ಗೌರವಾನ್ವಿತರಾದ ಮತ್ತು ನನ್ನ ಕಿರಿಯ ಸಹೋದರಿ, ಪ್ರಧಾನ ಮಂತ್ರಿ ತಕೈಚಿ ಅವರೇ,

ಎರಡೂ ದೇಶಗಳ ನಿಯೋಗದ ಸದಸ್ಯರೇ,

ಮಾಧ್ಯಮದ ಸ್ನೇಹಿತರೇ,

ನಮಸ್ಕಾರ!

ಕೊನ್ನಿಚಿವಾ!

ಭಾರತ-ಜಪಾನ್‌ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡುತ್ತಿರುವ ಪ್ರಧಾನಮಂತ್ರಿ ತಕೈಚಿ ಅವರನ್ನು ಸ್ವಾಗತಿಸಲು ನನಗೆ ಅತೀವ ಸಂತೋಷವಾಗುತ್ತಿದೆ.

ಅವರು ಜಪಾನ್‌ನ ಮೊದಲ ಮಹಿಳಾ ಪ್ರಧಾನಿ ಮಾತ್ರವಲ್ಲ, ದೂರದೃಷ್ಟಿಯ ಮತ್ತು ವ್ಯಾಪಕವಾಗಿ ಗೌರವಿಸಲ್ಪಟ್ಟ ನಾಯಕಿಯೂ ಆಗಿದ್ದಾರೆ. ಇದಲ್ಲದೆ, ಅವರು ಜಪಾನ್‌ನ ನಾರಾ ಪ್ರಿಫೆಕ್ಚರ್‌ನಿಂದ ಬಂದವರು, ಇದು ಭಾರತ ಮತ್ತು ಜಪಾನ್‌ ನಡುವಿನ ಹಂಚಿಕೆಯ ಬೌದ್ಧ ಪರಂಪರೆಯ ಪ್ರಮುಖ ಕೇಂದ್ರವಾಗಿದೆ.

ಸ್ನೇಹಿತರೇ,

ಕೆಲವು ದಿನಗಳ ಹಿಂದೆ, ಜಿ-7 ಶೃಂಗಸಭೆಯಲ್ಲಿ, ಜಾಗತಿಕ ಅನಿಶ್ಚಿತತೆ ಮತ್ತು ಕ್ರಾಂತಿಯ ಇಂದಿನ ವಾತಾವರಣದಲ್ಲಿ, ಪರಸ್ಪರ ನಂಬಿಕೆಯು ನಮ್ಮ ದೊಡ್ಡ ಕಾರ್ಯತಂತ್ರದ ಆಸ್ತಿಯಾಗಿದೆ ಎಂದು ನಾನು ಹೇಳಿದ್ದೆ. ಭಾರತ - ಜಪಾನ್‌ ಸಹಭಾಗಿತ್ವವು ಪ್ರತಿಯೊಂದು ವಿಷಯದಲ್ಲೂಈ ತತ್ವದ ಪರೀಕ್ಷೆಯನ್ನು ಎದುರಿಸುತ್ತದೆ ಎಂದು ಹೇಳಲು ನಾನು ಹೆಮ್ಮೆಪಡುತ್ತೇನೆ.

ಕಳೆದ ಹಲವು ದಶಕಗಳಿಂದೀಚೆಗೆ ಜಪಾನ್‌ ಭಾರತದ ಪ್ರಗತಿಗಾಥೆಯಲ್ಲಿ ಪ್ರಮುಖ ಪಾಲುದಾರನಾಗಿ ಮಾರ್ಪಟ್ಟಿದೆ. ಆಟೋಮೊಬೈಲ್ಸ್‌ನಿಂದ ಹಿಡಿದು ಎಲೆಕ್ಟ್ರಾನಿಕ್ಸ್‌ ವರೆಗೆ, ಸ್ನೇಹ ಮತ್ತು ವಿಶ್ವಾಸದ ಅಮೂಲ್ಯವಾಗಿದೆ.

 

ಇಂದು, ಪ್ರಧಾನಮಂತ್ರಿ ಟಕೈಚಿ ಅವರ ಭೇಟಿಯೊಂದಿಗೆ, ನಾವು ನಮ್ಮ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯಲ್ಲಿಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತಿದ್ದೇವೆ.

ಸ್ನೇಹಿತರೇ,

ಇಂದು, ಭಾರತ ಮತ್ತು ಜಪಾನ್‌ ಎರಡೂ ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ ಸೇರಿವೆ. ಮುಕ್ತ, ಸಮೃದ್ಧ ಮತ್ತು ನಿಯಮಾಧಾರಿತ ಇಂಡೋ-ಪೆಸಿಫಿಕ್‌ ನಮ್ಮ ಎರಡೂ ದೇಶಗಳಿಗೆ ಹಂಚಿಕೆಯ ಆದ್ಯತೆಯಾಗಿದೆ.

ಈ ಪ್ರದೇಶದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಮಾರುಕಟ್ಟೆ ಆರ್ಥಿಕತೆಯಾಗಿ, ನಾವು ಇಂದು ಹಲವಾರು ಪ್ರಮುಖ ಉಪಕ್ರಮಗಳನ್ನು ಪ್ರಾರಂಭಿಸಿದ್ದೇವೆ. ಒಟ್ಟಾಗಿ, ಇವು ಪ್ರದೇಶದಾದ್ಯಂತ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ದಾರಿ ಮಾಡಿಕೊಡಲು ಸಹಾಯ ಮಾಡುತ್ತವೆ.

ಸ್ನೇಹಿತರೇ,

ಪ್ರಧಾನಮಂತ್ರಿ ತಕೈಚಿ ಮತ್ತು ನಾನು ದೃಢವಾಗಿ ನಂಬಿದ್ದೇವೆ ತಂತ್ರಜ್ಞಾನ ಪಾಲುದಾರಿಕೆ ನಮ್ಮ ಸಹಕಾರದ ಬಲವಾದ ಆಧಾರಸ್ತಂಭವಾಗಲಿದೆ. ಈ ದೃಷ್ಟಿಕೋನವನ್ನು ಸಾಕಾರಗೊಳಿಸಲು, ನಾವು ಇಂದು ಕೃತಕ ಬುದ್ಧಿಮತ್ತೆಯ ಬಗ್ಗೆ ಜಂಟಿ ಹೇಳಿಕೆಯನ್ನು ಸಹ ಬಿಡುಗಡೆ ಮಾಡಿದ್ದೇವೆ. ಭಾರತದ ಎಐ ಪರಿಸರ ವ್ಯವಸ್ಥೆಯ ಹಲವಾರು ಪ್ರಮುಖ ಸಂಸ್ಥೆಗಳು ಇಂದು ತಮ್ಮ ಜಪಾನಿನ ಪಾಲುದಾರರೊಂದಿಗೆ ಒಪ್ಪಂದಗಳನ್ನು ಮಾಡಿಕೊಂಡಿವೆ. ಜಪಾನ್‌ನ ನಿಖರ ತಂತ್ರಜ್ಞಾನಗಳು ಮತ್ತು ಭಾರತದ ಸಾಫ್ಟ್‌ವೇರ್‌ ಸಾಮರ್ಥ್ಯಗಳ ಒಮ್ಮುಖವು ಜಾಗತಿಕವಾಗಿ ಕೃತಕ ಬುದ್ಧಿಮತ್ತೆಯ ಪ್ರಗತಿಗೆ ಹೊಸ ವೇಗ ಮತ್ತು ಶಕ್ತಿಯನ್ನು ನೀಡುತ್ತದೆ.

ರಕ್ಷಣಾ ಕ್ಷೇತ್ರದಲ್ಲಿ, ಇಂದು ನಾವು ಭಾರತ ಮತ್ತು ಜಪಾನ್‌ ನಡುವಿನ ಮೊದಲ ಸಹ-ಅಭಿವೃದ್ಧಿ ಯೋಜನೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಈ ನೌಕಾ ರೆಡಿಯೊ ಆಂಟೆನಾ ಯೋಜನೆಯು ನಮ್ಮ ರಕ್ಷಣಾ ತಂತ್ರಜ್ಞಾನ ಪಾಲುದಾರಿಕೆಯಲ್ಲಿಹೊಸ ಅಧ್ಯಾಯವನ್ನು ತೆರೆಯಲಿದೆ. ಮುಂದುವರಿದು, ಪ್ರಾದೇಶಿಕ ಶಾಂತಿ, ಕಡಲ ಭದ್ರತೆ ಮತ್ತು ನಿಯಮ ಆಧಾರಿತ ಕ್ರಮವನ್ನು ಬಲಪಡಿಸುವ ರಕ್ಷಣಾ ತಂತ್ರಜ್ಞಾನಗಳನ್ನು ನಾವು ಜಂಟಿಯಾಗಿ ಅಭಿವೃದ್ಧಿಪಡಿಸುತ್ತೇವೆ.

ಔಷಧಗಳು, ವೈದ್ಯಕೀಯ ಸಾಧನಗಳು ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿಇಂದು ಸಹಿ ಹಾಕಲಾದ ಒಪ್ಪಂದಗಳು ಜಾಗತಿಕ ಆರೋಗ್ಯ ಭದ್ರತೆಗೆ ಕೊಡುಗೆ ನೀಡಲು ನಮಗೆ ಅನುವು ಮಾಡಿಕೊಡುತ್ತವೆ. ಭಾರತದ ಪ್ರಮಾಣವನ್ನು ಜಪಾನ್‌ನ ಗುಣಮಟ್ಟದೊಂದಿಗೆ ಸಂಯೋಜಿಸುವ ಮೂಲಕ, ವಿಶ್ವಕ್ಕೆ ಕೈಗೆಟುಕುವ, ವಿಶ್ವಾಸಾರ್ಹ ಮತ್ತು ಸುಧಾರಿತ ಆರೋಗ್ಯ ಪರಿಹಾರಗಳನ್ನು ತಲುಪಿಸಲು ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ.

 

ಸ್ನೇಹಿತರೇ,

ಭಾರತ-ಜಪಾನ್‌ ಹೂಡಿಕೆ ಪಾಲುದಾರಿಕೆ ಬಲವಾಗಿ ಬೆಳೆಯುತ್ತಲೇ ಇದೆ. ಕಳೆದ ವರ್ಷದಲ್ಲಿ, 100ಕ್ಕೂ ಹೆಚ್ಚು ಹೊಸ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ, ಇದು ಭಾರತದಲ್ಲಿ ಜಪಾನಿನ ಹೂಡಿಕೆಗೆ 10 ಶತಕೋಟಿ ಅಮೆರಿಕನ್‌ ಡಾಲರ್‌ಗೆ ದಾರಿ ಮಾಡಿಕೊಟ್ಟಿದೆ. ನಮ್ಮ ಹಣಕಾಸು ಸೇವಾ ಸಂಸ್ಥೆಗಳ ನಡುವೆ ಇಂದು ಸಹಿ ಹಾಕಲಾದ ಒಪ್ಪಂದವು ನಮ್ಮ ಎರಡೂ ದೇಶಗಳ ನಡುವೆ ಬಂಡವಾಳ ಮತ್ತು ಹೂಡಿಕೆಗಳ ಹರಿವನ್ನು ಮತ್ತಷ್ಟು ಸುಗಮಗೊಳಿಸುತ್ತದೆ.

ಮುಂದಿನ ಹತ್ತು ವರ್ಷಗಳಲ್ಲಿಜಪಾನಿನ 10 ಟ್ರಿಲಿಯನ್‌ ಯೆನ್‌ ಹೂಡಿಕೆಯನ್ನು ಭಾರತಕ್ಕೆ ಆಕರ್ಷಿಸುವುದು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಪಾನಿನ ಕಂಪನಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದು ನಮ್ಮ ಉದ್ದೇಶ ಸ್ಪಷ್ಟವಾಗಿದೆ. ಭಾರತದ ಪ್ರಸ್ತುತ ನಡೆಯುತ್ತಿರುವ ಸುಧಾರಣೆಗಳು ಸುಗಮ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸಿವೆ ಮತ್ತು ಜಪಾನಿನ ಕಂಪನಿಗಳು ಈ ಅವಕಾಶಗಳಿಂದ ಪ್ರಯೋಜನ ಪಡೆಯಲು ಉತ್ತಮ ಸ್ಥಾನದಲ್ಲಿವೆ.

ಸ್ನೇಹಿತರೇ,

ಇಂದಿನ ಅನಿಶ್ಚಿತತೆಯ ಯುಗದಲ್ಲಿ, ಭಾರತ ಮತ್ತು ಜಪಾನ್‌ ಎರಡೂ ಆರ್ಥಿಕ ಭದ್ರತೆ ಮತ್ತು ಇಂಧನ ಭದ್ರತೆಯ ಮಹತ್ವವನ್ನು ಸಂಪೂರ್ಣವಾಗಿ ಗುರುತಿಸುತ್ತವೆ. ಈ ದಿಕ್ಕಿನಲ್ಲಿ, ನಾವು ಇಂದು ಆರ್ಥಿಕ ಭದ್ರತೆಯ ಜಂಟಿ ಮಾರ್ಗಸೂಚಿಯನ್ನು ಅಳವಡಿಸಿಕೊಂಡಿದ್ದೇವೆ. ಈ ಮಾರ್ಗಸೂಚಿಯ ಮೂಲಕ, ನಾವು ಸೆಮಿಕಂಡಕ್ಟರ್‌ಗಳು, ಕ್ವಾಂಟಮ್‌ ತಂತ್ರಜ್ಞಾನಗಳು ಮತ್ತು ಸುಧಾರಿತ ವಸ್ತುಗಳಂತಹ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಪೂರೈಕೆ ಸರಪಳಿ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತೇವೆ.

ಇಂಧನ ಭದ್ರತೆಯ ಕ್ಷೇತ್ರದಲ್ಲಿಯೂ ನಾವು ಇಂದು ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಭಾರತ-ಜಪಾನ್‌ ಜೈವಿಕ ಅನಿಲ ಉಪಕ್ರಮದ ಮೂಲಕ, ಭಾರತದಾದ್ಯಂತ ಒಂದು ಸಾವಿರ ಜೈವಿಕ ಅನಿಲ ಮತ್ತು ಸಾವಯವ ರಸಗೊಬ್ಬರ ಘಟಕಗಳ ಸ್ಥಾಪನೆಗೆ ಬೆಂಬಲವನ್ನು ವಿಸ್ತರಿಸಲಾಗುವುದು. ಇದು ನಮ್ಮ ಗೋಬರ್ಧನ್‌ ಉಪಕ್ರಮವನ್ನು ಮತ್ತಷ್ಟು ಬಲಪಡಿಸುತ್ತದೆ.

ಇದು ಭಾರತದ ಹಳ್ಳಿಗಳಲ್ಲಿ ಸುಸ್ಥಿರತೆ, ಸಮೃದ್ಧಿ ಮತ್ತು ಗ್ರಾಮೀಣ ಜೀವನೋಪಾಯಕ್ಕೆ ಹೊಸ ವೇಗವನ್ನು ನೀಡುತ್ತದೆ. ತೈಲ ಆಘಾತಗಳಂತಹ ಸವಾಲುಗಳನ್ನು ಉತ್ತಮವಾಗಿ ಎದುರಿಸಲು, ನಾವು ಇಂದು ಇಂಧನ ಸ್ಥಿತಿಸ್ಥಾಪಕತ್ವದ ಪ್ರಮುಖ ಉಪಕ್ರಮವನ್ನು ಪ್ರಾರಂಭಿಸಿದ್ದೇವೆ. ಅದೇ ಸಮಯದಲ್ಲಿ, ಬ್ಯಾಟರಿಗಳು, ಹಸಿರು ಹೈಡ್ರೋಜನ್‌ ಮತ್ತು ಪರಮಾಣು ಶಕ್ತಿಯಲ್ಲಿನ ನಮ್ಮ ಸಹಕಾರವು ವಿಶ್ವದ ಶುದ್ಧ ಇಂಧನ ಭವಿಷ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತದೆ.

 

ಭಾರತ ಮತ್ತು ಜಪಾನ್‌ ಆರ್ಥಿಕ ಭದ್ರತೆಯನ್ನು ಹಂಚಿಕೆಯ ಭದ್ರತಾ ಕಡ್ಡಾಯವಾಗಿ ಮತ್ತು ಇಂಧನ ಪರಿವರ್ತನೆಯನ್ನು ಹಂಚಿಕೆಯ ಅವಕಾಶವಾಗಿ ನೋಡುತ್ತವೆ. ಈ ಸಾಮಾನ್ಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ನಾವು ಎರಡನ್ನೂ ಮುನ್ನಡೆಸಲು ಮತ್ತು ಅವುಗಳನ್ನು ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸಲು ಒಟ್ಟಾಗಿ ಕೆಲಸ ಮಾಡುತ್ತೇವೆ.

ಸ್ನೇಹಿತರೇ,

ಇಂದು, ನಾವು ಭಾರತ - ಜಪಾನ್‌ ಮುಂದಿನ ಪೀಳಿಗೆಯ ಚಲನಶೀಲತೆ ಪಾಲುದಾರಿಕೆ ಚೌಕಟ್ಟನ್ನು ಸಹ ಸ್ಥಾಪಿಸಿದ್ದೇವೆ. ಹಡಗು ನಿರ್ಮಾಣ, ವಾಯುಯಾನ ಮತ್ತು ಲಾಜಿಸ್ಟಿಕ್‌ಸ್ನಂತಹ ಹೊಸ ಕ್ಷೇತ್ರಗಳಲ್ಲಿಆಟೋಮೋಟಿವ್‌ ವಲಯದಲ್ಲಿನಮ್ಮ ಯಶೋಗಾಥೆಯನ್ನು ಪುನರಾವರ್ತಿಸಲು ಇದು ನಮಗೆ ಅನುವು ಮಾಡಿಕೊಡುತ್ತದೆ.

ಸ್ನೇಹಿತರೇ,

ನಮ್ಮ ಸಂಬಂಧದ ದೊಡ್ಡ ಶಕ್ತಿಯೆಂದರೆ ನಮ್ಮ ಜನರ ನಡುವಿನ ಸಂಬಂಧಗಳು. ನಾವು ಪ್ರತಿಭಾ ಚಲನಶೀಲತೆ, ಕೌಶಲ್ಯ ಮತ್ತು ತಾಂತ್ರಿಕ ಇಂಟರ್ನ್‌ಶಿಪ್‌ ಕಾರ್ಯಕ್ರಮಗಳಿಗೆ ಅವಕಾಶಗಳನ್ನು ವಿಸ್ತರಿಸುತ್ತಿದ್ದೇವೆ. ಅದೇ ಸಮಯದಲ್ಲಿ, ಸಂಶೋಧನೆ, ಶಿಕ್ಷಣ ಮತ್ತು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿನಾವು ನಮ್ಮ ಎರಡು ದೇಶಗಳ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ.

ಮುಂದಿನ ವರ್ಷ ನಾವು ಭಾರತ ಮತ್ತು ಜಪಾನ್‌ ನಡುವೆ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 75ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದೇವೆ ಎಂದು ನಮಗೆ ಸಂತೋಷವಾಗಿದೆ. ಈ ಮಹತ್ವದ ಸಂದರ್ಭದಲ್ಲಿ, ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಸೃಜನಶೀಲ ಆರ್ಥಿಕತೆಯಲ್ಲಿ ಹೆಚ್ಚಿನ ಸಹಕಾರದ ಮೂಲಕ ನಾವು ನಮ್ಮ ಜನರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಾಢವಾಗಿಸುತ್ತೇವೆ.

ಘನತೆವೆತ್ತವರೇ,

ಭಾರತ ಮತ್ತು ಜಪಾನ್‌ನ ಆರ್ಥಿಕತೆಗಳು ಪೂರಕವಾಗಿವೆ. ನಮ್ಮ ಹಂಚಿಕೆಯ ಸಾಂಸ್ಕೃತಿಕ ಮೌಲ್ಯಗಳಿಂದ ಹಿಡಿದು ಅತ್ಯಾಧುನಿಕ ತಂತ್ರಜ್ಞಾನದವರೆಗೆ, ನಮ್ಮ ದೃಷ್ಟಿಕೋನಗಳು ಮತ್ತು ವಿಧಾನಗಳು ನಿಕಟವಾಗಿ ಹೊಂದಿಕೊಂಡಿವೆ.

ಎಲ್ಲಕ್ಕಿಂತ ಹೆಚ್ಚಾಗಿ, ನಮ್ಮ ಸಂಬಂಧದ ಅಡಿಪಾಯವು ಅಚಲವಾದ ಪರಸ್ಪರ ನಂಬಿಕೆಯ ಮೇಲೆ ನಿಂತಿದೆ. ಈ ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆಯು ಬಲಿಷ್ಠ ಮತ್ತು ಸಮೃದ್ಧ ಜಪಾನ್‌ ನ ನಿಮ್ಮ ದೃಷ್ಟಿಕೋನ, ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪ ಮತ್ತು ಪ್ರಪಂಚದ ಪ್ರಗತಿಯನ್ನು ಹೊಸ ಎತ್ತರಕ್ಕೆ ಏರಿಸುತ್ತದೆ ಎಂದು ನನಗೆ ವಿಶ್ವಾಸವಿದೆ.

ಒಟ್ಟಾಗಿ, ಬಲಿಷ್ಠ ಮತ್ತು ಸಮೃದ್ಧ ಜಪಾನ್‌ನ ನಿಮ್ಮ ದೃಷ್ಟಿಕೋನ, ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಸಂಕಲ್ಪ ಮತ್ತು ಇಡೀ ಪ್ರಪಂಚದ ಪ್ರಗತಿ ಮತ್ತು ಸಮೃದ್ಧಿಗಾಗಿ ಹಂಚಿಕೆಯ ಆಕಾಂಕ್ಷೆಯನ್ನು ಸಾಕಾರಗೊಳಿಸೋಣ.

ಮತ್ತೊಮ್ಮೆ, ನಾನು ನಿಮಗೆ ನನ್ನ ಹೃತ್ಪೂರ್ವಕ ಮತ್ತು ಆತ್ಮೀಯ ಸ್ವಾಗತವನ್ನು ಕೋರುತ್ತೇನೆ.

ತುಂಬಾ ತುಂಬಾ ಧನ್ಯವಾದಗಳು.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
‘Give mothers, sisters their due rights’: PM Modi pushes for women's reservation from the ramparts of Red Fort

Media Coverage

‘Give mothers, sisters their due rights’: PM Modi pushes for women's reservation from the ramparts of Red Fort
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಆಗಸ್ಟ್ 2026
August 16, 2026

Aatmanirbhar Ambitions Meet Global Alliances: The Modi Doctrine in Action