ಸೂರತ್ ನಿಂದ ಇಂದು ರಸ್ತೆ, ಇಂಧನ ಮತ್ತು ಕೈಗಾರಿಕಾ ವಲಯಗಳಲ್ಲಿ ಸರಣಿ ಪರಿವರ್ತನಾ ಯೋಜನೆಗಳಿಗೆ ಚಾಲನೆ ನೀಡಲಾಗುತ್ತಿದೆ; ಈ ಉಪಕ್ರಮಗಳು ಬೆಳವಣಿಗೆಯನ್ನು ಉತ್ತೇಜಿಸಲಿವೆ ಮತ್ತು ಜನರ 'ಜೀವನದ ಸುಲಭತೆ'ಯನ್ನು ಸುಧಾರಿಸಲಿವೆ: ಪ್ರಧಾನಮಂತ್ರಿ
ಇಂದು ಭಾರತವು 'ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಪ್ರಗತಿ' ತತ್ವದ ಮಾರ್ಗದರ್ಶನದಲ್ಲಿ ತನ್ನ ಅಭಿವೃದ್ಧಿಯನ್ನು ಮುನ್ನಡೆಸುತ್ತಿದೆ: ಪ್ರಧಾನಮಂತ್ರಿ
ಕಳೆದ 12 ವರ್ಷಗಳಿಂದ ದೇಶದಲ್ಲಿ ಬೃಹತ್ 'ತ್ಯಾಜ್ಯದಿಂದ ಸಂಪತ್ತಿಗೆ' ಜನಾಂದೋಲನವು ಸಕ್ರಿಯವಾಗಿದೆ; ಇದು ನಗರ ನೈರ್ಮಲ್ಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತಿದ್ದು, ನಮ್ಮ ನಗರ ಪ್ರದೇಶಗಳನ್ನು ಹಸಿರಾಗಿ ಮತ್ತು ಸ್ವಚ್ಛವಾಗಿಡಲು ಸಹಾಯ ಮಾಡುತ್ತಿದೆ: ಪ್ರಧಾನಮಂತ್ರಿ
ಇಂದು ವಿಶ್ವವು ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿದೆ, ಆದರೆ 140 ಕೋಟಿ ಭಾರತೀಯರ ಸಾಮೂಹಿಕ ಪ್ರಯತ್ನದಿಂದ ದೇಶವು ಆತ್ಮವಿಶ್ವಾಸ ಮತ್ತು ಆಶಾವಾದದೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಸೂರತ್ ನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಗುಜರಾತ್ ನ ಜನತೆ ನೀಡುತ್ತಿರುವ ಅಚಲ ಬೆಂಬಲಕ್ಕಾಗಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. "ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಂತರ ನಾನು ಮೊದಲ ಬಾರಿಗೆ ಸೂರತ್ ಗೆ ಭೇಟಿ ನೀಡುತ್ತಿದ್ದೇನೆ. ಸೂರತ್ ನಿಂದ ನಾನು ಇಡೀ ಗುಜರಾತ್ ನ ಜನತೆಗೆ ನಮಸ್ಕರಿಸುತ್ತೇನೆ ಮತ್ತು ಅಭಿನಂದಿಸುತ್ತೇನೆ," ಎಂದು ಶ್ರೀ ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೂರತ್ ಮತ್ತು ನವಸಾರಿಯ ಅನೇಕ ಚುನಾಯಿತರಾದ ಜನಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಪ್ರಧಾನಮಂತ್ರಿಯವರು, ಗುಜರಾತ್ ನ ಜನತೆ ಸೇವಾ ಮನೋಭಾವವನ್ನು ಅನುಮೋದಿಸಿದ್ದಾರೆ ಎಂಬುದನ್ನು ಎಲ್ಲಾ ಪಾಲುದಾರರಿಗೆ ನೆನಪಿಸಿದರು. ಈ ಬೃಹತ್ ವಿಜಯವು ಸೇವಾ ಧ್ಯೇಯವನ್ನು ಮತ್ತಷ್ಟು ವಿಸ್ತರಿಸಲು ನೀಡಿರುವ ಜನಾದೇಶವಾಗಿದೆ ಎಂದು ಒತ್ತಿ ಹೇಳಿದ ಅವರು, ಇನ್ನೂ ಹೆಚ್ಚು ಶ್ರಮವಹಿಸಿ ಕೆಲಸ ಮಾಡುವಂತೆ ಎಲ್ಲಾ ಜನಪ್ರತಿನಿಧಿಗಳಿಗೆ ಕರೆ ನೀಡಿದರು. ಈ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಎಲ್ಲಾ ಚುನಾಯಿತ ಪ್ರತಿನಿಧಿಗಳು ವಹಿಸಬೇಕಾದ ಪ್ರಮುಖ ಪಾತ್ರವನ್ನು ಅವರು ಒತ್ತಿಹೇಳಿದರು. "ವಿಕಸಿತ ಗುಜರಾತ್ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ. ದೇಶದ ಪ್ರತಿಯೊಂದು ಹಳ್ಳಿ, ಪ್ರತಿಯೊಂದು ಜಿಲ್ಲೆ, ಪ್ರತಿಯೊಂದು ನಗರವನ್ನು ಅಭಿವೃದ್ಧಿಪಡಿಸುವುದರಿಂದ ಮಾತ್ರ ಈ ಸಂಕಲ್ಪ ಈಡೇರಲು ಸಾಧ್ಯ," ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.

ಪರಿಸರ ದಿನದಂದೇ ನಡೆಯುತ್ತಿರುವ ಈ ಕಾರ್ಯಕ್ರಮವು ಶುಭ ಸಂಯೋಗದ ಕಡೆಗೆ ಗಮನ ಸೆಳೆದ ಪ್ರಧಾನಮಂತ್ರಿಯವರು, ಜೂನ್ 5 ರಂದು ದೇಶದ ಅತ್ಯಂತ ಸ್ವಚ್ಛ ನಗರಗಳಲ್ಲಿ ಒಂದಾದ ಸೂರತ್ ನಲ್ಲಿ ಇರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು. ಒಂದು ಕಾಲದಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗದಿಂದ ತತ್ತರಿಸಿದ್ದ ಸೂರತ್ ನಗರವು ಇಂದು ತನ್ನ ಸ್ವಚ್ಛತೆಗಾಗಿ ಗುರುತಿಸಿಕೊಳ್ಳುವವರೆಗೆ ನಡೆದುಬಂದ ರೂಪಾಂತರವನ್ನು ನೆನಪಿಸಿಕೊಂಡ ಅವರು, ನಾಗರಿಕರು, ಅಧಿಕಾರಿಗಳು, ಉದ್ಯೋಗಿಗಳು ಮತ್ತು ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಾಲುದಾರರು ಕಳೆದ ಎರಡೂವರೆ ದಶಕಗಳಲ್ಲಿ ಮಾಡಿದ ನಿರಂತರ ಪ್ರಯತ್ನಗಳನ್ನು ಶ್ಲಾಘಿಸಿದರು. "ಒಂದು ಕಾಲದಲ್ಲಿ ಪ್ಲೇಗ್ ಸಾಂಕ್ರಾಮಿಕ ರೋಗ ಪೀಡಿತವಾಗಿದ್ದ ಇದೇ ಸೂರತ್, ಇಂದು ಸ್ವಚ್ಛತೆಗಾಗಿ ಗುರುತಿಸಿಕೊಳ್ಳುತ್ತಿರುವುದು ದೊಡ್ಡ ಹೆಮ್ಮೆಯ ವಿಷಯ" ಎಂದು ಶ್ರೀ ಮೋದಿ ಹೇಳಿದರು.

ಹಸಿರು ಭವಿಷ್ಯದ ಕಡೆಗಿನ ಜಾಗತಿಕ ಪರಿವರ್ತನೆಯಲ್ಲಿ ಗುಜರಾತ್ ನ ಪ್ರವರ್ತಕ ಪಾತ್ರವನ್ನು ಗುರುತಿಸಿದ ಪ್ರಧಾನಮಂತ್ರಿಯವರು, 2009 ರಲ್ಲೇ ಐತಿಹಾಸಿಕ ಚರಂಕಾ ಸೌರ ಉದ್ಯಾನದೊಂದಿಗೆ ಭಾರತದ ಮೊದಲ ಹವಾಮಾನ ಬದಲಾವಣೆ ಇಲಾಖೆಯನ್ನು ಸ್ಥಾಪಿಸುವಲ್ಲಿ ರಾಜ್ಯವು ಹೊಂದಿದ್ದ ದೂರದೃಷ್ಟಿಯನ್ನು ನೆನಪಿಸಿಕೊಂಡರು. ಸೂರತ್ ತನ್ನ ನವೀನ 'ವೃತ್ತಾಕಾರದ ಜಲ ಆರ್ಥಿಕತೆ'   ಮೂಲಕ ಕೈಗಾರಿಕಾ ಬಳಕೆಗಾಗಿ ತ್ಯಾಜ್ಯನೀರನ್ನು ಸಂಸ್ಕರಿಸುವ ಮೂಲಕ ಮತ್ತು ಕಳೆದ ಹನ್ನೆರಡು ವರ್ಷಗಳ ರಾಷ್ಟ್ರವ್ಯಾಪಿ 'ತ್ಯಾಜ್ಯದಿಂದ ಸಂಪತ್ತಿಗೆ' ಆಂದೋಲನದ ಮೂಲಕ ಪ್ರಗತಿ ಮತ್ತು ಪ್ರಕೃತಿಯನ್ನು ಸಮತೋಲನಗೊಳಿಸುವ ರಾಷ್ಟ್ರೀಯ ಮಂತ್ರಕ್ಕೆ ಹೇಗೆ ಪರಿಪೂರ್ಣ ಉದಾಹರಣೆಯಾಗಿದೆ ಎಂಬುದನ್ನು ಅವರು ವಿವರಿಸಿದರು. ಭವಿಷ್ಯದ ಕುಡಿಯುವ ನೀರು ಮತ್ತು ಒಳಚರಂಡಿ ಭದ್ರತೆಯನ್ನು ಖಾತರಿಪಡಿಸುವ ತಾಪಿ ಬ್ಯಾರೇಜ್ ಯೋಜನೆಗೆ ಅನುಮೋದನೆ ನೀಡಿರುವುದನ್ನು ಅವರು ಉಲ್ಲೇಖಿಸಿದರು. ಜೊತೆಗೆ ವಿದ್ಯುತ್ ಸಾರಿಗೆಯಲ್ಲಿ ತ್ವರಿತ ವಿಸ್ತರಣೆ, ಬೆಳೆಯುತ್ತಿರುವ ಮೆಟ್ರೋ ಜಾಲ ಮತ್ತು ಸಂಪೂರ್ಣವಾಗಿ ನವೀಕರಿಸಬಹುದಾದ ಇಂಧನದಿಂದ ನಡೆಸಲ್ಪಡುವ ಹಜಿರಾ ಕೈಗಾರಿಕಾ ಪ್ರದೇಶದ ಮುಂಬರುವ ಹಸಿರು ಉಕ್ಕಿನ (ಗ್ರೀನ್ ಸ್ಟೀಲ್) ಉತ್ಪಾದನೆಯೊಂದಿಗೆ ಸೂರತ್ ನ ಕ್ಷಿಪ್ರ ವಿಸ್ತರಣೆಯನ್ನು ಅವರು ಉಲ್ಲೇಖಿಸಿದರು. “ನಮ್ಮ ಬಸ್ಗಳು ವಿದ್ಯುತ್ ಚಾಲಿತವಾಗಿವೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದರಿಂದ ಹಿಡಿದು ಹಸಿರು ಇಂಧನ ಬಳಸಿ ಉಕ್ಕು ಉತ್ಪಾದಿಸುವವರೆಗೆ ಕೈಗೊಳ್ಳಲಾಗಿರುವ ಈ ಎಲ್ಲಾ ಕ್ರಮಗಳು, ಸೂರತ್ ನ ನಿಜವಾದ ಹಸಿರು ನಗರ ಎಂಬ ವಿಶಿಷ್ಟ ಗುರುತನ್ನು ಮತ್ತಷ್ಟು ಬಲಪಡಿಸುತ್ತವೆ” ಎಂದು ಶ್ರೀ ಮೋದಿ ತಿಳಿಸಿದರು.

ಸಾಂಕ್ರಾಮಿಕ ರೋಗ, ಜಾಗತಿಕ ಸಂಘರ್ಷಗಳು ಮತ್ತು ಅಸ್ಥಿರ ಇಂಧನ ಪೂರೈಕೆ ಸರಪಳಿಗಳನ್ನು ಒಳಗೊಂಡ, ತಾವು 'ವಿಪತ್ತುಗಳ ದಶಕ' ಎಂದು ಕರೆದ ಅಭೂತಪೂರ್ವ ಸವಾಲುಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಈ ಬೃಹತ್ ಜಾಗತಿಕ ಆಘಾತಗಳನ್ನು ದೃಢವಾಗಿ ತಡೆದುಕೊಂಡಿದ್ದಕ್ಕಾಗಿ 140 ಕೋಟಿ ಭಾರತೀಯರನ್ನು ಶ್ಲಾಘಿಸಿದರು. ಭಾರತದ ಇಂಧನ ಸ್ವಾವಲಂಬನೆಗೆ ಗುಜರಾತ್ ನೀಡಿದ ಭಾರಿ ಕೊಡುಗೆಯನ್ನು ಅವರು ವಿಶೇಷವಾಗಿ ಶ್ಲಾಘಿಸಿದರು. ದೇಶದ 250 ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಐದನೇ ಒಂದು ಭಾಗವನ್ನು (50 GW) ಗುಜರಾತ್ ಉತ್ಪಾದಿಸುತ್ತದೆ ಮತ್ತು ಗ್ರೀನ್ ಹೈಡ್ರೋಜನ್ ಮತ್ತು ಗ್ರೀನ್ ಅಮೋನಿಯಾದಂತಹ ಉದಯೋನ್ಮುಖ ವಲಯಗಳಲ್ಲಿ ಮುನ್ನಡೆ ಸಾಧಿಸಲು ಸಿದ್ಧವಾಗಿದೆ ಎಂದು ಅವರು ಗಮನಿಸಿದರು. ಕಳೆದ ಹನ್ನೆರಡು ವರ್ಷಗಳಲ್ಲಿ ನಿರ್ಮಿಸಲಾದ ಇಂಧನ ಸಾಮರ್ಥ್ಯಗಳ ನಿರ್ಣಾಯಕ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಅವರು, ಸೌರಶಕ್ತಿ, ಎಥೆನಾಲ್ ಮಿಶ್ರಣ, ರೈಲ್ವೆ ವಿದ್ಯುದ್ದೀಕರಣ, ಪರಮಾಣು ಶಕ್ತಿ, ಆಧುನಿಕ ವಿದ್ಯುತ್ ಪ್ರಸರಣ ಜಾಲಗಳು ಮತ್ತು ಗ್ಯಾಸ್ ಪೈಪ್ ಲೈನ್  ಹಾಗೂ ಬಂದರು ಸಂಗ್ರಹಣಾ ಸಾಮರ್ಥ್ಯಗಳ ಬೃಹತ್ ವಿಸ್ತರಣೆಯಲ್ಲಿನ ಐತಿಹಾಸಿಕ ಹೂಡಿಕೆಗಳ ಬಗ್ಗೆ ತಿಳಿಸಿದರು. “ಪ್ರಸ್ತುತ ಜಾಗತಿಕ ಬಿಕ್ಕಟ್ಟು ಇಂಧನದ ವಿಷಯದಲ್ಲಿ ಸ್ವಾವಲಂಬನೆ ಎಷ್ಟು ಅತ್ಯಗತ್ಯ ಎಂಬುದನ್ನು ತೋರಿಸುತ್ತದೆ ಮತ್ತು ಕಳೆದ ಹನ್ನೆರಡು ವರ್ಷಗಳಲ್ಲಿ ದೇಶವು ನಿರ್ಮಿಸಿದ ಅಪಾರ ಸಾಮರ್ಥ್ಯವು ಇಂದು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ,” ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಕಾರ್ಯಕ್ರಮಕ್ಕೂ ಮುನ್ನ ಹಜಿರಾಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಈ ಪ್ರದೇಶವನ್ನು ಕೇವಲ ಕೈಗಾರಿಕಾ ವಲಯ ಮಾತ್ರವಲ್ಲದೆ ಇಂಧನ, ಉಕ್ಕು, ರಕ್ಷಣಾ ಉತ್ಪಾದನೆ ಮತ್ತು ಜಾಗತಿಕ ಕಡಲ ವ್ಯಾಪಾರವನ್ನು ಒಳಗೊಂಡ ಸಮಗ್ರ, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆ ಎಂದು ಬಣ್ಣಿಸಿದರು. ಈ ಕಡಲ-ಕೈಗಾರಿಕಾ ಹಬ್   'ಆತ್ಮನಿರ್ಭರ ಭಾರತ' ಉಪಕ್ರಮಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಹೇಳಿದ ಅವರು, ಸ್ವಾವಲಂಬನೆ ಅಭಿಯಾನವನ್ನು ಲೇವಡಿ ಮಾಡುವ ಮತ್ತು ಐತಿಹಾಸಿಕವಾಗಿ ದೇಶವನ್ನು ವಿದೇಶಿ ಘಟಕಗಳ ಮೇಲೆ ಅವಲಂಬಿತವಾಗುವಂತೆ ಮಾಡಿದ ದೇಶದೊಳಗಿನ ನಿರಾಶಾವಾದಿ ಗುಂಪುಗಳನ್ನು ತೀವ್ರವಾಗಿ ಖಂಡಿಸಿದರು. “ದೇಶದ ಸಂಕಲ್ಪವನ್ನು ನಿರಂತರವಾಗಿ ಕೀಳಾಗಿ ಕಾಣುವ ಜನರು, ಇತರರ ಮೇಲೆ ಅವಲಂಬಿತವಾಗಿರುವ ದೇಶವು ಎಂದಿಗೂ ತನಗೆ ಅರ್ಹವಾದ ಅಭಿವೃದ್ಧಿಯ ಮಹೋನ್ನತ ಎತ್ತರವನ್ನು ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಮರೆಯುತ್ತಾರೆ,” ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಸ್ವಾವಲಂಬನೆಯನ್ನು ಉತ್ತೇಜಿಸಲು ಆಧುನಿಕ ಸಂಪರ್ಕದ ಮೇಲಿನ ಸರ್ಕಾರದ ತೀವ್ರ ಗಮನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ಮೀಸಲಾದ ಸರಕು ಸಾಗಣೆ ಕಾರಿಡಾರ್ , ಬುಲೆಟ್ ಟ್ರೈನ್ ಮತ್ತು ವಡೋದರಾ-ಮುಂಬೈ ಎಕ್ಸ್ ಪ್ರೆಸ್ ವೇಯ ಹೊಸದಾಗಿ ಉದ್ಘಾಟನೆಗೊಂಡ ವಿಭಾಗದಂತಹ ಮೆಗಾ-ಯೋಜನೆಗಳನ್ನು ಕೈಗಾರಿಕಾ ಮತ್ತು ವ್ಯಾಪಾರ ಬೆಳವಣಿಗೆಗೆ ಪ್ರಮುಖ ವೇಗವರ್ಧಕಗಳಾಗಿ ಉಲ್ಲೇಖಿಸಿದರು. ಈ ಮೂಲಸೌಕರ್ಯ ಅಭಿವೃದ್ಧಿಯು ಅಂತರ್ಗತವಾಗಿದ್ದು, ದಾಹೋದ್-ಬೋದೇಲಿ-ವಾಪಿ ಕಾರಿಡಾರ್ನಂತಹ ಉಪಕ್ರಮಗಳ ಮೂಲಕ ಹಿಂದೆ ಹಿಂದುಳಿದಿದ್ದ ಬುಡಕಟ್ಟು ಮತ್ತು ದೂರದ ಪ್ರದೇಶಗಳನ್ನು ತಲುಪುತ್ತಿದೆ ಎಂದು ಅವರು ಒತ್ತಿ ಹೇಳಿದರು. ಛೋಟಾ ಉದೇಪುರ್, ನರ್ಮದಾ, ಭರೂಚ್ ಮತ್ತು ತಾಪಿ ಬುಡಕಟ್ಟು ಪ್ರದೇಶಗಳಿಗೆ ನಾಲ್ಕು ಪಥಗಳ ಹೆದ್ದಾರಿಗಳನ್ನು ತರುವ ಮೂಲಕ ಸರ್ಕಾರವು ಪ್ರಯಾಣದ ಸಮಯ ಮತ್ತು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತಿದೆ. ಹಾಗೆಯೇ ಏಕತಾ ಪ್ರತಿಮೆ  ಮತ್ತು ಸಾಪುತಾರಾದಂತಹ ಪ್ರವಾಸಿ ತಾಣಗಳಲ್ಲಿ ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮಕ್ಕೆ ಅಭೂತಪೂರ್ವ ಪ್ರವೇಶವನ್ನು ಮುಕ್ತಗೊಳಿಸುತ್ತಿದೆ. “ನಮ್ಮ ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಿಗೆ ಆಧುನಿಕ ಸಂಪರ್ಕವನ್ನು ತರುವ ಮೂಲಕ, ಅವರಿಗೆ ಶಿಕ್ಷಣ, ವೈದ್ಯಕೀಯ ಮತ್ತು ಹೆಚ್ಚಿನ ಗಳಿಕೆಯ ಅವಕಾಶಗಳಿಗಾಗಿ ಅತ್ಯುತ್ತಮ ಸೌಲಭ್ಯಗಳು ಸಿಗುವಂತೆ ನಾವು ಖಚಿತಪಡಿಸುತ್ತಿದ್ದೇವೆ,” ಎಂದು ಶ್ರೀ ಮೋದಿ  ಹೇಳಿದರು.

ಕಾರ್ಮಿಕರು ಮತ್ತು ಇತರ ರಾಜ್ಯಗಳ ವಲಸೆ ಕುಟುಂಬಗಳಿಗೆ ಉತ್ತಮ ಆರೋಗ್ಯ ರಕ್ಷಣೆ ಒದಗಿಸಲು ಸೂರತ್ ನಲ್ಲಿ ಆಧುನಿಕ ಇಎಸ್ ಐಸಿ ಆಸ್ಪತ್ರೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿಯವರು, ಈ ಅಭಿವೃದ್ಧಿಯ ಮೈಲಿಗಲ್ಲುಗಳನ್ನು ದೇಶವು ಸರ್ಕಾರದ ಮೇಲೆ ಇಡುತ್ತಾ ಬಂದಿರುವ ಅಗಾಧವಾದ ಚುನಾವಣಾ ವಿಶ್ವಾಸಕ್ಕೆ ಜೋಡಿಸಿದರು. ಭಾಷಣದ ಕೊನೆಯಲ್ಲಿ ಕರೆ ನೀಡುತ್ತಾ, ಅವರು ಭಾರತೀಯ ನಾಗರಿಕರ ಅಪರಿಮಿತ ಆಶಾವಾದವನ್ನು ಶ್ಲಾಘಿಸಿದರು ಮತ್ತು ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸಲು ಜನರ ಸಾಮೂಹಿಕ ಶಕ್ತಿಯಲ್ಲಿ ತಮಗಿರುವ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದರು. “ಭಾರತವು ಅದ್ಭುತ ಆಕಾಂಕ್ಷೆಗಳು ಮತ್ತು ಮಿತಿಯಿಲ್ಲದ ಆಶಾವಾದವನ್ನು ಹೊಂದಿರುವ ದೇಶವಾಗಿದೆ ಮತ್ತು ರಾಷ್ಟ್ರದ ಮಾನವಶಕ್ತಿಯು ಸಂಪೂರ್ಣವಾಗಿ ದೃಢ ಸಂಕಲ್ಪ ಮಾಡಿದಾಗ, ನಾವು ಸಾಧಿಸಲು ಸಾಧ್ಯವಾಗದ ಯಾವುದೇ ಗುರಿಯಿಲ್ಲ,” ಎಂದು ಶ್ರೀ ಮೋದಿ ಹೇಳಿದರು. 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Auto industry contributes over ₹22.75 lakh crore to Indian economy: SIAM

Media Coverage

Auto industry contributes over ₹22.75 lakh crore to Indian economy: SIAM
NM on the go

Nm on the go

Always be the first to hear from the PM. Get the App Now!
...
Prime Minister congratulates Italian PM Giorgia Meloni on becoming the longest continuously serving Prime Minister in Italy's postwar history
September 04, 2026

Prime Minister Shri Narendra Modi today congratulated Italian Prime Minister Giorgia Meloni on becoming the longest continuously serving Prime Minister in Italy's postwar history.

The Prime Minister stated that this milestone is a reflection of the trust and confidence of the Italian people in her leadership. He further noted that her friendship has been instrumental in strengthening the India-Italy Special Strategic Partnership, adding that he looks forward to continuing their close cooperation to build a prosperous future for the people of both countries. He extended his best wishes for her continued success in the years ahead.

In a post on X, the Prime Minister shared:

"Congratulations to my friend Prime Minister Meloni on becoming the longest continuously serving Prime Minister in Italy's postwar history. This milestone is a reflection of the trust and confidence of the Italian people in her leadership.

Her friendship has also been instrumental in strengthening the India-Italy Special Strategic
Partnership and I look forward to continuing our close cooperation to build a prosperous future for the people of our countries.

My best wishes for her continued success in the years ahead.

@GiorgiaMeloni"