ಎಲ್ಲಾ ನಾಗರಿಕರ ಕಲ್ಯಾಣಕ್ಕಾಗಿ ಪ್ರಾರ್ಥಿಸುವ ಸುಭಾಷಿತಂ ಹಂಚಿಕೊಂಡ ಪ್ರಧಾನಮಂತ್ರಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸೋಮನಾಥ ಸ್ವಾಭಿಮಾನ್ ಪರ್ವ ಆರಂಭದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ಸಹಸ್ರಮಾನಗಳಿಗೂ ಹೆಚ್ಚು ಕಾಲದಿಂದ ಸೋಮನಾಥವನ್ನು ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿರಿಸಿರುವ ಕಾಲಾತೀತ ನಾಗರಿಕತೆಯ ಸ್ಫೂರ್ತಿಯನ್ನು ಅವರು ಸ್ಮರಿಸಿದರು.

1026ರ ಜನವರಿಯಲ್ಲಿ ಸೋಮನಾಥ ತನ್ನ ಮೊದಲ ದಾಳಿಯನ್ನು ಎದುರಿಸಿತು ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ನಂತರದ ಶತಮಾನಗಳಲ್ಲಿ ಪುನರಾವರ್ತಿತ ದಾಳಿಗಳ ಹೊರತಾಗಿಯೂ, ಭಕ್ತರ ಶಾಶ್ವತ ನಂಬಿಕೆ ಮತ್ತು ಭಾರತದ ನಾಗರಿಕತೆಯ ಸಂಕಲ್ಪವು ಸೋಮನಾಥವನ್ನು ಮತ್ತೆ ಮತ್ತೆ ಪುನರ್ ನಿರ್ಮಿಸುವುದನ್ನು ಖಚಿತಪಡಿಸಿತು. "ಸೋಮನಾಥ ಸ್ವಾಭಿಮಾನ್ ಪರ್ವವು ತಮ್ಮ ತತ್ವಗಳು ಮತ್ತು ನೀತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಭಾರತ ಮಾತೆಯ ಅಸಂಖ್ಯಾತ ಮಕ್ಕಳನ್ನು ನೆನಪಿಸಿಕೊಳ್ಳುತ್ತದೆ. ಸಮಯವು ಎಷ್ಟೇ ಕಠಿಣವಾಗಿದ್ದರೂ, ಅವರ ಸಂಕಲ್ಪವು ಅಚಲವಾಗಿ ಉಳಿಯಿತು ಮತ್ತು ನಮ್ಮ ನೈತಿಕತೆಗೆ ಅವರ ಬದ್ಧತೆ ಅಚಲವಾಗಿತ್ತು," ಪ್ರಧಾನಿ ನರೇಂದ್ರ ಮೋದಿ ಉಲ್ಲೇಖಿಸಿದ್ದಾರೆ.

ಪ್ರಧಾನಮಂತ್ರಿ ಅವರು ಸೋಮನಾಥಕ್ಕೆ ತಮ್ಮ ಹಿಂದಿನ ಭೇಟಿಗಳ ಇಣುಕುನೋಟಗಳನ್ನು ಹಂಚಿಕೊಂಡರು ಮತ್ತು #SomnathSwabhimanParv ಬಳಸಿ ತಮ್ಮ ಸ್ವಂತ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಆಚರಣೆಯಲ್ಲಿ ಪಾಲ್ಗೊಳ್ಳುವಂತೆ ನಾಗರಿಕರನ್ನು ಆಹ್ವಾನಿಸಿದರು. 1951ರಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಪುನರ್ ನಿರ್ಮಿಸಲಾದ ಸೋಮನಾಥ ದೇವಾಲಯವು ತೆರೆದು 50 ವರ್ಷಗಳನ್ನು ಪೂರೈಸಿದ ಕಾರ್ಯಕ್ರಮವನ್ನು ಅವರು ಸ್ಮರಿಸಿದರು. ಸರ್ದಾರ್ ವಲ್ಲಭಭಾಯಿ ಪಟೇಲ್, ಕೆ.ಎಂ.ಮುನ್ಷಿ ಮತ್ತು ಇತರರ ಪ್ರಯತ್ನಗಳು ದೇವಾಲಯದ ಪುನರ್ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿವೆ. 2001ರ ಕಾರ್ಯಕ್ರಮವು ಸರ್ದಾರ್ ಪಟೇಲ್ ಅವರ 125ನೇ ಜಯಂತಿಯಂದು ಕಾಕತಾಳೀಯವಾಗಿತ್ತು ಮತ್ತು ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ, ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿ ಮತ್ತು ಹಲವಾರು ಗಣ್ಯರು ಭಾಗವಹಿಸಿದ್ದರು.

1951ರ ಭವ್ಯ ಸಮಾರಂಭದ ನಂತರ 2026 ರಲ್ಲಿ ಸೋಮನಾಥ ದೇವಾಲಯವನ್ನು ರಾಷ್ಟ್ರಕ್ಕೆ ಮರು ಸಮರ್ಪಣೆ ಮಾಡಿ 75 ವರ್ಷಗಳು ತುಂಬಿವೆ ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು. "ಈ ಮೈಲಿಗಲ್ಲು ಕೇವಲ ದೇವಾಲಯದ ಪುನರ್ನಿರ್ಮಾಣದ ಬಗ್ಗೆ ಮಾತ್ರವಲ್ಲ, ಆದರೆ ತಲೆಮಾರುಗಳಿಗೆ ಸ್ಫೂರ್ತಿ ನೀಡುತ್ತಿರುವ ನಮ್ಮ ನಾಗರಿಕತೆಯ ಅದಮ್ಯ ಮನೋಭಾವದ ಕುರಿತಾಗಿದೆ" ಎಂದು ಅವರು ದೃಢಪಡಿಸಿದರು.

ಈ ಸಂಬಂಧ ಎಕ್ಸ್ ನಲ್ಲಿ ಪ್ರತ್ಯೇಕ ಸರಣಿ ಪೋಸ್ಟ್ ಗಳಲ್ಲಿ, ಶ್ರೀ ನರೇಂದ್ರ ಮೋದಿ ಅವರು ಹೀಗೆ ಬರೆದಿದ್ದಾರೆ:

"ಜೈ ಸೋಮನಾಥ್!

ಸೋಮನಾಥ ಸ್ವಾಭೀಮಾನ್ ಪರ್ವ ಇಂದು ಪ್ರಾರಂಭವಾಗುತ್ತದೆ. ಒಂದು ಸಾವಿರ ವರ್ಷಗಳ ಹಿಂದೆ, 1026ರ ಜನವರಿಯಲ್ಲಿ, ಸೋಮನಾಥವು ತನ್ನ ಮೊದಲ ದಾಳಿಯನ್ನು ಎದುರಿಸಿತು. 1026 ರ ದಾಳಿ ಮತ್ತು ನಂತರದ ದಾಳಿಗಳು ಲಕ್ಷಾಂತರ ಜನರ ಶಾಶ್ವತ ನಂಬಿಕೆಯನ್ನು ಕುಗ್ಗಿಸಲು ಸಾಧ್ಯವಾಗಲಿಲ್ಲ ಅಥವಾ ಸೋಮನಾಥವನ್ನು ಮತ್ತೆ ಮತ್ತೆ ಪುನರ್ನಿರ್ಮಿಸಿದ ನಾಗರಿಕತೆಯ ಮನೋಭಾವವನ್ನು ಮುರಿಯಲು ಸಾಧ್ಯವಾಗಲಿಲ್ಲ.

ನಾನು ಸೋಮನಾಥಕ್ಕೆ ನನ್ನ ಹಿಂದಿನ ಭೇಟಿಗಳ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನೀವೂ ಅಲ್ಲಿಗೆ ಹೋಗಿದ್ದರೆ, #SomnathSwabhimanParv ಬಳಸಿ ಅವುಗಳನ್ನು ಹಂಚಿಕೊಳ್ಳಿ.

"ತಮ್ಮ ತತ್ವಗಳು ಮತ್ತು ನೀತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳದ ಭಾರತ ಮಾತೆಯ ಅಸಂಖ್ಯಾತ ಮಕ್ಕಳನ್ನು ನೆನಪಿಸಿಕೊಳ್ಳುವುದು #SomnathSwabhimanParv. ಸಮಯವು ಎಷ್ಟೇ ಕಠಿಣವಾಗಿದ್ದರೂ, ಅವರ ಸಂಕಲ್ಪವು ಅಚಲವಾಗಿ ಉಳಿಯಿತು ಮತ್ತು ನಮ್ಮ ನೈತಿಕತೆಗೆ ಅವರ ಬದ್ಧತೆ ಅಚಲವಾಗಿತ್ತು," ಎಂದು ಹೇಳಿದ್ದಾರೆ.

"2001ರ ಅಕ್ಟೋಬರ್ 31ರಂದು ಸೋಮನಾಥದಲ್ಲಿ ನಡೆದ ಕಾರ್ಯಕ್ರಮದ ಕೆಲವು ಇಣುಕುನೋಟಗಳು ಇಲ್ಲಿವೆ. 1951ರಲ್ಲಿ ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಪುನರ್ ನಿರ್ಮಿಸಲಾದ ಸೋಮನಾಥ ದೇವಾಲಯವು ತನ್ನ ಬಾಗಿಲು ತೆರೆದು 50 ವರ್ಷಗಳನ್ನು ಆಚರಿಸಿದ ವರ್ಷ ಇದು. ಸರ್ದಾರ್ ಪಟೇಲ್, ಕೆ.ಎಂ.ಮುನ್ಷಿ ಮತ್ತು ಇತರರ ಪ್ರಯತ್ನಗಳು ಗಮನಾರ್ಹವಾಗಿವೆ. ಸರ್ದಾರ್ ಪಟೇಲ್ ಅವರ 125ನೇ ಜಯಂತಿಯನ್ನು ಆಚರಿಸುತ್ತಿದ್ದಾಗಲೂ ಅದು ಆಗಿತ್ತು. 2001ರ ಕಾರ್ಯಕ್ರಮದಲ್ಲಿ ಅಂದಿನ ಪ್ರಧಾನಿ ಅಟಲ್ ಜೀ, ಗೃಹ ಸಚಿವ ಅಡ್ವಾಣಿ ಜೀ ಮತ್ತು ಇತರ ಹಲವಾರು ಗಣ್ಯರು ಭಾಗವಹಿಸಿದ್ದರು.

2026ರಲ್ಲಿ, 1951ರ ಭವ್ಯ ಸಮಾರಂಭದ 75 ವರ್ಷಗಳನ್ನು ನಾವು ಆಚರಿಸುತ್ತಿದ್ದೇವೆ!"

 

 

 

 

“जय सोमनाथ !

सोमनाथ स्वाभिमान पर्व का आज से शुभारंभ हो रहा है। एक हजार वर्ष पूर्व, जनवरी 1026 में सोमनाथ मंदिर ने अपने इतिहास का पहला आक्रमण झेला था। साल 1026 का आक्रमण और उसके बाद हुए अनेक हमले भी हमारी शाश्वत आस्था को डिगा नहीं सके। बल्कि इनसे भारत की सांस्कृतिक एकता की भावना और सशक्त हुई और सोमनाथ का बार-बार पुनरोद्धार होता रहा।

मैं सोमनाथ की अपनी पिछली यात्राओं की कुछ तस्वीरें साझा कर रहा हूं। यदि आप भी सोमनाथ गए हैं, तो अपनी तस्वीरें #SomnathSwabhimanParv के साथ जरूर शेयर करें।”

“#SomnathSwabhimanParv का ये अवसर, भारत माता के उन असंख्य सपूतों को स्मरण करने का पर्व है, जिन्होंने कभी अपने सिद्धांतों और मूल्यों से समझौता नहीं किया। समय कितना ही कठिन और भयावह क्यों ना रहा हो, उनका संकल्प हमेशा अडिग रहा। हमारी सभ्यता और सांस्कृतिक चेतना के प्रति उनकी निष्ठा अटूट रही। अटूट आस्था के एक हजार वर्ष का ये अवसर, हमें राष्ट्र की एकता के लिए निरंतर प्रयासरत रहने की प्रेरणा देता है।”

“मैं 31 अक्टूबर 2001 को सोमनाथ में आयोजित एक कार्यक्रम की कुछ झलकियां भी आपसे साझा कर रहा हूं। यह वो साल था, जब हमने 1951 में पुनर्निर्मित सोमनाथ मंदिर के उद्घाटन के 50 वर्ष पूर्ण होने का उत्सव मनाया था। 1951 में वो ऐतिहासिक समारोह तत्कालीन राष्ट्रपति डॉ. राजेन्द्र प्रसाद जी की मौजूदगी में संपन्न हुआ था। सोमनाथ मंदिर के पुनर्निर्माण में सरदार पटेल और केएम मुंशी जी के साथ ही कई महान विभूतियों के प्रयास अत्यंत उल्लेखनीय रहे हैं। साल 2001 के इस कार्यक्रम में तत्कालीन प्रधानमंत्री अटल जी और गृह मंत्री आडवाणी जी और कई गणमान्य लोग शामिल हुए थे।

वर्ष 2026 में हम 1951 में हुए भव्य समारोह के 75 वर्ष पूर्ण होने का भी स्मरण कर रहे हैं!”

 

 

 

 

Sharing a Sanskrit verse on X, Shri Modi stated:

“श्री सोमनाथ महादेव की कृपा और आशीर्वाद से सबका कल्याण हो।

सौराष्ट्रदेशे विशदेऽतिरम्ये ज्योतिर्मयं चन्द्रकलावतंसम्।

भक्तिप्रदानाय कृपावतीर्णं तं सोमनाथं शरणं प्रपद्ये॥”

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Indian Air Force's desi push: 97% of fighter spares now local, 62,300 indigenised

Media Coverage

Indian Air Force's desi push: 97% of fighter spares now local, 62,300 indigenised
NM on the go

Nm on the go

Always be the first to hear from the PM. Get the App Now!
...
Prime Minister invites citizens to share their UPI experiences as UPI completes a decade
August 25, 2026

The Prime Minister, Shri Narendra Modi recalled the transformative journey of the Unified Payments Interface (UPI), which was rolled out a decade ago and marked a major turning point in India’s digital payments journey.

Highlighting the scale and reach achieved by UPI over the past ten years, Shri Modi said that its remarkable journey is something every Indian can be proud of. The Prime Minister invited citizens to share their experiences of using UPI and how it has impacted their daily lives.

The Prime Minister posted on X:

A decade ago, UPI was rolled out, marking a major turning point in India’s digital payments journey.

The sheer scale and reach of UPI are something every Indian must be proud of.

Tell me about your UPI experience and how it impacted your life...

#10YearsOfUPI