಿನ ಒಂದು ಕಂಪೆನಿಯು ‘ಬಘೀರಾ’ ಮತ್ತು ‘ಗರುಡ’ ಹೆಸರಿನ ಆಪ್ (App) ತಯಾರಿಸಿದೆ. ಬಘೀರಾ ಆಪ್ (App)ನಿಂದ ಜಂಗಲ್ ಸಫಾರಿಯ ಸಮಯದಲ್ಲಿ ವಾಹನದ ವೇಗ ಮತ್ತು ಇತರ ಚಟುವಟಿಕೆಗಳನ್ನು ಗಮನಿಸಬಹುದು. ದೇಶದ ಅನೇಕ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಇದರ ಬಳಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು Internet of things ಆಧಾರಿತ ಗರುಡ ಆಪ್ (App) ಅನ್ನು ಯಾವುದೇ ಸಿಸಿಟಿವಿಗೆ ಜೋಡಣೆ ಮಾಡುವುದರಿಂದ ರಿಯಲ್ ಟೈಮ್ ಅಲರ್ಟ್ ದೊರೆಯಲಾರಂಭಿಸುತ್ತದೆ. ವನ್ಯ ಜೀವಿಗಳ ಸಂರಕ್ಷಣೆಯ ನಿಟ್ಟಿನಲ್ಲಿ ಈ ರೀತಿಯ ಪ್ರತಿಯೊಂದು ಪ್ರಯತ್ನದಿಂದ ನಮ್ಮ ದೇಶದ ಜೀವ ವೈವಿಧ್ಯತೆ ಮತ್ತಷ್ಟು ಸಮೃದ್ಧವಾಗುತ್ತಿದೆ.

 

ಸ್ನೇಹಿತರೇ,  ಭಾರತದಲ್ಲಿ ಪ್ರಕೃತಿಯೊಂದಿಗೆ ಸಾಮರಸ್ಯ ಎನ್ನುವುದು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ನಾವು ಸಾವಿರಾರು ವರ್ಷಗಳಿಂದ ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಹ-ಅಸ್ತಿತ್ವದ ಭಾವನೆಯೊಂದಿಗೆ ಬಾಳುತ್ತಾ ಬಂದಿದ್ದೇವೆ. ನೀವು ಎಂದಾದರೂ ಮಹಾರಾಷ್ಟ್ರದ ಮೆಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೋದರೆ, ಅದರ ಆನಂದವನ್ನು ಅನುಭವಿಸಲು ನಿಮಗೆ ಸಾಧ್ಯವಾಗುತ್ತದೆ. ಈ ಹುಲಿ ಸಂರಕ್ಷಿತ ಪ್ರದೇಶದ ಸಮೀಪದ ಖಟ್ಕಲಿ ಗ್ರಾಮದಲ್ಲಿ ವಾಸಿಸುವ ಬುಡಕಟ್ಟು ಕುಟುಂಬಗಳು ಸರ್ಕಾರದ ನೆರವಿನೊಂದಿಗೆ ತಮ್ಮ ಮನೆಗಳನ್ನು ಹೋಮ್ ಸ್ಟೇಗಳಾಗಿ ಪರಿವರ್ತಿಸಿವೆ. ಇದು ಅವರಿಗೆ ಆದಾಯದ ಬಹು ದೊಡ್ಡ ಮೂಲವಾಗಿವೆ. ಇದೇ ಗ್ರಾಮದಲ್ಲಿ ವಾಸವಾಗಿರುವ ಕೊರ್ಕು ಬುಡಕಟ್ಟು ಜನಾಂಗದ ಪ್ರಕಾಶ್ ಜಾಮಕರ್ ಅವರು ತಮ್ಮ ಎರಡು ಹೆಕ್ಟೇರ್ ಜಮೀನಿನಲ್ಲಿ ಏಳು ಕೊಠಡಿಗಳ ಹೋಂ ಸ್ಟೇ ಸಿದ್ಧಪಡಿಸಿದ್ದಾರೆ. ಅಲ್ಲಿ ಉಳಿದುಕೊಳ್ಳುವ ಪ್ರವಾಸಿಗರಿಗೆ ಪ್ರಕಾಶ್ ಅವರ ಕುಟುಂಬವೇ ಆಹಾರ ಮತ್ತು ಪಾನೀಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ತಮ್ಮ ಮನೆಯ ಸುತ್ತ ಮುತ್ತ ಅವರು ಔಷಧೀಯ ಸಸ್ಯಗಳೊಂದಿಗೆ ಮಾವು ಮತ್ತು ಕಾಫಿ ಗಿಡಗಳನ್ನು ಕೂಡಾ ನೆಟ್ಟಿದ್ದಾರೆ. ಇದು ಪ್ರವಾಸಿಗರ ಆಕರ್ಷಣೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಇತರರಿಗೂ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಪಶುಪಾಲನೆಯ ಬಗ್ಗೆ ಮಾತನಾಡುವಾಗ,  ನಾವು ಹೆಚ್ಚಾಗಿ ಹಸು ಮತ್ತು ಎಮ್ಮೆಗಳನ್ನು ಮಾತ್ರಾ ಪರಿಗಣಿಸುತ್ತೇವೆ. ಆದರೆ ಮೇಕೆ ಕೂಡ ಒಂದು ಪ್ರಮುಖ ಪ್ರಾಣಿಯಾಗಿದ್ದು, ಇದರ ಬಗ್ಗೆ ಅಷ್ಟೊಂದು ಮಾತುಕತೆ ನಡೆಯುವುದಿಲ್ಲ. ದೇಶದ ವಿಭಿನ್ನ ಪ್ರದೇಶಗಳಲ್ಲಿ ಹಲವರು ಮೇಕೆ ಪಾಲನೆಯಲ್ಲಿ ತೊಡಗಿಕೊಂಡಿದ್ದಾರೆ. ಒಡಿಶಾದ ಕಾಲಾಹಾಂಡಿಯಲ್ಲಿ ಮೇಕೆ ಪಾಲನೆ ಎನ್ನುವುದು ಗ್ರಾಮದ ಜನರ ಜೀವನೋಪಾಯ ಮಾತ್ರವಲ್ಲ, ಅವರ ಜೀವನ ಮಟ್ಟವನ್ನು ಸುಧಾರಣೆ ಮಾಡುವ ಪ್ರಮುಖ ಸಾಧನವೂ ಆಗುತ್ತಿದೆ. ಈ ಪ್ರಯತ್ನದ ಹಿಂದೆ ಜಯಂತಿ ಮಹಾಪಾತ್ರಾ ಮತ್ತು ಅವರ ಪತಿ ಬೀರೇನ್ ಸಾಹೂ ಅವರ ಬಹುದೊಡ್ಡ ನಿರ್ಧಾರವಿದೆ. ಇವರಿಬ್ಬರೂ ಬೆಂಗಳೂರಿನಲ್ಲಿ ಮ್ಯಾನೇಜ್ಮೆಂಟ್ ವೃತ್ತಿಪರರಾಗಿದ್ದರು. ಆದರೆ ಅವರು ಆ ಕೆಲಸದಿಂದ ವಿರಾಮ ಪಡೆದು, ಕಾಲಾಹಾಂಡಿಯ ಸಾಲೇಭಾಟಾ ಗ್ರಾಮಕ್ಕೆ ಬರಲು ನಿರ್ಧರಿಸಿದರು. ಇಲ್ಲಿನ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಅವರನ್ನು ಸಶಕ್ತಗೊಳಿಸುವ ಏನಾದರೂ ಮಾಡಬೇಕೆಂದು ಇವರಿಬ್ಬರೂ ಬಯಸಿದರು. ಸೇವೆ ಮತ್ತು ಸಮರ್ಪಣಾ ಭಾವದ ಈ ಚಿಂತನೆಯೊಂದಿಗೆ, ಅವರು ಮಾಣಿಕಸ್ತು ಆಗ್ರೋವನ್ನು ಸ್ಥಾಪಿಸಿದರು ಮತ್ತು ರೈತರೊಂದಿಗೆ ಕೆಲಸ ಮಾಡಲಾರಂಭಿಸಿದರು. ಜಯಂತಿ ಮತ್ತು ಬೀರೇನ್ ಅವರು ಇಲ್ಲಿ ಒಂದು ಆಕರ್ಷಕ ಮಾಣಿಕಾಸ್ತು ಮೇಕೆ ಬ್ಯಾಂಕ್ ಕೂಡಾ ತೆರೆದರು. ಸಮುದಾಯ ಮಟ್ಟದಲ್ಲಿ ಮೇಕೆ ಸಾಕಾಣಿಕೆಗೆ ಇವರು ಉತ್ತೇಜನ ನೀಡುತ್ತಿದ್ದಾರೆ. ಅವರ ಮೇಕೆ ಫಾರಂನಲ್ಲಿ ಡಜನ್ ಗಟ್ಟಲೆ ಮೇಕೆಗಳಿವೆ. ಮಾಣಿಕಸ್ತು ಮೇಕೆ ಬ್ಯಾಂಕ್,  ರೈತರಿಗೆ ಸಂಪೂರ್ಣ ವ್ಯವಸ್ಥೆಯನ್ನು ಸಿದ್ಧಪಡಿಸಿದೆ. ಈ ಮೂಲಕ ರೈತರಿಗೆ 24 ತಿಂಗಳುಗಳಿಗಾಗಿ ಎರಡು ಮೇಕೆಗಳನ್ನು ನೀಡಲಾಗುತ್ತದೆ. 2 ವರ್ಷಗಳಲ್ಲಿ ಮೇಕೆಗಳು 9 ರಿಂದ 10 ಮರಿಗಳಿಗೆ ಜನ್ಮ ನೀಡುತ್ತವೆ, ಇವುಗಳ ಪೈಕಿ ಆರು ಮರಿಗಳನ್ನು ಬ್ಯಾಂಕ್ ಇರಿಸಿಕೊಳ್ಳುತ್ತದೆ, ಉಳಿದ ಮರಿಗಳನ್ನು ಮೇಕೆಗಳನ್ನು ಸಾಕುವ ಅದೇ ಕುಟುಂಬಕ್ಕೆ ನೀಡಲಾಗುತ್ತದೆ. ಇಷ್ಟೇ ಅಲ್ಲದೇ, ಮೇಕೆಗಳ ಪಾಲನೆ ಪೋಷಣೆಗಾಗಿ ಅಗತ್ಯ ಸೇವೆಗಳನ್ನು ಕೂಡಾ ಒದಗಿಸಲಾಗುತ್ತದೆ. ಇಂದು 50 ಗ್ರಾಮಗಳ 1000 ಕ್ಕೂ ಅಧಿಕ ರೈತರು ಈ ದಂಪತಿಗಳೊಂದಿಗೆ ಸೇರಿಕೊಂಡಿದ್ದಾರೆ. ಅವರ ಸಹಾಯದಿಂದ ಗ್ರಾಮದ ಜನತೆ ಪಶು ಪಾಲನೆ ಕ್ಷೇತ್ರದಲ್ಲಿ ಸ್ವಾವಲಂಬನೆಯ ಹಾದಿಯಲ್ಲಿ ಮುಂದೆ ಸಾಗುತ್ತಿದ್ದಾರೆ. ಬೇರೆ ಬೇರೆ ಕ್ಷೇತ್ರಗಳಲ್ಲಿನ ಸಫಲ ವೃತ್ತಿಪರರು ರೈತರನ್ನು ಸಶಕ್ತರನ್ನಾಗಿಸಲು ಮತ್ತು ಸ್ವಾವಲಂಬಿಗಳನ್ನಾಗಿಸಲು ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತದೆ. ಅವರುಗಳ ಇಂತಹ ಪ್ರಯತ್ನಗಳು ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿವೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಸಂಸ್ಕೃತಿಯ ಪಾಠ - ‘ಪರಮಾರ್ಥ ಪರಮೋ ಧರ್ಮಃ ’ ಎಂಬುದಾಗಿದೆ ಅಂದರೆ ಇತರರಿಗೆ ಸಹಾಯ ಮಾಡುವುದೇ ಬಹಳ ದೊಡ್ಡ ಕರ್ತವ್ಯ ಎಂದರ್ಥ. ಇದೇ ಭಾವನೆಯೊಂದಿಗೆ ನಮ್ಮ ದೇಶದಲ್ಲಿ ಅಸಂಖ್ಯಾತ ಮಂದಿ ನಿಸ್ವಾರ್ಥವಾಗಿ ಇತರರ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಡುತ್ತಾರೆ. ಅಂತಹ ವ್ಯಕ್ತಿಗಳಲ್ಲಿ ಒಬ್ಬರು - ಬಿಹಾರದ ಭೋಜ್‌ ಪುರದ ಭೀಮ್ ಸಿಂಗ್ ಭವೇಶ್ ಅವರು. ಅವರು ವಾಸವಾಗಿರುವ ಪ್ರದೇಶದ ಮುಸಾಹರ್ ಜಾತಿಯ ಜನರಲ್ಲಿ ಅವರ ಕೆಲಸದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದ್ದರಿಂದ ಇಂದು ಇವುಗಳ ಕುರಿತಂತೆ ಕೂಡಾ ನಿಮ್ಮೊಂದಿಗೆ ಮಾತನಾಡಬಾರದೇಕೆ ಎಂದು ನಾನು ಯೋಚಿಸಿದೆ. ಮುಸಾಹರ್ ಎನ್ನುವುದು ಬಿಹಾರದಲ್ಲಿ ಬಹಳ ಹಿಂದುಳಿದ ಮತ್ತು ಅತ್ಯಂತ ಬಡ ಸಮುದಾಯವಾಗಿದೆ. ಭೀಮ್ ಸಿಂಗ್ ಭವೇಶ್ ಅವರು ಈ ಸಮುದಾಯದ ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕೆಂಬ ಉದ್ದೇಶದಿಂದ ಈ ಮಕ್ಕಳ  ಶಿಕ್ಷಣದತ್ತ ಗಮನಹರಿಸಿದ್ದಾರೆ.  ಮುಸಾಹರ್ ಜಾತಿಯ ಸುಮಾರು 8 ಸಾವಿರ ಮಕ್ಕಳನ್ನು ಶಾಲೆಗೆ ಸೇರಿಸಿದ್ದಾರೆ. ಅವರು ದೊಡ್ಡ ಗ್ರಂಥಾಲಯವನ್ನು ಸಹ ನಿರ್ಮಿಸಿದ್ದಾರೆ, ಇದರಿಂದಾಗಿ ಮಕ್ಕಳಿಗೆ ಶಿಕ್ಷಣಕ್ಕಾಗಿ ಉತ್ತಮ ಸೌಲಭ್ಯಗಳು ಸಿಗುತ್ತಿವೆ. ಭೀಮ್ ಸಿಂಗ್ ಅವರು ತಮ್ಮ ಸಮುದಾಯದ ಸದಸ್ಯರ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸುವುದಕ್ಕೆ, ಅವರುಗಳ ಅರ್ಜಿ ತುಂಬುವುದಕ್ಕೆ ಕೂಡಾ ಸಹಾಯ ಮಾಡುತ್ತಾರೆ. ಇದರಿಂದ ಹಳ್ಳಿಯ ಜನರು ಅಗತ್ಯ ಸಂಪನ್ಮೂಲಗಳನ್ನು ಪಡೆದುಕೊಳ್ಳುವ ಅವಕಾಶ ಕೂಡಾ ಹೆಚ್ಚಾಗಿದೆ. ಜನರ ಆರೋಗ್ಯ ಸುಧಾರಣೆಗಾಗಿ  100ಕ್ಕೂ ಹೆಚ್ಚು ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಕರೋನಾ ಬಿಕ್ಕಟ್ಟು ಗಂಭೀರವಾಗಿದ್ದಾಗ,  ಭೀಮ್ ಸಿಂಗ್ ಅವರು ತಮ್ಮ ಪ್ರದೇಶದ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜನರನ್ನು ಬಹಳ ಪ್ರೋತ್ಸಾಹಿಸಿದ್ದರು. ದೇಶದ ವಿಭಿನ್ನ ಪ್ರದೇಶಗಳಲ್ಲಿ ಭೀಮ್ ಸಿಂಗ್ ಭವೇಶ್ ಅವರಂತಹ ಸಮಾಜದಲ್ಲಿ ಅನೇಕ ಉತ್ತಮ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಂತಹ ಅನೇಕರಿದ್ದಾರೆ. ಜವಾಬ್ದಾರಿಯುತ ನಾಗರಿಕರಾಗಿರುವ ನಾವು ಇದೇ ರೀತಿ ನಮ್ಮ ಕರ್ತವ್ಯಗಳನ್ನು ಬದ್ಧತೆಯಿಂದ ನಿರ್ವಹಿಸಿದರೆ, ಒಂದು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಬಹಳ ಸಹಾಯವಾಗುತ್ತದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಭಾರತದ ಸೌಂದರ್ಯವು ಅದರ ವೈವಿಧ್ಯತೆ ಮತ್ತು ನಮ್ಮ ಸಂಸ್ಕೃತಿಯ ವಿವಿಧ ಬಣ್ಣಗಳಲ್ಲಿ ಅಡಗಿದೆ. ಭಾರತೀಯ ಸಂಸ್ಕೃತಿಯನ್ನು ಸಂರಕ್ಷಿಸಲು ಮತ್ತು ಸುಂದರಗೊಳಿಸಲು ಎಷ್ಟೊಂದು ಜನರು ನಿಸ್ವಾರ್ಥವಾಗಿ ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನೋಡಲು ನನಗೆ ಸಂತೋಷವಾಗುತ್ತದೆ. ಭಾರತದ ಪ್ರತಿಯೊಂದು ಭಾಗದಲ್ಲೂ ನಿಮಗೆ ಅಂತಹ ಜನರು ಕಾಣಸಿಗುತ್ತಾರೆ. ಈ ಪೈಕಿ ಭಾಷಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರ ಸಂಖ್ಯೆ ಹೆಚ್ಚು. ಜಮ್ಮು ಕಾಶ್ಮೀರದಲ್ಲಿ ಗಾಂದರ್ಬಲ್ ನ ಮೊಹಮ್ಮದ್ ಮಾನ್ ಶಾಹ್ ಅವರು ಕಳೆದ ಮೂರು ದಶಕಗಳಿಂದ ಗೋಜರೀ ಭಾಷೆಯನ್ನು ಸಂರಕ್ಷಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇವರು ಗುಜ್ಜರ್ ಬಕರ್ವಾಲ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇದೊಂದು ಬುಡಕಟ್ಟು ಸಮುದಾಯವಾಗಿದೆ. ಬಾಲ್ಯದಲ್ಲಿ ಓದಲು ಬಹಳ ಕಷ್ಟಪಟ್ಟಿದ್ದ ಅವರು ಪ್ರತಿದಿನ 20 ಕಿಲೋಮೀಟರ್ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸುತ್ತಿದ್ದರು. ಅಂತಹ ಸವಾಲುಗಳ ನಡುವೆ ಅವರು ಸ್ನಾತಕೋತ್ತರ ಪದವಿ ಗಳಿಸಿದರು ಮತ್ತು ಇವುಗಳ ನಡುವೆಯೇ ಭಾಷೆಯನ್ನು ಉಳಿಸಿಕೊಳ್ಳುವ ಅವರ ಸಂಕಲ್ಪ ಬಲವಾಯಿತು.

 

ಸಾಹಿತ್ಯ ಕ್ಷೇತ್ರದಲ್ಲಿ ಮಾನ್ ಶಾಹ್ ಅವರ ಕಾರ್ಯ ವ್ಯಾಪ್ತಿ ಎಷ್ಟು ದೊಡ್ಡದಾಗಿದೆ ಎಂದರೆ ಅದನ್ನು ಸುಮಾರು 50 ಸಂಪುಟಗಳಲ್ಲಿ ಸಂಯೋಜಿಸಲಾಗಿದೆ. ಇವುಗಳಲ್ಲಿ ಕವಿತೆಗಳು ಮತ್ತು ಜಾನಪದ ಹಾಡುಗಳೂ ಸೇರಿವೆ. ಅವರು ಅನೇಕ ಪುಸ್ತಕಗಳನ್ನು ಗೋಜರಿ ಭಾಷೆಗೆ ಅನುವಾದಿಸಿದ್ದಾರೆ.

 

ಸ್ನೇಹಿತರೇ, ಅರುಣಾಚಲ ಪ್ರದೇಶದ ತಿರಪ್‌ ನಲ್ಲಿ ಬನ್ವಾಂಗ್ ಲೋಸು ಎಂಬ ಓರ್ವ ಶಿಕ್ಷಕರಿದ್ದಾರೆ. ವಾಂಚೋ ಭಾಷೆ ಕುರಿತಂತೆ ಪ್ರಸಾರ ಮಾಡುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ. ಈ ಭಾಷೆಯನ್ನು ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಮಾತನಾಡುತ್ತಾರೆ. ಒಂದು ಭಾಷಾ ಶಾಲೆ ನಿರ್ಮಿಸುವ ಕೆಲಸವನ್ನೂ ಇವರು ಮಾಡಿದ್ದಾರೆ. ಇವರು ವಾಂಚೋ ಭಾಷೆಯ ಲಿಪಿಯನ್ನೂ ಸಿದ್ಧಪಡಿಸಿದ್ದಾರೆ. ವಾಂಚೋ ಭಾಷೆಯನ್ನು ಅಳಿವಿನಿಂದ ರಕ್ಷಿಸುವ ಸಲುವಾಗಿ ಇವರು ಮುಂದಿನ ಪೀಳಿಗೆಗೆ ಕೂಡಾ ವಾಂಚೋ ಭಾಷೆ ಕಲಿಸುತ್ತಿದ್ದಾರೆ.

ಸ್ನೇಹಿತರೇ, ಹಾಡು, ನೃತ್ಯಗಳ ಮೂಲಕ ತಮ್ಮ ಸಂಸ್ಕೃತಿ, ಭಾಷೆ ಉಳಿಸುವ ಕಾರ್ಯದಲ್ಲಿ ತೊಡಗಿರುವ ಬಹಳಷ್ಟು ಮಂದಿ ನಮ್ಮ ದೇಶದಲ್ಲಿದ್ದಾರೆ. ಕರ್ನಾಟಕದ ವೆಂಕಪ್ಪ ಅಂಬಾಜಿ ಸುಗೇಟಕರ ಅವರ ಜೀವನವೂ ಈ ವಿಚಾರದಲ್ಲಿ ತುಂಬ ಸ್ಪೂರ್ತಿದಾಯಕವಾಗಿದೆ. ಇಲ್ಲಿನ ಬಾಗಲಕೋಟೆಯ ನಿವಾಸಿ ಸುಗೇತಕರ್ ಅವರು ಓರ್ವ ಜಾನಪದ ಗಾಯಕ. ಅವರು 1000 ಕ್ಕೂ ಹೆಚ್ಚು ಗೋಂಧಳಿ ಹಾಡುಗಳನ್ನು ಹಾಡಿದ್ದಾರೆ ಮತ್ತು ಈ ಭಾಷೆಯಲ್ಲಿ ಕಥೆಗಳನ್ನು ಸಾಕಷ್ಟು ಪ್ರಚಾರ-ಪ್ರಸಾರ ಮಾಡಿದ್ದಾರೆ. ಅವರು ಯಾವುದೇ ಶುಲ್ಕ ಪಡೆಯದೇ ನೂರಾರು ವಿದ್ಯಾರ್ಥಿಗಳಿಗೆ ತರಬೇತಿ ಕೂಡಾ ನೀಡಿದ್ದಾರೆ. ನಿರಂತರವಾಗಿ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸುತ್ತಿರುವ ಉತ್ಸಾಹ ಮತ್ತು ಭರವಸೆಯಿಂದ ಕೂಡಿದ ಜನರಿಗೆ ಭಾರತದಲ್ಲಿ ಕೊರತೆಯಿಲ್ಲ. ನೀವೂ ಅವರಿಂದ ಸ್ಫೂರ್ತಿ ಪಡೆದು, ನಿಮ್ಮದೇನಾದರೂ ಮಾಡಲು ಪ್ರಯತ್ನಿಸಿ. ಇಧರಿಂದ ನಿಮಗೆ ಬಹಳ ಸಂತೃಪ್ತಿ ದೊರೆಯುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಎರಡು ದಿನಗಳ ಹಿಂದೆ ನಾನು ವಾರಣಾಸಿಯಲ್ಲಿದ್ದೆ ಮತ್ತು ಅಲ್ಲಿ ನಾನು ಅದ್ಭುತವಾದ ಫೋಟೋ ಪ್ರದರ್ಶನವನ್ನು ನೋಡಿದೆ. ಕಾಶಿ ಹಾಗೂ ಸುತ್ತಮುತ್ತಲಿನ ಯುವಕರು ಕ್ಯಾಮರಾದಲ್ಲಿ ಸೆರೆ ಹಿಡಿದ ಕ್ಷಣಗಳು ಅದ್ಭುತ. ಅದರಲ್ಲಿ ಮೊಬೈಲ್ ಕ್ಯಾಮೆರಾದಲ್ಲಿ ತೆಗೆದ ಹಲವು ಛಾಯಾಚಿತ್ರಗಳಿದ್ದವು. ನಿಜವಾಗಿಯೂ ಈಗ ಮೊಬೈಲ್ ಯಾರ ಬಳಿ ಇದೆಯೋ ಅವರು content creator ಆಗಿಬಿಟ್ಟಿದ್ದಾರೆ. ಜನರಿಗೆ ಅವರ ಕೌಶಲ್ಯ ಮತ್ತು ಪ್ರತಿಭೆಯನ್ನು ತೋರಿಸಲು ಸಾಮಾಜಿಕ ಮಾಧ್ಯಮ ಸಾಕಷ್ಟು ಸಹಾಯ ಮಾಡಿದೆ. ಭಾರತದ ನಮ್ಮ ಯುವ ಸ್ನೇಹಿತರು ಕಂಟೆಂಟ್ ಕ್ರಿಯೇಷನ್ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡುತ್ತಿದ್ದಾರೆ. ಅದು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಾಗಿರಲಿ, ನಮ್ಮ ಯುವ ಸ್ನೇಹಿತರು ವಿಭಿನ್ನ ವಿಷಯಗಳ ಕುರಿತು ವಿಭಿನ್ನ ವಿಷಯವನ್ನು ಹಂಚಿಕೊಳ್ಳುವುದನ್ನು ನೀವು ಖಂಡಿತವಾಗಿ ಕಾಣಬಹುದು.ಪ್ರವಾಸೋದ್ಯಮ ಇರಬಹುದು, social cause ಇರಬಹುದು,  ಸಾರ್ವಜನಿಕ ಪಾಲುದಾರಿಕೆ ಇರಬಹುದು ಅಥವಾ ಒಂದು ಪ್ರೇರಣಾತ್ಮಕ ಜೀವನ ಪಯಣವಿರಬಹುದು, ಇವುಗಳಿಗೆ ಸಂಬಂಧಿಸಿದ ವಿಧ ವಿಧ ವಿಷಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಂಡುಬರುತ್ತವೆ. Content create ಮಾಡುತ್ತಿರುವ ದೇಶದ ಯುವಪೀಳಿಗೆಯ ಧ್ವನಿ ಇಂದು ಬಹಳ ಪರಿಣಾಮಕಾರಿಯಾಗಿದೆ. ಇವರ ಪ್ರತಿಭೆಯನ್ನು ಗೌರವಿಸಲು, ದೇಶದಲ್ಲಿ National Creators Award ಪ್ರಾರಂಭಿಸಲಾಗಿದೆ. ಇದರ ಅಡಿಯಲ್ಲಿ, ಸಾಮಾಜಿಕ ಬದಲಾವಣೆಯ ಪರಿಣಾಮಕಾರಿ ಧ್ವನಿಯಾಗಲು ತಂತ್ರಜ್ಞಾನವನ್ನು ಬಳಸುತ್ತಿರುವ ವಿವಿಧ ವರ್ಗಗಳ ಚೇಂಜ್ ಮೇಕರ್ ಗಳನ್ನು  ಗೌರವಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಈ ಸ್ಪರ್ಧೆಯು MyGov ನಲ್ಲಿ ಚಾಲನೆಯಲ್ಲಿದೆ ಮತ್ತು ನಾನು ಕಂಟೆಂಟ್ ಕ್ರಿಯೇಟರ್ ಗಳನ್ನು ಇದರಲ್ಲಿ ಸೇರಬೇಕೆಂದು ನಾನು ಮನವಿ ಮಾಡುತ್ತೇನೆ. ನಿಮಗೆ ಇಂತಹ ಆಸಕ್ತಿದಾಯ ಕಂಟೆಂಟ್ ಕ್ರಿಯೇಟರ್ ಗಳ ಬಗ್ಗೆ ತಿಳಿದಿದ್ದರೆ, ಅವರನ್ನು ನ್ಯಾಷನಲ್ ಕ್ರಿಯೇಟರ್ಸ್ ಅವಾರ್ಡ್ ಗಾಗಿ ಅವರನ್ನು ಖಂಡಿತವಾಗಿಯೂ ನಾಮನಿರ್ದೇಶನ ಮಾಡಿ.

ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗವು ‘ನನ್ನ ಮೊದಲ ಮತ - ದೇಶಕ್ಕಾಗಿ ಎಂಬ ಮತ್ತೊಂದು ಅಭಿಯಾನವನ್ನು ಪ್ರಾರಂಭಿಸಿರುವುದು ನನಗೆ ಸಂತೋಷ ತಂದಿದೆ. ಈ ಮೂಲಕ, ಮೊದಲ ಬಾರಿಗೆ ಮತ ಚಲಾಯಿಸುವವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ವಿಶೇಷವಾಗಿ ವಿನಂತಿಸಲಾಗಿದೆ. ಉತ್ಸಾಹ ಮತ್ತು ಸಾಮರ್ಥ್ಯದಿಂದ ತುಂಬಿರುವ ತನ್ನ ಯುವ ಶಕ್ತಿಯ ಬಗ್ಗೆ ಭಾರತಕ್ಕೆ ಬಹಳ ಹೆಮ್ಮೆಯಿದೆ. ನಮ್ಮ ಯುವಕರು ಚುನಾವಣಾ ಪ್ರಕ್ರಿಯೆಯಲ್ಲಿ ಎಷ್ಟು ಹೆಚ್ಚು ಭಾಗವಹಿಸುತ್ತಾರೆಯೋ, ಅದರ ಫಲಿತಾಂಶವು ದೇಶಕ್ಕೆ ಹೆಚ್ಚು ಪ್ರಯೋಜನಕಾರಿಯಾಗಲಿದೆ. ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಬೇಕೆಂದು ನಾನು ಕೂಡಾ First time voters ಗಳಲ್ಲಿ ಮನವಿ ಮಾಡುತ್ತೇನೆ. 18 ವರ್ಷಗಳು ತುಂಬಿದ ನಂತರ ನಿಮಗೆ 18ನೇ ಲೋಕಸಭೆಗಾಗಿ ಸದಸ್ಯರನ್ನು ಆಯ್ಕೆ ಮಾಡುವ ಅವಕಾಶ ದೊರೆಯುತ್ತಿದೆ. ಅಂದರೆ, 18ನೇ ಲೋಕಸಭೆ ಕೂಡಾ ಯುವ ಆಕಾಂಕ್ಷೆಯ ಪ್ರತೀಕವಾಗಲಿದೆ. ಆದ್ದರಿಂದ ನಿಮ್ಮ ಮತದ ಪ್ರಾಮುಖ್ಯತೆ ಮತ್ತಷ್ಟು ಹೆಚ್ಚಾಗಿದೆ. ಸಾರ್ವತ್ರಿಕ ಚುನಾವಣೆಯ ಈ ಸಂದರ್ಭದಲ್ಲಿ ನೀವು, ಯುವಜನತೆ ಕೇವಲ ರಾಜಕೀಯ ಚಟುವಟಿಕೆಗಳ ಭಾಗವಾಗವಹಿಸುವುದು ಮಾತ್ರವಲ್ಲದೇ ಈ ಸಮಯದಲ್ಲಿ ಚರ್ಚೆ ಮತ್ತು ವಾಗ್ವಾದಗಳ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು. ಮತ್ತು ನೆನಪಿಡಿ – ‘ನನ್ನ ಮೊದಲ ಮತ - ದೇಶಕ್ಕಾಗಿ . influencers ಅವರು ಕ್ರೀಡಾ ಕ್ಷೇತ್ರದವರಿರಲಿ, ಚಲನಚಿತ್ರ ಜಗತ್ತಿನವರಿರಲಿ, ಸಾಹಿತ್ಯ ಕ್ಷೇತ್ರದವರಿರಲಿ, ಅಥವಾ ಬೇರೆ ವೃತ್ತಿಪರರಿರಲಿ, ಅಥವಾ ನಮ್ಮ instagram ಮತ್ತು youtube ನ influencer ಗಳಿರಲಿ, ಎಲ್ಲರೂ ಮುಂದೆ ಬಂದು ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದೂ ಮತ್ತು ನಮ್ಮ first time voters  ಗಳನ್ನು ಪ್ರೇರೇಪಿಸಬೇಕೆಂದು ಎಲ್ಲಾ  influencers ಗಳಲ್ಲಿ ನಾನು ಮನವಿ ಮಾಡುತ್ತೇನೆ.   

ಈ ಬಾರಿಯ ಮನ್ ಕಿ ಬಾತ್ ಸಂಚಿಕೆಯನ್ನು ಇವಿಷ್ಟು ಮಾತುಕತೆಯೊಂದಿಗೆ ನಾನು ಮುಗಿಸುತ್ತಿದ್ದೇನೆ. ದೇಶದಲ್ಲಿ ಲೋಕಸಭೆ ಚುನಾವಣೆಯ ವಾತಾವರಣವಿದ್ದ, ಕಳೆದ ಬಾರಿಯಂತೆ ಮಾರ್ಚ್ ತಿಂಗಳಿನಲ್ಲಿಯೇ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆ ಇದೆ. 110 ಸಂಚಿಕೆಗಳಲ್ಲಿ ನಾವು ಇದನ್ನು ಸರ್ಕಾರದ ನೆರಳಿನಿಂದ ದೂರವಿಟ್ಟಿರುವುದು ‘ಮನ್ ಕಿ ಬಾತ್’ನ ದೊಡ್ಡ ಯಶಸ್ಸಾಗಿದೆ. ‘ಮನ್ ಕಿ ಬಾತ್’ ನಲ್ಲಿ, ದೇಶದ ಸಾಮೂಹಿಕ ಶಕ್ತಿಯ ಮಾತುಕತೆ ನಡೆಯುತ್ತದೆ, ದೇಶದ ಸಾಧನೆಗಳ ಕುರಿತು ಮಾತುಕತೆ ನಡೆಯುತ್ತದೆ. ಇದು ಒಂದು ರೀತಿಯಲ್ಲಿ ಜನರ, ಜನರಿಗಾಗಿ, ಜನರಿಂದ ಸಿದ್ಧವಾಗುವ ಕಾರ್ಯಕ್ರಮವಾಗಿದೆ.  ಆದರೂ ರಾಜಕೀಯಕ್ಕೆ ಗೌರವ ತೋರಿಸುತ್ತಾ, ಲೋಕಸಭೆ ಚುನಾವಣೆಯ ಈ ದಿನಗಳಲ್ಲಿ ಮುಂದಿನ ಮೂರು ತಿಂಗಳವರೆಗೆ 'ಮನ್ ಕಿ ಬಾತ್' ಪ್ರಸಾರವಾಗುವುದಿಲ್ಲ. ನಾವು ನಿಮ್ಮೊಂದಿಗೆ ಸಂವಾದ ನಡೆಸುವ ಮುಂದಿನ 'ಮನ್ ಕಿ ಬಾತ್' ಅದು 'ಮನ್ ಕಿ ಬಾತ್' ನ 111 ನೇ ಸಂಚಿಕೆಯಾಗಲಿದೆ. ಮುಂದಿನ ಬಾರಿಯ 'ಮನ್ ಕಿ ಬಾತ್' ಶುಭಸಂಖ್ಯೆ 111ರೊಂದಿಗೆ ಆರಂಭವಾಗುತ್ತದೆ, ಇದಕ್ಕಿಂತ ಉತ್ತಮವಾದುದು ಇನ್ನೇನಿರುತ್ತದೆ. ಆದರೆ ಸ್ನೇಹಿತರೇ, ನೀವು ನನ್ನದೊಂದು ಕೆಲಸ ಮಾಡುತ್ತಿರಬೇಕು.  ‘ಮನ್ ಕಿ ಬಾತ್’ ಮೂರು ತಿಂಗಳುಗಳ ಕಾಲ ನಿಲ್ಲಬಹುದು, ಆದರೆ ದೇಶದಲ್ಲಿ ಸಾಧನೆಗಳು ನಿಲ್ಲಲು ಸಾಧ್ಯವೇ. ಆದ್ದರಿಂದ ‘ಮನ್ ಕಿ ಬಾತ್‘  ಎಂಬ ಹ್ಯಾಷ್ ಟ್ಯಾಗ್ (#) ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಮಾಜದ ಸಾಧನೆ, ದೇಶದ ಸಾಧನೆಗಳನ್ನು ಪೋಸ್ಟ್ ಮಾಡಿ. ಕೆಲ ಸಮಯದ ಹಿಂದೆ ಓರ್ವ ಯುವಕ ನನಗೆ ಉತ್ತಮ ಸಲಹೆಯೊಂದನ್ನು ನೀಡಿದ್ದರು. 'ಮನ್ ಕಿ ಬಾತ್' ನ ಇದುವರೆಗಿನ ಸಂಚಿಕೆಗಳ ಸಣ್ಣ ವೀಡಿಯೊಗಳನ್ನು ಯೂಟ್ಯೂಬ್ ಕಿರುಚಿತ್ರಗಳ ರೂಪದಲ್ಲಿ ಹಂಚಿಕೊಳ್ಳಬೇಕು ಎಂಬುದು ಸಲಹೆಯಾಗಿತ್ತು.  ಆದ್ದರಿಂದ, 'ಮನ್ ಕಿ ಬಾತ್' ಕೇಳುಗರು ಇಂತಹ ಕಿರುಚಿತ್ರಗಳನ್ನು ಸಾಕಷ್ಟು ಹಂಚಿಕೊಳ್ಳಬೇಕೆಂದು ನಾನು ಮನವಿ ಮಾಡುತ್ತೇನೆ.

ಸ್ನೇಹಿತರೇ, ಮುಂದಿನ ಸಲ ನಿಮ್ಮೊಂದಿಗೆ ಮಾತನಾಡುವಾಗ, ಹೊಸ ಶಕ್ತಿ ಮತ್ತು ಹೊಸ ಮಾಹಿತಿಯೊಂದಿಗೆ ನಾನು ನಿಮ್ಮನ್ನು ಭೇಟಿಯಾಗುತ್ತೇನೆ. ನಿಮ್ಮ ಬಗ್ಗೆ ನಿಮಗೆ ಕಾಳಜಿ ಇರಲಿ, ಅನೇಕಾನೇಕ ಧನ್ಯವಾದಗಳು. ನಮಸ್ಕಾರ.

 

 

 

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Text of Prime Minister addresses the Indian Community in Paris
June 18, 2026

नमस्ते!

बों जू!

ऐसा लग रहा है, आप सब छुट्टी के मूड में हैं।

साथियों,

ये पेरिस शहर, Lights का शहर है, रंगों का शहर है, यहां Art है, Ideas हैं, और innovation की प्रेरणा भी है। इस शहर को भारत के अलग-अलग राज्यों से आए आप सभी लोग और भी खूबसूरत बना देते हैं। नए नए रंगों से भर देते हैं।

कोई तमिल है, कोई पंजाबी है, कोई गुजराती है, तो कोई मराठी है, और कोई बंगाली है। भारत के हर कोने का प्रतिनिधित्व यहां दिखाई देता है।

साथियों,

मैं जब 14 जून को नीस पहुंचा था तो सबसे पहले भारत इनोवेट्स कार्यक्रम में शामिल हुआ था। आज जब मैं फ्रांस से वापसी की तैयारी में हूं तो लग रहा है जैसे भारत कनेक्ट्स कार्यक्रम में आ गया हूं।

फ्रांस में रहने वाले आप लोगों ने 21वीं सदी के भारत-फ्रांस रिश्तों को जिस तरह कनेक्ट किया है, वो हमारी Strategic Partnership की बहुत बड़ी ताकत बन रही है। मैं आप सभी के लिए भारत से 140 करोड़ देशवासियों की शुभकामनाएं लेकर आया हूं। इस आत्मीय स्वागत के लिए, मैं आप सभी का हृदय से आभार व्यक्त करता हूं।

साथियों,

आज मैं ऐसे समय में फ्रांस आया हूं जब कुछ ही दिन पहले हमारी सरकार के 12 वर्ष पूरे हुए हैं। चुने हुए प्रधानमंत्री के रूप निरंतर 12 साल तक देश की सेवा करना मेरे जीवन का बहुत बड़ा सौभाग्य रहा है। यह भारत के लोकतंत्र की शक्ति है जिसने एक चायवाले को यहां तक पहुंचा दिया।

साथियों,

बीते 12 वर्ष, 140 करोड़ भारतीयों के अद्भुत सामर्थ्य के रहे हैं। 12 साल के इस कालखंड में भारत का GDP दोगुना हुआ है। Airports की संख्या दोगुनी हुई है। Universities की संख्या भी दोगुनी हो गई है। Highway Construction की स्पीड तीन गुना बढ़ गई। और Metro Network, चार गुणा बड़ा हो गया है।

मैं आपको कुछ और फैक्ट्स दूंगा, उससे आप अंदाजा लगा पाएंगे कि भारत किस स्पीड और कितने बड़े स्केल पर काम कर रहा है। पिछले 12 वर्षों में भारत का Defence Export 35 गुणा यानि Thirty Five Times बढ़ गया है।

औऱ एक फैक्ट सुनिए भारत में मोबाइल मैन्यूफैक्टरिंग यूनिट्स में, 100 गुणा की बढ़ोतरी हुई है। 100 times. भारत अब दुनिया का दूसरा सबसे बड़ा mobile phone manufacturer है। इसी गति, इसी प्रगति का नतीजा है कि आज भारत दुनिया की Fastest Growing Major Economy है।

साथियों,

आज भारत की कहानी सिर्फ Economic Progress की कहानी नहीं है। सिर्फ यहाँ अटक नहीं जाती है। ये Social Transformation की भी कहानी है।

पिछले 12 साल में देश में 25 करोड़ लोग गरीबी से बाहर निकले हैं। यानि एक ऐसी प्रगति जिसका लाभ समाज के अंतिम व्यक्ति तक पहुंच रहा है। फ्रांस में जितने घर हैं, उससे भी अधिक पक्के घर बीते 12 वर्ष में हमने जरूरतमंदों के लिए बनाए हैं।

अब हर परिवार के पास, गरीब से गरीब क्यों न हो, Bank Account है। Financial Inclusion एक सरकारी कार्यक्रम नहीं, बल्कि सामाजिक परिवर्तन का अभियान बना है।

साथियों,

इन 12 वर्षों की उपलब्धियों में, एक उपलब्धि ऐसी भी है जिसे किसी आंकड़े से, या अंकों से, नहीं मापा जा सकता। वह है 140 करोड़ भारतीयों का आत्मविश्वास।

आज का भारत और आज के भारत का युवा बहुत बड़े सपने देख रहा है। भारत का किसान नई संभावनाओं के साथ आगे बढ़ रहा है। भारत की महिलाएं नए नेतृत्व का परिचय दे रही हैं। इसलिए ये सिर्फ Achievements के 12 साल नहीं हैं, ये भारत की एस्पिरेशन्स को नई बुलंदी देने का कालखंड रहा है।

साथियों,

एक समय था जब दूर-दराज के गांवों तक आधुनिक सुविधाएं पहुंचाना वाकई बहुत मुश्किल भरा था। आज उन्हीं गांवों में बिजली भी है, इंटरनेट भी है, और डिजिटल सेवाओं की पूरी दुनिया भी है। आज एक क्लिक पर, कभी भी, कहीं भी बैंकिंग सेवाएं उपलब्ध हैं।

आज मोबाइल फोन, भारत के नागरिकों को अनेक सुविधाओं से कनेक्ट कर रहा है। हमारे किसान, हमारे मछुआरे, हमारे dairy farmers, हमारी महिलाएं, हमारे स्टूडेंट्स, सभी टेक्नोलॉजी के माध्यम से सशक्त हो रहे हैं, और अपने लिए नए अवसर बना रहे हैं।

साथियों,

आपने 125 करोड़ से अधिक Aadhaar IDs के बारे में सुना है। लेकिन आज भारत सिर्फ पहचान को डिजिटल नहीं बना रहा। आज करीब 90 करोड़ भारतीयों की Unique Digital Health IDs बनाई जा चुकी हैं। जिससे मेडिकल रिकॉर्ड सुरक्षित और accessible बन गए हैं। इससे हेल्थकेयर डिलीवरी और अधिक आसान और efficient हो रही है।

साथियों,

इन उपलब्धियों की सबसे बड़ी विशेषता यह है कि इनमें से अधिकांश चीजें कुछ वर्ष पहले तक कल्पना जैसी लगती थीं। कौन सोच सकता था कि गांव-गांव तक हाई-स्पीड इंटरनेट पहुंचेगा ? कौन सोच सकता था कि दूर-सुदूर के गांवों में भी QR code जीवन का हिस्सा बन जायेगा ? गांव में कोई बहन, ड्रोन से खेती करने में मदद करेगी, ये भी असंभव लगता था।

लेकिन आज यह सब, भारत के करोड़ों लोगों के जीवन का सामान्य हिस्सा बनता जा रहा है। और आपको गर्व होगा साथियों, यही नए भारत की पहचान है।

जो कभी सपना था, वह आज सच्चाई है। जो कभी नामुमकिन लगता था, वो आज मुमकिन हुआ है, औऱ ये करने के पीछे सबसे बड़ी ताकत क्या है? किसकी वजह से ये सब संभव हुआ है? यह मोदी के कारण नहीं, वो ताकत है- भारत का लोकतंत्र, भारत की डेमोक्रेसी। इस डेमोक्रेसी में सबका साथ है, सबका विकास है।

साथियों,

आज से 50 या 100 साल बाद जब भारत के इस कालखंड की समीक्षा होगी, तो ये बात उभरकर सामने आएगी कि इस कालखंड को भारत की Aspirations ने ड्राइव किया। यह भारत के एस्पिरेशन्स का नया युग है।

जहां बिजली पहुंची है, वहां लोग सिर्फ बिजली नहीं चाहते, वे Smart Living चाहते हैं। जहां ट्रेन पहुंची है, वहां लोग High-Speed Connectivity चाहते हैं। जहां हाईवे बने हैं, वहां लोग World-Class Expressways चाहते हैं। जहां इंटरनेट पहुंचा है, वहां लोग AI और Digital Innovation में नेतृत्व चाहते हैं।

यानि आज भारत के लोग अपने जीवन को भी Next Level पर ले जाना चाहते हैं, और भारत को भी Next Level पर ले जाना उनका मकसद है, उनका संकल्प है, उनके सपने है।

और साथियों,

यही Aspirations आज भारत की विकास यात्रा की सबसे बड़ी शक्ति हैं। मैं आपको भारत की Space Journey का उदाहरण दूंगा।

भारत ने चंद्रयान को चंद्रमा के South Pole पर उतारा। दुनिया ने इसे एक बहुत बड़ी उपलब्धि माना। लेकिन भारत इसे अपनी मंजिल मानकर रुका नहीं। आज देश गगनयान की तैयारी कर रहा है। भारत अंतरिक्ष में अपना Space Station बनाने की दिशा में आगे बढ़ रहा है।

हमारे Space Startups Global Space Economy में अपनी जगह बनाने के लिए पुरजोश काम कर रहे हैं, आगे बढ़ रहे हैं।

साथियों,

Green Energy के क्षेत्र में भी भारत की यही एस्पिरेशंस दिखाई देती है। Solar Power में भारत की उपलब्धियों की दुनिया भर में लगातार चर्चा हो रही हैं। लेकिन भारत अगली छलांग की तैयारी कर रहा है।

Green Hydrogen में बड़े निवेश हो रहे हैं। Advanced Nuclear Energy पर तेजी से काम हो रहा है। आपने भारत के Fast Breeder nuclear Reactor से जुड़ी प्रोग्रेस के बारे में भी सुना ज़रूर होगा। ये भारत के न्यूक्लियर एनर्जी लैंडस्केप में क्रांतिकारी परिवर्तन करने का बहुत बड़ा अचीवमेंट हमारे सीसेन्टिस्टों ने किया है।

साथियों,

आज का भारत भविष्य का पूरा Ecosystem बना रहा है। भारत एक साथ हर उस क्षेत्र में निवेश कर रहा है, जो आने वाले दशकों की दिशा तय करेगा।

अभी आपने कुछ दिन पहले ही देखा है नीस में भारत इनोवेट्स का एक आयोजन किया। ये इवेंट भारत के डीप टेक सामर्थ्य को दुनिया तक पहुंचाने का एक और माध्यम था। इसमें भारत के 120 Deep-Tech Startups उपस्थित थे। Bharat Innovates में करीब एक हजार चार सौ B2B Meetings हुईं है। कई Startups के लिए Investment Commitments आगे बढ़ीं, Commercial Orders के लिए रास्ते खुले। French और European Universities तथा Incubators के साथ Engagements बढ़ रही हैं।

Student Exchanges, Joint Research, और Innovation Support के नए रास्ते बने। इसलिए Bharat Innovates सिर्फ एक Summit नहीं रहा। यह Innovation Diplomacy का एक नया मॉडल बना है।

और आज ही पेरिस में VivaTech इवेंट के जरिए, इस यात्रा को हमने और आगे बढ़ाया। नीस में हमने Ideas को Capital से जोड़ा और पेरिस में Indian Innovation को Global Scale से जोड़ा। आज दुनिया देख रही है भारत केवल भविष्य के लिए तैयार नहीं हो रहा है। भारत भविष्य को आकार दे रहा है।

साथियों,

एक समय था, जब देशों के बीच रिश्ते केवल व्यापार से तय होते थे। आज व्यापार के साथ-साथ Trust यानि भरोसा भी उतना ही महत्वपूर्ण हो गया है।

हर देश Reliable Supply Chains चाहता है। हर देश Stable Partnerships चाहता है। हर देश ऐसे साथियों की तलाश में है, जिन पर लंबे समय तक भरोसा किया जा सके। और ऐसे समय में, भारत विश्व में एक Trusted Partner के रूप में उभर रहा है।

एवियां में G7 बैठक के दौरान मैंने trust based partnerships बनाने पर ज़ोर दिया। ग्लोबल साउथ के देशों के साथ equal पार्टनर्स के रूप में आगे बढ़ने का आह्वान किया। भारत का G7 समिट में संदेश था Global Governance तभी प्रभावी होगी जब वह Inclusive होगी। Global Growth तभी Sustainable होगी जब वह शेयर्ड होगी। और Global Technology तभी मानवता के लिए उपयोगी होगी जब वह Trusted होगी।

साथियों,

भारत और दुनिया के बीच व्यापारिक रिश्तों में नई ऊर्जा नज़र आ रही है। फ्रांस के साथ भारत का ट्रेड लगतार बढ़ रहा है। पिछले कुछ वर्षों में भारत ने दुनिया के अनेक देशों के साथ Free Trade Agreements किए हैं। यूरोपियन यूनियन हो, यूनाइटेड किंगडम हो दुनिया के हर देश, हर रीजन के साथ भारत समझौते कर रहा है।

अगले महीने से भारत और UK के बीच ट्रेड एग्रीमेंट भी लागू हो जाएगा। यह एग्रीमेंट भारत के farmers, workers और innovators को अनेक नए अवसर प्रदान करेगा।

साथियों,

आज दुनिया Uncertainty और Disruption के दौर से गुजर रही है। ऐसे समय में भारत और फ्रांस की साझेदारी विश्वास, स्थिरता और सहयोग का एक मजबूत स्तंभ बन रहा है।

इस वर्ष हमने भारत और फ्रांस के संबंधों को Special Global Strategic Partnership का दर्जा दिया था। नीस में मेरे मित्र President Macron और मैंने हमारे संबंधों को force for global good बनाने पर चर्चा की। Defence से लेकर space और नुक्लियर तक AI और क्रिटीकल मिनरल्स से लेकर high speed railway तक, हर क्षेत्र में हम मिलकर आगे बढ़ेंगे।

साथियों,

Solar energy हो, या AI के क्षेत्र में सहयोग हो, भारत और फ्रांस मिलकर ऐसे समाधान विकसित कर रहे हैं जो पूरी मानवता के हित में हैं। पिछले वर्ष पेरिस में और इस वर्ष दिल्ली में हमने AI Summit को Co-chair किया।

अब हम साथ मिलकर अगले वर्ष “तृष्णा” satellite को लॉन्च करने जा रहें हैं। यह “तृष्णा” satellite जो विश्व में फूड और वाटर सिक्युरिटी सुनिश्चित करने में योगदान देगा।

और साथियों,

यह सभी गवर्नमेंट टू गवर्नमेंट पहलो में आप सभी का योगदान बहुत महत्वपूर्ण है। ये आप हैं जो भारत और यूरोप के बीच सबसे मजबूत सेतु हैं। आप दोनों समाजों को समझते हैं। दोनों बाजारों को समझते हैं। आने वाले समय में Talent, Trade, Technology, Tourism और Investment के नए अवसरों को आगे बढ़ाने में आपकी भूमिका लगातार बढ़ने वाली हैं।

साथियों,

भारत और फ्रांस के रिश्तों को साझा इतिहास, साझा मूल्यों और साझा विश्वास ने आगे बढ़ाया है। विश्व युद्धों के दौरान फ्रांस की धरती पर बलिदान देने वाले भारतीय सैनिकों की स्मृतियां आज भी हमें जोड़ती हैं।

मुझे पहले नव शापेल में श्रद्धांजलि देने का अवसर मिला, पिछले वर्ष प्रेसिडेंट मैक्रों के साथ मार्सेय के वॉर मेमोरियल जाने का अवसर भी मिला। ये हमारी साझा विरासत है।

फ्रांस, भारतीयों के योगदान को संजोता भी है और सराहता भी है। भारतीय मूल की नूर इनायत खान हों, जिन्होंने फ्रांस की Resistance के लिए अपना जीवन बलिदान किया, या महाराजा रणजीत सिंह के साथ काम करने वाले जनरल जां फ्रांस्वा अलार हों ये सभी भारत और फ्रांस की साझा विरासत के प्रतीक हैं।

भारत के राज्य पुडुचेरी में भी फ्रेंच विरासत की झलक दिखाई देती है। वहां का Architecture, वहां की कला-संस्कृति और खान-पान सभी में हमारे संबंधों की महेक है।

साथियों,

इस समय फ्रांस समेत पूरी दुनिया में International Yoga Day की तैयारी भी चल रही है। इस अवसर पर मैं, फ्रांस में योग को आगे बढ़ाने वाले श्रीमान महेश घाट्राड्याल जी को भी आदरपूर्वक श्रद्धांजलि देता हूं। मैं पद्म पुरस्कार से सम्मानित, शार्लोत शोपां जी को भी प्रणाम करता हूं। जिन्होंने सौ वर्ष की आयु में भी, योग के माध्यम से फ़्रांस को भारत की विरासत से जोड़ा है। उनका जीवन यह सिद्ध करता है: Yoga does not add years to life, it adds life to years.

साथियों,

मैं फ्रेद नेग्री जी को भी आदरपूर्वक श्रद्धापूर्वक याद करता हूं। भारतीय विरासत को संरक्षित करने में उनका योगदान अतुल्य रहा है।

साथियों,

भारत और फ्रांस को कनेक्ट करने वाली एक और चीज है, और वो है फुटबॉल। इस वक्त यहां फुटबॉल फीवर पूरे जोर पर है। फ्रांस में इसकी दीवानगी, चप्पे-चप्पे पर दिखती है। लेकिन भारत में भी फुटबॉल का क्रेज़ सिर चढ़कर बोलता है।

खासतौर पर फ्रांस की टीम के फैन्स भारत में बहुत अधिक हैं। फ़्रांस ने इस वर्ल्ड कप की शुरुआत एक जोरदार जीत से शुरू की है। मैं फ्रांस की टीम को बहुत-बहुत शुभकामनाएं देता हूं।

साथियों,

जाने से पहले, आप सभी के लिए कुछ और अच्छी खबरें भी लेकर के आया हूँ। वो आपके लिए हैं। पिछले वर्ष, मार्सेय में कॉन्सुलेट खोला गया, इससे काफी अधिक सुविधा मिल रही है। कुछ हफ्ते पहले, Indian Nationals के लिए French Airports पर Visa-free Transit की व्यवस्था शुरू हो गई है।

Students और Professionals की Mobility बढ़ाना हो, या Educational Qualifications की Mutual Recognition की बात हो, या फिर French Universities के भारत में Campus खोलना हो, इन सभी पर हम मिलकर आगे बढ़ रहें हैं।

अब फ्रांस में UPI के उपयोग का दायरा भी और बढ़ने जा रहा है। यानि भारत-फ्रांस कनेक्ट भी Instant और आपसी Payment भी Instant!

साथियों,

इन सभी पहलों से, हम भारत और फ़्रांस को और करीब ला रहें हैं। और मैं फिर कहूंगा इस साझेदारी की नींव, इस रिश्ते की असली ताकत आप सभी हैं। आप सब मेरे देशवासी हैं।

आज जब भारत तेज़ी से विकसित भारत के लक्ष्य की ओर बढ़ रहा है, तो मैं आप सभी से भारत के साथ और गहराई से जुडने का आग्रह करूंगा। इससे भारत की विकास यात्रा को नई शक्ति मिलेगी, और आपको अपनी पुरखों की धरती की सेवा करने का अवसर भी मिलेगा।

इन्हीं शब्दों के साथ आप सभी के प्रेम आपके उत्साह और इस आत्मीय स्वागत के लिए मैं एक बार फिर आप सभी का आभार व्यक्त करता हूं।

भारत माता की जय!

बहुत बहुत धन्यवाद।