PM flags off the first #UDAN flight under the regional connectivity scheme
PM Modi lays Foundation Stone of a Hydro Engineering College at Bilaspur, Himal Pradesh
The lives of the middle class are being transformed and their aspirations are rising. If given the right chance, they can do wonders: PM Modi
Aviation sector in India is filled with immense opportunity: PM Modi

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರಿಂದು ಶಿಮ್ಲಾ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನ ಪ್ರಾದೇಶಿಕ ಸಂಪರ್ಕ ಯೋಜನೆ – ಉಡಾನ್ ಗೆ ಚಾಲನೆ ನೀಡಿದರು. ಈ ಯೋಜನೆಯಡಿ ಶಿಮ್ಲಾ, ನಾಂದೇಡ್ ಮತ್ತು ಕಡಪಾ ವಿಮಾನ ನಿಲ್ದಾಣಗಳಿಂದ ವಿಮಾನಗಳು ಸಂಚಾರ ಆರಂಭಿಸಿದವು

 

ಪ್ರಧಾನಮಂತ್ರಿಯವರು ಹಿಮಾಚಲ ಬಿಲಾಸಪುರದಲ್ಲಿ ಹೈಡ್ರೋ ಎಂಜಿನಿಯರಿಂಗ್ ಕಾಲೇಜಿಗೂ ಶಂಕುಸ್ಥಾಪನೆ ಅಂಗವಾಗಿ ವಿದ್ಯುನ್ಮಾನ ಫಲಕ ಅನಾವರಣ ಮಾಡಿದರು.

ಪ್ರಧಾನಮಂತ್ರಿಯವರು ಶಿಮ್ಲಾ ವಿಮಾನ ನಿಲ್ದಾಣದಲ್ಲಿ ನೆರೆದಿದ್ದವರನ್ನುದ್ದೇಶಿಸಿ ಹಾಗೂ ವಿಡಿಯೋ ಸಂಪರ್ಕದ ಮೂಲಕ ಕಡಪಾ ಮತ್ತು ನಾಂದೇಡ್ ಸಭಿಕರನ್ನುದ್ದೇಶಿಸಿ ಮಾತನಾಡಿದರು. 

ಮಧ್ಯಮವರ್ಗದವರ ಜೀವನದಲ್ಲಿ ಪರಿವರ್ತನೆ ಆಗಿದೆ, ಮತ್ತು ಅವರ ಆಶೋತ್ತರಗಳೂ ಹೆಚ್ಚಿವೆ ಎಂದು ಅವರು ಹೇಳಿದರು. ಅವರಿಗೆ ಸರಿಯಾದ ಅವಕಾಶಗಳನ್ನು ನೀಡಿದರೆ ಅವರು ಅದ್ಭುತಗಳನ್ನು ಮಾಡುತ್ತಾರೆ ಎಂದರು. ಭಾರತದಲ್ಲಿನ ವಾಯುಯಾನ ವಲಯ ಅವಕಾಶಗಳಿಂದ ತುಂಬಿದೆ ಎಂದೂ ಅವರು ಹೇಳಿದರು. ಉಡೇ ದೇಶ್ ಕ ಆಮ್ ನಾಗರಿಕ್ – ಉಡಾನ್ (ದೇಶದ ಸಾಮಾನ್ಯ ನಾಗರಿಕರೆ ವಿಮಾನ ಯಾನ ಮಾಡಿ) ವಿಶ್ಲೇಷಣೆ ಮಾಡಿದ ಅವರು, ಹಿಂದೆ ವಿಮಾನ ಯಾನ ಕೆಲವೇ ಆಯ್ದ ವರ್ಗಕ್ಕೆ ಸೀಮಿತವಾಗಿತ್ತು, ಆದರೆ ಆ ಸ್ಥಿತಿ ಈಗ ಬದಲಾಗಿದೆ. ಹೊಸ ನಾಗರಿಕ ವಿಮಾನಯಾನ ನೀತಿ ಭಾರತದ ಜನರ ಆಶೋತ್ತರಗಳನ್ನು ಈಡೇರಿಸಲಿದೆ ಎಂದರು. ಎರಡನೇ ದರ್ಜೆ ಮತ್ತು 3ನೇ ದರ್ಜೆ ನಗರಗಳು ಪ್ರಗತಿಯ ಎಂಜಿನ್ ಗಳಾಗುತ್ತಿವೆ, ಮತ್ತು ಅವುಗಳ ನಡುವೆ ವಾಯುಯಾನ ಸಂಪರ್ಕ ಹೆಚ್ಚಿಸುವುದು ಲಾಭದಾಯಕವಾಗಿದೆ ಎಂದರು. ಉಡಾನ್ ಯೋಜನೆ ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ನೆರವಾಗಲಿದೆ ಎಂದೂ ತಿಳಿಸಿದರು.

Click here to read full text speech

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s economy resilient despite West Asia headwinds

Media Coverage

India’s economy resilient despite West Asia headwinds
NM on the go

Nm on the go

Always be the first to hear from the PM. Get the App Now!
...
Governor of Nagaland meets Prime Minister
March 24, 2026