India and Turkey have nurtured deep and historical links. Ties of culture and language connect our societies for hundreds of years: PM
India and Turkey present enormous opportunity to expand and deepen commercial linkages between our countries: PM Modi
The constantly evolving threat from terrorism is our shared worry: PM Modi to President Erdogan of Turkey
The nations of the world need to work as one to disrupt the terrorist networks and their financing, says PM Modi

ಘನತೆವೆತ್ತ ಅಧ್ಯಕ್ಷ ಎರ್ಡೋಗನ್ ಅವರೇ, ಗೌರವಾನ್ವಿತ ಪ್ರತಿನಿಧಿಗಳೇ,

ಮಾಧ್ಯಮದ ಸದಸ್ಯರೇ,

ಅಧ್ಯಕ್ಷ ಎರ್ಡೋಗನ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ.

ಘನತೆವೆತ್ತರೆ,

2015ರ ನವೆಂಬರ್ ನಲ್ಲಿ ಜಿ-20 ಶೃಂಗಸಭೆಗಾಗಿ ನಾನು ಟರ್ಕಿಗೆ ಭೇಟಿ ನೀಡಿದ್ದನ್ನು ಸದಾ ಸ್ಮರಿಸುತ್ತೇನೆ. ನಿಮ್ಮ ಈ ಭೇಟಿಯು ನಿಮ್ಮ ಸುಂದರ ದೇಶಕ್ಕಾ ಭೇಟಿ ನೀಡಿದ್ದ ವೇಳೆ ನಾನು ಅನುಭವಿಸಿದ ಸುನಾಮ ಮತ್ತು ಆತ್ಮೀಯತೆಯನ್ನು ತಮಗೂ ನೀಡಲು ಒಂದು ಅವಕಾಶ ಕಲ್ಪಿಸಿದೆ.

ಸ್ನೇಹಿತರೆ,,

ಭಾರತ ಮತ್ತು ಟರ್ಕಿಯ ಜನತೆ ಆಳವಾದ ಐತಿಹಾಸಿಕ ನಂಟನ್ನು ಹೊಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಬಾಂಧವ್ಯ ನಮ್ಮ ಸಮಾಜಗಳನ್ನು ನೂರಾರು ವರ್ಷಗಳಿಂದ ಬೆಸೆದಿದೆ.

ರೂಮಿ ಅವರು ಟರ್ಕಿಯಲ್ಲಿ ತಮ್ಮ ನೆಲೆ ಕಂಡುಕೊಂಡರೂ, ಅವರ ಪರಂಪರೆ ಭಾರತದಲ್ಲೂ ಮುಂದುವರಿದಿದೆ.

ಘನತೆವೆತ್ತ ಅಧ್ಯಕ್ಷ ಎರ್ಡೋಗನ್ ಅವರೇ, ಗೌರವಾನ್ವಿತ ಪ್ರತಿನಿಧಿಗಳೇ,

ಮಾಧ್ಯಮದ ಸದಸ್ಯರೇ,

ಅಧ್ಯಕ್ಷ ಎರ್ಡೋಗನ್ ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ.

ಘನತೆವೆತ್ತರೆ,

2015ರ ನವೆಂಬರ್ ನಲ್ಲಿ ಜಿ-20 ಶೃಂಗಸಭೆಗಾಗಿ ನಾನು ಟರ್ಕಿಗೆ ಭೇಟಿ ನೀಡಿದ್ದನ್ನು ಸದಾ ಸ್ಮರಿಸುತ್ತೇನೆ. ನಿಮ್ಮ ಈ ಭೇಟಿಯು ನಿಮ್ಮ ಸುಂದರ ದೇಶಕ್ಕಾ ಭೇಟಿ ನೀಡಿದ್ದ ವೇಳೆ ನಾನು ಅನುಭವಿಸಿದ ಸುನಾಮ ಮತ್ತು ಆತ್ಮೀಯತೆಯನ್ನು ತಮಗೂ ನೀಡಲು ಒಂದು ಅವಕಾಶ ಕಲ್ಪಿಸಿದೆ.

ಸ್ನೇಹಿತರೆ,,

ಭಾರತ ಮತ್ತು ಟರ್ಕಿಯ ಜನತೆ ಆಳವಾದ ಐತಿಹಾಸಿಕ ನಂಟನ್ನು ಹೊಂದಿದ್ದಾರೆ. ಭಾಷೆ ಮತ್ತು ಸಂಸ್ಕೃತಿಯ ಬಾಂಧವ್ಯ ನಮ್ಮ ಸಮಾಜಗಳನ್ನು ನೂರಾರು ವರ್ಷಗಳಿಂದ ಬೆಸೆದಿದೆ.

ರೂಮಿ ಅವರು ಟರ್ಕಿಯಲ್ಲಿ ತಮ್ಮ ನೆಲೆ ಕಂಡುಕೊಂಡರೂ, ಅವರ ಪರಂಪರೆ ಭಾರತದಲ್ಲೂ ಮುಂದುವರಿದಿದೆ.

ಸ್ನೇಹಿತರೆ, ನಮ್ಮ ಸಮಗ್ರ ಮಾತುಕತೆಯಲ್ಲಿಂದು, ಅಧ್ಯಕ್ಷ ಎರ್ಡೋಗನ್ ಮತ್ತು ನಾನು ನಮ್ಮ ಬಾಂಧವ್ಯದ ಸಂಪೂರ್ಣ ಶ್ರೇಣಿಯ ಬಗ್ಗೆ ಅದರಲ್ಲೂ ನಮ್ಮ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಚರ್ಚಿಸಿದ್ದೇವೆ. ನಮ್ಮ ವಲಯದ ಅಭಿವೃದ್ಧಿಯ ದೃಷ್ಟಿಕೋನಗಳ ಬಗ್ಗೆಯೂ ನಾವು ಮಾಹಿತಿ ವಿನಿಮಯ ಮಾಡಿಕೊಂಡಿದ್ದೇವೆ.

ಸ್ನೇಹಿತರೆ,

ಭಾರತ ಮತ್ತು ಟರ್ಕಿ ಎರಡೂ ಬೃಹತ್ ರಾಷ್ಟ್ರಗಳಾಗಿವೆ. ಅಧ್ಯಕ್ಷರು ಹಾಗೂ ನಾನು, ನಮ್ಮ ರಾಷ್ಟ್ರಗಳ ನಡುವೆ ವಾಣಿಜ್ಯ ನಂಟನ್ನು ಆಳಗೊಳಿಸುವ ಮತ್ತು ವಿಸ್ತರಿಸಬಹುದಾದ ಹೇರಳ ಅವಕಾಶಗಳ ಕುರಿತ ನಮ್ಮ ಆರ್ಥಿಕತೆಯ ಬಲವನ್ನು ಸ್ಪಷ್ಟಪಡಿಸಿದ್ದೇವೆ. ನಮ್ಮ ಎರಡೂ ಸರ್ಕಾರಗಳ ಮಟ್ಟದಲ್ಲಿ, ನಾವು ನಮ್ಮ ಭೂರಮೆಯಲ್ಲಿ ವಾಣಿಜ್ಯದ ಅವಕಾಶಗಳನ್ನು ಕಾರ್ಯತಂತ್ರಾತ್ಮಕ ಮತ್ತು ದೀರ್ಘ ಕಾಲೀನ ಮಾದರಿಯಲ್ಲಿ ನೋಡಬೇಕಾದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ. ನಮ್ಮ ದ್ವಿಪಕ್ಷೀಯ ವಾಣಿಜ್ಯದ ವಹಿವಾಟು ಸುಮಾರು 6 ಶತಕೋಟಿ ಡಾಲರ್ ಆಗಿದ್ದು, ಇದು ನಮ್ಮ ಆರ್ಥಿಕತೆಯ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುವುದಿಲ್ಲ. ಎರಡೂ ಕಡೆಯ ವಾಣಿಜ್ಯ ಮತ್ತು ಕೈಗಾರಿಕೆಗಳು ಇನ್ನೂ ಹೆಚ್ಚಿನದನ್ನು ಮಾಡಬಹುದಾಗಿದೆ.

.

ಅಧ್ಯಕ್ಷ ಎರ್ಡೋಗನ್ ಅವರೊಂದಿಗೆ ಬಂದಿರುವ ಉನ್ನತ ಮಟ್ಟದ ವಾಣಿಜ್ಯ ನಿಯೋಗದೊಂದಿಗೆ ಮತ್ತು ಭಾರತದ ಕೈಗಾರಿಕಾ ನಾಯಕರೊಂದಿಗೆ ನಾವಿಬ್ಬರೂ ಇಂದು ಬೆಳಗ್ಗೆ ಮಾತನಾಡಿದ್ದೇವೆ.

ತ್ವರಿತವಾಗಿ ಬೆಳೆಯುತ್ತಿರುವ ಭಾರತದಲ್ಲಿ ಸುಪ್ತವಾಗಿರುವ ವೈವಿಧ್ಯಮಯ ಮತ್ತು ವಿಶಿಷ್ಠ ಅವಕಾಶಗಳನ್ನು ವೇಗವಾಗಿ ಬಳಸಿಕೊಳ್ಳುವ ಕಾರ್ಯ ಟರ್ಕಿ ವಾಣಿಜ್ಯ ಕ್ಷೇತ್ರ ಮಾಡುತ್ತದೆ ಎಂಬ ವಿಶ್ವಾಸವಿದೆ. ಅಲ್ಲದೆ ಭಾರತದ ಮೂಲಸೌಕರ್ಯ ಅಗತ್ಯಗಳು, ಮತ್ತು ಅವುಗಳಲ್ಲಿ ನಾನು ಕೆಲವನ್ನು ಇಂದು ಬೆಳಗ್ಗೆ ವಾಣಿಜ್ಯ ಶೃಂಗದಲ್ಲಿ ಪಟ್ಟಿ ಮಾಡಿದ್ದೇನೆ ಮತ್ತು ಸ್ಮಾರ್ಟ್ ನಗರ ಅಭಿವೃದ್ಧಿ ಪಡಿಸುವ ನಮ್ಮ ನಿಲುವೂ ಟರ್ಕಿಯ ಸಾಮರ್ಥ್ಯದೊಂದಿಗೆ ಹೊಂದಿಕೆ ಆಗುತ್ತದೆ.
ಭಾರತದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಮತ್ತು ಯೋಜನೆಗಳೊಂದಿಗೆ ನಾವು ಟರ್ಕಿ ಕಂಪನಿಗಳ ಬಲವಾದ ಪಾಲುದಾರಿಕೆಯನ್ನು ಅವರದೇ ಸ್ವಂತ ಅಥವಾ ಭಾರತೀಯ ಕಂಪನಿಗಳ ಸಹಯೋಗಕ್ಕೆ ಉತ್ತೇಜನ ನೀಡುತ್ತೇವೆ.

ಇಂದು ಅಂಕಿತ ಹಾಕಲಾದ ಒಪ್ಪಂದಗಳು ಮತ್ತು ನಮ್ಮ ಮಾತುಕತೆಯ ಹೂರಣವು ನಮ್ಮ ಎರಡು ರಾಷ್ಟ್ರಗಳ ನಡುವಿನ ಸಾಂಸ್ಥಿಕ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ ಎಂಬುದರಲ್ಲಿ ಅನುಮಾನವೇ ಇಲ್ಲ.

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Domestic CV wholesales rise 27% in January to 99,544 units on GST-led demand

Media Coverage

Domestic CV wholesales rise 27% in January to 99,544 units on GST-led demand
NM on the go

Nm on the go

Always be the first to hear from the PM. Get the App Now!
...
Prime Minister Shares Sanskrit Subhashitam on the Importance of Protecting the Roots
February 25, 2026

The Prime Minister, Shri Narendra Modi, has shared a Sanskrit Subhashitam today, emphasizing the critical importance of protecting the fundamental roots of wisdom and daily discipline .The Subhashitam shared by the Prime Minister reads:

विप्रो वृक्षस्तस्य मूलं च सन्ध्या वेदाः शाखा धर्मकर्माणि पत्रम्।
तस्मान्मूलं यत्नतो रक्षणीयं छिन्ने मूले नैव शाखा न पत्रम्॥

"A wise person is like a tree. The root of that tree of knowledge is daily worship. The Vedas are its branches, and good deeds are its leaves. Therefore, the root must be carefully protected, because if the root is destroyed, neither the branches nor the leaves will survive."

The Prime Minister wrote on X;

विप्रो वृक्षस्तस्य मूलं च सन्ध्या वेदाः शाखा धर्मकर्माणि पत्रम्।
तस्मान्मूलं यत्नतो रक्षणीयं छिन्ने मूले नैव शाखा न पत्रम्॥