ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಸ್ಕತ್‌ ನಲ್ಲಿ ನಡೆದ ಭಾರತ-ಓಮನ್ ಉದ್ಯಮ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಓಮನ್‌ನ ವಾಣಿಜ್ಯ, ಕೈಗಾರಿಕೆ ಮತ್ತು ಹೂಡಿಕೆ ಉತ್ತೇಜನ ಸಚಿವರಾದ ಘನತೆವೆತ್ತ ಖೈಸ್ ಅಲ್ ಯೂಸೆಫ್; ಓಮನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಘನತೆವೆತ್ತ ಶೇಖ್ ಫೈಸಲ್ ಅಲ್ ರಾವಾಸ್; ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್; ಮತ್ತು ಸಿಐಐ ಅಧ್ಯಕ್ಷ ಶ್ರೀ ರಾಜೀವ್ ಮೆಮಾನಿ ಸಭೆಯಲ್ಲಿ ಭಾಗವಹಿಸಿದ್ದರು. ಇಂಧನ, ಕೃಷಿ, ಲಾಜಿಸ್ಟಿಕ್ಸ್, ಮೂಲಸೌಕರ್ಯ, ತಯಾರಿಕೆ, ಆರೋಗ್ಯ, ಹಣಕಾಸು ಸೇವೆಗಳು, ಹಸಿರು ಅಭಿವೃದ್ಧಿ, ಶಿಕ್ಷಣ ಮತ್ತು ಸಂಪರ್ಕ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಪ್ರಮುಖ ಉದ್ಯಮ ಪ್ರತಿನಿಧಿಗಳು ವೇದಿಕೆಯಲ್ಲಿ ಭಾಗವಹಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ಮಾಂಡ್ವಿಯಿಂದ ಮಸ್ಕತ್‌ ವರೆಗಿನ ಎರಡೂ ದೇಶಗಳ ನಡುವಿನ ಶತಮಾನಗಳಷ್ಟು ಹಳೆಯದಾದ ಕಡಲ ವ್ಯಾಪಾರ ಸಂಬಂಧಗಳನ್ನು ಒತ್ತಿ ಹೇಳಿದರು. ಇದು ಇಂದು ರೋಮಾಂಚಕ ವಾಣಿಜ್ಯ ವಿನಿಮಯದ ಅಡಿಪಾಯವಾಗಿದೆ. 70 ವರ್ಷಗಳ ರಾಜತಾಂತ್ರಿಕ ಸಂಬಂಧಗಳು ಶತಮಾನಗಳಿಂದ ನಿರ್ಮಿಸಲಾದ ನಂಬಿಕೆ ಮತ್ತು ಸ್ನೇಹವನ್ನು ಪ್ರತಿನಿಧಿಸುತ್ತವೆ ಎಂದು ಅವರು ಹೇಳಿದರು. ಭಾರತ-ಓಮನ್ ಸಮಗ್ರ ಆರ್ಥಿಕ ಸಹಭಾಗಿತ್ವದ (ಸಿಇಪಿಎ) ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಪ್ರಧಾನಿಯವರು ಉದ್ಯಮ ನಾಯಕರಿಗೆ ಕರೆ ನೀಡಿದರು, ಇದನ್ನು ಅವರು ಭಾರತ-ಓಮನ್ ಹಂಚಿಕೆಯ ಭವಿಷ್ಯದ ನೀಲನಕ್ಷೆ ಎಂದು ಬಣ್ಣಿಸಿದರು. ಸಿಇಪಿಎ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿ ಹೊಸ ಶಕ್ತಿಯನ್ನು ತುಂಬುತ್ತದೆ ಮತ್ತು ಪರಸ್ಪರ ಬೆಳವಣಿಗೆ, ನಾವೀನ್ಯತೆ ಮತ್ತು ಉದ್ಯೋಗಕ್ಕೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.

ಕಳೆದ 11 ವರ್ಷಗಳಲ್ಲಿ ಭಾರತದ ಆರ್ಥಿಕ ಯಶಸ್ಸನ್ನು ಒತ್ತಿ ಹೇಳಿದ ಪ್ರಧಾನಿ, ಮುಂದಿನ ಪೀಳಿಗೆಯ ಸುಧಾರಣೆಗಳು, ನೀತಿಗಳು, ಉತ್ತಮ ಆಡಳಿತ ಮತ್ತು ಹೆಚ್ಚಿನ ಹೂಡಿಕೆದಾರರ ವಿಶ್ವಾಸದ ಹಿನ್ನೆಲೆಯಲ್ಲಿ ದೇಶವು ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಎಂದು ಹೇಳಿದರು. ಜಾಗತಿಕ ಅನಿಶ್ಚಿತತೆಯ ವಾತಾವರಣದಲ್ಲಿ ಕಳೆದ ತ್ರೈಮಾಸಿಕದಲ್ಲಿ ಶೇ.8 ಕ್ಕಿಂತ ಹೆಚ್ಚಿನ ಬೆಳವಣಿಗೆಯು ಭಾರತದ ಸ್ಥಿತಿಸ್ಥಾಪಕತ್ವದ ಸ್ವಭಾವ ಮತ್ತು ಅಂತರ್ಗತ ಸಾಮರ್ಥ್ಯಗಳನ್ನು ಸಾರುತ್ತದೆ ಎಂದು ಅವರು ಹೇಳಿದರು. "ಸುಲಭ ಜೀವನ" ಮತ್ತು "ವ್ಯವಹಾರ ಮಾಡುವ ಸುಲಭತೆ" ಹೆಚ್ಚಿಸಲು ವಿಶ್ವ ದರ್ಜೆಯ ಮೂಲಸೌಕರ್ಯ, ಲಾಜಿಸ್ಟಿಕ್ಸ್, ಸಂಪರ್ಕ, ವಿಶ್ವಾಸಾರ್ಹ ಪೂರೈಕೆ ಸರಪಳಿಗಳು, ಉತ್ಪಾದನಾ ಸಾಮರ್ಥ್ಯಗಳು ಮತ್ತು ಹಸಿರು ಬೆಳವಣಿಗೆಯನ್ನು ನಿರ್ಮಿಸಲು ಭಾರತ ವೇಗ ಮತ್ತು ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಒತ್ತಿ ಹೇಳಿದರು. ಇಂಧನ, ತೈಲ ಮತ್ತು ಅನಿಲ, ಪೆಟ್ರೋಕೆಮಿಕಲ್ಸ್ ಮತ್ತು ರಸಗೊಬ್ಬರಗಳ ಸಾಂಪ್ರದಾಯಿಕ ಕ್ಷೇತ್ರಗಳನ್ನು ಮೀರಿ ಆಲೋಚಿಸಲು ಮತ್ತು ಹಸಿರು ಶಕ್ತಿ, ಸೌರ ಪಾರ್ಕ್‌ ಗಳು, ಇಂಧನ ಸಂಗ್ರಹಣೆ, ಸ್ಮಾರ್ಟ್ ಗ್ರಿಡ್‌ ಗಳು, ಕೃಷಿ-ತಂತ್ರಜ್ಞಾನ, ಫಿನ್‌ಟೆಕ್, ಎಐ ಮತ್ತು ಸೈಬರ್ ಭದ್ರತೆಯ ಕ್ಷೇತ್ರಗಳಲ್ಲಿ ಅವಕಾಶಗಳನ್ನು ಅನ್ವೇಷಿಸಲು ಅವರು ಒಮಾನಿ ಉದ್ಯಮಿಗಳಿಗೆ ಆಹ್ವಾನ ನೀಡಿದರು. ವ್ಯಾಪಾರ ಪಾಲುದಾರಿಕೆಯನ್ನು ಭವಿಷ್ಯಕ್ಕೆ ಸಜ್ಜುಗೊಳಿಸಲು ಅವರು 'ಭಾರತ-ಓಮನ್ ಅಗ್ರಿ ಇನ್ನೋವೇಶನ್ ಹಬ್' ಮತ್ತು 'ಭಾರತ-ಓಮನ್ ಇನ್ನೋವೇಶನ್ ಬ್ರಿಡ್ಜ್' ರಚನೆಯನ್ನು ಪ್ರಸ್ತಾಪಿಸಿದರು. ಇವು ಕೇವಲ ಆಲೋಚನೆಗಳಲ್ಲ, ಬದಲಿಗೆ ಒಟ್ಟಾಗಿ ಹೂಡಿಕೆ ಮಾಡಲು, ನಾವೀನ್ಯತೆ ಸೃಷ್ಟಿಸಲು ಮತ್ತು ಭವಿಷ್ಯವನ್ನು ನಿರ್ಮಿಸಲು ನೀಡುತ್ತಿರುವ ಆಹ್ವಾನ ಎಂದು ಪ್ರಧಾನಮಂತ್ರಿಯವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮ ನಾಯಕರ ಬಲವಾದ ಉಪಸ್ಥಿತಿಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು ಮತ್ತು ಉದ್ಯಮಶೀಲತೆಯನ್ನು ಸರ್ಕಾರದ ನೀತಿಗಳೊಂದಿಗೆ ಸಂಯೋಜಿಸಿ, ಸಮಗ್ರ ಆರ್ಥಿಕ ಪಾಲುದಾರಿತ್ವ ಒಪ್ಪಂದಕ್ಕೆ (ಸಿಇಪಿಎ) ವೇಗ ನೀಡುವಂತೆ ಅವರಿಗೆ ಕರೆ ನೀಡಿದರು. ಭಾರತ ಮತ್ತು ಓಮನ್ ಕೇವಲ ನಿಕಟ ನೆರೆಹೊರೆಯವರಲ್ಲ, ಬದಲಿಗೆ ಈ ಪ್ರದೇಶದಲ್ಲಿ ಮತ್ತು ಅದಕ್ಕೂ ಮೀರಿ ಸ್ಥಿರತೆ, ಬೆಳವಣಿಗೆ ಮತ್ತು ಹಂಚಿಕೆಯ ಸಮೃದ್ಧಿಗೆ ಬದ್ಧವಾಗಿರುವ ಕಾರ್ಯತಂತ್ರದ ಪಾಲುದಾರರು ಎಂದು ಅವರು ಪುನರುಚ್ಚರಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Stranded in Tehran, 50 Iranian Sikhs return safely to India

Media Coverage

Stranded in Tehran, 50 Iranian Sikhs return safely to India
NM on the go

Nm on the go

Always be the first to hear from the PM. Get the App Now!
...
Prime Minister Narendra Modi pays tributes to Freedom Fighter, Shri Pingali Venkayya on his 150th birth anniversary
August 02, 2026

The Prime Minister, Shri Narendra Modi, paid tributes to freedom fighter, Shri Pingali Venkayya on his 150th birth anniversary.

The Prime Minister remembered Pingali Venkayya for his invaluable role in giving the nation the Tricolour and said that his efforts continue to inspire people to serve the country with dedication and patriotic fervour.

Shri Modi said that the Tiranga fills every Indian heart with immense pride and inspires the nation to work towards nation-building.

The Prime Minister wrote on X;

“Tributes to Pingali Venkayya Ji on his 150th birth anniversary. He is remembered for his invaluable role in giving our nation the Tricolour. May his efforts always inspire people to serve our country with dedication and patriotic fervour.

The Tiranga fills every Indian heart with immense pride and inspires us to work towards nation building.”