30 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರಿಂದ ಅರ್ಹತೆ ಆಧಾರಿತ, ಬಹು ಹಂತದ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 3000 ಯುವ ನಾಯಕರೊಂದಿಗೆ ಪ್ರಧಾನಮಂತ್ರಿ ಸಂವಾದ ನಡೆಸಲಿದ್ದಾರೆ
ಭಾರತದ ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಲು ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಪ್ರತಿಬಿಂಬಿಸುವ ಪ್ರಸ್ತುತಿಗಳನ್ನು ಯುವ ನಾಯಕರು ಪ್ರಧಾನಮಂತ್ರಿ ಅವರಿಗೆ ನೀಡಲಿದ್ದಾರೆ
ಒಂದು ವಿಶಿಷ್ಟ ಉಪಕ್ರಮದಲ್ಲಿ, ಯುವಕರು ತಮ್ಮ ಆಲೋಚನೆಗಳು, ಅನುಭವಗಳು ಮತ್ತು ಆಕಾಂಕ್ಷೆಗಳನ್ನು ನೇರವಾಗಿ ಪ್ರಧಾನಮಂತ್ರಿಯವರೊಂದಿಗೆ ಊಟದ ಸಮಯದಲ್ಲಿ ಹಂಚಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ

ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಸ್ಮರಣಾರ್ಥ ರಾಷ್ಟ್ರೀಯ ಯುವ ದಿನದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 12ರಂದು ಬೆಳಗ್ಗೆ 10 ಗಂಟೆಗೆ ನವದೆಹಲಿಯ ಭಾರತ ಮಂಟಪದಲ್ಲಿ ವಿಕಸಿತ ಭಾರತ ಯುವ ನಾಯಕರ ಸಂವಾದ 2025ರಲ್ಲಿ ಭಾಗವಹಿಸಲಿದ್ದಾರೆ. ಅವರು ಭಾರತದಾದ್ಯಂತದ 3,000 ಕ್ರಿಯಾತ್ಮಕ ಯುವ ನಾಯಕರೊಂದಿಗೆ ತೊಡಗಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಭಿಕರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.

ವಿಕಸಿತ ಭಾರತ ಯುವ ನಾಯಕರ ಸಂವಾದವು ರಾಷ್ಟ್ರೀಯ ಯುವ ಉತ್ಸವವನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸುವ 25 ವರ್ಷಗಳ ಸಂಪ್ರದಾಯವನ್ನು ಮುರಿಯುವ ಗುರಿಯನ್ನು ಹೊಂದಿದೆ. ಇದು ರಾಜಕೀಯ ಸಂಬಂಧಗಳಿಲ್ಲದೆ 1 ಲಕ್ಷ ಯುವಕರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ಮತ್ತು ವಿಕಸಿತ ಭಾರತಕ್ಕಾಗಿ ಅವರ ಆಲೋಚನೆಗಳನ್ನು ನನಸಾಗಿಸಲು ರಾಷ್ಟ್ರೀಯ ವೇದಿಕೆಯನ್ನು ಒದಗಿಸಲು ಪ್ರಧಾನಿಯವರ ಸ್ವಾತಂತ್ರ್ಯ ದಿನಾಚರಣೆಯ ಕರೆಯೊಂದಿಗೆ ಹೊಂದಿಕೆಯಾಗುತ್ತದೆ. ಇದಕ್ಕೆ ಅನುಗುಣವಾಗಿ, ಈ ರಾಷ್ಟ್ರೀಯ ಯುವ ದಿನದಂದು ಪ್ರಧಾನಮಂತ್ರಿ ಅವರು ರಾಷ್ಟ್ರದ ಭವಿಷ್ಯದ ನಾಯಕರನ್ನು ಪ್ರೇರೇಪಿಸಲು, ಪ್ರೇರೇಪಿಸಲು ಮತ್ತು ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾದ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸಲಿದ್ದಾರೆ. ನವೀನ ಯುವ ನಾಯಕರು ಪ್ರಧಾನಮಂತ್ರಿ ಅವರ ಮುಂದೆ ಭಾರತದ ಅಭಿವೃದ್ಧಿಗೆ ನಿರ್ಣಾಯಕವಾದ ಹತ್ತು ವಿಷಯಾಧಾರಿತ ಕ್ಷೇತ್ರಗಳನ್ನು ಪ್ರತಿನಿಧಿಸುವ ಹತ್ತು ಪವರ್ ಪಾಯಿಂಟ್ ಪ್ರಸ್ತುತಿಗಳನ್ನು ನೀಡಲಿದ್ದಾರೆ. ಈ ಪ್ರಸ್ತುತಿಗಳು ಭಾರತದ ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಲು ಯುವ ನಾಯಕರು ಪ್ರಸ್ತಾಪಿಸಿದ ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಪ್ರತಿಬಿಂಬಿಸುತ್ತವೆ.

ಪ್ರಧಾನಮಂತ್ರಿ ಅವರು ಹತ್ತು ವಿಷಯಗಳ ಮೇಲೆ ಭಾಗವಹಿಸುವವರು ಬರೆದ ಅತ್ಯುತ್ತಮ ಪ್ರಬಂಧಗಳ ಸಂಕಲನವನ್ನೂ ಬಿಡುಗಡೆ ಮಾಡಲಿದ್ದಾರೆ. ಈ ವಿಷಯಗಳು ತಂತ್ರಜ್ಞಾನ, ಸುಸ್ಥಿರತೆ, ಮಹಿಳಾ ಸಬಲೀಕರಣ, ಉತ್ಪಾದನೆ ಮತ್ತು ಕೃಷಿಯಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿವೆ.

ಒಂದು ವಿಶಿಷ್ಟ ಸನ್ನಿವೇಶದಲ್ಲಿ, ಪ್ರಧಾನಮಂತ್ರಿ ಅವರು ಯುವ ನಾಯಕರೊಂದಿಗೆ ಔತಣ ಕೂಟಕ್ಕೆ ಸೇರಲಿದ್ದು, ತಮ್ಮ ಆಲೋಚನೆಗಳು, ಅನುಭವಗಳು ಮತ್ತು ಆಕಾಂಕ್ಷೆಗಳನ್ನು ನೇರವಾಗಿ ತಮ್ಮೊಂದಿಗೆ ಹಂಚಿಕೊಳ್ಳಲು ಅವಕಾಶವನ್ನು ಒದಗಿಸಲಿದ್ದಾರೆ. ಈ ವೈಯಕ್ತಿಕ ಸಂವಾದವು ಆಡಳಿತ ಮತ್ತು ಯುವ ಆಕಾಂಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ. ಭಾಗವಹಿಸುವವರಲ್ಲಿ ಮಾಲೀಕತ್ವ ಮತ್ತು ಜವಾಬ್ದಾರಿಯ ಆಳವಾದ ಪ್ರಜ್ಞೆಯನ್ನು ಬೆಳೆಸುತ್ತದೆ.

ಜನವರಿ 11ರಿಂದ ಪ್ರಾರಂಭವಾಗುವ ಸಂವಾದದ ಸಮಯದಲ್ಲಿ, ಯುವ ನಾಯಕರು ಸ್ಪರ್ಧೆಗಳು, ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಮತ್ತು ವಿಷಯಾಧಾರಿತ ಪ್ರಸ್ತುತಿಗಳಲ್ಲಿ ತೊಡಗಲಿದ್ದಾರೆ. ಇದು ಮಾರ್ಗದರ್ಶಕರು ಮತ್ತು ಡೊಮೇನ್ ತಜ್ಞರ ನೇತೃತ್ವದ ವಿಷಯಗಳ ಬಗ್ಗೆ ಚರ್ಚೆಗಳನ್ನು ಸಹ ಒಳಗೊಂಡಿರುತ್ತದೆ. ಇದು ಭಾರತದ ಕಲಾತ್ಮಕ ಪರಂಪರೆಯನ್ನು ಪ್ರದರ್ಶಿಸುವ ಸಾಂಸ್ಕೃತಿಕ ಪ್ರದರ್ಶನಗಳಿಗೆ ಸಾಕ್ಷಿಯಾಗಲಿದೆ ಮತ್ತು ಅದರ ಆಧುನಿಕ ಪ್ರಗತಿಯನ್ನು ಸಂಕೇತಿಸುತ್ತದೆ.

ದೇಶಾದ್ಯಂತದ ಅತ್ಯಂತ ಪ್ರೇರೇಪಿತ ಮತ್ತು ಕ್ರಿಯಾತ್ಮಕ ಯುವ ಧ್ವನಿಗಳನ್ನು ಗುರುತಿಸಲು ಮತ್ತು ಪ್ರದರ್ಶಿಸಲು ನಿಖರವಾಗಿ ರಚಿಸಿದ, ಅರ್ಹತೆ ಆಧಾರಿತ ಬಹು ಹಂತದ ಆಯ್ಕೆ ಪ್ರಕ್ರಿಯೆಯಾದ ವಿಕಸಿತ ಭಾರತ್ ಚಾಲೆಂಜ್ ಮೂಲಕ ವಿಕಸಿತ ಭಾರತ ಯುವ ನಾಯಕರ ಸಂವಾದದಲ್ಲಿ ಭಾಗವಹಿಸಲು 3,000 ಕ್ರಿಯಾತ್ಮಕ ಮತ್ತು ಪ್ರೇರಿತ ಯುವಕರನ್ನು ಆಯ್ಕೆ ಮಾಡಲಾಗಿದೆ. ಇದು 15 ರಿಂದ 29 ವರ್ಷ ವಯಸ್ಸಿನ ಭಾಗವಹಿಸುವವರೊಂದಿಗೆ ಮೂರು ಹಂತಗಳನ್ನು ಒಳಗೊಂಡಿತ್ತು. ಮೊದಲ ಹಂತವಾದ ವಿಕಸಿತ ಭಾರತ್ ರಸಪ್ರಶ್ನೆಯನ್ನು ಎಲ್ಲಾ ರಾಜ್ಯಗಳ ಯುವಕರಿಗಾಗಿ 12 ಭಾಷೆಗಳಲ್ಲಿ ನಡೆಸಲಾಯಿತು ಮತ್ತು ಸುಮಾರು 30 ಲಕ್ಷ ಯುವ ಮನಸ್ಸುಗಳು ಭಾಗವಹಿಸಿದ್ದವು. ಅರ್ಹ ರಸಪ್ರಶ್ನೆ ಸ್ಪರ್ಧಿಗಳು 2ನೇ ಹಂತ, ಪ್ರಬಂಧ ಸುತ್ತಿಗೆ ಪ್ರಗತಿ ಸಾಧಿಸಿದರು, ಅಲ್ಲಿ ಅವರು "ವಿಕಸಿತ ಭಾರತ" ನ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಿರ್ಣಾಯಕವಾದ ಹತ್ತು ಪ್ರಮುಖ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಿದರು, ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಪ್ರಬಂಧಗಳನ್ನು ಸಲ್ಲಿಸಲಾಯಿತು. 3ನೇ ಹಂತ, ರಾಜ್ಯ ಸುತ್ತುಗಳಲ್ಲಿ, ಪ್ರತಿ ವಿಷಯಕ್ಕೆ 25 ಅಭ್ಯರ್ಥಿಗಳು ಕಠಿಣ ವೈಯಕ್ತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಮುನ್ನಡೆದರು. ಪ್ರತಿ ರಾಜ್ಯವು ಪ್ರತಿ ಟ್ರ್ಯಾಕ್ ನಿಂದ ತನ್ನ ಅಗ್ರ ಮೂರು ಸ್ಪರ್ಧಿಗಳನ್ನು ಗುರುತಿಸಿತು, ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕ್ರಿಯಾತ್ಮಕ ತಂಡಗಳನ್ನು ರಚಿಸಿತು.

ವಿಕಸಿತ ಭಾರತ ಚಾಲೆಂಜ್ ಟ್ರ್ಯಾಕ್ ನಿಂದ 1,500 ಸ್ಪರ್ಧಿಗಳು, ರಾಜ್ಯ ಚಾಂಪಿಯನ್ ಷಿಪ್ ನ ಅಗ್ರ 500 ತಂಡಗಳನ್ನು ಪ್ರತಿನಿಧಿಸುತ್ತಾರೆ; ರಾಜ್ಯ ಮಟ್ಟದ ಯುವ ಉತ್ಸವಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ನಾವೀನ್ಯತೆ ಕುರಿತ ಪ್ರದರ್ಶನಗಳ ಮೂಲಕ ಸಾಂಪ್ರದಾಯಿಕ ಟ್ರ್ಯಾಕ್ ನಿಂದ 1,000 ಭಾಗವಹಿಸುವವರನ್ನು ಆಯ್ಕೆ ಮಾಡಲಾಗಿದೆ; ಮತ್ತು ವಿವಿಧ ಕ್ಷೇತ್ರಗಳಲ್ಲಿ ತಮ್ಮ ಅದ್ಭುತ ಕೊಡುಗೆಗಳಿಗಾಗಿ ಆಹ್ವಾನಿಸಲಾದ 500 ಪಾಥ್ ಬ್ರೇಕರ್ ಗಳು ಸಂವಾದದಲ್ಲಿ ಭಾಗವಹಿಸಲಿದ್ದಾರೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India's yuva shakti continues to make global impact: PM Modi

Media Coverage

India's yuva shakti continues to make global impact: PM Modi
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam applauding the courage and perseverance of India's Youth
July 20, 2026

The Prime Minister, Shri Narendra Modi, shared a Sanskrit Subhashitam applauding the courage and perseverance of India's Youth:

"प्राप्यापदं न व्यथते कदाचिदुद्योगमन्विच्छति चाप्रमत्तः।

दुःखं च काले सहते महात्मा धुरन्धरस्तस्य जिताः सपत्नाः॥"

Shri Modi said that our youth is achieving historic success through their courage, self-confidence, and relentless hard work, and this is the greatest strength of a rapidly developing India.

The Prime Minister posted on X:

आज हमारे युवा साथी धैर्य, आत्मविश्वास और अथक परिश्रम से ऐतिहासिक सफलता हासिल कर रहे हैं। यही विकसित हो रहे भारत की सबसे बड़ी ताकत है।

प्राप्यापदं न व्यथते कदाचिदुद्योगमन्विच्छति चाप्रमत्तः।

दुःखं च काले सहते महात्मा धुरन्धरस्तस्य जिताः सपत्नाः॥