ಕಳೆದ 10 ವರ್ಷಗಳಲ್ಲಿ, ಬನಾರಸ್ ಅಭಿವೃದ್ಧಿಯು ಹೊಸ ವೇಗವನ್ನು ಪಡೆದುಕೊಂಡಿದೆ: ಪ್ರಧಾನಮಂತ್ರಿ
ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ತಮ್ಮ ಜೀವನದುದ್ದಕ್ಕೂ ಮಹಿಳಾ ಸಬಲೀಕರಣ, ಅವರ ಆತ್ಮ ವಿಶ್ವಾಸ ಮತ್ತು ಸಮಾಜ ಕಲ್ಯಾಣಕ್ಕಾಗಿ ಶ್ರಮಿಸಿದರು: ಪ್ರಧಾನಮಂತ್ರಿ
ಬನಾಸ್ ಡೈರಿ ಕಾಶಿಯಲ್ಲಿ ಸಾವಿರಾರು ಕುಟುಂಬಗಳ ಚಿತ್ರಣ ಮತ್ತು ಹಣೆಬರಹ ಎರಡನ್ನೂ ಬದಲಾಯಿಸಿದೆ: ಪ್ರಧಾನಮಂತ್ರಿ
ಕಾಶಿ ಈಗ ಉತ್ತಮ ಆರೋಗ್ಯದ ರಾಜಧಾನಿಯಾಗುತ್ತಿದೆ: ಪ್ರಧಾನಮಂತ್ರಿ
ಇಂದು, ಕಾಶಿಗೆ ಭೇಟಿ ನೀಡುವವರು ಅದರ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹೊಗಳುತ್ತಾರೆ: ಪ್ರಧಾನಮಂತ್ರಿ
ಭಾರತ ಇಂದು ಅಭಿವೃದ್ಧಿ ಮತ್ತು ಪರಂಪರೆ ಎರಡನ್ನೂ ಒಟ್ಟಿಗೆ ಮುನ್ನಡೆಸುತ್ತಿದೆ, ನಮ್ಮ ಕಾಶಿ ಇದಕ್ಕೆ ಅತ್ಯುತ್ತಮ ಮಾದರಿಯಾಗುತ್ತಿದೆ: ಪ್ರಧಾನಮಂತ್ರಿ
ಉತ್ತರ ಪ್ರದೇಶ ಇನ್ನು ಮುಂದೆ ಕೇವಲ ಸಾಧ್ಯತೆಗಳ ಭೂಮಿಯಾಗಿರುವುದಿಲ್ಲ, ಬದಲಿಗೆ ಸಾಮರ್ಥ್ಯ ಮತ್ತು ಸಾಧನೆಗಳ ನೆಲವಾಗಿರುತ್ತದೆ: ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿ 3,880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಶಿಯೊಂದಿಗಿನ ತಮ್ಮ ಆಳವಾದ ಸಂಬಂಧವನ್ನು ಎತ್ತಿ ತೋರಿಸಿದರು, ತಮಗೆ ಕುಟುಂಬದವರು ಮತ್ತು ಈ ಪ್ರದೇಶದ ಜನರು ನೀಡಿದ ಆಶೀರ್ವಾದಕ್ಕಾಗಿ ಅವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು ಮತ್ತು ತಮಗೆ ನೀಡಿರುವ ಪ್ರೀತಿ ಮತ್ತು ಬೆಂಬಲವನ್ನು ಶ್ಲಾಘಿಸಿದರು. ಈ ಪ್ರೀತಿಗೆ ತಾವು ಋಣಿಯಾಗಿರುವುದಾಗಿ ಅವರು ಒತ್ತಿ ಹೇಳಿದರು, ಕಾಶಿ ತಮ್ಮದು ಮತ್ತು ತಾವು ಕಾಶಿಗೆ ಸೇರಿದವರು ಎಂದು ಹೇಳಿದರು. ನಾಳೆ ಹನುಮಾನ್ ಜಯಂತಿಯ ಶುಭ ಸಂದರ್ಭ ಎಂದು ಹೇಳಿದ ಶ್ರೀ ಮೋದಿ, ಕಾಶಿಯಲ್ಲಿ ಸಂಕಟ ಮೋಚನ ಮಹಾರಾಜರ ಸನ್ನಿಧಿಗೆ ಭೇಟಿ ನೀಡುವ ಅವಕಾಶ ಸಿಕ್ಕಿದ್ದು ತಮಗೆ ದೊರೆತ ಗೌರವ ಎಂದರು. ಹನುಮಾನ್ ಜಯಂತಿಗೂ ಮುನ್ನ, ಕಾಶಿಯ ಜನರು ಅಭಿವೃದ್ಧಿಯ ಹಬ್ಬವನ್ನು ಆಚರಿಸಲು ಹೇಗೆ ಒಗ್ಗೂಡಿದ್ದಾರೆ ಎಂಬುದನ್ನು ಅವರು ಎತ್ತಿ ತೋರಿಸಿದರು.

"ಕಳೆದ 10 ವರ್ಷಗಳಲ್ಲಿ, ಬನಾರಸ್ ಅಭಿವೃದ್ಧಿಯು ಹೊಸ ವೇಗವನ್ನು ಪಡೆದುಕೊಂಡಿದೆ" ಎಂದು ಪ್ರಧಾನಿ ಹೇಳಿದರು, ಕಾಶಿ ಆಧುನಿಕತೆಯನ್ನು ಅಳವಡಿಸಿಕೊಂಡಿದೆ, ತನ್ನ ಪರಂಪರೆಯನ್ನು ಸಂರಕ್ಷಿಸಿದೆ ಮತ್ತು ಉಜ್ವಲ ಭವಿಷ್ಯವನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು. ಕಾಶಿ ಇನ್ನು ಮುಂದೆ ಕೇವಲ ಪ್ರಾಚೀನ ನಗರವಲ್ಲ, ಪ್ರಗತಿಪರವೂ ಆಗಿದೆ, ಅದು ಈಗ ಪೂರ್ವಾಂಚಲದ ಆರ್ಥಿಕ ನಕ್ಷೆಯ ಕೇಂದ್ರ ಭಾಗದಲ್ಲಿದೆ ಎಂದು ಅವರು ಹೇಳಿದರು. ಸ್ವತಃ ಭಗವಾನ್ ಮಹಾದೇವನ ಮಾರ್ಗದರ್ಶನದಲ್ಲಿ ಕಾಶಿ ಈಗ ಪೂರ್ವಾಂಚಲದ ಅಭಿವೃದ್ಧಿಯ ರಥವನ್ನು ಎಳೆಯುತ್ತಿದೆ ಎಂದು ಅವರು ಹೇಳಿದರು.

 

ಈ ಕಾರ್ಯಕ್ರಮದ ಆರಂಭದಲ್ಲಿ ಕಾಶಿ ಮತ್ತು ಪೂರ್ವಾಂಚಲದ ವಿವಿಧ ಭಾಗಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಸ್ತಾಪಿಸಿದ ಶ್ರೀ ಮೋದಿ, ಮೂಲಸೌಕರ್ಯ ಯೋಜನೆಗಳ ಮೂಲಕ ಸಂಪರ್ಕವನ್ನು ಬಲಪಡಿಸುವುದು, ಪ್ರತಿ ಮನೆಗೆ ನಲ್ಲಿ ನೀರು ಒದಗಿಸುವ ಅಭಿಯಾನ ಮತ್ತು ಶಿಕ್ಷಣ, ಆರೋಗ್ಯ ಮತ್ತು ಕ್ರೀಡಾ ಸೌಲಭ್ಯಗಳ ವಿಸ್ತರಣೆಯನ್ನು ಒತ್ತಿ ಹೇಳಿದರು. ಪ್ರತಿಯೊಂದು ಪ್ರದೇಶ, ಕುಟುಂಬ ಮತ್ತು ಯುವಜನರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವ ಬದ್ಧತೆಯ ಬಗ್ಗೆ ಮಾತನಾಡಿದ ಅವರು, ಈ ಉಪಕ್ರಮಗಳು ಪೂರ್ವಾಂಚಲವನ್ನು ಅಭಿವೃದ್ಧಿ ಹೊಂದಿದ ಪ್ರದೇಶವಾಗಿ ಪರಿವರ್ತಿಸುವಲ್ಲಿ ಮೈಲಿಗಲ್ಲುಗಳಾಗುತ್ತವೆ ಎಂದು ಹೇಳಿದರು. ಕಾಶಿಯ ಪ್ರತಿಯೊಬ್ಬ ನಿವಾಸಿಯೂ ಈ ಯೋಜನೆಗಳಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ ಎಂದು ಅವರು ಹೇಳಿದರು ಮತ್ತು ಈ ಅಭಿವೃದ್ಧಿ ಯೋಜನೆಗಳಿಗಾಗಿ ಬನಾರಸ್ ಮತ್ತು ಪೂರ್ವಾಂಚಲದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಪ್ರಧಾನಮಂತ್ರಿಯವರು ಇಂದು ಮಹಾತ್ಮ ಜ್ಯೋತಿಬಾ ಫುಲೆ ಅವರ ಜಯಂತಿಯ ಸಂದರ್ಭದಲ್ಲಿ  ಸಮಾಜದ ಕಲ್ಯಾಣ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಅವರ ಮತ್ತು ಸಾವಿತ್ರಿಬಾಯಿ ಫುಲೆ ಅವರ ಜೀವಮಾನದ ಸಮರ್ಪಣೆಯನ್ನು ಸ್ಮರಿಸಿದರು. ಮಹಿಳಾ ಸಬಲೀಕರಣಕ್ಕಾಗಿ ಅವರ ದೃಷ್ಟಿಕೋನ ಮತ್ತು ಬದ್ಧತೆಯನ್ನು ಮುನ್ನಡೆಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಎತ್ತಿ ತೋರಿಸಿದರು. ತಮ್ಮ ಸರ್ಕಾರವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಎಂಬ ಮಂತ್ರವನ್ನು ಪಾಲಿಸುತ್ತಿದೆ ಎಂದು ಅವರು ಹೇಳಿದರು. ಪೂರ್ವಾಂಚಲದ ಪಶುಸಂಗೋಪನಾ ಕುಟುಂಬಗಳಿಗೆ, ವಿಶೇಷವಾಗಿ ಈ ಪ್ರದೇಶಕ್ಕೆ ಹೊಸ ಮಾದರಿಯನ್ನು ಸ್ಥಾಪಿಸಿರುವ ಶ್ರಮಶೀಲ ಮಹಿಳೆಯರಿಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು. ಈ ಮಹಿಳೆಯರ ಮೇಲೆ ನಂಬಿಕೆ ಇಟ್ಟಾಗ ಅದು ಇತಿಹಾಸ ಸೃಷ್ಟಿಸಿದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಬನಾಸ್ ಡೈರಿ ಘಟಕಕ್ಕೆ ಸಂಬಂಧಿಸಿದ ಪಶುಸಂಗೋಪನಾ ಕುಟುಂಬಗಳಿಗೆ ಬೋನಸ್‌ ವಿತರಣೆಯನ್ನು ಪ್ರಧಾನಿ ಪ್ರಸ್ತಾಪಿಸಿದರು. ₹100 ಕೋಟಿಗೂ ಹೆಚ್ಚಿನ ಈ ಬೋನಸ್ ಉಡುಗೊರೆಯಲ್ಲ, ಬದಲಿಗೆ ಅವರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ದೊರೆತ ಪ್ರತಿಫಲವಾಗಿದೆ, ಇದು ಅವರ ಶ್ರಮ ಮತ್ತು ಪರಿಶ್ರಮದ ಮೌಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.

 

ಸಾವಿರಾರು ಕುಟುಂಬಗಳ ಜೀವನ ಮತ್ತು ಭವಿಷ್ಯವನ್ನು ಪುನರ್‌ ರೂಪಿಸಿರುವ ಕಾಶಿಯ ಬನಾರಸ್ ಡೈರಿಯ ಪರಿವರ್ತನಾತ್ಮಕ ಪರಿಣಾಮವನ್ನು ಒತ್ತಿ ಹೇಳಿದ ಶ್ರೀ ಮೋದಿ, ಡೈರಿಯು ಕಠಿಣ ಪರಿಶ್ರಮಕ್ಕೆ ಪ್ರತಿಫಲ ನೀಡಿದೆ ಮತ್ತು ಆಕಾಂಕ್ಷೆಗಳಿಗೆ ರೆಕ್ಕೆಗಳನ್ನು ನೀಡಿದೆ ಎಂದು ಹೇಳಿದರು. ಈ ಪ್ರಯತ್ನಗಳು ಪೂರ್ವಾಂಚಲದ ಅನೇಕ ಮಹಿಳೆಯರು "ಲಖ್ಪತಿ ದೀದಿಗಳು" ಆಗಲು, ಜಿವನಾಧಾರದ ಕಾಳಜಿಯಿಂದ ಸಮೃದ್ಧಿಯ ಹಾದಿಗೆ ಪರಿವರ್ತನೆಗೊಳ್ಳಲು ಅನುವು ಮಾಡಿಕೊಟ್ಟಿವೆ ಎಂದು ಅವರು ಹೆಮ್ಮೆಯಿಂದ ಹೇಳಿದರು. ಈ ಪ್ರಗತಿಯು ಬನಾರಸ್ ಮತ್ತು ಉತ್ತರ ಪ್ರದೇಶದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅವರು ಹೇಳಿದರು. "ಕಳೆದ ದಶಕದಲ್ಲಿ ಹಾಲು ಉತ್ಪಾದನೆಯಲ್ಲಿ ಸುಮಾರು ಶೇ.65 ಹೆಚ್ಚಳದೊಂದಿಗೆ ಭಾರತವು ಜಾಗತಿಕವಾಗಿ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿದೆ" ಎಂದು ಅವರು ಒತ್ತಿ ಹೇಳಿದರು, ಈ ಯಶಸ್ಸಿಗೆ ಲಕ್ಷಾಂತರ ರೈತರು ಮತ್ತು ಜಾನುವಾರು ಮಾಲೀಕರು ಕಾರಣ ಎಂದು ಅವರು ಹೇಳಿದರು, ಕಳೆದ ಹತ್ತು ವರ್ಷಗಳಲ್ಲಿ ಇಂತಹ ಸಾಧನೆಗಳು ನಿರಂತರ ಪ್ರಯತ್ನಗಳ ಫಲಿತಾಂಶವಾಗಿದೆ ಎಂದು ಹೇಳಿದರು. ಜಾನುವಾರು ಮಾಲೀಕರನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯಗಳಿಗೆ ಸಂಪರ್ಕಿಸುವುದು, ಸಾಲ ಮಿತಿಗಳನ್ನು ಹೆಚ್ಚಿಸುವುದು ಮತ್ತು ಸಬ್ಸಿಡಿ ಕಾರ್ಯಕ್ರಮಗಳನ್ನು ಪರಿಚಯಿಸುವುದು ಸೇರಿದಂತೆ ಡೈರಿ ವಲಯವನ್ನು ಮಿಷನ್ ಮೋಡ್‌ ನಲ್ಲಿ ಮುನ್ನಡೆಸಲು ಕೈಗೊಂಡ ಉಪಕ್ರಮಗಳ ಬಗ್ಗೆ ಅವರು ಗಮನಸೆಳೆದರು. ಜಾನುವಾರುಗಳನ್ನು ರಕ್ಷಿಸಲು ಕಾಲು ಮತ್ತು ಬಾಯಿ ರೋಗದ ವಿರುದ್ಧ ಉಚಿತ ಲಸಿಕೆ ಕಾರ್ಯಕ್ರಮವನ್ನು ಪ್ರಧಾನಿ ಪ್ರಸ್ತಾಪಿಸಿದರು, ಜೊತೆಗೆ ಲಕ್ಷಾಂತರ ಹೊಸ ಸದಸ್ಯರನ್ನು ಸೇರಿಸಿಕೊಂಡು ಸಂಘಟಿತ ಹಾಲು ಸಂಗ್ರಹಣೆಗಾಗಿ 20,000 ಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಪುನರುಜ್ಜೀವನಗೊಳಿಸುವ ಪ್ರಯತ್ನಗಳನ್ನು ಸಹ ಅವರು ಉಲ್ಲೇಖಿಸಿದರು. ರಾಷ್ಟ್ರೀಯ ಗೋಕುಲ್ ಮಿಷನ್ ಅಡಿಯಲ್ಲಿ ಸ್ಥಳೀಯ ಜಾನುವಾರು ತಳಿಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಅವುಗಳ ಗುಣಮಟ್ಟವನ್ನು ಸುಧಾರಿಸುವತ್ತ ಗಮನಹರಿಸಲಾಗಿದೆ ಎಂದು ಅವರು ಹೇಳಿದರು. ಈ ಉಪಕ್ರಮಗಳು ಜಾನುವಾರು ಮಾಲೀಕರನ್ನು ಹೊಸ ಅಭಿವೃದ್ಧಿ ಮಾರ್ಗಗಳು, ಉತ್ತಮ ಮಾರುಕಟ್ಟೆಗಳು ಮತ್ತು ಅವಕಾಶಗಳೊಂದಿಗೆ ಸಂಪರ್ಕಿಸುವ ಗುರಿಯನ್ನು ಹೊಂದಿವೆ. ಪೂರ್ವಾಂಚಲದಾದ್ಯಂತ ಈ ದೃಷ್ಟಿಕೋನವನ್ನು ಮುನ್ನಡೆಸಿದ್ದಕ್ಕಾಗಿ ಕಾಶಿಯಲ್ಲಿರುವ ಬನಾಸ್ ಡೈರಿ ಸಂಕೀರ್ಣವನ್ನು ಅವರು ಶ್ಲಾಘಿಸಿದರು ಮತ್ತು ಬನಾಸ್ ಡೈರಿ ಈ ಪ್ರದೇಶದಲ್ಲಿ ಗಿರ್ ಹಸುಗಳನ್ನು ವಿತರಿಸಿದೆ, ಅವುಗಳ ಸಂಖ್ಯೆ ಸ್ಥಿರವಾಗಿ ಹೆಚ್ಚುತ್ತಿದೆ ಮತ್ತು ಬನಾರಸ್‌ ನಲ್ಲಿ ಪಶು ಆಹಾರಕ್ಕಾಗಿ ವ್ಯವಸ್ಥೆಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಪೂರ್ವಾಂಚಲದಲ್ಲಿ ಸುಮಾರು ಒಂದು ಲಕ್ಷ ರೈತರಿಂದ ಹಾಲು ಸಂಗ್ರಹಿಸಿ, ಅವರನ್ನು ಸಬಲೀಕರಣಗೊಳಿಸಿ ಮತ್ತು ಅವರ ಜೀವನೋಪಾಯವನ್ನು ಬಲಪಡಿಸಿದ್ದಕ್ಕಾಗಿ ಅವರು ಡೈರಿಯನ್ನು ಶ್ಲಾಘಿಸಿದರು.

ಹಲವಾರು ಹಿರಿಯ ನಾಗರಿಕರಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್‌ಗಳ ವಿತರಣೆಯ ಬಗ್ಗೆ ಪ್ರಧಾನಿ ಪ್ರಸ್ತಾಪಿಸಿದರು. ಹಿರಿಯ ನಾಗರಿಕರ ಮುಖಗಳಲ್ಲಿ ಕಾಣುತ್ತಿದ್ದ ತೃಪ್ತಿಯನ್ನು ಅವರು ಎತ್ತಿ ತೋರಿಸಿದರು, ಇದು ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಹಿರಿಯರ ಆರೋಗ್ಯ ರಕ್ಷಣೆಯ ಬಗ್ಗೆ ಕುಟುಂಬಗಳು ಹೊಂದಿರುವ ಕಾಳಜಿಯನ್ನು ಅವರು ಶ್ಲಾಘಿಸಿದರು ಮತ್ತು 10-11 ವರ್ಷಗಳ ಹಿಂದೆ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಪೂರ್ವಾಂಚಲದಾದ್ಯಂತ ಎದುರಿಸುತ್ತಿದ್ದ ತೊಂದರೆಗಳನ್ನು ನೆನಪಿಸಿಕೊಂಡರು. ಈ ಪ್ರದೇಶದಲ್ಲಿನ ತೀವ್ರ ಸುಧಾರಣೆಗಳನ್ನು ಗಮನಿಸಿದ ಅವರು, "ಕಾಶಿ ಈಗ ಆರೋಗ್ಯ ರಾಜಧಾನಿಯಾಗುತ್ತಿದೆ" ಎಂದು ಹೇಳಿದರು. ಒಂದು ಕಾಲದಲ್ಲಿ ದೆಹಲಿ ಮತ್ತು ಮುಂಬೈನಂತಹ ನಗರಗಳಿಗೆ ಸೀಮಿತವಾಗಿದ್ದ ಸುಧಾರಿತ ಆಸ್ಪತ್ರೆಗಳು ಈಗ ಜನರ ಮನೆಗಳ ಬಳಿಯೇ ಲಭ್ಯವಿವೆ ಎಂದು ಅವರು ಹೇಳಿದರು. ಸೌಲಭ್ಯಗಳನ್ನು ಜನರಿಗೆ ಹತ್ತಿರ ತರುವುದೇ ಅಭಿವೃದ್ಧಿಯ ಸಾರ ಎಂದು ಅವರು ಒತ್ತಿ ಹೇಳಿದರು.

ಕಳೆದ ದಶಕದಲ್ಲಿ ಆರೋಗ್ಯ ಸೇವೆಯಲ್ಲಿ ಆಗಿರುವ ಮಹತ್ವದ ಪ್ರಗತಿಯನ್ನು ಒತ್ತಿ ಹೇಳಿದ ಶ್ರೀ ಮೋದಿ, ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಿಸುವುದಲ್ಲದೆ, ರೋಗಿಗಳ ಘನತೆಯನ್ನು ಹೆಚ್ಚಿಸುವ ಮೂಲಕ, ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ವರದಾನವಾಗಿದೆ, ಇದು ಚಿಕಿತ್ಸೆ ನೀಡುವುದು ಮಾತ್ರವಲ್ಲದೆ, ಆತ್ಮವಿಶ್ವಾಸವನ್ನೂ ತುಂಬಿದೆ ಎಂದು ಹೇಳಿದರು. ವಾರಾಣಸಿಯಲ್ಲಿ ಸಾವಿರಾರು ಜನರು ಮತ್ತು ಉತ್ತರ ಪ್ರದೇಶದಾದ್ಯಂತ ಲಕ್ಷಾಂತರ ಜನರು ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ, ಪ್ರತಿಯೊಂದು ಚಿಕಿತ್ಸೆ, ಶಸ್ತ್ರಚಿಕಿತ್ಸೆ ಮತ್ತು ಪರಿಹಾರವು ಅವರ ಜೀವನದಲ್ಲಿ ಹೊಸ ಆರಂಭವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಲಕ್ಷಾಂತರ ಕುಟುಂಬಗಳ ಆರೋಗ್ಯ ರಕ್ಷಣೆಯ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಂಡಿರುವುದರಿಂದ ಆಯುಷ್ಮಾನ್ ಭಾರತ್ ಯೋಜನೆಯು ಕೋಟ್ಯಂತರ ರೂಪಾಯಿಗಳನ್ನು ಉಳಿಸಿದೆ ಎಂದು ಅವರು ಹೇಳಿದರು. ಹಿರಿಯ ನಾಗರಿಕರಿಗೆ ಉಚಿತ ಚಿಕಿತ್ಸೆಯ ಭರವಸೆಯನ್ನು ನೆನಪಿಸಿಕೊಂಡ ಪ್ರಧಾನಿ, ಆಯುಷ್ಮಾನ್ ವಯ ವಂದನಾ ಯೋಜನೆಯನ್ನು ಪ್ರಾರಂಭಿಸಲು ಕಾರಣವಾದ ಈ ಉಪಕ್ರಮವು 70 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಅವರ ಆದಾಯವನ್ನು ಲೆಕ್ಕಿಸದೆ ಉಚಿತ ಚಿಕಿತ್ಸೆಯನ್ನು ಖಾತ್ರಿಪಡಿಸುತ್ತದೆ ಎಂದು ಒತ್ತಿ ಹೇಳಿದರು. ವಾರಾಣಸಿ ಅತಿ ಹೆಚ್ಚು ವಯ ವಂದನ ಕಾರ್ಡ್‌ ಗಳನ್ನು ವಿತರಿಸಿದ್ದು, ಇಲ್ಲಿ ಸುಮಾರು 50,000 ಕಾರ್ಡ್‌ ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು. ಇದು ಕೇವಲ ಅಂಕಿಅಂಶವಲ್ಲ, ಸೇವೆಯ ಬದ್ಧತೆಯಾಗಿದೆ ಎಂದು ಅವರು ಒತ್ತಿ ಹೇಳಿದರು, ಕುಟುಂಬಗಳು ಭೂಮಿಯನ್ನು ಮಾರಾಟ ಮಾಡುವ, ಸಾಲ ತೆಗೆದುಕೊಳ್ಳುವ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಅಸಹಾಯಕತೆಯನ್ನು ಎದುರಿಸುವುದನ್ನು ನಿವಾರಿಸುತ್ತದೆ ಎಂದು ಹೇಳಿದರು. ಆಯುಷ್ಮಾನ್ ಕಾರ್ಡ್‌ ನೊಂದಿಗೆ, ಸರ್ಕಾರವು ಈಗ ಅವರ ಆರೋಗ್ಯ ರಕ್ಷಣೆಯ ಆರ್ಥಿಕ ಜವಾಬ್ದಾರಿಯನ್ನು ಹೊರುತ್ತದೆ ಎಂದು ಅವರು ಭರವಸೆ ನೀಡಿದರು.

 

ಕಾಶಿಯ ಮೂಲಸೌಕರ್ಯ ಮತ್ತು ಸೌಲಭ್ಯಗಳಲ್ಲಿನ ಗಮನಾರ್ಹ ಪರಿವರ್ತನೆಯನ್ನು ಪ್ರಧಾನಿ ಎತ್ತಿ ತೋರಿಸಿದರು, ಇದು ಸಂದರ್ಶಕರಿಂದ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿದಿನ ಲಕ್ಷಾಂತರ ಜನರು ಬನಾರಸ್‌ ಗೆ ಭೇಟಿ ನೀಡುತ್ತಾರೆ, ಬಾಬಾ ವಿಶ್ವನಾಥನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ ಮತ್ತು ಪವಿತ್ರ ಗಂಗಾ ಸ್ನಾನ ಮಾಡುತ್ತಾರೆ, ಅನೇಕರು ನಗರದ ಗಮನಾರ್ಹ ಬದಲಾವಣೆಗಳ ಬಗ್ಗೆ ಉಲ್ಲೇಖಿಸುತ್ತಾರೆ ಎಂದು ಅವರು ಹೇಳಿದರು. ಕಾಶಿಯ ರಸ್ತೆಗಳು, ರೈಲುಮಾರ್ಗಗಳು ಮತ್ತು ವಿಮಾನ ನಿಲ್ದಾಣವು ಒಂದು ದಶಕದ ಹಿಂದಿನ ಸ್ಥಿತಿಯಂತೆಯೇ ಇದ್ದಿದ್ದರೆ ಕಾಶಿ ಎದುರಿಸಬೇಕಾಗಿದ್ದ ಸವಾಲುಗಳನ್ನು ಅವರು ಒತ್ತಿ ಹೇಳಿದರು. ಸಣ್ಣ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರು ಇಡೀ ನಗರದಾದ್ಯಂತ ಧೂಳು ಮತ್ತು ಬಿಸಿಲನ್ನು ಸಹಿಸಿಕೊಂಡು ಸಂಚಾರ ದಟ್ಟಣೆಯನ್ನು ಅನುಭವಿಸುತ್ತಿದ್ದುದನ್ನು ಅವರು ನೆನಪಿಸಿಕೊಂಡರು. ಫುಲ್ವಾರಿಯಾ ಮೇಲ್ಸೇತುವೆ ನಿರ್ಮಾಣದ ಬಗ್ಗೆ ಅವರು ಮಾತನಾಡಿದರು, ಇದು ದೂರವನ್ನು ಕಡಿಮೆ ಮಾಡಿದೆ, ಸಮಯವನ್ನು ಉಳಿಸಿದೆ ಮತ್ತು ದೈನಂದಿನ ಜೀವನಕ್ಕೆ ಪರಿಹಾರವನ್ನು ನೀಡಿದೆ ಎಂದು ಹೇಳಿದರು. ರಿಂಗ್ ರಸ್ತೆಯ ಪ್ರಯೋಜನಗಳನ್ನು ಪ್ರಧಾನಿ ಎತ್ತಿ ತೋರಿಸಿದರು, ಇದು ಜೌನ್‌ಪುರ ಮತ್ತು ಘಾಜಿಪುರದ ಗ್ರಾಮೀಣ ಪ್ರದೇಶಗಳ ನಿವಾಸಿಗಳು ಹಾಗೂ ಬಲ್ಲಿಯಾ, ಮೌ ಮತ್ತು ಘಾಜಿಪುರ ಜಿಲ್ಲೆಗಳಿಂದ ವಿಮಾನ ನಿಲ್ದಾಣಕ್ಕೆ ಹೋಗುವವರ ಪ್ರಯಾಣದ ಸಮಯವನ್ನು ತೀವ್ರವಾಗಿ ಕಡಿಮೆ ಮಾಡಿದೆ ಮತ್ತು ಗಂಟೆಗಟ್ಟಲೆ ಸಂಚಾರ ದಟ್ಟಣೆಯನ್ನು ನಿವಾರಿಸಿದೆ ಎಂದು ಹೇಳಿದರು.

ಗಾಜಿಪುರ, ಜೌನ್‌ಪುರ, ಮಿರ್ಜಾಪುರ ಮತ್ತು ಅಜಮಗಢದಂತಹ ನಗರಗಳಿಗೆ ಅಗಲವಾದ ರಸ್ತೆಗಳ ಮೂಲಕ ವೇಗವಾಗಿ ಮತ್ತು ಅನುಕೂಲಕರವಾಗಿ ಪ್ರಯಾಣಿಸಲು ಕಾರಣವಾಗಿರುವ ಈ ಪ್ರದೇಶದಲ್ಲಿನ ಸುಧಾರಿತ ಸಂಪರ್ಕವನ್ನು ಒತ್ತಿ ಹೇಳಿದ ಶ್ರೀ ಮೋದಿ, ಒಂದು ಕಾಲದಲ್ಲಿ ಸಂಚಾರ ದಟ್ಟಣೆಯಿಂದ ಬಳಲುತ್ತಿದ್ದ ಪ್ರದೇಶಗಳು ಈಗ ಅಭಿವೃದ್ಧಿಯ ವೇಗವನ್ನು ಕಾಣುತ್ತಿವೆ ಎಂದು ಹೇಳಿದರು. ವಾರಾಣಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವಲ್ಲಿ ಕಳೆದ ದಶಕದಲ್ಲಿ ಸುಮಾರು ₹45,000 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಹೂಡಿಕೆಯು ಮೂಲಸೌಕರ್ಯವನ್ನು ಮಾತ್ರವಲ್ಲದೆ ನಂಬಿಕೆಯನ್ನೂ ಪರಿವರ್ತಿಸಿದೆ, ಇದು ಕಾಶಿ ಮತ್ತು ನೆರೆಯ ಜಿಲ್ಲೆಗಳಿಗೆ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು. ಸಾವಿರಾರು ಕೋಟಿ ಮೌಲ್ಯದ ಯೋಜನೆಗಳ ಶಂಕುಸ್ಥಾಪನೆ ಸೇರಿದಂತೆ ಮೂಲಸೌಕರ್ಯ ಯೋಜನೆಗಳ ವಿಸ್ತರಣೆಯನ್ನು ಅವರು ಘೋಷಿಸಿದರು. ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಸಂಪರ್ಕವನ್ನು ಸುಧಾರಿಸಲು ವಿಮಾನ ನಿಲ್ದಾಣದ ಬಳಿ ಆರು ಪಥಗಳ ಭೂಗತ ಸುರಂಗದ ನಿರ್ಮಾಣವನ್ನು ಪ್ರಧಾನಿ ಎತ್ತಿ ತೋರಿಸಿದರು. ಭದೋಹಿ, ಘಾಜಿಪುರ ಮತ್ತು ಜೌನ್‌ಪುರವನ್ನು ಸಂಪರ್ಕಿಸುವ ಯೋಜನೆಗಳ ಆರಂಭವನ್ನು ಹಾಗೂ ಭಿಖಾರಿಪುರ ಮತ್ತು ಮಂಡುದಿಹ್‌ ನಲ್ಲಿ ಬಹುನಿರೀಕ್ಷಿತ ಫ್ಲೈಓವರ್‌ ಗಳ ನಿರ್ಮಾಣವನ್ನು ಅವರು ಪ್ರಸ್ತಾಪಿಸಿದರು. ಈ ಬೇಡಿಕೆಗಳು ಈಡೇರುತ್ತಿರುವುದಕ್ಕೆ ಅವರು ಸಂತೋಷ ವ್ಯಕ್ತಪಡಿಸಿದರು. ಬನಾರಸ್ ನಗರ ಮತ್ತು ಸಾರನಾಥವನ್ನು ಸಂಪರ್ಕಿಸುವ ಹೊಸ ಸೇತುವೆಯ ನಿರ್ಮಾಣವನ್ನೂ ಅವರು ಘೋಷಿಸಿದರು, ಇದು ಸಾರನಾಥಕ್ಕೆ ಹೋಗುವ ಸಂದರ್ಭದಲ್ಲಿ ಇತರ ಜಿಲ್ಲೆಗಳ ಪ್ರಯಾಣಿಕರು ನಗರವನ್ನು ಪ್ರವೇಶಿಸುವ ಅಗತ್ಯವನ್ನು ನಿವಾರಿಸುತ್ತದೆ ಎಂದು ಅವರು ಹೇಳಿದರು.

ಮುಂಬರುವ ತಿಂಗಳುಗಳಲ್ಲಿ, ನಡೆಯುತ್ತಿರುವ ಯೋಜನೆಗಳು ಪೂರ್ಣಗೊಂಡ ನಂತರ, ಬನಾರಸ್‌ ನಲ್ಲಿ ಪ್ರಯಾಣವು ಇನ್ನಷ್ಟು ಅನುಕೂಲಕರವಾಗಲಿದೆ ಎಂದು ಪ್ರಧಾನಿ ಹೇಳಿದರು, ಈ ಪ್ರಗತಿಯು ಈ ಪ್ರದೇಶದಲ್ಲಿ ವೇಗ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ ಎಂದು ಒತ್ತಿ ಹೇಳಿದರು. ಜೀವನೋಪಾಯ ಮತ್ತು ಆರೋಗ್ಯ ಉದ್ದೇಶಗಳಿಗಾಗಿ ಬನಾರಸ್‌ ಗೆ ಭೇಟಿ ನೀಡುವವರಿಗೆ ಹೆಚ್ಚಿನ ಅನುಕೂಲತೆ ಕಲ್ಪಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು ಕಾಶಿಯಲ್ಲಿ ನಗರ ರೋಪ್‌ವೇಯ ಪ್ರಾಯೋಗಿಕ ಸಂಚಾರ ಆರಂಭವನ್ನು ಅವರು ಪ್ರಸ್ತಾಪಿಸಿದರು, ಇದು ಬನಾರಸ್ ಅನ್ನು ಇಂತಹ ಸೌಲಭ್ಯವಿರುವ ವಿಶ್ವದ ಆಯ್ದ ನಗರಗಳಲ್ಲಿ ಒಂದನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.

 

ವಾರಾಣಸಿಯಲ್ಲಿನ ಪ್ರತಿಯೊಂದು ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಯು ಪೂರ್ವಾಂಚಲದ ಯುವಕರಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಕಾಶಿಯ ಯುವಜನರು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ನಿರಂತರ ಅವಕಾಶಗಳನ್ನು ಒದಗಿಸುವತ್ತ ಸರ್ಕಾರ ಗಮನಹರಿಸಿದೆ ಎಂದು ಎತ್ತಿ ತೋರಿಸಿದರು. ಬನಾರಸ್‌ ನಲ್ಲಿ ಹೊಸ ಕ್ರೀಡಾಂಗಣಗಳ ನಿರ್ಮಾಣ ಮತ್ತು ಯುವ ಕ್ರೀಡಾಪಟುಗಳಿಗೆ ಅತ್ಯುತ್ತಮ ಸೌಲಭ್ಯಗಳ ಅಭಿವೃದ್ಧಿಯ ಬಗ್ಗೆ ಅವರು ಹೇಳಿದರು. ವಾರಾಣಸಿಯ ನೂರಾರು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿರುವ ಹೊಸ ಕ್ರೀಡಾ ಸಂಕೀರ್ಣದ ಉದ್ಘಾಟನೆಯನ್ನು ಅವರು ಪ್ರಸ್ತಾಪಿಸಿದರು. ಸಂಸದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಮೈದಾನಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.

ಅಭಿವೃದ್ಧಿ ಮತ್ತು ಪರಂಪರೆಯನ್ನು ಸಮತೋಲನಗೊಳಿಸುವ ಭಾರತದ ಪ್ರಯಾಣವನ್ನು ಒತ್ತಿಹೇಳುತ್ತಾ, ಕಾಶಿ ಈ ಮಾದರಿಯ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಹೇಳಿದರು. ಗಂಗಾ ನದಿಯ ಹರಿವು ಮತ್ತು ಭಾರತದ ಪ್ರಜ್ಞೆಯ ಬಗ್ಗೆ ಮಾತನಾಡಿದ ಪ್ರಧಾನಿ, "ಕಾಶಿ ಭಾರತದ ಆತ್ಮ ಮತ್ತು ವೈವಿಧ್ಯತೆಯ ಅತ್ಯಂತ ಸುಂದರವಾದ ಪ್ರಾತಿನಿಧ್ಯವಾಗಿದೆ" ಎಂದು ಬಣ್ಣಿಸಿದರು. ಪ್ರತಿಯೊಂದು ನೆರೆಹೊರೆಯಲ್ಲಿರುವ ವಿಶಿಷ್ಟ ಸಂಸ್ಕೃತಿ ಮತ್ತು ಕಾಶಿಯ ಪ್ರತಿಯೊಂದು ಓಣಿಯಲ್ಲಿಯೂ ಗೋಚರಿಸುವ ಭಾರತದ ವಿಶಿಷ್ಟ ಬಣ್ಣಗಳನ್ನು ಅವರು ಉಲ್ಲೇಖಿಸಿದರು ಮತ್ತು ಏಕತೆಯ ಎಳೆಗಳನ್ನು ಬಲಪಡಿಸುವ ಕಾಶಿ-ತಮಿಳು ಸಂಗಮಮ್‌ ನಂತಹ ಉಪಕ್ರಮಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಕಾಶಿಯಲ್ಲಿ ಏಕ್ತಾ ಮಾಲ್ ನಿರ್ಮಿಸುವುದಾಗಿ ಅವರು ಘೋಷಿಸಿದರು, ಇದು ಭಾರತದ ವೈವಿಧ್ಯತೆಯನ್ನು ಒಂದೇ ಸೂರಿನಡಿ ಪ್ರದರ್ಶಿಸುತ್ತದೆ ಮತ್ತು ದೇಶಾದ್ಯಂತ ವಿವಿಧ ಜಿಲ್ಲೆಗಳಿಂದ ಉತ್ಪನ್ನಗಳನ್ನು ಲಭ್ಯವಾಗುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಉತ್ತರ ಪ್ರದೇಶದಲ್ಲಿ ಆಗಿರುವ ಪರಿವರ್ತನೆಯನ್ನು ಪ್ರಧಾನಿ ಎತ್ತಿ ತೋರಿಸಿದರು, ರಾಜ್ಯವು ತನ್ನ ಆರ್ಥಿಕ ಚಿತ್ರಣವನ್ನು ಮಾತ್ರವಲ್ಲದೆ ಅದರ ದೃಷ್ಟಿಕೋನವನ್ನೂ ಬದಲಾಯಿಸಿದೆ ಎಂದು ಹೇಳಿದರು. ಉತ್ತರ ಪ್ರದೇಶವು ಇನ್ನು ಮುಂದೆ ಕೇವಲ ಸಾಧ್ಯತೆಗಳ ಭೂಮಿಯಾಗಿರುವುದಿಲ್ಲ, ಬದಲಿಗೆ ಸಾಮರ್ಥ್ಯ ಮತ್ತು ಸಾಧನೆಗಳ ನೆಲವಾಗಿರುತ್ತದೆ ಎಂದು ಅವರು ಹೇಳಿದರು. ಜಾಗತಿಕವಾಗಿ 'ಮೇಡ್ ಇನ್ ಇಂಡಿಯಾ'ದ ಬಗ್ಗೆ ಹೆಚ್ಚುತ್ತಿರುವ ಅನುರಣನದ ಬಗ್ಗೆ ಅವರು ಒತ್ತಿ ಹೇಳಿದರು, ಭಾರತ ನಿರ್ಮಿತ ಉತ್ಪನ್ನಗಳು ಈಗ ಜಾಗತಿಕ ಬ್ರ್ಯಾಂಡ್‌ಗಳಾಗುತ್ತಿವೆ. ಭೌಗೋಳಿಕ ಸೂಚಕ (ಜಿಐ) ಟ್ಯಾಗ್‌ ಗಳೊಂದಿಗೆ ಹಲವಾರು ಉತ್ಪನ್ನಗಳು ಗುರುತಿಸಲ್ಪಟ್ಟಿರುವುದನ್ನು ಅವರು ಉಲ್ಲೇಖಿಸಿದರು, ಈ ಟ್ಯಾಗ್‌ ಗಳು ಕೇವಲ ಲೇಬಲ್‌ ಗಳಿಗಿಂತ ಹೆಚ್ಚಿನವು, ಅವು ನೆಲದ ಗುರುತಿನ ಪ್ರಮಾಣಪತ್ರಗಳಾಗಿವೆ ಎಂದು ಅವರು ಹೇಳಿದರು. ಜಿಐ ಟ್ಯಾಗ್‌ ಗಳು ಉತ್ಪನ್ನವು ಅದರ ಮಣ್ಣಿನ ಸೃಷ್ಟಿಯಾಗಿದೆ ಎಂದು ಸೂಚಿಸುತ್ತವೆ ಮತ್ತು ಜಿಐ ಟ್ಯಾಗ್‌ ಗಳು ಎಲ್ಲಿಗೆ ತಲುಪಿದರೂ ಅವು ಅಲ್ಲಿ ಹೆಚ್ಚಿನ ಮಾರುಕಟ್ಟೆ ಯಶಸ್ಸಿಗೆ ದಾರಿ ತೆರೆಯುತ್ತವೆ ಎಂದು ಅವರು ಹೇಳಿದರು.

 

ದೇಶಾದ್ಯಂತ ಜಿಐ ಟ್ಯಾಗಿಂಗ್‌ ನಲ್ಲಿ ಉತ್ತರ ಪ್ರದೇಶದ ಪ್ರಮುಖ ಸ್ಥಾನವನ್ನು ಒತ್ತಿ ಹೇಳಿದ ಶ್ರೀ ಮೋದಿ, ರಾಜ್ಯದ ಕಲೆ, ಕರಕುಶಲ ವಸ್ತುಗಳು ಮತ್ತು ಕೌಶಲ್ಯಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿರುವುದನ್ನು ಉಲ್ಲೇಖಿಸಿದರು. ವಾರಾಣಸಿ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳ 30 ಕ್ಕೂ ಹೆಚ್ಚು ಉತ್ಪನ್ನಗಳು ಜಿಐ ಟ್ಯಾಗ್‌ ಗಳನ್ನು ಪಡೆದಿವೆ ಎಂದು ಅವರು ಹೇಳಿದರು, ಈ ವಸ್ತುಗಳಿಗೆ ಅವುಗಳನ್ನು ಗುರುತಿನ ಪಾಸ್‌ಪೋರ್ಟ್ ಎಂದು ಬಣ್ಣಿಸಿದರು. ವಾರಾಣಸಿಯ ತಬಲಾ, ಶೆಹನಾಯಿ, ಗೋಡೆ ವರ್ಣಚಿತ್ರಗಳು, ಥಂಡೈ, ಸ್ಟಫ್ಡ್ ರೆಡ್ ಮೆಣಸಿನಕಾಯಿ, ಕೆಂಪು ಪೇಡಾ ಮತ್ತು ತಿರಂಗ ಬರ್ಫಿ ಮುಂತಾದ ಈ ಪ್ರದೇಶದಿಂದ ಗುರುತಿಸಲ್ಪಟ್ಟ ಉತ್ಪನ್ನಗಳನ್ನು ಅವರು ಪಟ್ಟಿ ಮಾಡಿದರು. ಜೌನ್‌ಪುರದ ಇಮಾರ್ತಿ, ಮಥುರಾದ ಸಾಂಝಿ ಕಲೆ, ಬುಂದೇಲಖಂಡದ ಕಥಿಯಾ ಗೋಧಿ, ಪಿಲಿಭಿತ್‌ನ ಕೊಳಲು, ಪ್ರಯಾಗರಾಜ್‌ ನ ಮೂಂಜ್ ಕಲೆ, ಬರೇಲಿಯ ಜರ್ಡೋಜಿ, ಚಿತ್ರಕೂಟದ ಮರಗೆಲಸ ಮತ್ತು ಲಖಿಂಪುರ ಖೇರಿಯ ತರು ಜರ್ಡೋಜಿಯಂತಹ ಉತ್ಪನ್ನಗಳಿಗೆ ಇತ್ತೀಚೆಗೆ ಜಿಐ ಟ್ಯಾಗ್‌ ಗಳನ್ನು ನೀಡಲಾಗಿದೆ ಎಂದು ಅವರು ಹೇಳಿದರು "ಉತ್ತರ ಪ್ರದೇಶದ ಮಣ್ಣಿನ ಪರಿಮಳವು ಈಗ ಗಡಿಗಳನ್ನು ದಾಟಿ ತನ್ನ ಪರಂಪರೆಯನ್ನು ದೂರದವರೆಗೆ ಹರಡುತ್ತಿದೆ" ಎಂದು ಅವರು ಹೇಳಿದರು.

ಕಾಶಿಯನ್ನು ಸಂರಕ್ಷಿಸುವುದು ಎಂದರೆ ಭಾರತದ ಆತ್ಮವನ್ನು ರಕ್ಷಿಸುವುದು ಎಂದು ಹೇಳಿದ ಪ್ರಧಾನಿ, ಕಾಶಿಯನ್ನು ನಿರಂತರವಾಗಿ ಸಬಲೀಕರಣಗೊಳಿಸುವ ಮತ್ತು ಅದನ್ನು ಸುಂದರವಾಗಿಡುವ ಮತ್ತು ಅದರ ಪ್ರಾಚೀನ ಚೈತನ್ಯವನ್ನು ಆಧುನಿಕ ಗುರುತಿನೊಂದಿಗೆ ಸಂಪರ್ಕಿಸುವ ಸಾಮೂಹಿಕ ಬದ್ಧತೆಯನ್ನು ಒತ್ತಿ ಹೇಳುವ ಮೂಲಕ ತಮ್ಮ ಮಾತು ಮುಕ್ತಾಯಗೊಳಿಸಿದರು.

ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಸೇರಿದಂತೆ ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ವಾರಾಣಸಿಯಲ್ಲಿ 3,880 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು. ಮೂಲಸೌಕರ್ಯ ಅಭಿವೃದ್ಧಿಗೆ, ವಿಶೇಷವಾಗಿ ವಾರಾಣಸಿಯಲ್ಲಿ ರಸ್ತೆ ಸಂಪರ್ಕವನ್ನು ಹೆಚ್ಚಿಸುವ ತಮ್ಮ ಬದ್ಧತೆಗೆ ಅನುಗುಣವಾಗಿ, ಅವರು ಈ ಪ್ರದೇಶದ ವಿವಿಧ ರಸ್ತೆ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿದರು. ಇದಲ್ಲದೆ, ವಾರಾಣಸಿ ರಿಂಗ್ ರಸ್ತೆ ಮತ್ತು ಸಾರನಾಥ್ ನಡುವಿನ ರಸ್ತೆ ಸೇತುವೆ, ನಗರದ ಭಿಕಾರಿಪುರ ಮತ್ತು ಮಂಡುದಿಹ್ ಕ್ರಾಸಿಂಗ್‌ ಗಳಲ್ಲಿ ಫ್ಲೈಓವರ್‌ ಗಳು ಮತ್ತು 980 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಾರಾಣಸಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ ಎಚ್‌ 31 ಹೆದ್ದಾರಿ ಅಂಡರ್‌ಪಾಸ್ ರಸ್ತೆ ಸುರಂಗಕ್ಕೆ ಅವರು ಶಿಲಾನ್ಯಾಸ ನೆರವೇರಿಸಿದರು.

 

ವಿದ್ಯುತ್ ಮೂಲಸೌಕರ್ಯಕ್ಕೆ ಉತ್ತೇಜನ ನೀಡಲು ಪ್ರಧಾನಮಂತ್ರಿಯವರು ವಾರಾಣಸಿ ವಿಭಾಗದ ಜೌನ್‌ಪುರ, ಚಂದೌಲಿ ಮತ್ತು ಘಾಜಿಪುರ ಜಿಲ್ಲೆಗಳಲ್ಲಿ 1,045 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಎರಡು 400 ಕೆವಿ ಮತ್ತು ಒಂದು 220 ಕೆವಿ ಪ್ರಸರಣ ಉಪಕೇಂದ್ರಗಳು ಮತ್ತು ಸಂಬಂಧಿತ ಪ್ರಸರಣ ಮಾರ್ಗಗಳನ್ನು ಉದ್ಘಾಟಿಸಿದರು. ವಾರಾಣಸಿಯ ಚೌಕಘಾಟ್‌ ನಲ್ಲಿ 220 ಕೆವಿ ಪ್ರಸರಣ ಉಪಕೇಂದ್ರ, ಘಾಜಿಪುರದಲ್ಲಿ 132 ಕೆವಿ ಪ್ರಸರಣ ಉಪಕೇಂದ್ರ ಮತ್ತು 775 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ವಾರಾಣಸಿ ನಗರದ ವಿದ್ಯುತ್ ವಿತರಣಾ ವ್ಯವಸ್ಥೆಯ ಅಭಿವೃದ್ಧಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನಮಂತ್ರಿಯವರು ಪೊಲೀಸ್ ಮಾರ್ಗದಲ್ಲಿ ಟ್ರಾನ್ಸಿಟ್ ಹಾಸ್ಟೆಲ್ ಮತ್ತು ಪಿಎಸಿ ರಾಮನಗರ ಕ್ಯಾಂಪಸ್‌ ನಲ್ಲಿ ಭದ್ರತಾ ಸಿಬ್ಬಂದಿಗೆ ಸೌಲಭ್ಯಗಳನ್ನು ಸುಧಾರಿಸಲು ಬ್ಯಾರಕ್‌ ಗಳನ್ನು ಉದ್ಘಾಟಿಸಿದರು. ವಿವಿಧ ಪೊಲೀಸ್ ಠಾಣೆಗಳಲ್ಲಿ ಹೊಸ ಆಡಳಿತ ಕಟ್ಟಡಗಳು ಮತ್ತು ಪೊಲೀಸ್ ಮಾರ್ಗದಲ್ಲಿ ವಸತಿ ಹಾಸ್ಟೆಲ್‌ ಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಎಲ್ಲರಿಗೂ ಶಿಕ್ಷಣವನ್ನು ಖಚಿತಪಡಿಸಿಕೊಳ್ಳುವ ತಮ್ಮ ದೂರದೃಷ್ಟಿಗೆ ಅನುಗುಣವಾಗಿ, ಪ್ರಧಾನಮಂತ್ರಿಯವರು ಪಿಂಡ್ರಾದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಬಾರ್ಕಿ ಗ್ರಾಮದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಸರ್ಕಾರಿ ಕಾಲೇಜು, 356 ಗ್ರಾಮೀಣ ಗ್ರಂಥಾಲಯಗಳು ಮತ್ತು 100 ಅಂಗನವಾಡಿ ಕೇಂದ್ರಗಳು ಸೇರಿದಂತೆ ಹಲವು ಯೋಜನೆಗಳನ್ನು ಉದ್ಘಾಟಿಸಿದರು. ಸ್ಮಾರ್ಟ್ ಸಿಟಿ ಮಿಷನ್ ಅಡಿಯಲ್ಲಿ 77 ಪ್ರಾಥಮಿಕ ಶಾಲಾ ಕಟ್ಟಡಗಳ ನವೀಕರಣ ಮತ್ತು ವಾರಾಣಸಿಯ ಚೋಳಾಪುರದಲ್ಲಿ ಕಸ್ತೂರ್ಬಾ ಗಾಂಧಿ ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೂ ಅವರು ಶಂಕುಸ್ಥಾಪನೆ ನೆರವೇರಿಸಿದರು. ನಗರದಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಉತ್ತೇಜಿಸುವ ಸಲುವಾಗಿ, ಪ್ರಧಾನಮಂತ್ರಿಯವರು ಉದಯ್ ಪ್ರತಾಪ್ ಕಾಲೇಜಿನಲ್ಲಿ ಫ್ಲಡ್‌ಲೈಟ್‌ ಗಳು ಮತ್ತು ವೀಕ್ಷಕರ ಗ್ಯಾಲರಿಯೊಂದಿಗೆ ಸಿಂಥೆಟಿಕ್ ಹಾಕಿ ಟರ್ಫ್ ಮತ್ತು ಶಿವಪುರದಲ್ಲಿ ಮಿನಿ ಕ್ರೀಡಾಂಗಣಕ್ಕೆ ಶಿಲಾನ್ಯಾಸ ಮಾಡಿದರು.

 

ಗಂಗಾ ನದಿಯ ಸಾಮ್ನೆ ಘಾಟ್ ಮತ್ತು ಶಾಸ್ತ್ರಿ ಘಾಟ್‌ ಗಳ ಪುನರಾಭಿವೃದ್ಧಿ, ಜಲ ಜೀವನ್ ಮಿಷನ್ ಅಡಿಯಲ್ಲಿ 345 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 130 ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳು, ವಾರಾಣಸಿಯ ಆರು ವಾರ್ಡ್‌ ಗಳ ಸುಧಾರಣೆ ಮತ್ತು ವಾರಾಣಸಿಯ ವಿವಿಧ ಸ್ಥಳಗಳಲ್ಲಿ ಭೂದೃಶ್ಯ ಮತ್ತು ಶಿಲ್ಪಕಲೆ ಸ್ಥಾಪನೆಗಳನ್ನು ಪ್ರಧಾನಿ ಉದ್ಘಾಟಿಸಿದರು.

ಪ್ರಧಾನಮಂತ್ರಿಯವರು ಕುಶಲಕರ್ಮಿಗಳಿಗಾಗಿ ಎಂ ಎಸ್‌ ಎಂ ಇ ಯೂನಿಟಿ ಮಾಲ್, ಮೋಹನಸರಾಯ್‌ ನಲ್ಲಿ ಸಾರಿಗೆ ನಗರ ಯೋಜನೆಯ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳು, ಡಬ್ಲ್ಯೂಟಿಪಿ ಭೇಲುಪುರದಲ್ಲಿ 1 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ, 40 ಗ್ರಾಮ ಪಂಚಾಯಿತಿಗಳಲ್ಲಿ ಸಮುದಾಯ ಭವನಗಳು ಮತ್ತು ವಾರಾಣಸಿಯಲ್ಲಿ ವಿವಿಧ ಉದ್ಯಾನವನಗಳ ಸುಂದರೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

ತಬಲಾ, ಚಿತ್ರಕಲೆ, ಥಂಡೈ, ತಿರಂಗಾ ಬರ್ಫಿ ಸೇರಿದಂತೆ ವಿವಿಧ ಸ್ಥಳೀಯ ವಸ್ತುಗಳು ಮತ್ತು ಉತ್ಪನ್ನಗಳಿಗೆ ಪ್ರಧಾನಮಂತ್ರಿಯವರು ಭೌಗೋಳಿಕ ಸೂಚಕ (ಜಿಐ) ಪ್ರಮಾಣಪತ್ರಗಳನ್ನು ಪ್ರದಾನ ಮಾಡಿದರು. ಬನಾಸ್ ಡೈರಿಯೊಂದಿಗೆ ಸಂಬಂಧ ಹೊಂದಿರುವ ಉತ್ತರ ಪ್ರದೇಶದ ಹಾಲು ಪೂರೈಕೆದಾರರಿಗೆ 105 ಕೋಟಿ ರೂ.ಗಳಿಗೂ ಹೆಚ್ಚಿನ ಬೋನಸ್ ಅನ್ನು ವರ್ಗಾಯಿಸಿದರು.

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s 5G traffic surges 70% Y-o-Y: Nokia report

Media Coverage

India’s 5G traffic surges 70% Y-o-Y: Nokia report
NM on the go

Nm on the go

Always be the first to hear from the PM. Get the App Now!
...
PM chairs CCS Meeting to review measures being taken in the context of ongoing West Asia Conflict
April 01, 2026
Interventions across agriculture, fertilizers, shipping, aviation, logistics and MSMEs to mitigate emerging challenges discussed
Supply diversification for LPG and LNG, fuel duty reduction and power sector measures reviewed to ensure stability of essential supplies
Steps being taken to ensure stable prices of essential commodities and strict action against hoarding and black-marketing
Control Rooms set up for constant monitoring and interaction with States/UTs on prices and enforcement of Essential Commodities Act
Various efforts being taken to ensure fertilizer supply such as maintaining Urea Production and coordination with overseas suppliers for DAP/NPKS supplies
PM assesses availability of critical needs for the common man
PM discusses availability of fertilisers in the country and steps being taken to ensure its availability in the Kharif and Rabi seasons
PM directs that all efforts must be made to safeguard the citizens from the impact of this conflict
PM underlines the need for timely & smooth flow of authentic information to the public to prevent misinformation and rumour mongering
Enough coal stock exists which shall serve power needs adequately in coming months

Prime Minister Shri Narendra Modi a special of the Cabinet Committee on Security (CCS) to review measures taken by various Ministries/Departments and also discussed further initiatives to be taken in the context of the ongoing West Asia conflict, at 7 Lok Kalyan Marg today. This was the second special CCS meeting on this issue.

Cabinet Secretary briefed about the action taken to ensure supply of petroleum products, particularly LNG/LPG, and sufficient power availability. Sources are being diversified for procurement of LPG with new inflows from different countries. Similarly, Liquefied Natural Gas (LNG) is being sourced from different countries. He further briefed that LPG prices for domestic consumers have remained the same and Anti-diversion enforcement to curb hoarding and black marketing of LPG is being conducted regularly.

Initiatives have also been taken to expand Piped Natural Gas connections. Measures like exempting the gas-based power plants with a capacity of 7-8 GW from gas pooling mechanism and increasing of rake for positioning more coal at thermal power stations etc. have also been taken to ensure availability of power during the peak summer months.

Further, interventions proposed to be taken for emerging challenges in various other sectors such as agriculture, civil aviation, shipping and logistics were also discussed.

Various efforts like maintaining urea production to meet requirements, coordinating with overseas supplies for DAP/NPKS suppliers are being taken to ensure fertilizer supply. State governments are being requested to curb black marketing, hoarding, and diversion of fertilizers through daily monitoring, raids, and strict action.

The retail prices of food commodities have been stable over the past one month. Control Rooms have been set up for constant monitoring and interaction with States/UTs on prices and enforcement of Essential Commodities Act. The prices of agricultural products , vegetables and fruits are also being monitored.

Efforts to globally diversify our sources for energy, fertilizers and other supply chains, and international initiatives for securing safe passage of vessels through the strait of Hormuz and ongoing diplomatic efforts are being taken.

Enhanced coordination, real-time communication, and proactive measures across central, state, and district levels to drive effective information dissemination and public awareness amid the evolving crisis is being undertaken.

Prime Minister assessed the availability of critical needs for the common man. He discussed availability of fertilisers in the country and steps being taken to ensure its availability in the Kharif and Rabi seasons. He said that all efforts must be made to safeguard the citizens from the impact of this conflict. Prime Minister also emphasised smooth flow of authentic information to the public to prevent misinformation and rumour mongering.

Prime Minister directed all concerned departments to take all possible measures to ameliorate the problems of citizens and sectors affected by the ongoing global situation.