ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರೊಂದಿಗೆ ಫಲಪ್ರದ ಮಾತುಕತೆ ನಡೆಸಿದರು.

ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರು ಅಧ್ಯಕ್ಷರಾದ ನಂತರ ತಮ್ಮ ಮೊದಲ ವಿದೇಶ ಭೇಟಿಗಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಭಾರತಕ್ಕೆ ಸಂದ ಗೌರವ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಅಧ್ಯಕ್ಷರು ಭಾರತದಲ್ಲಿನ ತಮ್ಮ ಕಾರ್ಯಕ್ರಮವನ್ನು ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ ಬೋಧಗಯಾದಿಂದ ಪ್ರಾರಂಭಿಸಿದ್ದಕ್ಕಾಗಿ ಅವರು ಸಂತೋಷ ವ್ಯಕ್ತಪಡಿಸಿದರು.

ಮಾತುಕತೆಯ ಸಂದರ್ಭದಲ್ಲಿ, ಇಬ್ಬರೂ ನಾಯಕರು ಭಾರತ-ಮ್ಯಾನ್ಮಾರ್ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಚರ್ಚಿಸಿದರು.

ಈ ಚರ್ಚೆಗಳು ವ್ಯಾಪಾರ, ಅಪರೂಪದ ಖನಿಜಗಳು, ಆರೋಗ್ಯ ರಕ್ಷಣೆ, ಸಂಪರ್ಕ ವ್ಯವಸ್ಥೆ, ಪರಂಪರೆಯ ಮರುಸ್ಥಾಪನೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಒಳಗೊಂಡಿದ್ದವು. ಕಡಲ ಭದ್ರತೆ, ಸೈಬರ್ ಭದ್ರತೆ ಮತ್ತು ಪರಸ್ಪರ ಹಿತಾಸಕ್ತಿಯ ಇತರ ಕ್ಷೇತ್ರಗಳಲ್ಲಿ ನಿಕಟವಾಗಿ ಶ್ರಮಿಸಲು ಉಭಯ ದೇಶದವರು ಒಪ್ಪಿಕೊಂಡರು.
 
ಭಾರತದ  'ನೇಬರ್ ಹುಡ್ ಫಸ್ಟ್' (ನೆರೆಹೊರೆಯವರು ಮೊದಲು), 'ಆಕ್ಟ್ ಈಸ್ಟ್' ಮತ್ತು ಇಂಡೋ-ಪೆಸಿಫಿಕ್ ನೀತಿಗಳಲ್ಲಿ ಮ್ಯಾನ್ಮಾರ್ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಇದು ಮ್ಯಾನ್ಮಾರ್ ಜೊತೆಗಿನ ಸಂಬಂಧಗಳಿಗೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಪುನರುಚ್ಚರಿಸುತ್ತದೆ.

ಪ್ರಧಾನಮಂತ್ರಿ ಅವರು ಎಕ್ಸ್  ನಲ್ಲಿ ಹೀಗೆ ಬರೆದಿದ್ದಾರೆ;

"ಮ್ಯಾನ್ಮಾರ್ ಅಧ್ಯಕ್ಷರಾದ ಯು ಮಿನ್ ಆಂಗ್ ಹ್ಲೇಂಗ್ ಅವರೊಂದಿಗೆ ಫಲಪ್ರದ ಸಭೆ ನಡೆಯಿತು. ಅವರು ಅಧ್ಯಕ್ಷರಾದ ನಂತರ ತಮ್ಮ ಮೊದಲ ವಿದೇಶ ಭೇಟಿಗಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆ ಭಾರತದಲ್ಲಿ ಗೌರವದ ವಿಷಯವಾಗಿದೆ. ಅವರು ಭಗವಾನ್ ಬುದ್ಧನ ಆಶೀರ್ವಾದದೊಂದಿಗೆ ಬೋಧಗಯಾದಿಂದ ಈ ಭೇಟಿಯನ್ನು ಪ್ರಾರಂಭಿಸಿದ್ದು ಅಷ್ಟೇ ಸಂತೋಷದ ಸಂಗತಿಯಾಗಿದೆ. ನಾವು ಭಾರತ-ಮ್ಯಾನ್ಮಾರ್ ಸಂಬಂಧಗಳ ಸಂಪೂರ್ಣ ವ್ಯಾಪ್ತಿಯನ್ನು ಪರಿಶೀಲಿಸಿದೆವು. ಭಾರತದ 'ನೇಬರ್ಹುಡ್ ಫಸ್ಟ್', 'ಆಕ್ಟ್ ಈಸ್ಟ್' ಮತ್ತು ಇಂಡೋ-ಪೆಸಿಫಿಕ್ ನೀತಿಗಳಲ್ಲಿ ಮ್ಯಾನ್ಮಾರ್ ಅತ್ಯಂತ ಪ್ರಮುಖವಾಗಿದೆ."

"ನಮ್ಮ ಮಾತುಕತೆಗಳು ವ್ಯಾಪಾರ, ಅಪರೂಪದ ಖನಿಜಗಳು, ಆರೋಗ್ಯ ರಕ್ಷಣೆ, ಸಂಪರ್ಕ ವ್ಯವಸ್ಥೆ, ಪರಂಪರೆ ಮರುಸ್ಥಾಪನೆ ಮತ್ತು ಸಾಮರ್ಥ್ಯ ವೃದ್ಧಿಯಲ್ಲಿ ಸಹಕಾರವನ್ನು ಹೆಚ್ಚಿಸುವ ಮಾರ್ಗಗಳನ್ನು ಒಳಗೊಂಡಿದ್ದವು. ಕಡಲ ಭದ್ರತೆ, ಸೈಬರ್ ಭದ್ರತೆ ಮತ್ತು ಇನ್ನೂ ಹೆಚ್ಚಿನ ಕ್ಷೇತ್ರಗಳಲ್ಲಿ ನಿಕಟವಾಗಿ ಶ್ರಮಿಸಲು ನಾವು ಒಪ್ಪಿಕೊಂಡಿದ್ದೇವೆ."

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Rural commercial vehicle retail sales growth outpaces urban: Fada data

Media Coverage

Rural commercial vehicle retail sales growth outpaces urban: Fada data
NM on the go

Nm on the go

Always be the first to hear from the PM. Get the App Now!
...
PM condoles loss of lives in firecracker factory mishap in Kaushambi
August 31, 2026
PM announces ex-gratia from Prime Minister’s National Relief Fund

The Prime Minister, Shri Narendra Modi has expressed deep sorrow over the loss of lives in a mishap at a firecracker factory in Kaushambi, Uttar Pradesh. Shri Modi conveyed his condolences to the bereaved families and prayed for the speedy recovery of the injured.

Shri Modi also announced an ex-gratia of ₹2 lakh from the Prime Minister’s National Relief Fund (PMNRF) to the next of kin of each deceased and ₹50,000 for the injured.

The Prime Minister posted on X;

Extremely saddened by the loss of lives due to a mishap at a firecracker factory in Kaushambi, Uttar Pradesh. My thoughts are with the bereaved families in this hour of grief. May the injured recover at the earliest.

An ex-gratia of Rs. 2 lakh from PMNRF would be given to the next of kin of each deceased. The injured would be given Rs. 50,000: PM @narendramodi