"ಕ್ರೀಡೆಯಲ್ಲಿ ಕಳೆದುಕೊಳ್ಳುವುದುಏನೂ ಇಲ್ಲ, ಗೆಲ್ಲುವುದು ಅಥವಾ ಕಲಿಯುವುದು ಮಾತ್ರ ಇರುತ್ತದೆ"
"ನಿಮ್ಮ ಯಶಸ್ಸು ಇಡೀ ರಾಷ್ಟ್ರಕ್ಕೆ ಸ್ಫೂರ್ತಿ ನೀಡುತ್ತದೆ; ನಾಗರಿಕರಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತದೆ"
"ಇಂದಿನ ದಿನಗಳಲ್ಲಿ ಕ್ರೀಡೆಯನ್ನು ವೃತ್ತಿಯಾಗಿ ಸ್ವೀಕರಿಸಲಾಗುತ್ತಿದೆ"
"ದಿವ್ಯಾಂಗರ ಕ್ರೀಡಾ ಗೆಲುವು ಕ್ರೀಡಾ ಸ್ಫೂರ್ತಿಯ ವಿಷಯ ಮಾತ್ರ ಆಗಿರದೆ, ಅದು ಜೀವನದಲ್ಲಿ ಸ್ಫೂರ್ತಿಯ ವಿಷಯವೂ ಆಗಿದೆ"
"ಹಿಂದಿನ ವಿಧಾನವೆಂದರೆ 'ಸರ್ಕಾರಕ್ಕಾಗಿ ಕ್ರೀಡಾಪಟುಗಳು' ಈಗ ಅದು 'ಕ್ರೀಡಾಪಟುಗಳಿಗಾಗಿ ಸರ್ಕಾರ" ವಿಧಾನಕ್ಕೆ ಬದಲಾಗಿದೆ
"ಸರ್ಕಾರದ ಇಂದಿನ ಧೋರಣೆ ಕ್ರೀಡಾಪಟು ಕೇಂದ್ರಿತವಾಗಿದೆ"
“ಸಂಭವನೀಯ ಪ್ಲಸ್ ಪ್ಲಾಟ್‌ಫಾರ್ಮ್ ಕಾರ್ಯಕ್ಷಮತೆಗೆ ಸಮಾನವಾಗಿದೆ. ಸಾಮರ್ಥ್ಯವು ಅಗತ್ಯವಾದ ವೇದಿಕೆ ಕಂಡುಕೊಂಡಾಗ ಕಾರ್ಯಕ್ಷಮತೆ ಉತ್ತೇಜನ ಪಡೆಯುತ್ತದೆ"
"ಪ್ರತಿ ಪಂದ್ಯಾವಳಿಯಲ್ಲಿ ನಿಮ್ಮ ಭಾಗವಹಿಸುವಿಕೆ ಮಾನವ ಕನಸುಗಳ ಗೆಲುವಾಗಿದೆ"

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯಲ್ಲಿಂದು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಏಷ್ಯಾ ಪ್ಯಾರಾ ಗೇಮ್ಸ್-2022 ತಂಡದೊಂದಿಗೆ ಸಂವಾದ ನಡೆಸಿ, ಅವರನ್ನು ಉದ್ದೇಶಿಸಿ ಮಾತನಾಡಿದರು. ಏಷ್ಯಾ ಪ್ಯಾರಾ ಗೇಮ್ಸ್-2022ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಅಭಿನಂದಿಸಲು ಮತ್ತು ಭವಿಷ್ಯದ ಸ್ಪರ್ಧೆಗಳಿಗೆ ಅವರನ್ನು ಪ್ರೇರೇಪಿಸಲು ಈ ಕಾರ್ಯಕ್ರಮವು ಪ್ರಧಾನ ಮಂತ್ರಿ ಅವರ ವೈಯಕ್ತಿಕ ಪ್ರಯತ್ನವಾಗಿದೆ.

 

ಪ್ಯಾರಾ ಅಥ್ಲೀಟ್‌ಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಿಮ್ಮನ್ನು ಭೇಟಿಯಾಗಲು ಮತ್ತು ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ನಾನು ಯಾವಾಗಲೂ ಎದುರು ನೋಡುತ್ತಿದ್ದೆ. "ನೀವು ಇಲ್ಲಿಗೆ ಬಂದಾಗಲೆಲ್ಲಾ ನೀವು ಹೊಸ ಭರವಸೆಗಳನ್ನು ಮತ್ತು ಹೊಸ ಉತ್ಸಾಹವನ್ನು ತರುತ್ತೀರಿ". ತಾವು ಇಲ್ಲಿಗೆ ಬಂದಿರುವುದು ಒಂದೇ ಒಂದು ವಿಷಯಕ್ಕಾಗಿ ಮತ್ತು ಪ್ಯಾರಾ ಅಥ್ಲೀಟ್‌ಗಳ ನಿಮ್ಮ ಯಶಸ್ಸಿಗೆ ಅಭಿನಂದನೆಗಳು. ನಾನು ಪ್ಯಾರಾ ಏಷ್ಯಾ ಗೇಮ್ಸ್‌ನ ಬೆಳವಣಿಗೆಗಳನ್ನು ಬಹಳ ಹತ್ತಿರದಿಂದ ನೋಡುವ ಜತೆಗೆ, ಅದರ ಮೂಲಕವೇ ಬದುಕುತ್ತಿದ್ದೇನೆ ಎಂದರು. ಅಥ್ಲೀಟ್ ಗಳ ಕೊಡುಗೆಗಳನ್ನು ಶ್ಲಾಘಿಸಿದ ಪ್ರಧಆನಿ, ತರಬೇತುದಾರರು ಮತ್ತು ಅವರ ಕುಟುಂಬಗಳನ್ನು ಸಹ ಅಭಿನಂದಿಸಿದರು. ದೇಶದ 140 ಕೋಟಿ ನಾಗರಿಕರ ಪರವಾಗಿ ಶ್ರೀ ಮೋದಿ ಕೃತಜ್ಞತೆ ಸಲ್ಲಿಸಿದರು.

 

ಕ್ರೀಡೆಯ ಅತ್ಯಂತ ಸ್ಪರ್ಧಾತ್ಮಕ ಸ್ವರೂಪಕ್ಕೆ ಒತ್ತು ನೀಡಿದ ಪ್ರಧಾನಿ, ಕ್ರೀಡಾಪಟುಗಳು ಪರಸ್ಪರ ಸ್ಪರ್ಧಿಸುತ್ತಿರುವ ಸಮಯದಲ್ಲಿ ಅವರು, ಆಂತರಿಕ ಸ್ಪರ್ಧೆಯ ಬಗ್ಗೆಯೂ ಗಮನ ಹರಿಸಿದರು. ಕ್ರೀಡಾಪಟುಗಳ ಅತ್ಯುನ್ನತ ಮಟ್ಟದ ಅಭ್ಯಾಸ ಮತ್ತು ಸಮರ್ಪಣೆಯನ್ನು ಪ್ರಧಾನಿ ಒಪ್ಪಿಕೊಂಡರು. "ನೀವೆಲ್ಲರೂ ಇಲ್ಲಿ ಉಪಸ್ಥಿತರಿದ್ದೀರಿ, ಕೆಲವರು ವಿಜೇತರಾಗಿ ಹಿಂತಿರುಗಿದ್ದೀರಿ, ಕೆಲವರು ಬುದ್ಧಿವಂತರಾಗಿ ವಾಪಸಾಗಿದ್ದೀರಿ, ಆದರೆ ಸೋತವರು ಯಾರು? "ಕ್ರೀಡೆಯಲ್ಲಿ ಸೋಲೆಂಬುದೇ ಇಲ್ಲ, ಗೆಲ್ಲುವುದು ಅಥವಾ ಕಲಿಯುವುದು ಮಾತ್ರ ಇದೆ ಎಂದು ಪ್ರಧಾನಿ ಅವರು ಕ್ರೀಡೆಯಲ್ಲಿ ಒಳಗೊಂಡಿರುವ ಕಲಿಕೆಯ ಪ್ರಕ್ರಿಯೆಯನ್ನು ಎತ್ತಿ ತೋರಿಸಿದರು. 140 ಕೋಟಿ ನಾಗರಿಕರಿಂದ ಆಯ್ಕೆಯಾಗಿರುವುದು ಪ್ಯಾರಾ ಅಥ್ಲೀಟ್‌ಗಳ ದೊಡ್ಡ ಸಾಧನೆ. "ನಿಮ್ಮ ಯಶಸ್ಸು ಇಡೀ ರಾಷ್ಟ್ರವನ್ನು ಪ್ರೇರೇಪಿಸುತ್ತದೆ, ನಾಗರಿಕರಲ್ಲಿ ಹೆಮ್ಮೆಯ ಭಾವನೆ ಮೂಡಿಸುತ್ತದೆ. ಒಟ್ಟು ಪದಕಗಳ ಸಂಖ್ಯೆ 111ರ ದಾಖಲೆಯ ಯಶಸ್ಸನ್ನು ನೀವೆಲ್ಲಾ ತಂದಿದ್ದೀರಿ ಎಂದು ಶ್ಲಾಘಿಸಿದರು.

ಅಥ್ಲೀಟ್‌ಗಳ ದಾಖಲೆ ಪ್ರದರ್ಶನ ಶ್ಲಾಘಿಸಿದ ಪ್ರಧಾನಮಂತ್ರಿ, ಲೋಕಸಭೆ ಚುನಾವಣೆಯಲ್ಲಿ ಗುಜರಾತ್‌ ರಾಜ್ಯ ದಾಖಲೆಯ ಸಾಧನೆ ಮಾಡಿದಾಗ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಅಭಿನಂದಿಸಿದ್ದರು ಎಂದು ಹೇಳಿ, ಆಗ ಉಂಟಾದ ಭಾವನೆಯನ್ನು ನೆನಪಿಸಿಕೊಂಡರು. "ಈ 111 ಪದಕಗಳು ಕೇವಲ ಸಂಖ್ಯೆಗಳಲ್ಲ, ಆದರೆ 140 ಕೋಟಿ ಕನಸುಗಳಾಗಿವೆ". 2014ರಲ್ಲಿ ಗೆದ್ದ ಪದಕಗಳ ಸಂಖ್ಯೆಗೆ ಹೋಲಿಸಿದರೆ 3 ಪಟ್ಟು ಹೆಚ್ಚಾಗಿದೆ. ಚಿನ್ನದ ಪದಕಗಳ ಸಂಖ್ಯೆ 10 ಪಟ್ಟು ಹೆಚ್ಚಾಗಿದೆ. ಭಾರತವು ಪದಕ ಪಟ್ಟಿಯಲ್ಲಿ 15 ನೇ ಸ್ಥಾನದಿಂದ ಅಗ್ರ 5ಕ್ಕೆ ಏರಿದೆ ಎಂದರು.

ಕಳೆದ ಕೆಲವು ತಿಂಗಳುಗಳಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಆಗಿರುವ ಭಾರತದ ಇತ್ತೀಚಿನ ಸಾಧನೆಗಳ ಬಗ್ಗೆ ಪ್ರಧಾನ ಮಂತ್ರಿ ಬೆಳಕು ಚೆಲ್ಲಿದರು. "ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ನಿಮ್ಮ ಯಶಸ್ಸು ಅದ್ಭುತ. ಆಗಸ್ಟ್‌ನಲ್ಲಿ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ಏಷ್ಯನ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್ ಪುರುಷರ ತಂಡಕ್ಕೆ ಮೊದಲ ಚಿನ್ನದ ಪದಕ, ಟೇಬಲ್ ಟೆನಿಸ್‌ನಲ್ಲಿ ಮಹಿಳೆಯರ ಜೋಡಿಗೆ ಮೊದಲ ಪದಕ, ಪುರುಷರ ಬ್ಯಾಡ್ಮಿಂಟನ್ ತಂಡದಿಂದ ಥಾಮಸ್ ಕಪ್ ಗೆಲುವು, 28 ಚಿನ್ನ ಸೇರಿದಂತೆ 107 ಪದಕಗಳ  ದಾಖಲೆಯನ್ನು ಅವರು ಪ್ರಸ್ತಾಪಿಸಿದರು. ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳು, ಮತ್ತು ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅತ್ಯಂತ ಯಶಸ್ವಿ ಪದಕಗಳ ಸಂಖ್ಯೆಯನ್ನು ಅವರು ಶ್ಲಾಘಿಸಿದರು.

ಪ್ಯಾರಾ ಗೇಮ್ಸ್‌ನ ವಿಶೇಷತೆ ಗುರುತಿಸಿದ ಪ್ರಧಾನ ಮಂತ್ರಿ, ದಿವ್ಯಾಂಗರ ಕ್ರೀಡಾ ವಿಜಯವು ಕ್ರೀಡೆಯಲ್ಲಿ ಮಾತ್ರ ಸ್ಫೂರ್ತಿಯ ವಿಷಯವಲ್ಲ, ಆದರೆ ಅದು ಜೀವನದ ಸ್ಫೂರ್ತಿಯ ವಿಷಯವಾಗಿದೆ. "ನಿಮ್ಮ ಕಾರ್ಯಕ್ಷಮತೆಯು ಹತಾಶೆಯಲ್ಲಿರುವ ಯಾವುದೇ ವ್ಯಕ್ತಿಯನ್ನು ಪುನಃ ಚೈತನ್ಯಗೊಳಿಸುತ್ತದೆ". ಭಾರತದ ಪ್ರಗತಿಯು ಕ್ರೀಡಾ ಸಮಾಜವಾಗಿ ಮತ್ತು ಅದರ ಕ್ರೀಡಾ ಸಂಸ್ಕೃತಿಯಲ್ಲಿ ಅಡಕವಾಗಿದೆ. "ನಾವು 2030 ಯೂತ್ ಒಲಿಂಪಿಕ್ಸ್ ಮತ್ತು 2036 ಒಲಿಂಪಿಕ್ಸ್ ಅನ್ನು ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.

 

ಕ್ರೀಡೆಯಲ್ಲಿ ಯಾವುದೇ ಅಡ್ಡ ದಾರಿಗಳಿಲ್ಲ. ಆಟಗಾರರು ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಅವರಿಗೆ ನೀಡುವ ಸ್ವಲ್ಪ ಸಹಾಯವು ಗುಣಿಸುವ ಪರಿಣಾಮ ಬೀರುತ್ತದೆ. ಕುಟುಂಬಗಳು, ಸಮಾಜ, ಸಂಸ್ಥೆಗಳು ಮತ್ತು ಇತರ ಪೋಷಕ ಪರಿಸರ ವ್ಯವಸ್ಥೆಗಳ ಸಾಮೂಹಿಕ ಬೆಂಬಲದ ಅಗತ್ಯವಿದೆ. ಕುಟುಂಬಗಳಲ್ಲಿ ಕ್ರೀಡೆಯ ಬಗೆಗೆ ಹೊಂದಿರುವ ದೃಷ್ಟಿಕೋನವನ್ನು ಬದಲಾಯಿಸುವುದು ಅಗತ್ಯವಿದೆ ಎಂದು ಅವರು ಪ್ರಸ್ತಾಪಿಸಿದರು.

 

"ಸಮಾಜವು ಹಿಂದಿನ ಕಾಲಕ್ಕಿಂತ ಭಿನ್ನವಾಗಿ ಕ್ರೀಡೆಯನ್ನು ವೃತ್ತಿಯಾಗಿ ಗುರುತಿಸಲು ಪ್ರಾರಂಭಿಸಿದೆ". ಪ್ರಸ್ತುತ ಸರ್ಕಾರವು ‘ಸರ್ಕಾರಕ್ಕಾಗಿ ಕ್ರೀಡಾಪಟುಗಳು’ ಎಂಬ ಧೋರಣೆಯನ್ನು ಬದಲಿಸಿ, ‘ಕ್ರೀಡಾಪಟುಗಳಿಗೆ ಸರ್ಕಾರ’ ಎಂಬ ಕಾರ್ಯ ವಿಧಾನವನ್ನು ಅಳವಡಿಸಿಕೊಂಡಿದೆ. ಕ್ರೀಡಾಪಟುಗಳ ಯಶಸ್ಸಿನ ಬಗ್ಗೆ ಸರ್ಕಾರದ ಸೂಕ್ಷ್ಮತೆಗೆ ಮನ್ನಣೆ ನೀಡಲಾಗಿದೆ. "ಸರ್ಕಾರವು ಕ್ರೀಡಾಪಟುಗಳ ಕನಸುಗಳು ಮತ್ತು ಹೋರಾಟಗಳನ್ನು ಗುರುತಿಸಿದಾಗ, ಅದರ ಪರಿಣಾಮವನ್ನು ಅದರ ನೀತಿಗಳು, ವಿಧಾನ ಮತ್ತು ಆಲೋಚನೆಗಳಲ್ಲಿ ವೀಕ್ಷಿಸಬಹುದು". ಹಿಂದಿನ ಸರ್ಕಾರಗಳು ಕ್ರೀಡಾಪಟುಗಳಿಗೆ ನೀತಿಗಳು, ಮೂಲಸೌಕರ್ಯಗಳು, ತರಬೇತಿ ಸೌಲಭ್ಯಗಳು ಮತ್ತು ಹಣಕಾಸಿನ ನೆರವಿನ ಕೊರತೆ ಹೊಂದಿದ್ದವು. ಇದು ಕ್ರೀಡಾಪಟುಗಳಿಗೆ ಯಶಸ್ಸು ಪಡೆಯಲು ಬಹುದೊಡ್ಡ ಅಡಚಣೆಯಾಗಿತ್ತು. ಕಳೆದ 9 ವರ್ಷಗಳಲ್ಲಿ, ರಾಷ್ಟ್ರವು ಹಳೆಯ ವ್ಯವಸ್ಥೆ ಮತ್ತು ವಿಧಾನದಿಂದ ಬೆಳೆದಿದೆ. ಇಂದು ವಿವಿಧ ಕ್ರೀಡಾಪಟುಗಳಿಗೆ 4-5 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. "ಸರ್ಕಾರದ ಇಂದಿನ ವಿಧಾನವು ಕ್ರೀಡಾಪಟು-ಕೇಂದ್ರಿತವಾಗಿದೆ". ಇದು ಅಡೆತಡೆಗಳನ್ನು ತೆಗೆದುಹಾಕುತ್ತಿದೆ ಮತ್ತು ಅವರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. “ಸಂಭವನೀಯ ಪ್ಲಸ್ ವೇದಿಕೆಯು ಕಾರ್ಯಕ್ಷಮತೆಗೆ ಸಮಾನವಾಗಿದೆ. ಸಾಮರ್ಥ್ಯವು ಅಗತ್ಯವಾದ ವೇದಿಕೆಯನ್ನು ಕಂಡುಕೊಂಡಾಗ ಕಾರ್ಯಕ್ಷಮತೆಗೆ ಉತ್ತೇಜನ ಸಿಗುತ್ತದೆ” ಎಂದು ಪ್ರಧಾನಿ ಖೇಲೊ ಇಂಡಿಯಾ ಯೋಜನೆಯನ್ನು ಉಲ್ಲೇಖಿಸಿದರು, ಇದು ಕ್ರೀಡಾಪಟುಗಳನ್ನು ತಳಮಟ್ಟದಲ್ಲಿ ಗುರುತಿಸುವ ಮೂಲಕ ಮತ್ತು ಅವರ ಪ್ರತಿಭೆಯನ್ನು ಪೋಷಿಸುವ ಮೂಲಕ ಯಶಸ್ಸಿನತ್ತ ಸಾಗಿತು. ಅವರು ಉನ್ನತ ಉಪಕ್ರಮಗಳು ಮತ್ತು ವಿಕಲಾಂಗ ಕ್ರೀಡಾ ತರಬೇತಿ ಕೇಂದ್ರಗಳ ಸ್ಥಾಪನೆಯನ್ನು ಸಹ ಉಲ್ಲೇಖಿಸಿದರು.

 

ಕಷ್ಟಗಳ ನಡುವೆಯೂ ಕ್ರೀಡಾಪಟುಗಳ ಸದೃಢತೆ ರಾಷ್ಟ್ರಕ್ಕೆ ಅವರ ಬಹುದೊಡ್ಡ ಕೊಡುಗೆಯಾಗಿದೆ. ನೀವು ದುಸ್ತರವಾದ ಅಡೆತಡೆಗಳನ್ನು ಜಯಿಸಿದ್ದೀರಿ. ಈ ಸ್ಫೂರ್ತಿಯನ್ನು ಎಲ್ಲೆಡೆ ಗುರುತಿಸಲಾಗಿದೆ, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪ್ಯಾರಾ-ಕ್ರೀಡಾಪಟುಗಳ ಪ್ರಶಂಸೆಯನ್ನು ಪ್ರಧಾನಿ ಉಲ್ಲೇಖಿಸಿದರು. ಸಮಾಜದ ಪ್ರತಿಯೊಂದು ವರ್ಗವೂ ಪ್ಯಾರಾ ಅಥ್ಲೀಟ್‌ಗಳಿಂದ ಸ್ಫೂರ್ತಿ ಪಡೆಯುತ್ತಿದೆ. “ಪ್ರತಿ ಪಂದ್ಯಾವಳಿಯಲ್ಲಿ ನಿಮ್ಮ ಭಾಗವಹಿಸುವಿಕೆ ಮಾನವ ಕನಸುಗಳ ವಿಜಯವಾಗಿದೆ. ಇದು ನಿಮ್ಮ ದೊಡ್ಡ ಪರಂಪರೆಯಾಗಿದೆ. ಅದಕ್ಕಾಗಿಯೇ ನೀವು ಈ ರೀತಿ ಶ್ರಮಿಸುತ್ತೀರಿ ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡುತ್ತಿದ್ದೀರಿ ಎಂದು ನನಗೆ ವಿಶ್ವಾಸವಿದೆ. ನಮ್ಮ ಸರ್ಕಾರ ನಿಮ್ಮೊಂದಿಗಿದೆ, ದೇಶ ನಿಮ್ಮೊಂದಿಗಿದೆ” ಎಂದು ಪ್ರಧಾನಿ ಹೇಳಿದರು.

ರಾಷ್ಟ್ರವಾಗಿ ನಾವು ಯಾವುದೇ ಮೈಲಿಗಲ್ಲುಗಳಲ್ಲಿ ನಿಲ್ಲುವುದಿಲ್ಲ ಮತ್ತು ನಮ್ಮ ಪ್ರಶಸ್ತಿಗಳ ಮೇಲೆ ವಿಶ್ರಾಂತಿ ಪಡೆಯುತ್ತೇವೆ. "ನಾವು ಅಗ್ರ 5 ಆರ್ಥಿಕತೆಗಳ ಸ್ಥಾನಕ್ಕೆ ತಲುಪಿದ್ದೇವೆ, ಈ ದಶಕದೊಳಗೆ ನಾವು ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗುತ್ತೇವೆ. 2047ರಲ್ಲಿ ಈ ರಾಷ್ಟ್ರವು ವಿಕ್ಷಿತ ಭಾರತವಾಗಲಿದೆ ಎಂದು ನಾನು ದೃಢವಾಗಿ ಹೇಳುತ್ತೇನೆ" ಎಂಬ ಸಂಕಲ್ಪ ಶಕ್ತಿಯನ್ನು ಪುನರುಚ್ಚರಿಸುವ ಮೂಲಕ ಪ್ರಧಾನ ಮಂತ್ರಿ ಭಾಷಣ ಮುಕ್ತಾಯಗೊಳಿಸಿದರು.

 

ಕೇಂದ್ರ ಯುವಜನ ಮತ್ತು ಕ್ರೀಡಾ ವ್ಯವಹಾರಗಳ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಭಾರತದ ಪ್ಯಾರಾಲಿಂಪಿಕ್ಸ್ ಸಮಿತಿಯ ಅಧ್ಯಕ್ಷೆ ಶ್ರೀಮತಿ ದೀಪಾ ಮಲಿಕ್, ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ  ಶ್ರೀ ಅರ್ಜುನ್ ಮುಂಡಾ ಮತ್ತು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಮಾಣಿಕ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಹಿನ್ನೆಲೆ

ಭಾರತವು ಏಷ್ಯನ್ ಪ್ಯಾರಾ ಗೇಮ್ಸ್-2022ರಲ್ಲಿ 29 ಚಿನ್ನದ ಪದಕಗಳು ಸೇರಿದಂತೆ ಒಟ್ಟು 111 ಪದಕಗಳನ್ನು ಗೆದ್ದಿದೆ. ಏಷ್ಯನ್ ಪ್ಯಾರಾ ಗೇಮ್ಸ್-2022 ರಲ್ಲಿ ಒಟ್ಟು ಪದಕಗಳ ಸಂಖ್ಯೆಯು ಹಿಂದಿನ ಅತ್ಯುತ್ತಮ ಪ್ರದರ್ಶನಕ್ಕಿಂತ(2018 ರಲ್ಲಿ) 54% ಹೆಚ್ಚಳಕ್ಕೆ ಸಾಕ್ಷಿಯಾಗಿದೆ, 29 ಚಿನ್ನದ ಪದಕಗಳನ್ನು ಗೆದ್ದಿದೆ. ಇದು 2018ರಲ್ಲಿ ಗೆದ್ದಿದ್ದಕ್ಕಿಂತ 2 ಪಟ್ಟು ಹೆಚ್ಚಾಗಿದೆ.

 

ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳು, ಅವರ ತರಬೇತುದಾರರು, ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಮತ್ತು ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‌ನ ಅಧಿಕಾರಿಗಳು, ರಾಷ್ಟ್ರೀಯ ಕ್ರೀಡಾ ಫೆಡರೇಶನ್‌ಗಳ ಪ್ರತಿನಿಧಿಗಳು ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಭಾಗವಹಿಸಿದ್ದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Pyaaz Khaate Hai, Dimaag Nahi': PM Modi's Jhalmuri Video Breaks The Internet With 100M+ Views

Media Coverage

Pyaaz Khaate Hai, Dimaag Nahi': PM Modi's Jhalmuri Video Breaks The Internet With 100M+ Views
NM on the go

Nm on the go

Always be the first to hear from the PM. Get the App Now!
...
Prime Minister pays homage to Adi Shankaracharya
April 21, 2026

The Prime Minister, Shri Narendra Modi, paid tributes to one of India’s greatest spiritual luminaries, Adi Shankaracharya, on his Jayanti today. Shri Modi remarked that his profound teachings, thoughts and philosophy of Advaita Vedanta continue to guide innumerable people globally. And his efforts to revitalise spiritual thought and establish spiritual centres across the nation remain a lasting inspiration."May his wisdom continue to illuminate our path and strengthen our commitment to truth, compassion and collective well-being", Shri Modi added.

The Prime Minister posted on X:

"On the sacred occasion of Adi Shankaracharya Jayanti, paying homage to one of India’s greatest spiritual luminaries. His profound teachings, thoughts and philosophy of Advaita Vedanta continue to guide innumerable people globally. He emphasised harmony, discipline and the oneness of all existence. His efforts to revitalise spiritual thought and establish spiritual centres across the nation remain a lasting inspiration. May his wisdom continue to illuminate our path and strengthen our commitment to truth, compassion and collective well-being."