ನಮ್ಮ ಸಂಸ್ಕೃತಿಯಲ್ಲಿ ಸೇವೆಯನ್ನು ಶ್ರೇಷ್ಠ ಧರ್ಮವೆಂದು ಪರಿಗಣಿಸಲಾಗಿದೆ; ಭಕ್ತಿ, ನಂಬಿಕೆ ಮತ್ತು ಆರಾಧನೆಗಿಂತ ಸೇವೆಗೆ ಉನ್ನತ ಸ್ಥಾನ ನೀಡಲಾಗಿದೆ: ಪ್ರಧಾನಮಂತ್ರಿ
ಸಾಂಸ್ಥಿಕ ಸೇವೆಯು ಸಮಾಜ ಮತ್ತು ದೇಶದ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದೆ: ಪ್ರಧಾನಮಂತ್ರಿ
ಭಾರತವು ಇಡೀ ಜಗತ್ತಿಗೆ ನೀಡಿದ ಮಿಷನ್ ಲೈಫ್‌ನ ದೃಷ್ಟಿಕೋನ, ಅದರ ಸತ್ಯಾಸತ್ಯತೆ, ಅದರ ಪರಿಣಾಮವನ್ನು ನಾವು ಮಾತ್ರ ಸಾಬೀತುಪಡಿಸಬೇಕು; ‘ಏಕ್ ಪೆಡ್ ಮಾ ಕೆ ನಾಮ್’ ಅಭಿಯಾನವು ವಿಶ್ವಾದ್ಯಂತ ಚರ್ಚೆಯಾಗುತ್ತಿದೆ: ಪ್ರಧಾನಮಂತ್ರಿ
ಜನವರಿಯಲ್ಲಿ 'ವಿಕಸಿತ ಭಾರತ ಯುವ ನಾಯಕರ ಸಂವಾದ' ಆಯೋಜಿಸಲಾಗುವುದು; ಇದರಲ್ಲಿ ನಮ್ಮ ಯುವಕರು ತಮ್ಮ ಕೊಡುಗೆಗಳನ್ನು ವಿವರಿಸುವ, ವಿಕಸಿತ ಭಾರತದ ಸಂಕಲ್ಪ ಈಡೇರಿಸುವ ತಮ್ಮ ಆಲೋಚನೆಗಳನ್ನು ಮುಂದಿಡುತ್ತಾರೆ: ಪ್ರಧಾನಮಂತ್ರಿ

ಅಹಮದಾಬಾದ್‌ನಲ್ಲಿ ಆಯೋಜಿತವಾಗಿದ್ದ ಕಾರ್ಯಕರ್ತರ ಸುವರ್ಣ ಮಹೋತ್ಸವವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಉದ್ದೇಶಿಸಿ ಭಾಷಣ ಮಾಡಿದರು. ಪರಮಪೂಜ್ಯ ಗುರು ಹರಿ ಮಹಂತ ಸ್ವಾಮಿ ಮಹಾರಾಜ್, ಪೂಜ್ಯ ಸಾಧು ಸಂತರು ಮತ್ತು ಸತ್ಸಂಗಿ ಕುಟುಂಬದ ಸದಸ್ಯರು ಮತ್ತು ಇತರೆ ಗಣ್ಯರು ಮತ್ತು ಪ್ರತಿನಿಧಿಗಳನ್ನು ಅವರು ಸ್ವಾಗತಿಸಿದರು. ಕಾರ್ಯಕರ್ತರ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಶ್ರೀ ಮೋದಿ ಅವರು ಭಗವಾನ್ ಸ್ವಾಮಿ ನಾರಾಯಣರ ಪಾದಗಳಿಗೆ ನಮಸ್ಕರಿಸಿ, ಇಂದು ಪ್ರಮುಖ್ ಸ್ವಾಮಿ ಮಹಾರಾಜರ 103ನೇ ಜನ್ಮದಿನವೂ ಆಗಿದೆ. ಭಗವಾನ್ ಸ್ವಾಮಿ ನಾರಾಯಣರ ಬೋಧನೆಗಳು, ಪ್ರಮುಖ ಸ್ವಾಮಿ ಮಹಾರಾಜರ ಸಂಕಲ್ಪಗಳು ಪರಮ ಪೂಜ್ಯ ಗುರು ಹರಿಮಹಂತ ಸ್ವಾಮಿ ಮಹಾರಾಜರ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ ಇಂದು ಫಲ ನೀಡುತ್ತಿವೆ. ಯುವಕರು ಮತ್ತು ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸುಮಾರು 1 ಲಕ್ಷ ಕಾರ್ಯಕರ್ತರು ಸೇರಿದಂತೆ ಇಂತಹ ಬೃಹತ್ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವುದು ಸಂತಸ ತಂದಿದೆ. ಸ್ಥಳದಲ್ಲಿ ದೈಹಿಕವಾಗಿ ಇಲ್ಲದಿದ್ದರೂ, ಈ ಕಾರ್ಯಕ್ರಮದ ಶಕ್ತಿಯನ್ನು ಅನುಭವಿಸಬಹುದಾಗಿದೆ. ಮಹಾರಥೋತ್ಸವದಲ್ಲಿ ಭಾಗಿಯಾಗಿರುವ ಪರಮಪೂಜ್ಯ ಗುರು ಹರಿಮಹಾಂತ ಸ್ವಾಮಿ ಮಹಾರಾಜರು, ಸಕಲ ಸಾಧು ಸಂತರಿಗೆ ಅವರು ಶುಭ ಕೋರಿದರು.

50 ವರ್ಷಗಳ ಸೇವಾ ಪಯಣದಲ್ಲಿ ಕಾರ್ಯಕರ್ತರ ಸುವರ್ಣ ಮಹೋತ್ಸವ ಪ್ರಮುಖ ಮೈಲಿಗಲ್ಲಾಗಿದೆ. 50 ವರ್ಷಗಳ ಹಿಂದೆ ಸ್ವಯಂಸೇವಕರನ್ನು ನೋಂದಾಯಿಸುವ ಮತ್ತು ಅವರನ್ನು ಸೇವಾ ಕಾರ್ಯಕ್ಕೆ ಸಂಪರ್ಕಿಸುವ ಪ್ರಕ್ರಿಯೆ ಪ್ರಾರಂಭವಾಯಿತು, ಇದು ಒಂದು ವಿನೂತನ ಉಪಕ್ರಮವಾಗಿದೆ. ಬೋಚಸನ್ಯಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿ ನಾರಾಯಣ ಸಂಸ್ಥೆ(ಬಿಎಪಿಎಸ್)ಯ ಲಕ್ಷಾಂತರ ಕಾರ್ಯಕರ್ತರು ಅತ್ಯಂತ ಶ್ರದ್ಧೆ ಮತ್ತು ಸಮರ್ಪಣಾ ಭಾವದಿಂದ ಸೇವೆಯಲ್ಲಿ ತೊಡಗಿರುವುದು ಸಂತಸ ತಂದಿದೆ. ಸಂಸ್ಥೆಗೆ ಇದು ಒಂದು ದೊಡ್ಡ ಸಾಧನೆ ಎಂದು ಶ್ಲಾಘಿಸಿದ ಶ್ರೀ ಮೋದಿ ಅವರು, ಬಿಎಪಿಎಸ್ ಸಂಸ್ಥೆಯನ್ನು ಅಭಿನಂದಿಸಿ,  ತಮ್ಮ ಶುಭಾಶಯಗಳನ್ನು ತಿಳಿಸಿದರು.

 

"ಕಾರ್ಯಕಾರ್ (ಕಾರ್ಯಕರ್ತರು) ಸುವರ್ಣ ಮಹೋತ್ಸವವು ಭಗವಾನ್ ಸ್ವಾಮಿ ನಾರಾಯಣರ ಮಾನವತೆಯ ಬೋಧನೆಗಳ ಆಚರಣೆಯಾಗಿದೆ". ಇದು ಆ ದಶಕಗಳ ಸೇವೆಯ ಮಹಿಮೆ. ಇದು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ಬಿಎಪಿಎಸ್‌ನ ಸೇವಾ ಅಭಿಯಾನಗಳನ್ನು ಹತ್ತಿರದಿಂದ ನೋಡಿರುವುದು ತಮ್ಮ ಪಾಲಿನ ಅದೃಷ್ಟ ಎಂದು ಸಂತಸ ವ್ಯಕ್ತಪಡಿಸಿದ ಶ್ರೀ ಮೋದಿ, ಭುಜ್‌ನಲ್ಲಿನ ಭೂಕಂಪದಿಂದ ಉಂಟಾದ ವಿನಾಶ, ನರನಾರಾಯಣ ನಗರ ಗ್ರಾಮದ ಪುನರ್ನಿರ್ಮಾಣದ ನಂತರ ಅನೇಕ ಬಾರಿ ಅವರೊಂದಿಗೆ ಸೇರಲು ಅವಕಾಶ ಸಿಕ್ಕಿತ್ತು. ಕೇರಳದ ಪ್ರವಾಹ, ಉತ್ತರಾಖಂಡದಲ್ಲಿ ಭೂಕುಸಿತದ ನೋವು ಮತ್ತು ಇತ್ತೀಚಿನ ಜಾಗತಿಕ ಸಾಂಕ್ರಾಮಿಕ ಕೊರೊನಾ ದುರಂತದ ಸಮಯದಲ್ಲಿಯೂ ಸಹ ಅವರೊಂದಿಗೆ ಇದ್ದೆ. ಜನರ ಜೊತೆಗೆ ಕುಟುಂಬವಾಗಿ ನಿಂತು ಎಲ್ಲರಿಗೂ ಸಹಾನುಭೂತಿಯಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತರನ್ನು ಶ್ಲಾಘಿಸಿದ ಶ್ರೀ ಮೋದಿ, ಕೋವಿಡ್ ಅವಧಿಯಲ್ಲಿ ಬಿಎಪಿಎಸ್  ದೇವಾಲಯಗಳು ಹೇಗೆ ಸೇವಾ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಉಕ್ರೇನ್‌ನಲ್ಲಿ ಯುದ್ಧದ ಹಗೆತನ ಹೆಚ್ಚಾದಾಗ ಉಕ್ರೇನ್‌ನಿಂದ ಪೋಲೆಂಡ್‌ಗೆ ಭಾರತೀಯರನ್ನು ಸ್ಥಳಾಂತರಿಸುವಾಗ ಸರ್ಕಾರ ಮತ್ತು ಜನರಿಗೆ ಬಿಎಪಿಎಸ್ ಕಾರ್ಯಕರ್ತರು ಹೇಗೆ ಸಹಾಯ ಮಾಡಿದರು ಎಂಬುದನ್ನು ಪ್ರಧಾನಿ ವಿವರಿಸಿದರು. ರಾತ್ರೋರಾತ್ರಿ ಯುರೋಪ್‌ನಾದ್ಯಂತ ಸಾವಿರಾರು ಬಿಎಪಿಎಸ್ ಕಾರ್ಯಕರ್ತರನ್ನು ಒಟ್ಟುಗೂಡಿಸುವ ಮತ್ತು ಪೋಲೆಂಡ್‌ಗೆ ತಲುಪುತ್ತಿರುವ ಹೆಚ್ಚಿನ ಸಂಖ್ಯೆಯ ಭಾರತೀಯರಿಗೆ ಸಹಾಯ ಮಾಡಲು ಅವರು ನಡೆಸಿದ ತ್ವರಿತ ಸಂಘಟನೆಯನ್ನು ಪ್ರಧಾನಿ ಶ್ಲಾಘಿಸಿದರು. ಬಿಎಪಿಎಸ್ ಸಂಘಟನೆಯ ಈ ಶಕ್ತಿಯನ್ನು ಎತ್ತಿ ಹಿಡಿದ ಶ್ರೀ ಮೋದಿ, ಜಾಗತಿಕ ಮಟ್ಟದಲ್ಲಿ ಮಾನವತೆಯ ಹಿತದೃಷ್ಟಿಯಿಂದ ಅವರ ಕೊಡುಗೆ ಶ್ಲಾಘನೀಯವಾಗಿದೆ. ಕಾರ್ಯಕಾರ್ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಎಲ್ಲಾ ಬಿಎಪಿಎಸ್ ಕಾರ್ಯಕರ್ತರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ ಪ್ರಧಾನ ಮಂತ್ರಿ, ಇಂದು ಬಿಎಪಿಎಸ್ ಕಾರ್ಯಕರ್ತರು ಪ್ರಪಂಚದಾದ್ಯಂತ ತಮ್ಮ ದಣಿವರಿಯದ ಸೇವೆಯ ಮೂಲಕ ಕೋಟಿಗಟ್ಟಲೆ ಜನರ ಜೀವನದಲ್ಲಿ ಬದಲಾವಣೆಯನ್ನು ತರುತ್ತಿದ್ದಾರೆ. ಅವರು ತಮ್ಮ ಸೇವೆಯಿಂದ ಕೋಟಿಗಟ್ಟಲೆ ಆತ್ಮಗಳನ್ನು ಮುಟ್ಟುತ್ತಿದ್ದಾರೆ, ದೂರದ ಸ್ಥಳಗಳಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯನ್ನು ಸಬಲೀಕರಣಗೊಳಿಸುತ್ತಿದ್ದಾರೆ. ಅವರು ಸ್ಫೂರ್ತಿ, ಆರಾಧನೆ ಮತ್ತು ಗೌರವಕ್ಕೆ ಅರ್ಹರಾಗಿದ್ದಾರೆ ಎಂದು ಶ್ರೀ ಮೋದಿ ಶ್ಲಾಘನೆ ವ್ಯಕ್ತಪಡಿಸಿದರು.

ಬಿಎಪಿಎಸ್ ನ ಕಾರ್ಯವು ವಿಶ್ವದಲ್ಲಿ ಭಾರತದ ಸಾಮರ್ಥ್ಯ ಮತ್ತು ಪ್ರಭಾವವನ್ನು ಬಲಪಡಿಸುತ್ತಿದೆ. ವಿಶ್ವದ 28 ದೇಶಗಳಲ್ಲಿ ಭಗವಾನ್ ಸ್ವಾಮಿ ನಾರಾಯಣನ 1800 ದೇವಾಲಯಗಳು ಮತ್ತು ಪ್ರಪಂಚದಾದ್ಯಂತ 21 ಸಾವಿರಕ್ಕೂ ಹೆಚ್ಚು ಆಧ್ಯಾತ್ಮಿಕ ಕೇಂದ್ರಗಳಿವೆ. ಅವರು ಈ ಎಲ್ಲಾ ಕೇಂದ್ರಗಳಲ್ಲಿ ಹಲವಾರು ಸೇವಾ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾರೆ, ಇದು ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ಗುರುತಾಗಿ ಇಡೀ ಜಗತ್ತಿಗೆ ಸಾಕ್ಷಿಯಾಗಿದೆ. ಬಿಎಪಿಎಸ್ ದೇವಾಲಯಗಳು ಭಾರತದ ಸಾಂಸ್ಕೃತಿಕ ಪ್ರತಿಬಿಂಬವಾಗಿವೆ, ಅವು ವಿಶ್ವದ ಅತ್ಯಂತ ಹಳೆಯ ಜೀವನ ಸಂಸ್ಕೃತಿಯ ಕೇಂದ್ರಗಳಾಗಿವೆ. ಕೆಲವು ತಿಂಗಳ ಹಿಂದೆ ಅಬುಧಾಬಿಯ ಸ್ವಾಮಿ ನಾರಾಯಣ ದೇವಸ್ಥಾನದ ಮಹಾಮಸ್ತಕಾಭಿಷೇಕ ಸಮಾರಂಭದಲ್ಲಿ ಭಾಗವಹಿಸುವ ಭಾಗ್ಯ ನನ್ನದಾಗಿತ್ತು, ಇದು ವಿಶ್ವಾದ್ಯಂತ ಚರ್ಚೆಯಾಯಿತು. ಇಡೀ ಜಗತ್ತು ಭಾರತದ ಆಧ್ಯಾತ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಗೆ ಸಾಕ್ಷಿಯಾಗಿದೆ. ಇಂತಹ ಪ್ರಯತ್ನಗಳ ಮೂಲಕ ಜಗತ್ತು ಭಾರತದ ಸಾಂಸ್ಕೃತಿಕ ವೈಭವ ಮತ್ತು ಮಾನವ ಔದಾರ್ಯದ ಬಗ್ಗೆ ತಿಳಿದುಕೊಂಡಿತು, ಈ ಎಲ್ಲಾ ಪ್ರಯತ್ನಗಳಿಗಾಗಿ ಎಲ್ಲಾ ಬಿಎಪಿಎಸ್ ಕಾರ್ಯಕರ್ತರನ್ನು ಅವರು ಅಭಿನಂದಿಸಿದರು.

 

ಸ್ವಾಮಿ ನಾರಾಯಣರ ತಪಸ್ಸಿನ ಫಲದಿಂದಾಗಿ ಕಾರ್ಮಿಕರ ಸಂಕಲ್ಪಗಳನ್ನು ಸುಲಭವಾಗಿ ಈಡೇರಿಸಲು ನೆರವಾಗಿದೆ. ಭಗವಾನ್ ಸ್ವಾಮಿ ನಾರಾಯಣ ಅವರು ಪ್ರತಿ ಜೀವಿ, ಪ್ರತಿ ನರಳುತ್ತಿರುವ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸಿದ್ದಾರೆ, ತಮ್ಮ ಜೀವನದ ಪ್ರತಿ ಕ್ಷಣವನ್ನು ಮಾನವ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದಾರೆ. ಭಗವಾನ್ ಸ್ವಾಮಿ ನಾರಾಯಣ ಅವರು ಸ್ಥಾಪಿಸಿದ ಮೌಲ್ಯಗಳನ್ನು ಬಿಎಪಿಎಸ್ ಮೂಲಕ ವಿಶ್ವಾದ್ಯಂತ ಹರಡಲಾಗುತ್ತಿದೆ. ಶ್ರೀ ಮೋದಿ ಅವರು ಬಿಎಪಿಎಸ್ ನ ಕೆಲಸ ಶ್ಲಾಘಿಸಲು ಕವಿತೆಯ ಕೆಲವು ಸಾಲುಗಳನ್ನು ಪಠಿಸಿದರು.

ತಮ್ಮ ಬಾಲ್ಯದಿಂದಲೂ ಬಿಎಪಿಎಸ್ ಮತ್ತು ಭಗವಾನ್ ಸ್ವಾಮಿ ನಾರಾಯಣರೊಂದಿಗೆ ಸಂಬಂಧ ಹೊಂದಿದ್ದು ನನ್ನ ಅದೃಷ್ಟ. ಪ್ರಮುಖ್ ಸ್ವಾಮಿ ಮಹಾರಾಜ್ ಅವರಿಂದ ಪಡೆದ ಪ್ರೀತಿ ಮತ್ತು ವಾತ್ಸಲ್ಯವೇ ನನ್ನ ಜೀವನದ ಬಂಡವಾಳವಾಗಿದೆ. ಪ್ರಮುಖ್ ಸ್ವಾಮೀಜಿ ಅವರೊಂದಿಗೆ ಹಲವು ವೈಯಕ್ತಿಕ ಘಟನೆಗಳು ನಡೆದಿದ್ದು, ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಗುಜರಾತ್‌ನ ಮುಖ್ಯಮಂತ್ರಿ ಮತ್ತು ನಂತರ ಭಾರತದ ಪ್ರಧಾನಿಯಾಗುವ ಮೊದಲು ತಮ್ಮ ಪ್ರಯಾಣದ ಮೂಲಕ ಪ್ರಮುಖ್ ಸ್ವಾಮೀಜಿ ಪ್ರತಿ ಕ್ಷಣವೂ ತನಗೆ ಮಾರ್ಗದರ್ಶನ ನೀಡಿದರು. ಸಾಬರಮತಿಗೆ ನರ್ಮದೆಯ ನೀರು ಬಂದಾಗ ಪರಮಪೂಜ್ಯ ಪ್ರಮುಖ್ ಸ್ವಾಮೀಜಿ ಅವರೇ ಇಳಿದು ಬಂದ ಐತಿಹಾಸಿಕ ಸಂದರ್ಭವನ್ನು ಶ್ರೀ ಮೋದಿ ಸ್ಮರಿಸಿದರು. ಸ್ವಾಮಿ ಜೀ ಅವರ ಮಾರ್ಗದರ್ಶನದಲ್ಲಿ ಸ್ವಾಮಿನಾರಾಯಣ ಮಹಾಮಂತ್ರ ಮಹೋತ್ಸವ ಮತ್ತು ಸ್ವಾಮಿ ನಾರಾಯಣ ಮಂತ್ರ ಲೇಖನ ಮಹೋತ್ಸವದ ಆಯೋಜನೆಯ ಅವಿಸ್ಮರಣೀಯ ಕ್ಷಣಗಳನ್ನು ಅವರು ನೆನಪಿಸಿಕೊಂಡರು. ಸ್ವಾಮೀಜಿ ಅವರ ಮೇಲಿನ ಆಧ್ಯಾತ್ಮಿಕ ವಾತ್ಸಲ್ಯವು ನನಗೆ ಮಗನಿಗೆ ಸಿಕ್ಕ ಬೆಚ್ಚಗಿನ ಭಾವನೆಯನ್ನು ನೀಡಿದೆ. ಜನಕಲ್ಯಾಣ ಕಾರ್ಯಗಳಲ್ಲಿ ನನಗೆ ಸದಾ ಪ್ರಮುಖ್ ಸ್ವಾಮಿ ಮಹಾರಾಜರ ಆಶೀರ್ವಾದ ದೊರೆಯುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

‘ಸೇವಾ ಪರಮ ಧರ್ಮ’, ಅಂದರೆ ಸೇವೆಯನ್ನು ಶ್ರೇಷ್ಠ ಧರ್ಮವೆಂದು ಪರಿಗಣಿಸಲಾಗುತ್ತದೆ ಎಂಬ ಸಂಸ್ಕೃತ ವಾಕ್ಯವನ್ನು ಪಠಿಸಿದ ಪ್ರಧಾನಿ, ಇವು ಕೇವಲ ಪದಗಳಲ್ಲಿ ವ್ಯಕ್ತವಾಗದೆ, ನಮ್ಮ ಜೀವನ ಮೌಲ್ಯಗಳು ಮತ್ತು ಸೇವೆಯು ಭಕ್ತಿ, ನಂಬಿಕೆ ಮತ್ತು ಆರಾಧನೆಗಿಂತ ಹೆಚ್ಚಿನ ಸ್ಥಾನ ಹೊಂದಿದೆ. ಸಾರ್ವಜನಿಕ ಸೇವೆಯು ಜನರ ಸೇವೆಗೆ ಸಮಾನವಾಗಿದೆ. ಸೇವೆ ಎಂದರೆ ಸ್ವಯಂ ಪ್ರಜ್ಞೆ ಇಲ್ಲದಿರುವುದು ಮತ್ತು ಅದು ಒಬ್ಬರ ಆಧ್ಯಾತ್ಮಿಕ ಪ್ರಯಾಣಕ್ಕೆ ನಿರ್ದೇಶನವನ್ನು ನೀಡುತ್ತದೆ, ಕಾಲಾನಂತರದಲ್ಲಿ ಅದನ್ನು ಬಲಪಡಿಸುತ್ತದೆ. ಲಕ್ಷಗಟ್ಟಲೆ ಕಾರ್ಮಿಕರನ್ನು ಒಂದು ಸಂಸ್ಥೆಯಾಗಿ ಸಂಘಟಿತ ರೂಪದಲ್ಲಿ ಈ ಸೇವೆ ಮಾಡಿದಾಗ, ಅದ್ಭುತ ಫಲಿತಾಂಶಗಳನ್ನು ಸಾಧಿಸಬಹುದು. ಅಂತಹ ಸಾಂಸ್ಥಿಕ ಸೇವೆಯು ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವ ಮತ್ತು ಸಮಾಜ ಮತ್ತು ದೇಶದ ಅನೇಕ ಅನಿಷ್ಟಗಳನ್ನು ನಿರ್ಮೂಲನೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಲಕ್ಷಗಟ್ಟಲೆ ಕಾರ್ಮಿಕರನ್ನು ಒಂದು ಸಾಮಾನ್ಯ ಉದ್ದೇಶದೊಂದಿಗೆ ಸಂಪರ್ಕಿಸಿದಾಗ ಅದು ದೇಶ ಮತ್ತು ಸಮಾಜದ ದೊಡ್ಡ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಇಂದು ದೇಶವು ಅಭಿವೃದ್ಧಿ ಹೊಂದಿದ ಭಾರತದ ಗುರಿಯೊಂದಿಗೆ ಮುನ್ನಡೆಯುತ್ತಿರುವಾಗ, ಸಹಜವಾಗಿಯೇ ಜನರು ಒಗ್ಗೂಡುತ್ತಿದ್ದಾರೆ ಮತ್ತು ದೊಡ್ಡದನ್ನು ಮಾಡುವ ಮನೋಭಾವವು ಪ್ರತಿಯೊಂದು ಕ್ಷೇತ್ರದಲ್ಲೂ ಕಾಣುತ್ತಿದೆ. ಸ್ವಚ್ಛ ಭಾರತ್ ಮಿಷನ್, ನೈಸರ್ಗಿಕ ಕೃಷಿ, ಪರಿಸರ ಜಾಗೃತಿ, ಹೆಣ್ಣು ಮಕ್ಕಳ ಶಿಕ್ಷಣ, ಬುಡಕಟ್ಟು ಕಲ್ಯಾಣದ ಬಗ್ಗೆ ಉದಾಹರಣೆಗಳನ್ನು ನೀಡಿದ ಶ್ರೀ ಮೋದಿ, ದೇಶದ ಜನರು ಮುಂದೆ ಬರುತ್ತಿದ್ದಾರೆ ಮತ್ತು ರಾಷ್ಟ್ರ ನಿರ್ಮಾಣದ ಪಯಣವನ್ನು ಮುನ್ನಡೆಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಎಲ್ಲ ಕಾರ್ಯಕರ್ತರು ಸಂಕಲ್ಪ ಕೈಗೊಂಡು ಸಮರ್ಪಣಾ ಭಾವದಿಂದ ಕೆಲಸ ಮಾಡಬೇಕು. ನೈಸರ್ಗಿಕ ಕೃಷಿ, ವಿವಿಧತೆಯಲ್ಲಿ ಏಕತೆಯ ಭಾವನೆಯನ್ನು ಹರಡುವುದು, ಯುವಕರನ್ನು ರಕ್ಷಿಸಲು ಮಾದಕ ವ್ಯಸನದ ವಿರುದ್ಧ ಹೋರಾಡುವುದು, ನದಿಗಳನ್ನು ಪುನರುಜ್ಜೀವನಗೊಳಿಸುವುದು ಅಥವಾ ಭೂಮಿಯ ಭವಿಷ್ಯ ಉಳಿಸಲು ಸುಸ್ಥಿರ ಜೀವನಶೈಲಿಯಂತಹ ಹಲವಾರು ಆಯ್ಕೆಗಳ ಮೂಲಕ ಕೆಲಸ ಮಾಡಲು ಅವರು ಯುವಕರನ್ನು ಒತ್ತಾಯಿಸಿದರು. ಭಾರತವು ಇಡೀ ಜಗತ್ತಿಗೆ ನೀಡಿದ ಮಿಷನ್ ಲೈಫ್ ದೃಷ್ಟಿಕೋನದ ಸತ್ಯಾಸತ್ಯತೆ ಮತ್ತು ಪರಿಣಾಮವನ್ನು ಸಾಬೀತುಪಡಿಸಲು ಶ್ರೀ ಮೋದಿ ಅವರು ಕಾರ್ಯಕರ್ತರನ್ನು ಒತ್ತಾಯಿಸಿದರು. ಏಕ್ ಪೆದ್ ಮಾ ಕೆ ನಾಮ್, ಫಿಟ್ ಇಂಡಿಯಾ, ವೋಕಲ್ ಫಾರ್ ಲೋಕಲ್, ಭಾರತದ ಅಭಿವೃದ್ಧಿಯನ್ನು ವೇಗಗೊಳಿಸುವ ಸಿರಿಧಾನ್ಯ ಅಭಿಯಾನಗಳನ್ನು ಸಕ್ರಿಯವಾಗಿ ಪ್ರಚಾರ ಮಾಡಬಹುದು ಎಂದು ಅವರು ಹೇಳಿದರು.

 

2025ರ ಜನವರಿಯಲ್ಲಿ ಆಯೋಜಿಸಲಾಗುವ 'ವಿಕಸಿತ ಭಾರತ ಯುವ ನಾಯಕರ ಸಂವಾದ'ದಲ್ಲಿ ಭಾರತದ ಯುವಜನರು ತಮ್ಮ ಆಲೋಚನೆಗಳನ್ನು ನೀಡುತ್ತಾರೆ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಈಡೇರಿಸಲು ತಮ್ಮ ಕೊಡುಗೆಯ ರೂಪುರೇಷೆಯನ್ನು ಸಿದ್ಧಪಡಿಸುತ್ತಾರೆ. ಎಲ್ಲಾ ಯುವ ಕಾರ್ಯಕರ್ತರು ಈ ಸಂವಾದದಲ್ಲಿ ಭಾಗವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಪೂಜ್ಯ ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಭಾರತದ ಕೌಟುಂಬಿಕ ಸಂಸ್ಕೃತಿಗೆ ವಿಶೇಷ ಒತ್ತು ನೀಡಿದ್ದರು ಎಂಬುದನ್ನು ಎತ್ತಿ ಹಿಡಿದ ಪ್ರಧಾನಮಂತ್ರಿ, 'ಘರ್ ಸಭಾ' ಮೂಲಕ ಸಮಾಜದಲ್ಲಿ ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಬಲಪಡಿಸಿದರು. ಈ ಅಭಿಯಾನಗಳನ್ನು ಮುಂದಕ್ಕೆ ಕೊಂಡೊಯ್ಯುವಂತೆ ಮೋದಿ ಅವರು ಕಾರ್ಯಕರ್ತರನ್ನು ಒತ್ತಾಯಿಸಿದರು. ಇಂದು ಭಾರತವು 2047ರ ಹೊತ್ತಿಗೆ ಅಭಿವೃದ್ಧಿಯ ಗುರಿಯತ್ತ ಕೆಲಸ ಮಾಡುತ್ತಿದೆ. ಮುಂದಿನ 25 ವರ್ಷಗಳ ದೇಶದ ಪ್ರಯಾಣವು ಪ್ರತಿಯೊಬ್ಬ ಬಿಎಪಿಎಸ್ ಕಾರ್ಯಕರ್ತನಿಗೂ ಮುಖ್ಯವಾಗಿದೆ. ಭಗವಾನ್ ಸ್ವಾಮಿ ನಾರಾಯಣರ ಆಶೀರ್ವಾದದೊಂದಿಗೆ, ಬಿಎಪಿಎಸ್ ಕಾರ್ಯಕರ್ತರ ಈ ಸೇವಾ ಅಭಿಯಾನವು ಯಾವುದೇ ಅಡೆತಡೆಯಿಲ್ಲದೆ ವೇಗದಲ್ಲಿ ಮುಂದುವರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಪ್ರಧಾನಿ ತಮ್ಮ ಭಾಷಣ ಮುಕ್ತಾಯಗೊಳಿಸಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's EV market to grow 12-fold to 30.4 mn units by 2032 under high-growth scenario: Report

Media Coverage

India's EV market to grow 12-fold to 30.4 mn units by 2032 under high-growth scenario: Report
NM on the go

Nm on the go

Always be the first to hear from the PM. Get the App Now!
...
Prime Minister pays homage to Thiru K. Kamaraj Ji on his birth anniversary
July 15, 2026

Prime Minister Shri Narendra Modi today, paid homage to Thiru K. Kamaraj Ji on his birth anniversary, remembering him as a stalwart of India's freedom movement and an exceptional public figure who dedicated his life to nation-building. Shri Modi said that Thiru K. Kamaraj Ji's unwavering commitment to education, inclusive development and the welfare of the underprivileged continues to inspire generations.

Shri Modi posted on X;

Remembering Thiru K. Kamaraj Ji on his birth anniversary. A stalwart of India’s freedom movement and an exceptional public figure, he dedicated his life to nation-building. His unwavering commitment to areas like education, inclusive development and the welfare of the underprivileged continues to guide generations.