CM speech At the Inaugural Function of Vibrant Gujarat Global Summit- 2013

Published By : Admin | January 11, 2013 | 13:47 IST

Speech of Mr. Narendra Modi

Chief Minister, Gujarat

At the Inaugural Function of

Vibrant Gujarat Global Summit- 2013

11th January, 2013

Mahatma Mandir, Gandhinagar

 

Ladies and Gentlemen!

I stand here humbly to welcome this large and global gathering. Friends! This land where you are seated is the Land of Mahatma Gandhi. Gujarat is the land which has given leadership to the entire Nation in several areas including our freedom struggle and the white revolution. The timing of this summit is also auspicious because it coincides with the 150th Birth Anniversary of Swami Vivekananda. We in India believe that the whole world is a family, what we call ‘Vasudhaiva Kutumbakam’. This belief is even more strongly displayed in the thought and action of the people of Gujarat. They went across the seven seas, centuries ago. Once upon a time, Gujarat was the gateway to the Globe from India. Now it is becoming the Global Gate way to India. And thus, Gujarat welcomes you with open arms to this summit which has grown far beyond the boundaries of Gujarat.

From a small beginning in 2003, this summit has evolved into a a truly international affair. This has happened, primarily because of the support and trust of  investors and entrepreneurs like you. In addition to growing big, this event is an example of the evolution and institutionalization of a good intention. The institutionalization has gone to the extent that though the last quarter of 2012 was a period of elections in Gujarat, we decided to hold it on its regular schedule. In spite of several constraints related to outreach, because of Election Code of Conduct, you can see such a huge turnout. I take this opportunity to thank all those who have supported the Vibrant Gujarat initiative. I request each one of you to spend some time to see its various facets before you leave the venue.

I would particularly recommend seeing the Exhibition which is the biggest ever in India. More than a thousand national and international companies are displaying their products and processes. I also encourage you to take advantage of the presence of a large number of players from all over India. The officials of the Gujarat Government have particularly lined up a number of B2B and B2G meetings on the three days of the Summit. Before leaving Gujarat, you should also see our International Kite Festival on 13th January at Ahmedabad.

On this occasion, I would like to particularly thank the Government of Japan and the Government of Canada for their continued partnership with this event. I also thank other partners of the event, particularly CII, JETRO, USIBC, UKIBC, AIBC and the ICCC.

It is my privilege to welcome His Excellency the Vice Minister of METI of Japan, His Excellency the Ambassador of Japan, His Excellency the High Commissioner of Canada, His Excellency the High Commissioner of Britain, His Excellency the Vice Governor of Yunnan Province of China, His Excellency the Vice- Governor of Astrakhan, His Excellency the Ambassador of Denmark, and other Excellencies, members and representatives of the foreign Diplomatic Missions in India who are present here. I warmly welcome Mr. Patrick Brown. I also welcome Hon. Deputy Chief Minister of Punjab. I welcome Hon. Ministers from other States. I particularly welcome all the dignitaries sitting on the Dias and the captains of Indian Industry who are the encouraging face of this event.

I welcome everyone present here. I extend a warm welcome to all the national and international participants, delegates and companies. I also welcome the officials of the Government of India and those who have come from various States of India. I welcome the members of national and international media. A record number of Indian and Foreign companies have joined this event as participants or exhibitors. I welcome all of them. Many Countries and almost all Indian States have decided to make use of this forum and are holding their own seminars. I hope your time spent here will be fruitful and your stay here will be comfortable.

Friends! We are meeting at a very crucial stage of our social and economic life.  Last few years have not been very encouraging for the global economy. This has had its impact on the livelihoods and social lives of the people across the globe. Even the fastest growing economies of the world have experienced a slowdown. This situation has impacted India also and the growth of our economy has slowed down recently. It will be a great service to the global community if this forum and platform can display the commitment for betterment of economy and betterment of the lives affected. This platform also provides the scope to debate and evolve mechanisms which make our economies sustainable and dependable. All of us want a solution to this. But none of us are individually competent to find it. Collectively, we can and we must. Thus, the first and foremost expectation from this Summit is send a positive message for the Global Economy.

Despite the global slowdown, our growth rates in Gujarat have not been impacted very adversely. We have acquired an element of resilience in the economy. It stands equally on all three important pillars - Manufacturing, Services and Agriculture. We have thus not only been able to sail through, but have maintained 10% plus growth rate in all the three sectors. Our economy has sustained itself and sustained our jobs and livelihoods.  In fact, many of our entrepreneurs have used this time for internal corrections. You will be happy to know that due to these corrections, we were able to withstand the shocks without any labour retrenchment. Even more satisfying is the fact that the managements and labor force have managed the situation in a collaborative manner. This is what Gujarat is known for. Togetherness is our biggest strength. We know how to get together. We know how to stand together. And we know how to grow together.

Friends! Today’s world is characterized by two phenomena- the power of Technology and the power of Information. We in India are further fascinated by the power of our Youth. We have to harness this and to put it to our advantage. We, in Gujarat, have specifically made efforts to use all these three drivers of the modern world. I am a firm believer in three pillars of progress in the modern world: Skill, Speed and Scale. We are using technology to bring in speed in Governance and in execution of programmes. We are focusing on skill development of our youth in a big way. We are also visualizing projects which are innovative, ambitious and futuristic. I firmly believe that this century is India’s century. And to be realistically so, it has to be the century of the Indian Youth. We have drawn elaborate plans for Youth Led Development. Women are going to be equal and active partners in this process. Swami Vivekanand said, “India will be raised, not with the power of the flesh, but with the power of the spirit”. I am sure; we will revive the whole of India with our faith in the power of youth and its actualization.

Gujarat has evolved and implemented many innovative and far-reaching solutions to India’s old and historic problems. Whether it be water conservation or electrifying rural areas. Whether it be ensuring institutional deliveries or enrolling the girl child in education. We have ensured that such problems are solved for good. We have ensured that they are solved with people’s participation. We have also ensured that the solutions become sustainable. We also ensure that they lead to measureable outcomes and visible change for the individual and society. Many of these projects have been recognized at National and International levels. Many are being replicated by other States of India. I say here with utmost sincerity that the development model of Gujarat provides numerous insights for the developing world. We have created a model which makes use of local resources and local talent.  At the same time, it offers solutions which are right and relevant in the global perspective.

Friends! Our model of development has brought smiles on millions of faces. That is how I am with you in this event today. Making use of this forum, once again, I want to thank the people of Gujarat and everyone else for giving me the opportunity to serve them. I am overwhelmed by the fact that all of you had so much confidence in this event and its continuity, that you had declared your support in advance. This confidence of people from within and outside Gujarat is a confidence in positivity. However, this confidence of people casts a lot of responsibility on our shoulders. The expectations are high and they are rising. My Government and I are not only committed to fulfill these expectations but to do more than expected. The good thing about the whole situation is that what we promised during the elections is only a continuation and expansion of what we had already planned. Our plans have always been futuristic, robust and responsible. In a nut-shell, we have assured our people that we sincerely want to benchmark our infrastructure, our human development, our technologies and our processes with the best of the world. We have completed our first phase of development, and now we are ushering in the second phase-a more robust, more dynamic, and more modernized Gujarat.

I would like to give you some examples of what constitutes our global vision. Our per capita consumption of electricity is double the average of India but two third of the average of the developed world. We have committed to make it on par with the developed world. Similarly, we have said that cooking gas will be made available to all urban households through pipeline. We have assured our people to construct five million new houses. We have committed to covering even the remaining 30% of the households with piped water. We have resolved that we will enhance the income of our farmers manifold by scientific agri-practices and agro-processing. We have already provided round the clock power and broadband connectivity up to the village level. Now, we have promised Wi-Fi connectivity across the State. We have undertaken to modernize our industrial clusters and make our small and cottage industries stronger. Simultaneously, we will be setting up world class Investment Regions and Smart Cities, world class Ports, Road, Rail, Logistics, Health, Education, Transport, Sanitation, Environmental and Tourism infrastructure. Maximum value addition on natural resources and local products is going to be our new focus. We have already undertaken gigantic initiatives in Solar and Wind Energy. We are already the biggest creator of jobs in the country. Our new initiatives will lead to creation of more than three million additional jobs. And to prepare the human resources, we have committed to create new age Training and Skill Development Institutions.

Friends! Gujarat has always been a high potential location and a rewarding economy. You will find an opportunity in every sector of the economy. You will also find pro-active policy provisions and hand-holding mechanisms to support you. Very recently, a survey has been conducted on the economic freedom of Indian States. I am happy to say that Gujarat has ranked first. I welcome you all with your ideas, initiatives, innovations and entrepreneurship. I invite and encourage you to build your homes and brighten your hopes in Gujarat. I urge you to make Gujarat a productive field for the seeds of your dreams.

Friends, hard core financial investments will always be a desired phenomenon for the economy. However, we have deliberately added newer areas in the agenda of this Summit. This time, our focus is on knowledge, technology and innovation. We want our youth and our SMEs to particularly benefit from this. The emphasis is on R&D, knowledge sharing and building cross-cultural partnerships. We want this summit to become a Bridge of Technology. We want this summit to become an Incubator for innovators and entrepreneurs. We want it to become a global University preparing bright men and women. We want this Summit to be a light house for sustainable development. There cannot be a better place than Mahatma Mandir for this purpose, dedicated to the memory of Mahatma Gandhi. There is no one better than Gandhi to guide us on how to use natural resources for our wellbeing, while simultaneously nurturing and harnessing them.

Friends! History has repeatedly shown us that the economic models based on exploitation will not work. There was a time when exploitation of labour was an issue. We tried to find solutions to it. Today, exploitation of nature and its resources is a burning issue. I will go a step further. Even exploitation of markets is not going to help. Unless the people living in those markets are empowered; unless the local capacities to produce are improved; unless the people are made partners in progress; their purchasing power would not sustain. Only such partnerships will be able to offer the sustainability we desire in our economic, social and personal lives. So, I reiterate that this event is not just about investments. It is not just about projects which give financial returns. It is about injecting positivity in the economic environment. It is about inducting togetherness in our socio-economic activities. It is about bringing Global and Local inclusiveness in our economic processes.

I welcome you once again to the Summit. I welcome you to Gujarat. I will be happy to work with you in the march of your journey. I will be equally happy to see the realization of your dreams. I will be happier to see them realize at the earliest.

Thank You!   

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Qatar launches new UPI route to send money to India

Media Coverage

Qatar launches new UPI route to send money to India
NM on the go

Nm on the go

Always be the first to hear from the PM. Get the App Now!
...
80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಉದ್ದೇಶಿಸಿ ಕೆಂಪುಕೋಟೆಯ ಮೇಲಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
August 15, 2026
ಇಂದು ನಮ್ಮ ಕನಸುಗಳು, ಸಂಕಲ್ಪ ಮತ್ತು ಶಕ್ತಿಯೊಂದಿಗೆ ಮುನ್ನಡೆಯುವ ದಿನ: ಪ್ರಧಾನಮಂತ್ರಿ
ಇಂದು, ದೃಢ ಸಂಕಲ್ಪದಿಂದ, ಭಾರತವು ಬಹಳ ದೊಡ್ಡ ಕನಸನ್ನು ಕಂಡಿದೆ; ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, 2047ರ ವೇಳೆಗೆ ನಾವು ವಿಕಸಿತ ಭಾರತವನ್ನು ನಿರ್ಮಿಸುತ್ತೇವೆ ಎಂಬುದು ಆ ಕನಸು: ಪ್ರಧಾನಮಂತ್ರಿ
ನಾವು ನಮ್ಮ ಮೇಲೆ ನಂಬಿಕೆ ಇಡಬೇಕು ಮತ್ತು ಆತ್ಮನಿರ್ಭರ ಭಾರತ ನಿರ್ಮಾಣದಲ್ಲಿ ಹೆಮ್ಮೆ ಪಡಬೇಕು: ಪ್ರಧಾನಮಂತ್ರಿ
ಒಂದು ಕಾಲದಲ್ಲಿ 'ಹೋಗದಿರುವ ಕ್ಷೇತ್ರಗಳು' ಎಂದು ಪರಿಗಣಿಸಲ್ಪಟ್ಟ ಕ್ಷೇತ್ರಗಳು ಈಗ 'ಮುಂದೆ ಹೋಗುವ ಕ್ಷೇತ್ರಗಳು' ಆಗಿವೆ: ಪ್ರಧಾನಮಂತ್ರಿ
ಪ್ರತಿಯೊಬ್ಬ ಭಾರತೀಯರೂ ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್ ಸ್ಫೂರ್ತಿಯನ್ನು ಸ್ವೀಕರಿಸುತ್ತಿದ್ದಾರೆ: ಪ್ರಧಾನಮಂತ್ರಿ
ಭಾರತವು ಸ್ಥಿರ ರಾಜಕೀಯ ಜನಾದೇಶ, ಸ್ಥಿರ ಸರ್ಕಾರ, ರೋಮಾಂಚಕ ಪ್ರಜಾಪ್ರಭುತ್ವ, ಬಲವಾದ ನ್ಯಾಯಾಂಗ ವ್ಯವಸ್ಥೆ ಮತ್ತು ನಮ್ಮೆಲ್ಲರಿಗೂ ಮಾರ್ಗದರ್ಶನ ನೀಡುವ ಸಂವಿಧಾನವನ್ನು ಹೊಂದಿದೆ: ಪ್ರಧಾನಮಂತ್ರಿ
ನಾವು ಮೂರು ವಿಷಯಗಳ ಮೇಲೆ ಗಮನ ಹರಿಸಬೇಕಾಗಿದೆ; ವೆಚ್ಚ, ಗುಣಮಟ್ಟ ಮತ್ತು ಪ್ರಮಾಣ: ಪ್ರಧಾನಮಂತ್ರಿ
ನಮ್ಮ ಕಾರ್ಖಾನೆಗಳು ಸ್ಪರ್ಧಾತ್ಮಕವಾಗಿರಬೇಕು, ನಮ್ಮ ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿರಬೇಕು ಮತ್ತು ನಮ್ಮ ಪ್ಯಾಕೇಜಿಂಗ್ ಅತ್ಯುತ್ತಮವಾಗಿರಬೇಕು: ಪ್ರಧಾನಮಂತ್ರಿ
ಒಂದು ಕಾಲದಲ್ಲಿ ನಕ್ಸಲ್ ಹಿಂಸಾಚಾರದಿಂದ ಬಾಧಿತವಾದ ಸ್ಥಳಗಳು ಶಾಂತಿ, ಅಭಿವೃದ್ಧಿ ಮತ್ತು ಹೊಸ ಭರವಸೆಗೆ ಸಾಕ್ಷಿಯಾಗುತ್ತಿವೆ: ಪ್ರಧಾನಮಂತ್ರಿ
ಮುಂಬರುವ ವರ್ಷಗಳಲ್ಲಿ, ಈ ಸಪ್ತಧಾರಗಳು ಭಾರತವನ್ನು ಮುನ್ನಡೆಸುತ್ತವೆ ಮತ್ತು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತವೆ: ಪ್ರಧಾನಮಂತ್ರಿ

ನನ್ನ ಪ್ರೀತಿಯ ನಾಗರಿಕರೆ,

ಇಂದು ನಾವು 80ನೇ ಸ್ವಾತಂತ್ರ್ಯೋತ್ಸವ ದಿನ ಆಚರಿಸುತ್ತಿದ್ದೇವೆ. ಇಂದು ಪ್ರತಿಯೊಬ್ಬರ ಹೃದಯ ಬಡಿತವು ವಂದೇ ಮಾತರಂನ ಜಪದೊಂದಿಗೆ ಪ್ರತಿಧ್ವನಿಸುತ್ತಿದೆ. ಇಂದು "ಹರ್ ಘರ್ ತಿರಂಗಾ ಹೈ, ಹರ್ ಮನ್ ತಿರಂಗಾ ಹೈ"(ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ, ಪ್ರತಿ ಹೃದಯದಲ್ಲೂ ತ್ರಿವರ್ಣ) ಇದ್ದು, ದೇಶವು ಉತ್ಸಾಹ ಮತ್ತು ಹೊಸ ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ಅದರೊಂದಿಗೆ ಹೊಸ ನಿರ್ಣಯಗಳನ್ನು ಸಹ ಹೊಂದಿದೆ. ಸ್ವಾತಂತ್ರ್ಯ ದಿನದಂದು ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು. ಇಂದು ನಮ್ಮ ದೇಶದ ಸ್ವಾತಂತ್ರ್ಯ ಗಳಿಸಲು ಜೀವನವನ್ನೇ ತ್ಯಾಗ ಮಾಡಿದ ಆ ಮಹಾನ್ ಪುತ್ರರು ಮತ್ತು ಪುತ್ರಿಯರನ್ನು ರಾಷ್ಟ್ರವು ಗೌರವದಿಂದ ಸ್ಮರಿಸುತ್ತಿದೆ. ಅವರ ಪರಿಶ್ರಮ, ತ್ಯಾಗ ಮತ್ತು ಬಲಿದಾನದ ಮೂಲಕ, ಅವರು ತಮ್ಮ ಇಡೀ ಜೀವನವನ್ನು ಸ್ವಾತಂತ್ರ್ಯ ಸಂಪಾದಿಸುವ ಏಕೈಕ ಗುರಿಗಾಗಿ ಮುಡಿಪಾಗಿಟ್ಟರು. ಇಂದು ನಾನು ಪೂಜ್ಯ ಬಾಪು, ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರು ಮತ್ತು ತ್ಯಾಗದ ಈ ಅದ್ಭುತ ಸಂಪ್ರದಾಯಕ್ಕೆ ಸ್ಫೂರ್ತಿ ನೀಡಿದ ಮಹಾನ್ ಕ್ರಾಂತಿಕಾರಿ ನಾಯಕರನ್ನು ಗೌರವದಿಂದ ವಂದಿಸುತ್ತೇನೆ. ಇಂದು ಈ ಸಮಾರಂಭದಲ್ಲಿ ಹಾಜರಿರುವ ಎಲ್ಲರಿಗೂ ಇದು ಒಂದು ಐತಿಹಾಸಿಕ ಕ್ಷಣವಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಆಗಸ್ಟ್ 15ರಂದು ಕೆಂಪುಕೋಟೆಯಿಂದ ವಂದೇ ಮಾತರಂ ಪ್ರತಿಧ್ವನಿಸುತ್ತಿದೆ. ಇಂದು ನಾವು ವಂದೇ ಮಾತರಂನ 150 ವರ್ಷಗಳನ್ನು ಆಚರಿಸುತ್ತಿರುವಾಗ, ಇದಕ್ಕಿಂತ ಅದ್ಭುತವಾದ ಸಂದರ್ಭ ಯಾವುದಿದೆ ಹೇಳಿ?

ನನ್ನ ಪ್ರೀತಿಯ ನಾಗರಿಕರೆ,

ಇತ್ತೀಚಿನ ದಿನಗಳಲ್ಲಿ ದೇಶದ ಹಲವಾರು ಭಾಗಗಳು ತೀವ್ರ ಪ್ರವಾಹ ಮತ್ತು ಭೂಕುಸಿತಗಳನ್ನು ಎದುರಿಸಿವೆ, ಇದು ಅನೇಕ ಕುಟುಂಬಗಳ ಮೇಲೆ ಪರಿಣಾಮ ಬೀರಿದೆ. ನಾವು ಅವರ ನೋವು ಮತ್ತು ಸಂಕಟಗಳನ್ನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇವೆ, ಅನುಭವಿಸಿದ್ದೇವೆ. ನಾವು ಮತ್ತು ಇಡೀ ರಾಷ್ಟ್ರವು ಅವರೊಂದಿಗೆಸ ದೃಢವಾಗಿ ನಿಲ್ಲುತ್ತೇವೆ ಎಂದು ನಾನು ಪೀಡಿತ ಕುಟುಂಬಗಳಿಗೆ ಭರವಸೆ ನೀಡಲು ಬಯಸುತ್ತೇನೆ.

ನನ್ನ ಪ್ರೀತಿಯ ನಾಗರಿಕರೆ,

ಒಂದು ರಾಷ್ಟ್ರವು ಶ್ರೇಷ್ಠವಾಗುತ್ತದೆ, ಅದು ತನ್ನ ಕನಸುಗಳು, ನಿರ್ಣಯಗಳು ಮತ್ತು ಸಾಮರ್ಥ್ಯಗಳ ಬಲದಿಂದ ಮುಂದುವರಿಯುವಾಗ ತನ್ನ ಗುರಿಗಳನ್ನು ಸಾಧಿಸುತ್ತದೆ.

ನನ್ನ ನಾಗರಿಕರೆ,

ನಾವು ಇನ್ನು ಮುಂದೆ ಸಣ್ಣ ಕನಸುಗಳೊಂದಿಗೆ ಮುಂದುವರಿಯಲು ಸಾಧ್ಯವಿಲ್ಲ. ನಾವು ದೊಡ್ಡ ಕನಸುಗಳನ್ನು ಕಾಣಬೇಕು, ಏಕೆಂದರೆ ದೊಡ್ಡ ಕನಸುಗಳು ನಮ್ಮ ಚಿಂತನೆಯನ್ನು ವಿಸ್ತರಿಸುತ್ತವೆ. ಅವು ನಮ್ಮ ದೃಷ್ಟಿಕೋನದ ಪರಿಧಿಯನ್ನು ವಿಸ್ತರಿಸುತ್ತವೆ. ನಮ್ಮ ನಿರ್ಣಯಗಳು ದೃಢವಾಗಿರಬೇಕು. ನಮ್ಮ ಸಂಕಲ್ಪವು ಪ್ರಬಲವಾಗಿದ್ದಾಗ, ಕಷ್ಟಗಳ ಮೂಲಕ ಮತ್ತು ವಿಪತ್ತುಗಳ ನಡುವೆಯೂ ಸಹ ಒಂದು ಮಾರ್ಗವನ್ನು ಕಂಡುಕೊಳ್ಳುವ ಸಾಮರ್ಥ್ಯವು ತನ್ನತನದಿಂದಲೇ ಹೊರಹೊಮ್ಮುತ್ತದೆ.

ನನ್ನ ಪ್ರೀತಿಯ ನಾಗರಿಕರೆ,

ನಮ್ಮ ಸಂಕಲ್ಪಗಳು ಸಹ ಉನ್ನತವಾಗಿರಬೇಕು. ಏಕೆಂದರೆ ನಮ್ಮ ಕನಸುಗಳು ಉನ್ನತವಾಗಿದ್ದಾಗ ಮತ್ತು ನಮ್ಮ ಸಂಕಲ್ಪಗಳು ಉನ್ನತವಾಗಿದ್ದಾಗ, ನಮ್ಮ ಸಾಮರ್ಥ್ಯಗಳ ಎತ್ತರವೂ ಹೆಚ್ಚಾಗುತ್ತದೆ. ನಮ್ಮ ಪ್ರಯತ್ನಗಳ ಪ್ರಮಾಣವೂ ಹೆಚ್ಚಾಗುತ್ತದೆ, ಆಗ ಮಾತ್ರ ನಾವು ನಮ್ಮ ಕನಸುಗಳನ್ನು ವಾಸ್ತವಕ್ಕೆ ತಿರುಗಿಸಬಹುದು.

ನನ್ನ ಪ್ರೀತಿಯ ನಾಗರಿಕರೆ,

ಭಾರತ ಇಂದು ಒಂದು ದೊಡ್ಡ ಕನಸನ್ನು ಕಂಡಿದೆ - ದೃಢ ಸಂಕಲ್ಪದಿಂದ ಬೆಂಬಲಿತವಾದ ಕನಸು ಅದಾಗಿದೆ, ಹೊಸ ಎತ್ತರವನ್ನು ತಲುಪುವ ಕನಸು ಅದಾಗಿದೆ. ಆ ಕನಸು ಹೀಗಿದೆ: 2047ರಲ್ಲಿ ನಾವು ಸ್ವಾತಂತ್ರ್ಯದ 100 ವರ್ಷಗಳನ್ನು ಪೂರ್ಣಗೊಳಿಸಿದಾಗ, ನಾವು 'ವಿಕಸಿತ ಭಾರತ'(ಅಭಿವೃದ್ಧಿ ಹೊಂದಿದ ಭಾರತ)ವನ್ನು ನಿರ್ಮಿಸುತ್ತೇವೆ. 140 ಕೋಟಿ ನಾಗರಿಕರ ಪ್ರಯತ್ನಗಳು ಮತ್ತು ಕಠಿಣ ಪರಿಶ್ರಮದ ಮೂಲಕ ನಾವು ಈ ಗುರಿ ಸಾಧಿಸಬೇಕು. ವಿಶ್ವದ ಅತ್ಯಂತ ಜನಸಂಖ್ಯೆ ಹೊಂದಿರುವ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಂಕಲ್ಪ ಮಾಡಿದಾಗ, ಅದು ಪ್ರಪಂಚದ ದೃಷ್ಟಿಯಲ್ಲಿ ನಮ್ಮ ಧೈರ್ಯದ ಸಂಕೇತವಾಗುತ್ತದೆ. ಜಗತ್ತು ನಮ್ಮನ್ನು ನೋಡುವ ರೀತಿಯನ್ನು ಬದಲಾಯಿಸಲು ಒತ್ತಾಯಿಸಲ್ಪಟ್ಟಿದೆ.

ಪ್ರಿಯ ನಾಗರಿಕರೆ,

ನಾನು ಇದನ್ನು ಕಾರಣವಿಲ್ಲದೆ ಹೇಳುತ್ತಿಲ್ಲ. ಕಳೆದ 12 ವರ್ಷಗಳಲ್ಲಿ ದೇಶದ ಕೋಟ್ಯಂತರ ನಾಗರಿಕರು, ದಲಿತರು, ತುಳಿತಕ್ಕೊಳಗಾದವರು, ಸೌಲಭ್ಯವಂಚಿತರು, ಬುಡಕಟ್ಟು ಸಮುದಾಯಗಳು, ಹಳ್ಳಿಗಳಲ್ಲಿ ಅಥವಾ ನಗರಗಳಲ್ಲಿ ವಾಸಿಸುವ ಜನರು, ಬಡವರು, ಮಧ್ಯಮ ವರ್ಗ, ಯುವಕರು, ವೃದ್ಧರು, ಮಹಿಳೆಯರು ಅಥವಾ ಪುರುಷರು, ಉತ್ತರ, ದಕ್ಷಿಣ, ಪೂರ್ವ ಅಥವಾ ಪಶ್ಚಿಮದಿಂದ ಬಂದವರಾಗಿರಲಿ, ಪ್ರತಿಯೊಬ್ಬರೂ ದೃಢನಿಶ್ಚಯ ಮತ್ತು ಸಮರ್ಪಣೆಯೊಂದಿಗೆ ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದಾರೆ. ನಾನು ಅವರ ಎಲ್ಲಾ ಪ್ರಯತ್ನಗಳನ್ನು ಗೌರವದಿಂದ ಅಂಗೀಕರಿಸುತ್ತೇನೆ, ಗೌರವಿಸುತ್ತೇನೆ. ಈ ಪ್ರಯತ್ನಗಳ ಫಲವೇ 25 ಕೋಟಿ ನಾಗರಿಕರು ಬಡತನವನ್ನು ನಿವಾರಿಸಿ, ಇಷ್ಟು ಕಡಿಮೆ ಅವಧಿಯಲ್ಲಿ ಬಡತನದಿಂದ ಹೊರಬರಲು ಕಾರಣವಾಗಿದೆ. ಈ ನಾಗರಿಕರ ಪ್ರಯತ್ನಗಳ ಫಲವೇ ನಮ್ಮನ್ನು ಒಮ್ಮೆ ದುರ್ಬಲ 5 ರಾಷ್ಟ್ರಗಳಲ್ಲಿ ಒಂದಾಗಿ ಪರಿಗಣಿಸಲಾಗಿತ್ತು, ಆದರೆ 12 ವರ್ಷಗಳಲ್ಲಿ ನಾವು ಪ್ರಮುಖ ಆರ್ಥಿಕತೆಯಾಗಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದೇವೆ.

ಸ್ನೇಹಿತರೆ,

ದೇಶವು ಹಲವು ಕನಸುಗಳೊಂದಿಗೆ ಸ್ವತಂತ್ರವಾಯಿತು. ಆದರೆ ನಾವು ವೇಗವನ್ನು ಪಡೆಯಲು ಸಾಧ್ಯವಾಗಲಿಲ್ಲ, ನಮಗೆ ಅಗತ್ಯವಿರುವ ವೇಗವನ್ನು ಸಾಧಿಸಲು ಸಾಧ್ಯವಾಗಲಿಲ್ಲ. "ಇದು ಸಂಭವಿಸುತ್ತದೆ, ವಿಷಯಗಳು ಮುಂದುವರಿಯುತ್ತವೆ, ಏನಾಗುತ್ತದೆ ಎಂದು ನಾವು ನೋಡುತ್ತೇವೆ" ಎಂಬ ಮನೋಭಾವದಲ್ಲಿ ನಾವು ಸಿಲುಕಿಕೊಂಡಿದ್ದೇವೆ. 2014ರ ಹೊತ್ತಿಗೆ ಇಡೀ ಜಗತ್ತು ನಮ್ಮನ್ನು ದುರ್ಬಲ 5 ಜನರ ಗುಂಪಿನಲ್ಲಿ ಕೈಬಿಟ್ಟಿತ್ತು. ಅಂತಹ ಸಮಯದಲ್ಲಿ ಭಾರತವು ಕಳೆದ 12 ವರ್ಷಗಳಲ್ಲಿ ಹೊಸ ಆವೇಗ ಕಂಡುಕೊಂಡಿದೆ. ನಾವು ವೇಗವಾಗಿ ಮುಂದುವರಿಯುತ್ತಿದ್ದೇವೆ, ದೇಶದ ಜನರ ಸಂಕಲ್ಪ ಸ್ಪಷ್ಟವಾಗಿದೆ. 140 ಕೋಟಿ ನಾಗರಿಕರ ನಿರ್ಣಯ ಮತ್ತು ಸಾಮರ್ಥ್ಯಗಳನ್ನು ತಡೆಯುವುದು ಈಗ ಅಸಾಧ್ಯವಾಗಿದೆ.

ಪ್ರಿಯ ನಾಗರಿಕರೆ,

ಕಳೆದ 12 ವರ್ಷಗಳಲ್ಲಿ ರಕ್ಷಣಾ ಉತ್ಪಾದನೆಯು ಸುಮಾರು 4 ಪಟ್ಟು ಹೆಚ್ಚಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ವಲಯದ ಉತ್ಪಾದನೆಯು ಸುಮಾರು 5 ಪಟ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯು ಸುಮಾರು 7 ಪಟ್ಟು ಹೆಚ್ಚಾಗಿದೆ. ಆಧುನಿಕ ರೈಲ್ವೆ ಕೋಚ್‌ಗಳ ಉತ್ಪಾದನೆಯು 21 ಪಟ್ಟು ಹೆಚ್ಚಾಗಿದೆ. ಮೊಬೈಲ್ ಫೋನ್ ಉತ್ಪಾದನೆಯು 35 ಪಟ್ಟು ಹೆಚ್ಚಾಗಿದೆ. ಅಷ್ಟೇ ಅಲ್ಲ. ಆಧುನಿಕ ಯುಗಕ್ಕೆ ಅನುಗುಣವಾಗಿ, ನಾವು ಡಿಜಿಟಲ್ ತಂತ್ರಜ್ಞಾನ ಮತ್ತು ನಾವೀನ್ಯತಾ ಜಗತ್ತಿನಲ್ಲಿ ನಮ್ಮ ಛಾಪು ಮೂಡಿಸಿದ್ದೇವೆ. ಇಂಟರ್ನೆಟ್ ಬಳಕೆದಾರರು ಮತ್ತು ಗ್ರಾಹಕರ ಸಂಖ್ಯೆ ಸುಮಾರು 4 ಪಟ್ಟು ಹೆಚ್ಚಾಗಿದೆ. ನೀಡಲಾದ ಪೇಟೆಂಟ್‌ಗಳ ಸಂಖ್ಯೆಯಲ್ಲಿ 4 ಪಟ್ಟು ಹೆಚ್ಚಾಗಿದೆ. ಡಿಜಿಟಲ್ ವಹಿವಾಟುಗಳು 100 ಪಟ್ಟು ಹೆಚ್ಚಾಗಿದೆ. ಸಾಮಾನ್ಯ ನಾಗರಿಕರ ದೈನಂದಿನ ಜೀವನ ಸುಧಾರಿಸಲು ನಾವು ಅಷ್ಟೇ ಗಂಭೀರತೆಯಿಂದ ಕೆಲಸ ಮಾಡಿದ್ದೇವೆ. ಪ್ರತಿ ವರ್ಷ ನಾವು ಮೊದಲಿಗಿಂತ ಸರಾಸರಿ 15 ಪಟ್ಟು ವೇಗವಾಗಿ ನಲ್ಲಿ ನೀರು ಸಂಪರ್ಕಗಳನ್ನು ಒದಗಿಸಿದ್ದೇವೆ. ಪ್ರತಿ ವರ್ಷ ಸರಾಸರಿ 6 ಪಟ್ಟು ವೇಗವಾಗಿ ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಬಡವರಿಗೆ ಶೌಚಾಲಯಗಳ ನಿರ್ಮಾಣವು ವಾರ್ಷಿಕ ದರಕ್ಕಿಂತ 4 ಪಟ್ಟು ಪ್ರಗತಿ ಸಾಧಿಸಿದೆ. ಬಡವರಿಗೆ ಮನೆಗಳನ್ನು ಒದಗಿಸುವ ವೇಗವು ಪ್ರತಿ ವರ್ಷ 3 ಪಟ್ಟು ಹೆಚ್ಚಾಗಿದೆ. ದೇಶವು ಆಡಳಿತದಲ್ಲಿ ಪ್ರಮುಖ ಬದಲಾವಣೆಗಳನ್ನು ತಂದಿದೆ. ಸಾವಿರಾರು ತೆರಿಗೆ ಅನುಸರಣೆಗಳನ್ನು ತೆಗೆದುಹಾಕಲಾಗಿದೆ. ನೂರಾರು ಹಳೆಯ ಕಾನೂನುಗಳನ್ನು ರದ್ದುಪಡಿಸಲಾಗಿದೆ. ಹಿಂದಿನ ಶತಮಾನದ ಕಾನೂನುಗಳನ್ನು ಬಳಸಿಕೊಂಡು 21ನೇ ಶತಮಾನದ ಆಡಳಿತ ನಡೆಸಲು ಸಾಧ್ಯವಿಲ್ಲ. ನಾವು ಆಧುನಿಕ ಮೂಲಸೌಕರ್ಯಕ್ಕಾಗಿ ಮೆಟ್ರೋ ಜಾಲಗಳನ್ನು ವಿಸ್ತರಿಸಿದ್ದೇವೆ, ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಿದ್ದೇವೆ. ಕೆಲಸವನ್ನು ಕೈಗೊಂಡ ವೇಗ, ಅದನ್ನು ಕೈಗೊಂಡ ಪ್ರಮಾಣ, ಈ ವೇಗ, ಈ ವಿಸ್ತರಣೆ ಮತ್ತು ಈ ಸಾಧನೆಗಳು ಸ್ವಾತಂತ್ರ್ಯದ ನಂತರ ಕಳೆದ ದಶಕದಲ್ಲಿ ದೇಶವು ಮೊದಲ ಬಾರಿಗೆ ಕಂಡ ವಿಷಯಗಳಾಗಿವೆ. ನಮ್ಮ ಮುಂದೆ ಹಲವು ಸಾಧನೆಗಳಿರುವಾಗ, ಅಂತಹ ತ್ವರಿತ ಪ್ರಗತಿ ಗೋಚರಿಸುವಾಗ, ನಮ್ಮ ನಾಗರಿಕರ ಸಾಮರ್ಥ್ಯಗಳು ಪ್ರತಿ ಕ್ಷಣವೂ ಬಲಗೊಳ್ಳುವಾಗ, 2047ರ ವೇಳೆಗೆ 'ವಿಕಸಿತ ಭಾರತ'ವನ್ನು ನಿರ್ಮಿಸುವ ಸಂಕಲ್ಪವು ಎಂದಿಗೂ ಅತೃಪ್ತವಾಗಲು ಸಾಧ್ಯವಿಲ್ಲ. ಈ ಎಲ್ಲಾ ಅಂಕಿಅಂಶಗಳು ನಾವು ವೇಗವಾಗಿ ಸಾಗುತ್ತಿರುವ ರಾಷ್ಟ್ರ ಎಂಬುದಕ್ಕೆ ಸಾಕ್ಷಿಯಾಗಿದೆ.

ನನ್ನ ಪ್ರೀತಿಯ ನಾಗರಿಕರೆ,

ಆದರೆ ಅದಕ್ಕಾಗಿ, ನಮಗೆ ಆತ್ಮವಿಶ್ವಾಸ ಬೇಕು. ನಮಗೆ ಸ್ವಾಭಿಮಾನದ ಪ್ರಜ್ಞೆ ಬೇಕು. ಅದೇ ಸಮಯದಲ್ಲಿ, 'ಆತ್ಮನಿರ್ಭರ ಭಾರತ'(ಸ್ವಾವಲಂಬಿ ಭಾರತ) ಆಗುವುದು ಬಹಳ ಮುಖ್ಯ. ಅದಕ್ಕಾಗಿಯೇ, ಇತ್ತೀಚಿನ ವರ್ಷಗಳಲ್ಲಿ ಭಾರತವು ಇನ್ನು ಮುಂದೆ ಇತರೆ ದೇಶಗಳನ್ನು ಅವಲಂಬಿಸಿ ಬದುಕಬಾರದು ಎಂಬುದು ನಮಗೆ ಮನವರಿಕೆಯಾಗಿದೆ. ನಾವು ಸ್ವಾವಲಂಬಿಗಳಾಗಬೇಕು. ಜಗತ್ತಿನಲ್ಲಿ ಅಗ್ಗವಾಗಿರುವ ಮತ್ತು ಹೆಚ್ಚು ವೇಗವಾಗಿ ಪಡೆಯಬಹುದಾದ ಅನೇಕ ವಸ್ತುಗಳು ಲಭ್ಯವಿರಬಹುದು. ಆದರೆ ಅವುಗಳ ಮೇಲೆ ಅವಲಂಬಿತವಾದರೆ ನಮ್ಮ ಸ್ವಂತ ಸಾಮರ್ಥ್ಯಗಳನ್ನು ನಿರ್ಮಿಸಲಾಗುವುದಿಲ್ಲ, ಅದು ನಮ್ಮ ಸಾಮರ್ಥ್ಯಗಳ ಬಲವನ್ನು ಪರೀಕ್ಷಿಸುವುದಿಲ್ಲ. ಆದ್ದರಿಂದ, ನಾವು ನಮ್ಮ ಸ್ವಂತ ಸಾಮರ್ಥ್ಯಗಳನ್ನು ಬಲಪಡಿಸಿಕೊಳ್ಳಬೇ, ನಮ್ಮ ಸ್ವಂತ ಹಿತಾಸಕ್ತಿಗಳನ್ನು ನಾವೇ ರಕ್ಷಿಸಿಕೊಳ್ಳಬೇಕು. ಅದಕ್ಕಾಗಿಯೇ ನಾವು 'ಆತ್ಮನಿರ್ಭರ ಭಾರತ'ಕ್ಕಾಗಿ ದೃಢ ಸಂಕಲ್ಪದೊಂದಿಗೆ ಮುಂದುವರಿಯುತ್ತಿದ್ದೇವೆ. ಮೇಕ್ ಇನ್ ಇಂಡಿಯಾ, ಸ್ವದೇಶಿ, ವೋಕಲ್ ಫಾರ್ ಲೋಕಲ್ ನಂತಹ ಉಪಕ್ರಮಗಳೊಂದಿಗೆ ಭಾರತೀಯರ ಹೃದಯಗಳು ಸಂಪರ್ಕಗೊಳ್ಳುತ್ತಿವೆ.

ನನ್ನ ಪ್ರೀತಿಯ ನಾಗರಿಕರೆ,

ನಾನು ನಿಮಗೆ ಸೆಮಿಕಂಡಕ್ಟರ್ ಗಳ ಉದಾಹರಣೆ ನೀಡುತ್ತೇನೆ. ನಾವು ಸ್ವತಂತ್ರರಾದ ನಂತರ, ಜಗತ್ತು ಈಗಾಗಲೇ ಸೆಮಿಕಂಡಕ್ಟರ್ ಗಳ ಬಗ್ಗೆ ಚರ್ಚಿಸುತ್ತಿತ್ತು. ನಮ್ಮ ದೇಶದಲ್ಲಿಯೂ ಅವುಗಳ ಬಗ್ಗೆ ಚರ್ಚೆ ನಡೆಯಿತು, ಆದರೆ ನಾವು ಯಾವುದೇ ಪ್ರಮುಖ ಸೆಮಿಕಂಡಕ್ಟರ್ ಯೋಜನೆಯನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ. ಆದರೆ ಇಂದಿನ ಪರಿಸ್ಥಿತಿ ಏನು? ಇಂದಿನ ಡಿಜಿಟಲ್ ಜಗತ್ತು ಮತ್ತು ತಂತ್ರಜ್ಞಾನ-ಚಾಲಿತ ಯುಗದಲ್ಲಿ, ಚಿಪ್‌ನ ಮಹತ್ವವನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅದು ಎಲೆಕ್ಟ್ರಾನಿಕ್ ಸರಕುಗಳಾಗಿರಲಿ, ವೈದ್ಯಕೀಯ ಉಪಕರಣಗಳಾಗಿರಲಿ ಅಥವಾ ಸಾರಿಗೆ ವ್ಯವಸ್ಥೆಗಳಾಗಿರಲಿ, ಚಿಪ್‌ಗಳು ಎಲ್ಲೆಡೆ ಅನಿವಾರ್ಯವಾಗಿವೆ. ಚಿಪ್‌ಗಳಿಲ್ಲದೆ ಇಡೀ ಜೀವನ ವ್ಯವಸ್ಥೆಯು ಸ್ಥಗಿತಗೊಳ್ಳುವ ಹಂತವನ್ನು ಜಗತ್ತು ತಲುಪಿದೆ. ಅದಕ್ಕಾಗಿಯೇ, ಭಾರತವು ಸ್ವಾವಲಂಬಿಯಾಗುವ ದಿಕ್ಕಿನಲ್ಲಿ ತನ್ನದೇ ಆದ ಸೆಮಿಕಂಡಕ್ಟರ್ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸಲು ಪ್ರಾರಂಭಿಸಿದೆ. 3 ಪ್ರಮುಖ ಸೆಮಿಕಂಡಕ್ಟರ್ ಘಟಕಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಸೌಲಭ್ಯಗಳಿಂದ ಈಗಾಗಲೇ ರಫ್ತು ಮಾಡಲು ಉತ್ಪಾದನೆ ಪ್ರಾರಂಭಿಸಲಾಗಿದೆ. ಮುಂಬರುವ 7-8 ವರ್ಷಗಳಲ್ಲಿ, ಇನ್ನೂ 5, 7 ಅಥವಾ 8 ಸೆಮಿಕಂಡಕ್ಟರ್ ಘಟಕಗಳು ಶೀಘ್ರದಲ್ಲೇ ಕಾರ್ಯಾಚರಣೆ ಪ್ರಾರಂಭಿಸುವ ನಿರೀಕ್ಷೆಯಿದೆ ಎಂದು ನಾನು ಜನರಿಗೆ ಹೇಳಲು ಬಯಸುತ್ತೇನೆ. ಈ 'ಆತ್ಮನಿರ್ಭರ ಭಾರತ' ನಮಗೆ 'ವಿಕಸಿತ ಭಾರತ'ವಾಗುವತ್ತ ಒಂದು ದೊಡ್ಡ ಮಾರ್ಗವನ್ನು ಒದಗಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಇದೇ ರೀತಿಯ ಚರ್ಚೆ ನಿರ್ಣಾಯಕ ಖನಿಜಗಳ ಸುತ್ತ ನಡೆಯುತ್ತಿದೆ. ಇಡೀ ತಂತ್ರಜ್ಞಾನ ವಲಯವು ನಿರ್ಣಾಯಕ ಖನಿಜಗಳ ಮೇಲೆ ಅವಲಂಬಿತವಾಗಿದೆ. ಭಾರತವು ಈ ಕ್ಷೇತ್ರದಲ್ಲಿಯೂ ತನ್ನನ್ನು ತಾನು ಭದ್ರಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ. ನಾವು ನಿರ್ಣಾಯಕ ಖನಿಜಗಳ ಗುರಿ ಹಂಚಿಕೊಂಡಿದ್ದೇವೆ, ರಾಷ್ಟ್ರೀಯ ನಿರ್ಣಾಯಕ ಖನಿಜಗಳ ಮಿಷನ್ ಪ್ರಾರಂಭಿಸಿದ್ದೇವೆ. ಬಜೆಟ್‌ನಲ್ಲಿ, ನಾವು 'ಕ್ರಿಟಿಕಲ್ ಮಿನರಲ್ಸ್ ಕಾರಿಡಾರ್' ಘೋಷಿಸಿದ್ದೇವೆ. ಹಲವಾರು ದೇಶಗಳೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ, ವಿಶ್ವಾದ್ಯಂತದ ಅನೇಕ ದೇಶಗಳು ಈಗ ನಿರ್ಣಾಯಕ ಖನಿಜಗಳ ಕ್ಷೇತ್ರದಲ್ಲಿ ಭಾರತದ ಮೇಲೆ ನಂಬಿಕೆ ಇಡಲು ಪ್ರಾರಂಭಿಸಿವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಾವು ಸೆಮಿಕಂಡಕ್ಟರ್ ಗಳು ಮತ್ತು ನಿರ್ಣಾಯಕ ಖನಿಜಗಳ ಬಗ್ಗೆ ಮಾತನಾಡುತ್ತಿರುವಂತೆಯೇ, ಜಗತ್ತು ಆ ದಿಕ್ಕಿನಲ್ಲಿ ಚಲಿಸುವಾಗ ಭವಿಷ್ಯದ ತಂತ್ರಜ್ಞಾನಗಳ ಕಡೆಗೆ ನಾವು ಸಾಗುತ್ತಿರುವಾಗ ಇಂಧನ ಪ್ರಾಮುಖ್ಯತೆಯೂ ಬೆಳೆಯುತ್ತಲೇ ಇದೆಇಂಧನ ಇಲ್ಲದೆ ಹೊಸ ಜಗತ್ತನ್ನು ನಡೆಸುವುದು ಈಗ ಕಷ್ಟಕರವಾಗಿದೆ. ಆದ್ದರಿಂದ, ಅದು ಚಿಪ್ಸ್ ಆಗಿರಲಿ, ಎಐ ಆಗಿರಲಿ ಅಥವಾ ಡೇಟಾ ಸೆಂಟರ್‌ಗಳಾಗಿರಲಿ, ನಮಗೆ ಬಹಳ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಅಗತ್ಯವಿರುತ್ತದೆ. ಇಂಧನ ಭದ್ರತೆಯು ಇಂದಿನ ಅಗತ್ಯವಾಗಿದೆ. ಆದ್ದರಿಂದ, ನಾವು ಈಗಾಗಲೇ ಈ ದಿಕ್ಕಿನಲ್ಲಿ ಬಲವಾದ ಕ್ರಮಗಳ ಸರಣಿಯನ್ನು ತೆಗೆದುಕೊಂಡಿದ್ದೇವೆ. ಇಂಧನ ಭದ್ರತೆ ಖಚಿತಪಡಿಸಿಕೊಳ್ಳುವ ಒಂದು ಪ್ರಮುಖ ಮಾರ್ಗವೆಂದರೆ ಪರಮಾಣು ಶಕ್ತಿ. ಸಂಸತ್ತಿನಲ್ಲಿ ಶಾಂತಿ ಕಾಯ್ದೆ ಅಂಗೀಕರಿಸುವ ಮೂಲಕ, ನಾವು ಹೊಸ ಗುರಿಯತ್ತ ಸಾಗಿದ್ದೇವೆ. 2047ರ ಹೊತ್ತಿಗೆ ನಾವು 100 ಗಿಗಾವ್ಯಾಟ್ ಪರಮಾಣು ಇಂಧನ ಗುರಿಯತ್ತ ಕೆಲಸ ಮಾಡುತ್ತಿದ್ದೇವೆ. ಈ ದಶಕದೊಳಗೆ, ನಾವು 5 ಹೊಸ ಪರಮಾಣು ರಿಯಾಕ್ಟರ್‌ಗಳನ್ನು ಪ್ರಾರಂಭಿಸುವ ಗುರಿ ಹೊಂದಿದ್ದೇವೆ. ಈ ವರ್ಷ ಭಾರತವು ಫಾಸ್ಟ್ ಬ್ರೀಡರ್ ಪರಮಾಣು ತಂತ್ರಜ್ಞಾನವನ್ನು ಕರಗತ ಮಾಡಿಕೊಳ್ಳುವ ಮೂಲಕ ಒಂದು ಪ್ರಮುಖ ಮೈಲಿಗಲ್ಲು ದಾಟಿದೆ. ಇದರ ಪರಿಣಾಮವಾಗಿ, ನಾವು ಪರಮಾಣು ಇಂಧನದಲ್ಲಿ ಸ್ವಾವಲಂಬಿಯಾಗುವತ್ತ ಪ್ರಮುಖ ಹೆಜ್ಜೆ ಇಟ್ಟಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಕೆಲವೊಮ್ಮೆ ಒಂದು ದೇಶ ಹಿಂದೆ ಬೀಳುವುದು ಸಂಪನ್ಮೂಲಗಳ ಕೊರತೆಯಿಂದಲ್ಲ, ಆದರೆ ಅದರ ಚಿಂತನೆಯ ಮಿತಿಗಳು. ನಮ್ಮ ಆಲೋಚನೆಯು ನಿರ್ಬಂಧಿತವಾದಾಗ ಮತ್ತು ಆ ಮಿತಿಗಳು ಕೊಳೆಯಲು ಆರಂಭಿಸಿದಾಗ, ನಾವು ನಮ್ಮ ಸ್ವಂತ ಸಾಮರ್ಥ್ಯ ಗುರುತಿಸಲು ಸಹ ಸಾಧ್ಯವಾಗುವುದಿಲ್ಲ. ಇಂದು ದೇಶವು ಕಚ್ಚಾ ತೈಲವನ್ನು ಅವಲಂಬಿಸಬೇಕಾಗಿದೆ, ಇದು ನಮ್ಮ ದೋಷಪೂರಿತ ಚಿಂತನೆಯ ಪರಿಣಾಮವಾಗಿದೆ. ಅಂತಹ ಚಿಂತನೆಯಿಂದಾಗಿ, ನಮ್ಮ ಇಡೀ ಕರಾವಳಿ ಪ್ರದೇಶದ 99% ಪ್ರಮಾಣವನ್ನು ನಿಷೇಧಿತ ಪ್ರದೇಶವೆಂದು ನಾವು ಘೋಷಿಸಿದ್ದೇವೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನಾವೇ ಸಮುದ್ರಕ್ಕೆ ಅನ್ವೇಷಣೆಗೆ ಇಳಿಯದಿರಲು ನಿರ್ಧರಿಸಿದ್ದೆವು. ಇದು ಚಿಂತನೆಯ ಬಡತನ. ಇದರಿಂದ ಮುಂದುವರಿಯಲು ಸಾಧ್ಯವಿಲ್ಲ ಎಂದು ನಾವು ಇದೀಗನಿರ್ಧಾರ ತೆಗೆದುಕೊಂಡಿದ್ದೇವೆ. ಒಂದು ಕಾಲದಲ್ಲಿ ನಿಷೇಧಿತ ಪ್ರದೇಶವೆಂದು ಗೊತ್ತುಪಡಿಸಿದ್ದ ಆ 99% ಪ್ರಮಾಣವನ್ನು ನಾವು ಮುಂದೆ ಸಾಗುವ ಪ್ರದೇಶವಾಗಿ ತೆರೆದಿದ್ದೇವೆ, ಈಗ ನಾವು ಸಮುದ್ರವನ್ನು ಅನ್ವೇಷಿಸುವ ಮತ್ತು ಹೊಸ ನಿಕ್ಷೇಪಗಳನ್ನು ಕಂಡುಹಿಡಿಯುವತ್ತ ಸಾಗುತ್ತಿದ್ದೇವೆ. ಈ ದಿಕ್ಕಿನಲ್ಲಿ ನಾವು ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಕಳೆದ ವರ್ಷ, ಅದೇ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆ ಇಡುತ್ತಾ, ನಾವು ಸಮುದ್ರ ಮಂಥನವನ್ನು ಘೋಷಿಸಿದ್ದೇವೆ. ಇತ್ತೀಚೆಗೆ ಪ್ರಕ್ರಿಯೆಯನ್ನು ವೇಗಗೊಳಿಸಲು ಈ ಕೆಲಸಕ್ಕಾಗಿ 85,000 ಕೋಟಿ ರೂ. ಅನುದಾನ ಹಂಚಿಕೆ ಮಾಡಲು ನಿರ್ಧರಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಇಂಧನ ಸುರಕ್ಷತೆಗೆ ಸಂಬಂಧಿಸಿದಂತೆ, ಪರ್ಯಾಯ ಮೂಲಗಳ ಹಿಂದೆ ನಮ್ಮ ಸಂಪೂರ್ಣ ಶಕ್ತಿಯನ್ನು ಹಾಕುವುದು ಅಷ್ಟೇ ಮುಖ್ಯ ಎಂದು ನಾನು ಹೇಳಿದೆ. ಆದ್ದರಿಂದ, ಇಂಧನದ ಸಮರ್ಥ ಬಳಕೆಯನ್ನು ಉತ್ತೇಜಿಸುವಾಗ, ಭಾರತ ಇಂದು ಈ ದಿಕ್ಕಿನಲ್ಲಿ ವೇಗವಾಗಿ ಸಾಗುತ್ತಿದೆ. 2014ಕ್ಕಿಂತ ಮೊದಲು ಅಂದರೆ 12 ವರ್ಷಗಳ ಹಿಂದೆ, ನಮ್ಮ ದೇಶದಲ್ಲಿ ಕೇವಲ 70 ನಗರಗಳು ಪೈಪ್‌ಲೈನ್ ಮೂಲಕ ಅನಿಲ ಮೂಲಸೌಕರ್ಯ ಹೊಂದಿದ್ದವು, ಪೈಪ್‌ಲೈನ್ ಮೂಲಕ ಅನಿಲ ವಿತರಿಸಲಾಗುತ್ತಿತ್ತು. ಆದರೆ 12 ವರ್ಷಗಳಲ್ಲಿ ನಾವು 70 ನಗರಗಳಿಂದ 700 ನಗರಗಳಿಗೆ ಕೊಂಡೊಯ್ದಿದ್ದೇವೆ. ವೇಗ ಹೀಗಿದೆ; ವಿಸ್ತರಣೆ ಹೀಗಿದೆ. 2014ಕ್ಕಿಂತ ಮೊದಲು ಪೈಪ್‌ಲೈನ್ ಅನಿಲ ಕೇವಲ 20–22 ಲಕ್ಷ ಮನೆಗಳನ್ನು ತಲುಪಿತ್ತು. ಇಂದು ಸುಮಾರು 1.75 ಕೋಟಿ ಮನೆಗಳಿಗೆ ಪೈಪ್ ಮೂಲಕ ಅನಿಲ ಒದಗಿಸುವ ಕೆಲಸ ನಡೆಯುತ್ತಿದೆ. 12 ವರ್ಷಗಳ ಹಿಂದೆ ದೇಶವು ಕೇವಲ 2 ಗಿಗಾವ್ಯಾಟ್‌ಗಳ ಸೌರಶಕ್ತಿ ಸಾಮರ್ಥ್ಯ ಹೊಂದಿತ್ತು, 2 ಗಿಗಾವ್ಯಾಟ್‌ಗಳ ಸೌರಶಕ್ತಿ ಸಾಮರ್ಥ್ಯವನ್ನು ಹೊಂದಿತ್ತು. ಇಂದು ನಾವು 160 ಗಿಗಾವ್ಯಾಟ್‌ಗಳ ಸಾಮರ್ಥ್ಯವನ್ನು ಸಾಧಿಸಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಇನ್ನೊಂದು ಮಾಹಿತಿ ಹಂಚಿಕೊಳ್ಳುತ್ತೇನೆ. ಇದರ ಪ್ರಯೋಜನಗಳು ದೇಶಾದ್ಯಂತ ಮಧ್ಯಮ ವರ್ಗ ಮತ್ತು ಸಾಮಾನ್ಯ ಕುಟುಂಬಗಳಿಗೆ ತಲುಪುವಂತೆ ನೋಡಿಕೊಳ್ಳಲು ನಾವು ಸಮಾನ ಗಮನ ಹರಿಸಿದ್ದೇವೆ. ನಾವು ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ ಪ್ರಾರಂಭಿಸಿದ್ದೇವೆ. ಇಂದು ಇಷ್ಟು ಕಡಿಮೆ ಅವಧಿಯಲ್ಲಿ 50 ಲಕ್ಷ ಮನೆಗಳಲ್ಲಿ ಸೌರಶಕ್ತಿ ವ್ಯವಸ್ಥೆಗಳನ್ನು ಸ್ಥಾಪಿಸುವ ಮೈಲಿಗಲ್ಲು ದಾಟಿದೆ, ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ಪರಿಣಾಮವಾಗಿ, ಸಾವಿರಾರು ಮನೆಗಳ ವಿದ್ಯುತ್ ಬಿಲ್‌ಗಳು ಶೂನ್ಯವಾಗಿವೆ, ಆದರೆ ಸಾವಿರಾರು ಮನೆಗಳು ಈಗ ತಾವು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ಆದಾಯ ಗಳಿಸುತ್ತಿವೆ. ಈ ಉದ್ದೇಶಕ್ಕಾಗಿ ಸರ್ಕಾರವು ಪ್ರತಿ ಕುಟುಂಬಕ್ಕೆ 80,000 ರೂ. ಸಹಾಯ ನೀಡುತ್ತಿದೆ, ಈ ಬೆಂಬಲದ ಮೂಲಕ ನಾವು ಈ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಮ್ಮ ದೇಶದಲ್ಲಿ ರೈಲ್ವೆ ವ್ಯವಸ್ಥೆಯ ವಿದ್ಯುದೀಕರಣವು 1925ರಲ್ಲಿ ಪ್ರಾರಂಭವಾಯಿತು ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. 1925ರಲ್ಲಿ ವಿದ್ಯುದೀಕರಣದ ಕೆಲಸ ಪ್ರಾರಂಭವಾಯಿತು, ಆದರೆ ಮುಂದಿನ 90 ವರ್ಷಗಳಲ್ಲಿ ರೈಲ್ವೆ ಜಾಲದ ಕೇವಲ 30% ಮಾತ್ರ ವಿದ್ಯುದೀಕರಣಗೊಂಡಿತ್ತು. ಅಂದರೆ 90 ವರ್ಷಗಳಲ್ಲಿ 30%. ನಮ್ಮ ವೇಗವನ್ನು ನೋಡಿ; ಗುರಿ ಸಾಧಿಸುವ ನಮ್ಮ ದೃಢಸಂಕಲ್ಪವನ್ನು ನೋಡಿ. ಈ ಒಂದು ದಶಕದೊಳಗೆ ನಾವು 100% ಕೆಲಸ ಪೂರ್ಣಗೊಳಿಸಿದ್ದೇವೆ. 90 ವರ್ಷಗಳಲ್ಲಿ 30%, 10 ವರ್ಷಗಳಲ್ಲಿ 70% - ಕೆಲಸವು ಹೀಗಿದೆ. ಪರಿಣಾಮವಾಗಿ, ನಾವು ಹಿಂದೆ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದ ಡೀಸೆಲ್ ಉಳಿಸಿದ್ದೇವೆ. ನಮ್ಮ ರೈಲುಗಳು ವಿದ್ಯುತ್‌ನಿಂದ ಓಡಲು ಪ್ರಾರಂಭಿಸಿವೆ, ಇದು ಪರಿಸರಕ್ಕೂ ಪ್ರಯೋಜನ ನೀಡುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಾವು ಇಲ್ಲಿಗೆ ನಿಂತಿಲ್ಲ. ನಾವು ಪ್ರಪಂಚಕ್ಕಿಂತ ಹಿಂದುಳಿಯಲು ಬಯಸುವುದಿಲ್ಲ. ನೀವು ಇತ್ತೀಚೆಗೆ ಈ ಸುದ್ದಿ ಕೇಳಿರಬಹುದು: ಭಾರತವು ಇಂಧನದ ಈ ಹೊಸ ಕ್ಷೇತ್ರವನ್ನು ಪ್ರವೇಶಿಸಿದೆ. ದೇಶವು ತನ್ನ ಮೊದಲ ಹೈಡ್ರೋಜನ್ ಚಾಲಿತ ರೈಲು ಪ್ರಾರಂಭಿಸಿದೆ, ಇದು ಈ ರೀತಿಯ ಅತಿ ಉದ್ದ ಮತ್ತು ಶಕ್ತಿಶಾಲಿ ರೈಲು ಎಂಬುದರಿಂದ ನನಗೆ ಸಂತೋಷವಾಗಿದೆ. ಭಾರತವು ವಿಶ್ವದ ಹೈಡ್ರೋಜನ್ ಚಾಲಿತ ರೈಲುಗಳ ಕ್ಷೇತ್ರದಲ್ಲಿಯೂ ತನ್ನ ಛಾಪು ಮೂಡಿಸಿದೆ.

ಪ್ರಿಯ ದೇಶವಾಸಿಗಳೆ,

ಕಳೆದ 10–12 ವರ್ಷಗಳಿಂದ ನಾವು 2047ರ ವಿಕಸಿತ ಭಾರತದ ಗುರಿ ಸಾಧಿಸುವತ್ತ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ನಾವು ಒಂದರ ನಂತರ ಒಂದರಂತೆ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದೇವೆ. ದಾರಿಯುದ್ದಕ್ಕೂ ನಾವು ಇಷ್ಟೊಂದು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಾವು ಎಂದಿಗೂ ಊಹಿಸಿರಲಿಲ್ಲ. ಕಳೆದ 10–12 ವರ್ಷಗಳಲ್ಲಿ ನಾವು ಹಲವಾರು ಬಿಕ್ಕಟ್ಟುಗಳನ್ನು ಎದುರಿಸಿದ್ದೇವೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗವು ಇಡೀ ಜಗತ್ತನ್ನು ಅನಿಶ್ಚಿತತೆಗೆ ತಳ್ಳಿತ್ತು, ಎಲ್ಲಾ ವ್ಯವಸ್ಥೆಗಳನ್ನು ಪ್ರಕ್ಷುಬ್ಧತೆಗೆ ತಳ್ಳಿತ್ತು. ನಾವು ಕೋವಿಡ್ ನಿಂದ ಹೊರಬಂದೆವು, ಒಂದು ಕಡೆ ಉಕ್ರೇನ್ ಮತ್ತು ಮತ್ತೊಂದೆಡೆ ಪಶ್ಚಿಮ ಏಷ್ಯಾದಲ್ಲಿ ಸಂಘರ್ಷಗಳೊಂದಿಗೆ ಯುದ್ಧದ ಭೀಕರತೆ ವೀಕ್ಷಿಸುವಾಗ ಎಲ್ಲೆಡೆ ಉದ್ವಿಗ್ನ ವಾತಾವರಣವಿತ್ತು, ಎಲ್ಲಾ ಮುನ್ಸೂಚಕರು ಭವಿಷ್ಯದ ಬಗ್ಗೆ ಏನು ಊಹಿಸಿದ್ದರು ಎಂದು ಯಾರಿಗೆ ತಿಳಿದಿದೆ. ಕೆಲವು ಜನರು ದೇಶವನ್ನು ಹೆದರಿಸುವ, ಭಯಭೀತರನ್ನಾಗಿ ಮಾಡುವ ಮತ್ತು ಜನರನ್ನು ಆತಂಕದಲ್ಲಿಡುವ ಮೂಲಕ ಆನಂದ ಅನುಭವಿಸುವಂತೆ ತೋರುತ್ತಿತ್ತು. ಲಸಿಕೆಗಳು ಲಭ್ಯವಿರಲಿಲ್ಲ, ಜನರು ಕೋವಿಡ್ ನಿಂದ ಬದುಕುಳಿಯುವುದಿಲ್ಲ, ಏನೂ ಕೆಲಸ ಮಾಡಲಾಗದು ಎಂದು ಹೇಳಿದರು. ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟು ಉಂಟಾದಾಗ, ಪೆಟ್ರೋಲ್ ಪಂಪ್‌ಗಳಲ್ಲಿ ಪೆಟ್ರೋಲ್ ಲಭ್ಯವಿರುವುದಿಲ್ಲ, ಅನಿಲ, ಡೀಸೆಲ್ ಮತ್ತು ರಸಗೊಬ್ಬರಗಳು ಸಿಗುವುದಿಲ್ಲ ಎಂಬ ವದಂತಿಗಳನ್ನು ಹರಡಲಾಯಿತು. ವಿಶ್ವಾದ್ಯಂತ ಎಲ್ಲಾ ರೀತಿಯ ವದಂತಿಗಳನ್ನು ಹರಡುವ ಮೂಲಕ, ಕೆಲವರು ಭಾರತದ ಜನರನ್ನು ಹೆದರಿಸುವ, ಬೆದರಿಸುವ ಮತ್ತು ಆತಂಕದಲ್ಲಿ ಮುಳುಗಿಸುವಲ್ಲಿ ಸಂತೋಷಪಟ್ಟರು.

ಆದರೆ ಕಳೆದ 10-12 ವರ್ಷಗಳ ಚೆನ್ನಾಗಿ ಪರಿಗಣಿಸಲಾದ ಯೋಜನೆಗಳು ಫಲ ನೀಡುತ್ತಿರುವುದನ್ನು ದೇಶ ಈಗ ನೋಡಿದೆ. ಅಂತಹ ಬೃಹತ್ ಬಿಕ್ಕಟ್ಟಿನ ಹೊರತಾಗಿಯೂ, ನಾಗರಿಕ ದೇವೋ ಭವ (ನಾಗರಿಕ ದೇವರಂತೆ) ತತ್ವದಿಂದ ಮಾರ್ಗದರ್ಶಿಸಲ್ಪಟ್ಟ ಭಾರತವು ಸಿದ್ಧತೆಗಳನ್ನು ಮಾಡಿಕೊಂಡು ಒಂದರ ನಂತರ ಒಂದರಂತೆ ಹೆಜ್ಜೆ ಇಟ್ಟಿತ್ತು. ಅಂತಹ ಬಿಕ್ಕಟ್ಟು ಉದ್ಭವಿಸುತ್ತದೆ ಎಂದು ನಾವು ಊಹಿಸಿರಲಿಲ್ಲ, ಆದರೆ ಅದು ಸಂಭವಿಸಿದಾಗ, ಈ ಎಲ್ಲಾ ಸಿದ್ಧತೆಗಳು ಉಪಯುಕ್ತವೆಂದು ಸಾಬೀತಾಯಿತು. ಇಂದು ದೇಶದಲ್ಲಿ ಅನಿಲ, ಪೆಟ್ರೋಲ್ ಮತ್ತು ಯೂರಿಯಾ ಇವೆ. ನಾವು ನಮ್ಮ ಸ್ವಂತ ಸಾಮರ್ಥ್ಯದ ಮೇಲೆ ನಿಂತಿದ್ದೇವೆ, ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಈ ಜಾಗತಿಕ ಬಿಕ್ಕಟ್ಟುಗಳು ಎಲ್ಲರನ್ನೂ ಬಾಧಿಸಿವೆ, ನಾವು ಕೂಡ ಇದರಿಂದ ಮುಕ್ತರಲ್ಲ. ಒಂದು ಚೀಲ ಯೂರಿಯಾದ ಜಾಗತಿಕ ಬೆಲೆ 3,000 ರೂ. ತಲುಪಿದೆ. ಇಂದಿಗೂ ನಾವು ನಮ್ಮ ದೇಶದ ರೈತರನ್ನು ಆ ಹೊರೆ ಹೊರುವಂತೆ ಒತ್ತಾಯಿಸುತ್ತಿಲ್ಲ, ಸರ್ಕಾರ ಆ ಹೊರೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತಿದೆ. ನಾವು ವಿಶ್ವದಿಂದ 3000 ರೂ.ಗೆ ಪಡೆಯುವ ಯೂರಿಯಾ ಚೀಲವನ್ನು ನಮ್ಮ ರೈತರಿಗೆ ಕೇವಲ 300 ರೂ.ಗೆ ನೀಡಲು ಸಮರ್ಥರಾಗಿದ್ದೇವೆ. ಇದಲ್ಲದೆ, ಡಿಎಪಿಯ ಜಾಗತಿಕ ಮಾರುಕಟ್ಟೆ ಬೆಲೆ 5,000 ರೂ. ತಲುಪಿದ್ದರೂ, ನಮ್ಮ ರೈತರು ಯಾವುದೇ ಕಷ್ಟ ಎದುರಿಸಬಾರದು ಎಂದು ಖಚಿತಪಡಿಸಿಕೊಳ್ಳಲು ನಾವು ಅದನ್ನು 1,350 ರೂ.ಗೆ ಪೂರೈಸುತ್ತಲೇ ಇದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಾನು ಸ್ವಾವಲಂಬನೆಯ ಬಗ್ಗೆ ಮಾತನಾಡುತ್ತಿದ್ದ ಒಂದು ಕಾಲವಿತ್ತು, ಕೆಲವು ಜನರು ಹವಾನಿಯಂತ್ರಿತ ಕೋಣೆಗಳಲ್ಲಿ ಕುಳಿತು ಜಾಗತೀಕರಣಕ್ಕೆ ಏನಾಗುತ್ತದೆ ಎಂದು ಯೋಚಿಸುತ್ತಿದ್ದರು. ಆದರೆ ಕಳೆದ ದಶಕದಲ್ಲಿ ಜಗತ್ತು ಜಾಗತೀಕರಣದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದಂತೆ ಕಾಣುತ್ತಿದೆ. ಜಾಗತೀಕರಣದ ಧ್ವನಿಗಳು ಬರುತ್ತಿದ್ದವು, ಅವುಗಳಿಗೆ ಕಿವಿಗೊಡಲು ಸಾಧ್ಯವಾಗುತ್ತಿಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ನಿರ್ದಿಷ್ಟ ಸವಾಲುಗಳನ್ನು ಎದುರಿಸುವತ್ತ ಗಮನ ಹರಿಸಿದೆ. ಆದಾಗ್ಯೂ ವಿಷಾದಕರವೆಂದರೆ, ಈ ಬಿಕ್ಕಟ್ಟಿನ ಅವಧಿಯಲ್ಲಿ ಕೆಲವರು ತಮ್ಮ ಪ್ರಾಬಲ್ಯವನ್ನು ಪ್ರತಿಪಾದಿಸಲು ಸಂಪನ್ಮೂಲಗಳನ್ನು ಶಸ್ತ್ರಾಸ್ತ್ರೀಕರಿಸುವ ಆಟದಲ್ಲಿ ತೊಡಗಿದ್ದಾರೆ. ಪ್ರಸ್ತುತ ಜಗತ್ತು ತಾನು ಹೊಂದಿರುವ ಯಾವುದೇ ಸ್ವತ್ತುಗಳನ್ನು ಶಸ್ತ್ರಾಸ್ತ್ರೀಕರಿಸುವ ಉದ್ದೇಶ ಹೊಂದಿದೆ. ಪೆಟ್ರೋಲ್, ಡೀಸೆಲ್, ರಸಗೊಬ್ಬರಗಳು, ಔಷಧಗಳು ಮತ್ತು ತಂತ್ರಜ್ಞಾನ ಚಿಪ್‌ಗಳಂತಹ ಸಂಪನ್ಮೂಲಗಳನ್ನು ಶಸ್ತ್ರಾಸ್ತ್ರೀಕರಿಸಲಾಗುತ್ತಿದೆ. ವಾಸ್ತವವಾಗಿ, ಇಡೀ ಪ್ರದೇಶವನ್ನೇ ಶಸ್ತ್ರಾಸ್ತ್ರೀಕರಿಸಲಾಗುತ್ತಿದೆ. ಅಂತಹ ಸಮಯದಲ್ಲಿ ಕಳೆದ ದಶಕದಲ್ಲಿ ನಾವು ಸ್ವಾವಲಂಬನೆಯ ಮಂತ್ರದಿಂದ ಮಾರ್ಗದರ್ಶನ ಪಡೆದು ಸರಿಯಾದ ದಿಕ್ಕಿನಲ್ಲಿ ಸಾಗದಿದ್ದರೆ, ನಾವು ಅಂತಹ ಸವಾಲುಗಳನ್ನು ಹೇಗೆ ಬಲವಾಗಿ ಎದುರಿಸುತ್ತಿದ್ದೆವು, ಹಾಗಾಗಿ ನಮ್ಮ ಸಿದ್ಧತೆಗಳು ನಿರಂತರವಾಗಿ ಹೆಚ್ಚುತ್ತಿವೆ ಎಂಬುದನ್ನು ನಾವು ಊಹಿಸಬಹುದು.

ನನ್ನ ಪ್ರೀತಿಯ ದೇಶವಾಸಿಗಳೆ,

ಮತ್ತೊಂದೆಡೆ, ಇಂದು ಭಾರತದ ಖ್ಯಾತಿ ಗಮನಾರ್ಹವಾಗಿ ಏರುತ್ತಿದೆ. ಇಂದು ಭಾರತವು ಜಗತ್ತಿಗೆ ಸ್ವೀಕಾರಾರ್ಹ ಮತ್ತು ಗೌರವಾನ್ವಿತ ದೇಶವಾಗುತ್ತಿದೆ. ಭಾರತವು ಸ್ಥಿರವಾದ ರಾಜಕೀಯ ಜನಾದೇಶ ಮತ್ತು ಸ್ಥಿರ ಸರ್ಕಾರ, ರೋಮಾಂಚಕ ಪ್ರಜಾಪ್ರಭುತ್ವ, ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಮತ್ತು ನಮ್ಮೆಲ್ಲರನ್ನೂ ಮಾರ್ಗದರ್ಶಿಸುವ ಭಾರತದ ಸಂವಿಧಾನವನ್ನು ಹೊಂದಿದೆ. ಹಾಗಾಗಿ, ಈಗ ಜಗತ್ತು ನಮ್ಮ ಶಕ್ತಿಯನ್ನು ಗುರುತಿಸಲು ಪ್ರಾರಂಭಿಸಿದೆ. ಆದ್ದರಿಂದ, 2014ರ ನಂತರ ನಾವು ಸುಮಾರು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು(ಎಫ್‌ಟಿಎ) ಮಾಡಿಕೊಳ್ಳುತ್ತಿದ್ದೇವೆ. ನೀವು ನೋಡಿ, ಎಂತಹ ದೊಡ್ಡ ಅವಕಾಶ ಬಂದಿದೆ, ಆದರೆ ಮಾಡಲಾದ ಈ ವ್ಯಾಪಾರ ಒಪ್ಪಂದಗಳು ಒಂದು ದೊಡ್ಡ ಅವಕಾಶವಾಗಿದೆ. ಆದ್ದರಿಂದ ನಾನು ವಿಶೇಷವಾಗಿ ನನ್ನ ಎಂಎಸ್ಎಂಇಗಳಿಗೆ ಈ ಅವಕಾಶವನ್ನು ಕಳೆದುಕೊಳ್ಳಬಾರದು ಎಂದು ಹೇಳಲು ಬಯಸುತ್ತೇನೆ. ನಾವು ಜಗತ್ತನ್ನು ತಲುಪಬೇಕು, ಭಾರತದ ಪ್ರತಿಯೊಂದು ಉತ್ಪನ್ನವು ವಿಶ್ವ ಮಾರುಕಟ್ಟೆಗೆ ತಲುಪಬೇಕು. ಅದು ನಮ್ಮ ಜವಳಿ, ನಮ್ಮ ಯಂತ್ರೋಪಕರಣಗಳು, ನಮ್ಮ ಔಷಧಿಗಳು, ನಾವು ಯಾವುದೇ ಅವಕಾಶವನ್ನು ಬಿಡಬಾರದು. ಆದರೆ ನಾವು ಜಾಗತಿಕ ನಿಯತಾಂಕಗಳನ್ನು ದಾಟಬೇಕು. ನಾವು ಗುಣಮಟ್ಟದಲ್ಲಿ ಅತ್ಯುತ್ತಮ ಮತ್ತು ಪ್ರಸ್ತುತ ವಿಶ್ವಾದ್ಯಂತ ಲಭ್ಯವಿರುವ ಉತ್ಪನ್ನಗಳಿಗಿಂತ ಹೆಚ್ಚು ಕೈಗೆಟುಕುವ ಉತ್ಪನ್ನಗಳನ್ನು ನೀಡಬೇಕಾಗಿದೆ. ಪಂಜಾಬ್‌ನ ಲುಧಿಯಾನದಿಂದ ತಮಿಳುನಾಡಿನ ತಿರುಪ್ಪೂರಿನವರೆಗೆ ವ್ಯಾಪಿಸಿರುವ ನಮ್ಮ ಜವಳಿ ವಲಯವು ಜಾಗತಿಕ ಮಾರುಕಟ್ಟೆಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಇದು ಮಾತ್ರವಲ್ಲ, ಕೇರಳದಿಂದ ಗುಜರಾತ್‌ಗೆ ಮತ್ತು ತಮಿಳುನಾಡಿನಿಂದ ಬಂಗಾಳಕ್ಕೆ, ಇದು ನಮ್ಮ ಕರಾವಳಿ, ನಮ್ಮ ಮೀನುಗಾರ ಸಹೋದರ ಸಹೋದರಿಯರು, ಇಂದು ಈ ಎಫ್‌ಟಿಎಯಿಂದಾಗಿ, ನಮ್ಮ ಸೀಗಡಿ ರಫ್ತು ಸಾಧ್ಯತೆ ಹೆಚ್ಚಾಗಿದೆ. ನಮ್ಮ ಸಮುದ್ರಾಹಾರವು ಜಗತ್ತನ್ನು ತಲುಪಲು ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಆದ್ದರಿಂದ ನಾವು ಈ ಪರಿಸ್ಥಿತಿಯ ಲಾಭ ಪಡೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಾವು ಮುಂದುವರಿಯುತ್ತಿದ್ದಂತೆ ಈ ಗುರಿಗಳನ್ನು ಸಾಧಿಸಲು ಪ್ರಯತ್ನಿಸುತ್ತೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಾನು ನಿಮ್ಮ ಮುಂದೆ ಪ್ರಸ್ತುತಪಡಿಸಿದ ಈ ಪರಿಚಯದ ಹಿಂದಿನ 2047ರ ಗುರಿಯು ಈ ಬಲವಾದ ಅಡಿಪಾಯಗಳ ಮೇಲೆ ನಿಂತಿದೆ. 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯು ನಮ್ಮ ದೇಶವಾಸಿಗಳು ಕಳೆದ 10-12 ವರ್ಷಗಳಲ್ಲಿ ತೋರಿಸಿದ ಶಕ್ತಿಯ ಒಂದು ಭಾಗವಾಗಿದೆ.

ಆದ್ದರಿಂದ, ನನ್ನ ಪ್ರೀತಿಯ ಸಹೋದರ ಸಹೋದರಿಯರೆ,

ಕಾಲು ಶತಮಾನ ಕಳೆದಿದೆ, ಮುಂದಿನ ತ್ರೈಮಾಸಿಕವು ನಮಗೆ ಅಪಾರವಾಗಿ ಮಹತ್ವದ್ದಾಗಿದೆ. ಈಗ ನಾವು ನಿಲ್ಲಲು ಸಾಧ್ಯವಿಲ್ಲ, ನಮ್ಮ ವೇಗ ನಿಲ್ಲಲು ಸಾಧ್ಯವಿಲ್ಲ, ನಮ್ಮ ದಿಕ್ಕನ್ನು ನಿರ್ಧರಿಸಲಾಗಿದೆ, ನಾವು ಅದನ್ನು ಸಾಧಿಸಬೇಕು. ಇದಕ್ಕಾಗಿ ನಾವು ನಮ್ಮ ಕೆಲಸದ ಸಂಸ್ಕೃತಿ ಬದಲಾಯಿಸಬೇಕಾಗುತ್ತದೆ, ನಮ್ಮ ಕೆಲಸದ ಸಂಸ್ಕೃತಿ ಬದಲಾಯಿಸುವಾಗ ನಾವು ನಮ್ಮ ಆಲೋಚನೆಯನ್ನು ಬದಲಾಯಿಸಬೇಕಾಗುತ್ತದೆ, ನಾವು ನಮ್ಮ ಕೆಲಸದ ವೇಗವನ್ನು ಸಹ ಬದಲಾಯಿಸಬೇಕಾಗುತ್ತದೆ. ಕಳೆದ 5-7 ದಶಕಗಳಲ್ಲಿ ಮಾಡದ ಕೆಲಸವನ್ನು ನಾವು ಮುಂಬರುವ 5-7 ವರ್ಷಗಳಲ್ಲಿ ಮಾಡಬೇಕಾಗಿದೆ. ನನ್ನ ದೇಶದ ಯುವ ಶಕ್ತಿ, ನನ್ನ ದೇಶದ ಯುವಕರು, ನನ್ನ ದೇಶದ ತಾಯಂದಿರು ಮತ್ತು ಸಹೋದರಿಯರು, ನನ್ನ ದೇಶದ ರೈತರು, ನನ್ನ ದೇಶದ ಕಾರ್ಮಿಕರು ಈ ಕನಸನ್ನು ನನಸಾಗಿಸಬಹುದು ಎಂಬ ನಂಬಿಕೆ ನನಗಿದೆ. ಆದ್ದರಿಂದ ನಾವು ಸುಧಾರಣೆಗಳ ವೇಗವನ್ನು ಮುಂದಕ್ಕೆ ತೆಗೆದುಕೊಳ್ಳಬೇಕು. ನಾನು ಸುಧಾರಣೆಗಳ ಬಗ್ಗೆ ಮಾತನಾಡುವಾಗ, ಸುಧಾರಣೆ ನಮಗೆ ಕಡ್ಡಾಯವಲ್ಲ, ಅಥವಾ ಸುಧಾರಣೆಯೇ ನಮಗೆ ಒಂದು ಝೇಂಕಾರವಲ್ಲ, ನಮ್ಮ ಈ ಸುಧಾರಣೆಯು ದೃಢನಿಶ್ಚಯದಿಂದ ಬಂದ ಮನೋಸಂಕಲ್ಪವಾಗಿದೆ. ನಾವು 'ಸುಧಾರಣಾ ಎಕ್ಸ್‌ಪ್ರೆಸ್' ಪ್ರಾರಂಭಿಸಿದ್ದೇವೆ, ಮುಂಬರುವ ದಿನಗಳಲ್ಲಿ ನಾವು ಮುಂದಿನ ಹಂತದ ಸುಧಾರಣೆಯತ್ತ ಸಾಗಲಿದ್ದೇವೆ. ಆದ್ದರಿಂದ ಸರ್ಕಾರ, ಸಮಾಜ, ಉದ್ಯಮ, ಉತ್ಪಾದಕರು, ರೈತರು, ಪ್ರತಿಯೊಬ್ಬರೂ ತಮ್ಮ ಸಾಂಪ್ರದಾಯಿಕ ವ್ಯವಸ್ಥೆಗಳನ್ನು ಸುಧಾರಿಸಬೇಕು, ತಮ್ಮ ಚಿಂತನೆಯನ್ನು ಸುಧಾರಿಸಬೇಕು, ತಮ್ಮ ಗುರಿಗಳನ್ನು ಸುಧಾರಿಸಬೇಕು.

ಆದ್ದರಿಂದ, ನನ್ನ ಪ್ರೀತಿಯ ನಾಗರಿಕರೆ,

ನಾವು ಸ್ಪಷ್ಟ ದಿಕ್ಕಿನಲ್ಲಿ, ರಾಜಮಾರ್ಗದಲ್ಲಿ ಸಾಗುವ ಸಂಕಲ್ಪದೊಂದಿಗೆ ಮುಂದುವರಿಯಬೇಕು. ಇಂದು ನಾನು ಆ ಯುಗವನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ, ಆ ಯುಗವನ್ನು ನಾವು ಸಪ್ತ ಸಿಂಧು ಎಂದು ತಿಳಿದಿದ್ದೆವು, ಅರ್ಥ ಮಾಡಿಕೊಂಡೆವು, ಭಾರತದ ಸಾಮರ್ಥ್ಯವನ್ನು ಆಲಿಸಿದೆವು. ಭಾರತವನ್ನು ಅಭಿವೃದ್ಧಿಪಡಿಸಲು ನಮಗೆ ಹೊಸ ಪ್ರವಾಹ ಬೇಕು. ಇಂದು ಕೆಂಪುಕೋಟೆಯ ಮೇಲಿಂದ ನಾನು ದೇಶದ ಮುಂದೆ ಈ ಸಪ್ತ ಶಕ್ತಿಗಳನ್ನು(ಸಪ್ತ ಧಾರ) ಆಹ್ವಾನಿಸುತ್ತೇನೆ. ಕಳೆದ 5-7 ದಶಕಗಳಲ್ಲಿ ಮಾಡಲು ಸಾಧ್ಯವಾಗದ್ದನ್ನು ಸಪ್ತಧಾರ ಶಕ್ತಿಯಿಂದ ಮುಂಬರುವ 5-7 ವರ್ಷಗಳಲ್ಲಿ ನಾವು ದೇಶಕ್ಕೆ ಹೊಸ ಎತ್ತರ, ಹೊಸ ಆವೇಗ ಮತ್ತು ಹೊಸ ಗುರಿಗಳನ್ನು ಸಾಧಿಸುವ ಸಾಮರ್ಥ್ಯ ನೀಡುತ್ತೇವೆ. ಇದರ ಜತೆಗೆ, ರಾಷ್ಟ್ರದ ಯುವ ಶಕ್ತಿಯ ಸಾಮರ್ಥ್ಯವನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಸಂಪೂರ್ಣವಾಗಿ ಬಳಸಿಕೊಳ್ಳಬೇಕು. ಅವರ ಶಕ್ತಿಯನ್ನು ಪ್ರಯತ್ನದಲ್ಲಿ ಸಂಯೋಜಿಸಲಾಗುತ್ತದೆ. ಮುಂಬರುವ ದಿನಗಳಲ್ಲಿ, ನಾನು ಸಪ್ತಧಾರದ ಬಗ್ಗೆ ಮಾತನಾಡುವಾಗ, ಸಪ್ತಧಾರದ ಮೊದಲ ಶಕ್ತಿಯೇ - ಉತ್ಪಾದನಾ ಶಕ್ತಿ ಆಗಿರಬೇಕು.

ನನ್ನ ಪ್ರೀತಿಯ ದೇಶವಾಸಿಗಳೆ,

ನಾವು ಉತ್ಪಾದನಾ ವಲಯವನ್ನು ಗಣನೀಯವಾಗಿ ಮುನ್ನಡೆಸಬೇಕು; ಉತ್ಪಾದನೆ ಹೆಚ್ಚಿಸುವ ಜತೆಗೆ, ಸಣ್ಣ ಘಟಕಗಳಿಂದ ಹಿಡಿದು ದೊಡ್ಡ ಪ್ರಮಾಣದ ಉತ್ಪನ್ನಗಳವರೆಗೆ ಎಲ್ಲವನ್ನೂ ತಯಾರಿಸಬೇಕು. ಸಂಪೂರ್ಣ ಮೌಲ್ಯ ಸರಪಳಿ ನಮ್ಮದಾಗಿರಬೇಕು, ನಾವು ಅದರೊಂದಿಗೆ ಮುಂದುವರಿಯಬೇಕು, ನಮಗೆ ಘಟಕಗಳ ಜತೆಗೆ ಸಂಪೂರ್ಣ ಉತ್ಪಾದನೆಯೂ ಬೇಕು, ನಮಗೆ ಸಂಪೂರ್ಣ ಉತ್ಪನ್ನವೂ ಬೇಕು. ವಿನ್ಯಾಸದಿಂದ ಉತ್ಪಾದನೆಯವರೆಗೆ, ಭಾರತವು ಜಾಗತಿಕ ಪೂರೈಕೆ ಸರಪಳಿಯಲ್ಲಿ ವಿಶ್ವಾಸಾರ್ಹ ತಾಣವಾಗಿ ಹೊರಹೊಮ್ಮಬೇಕು. ಇದಕ್ಕಾಗಿ ನಾನು 3 ಅಂಶಗಳಿಗೆ ವಿಶೇಷ ಒತ್ತು ನೀಡಲು ಬಯಸುತ್ತೇನೆ, ವಿಶೇಷವಾಗಿ ಉತ್ಪಾದನಾ ವಲಯದಲ್ಲಿರುವ ನನ್ನ ಸಹೋದರ ಸಹೋದರಿಯರೇ, ಈ ಅವಕಾಶವನ್ನು ಬಳಸಿಕೊಳ್ಳುವ ಸಮಯ ಇದು, ಇದಕ್ಕಾಗಿ ನಾವು ವೆಚ್ಚ, ಗುಣಮಟ್ಟ ಮತ್ತು ಪ್ರಮಾಣದ ವಿಷಯದಲ್ಲಿ ಜಾಗತಿಕ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ನಮ್ಮ ಕಾರ್ಖಾನೆಗಳು ಸ್ಪರ್ಧಾತ್ಮಕವಾಗಿರಬೇಕು, ನಮ್ಮ ಉತ್ಪನ್ನಗಳು ಬಳಕೆದಾರ ಸ್ನೇಹಿಯಾಗಿರಬೇಕು, ನಮ್ಮ ಪ್ಯಾಕೇಜಿಂಗ್ ಆಕರ್ಷಕವಾಗಿರಬೇಕು ಮತ್ತು ವಿಶ್ವಾದ್ಯಂತದ ಜನರಿಗೆ ಆಕರ್ಷಕವಾಗಿರಬೇಕು. ನಮ್ಮ ಶೂನ್ಯ-ದೋಷ ನಿಖರತೆಯ ಉತ್ಪಾದನೆಯು ನಮ್ಮ ವಿಶಿಷ್ಟ ಲಕ್ಷಣವಾಗಬೇಕು. ನಾನು ಪ್ರತಿಯೊಬ್ಬ ತಯಾರಕರಿಗೆ, ಪ್ರತಿಯೊಬ್ಬ ಉದ್ಯಮಿಗೆ, ಪ್ರತಿ ಎಂಎಸ್ಎಂಇಗೆ ಹೇಳಲು ಬಯಸುತ್ತೇನೆ, ಜಾಗತಿಕ ಮಾರುಕಟ್ಟೆಯಲ್ಲಿ ನಮ್ಮ ಗುರುತು ವಿಶ್ವಾಸಾರ್ಹತೆ ಮತ್ತು ಗುಣಮಟ್ಟವನ್ನು ಆಧರಿಸಿರಬೇಕು. ಗುಣಮಟ್ಟದ ಬಗ್ಗೆ ಯಾವುದೇ ರಾಜಿ ಇರಬಾರದು. ಆದ್ದರಿಂದ ನಮ್ಮ ಮಂತ್ರ ಗುಣಮಟ್ಟ, ಗುಣಮಟ್ಟ, ಗುಣಮಟ್ಟವಾಗಿರಬೇಕು. ಇದು ನಮ್ಮ ಜಾಗತಿಕ ಬ್ರ್ಯಾಂಡ್ ಮೌಲ್ಯವಾಗುತ್ತದೆ.

ನನ್ನ ಪ್ರೀತಿಯ ನಾಗರಿಕರೆ,

ಈ 'ಸಪ್ತಧಾರಾ'ದ 2ನೇ ಶಕ್ತಿ ಕೃಷಿ ಮತ್ತು ಆಹಾರ ಉತ್ಪಾದನೆ. ನಾವು ಆಹಾರ ಸಂಸ್ಕರಣೆಯ ದಿಕ್ಕಿನಲ್ಲೂ ಮುಂದುವರಿಯಬೇಕು. ನಮ್ಮ ರೈತರು ಈಗ ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶ ಹೊಂದಿದ್ದಾರೆ. ಎಫ್‌ಟಿಎಗಳಿಂದಾಗಿ, ನಾವು ಬೃಹತ್ ಮಾರುಕಟ್ಟೆಗಳಿಗೆ ಪ್ರವೇಶ ಪಡೆಯುತ್ತಿದ್ದೇವೆ, ನಾವು ಆ ಮಾರುಕಟ್ಟೆಗಳನ್ನು ತಲುಪಬೇಕು. ನಾವು ಆ ಅವಕಾಶವನ್ನು ಬಳಸಿಕೊಳ್ಳಬೇಕು. ನಾವು ಕೃಷಿಯಿಂದ ರಫ್ತು ಮಾರುಕಟ್ಟೆಗೆ ಹೋಗಬೇಕು. ಅದು ನಮ್ಮ ಸಾಂಪ್ರದಾಯಿಕ ಪಾಕ ಪದ್ಧತಿಯಾಗಿರಲಿ, ನಮ್ಮ ಸಿರಿಧಾನ್ಯಗಳಾಗಿರಲಿ, ನಮ್ಮ ಮಸಾಲೆಗಳು, ನಮ್ಮ ಹಣ್ಣುಗಳು ಅಥವಾ ನಮ್ಮ ಹೂವುಗಳು ಆಗಿರಲಿ, ನಮಗೆ ಮಾರುಕಟ್ಟೆಗೆ ಸಾಗಿಸಲು ತುಂಬಾ ಇದೆ. ಇವು ಜಾಗತಿಕ ಬ್ರ್ಯಾಂಡ್‌ಗಳಾಗಬೇಕು. ನಮ್ಮ ರೈತರು ರಾಸಾಯನಿಕ ಮುಕ್ತ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಏಕೆಂದರೆ ಅಂತಹ ಉತ್ಪನ್ನಗಳಿಗೆ ಬೇಡಿಕೆ ವಿಶ್ವಾದ್ಯಂತ ಹೆಚ್ಚಾಗುತ್ತದೆ. ನಮ್ಮ ಕೃಷಿ ಉತ್ಪನ್ನಗಳು ಪ್ರತಿಯೊಂದು ವಿಷಯದಲ್ಲೂ ಜಾಗತಿಕ ನಿಯತಾಂಕಗಳನ್ನು ಪೂರೈಸಿದರೆ, ನಾವು ವಿಶ್ವಾದ್ಯಂತದ ಮಾರುಕಟ್ಟೆಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ. ನನ್ನ ಸಪ್ತಧಾರಾದ 3ನೇ ಶಕ್ತಿಯೇ ತಂತ್ರಜ್ಞಾನ ಮತ್ತು ನಾವೀನ್ಯತೆ.

ನನ್ನ ಪ್ರೀತಿಯ ನಾಗರಿಕರೆ,

ಇಂದು ಎಐ, ಕ್ವಾಂಟಮ್ ತಂತ್ರಜ್ಞಾನ, ಬಾಹ್ಯಾಕಾಶ, ರೊಬೊಟಿಕ್ಸ್ ಮತ್ತು ಡೇಟಾ ಕೇಂದ್ರಗಳ ಯುಗ, ಸಂಪೂರ್ಣವಾಗಿ ಹೊಸ ಕ್ಷೇತ್ರಗಳು ತೆರೆದುಕೊಂಡಿವೆ. ಉದಯೋನ್ಮುಖ ತಂತ್ರಜ್ಞಾನಗಳು ಪ್ರತಿ ಕ್ಷಣವೂ ನಮಗೆ ಸವಾಲು ಹಾಕುತ್ತಿವೆ. ಆದ್ದರಿಂದ, ನಾವು ನಮ್ಮ ದೇಶವನ್ನು ಕೇವಲ ಜಗತ್ತಿಗೆ ಮಾರುಕಟ್ಟೆಯನ್ನಾಗಿ ಪರಿವರ್ತಿಸಬಾರದು; ನಾವೇ ನಾವೀನ್ಯತೆಯ ಕೇಂದ್ರವಾಗಬೇಕು. ನಾವು ಈಗಾಗಲೇ ಯುಪಿಐ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ನಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಿದ್ದೇವೆ. ನಮ್ಮ ಶಕ್ತಿಯನ್ನು ನಾವು ಜಗತ್ತಿಗೆ ತಿಳಿಸಿದ್ದೇವೆ. ಈಗ ಭಾರತ ತನ್ನ ಡಿಜಿಟಲ್ ಸಾರ್ವಜನಿಕ ತಂತ್ರಜ್ಞಾನಗಳನ್ನು ವಿಶ್ವದ ಮೂಲೆ ಮೂಲೆಗೆ ಕೊಂಡೊಯ್ಯಬೇಕು. ಭಾರತ ಮುಂದಿನ ಪೀಳಿಗೆಯ ಸಂವಹನ ತಂತ್ರಜ್ಞಾನಗಳನ್ನು ಮುನ್ನಡೆಸಬೇಕು. ಮೇಡ್-ಇನ್-ಇಂಡಿಯಾ 6ಜಿ ಲೋಕದ ಪ್ರತಿಯೊಂದು ಮೂಲೆಯನ್ನು ತಲುಪುವಂತೆ ನೋಡಿಕೊಳ್ಳುವುದು ನಮ್ಮ ಗುರಿಯಾಗಿರಬೇಕು. ಈ ದಿಕ್ಕಿನಲ್ಲಿ ನಾವು ನಮ್ಮ ಪ್ರಯತ್ನಗಳನ್ನು ವೇಗಗೊಳಿಸಬೇಕು, ಆದರೆ ಈ ಪ್ರಯತ್ನಕ್ಕೆ ನಮ್ಮ ಬದ್ಧತೆ ಕಡಿಮೆಯಾಗಬಾರದು.

ಸಪ್ತಧಾರದ 4ನೇ ಶಕ್ತಿಯೇ ಗತಿ ಶಕ್ತಿ. ಗತಿ ಶಕ್ತಿಯ ಅಡಿ, ನಾವು ದೇಶಾದ್ಯಂತ ತಡೆರಹಿತ ಮತ್ತು ವೇಗದ ಸಂಪರ್ಕದ ಮೇಲೆ ಗಮನ ಕೇಂದ್ರೀಕರಿಸಬೇಕು. ನಾವು ನಮ್ಮ ನಗರಗಳನ್ನು ಹೈ-ಸ್ಪೀಡ್ ರೈಲುಗಳ ಮೂಲಕ ಸಂಪರ್ಕಿಸಬೇಕು. ನಮಗೆ ಆಧುನಿಕ ಹೆದ್ದಾರಿಗಳು, ಒಳನಾಡಿನ ಜಲಮಾರ್ಗಗಳು, ವಿಮಾನ ನಿಲ್ದಾಣಗಳು ಮತ್ತು ಬಹುಮಾದರಿ ಸರಕು ಸಾಗಣೆ ವ್ಯವಸ್ಥೆಗಳು ಬೇಕು. ನಾವು ನಮ್ಮ ಬಂದರುಗಳನ್ನು ಕೇವಲ ಸರಕುಗಳನ್ನು ತುಂಬುವ ಮತ್ತು ಇಳಿಸುವ ಸ್ಥಳಗಳಾಗಿ ಅಥವಾ ಹಡಗುಗಳು ಬಂದು ಲಂಗರು ಹಾಕುವ ಸ್ಥಳಗಳಾಗಿ ನೋಡಬಾರದು. ಬಂದರು ನೇತೃತ್ವದ ಅಭಿವೃದ್ಧಿ ಮತ್ತು ಬೆಳವಣಿಗೆಯ ದಿಕ್ಕಿನಲ್ಲಿ ನಾವು ನಮ್ಮ ಬಂದರುಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು. ಸಪ್ತಧಾರದ 5ನೇ ಶಕ್ತಿಯೇ 'ರಕ್ಷಾ ಶಕ್ತಿ'(ರಕ್ಷಣಾ ಶಕ್ತಿ). ಈ 'ರಕ್ಷಾ ಶಕ್ತಿ'ಯ ಮಹತ್ವವು ಪ್ರತಿಯೊಂದು ವಿಷಯದಲ್ಲೂ ಅಪಾರವಾಗಿದೆ.

ನನ್ನ ಪ್ರೀತಿಯ ನಾಗರಿಕರೆ,

ಭಾರತವು ಈಗ ಇದನ್ನು ಅನುಭವಿಸಿದೆ, ಜಗತ್ತು ಸಹ ಇದನ್ನು ಅನುಭವಿಸಿದೆ: ರಕ್ಷಣೆಯಲ್ಲಿ ಸ್ವಾವಲಂಬಿಯಾಗುವುದಕ್ಕೆ ಪರ್ಯಾಯವಿಲ್ಲ. ವಿಶ್ವಾದ್ಯಂತದ ದೇಶಗಳು ತಮ್ಮ ಸ್ವಂತ ಹಿತಾಸಕ್ತಿಗಳ ಬಗ್ಗೆ ಹೆಚ್ಚು ಹೆಚ್ಚು ಯೋಚಿಸುತ್ತಿರುವಾಗ, ಭಾರತವು ಜಗತ್ತಿನ ಮಾರುಕಟ್ಟೆಯಾಗಿ ಉಳಿಯಲು ಪ್ರಯತ್ನಿಸಬೇಕಿದೆ. ರಕ್ಷಣಾ ವಲಯದಲ್ಲಿ ನಾವು ಸ್ವಾವಲಂಬಿಗಳಾಗಬೇಕು. ಮುಂದಿನ ಪೀಳಿಗೆಯ ರಕ್ಷಣಾ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಜಾಗತಿಕ ಪೂರೈಕೆದಾರರಾಗುವತ್ತ ಸಾಗುವ ಗುರಿಯನ್ನು ನಾವು ಹೊಂದಿಸಿಕೊಳ್ಳಬೇಕು. ನಾವು ಡ್ರೋನ್‌ಗಳು ಮತ್ತು ಪ್ರತಿ-ಡ್ರೋನ್ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು, ಹೈಪರ್‌ಸಾನಿಕ್ ರಕ್ಷಣಾ ತಂತ್ರಜ್ಞಾನಗಳಲ್ಲಿ ನಾವು ನಾಯಕತ್ವ ಹೊಂದಬೇಕು.

ಸ್ನೇಹಿತರೆ,

ಸೈಬರ್ ಭದ್ರತೆ ಇಂದು ಪ್ರತಿಯೊಂದು ಮನೆಯಲ್ಲೂ ಒಂದು ಕಳವಳಕಾರಿ ವಿಷಯವಾಗುತ್ತಿದೆ. ಅದು ಕೂಡ ನಮ್ಮ ಯುವಜನರ ಸಾಮರ್ಥ್ಯಗಳನ್ನು ದೇಶ ಮತ್ತು ವಿಶ್ವದ ಹಿತಕ್ಕಾಗಿ ಬಳಸಿಕೊಳ್ಳಬಹುದಾದ ರಕ್ಷಣಾ ಕ್ಷೇತ್ರವಾಗಿದೆ. ನಮ್ಮ ಸಪ್ತಧಾರದ 6ನೇ ಶಕ್ತಿಯೇ ಹಸಿರು ಆರ್ಥಿಕತೆ, ನೀಲಿ ಆರ್ಥಿಕತೆ, ಇದು ಹಸಿರು ಉದ್ಯೋಗಗಳನ್ನು ಸಹ ಸೃಷ್ಟಿಸುತ್ತದೆ. ನಾವು ಜಾಗತಿಕ ಮಟ್ಟದಲ್ಲಿ ಹಸಿರು ಹೈಡ್ರೋಜನ್, ನವೀಕರಿಸಬಹುದಾದ ಇಂಧನ, ಇಂಧನ ಸಂಗ್ರಹಣೆ, ಹಸಿರು ಚಲನಶೀಲತೆ ಮತ್ತು ಹಸಿರು ಉತ್ಪಾದನೆಯನ್ನು ಸಾಧಿಸಬೇಕು. ಜಗತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಚರ್ಚಿಸುತ್ತಲೇ ಇರುವ ಸಮಯದಲ್ಲಿ, ನಾವು ಪರಿಹಾರಗಳನ್ನು ಹುಡುಕುತ್ತಲೇ ಇರುತ್ತೇವೆ. ಈ ಸವಾಲುಗಳಿಗೆ ಉತ್ತರಗಳನ್ನು ನೀಡುತ್ತಲೇ ಇರುತ್ತೇವೆ. ಹಸಿರು ಚಳುವಳಿಯಲ್ಲಿ ಭಾರತವು ಅಗಾಧ ಸಾಮರ್ಥ್ಯದೊಂದಿಗೆ ಈ ಪ್ರಯಾಣವನ್ನು ಪ್ರಾರಂಭಿಸಿದೆ. ನೀಲಿ ಆರ್ಥಿಕತೆಯಲ್ಲಿ ಭಾರತವು ಅಗಾಧ ಅವಕಾಶಗಳನ್ನು ಹೊಂದಿದೆ. ನಮಗೆ ಬಹಳ ಉದ್ದವಾದ ಕರಾವಳಿ ಇದೆ. ಮೀನುಗಾರಿಕೆ, ಕರಾವಳಿ ಪ್ರವಾಸೋದ್ಯಮ, ಸಾಗರ ತಂತ್ರಜ್ಞಾನ ಮತ್ತು ನಾವು ಮುಂದುವರಿಯಬಹುದಾದ ಇತರೆ ಹಲವು ವಲಯಗಳಂತಹ ನೀಲಿ ಆರ್ಥಿಕತೆಯಲ್ಲಿ ಅಗಾಧ ಅವಕಾಶಗಳಿವೆ.

ನನ್ನ ಪ್ರೀತಿಯ ನಾಗರಿಕರೆ,

ಭಾರತವು ಸಪ್ತಧಾರದ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದ್ದಂತೆ, 7ನೇ ಶಕ್ತಿಯು ಜಗತ್ತಿಗೆ ತನ್ನದೇ ಆದ ಮಹತ್ವವನ್ನು ಹೊಂದಿದೆ, ಅದೇ ಭಾರತದ ಮೃದು ಶಕ್ತಿ. ಭಾರತದ ಮೃದು ಶಕ್ತಿಯ ಬಲವು ಅಗಾಧವಾಗಿದೆ. ಇಂದು ಯೋಗವು ಇಡೀ ಜಗತ್ತನ್ನು ಭಾರತದೊಂದಿಗೆ ಸಂಪರ್ಕಿಸಿದೆ. ಯೋಗವು ಜಗತ್ತಿಗೆ ಶಕ್ತಿಯ ಮೂಲವಾಗುತ್ತಿದೆ. ಜನರು ಭಾರತದ ಮೇಲೆ ಇರಿಸಿರುವ ನಂಬಿಕೆಗೆ ಪ್ರಮುಖ ಕಾರಣವಾಗಿದೆ. ಭಾರತವು ನಂಬಿಕೆ, ಆಯುರ್ವೇದ ಮತ್ತು ಸಮಗ್ರ ಆರೋಗ್ಯ ರಕ್ಷಣಾ ವ್ಯವಸ್ಥೆ ಹೊಂದಿದೆ. ಇವುಗಳ ಜತೆಗೆ ಹೀಲ್ ಇನ್ ಇಂಡಿಯಾ ಆಂದೋಲನದೊಂದಿಗೆ, ನಾವು ನಮ್ಮ ಸಾಮರ್ಥ್ಯಗಳನ್ನು ಜಗತ್ತಿಗೆ ಕೊಂಡೊಯ್ಯಬಹುದು. ಅದು ಕರಕುಶಲ ವಸ್ತುಗಳೇ ಆಗಿರಲಿ, ಸಂಸ್ಕೃತಿಯೇ ಆಗಿರಲಿ, ನಮ್ಮ ಚಲನಚಿತ್ರಗಳು, ನಮ್ಮ ಸೃಜನಶೀಲ ಜಗತ್ತು, ವಿಎಫ್‌ಎಕ್ಸ್, ಅನಿಮೇಷನ್, ಗೇಮಿಂಗ್ ಅಥವಾ ಡಿಜಿಟಲ್ ವಿಷಯವಾಗಿರಲಿ, ಜಾಗತಿಕ ಸೃಜನಶೀಲ ಆರ್ಥಿಕತೆಯಲ್ಲಿ ಭಾರತವು ತನ್ನ ಸ್ಥಾನಮಾನವನ್ನು ಪ್ರದರ್ಶಿಸಬಹುದು. ನಾವು ಇದನ್ನು ಜಾಗತಿಕ ಶಕ್ತಿಯಾಗಿ ಅಭಿವೃದ್ಧಿಪಡಿಸಬೇಕು. ಇಂದು, ಭಾರತವು ವೇವ್ಸ್ ಶೃಂಗಸಭೆಯಲ್ಲಿ ಅಗಾಧವಾದ ಪ್ರದರ್ಶನ ನೀಡಿದೆ. ಕ್ರಮೇಣ, ಜಗತ್ತು ಭಾರತದ ವಿಶ್ವ ಆಡಿಯೋ ದೃಶ್ಯ ಮತ್ತು ಮನರಂಜನಾ ಶೃಂಗಸಭೆಯನ್ನು ಎದುರು ನೋಡಲು ಪ್ರಾರಂಭಿಸಿದೆ. ಇದು ಭಾರತದ ಮೃದು ಶಕ್ತಿ ಮತ್ತು ಸೃಜನಶೀಲ ಪರಿಸರ ವ್ಯವಸ್ಥೆಯನ್ನು ಜಗತ್ತಿಗೆ ಪರಿಚಯಿಸಿದೆ.

ನನ್ನ ಪ್ರೀತಿಯ ನಾಗರಿಕರೆ,

ಭಾರತವು ವ್ಯಾಪಕ ಅರಣ್ಯ ಸಂಪತ್ತನ್ನು ಹೊಂದಿದೆ. ನಮ್ಮಲ್ಲಿ 100ಕ್ಕೂ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳಿವೆ. ನಮ್ಮ ಸಾಮರ್ಥ್ಯವು ಅಗಾಧವಾಗಿದೆ, ಆದರೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ವಿಷಯದಲ್ಲಿ ನಾವು ವಿಫಲರಾಗಿದ್ದೇವೆ. ನಮ್ಮ ಮೃದು ಶಕ್ತಿಯ ಮೂಲಕ ಜಾಗತಿಕ ಪ್ರವಾಸಿಗರನ್ನು ಭಾರತಕ್ಕೆ ಆಕರ್ಷಿಸಲು ನಮಗೆ ಅವಕಾಶವಿದೆ. ನಾವು ನಮ್ಮ ಸಾಮರ್ಥ್ಯಗಳನ್ನು ಜಗತ್ತಿಗೆ ಪ್ರದರ್ಶಿಸಬೇಕು. ನಾವು ಈ ಪ್ರಯತ್ನವನ್ನು ಕೈಗೆತ್ತಿಕೊಳ್ಳಬೇಕು, ಆದಷ್ಟು ಬೇಗ ಅದನ್ನು ಮಾಡಬೇಕು. ಇಂದು ಕ್ರೀಡೆಗಳು ಭಾರತದತ್ತ ಆಕರ್ಷಣೆಯ ಪ್ರಮುಖ ಮೂಲವಾಗುತ್ತಿವೆ. ಪ್ರಮುಖ ಜಾಗತಿಕ ಕ್ರೀಡಾಕೂಟಗಳನ್ನು ಭಾರತದಲ್ಲಿ ಏಕೆ ನಡೆಸಬಾರದು? ಸಂಗೀತ ಕಚೇರಿಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ, ದೇಶದ ಯುವಕರಿಗೆ ಅಪಾರ ಆಕರ್ಷಣೆಯನ್ನು ಹೊಂದಿದೆ. ವಿಶ್ವಾದ್ಯಂತದ ಕಲಾವಿದರು ಒಂದು ಹಂತದಲ್ಲಿ ಭಾರತದ ನೆಲದಲ್ಲಿ ಸಂಗೀತ ಕಚೇರಿ ನೀಡಲು ಬಯಸುತ್ತಾರೆ. ಇದು ಒಂದು ದೊಡ್ಡ ಅವಕಾಶ, ಈ ಅವಕಾಶವನ್ನು ಸಜ್ಜುಗೊಳಿಸಲು ಅಗತ್ಯವಾದ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ನಾವು ರೂಪಿಸಬೇಕು.

ಸ್ನೇಹಿತರೆ,

ಸಪ್ತಧಾರದ ಈ 7 ಶಕ್ತಿಗಳು ಕೇವಲ ವೈಯಕ್ತಿಕ ವಲಯಗಳಲ್ಲಿ ಪ್ರಗತಿ ಸಾಧಿಸುವುದರ ಬಗ್ಗೆ ಅಲ್ಲ. ಸಮಗ್ರ ವಿಧಾನದೊಂದಿಗೆ, ನಾವು ರಾಷ್ಟ್ರಕ್ಕಾಗಿ ನಿಗದಿಪಡಿಸಿದ ಗುರಿಗಳು ಮತ್ತು ಮಹತ್ವಾಕಾಂಕ್ಷೆಗಳ ಪ್ರಮಾಣವನ್ನು ಮೀರುವತ್ತ ಕೆಲಸ ಮಾಡಬೇಕು.

ನನ್ನ ಪ್ರೀತಿಯ ನಾಗರಿಕರೆ,

ನಾನು ಇವುಗಳಲ್ಲಿ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದೇನೆ, ಆದರೆ ಅವುಗಳನ್ನು ಮೀರಿ ಯೋಚಿಸುತ್ತೇನೆ. ನಾನು ರಾಷ್ಟ್ರವನ್ನು ಜಾಗೃತವಾಗಿಸಲು ಬಯಸುತ್ತೇನೆ. ನಾನು ರಾಷ್ಟ್ರದ ಶಕ್ತಿಯನ್ನು ಜಾಗೃತಗೊಳಿಸಲು ಬಯಸುತ್ತೇನೆ. ಒಂದು ರಾಷ್ಟ್ರವು ಕೇವಲ ಸರ್ಕಾರವನ್ನು ಒಳಗೊಂಡಿರುವುದಿಲ್ಲ; ಒಂದು ರಾಷ್ಟ್ರವು ಪ್ರತಿಯೊಬ್ಬ ನಾಗರಿಕರಿಂದ ಮಾಡಲ್ಪಟ್ಟಿದೆ. ನಾವು ದೊಡ್ಡದನ್ನು ಆಶಿಸಲು ಸಾಧ್ಯವಿಲ್ಲವೇ?

ಫಾರ್ಚೂನ್ 500 ಬಗ್ಗೆ ನಾವು ಆಗಾಗ್ಗೆ ಕೇಳುತ್ತೇವೆ. ಮುಂದಿನ ದಶಕದೊಳಗೆ, ಫಾರ್ಚೂನ್ 500 ಕಂಪನಿಗಳಲ್ಲಿ 50 ಭಾರತದಿಂದ ತಯಾರಾಗಿರಬೇಕು ಎಂಬುದು ನಮ್ಮ ಗುರಿಯಾಗಬಾರದು ಏಕೆ? ಇಂದು, ನಮ್ಮ ಬ್ಯಾಂಕಿಂಗ್ ವಲಯವು ಪ್ರವರ್ಧಮಾನಕ್ಕೆ ಬರುತ್ತಿದೆ. ವಿಶ್ವದ ಅಗ್ರ ಬ್ಯಾಂಕ್‌ಗಳಲ್ಲಿ ಭಾರತೀಯ ಬ್ಯಾಂಕಿನ ಧ್ವಜ ಏಕೆ ಹಾರಬಾರದು? ವಿಶ್ವದ ಅಗ್ರ 5 ಬ್ಯಾಂಕ್‌ಗಳಲ್ಲಿ ನಮಗೆ ಭಾರತೀಯ ಬ್ಯಾಂಕ್ ಇರಬೇಕು. ಭಾರತದ ಔಷಧ ವಲಯವು ಗಮನಾರ್ಹ ಪ್ರಗತಿ ಸಾಧಿಸಿದೆ. ಆದರೆ ಕಾಲದ ಬೇಡಿಕೆಯೆಂದರೆ, ವಿಶ್ವದ 5 ದೊಡ್ಡ ಔಷಧ ಕಂಪನಿಗಳಲ್ಲಿ ಒಂದು ಅಥವಾ ಎರಡು ಭಾರತೀಯ ಔಷಧ ಕಂಪನಿಗಳ ಹೆಸರು ಪ್ರತಿಧ್ವನಿಸಬೇಕು. ಭಾರತ ಅಲ್ಲಿ ತನ್ನದೇ ಆದ ಸ್ಥಾನಮಾನ ಸ್ಥಾಪಿಸಬೇಕು. ಕಾನೂನು ಸಂಸ್ಥೆಗಳು ಮತ್ತು ರೇಟಿಂಗ್ ಏಜೆನ್ಸಿಗಳಿವೆ. ಜಾಗತಿಕ ನಾಯಕತ್ವವು ಈಗ ನಮ್ಮ ಕೈಯಲ್ಲಿರುವುದು ಇಂದಿನ ಅಗತ್ಯವಲ್ಲವೇ? ನಮ್ಮಲ್ಲಿ ಪ್ರತಿಭೆ ಇದೆ. ನಮಗೆ ಸಾಮರ್ಥ್ಯವಿದೆ. ನಮಗೆ ದೀರ್ಘ ಇತಿಹಾಸವಿದೆ. ನಮಗೆ ಭಾಷೆಗಳ ಮೇಲೆ ಪಾಂಡಿತ್ಯವಿದೆ. ನಾವು ಜಗತ್ತನ್ನು ತಲುಪಬೇಕು. ಭಾರತೀಯ ಸಲಹಾ ಸಂಸ್ಥೆ ಅಥವಾ ಲೆಕ್ಕಪತ್ರ ಸಂಸ್ಥೆಯು ವಿಶ್ವದ ಉನ್ನತ ಸಂಸ್ಥೆಗಳಲ್ಲಿ ಏಕೆ ಇರಬಾರದು? ನಮ್ಮ ತಂತ್ರಜ್ಞಾನ ಕಂಪನಿಗಳು ಜಗತ್ತಿನಲ್ಲಿ ನಾಯಕರಾಗಬೇಕು. ಅದೇ ನಮ್ಮ ಗುರಿಯಾಗಿರಬೇಕು. ಜಗತ್ತನ್ನು ಆಕರ್ಷಿಸುವ ಬ್ರ್ಯಾಂಡ್‌ಗಳು ನಮ್ಮಲ್ಲಿರಬೇಕು. ನಮ್ಮ ಬ್ರ್ಯಾಂಡ್‌ಗಳು ನಮ್ಮ ದೇಶದ ಗುರುತಾಗಬೇಕು, ಭಾರತವನ್ನು ಜಾಗತಿಕಗೆ ತಾಣವನ್ನಾಗಿ ಮಾಡಲು, ನಾವು ಆ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಇದಕ್ಕಾಗಿ, ನಾನು ರಾಜ್ಯ ಸರ್ಕಾರಗಳಿಗೆ ಹೇಳಲು ಬಯಸುತ್ತೇನೆ, ಸ್ಥಳೀಯ ಸ್ವ-ಆಡಳಿತ ಸಂಸ್ಥೆಗಳಿಗೆ ಹೇಳಲು ಬಯಸುತ್ತೇನೆ, ಇದು ಭಾರತ ಸರ್ಕಾರದ ಜವಾಬ್ದಾರಿಯೂ ಆಗಿದೆ, ನಾವು ನಮ್ಮ ಸುಧಾರಣೆಗಳ ವೇಗವನ್ನು ಹೆಚ್ಚಿಸಬೇಕು. 2047ರ ಗುರಿಗೆ ಅನುಗುಣವಾಗಿ ನಾವು ನಮ್ಮ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು. ಹಿಂದಿನ ಯುಗದ ನೀತಿಗಳು ಮತ್ತು ನಿಯಮಗಳೊಂದಿಗೆ ನಾವು ಕಾರ್ಯ ನಿರ್ವಹಿಸುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಭವಿಷ್ಯದ ಕನಸುಗಳು ಮತ್ತು ಆಕಾಂಕ್ಷೆಗಳಿಗೆ ಅನುಗುಣವಾಗಿ ನಾವು ನೀತಿಗಳು ಮತ್ತು ನಿಯಮಗಳನ್ನು ರೂಪಿಸಬೇಕು. ನಾವು ಇದನ್ನು ಮಾಡಿದರೆ, ನನಗೆ ಸಂಪೂರ್ಣ ನಂಬಿಕೆ ಇದೆ. ಈ ಹಾದಿಯಲ್ಲಿ ನಮ್ಮ ಕಠಿಣ ಪರಿಶ್ರಮದಲ್ಲಿ ಯಾವುದೇ ಅವಕಾಶವನ್ನು ಬಿಡದೆ 'ವಿಕಿಸತ ಭಾರತ'ದ ಕನಸನ್ನು ನನಸಾಗಿಸಿಕೊಳ್ಳುತ್ತೇವೆ ಎಂದು ದೇಶದ ಜನರಿಗೆ ಭರವಸೆ ನೀಡುತ್ತೇನೆ. ನಾವೆಲ್ಲರೂ ಒಟ್ಟಾಗಿ ಮುಂದುವರಿಯಬೇಕು. ನಾವೆಲ್ಲರೂ, ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳು ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಮುಂದುವರಿಯಬೇಕು. ನಾವು ಸುಧಾರಣೆಗಳೊಂದಿಗೆ ಮುಂದುವರಿಯಬೇಕು. ನಾವು ಸುಧಾರಣೆಗಳನ್ನು ಮುಂದಕ್ಕೆ ಕೊಂಡೊಯ್ಯುತ್ತಲೇ ಇರಬೇಕು. ನಾನು ಮೊದಲೇ ಹೇಳಿದಂತೆ, ನಾವು ಸುಧಾರಣೆಗಳನ್ನು ಕೈಗೊಳ್ಳುತ್ತಿರುವುದು ಬಲವಂತದಿಂದಲ್ಲ, ಆದರೆ ದೃಢನಿಶ್ಚಯದಿಂದ. ನಮ್ಮ ಗುರಿಗಳನ್ನು ಸಾಧಿಸಲು ನಾವು ಅವುಗಳನ್ನು ಕೈಗೊಳ್ಳುತ್ತಿದ್ದೇವೆ.

ನನ್ನ ಪ್ರೀತಿಯ ನಾಗರಿಕರೆ,

ನಾನು 'ವಿಕಸಿತ ಭಾರತ'ದ ಬಗ್ಗೆ ಮಾತನಾಡುವಾಗ, ದೇಶವನ್ನು ವೇಗವಾಗಿ ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಮಾತನಾಡುವಾಗ, ಈ ಎಲ್ಲಾ ಪ್ರಯತ್ನಗಳ ದೊಡ್ಡ ಫಲಾನುಭವಿ ಯಾರು? ಈ ಪ್ರಯತ್ನಗಳನ್ನು ನಡೆಸುವ ದೊಡ್ಡ ಶಕ್ತಿ ಯಾರು? ಒಂದು ವೇಳೆ ಇದ್ದರೆ, ಅದು ನನ್ನ ದೇಶದ ಯುವಜನರು, ದೇಶದ ಯುವ ಶಕ್ತಿ. 'ವಿಕಸಿತ ಭಾರತ'ದತ್ತ ಸಾಗುವ ಪ್ರಯಾಣದಲ್ಲಿ ಯುವಕರು ಬಹಳ ಮುಖ್ಯ ಪಾತ್ರ ವಹಿಸುತ್ತಾರೆ. ಅಷ್ಟೇ ಅಲ್ಲ, 'ವಿಕಸಿತ ಭಾರತ'ದ ಅತ್ಯಂತ ದೊಡ್ಡ ಫಲಾನುಭವಿಗಳು ನನ್ನ ದೇಶದ ಯುವಕರು. ಆದ್ದರಿಂದ, ನಾವು 'ವಿಕಸಿತ ಭಾರತ'ದ ಗುರಿಯನ್ನು ನಮ್ಮ ಯುವಕರ ಆಕಾಂಕ್ಷೆಗಳು ಮತ್ತು ಭಾಗವಹಿಸುವಿಕೆಯೊಂದಿಗೆ ಸಂಪರ್ಕಿಸುವ ಮೂಲಕ ಮುಂದಕ್ಕೆ ತೆಕೊಂಡೊಯ್ಯಬೇಕು. ನಮ್ಮ ಯುವಕರನ್ನು ನಮ್ಮ ಹೆಚ್ಚಿನ ಆದ್ಯತೆಯಾಗಿಟ್ಟುಕೊಂಡು ನಾವು ಮುಂದುವರಿಯಬೇಕಿದೆ.

ಸ್ನೇಹಿತರೆ,

ಕಳೆದ 10-12 ವರ್ಷಗಳಲ್ಲಿ ಈ ದಿಕ್ಕಿನಲ್ಲಿ ಬಹಳಷ್ಟು ವಿಷಯಗಳು ನಡೆದಿವೆ. ಸ್ಟಾರ್ಟಪ್ ಇಂಡಿಯಾ ಉಪಕ್ರಮದಡಿ, ದೇಶಾದ್ಯಂತ ಈಗ 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟಪ್‌ಗಳಿವೆ. ದೇಶದ ಯುವಕರು ತಮಗಾಗಿ ಮಾತ್ರ ಕೆಲಸ ಮಾಡದೆ, ಇತರರಿಗೆ ಉದ್ಯೋಗ ಒದಗಿಸುತ್ತಿದ್ದಾರೆ. ಸರ್ಕಾರವು 1 ಲಕ್ಷ ಕೋಟಿ ರೂಪಾಯಿ ಮೊತ್ತದ ನಾವೀನ್ಯತೆ ನಿಧಿ ಘೋಷಿಸಿದೆ. ನಾನು ದೇಶದ ಯುವಜನರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಕನಸುಗಳೊಂದಿಗೆ ಮುಂದುವರಿಯಿರಿ; ಸಂಪನ್ಮೂಲಗಳ ಕೊರತೆಯಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಿಮ್ಮ ಹೃದಯ ಮತ್ತು ಮನಸ್ಸನ್ನು ಸಬಲೀಕರಣಗೊಳಿಸಲು ನಾವು 1 ಲಕ್ಷ ಕೋಟಿ ರೂಪಾಯಿ ಮೊತ್ತದ ವ್ಯವಸ್ಥೆಯನ್ನು ಜಾರಿಗೆ ತಂದಿದ್ದೇವೆ. ಸಂಶೋಧನೆಗೆ ಹೊಸ ಅವಕಾಶಗಳು ಹುಟ್ಟಿಕೊಂಡಿವೆ, ಡಿಜಿಟಲ್ ಇಂಡಿಯಾ ಮೂಲಕ ಕೈಗೆಟುಕುವ ದತ್ತಾಂಶದ ಲಭ್ಯತೆಯು ನಮ್ಮ ಯುವಕರನ್ನು ಸಬಲೀಕರಣಗೊಳಿಸಿದೆ. ಜಗತ್ತಿನಲ್ಲಿ ಎಲ್ಲಿಯಾದರೂ ಇಷ್ಟು ಕಡಿಮೆ ಬೆಲೆಯಲ್ಲಿ ದತ್ತಾಂಶ ಲಭ್ಯವಿದ್ದರೆ, ಅದು ಭಾರತೀಯ ನೆಲದಲ್ಲಿದೆ, ಇದು ದೇಶದ ಯುವಜನರಿಗೆ ಹೊಸ ಶಕ್ತಿ ನೀಡಿದೆ. ನಾವು ಕೌಶಲ್ಯ ಭಾರತವನ್ನು ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ಮಾಡಿದ್ದೇವೆ. ನಾವು ಬಾಹ್ಯಾಕಾಶ ವಲಯವನ್ನು ತೆರೆದಿದ್ದೇವೆ. ನಾವು ರಾಷ್ಟ್ರೀಯ ಡ್ರೋನ್ ನೀತಿ ರೂಪಿಸಿದ್ದೇವೆ. ನಾವು ಖೇಲೋ ಇಂಡಿಯಾ ನೀತಿ ರೂಪಿಸಿದ್ದೇವೆ. 35 ವರ್ಷಗಳಿಂದ ಯಾವುದೇ ಹೊಸ ಶಿಕ್ಷಣ ನೀತಿ ಇರಲಿಲ್ಲ, ನಾವು ಹೊಸ ಶಿಕ್ಷಣ ನೀತಿ ತಂದಿದ್ದೇವೆ, ಮಧ್ಯಮ ವರ್ಗದ ಕುಟುಂಬಗಳು ಅದರಿಂದ ಅಪಾರ ಪ್ರಯೋಜನ ಪಡೆದಿವೆ.

ಸ್ನೇಹಿತರೆ,

2004ರಿಂದ 2014ರ ವರೆಗಿನ ಅವಧಿಯ ಅಂಕಿಅಂಶಗಳನ್ನು ನಾನು ನಿಮಗೆ ನೀಡಲೇಬೇಕು. 2004ರಿಂದ 2014ರ ವರೆಗೆ ನಮ್ಮ ದೇಶದಲ್ಲಿ 350ಕ್ಕಿಂತ ಕಡಿಮೆ ವಿಶ್ವವಿದ್ಯಾಲಯಗಳು ಇದ್ದವು, ಆದರೆ ಇಂದು ಈ 10-12 ವರ್ಷಗಳಲ್ಲಿ ಸುಮಾರು 650 ಹೊಸ ವಿಶ್ವವಿದ್ಯಾಲಯಗಳು ಸೇರ್ಪಡೆಯಾಗಿವೆ. ನಾವು 1,000ಕ್ಕೆ ಹತ್ತಿರವಾಗುತ್ತಿದ್ದೇವೆ. 2014ರ ಮೊದಲು ಕೇವಲ 400 ವೈದ್ಯಕೀಯ ಸೀಟುಗಳು ಇದ್ದವು. ಇಂದು ಸುಮಾರು 850 ವೈದ್ಯಕೀಯ ಸೀಟುಗಳಿವೆ. ಅಷ್ಟೇ ಅಲ್ಲ, ವಿದೇಶಿ ವಿಶ್ವವಿದ್ಯಾಲಯಗಳು ಈಗ ಭಾರತಕ್ಕೆ ಬರುತ್ತಿವೆ. ನನ್ನ ಯುವಕರು ಭಾರತದಲ್ಲಿ ಅಧ್ಯಯನ ಮಾಡುವಾಗ ವಿದೇಶಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ನಮ್ಮ ದೇಶದ ಯುವ ಮನಸ್ಸುಗಳು ಬಾಲ್ಯದಿಂದಲೇ ತಂತ್ರಜ್ಞಾನದ ಕಡೆಗೆ ಆಕರ್ಷಿತರಾಗುವಂತೆ ನಾವು ಕೆಲಸ ಮಾಡುತ್ತಿದ್ದೇವೆ. ಅದಕ್ಕಾಗಿಯೇ ನಾವು 10,000ಕ್ಕೂ ಹೆಚ್ಚಿನ ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಚಿಕ್ಕ ಮಕ್ಕಳಿಗೆ ಹಸ್ತಾಂತರಿಸಿದ್ದೇವೆ, ಇದರಿಂದ ಅವರು ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬಹುದು. ನಾವು ಹಲವಾರು ಮಾರ್ಗಗಳನ್ನು ತೆರೆದಿದ್ದೇವೆ. ನಾವು ನವೋದ್ಯಮ ವಲಯವನ್ನು ತೆರೆದಿದ್ದೇವೆ. ಭಾರತದಲ್ಲಿ ಸರಾಸರಿ 28 ವರ್ಷ ವಯಸ್ಸಿನ ಯುವಕರ ನೇತೃತ್ವದಲ್ಲಿ ಖಾಸಗಿ ಸ್ಟಾರ್ಟಪ್‌ಗಳು ತಮ್ಮ ಉಪಗ್ರಹಗಳು ಮತ್ತು ರಾಕೆಟ್‌ಗಳನ್ನು ಉಡಾವಣೆ ಮಾಡಿ, ಮೊದಲ ಪ್ರಯೋಗದಲ್ಲೇ ಯಶಸ್ವಿಯಾಗಿರುವುದನ್ನು ನೀವು ನೋಡಿರಬೇಕು. ಅವರು ನಿಜವಾಗಿಯೂ ಗಮನಾರ್ಹವಾದದ್ದನ್ನು ಸಾಧಿಸಿದ್ದಾರೆ.

ಸ್ನೇಹಿತರೆ,

ಇಂದು 2.5 ಲಕ್ಷಕ್ಕೂ ಹೆಚ್ಚು ನೋಂದಾಯಿತ ಸ್ಟಾರ್ಟಪ್‌ಗಳಿವೆ. ನಾವು ಇತ್ತೀಚೆಗೆ ಎಐ ಇಂಪ್ಯಾಕ್ಟ್ ಶೃಂಗಸಭೆ ಆಯೋಜಿಸಿದ್ದೇವೆ. ಎಐ ವಿಸ್ತರಣೆ ಬಹಳ ವೇಗವಾಗಿ ನಡೆಯುತ್ತಿದೆ. ಕೆಂಪುಕೋಟೆಯ ಗೋಡೆಯಿಂದ, ದೇಶದ ಯುವ ಜನರಿಗೆ ನಾನು ಘೋಷಣೆ ಮಾಡಲು ಬಯಸುತ್ತೇನೆ. ಮುಂದಿನ ಒಂದು ವರ್ಷದಲ್ಲಿ ನಾವು 1 ಕೋಟಿ ಯುವಜನರಿಗೆ ಎಐ ಕೌಶಲ್ಯಗಳಲ್ಲಿ ತರಬೇತಿ ನೀಡಲು ನಾವು ನಿರ್ಧರಿಸಿದ್ದೇವೆ, ಇದರಿಂದ ನಮ್ಮ ದೇಶದ ಯುವಕರು ಎಐ ಜಗತ್ತನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿರುತ್ತಾರೆ.

ನನ್ನ ಸ್ನೇಹಿತರೆ,

ಜೈವಿಕ ಆರ್ಥಿಕತೆ ಹೊಸ ವಲಯವಾಗಿದೆ. 2014ರ ಮೊದಲು, ಜೈವಿಕ ಆರ್ಥಿಕತೆಯು ಕೇವಲ 60,000 ಕೋಟಿ ರೂ. ಮೌಲ್ಯದ್ದಾಗಿದ್ದ ಒಂದು ಸಮಯವಿತ್ತು. ನನ್ನ ದೇಶದ ಯುವಕರೆ, ನೀವು ಏನು ಸಾಧಿಸಿದ್ದೀರಿ ಎಂಬುದನ್ನು ನೋಡಿ. ನೀತಿಗಳು ಸರಿಯಾಗಿದ್ದಾಗ ಮತ್ತು ಗುರಿಗಳು ಸ್ಪಷ್ಟವಾಗಿದ್ದಾಗ, ನನ್ನ ದೇಶದ ಯುವಕರು ಹೇಗೆ ಸಾಧಿಸಬಹುದು ಎಂಬುದನ್ನು ನೀವು ನೋಡಬಹುದು. ಜೈವಿಕ ಆರ್ಥಿಕತೆಯಲ್ಲಿ ದೇಶದ ಯುವ ಶಕ್ತಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ. 2014ಕ್ಕಿಂತ ಮೊದಲು, ಈ ವಲಯವು 60,000 ಕೋಟಿ ರೂ. ವಹಿವಾಟು ಹೊಂದಿತ್ತು. ಇಂದು ಜೈವಿಕ ಆರ್ಥಿಕತೆ 20 ಲಕ್ಷ ಕೋಟಿ ರೂ.ಗೆ ತಲುಪಿದೆ, ನನ್ನ ಸ್ನೇಹಿತರೆ. 2009–10ರಲ್ಲಿ ಕೇವಲ 1.5 ಲಕ್ಷ ವಿದ್ಯುತ್ ವಾಹನಗಳು ಮಾರಾಟವಾಗಿದ್ದವು. 2025–26ರಲ್ಲಿ 25 ಲಕ್ಷ ವಿದ್ಯುತ್ ವಾಹನಗಳು ಮಾರಾಟವಾಗಿವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ವಿಮಾನಯಾನ ವಲಯವು ಸಹ ಬಹಳ ವೇಗವಾಗಿ ಮುಂದುವರಿಯುತ್ತಿದ್ದು, ನಮ್ಮ ಯುವ ಜನರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸುತ್ತಿದೆ. ಹೊಸ ವಿಮಾನ ನಿಲ್ದಾಣಗಳು, ಹೊಸ ಮಾರ್ಗಗಳು ಮತ್ತು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ನಿರ್ವಹಣೆ ಮತ್ತು ಕೂಲಂಕುಷ ಪರೀಕ್ಷೆಯು ದೇಶದಲ್ಲಿ ಹೆಚ್ಚಿನ ಸಂಖ್ಯೆಯ ಕೌಶಲ್ಯಪೂರ್ಣ ಕೆಲಸಗಾರರಿಗೆ ಉದ್ಯೋಗ ಸೃಷ್ಟಿಸುತ್ತಿದೆ. ಭಾರತದಲ್ಲಿ ವಿಮಾನಗಳ ತಯಾರಿಕೆಯತ್ತ ಸಾಗುವಲ್ಲಿ ನಾವು ಯಶಸ್ಸನ್ನು ಸಾಧಿಸಿದ್ದೇವೆ. ಭಾರತದಲ್ಲಿ ತಯಾರಿಸಿದ ರಕ್ಷಣಾ ಸಾರಿಗೆ ವಿಮಾನ ಸಿ295 ಈಗಾಗಲೇ ಆಕಾಶಕ್ಕೆ ಹಾರಿ, ಯಶಸ್ವಿ ಹಾರಾಟ ಪೂರ್ಣಗೊಳಿಸಿದೆ. ಇದು ದೇಶದ ಯುವಜನರಿಗೆ ಒಂದು ಪ್ರಮುಖ ಸಾಧನೆಯಾಗಿದೆ. ನನ್ನ ನಾಗರಿಕರೆ, ಡ್ರೋನ್‌ಗಳು ಸಹ ಬಹಳ ಮಹತ್ವದ ಪಾತ್ರ ವಹಿಸಿವೆ. ಸ್ವಾಮಿತ್ವ ಯೋಜನೆಯನ್ನು ಡ್ರೋನ್‌ಗಳ ಮೂಲಕ ಹಳ್ಳಿಗಳಲ್ಲಿ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ. ಸುಮಾರು 3.25 ಕೋಟಿ ಕುಟುಂಬಗಳು ಸ್ವಾಮಿತ್ವ ಯೋಜನೆಯಿಂದ ಪ್ರಯೋಜನ ಪಡೆದಿವೆ. ಇದರ ಪರಿಣಾಮವಾಗಿ, ಸುಮಾರು 140 ಲಕ್ಷ ಕೋಟಿ ರೂ. ಮೌಲ್ಯದ ಸ್ವತ್ತುಗಳು ಜನರಿಗೆ ಲಭ್ಯವಾಗಿವೆ. ಇದು ಜನರು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಮತ್ತು ಸ್ವಂತ ವ್ಯವಹಾರಗಳನ್ನು ಪ್ರಾರಂಭಿಸಲು ಸಹ ಅನುವು ಮಾಡಿಕೊಡುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಮ್ಮ ಮಧ್ಯಮ ವರ್ಗದ ಕುಟುಂಬಗಳಿಗೆ ತರಬೇತಿ ಪಡೆಯುವುದೇ ಬಹುದೊಡ್ಡ ಹೊರೆಯಾಗಿದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಗುವನ್ನು ತರಬೇತಿ ತರಗತಿಗೆ ಕಳುಹಿಸದಿದ್ದರೆ, ಅವರು ಸಮಾಜದ ನಿರೀಕ್ಷೆಗಳನ್ನು ಪೂರೈಸುವುದಿಲ್ಲ ಎಂದು ಭಾವಿಸುತ್ತಾರೆ. ಈ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು, ಅವರು ಖರ್ಚು ಮಾಡುವ ಸಾವಿರಾರು ಕೋಟಿ ರೂಪಾಯಿ ಉಳಿಸಲು, ಅವರ ಪುತ್ರರು ಮತ್ತು ಪುತ್ರಿಯರು ಮನೆಯ ಹತ್ತಿರದಲ್ಲೇ ಇರಲು ಅವಕಾಶ ನೀಡಲು, ಅವರನ್ನು ನೋಡಿಕೊಳ್ಳಬಹುದೆಂದು ಖಚಿತಪಡಿಸಿಕೊಳ್ಳಲು ಮತ್ತು ಕುಟುಂಬದ ಮೇಲೆ ಆರ್ಥಿಕ ಹೊರೆ ಬೀಳದಂತೆ ತಡೆಯಲು ನಾವು ಬಯಸುತ್ತೇವೆ. ಆದ್ದರಿಂದ, ವಿವಿಧ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ ಉಚಿತ ಆನ್‌ಲೈನ್ ತರಬೇತಿ ನೀಡಲು ನಾವು ನಿರ್ಧರಿಸಿದ್ದೇವೆ. ನಮ್ಮಲ್ಲಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವಿದೆ, ನಮ್ಮಲ್ಲಿ ಅತ್ಯುತ್ತಮ ಪ್ರತಿಭೆಗಳಿವೆ, ನಮ್ಮಲ್ಲಿ ಶಿಕ್ಷಕರಿದ್ದಾರೆ. ಈ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಮೂಲಕ, ದೇಶದ ಯುವಜನರಿಗೆ ಉಚಿತ ತರಬೇತಿ ನೀಡಲು ನಾವು ವ್ಯಾಪಕ ಜಾಲವನ್ನು ನಿರ್ಮಿಸಲಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ನಾನು ಯಾವಾಗಲೂ ಹೇಳುತ್ತಿದ್ದೆ, "ಟೀಕೆಗೆ ಒಳಗಾಗುವವರು ಏಳ್ಗೆ ಹೊಂದುತ್ತಾರೆ". ನಾನು 'ಖೇಲೋ, ಖಿಲೋ' ಬಗ್ಗೆ ಮಾತನಾಡುವಾಗ, ನನ್ನ ಪ್ರೀತಿಯ ದೇಶವಾಸಿಗಳೆ, ಭಾರತ ಇಂದು ಕ್ರೀಡಾ ಜಗತ್ತಿನಲ್ಲಿ ತನ್ನ ಛಾಪು ಮೂಡಿಸುತ್ತಿದೆ ಎಂದು ನಾನು ಹೇಳಲು ಬಯಸುತ್ತೇನೆ. ಭಾರತದ ರಾಷ್ಟ್ರಗೀತೆ ಈಗ ಕ್ರೀಡಾ ವೇದಿಕೆಗಳಲ್ಲಿ ಕೇಳಿಬರುತ್ತ, ತ್ರಿವರ್ಣ ಧ್ವಜವು ಹೆಮ್ಮೆಯಿಂದ ಹಾರಾಡುತ್ತಿರುವುದನ್ನು ಕಾಣಬಹುದು. ಟಾಪ್ಸ್ ಯೋಜನೆ ಅದ್ಭುತ ಯಶಸ್ಸನ್ನು ಸಾಧಿಸಿದೆ. ಖೇಲೋ ಇಂಡಿಯಾ ಕ್ರೀಡಾಕೂಟ, ವಿಶ್ವವಿದ್ಯಾಲಯ ಕ್ರೀಡಾಕೂಟ, ಚಳಿಗಾಲದ ಕ್ರೀಡಾಕೂಟ, ಬೀಚ್ ಕ್ರೀಡಾಕೂಟ, ಕ್ರೀಡಾ ಮೂಲಸೌಕರ್ಯ, ಕ್ರೀಡೆಗಳಿಗೆ ತರಬೇತಿ, ಕ್ರೀಡಾ ಔಷಧ ಮತ್ತು ಕ್ರೀಡಾ ಪೋಷಣೆ, ಈ ಎಲ್ಲಾ ಕ್ಷೇತ್ರಗಳಲ್ಲಿ ಭಾರತವು ಶ್ರೇಷ್ಠತೆ ಸಾಧಿಸುವತ್ತ ಮುನ್ನಡೆಯುತ್ತಿದೆ. ಕ್ರೀಡೆಗಳ ಸುತ್ತಲಿನ ಬೆಂಬಲ ವ್ಯವಸ್ಥೆಯೊಳಗೆ ಯುವಜನರಿಗೆ ಅವಕಾಶಗಳ ವಿಶಾಲವಾದ ಹೊಸ ಕ್ಷೇತ್ರ ತೆರೆದುಕೊಳ್ಳುತ್ತಿದೆ. ಕ್ರೀಡಾ ಜಗತ್ತಿನಲ್ಲಿ ಭಾರತದ ಸಾಧನೆ ಸ್ಥಿರವಾಗಿ ಸುಧಾರಿಸುತ್ತಿದೆ, ನಾವು 2036ರ ಒಲಿಂಪಿಕ್ಸ್ ಆಯೋಜಿಸಲು ಪ್ರಬಲ ಸ್ಪರ್ಧಿಗಳಾಗಿ ಮುಂದುವರಿಯುತ್ತಿದ್ದೇವೆ. ಭಾರತ್ 2030ರಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಸಹ ಆಯೋಜಿಸಲಿದೆ.

ನನ್ನ ನಾಗರಿಕರೆ,

ವಿಶ್ವದಾದ್ಯಂತ ನಡೆಯುವ ಒಲಿಂಪಿಕ್ ಕ್ರೀಡಾಕೂಟವು ಸುಮಾರು 40 ವಿವಿಧ ಕ್ರೀಡೆಗಳನ್ನು ಒಳಗೊಂಡಿದೆ, ಇದು ಸುಮಾರು 325–350 ಸ್ಪರ್ಧೆಗಳನ್ನು ಒಳಗೊಂಡಿದೆ. ನನ್ನ ದೇಶವಾಸಿಗಳೆ, ನನ್ನ ಯುವ ಸ್ನೇಹಿತರೆ, ಈ 325 ಸ್ಪರ್ಧೆಗಳಲ್ಲಿ ಸುಮಾರು ಮೂರನೇ ಎರಡರಷ್ಟು ಭಾಗಗಳಲ್ಲಿ ಭಾರತ ಭಾಗವಹಿಸುವುದಿಲ್ಲ ಎಂಬುದು ನಿಮಗೆ ನೋವುಂಟು ಮಾಡುತ್ತದೆ. ನಾವು ಇಲ್ಲ, ನಾವು ಅರ್ಹತೆ ಪಡೆದಿಲ್ಲ. ನಾನು ನಿಮಗೆ ಸವಾಲು ಹಾಕುತ್ತೇನೆ, ನಾನು ನಿಮಗೆಮನವಿ ಮಾಡುತ್ತೇನೆ, ನಿಮ್ಮ ಬೆಂಬಲ ಕೋರುತ್ತೇನೆ. 2036ರ ಒಲಿಂಪಿಕ್ಸ್ ಭಾರತದಲ್ಲಿ ನಡೆಯಬೇಕೆಂದು ನಾವು ನಿರ್ಧರಿಸಿದ್ದೇವೆ. ಆದರೆ 2036ರಲ್ಲಿ, ಭಾರತ ಇಂದು ಸ್ಪರ್ಧಿಸದ ಅಥವಾ ಅರ್ಹತೆ ಪಡೆಯದ ಕ್ರೀಡಾಕೂಟಗಳಲ್ಲಿ, ಭಾರತ ದೂರ ಉಳಿದಿರುವ ಕಾರ್ಯಕ್ರಮಗಳಲ್ಲಿ, ಕ್ಷೇತ್ರದ ಮುಕ್ಕಾಲು ಭಾಗ ನಮಗಾಗಿ ಕಾಯುತ್ತಿದೆ. ಭಾರತ ಈ ಕ್ರೀಡಾಕೂಟಗಳ ಮೇಲೆ ಗಮನ ಹರಿಸಬೇಕು. ಈ ಉದ್ದೇಶಕ್ಕಾಗಿ ನಾವು ಪ್ರತಿಭಾ ಹುಡುಕಾಟ ಅಭಿಯಾನ ಆರಂಭಿಸಲು ಬಯಸುತ್ತೇವೆ. 2036ಕ್ಕೆ ನಮಗೆ ಕ್ರೀಡಾಪಟುಗಳು ಬೇಕಾದರೆ, ನಾವು ಇಂದು 5, 10 ಅಥವಾ 15 ವರ್ಷ ವಯಸ್ಸಿನ ಈ ಯುವ ಹುಡುಗರು ಮತ್ತು ಹುಡುಗಿಯರ ಮೇಲೆ ಗಮನ ಹರಿಸಬೇಕು. ನಮ್ಮ ಹೆಣ್ಣು ಮಕ್ಕಳ ಬಗ್ಗೆಯೂ ನಾವು ಗಮನ ಹರಿಸಬೇಕು. ಆದ್ದರಿಂದ, 5ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಕ್ರೀಡಾ ಪ್ರತಿಭೆ ಗುರುತಿಸಲು ದೇಶಾದ್ಯಂತ ಹಳ್ಳಿಗಳು, ನಗರಗಳು ಮತ್ತು ಶಾಲೆಗಳಲ್ಲಿ ಪ್ರತಿಭಾ ಶೋಧ ಅಭಿಯಾನ ನಡೆಸಲಾಗುವುದು. ಅವರ ಸಾಮರ್ಥ್ಯಗಳನ್ನು ನಿರ್ಣಯಿಸಲಾಗುತ್ತದೆ ಮತ್ತು ನಂತರ ಅವರನ್ನು ದೇಶವನ್ನು ಪ್ರತಿನಿಧಿಸಬಲ್ಲ ಸಾಧನೆಗೈದ ಕ್ರೀಡಾಪಟುಗಳಾಗಿ ಅಭಿವೃದ್ಧಿಪಡಿಸಲು ವಿಶೇಷ ತರಬೇತಿ ನೀಡಲಾಗುತ್ತದೆ.

ನನ್ನ ಪ್ರೀತಿಯ ಯುವ ಸ್ನೇಹಿತರೆ,

ಮಾದಕ ವಸ್ತುಗಳ ದುರುಪಯೋಗವು ದೇಶ ಮತ್ತು ಅದರ ಯುವಜನರಿಗೆ ದೊಡ್ಡ ಬಿಕ್ಕಟ್ಟಾಗುತ್ತಿದೆ. 'ನಶೆ ಮುಕ್ತ ಭಾರತ' ಅಥವಾ ಮಾದಕ ವಸ್ತು ಮುಕ್ತ ಭಾರತವು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿರಬೇಕು. ನಮ್ಮ ಉಜ್ವಲ ಭವಿಷ್ಯಕ್ಕಾಗಿ, ನಮ್ಮ ಯುವ ಪೀಳಿಗೆ ಬಲಿಷ್ಠವಾಗಿರಬೇಕು, ನಮ್ಮ ಯುವಕರ ಶಕ್ತಿಯನ್ನು ನಮ್ಮ ದೇಶದ ಪ್ರಗತಿಗೆ ಬಳಸಿಕೊಳ್ಳಬೇಕು. ಆದ್ದರಿಂದ, ಇತ್ತೀಚಿನ ದಿನಗಳಲ್ಲಿ ನನ್ನ ಭಾರತದ ಸ್ವಯಂಸೇವಕರು, ದೇಶಾದ್ಯಂತದ ಎನ್‌ಜಿಒಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಆಧ್ಯಾತ್ಮಿಕ ನಾಯಕರು ಮಾದಕ ವಸ್ತು ಮುಕ್ತ ಭಾರತಕ್ಕಾಗಿ 100 ವಾರಗಳ ಕಾರ್ಯಕ್ರಮ ಪ್ರಾರಂಭಿಸಲು ಒಟ್ಟಾಗಿ ಬಂದಿದ್ದಾರೆ. ಒಂದು ಅಭಿಯಾನವು 100 ವಾರಗಳ ಕಾಲ ನಡೆಯಲಿದೆ. ನಾನು ಪ್ರತಿ ಕುಟುಂಬಕ್ಕೂ ಹೇಳಲು ಬಯಸುತ್ತೇನೆ. ನೀವು ಕೂಡ ಈ ಅಭಿಯಾನದ ಭಾಗವಾಗಬೇಕು, ಅದರಲ್ಲಿ ಸೇರಬೇಕು ಮತ್ತು ನಶೆ ಮುಕ್ತ ಭಾರತದ ಕನಸನ್ನು ನನಸಾಗಿಸಲು ಮುಂದೆ ಬರಬೇಕು.

ನನ್ನ ಪ್ರೀತಿಯ ದೇಶವಾಸಿಗಳೆ,

21ನೇ ಶತಮಾನದಲ್ಲಿ, ದಶಕಗಳಿಂದ ಉಳಿದುಕೊಂಡಿರುವ ಸವಾಲುಗಳನ್ನು ನಾವು ತೊಡೆದುಹಾಕುವುದು ಅತ್ಯಗತ್ಯ. ನಕ್ಸಲಿಸಂ ಮತ್ತು ಮಾವೋವಾದವು ಲಕ್ಷಾಂತರ ಯುವಜನರ ಭವಿಷ್ಯವನ್ನು ನಾಶಪಡಿಸಿದೆ. ಅವರು ಅಸಂಖ್ಯಾತ ತಾಯಂದಿರ ಹೆಮ್ಮೆಯಾಗಿದ್ದ ಯುವ ಜೀವಗಳನ್ನು ಕಸಿದುಕೊಂಡು ಹಾಳು ಮಾಡಿದ್ದಾರೆ. ಪ್ರತಿಯೊಬ್ಬ ಪೋಷಕರ ಕನಸುಗಳನ್ನು ಛಿದ್ರಗೊಳಿಸಿದ್ದಾರೆ. 4 ದೀರ್ಘ ದಶಕಗಳಿಂದ ನಕ್ಸಲಿಸಂ ಭಾರತದ ಬಹುಭಾಗವನ್ನು ಮತ್ತು ಅದರ ಜನಸಂಖ್ಯೆಯ ಬಹುಭಾಗವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿತ್ತು. ಅದು ಸಂವಿಧಾನವನ್ನು ಚೂರುಚೂರು ಮಾಡಿತು, ದೇಶದ ಸಾಮಾನ್ಯ ನಾಗರಿಕರನ್ನು ರಕ್ಷಿಸುವಾಗ 3,500ಕ್ಕೂ ಹೆಚ್ಚಿನ ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿ ಹುತಾತ್ಮರಾದರು. ಸಾಮಾನ್ಯ ನಾಗರಿಕರು ಸುರಕ್ಷಿತವಾಗಿ ಬದುಕಲು ಸಾಧ್ಯವಾಗುವಂತೆ ಮಾಡಲು ಯುದ್ಧದಲ್ಲಿ ಪ್ರಾಣ ಕಳೆದುಕೊಂಡ ಸೈನಿಕರ ಸಂಖ್ಯೆಗಿಂತ ಹೆಚ್ಚಿನ ಪೊಲೀಸ್ ಸಿಬ್ಬಂದಿ ತಮ್ಮ ಪ್ರಾಣ ತ್ಯಾಗ ಮಾಡಬೇಕಾಯಿತು. ನಕ್ಸಲಿಸಂ ಭೂಮಿಯನ್ನು ರಕ್ತದಲ್ಲಿ ತೊಯ್ದಿತ್ತು. 2014ರಲ್ಲಿ ನೀವು ನಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಆ ದಿನವೇ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸಲು ನಾವು ಸಂಕಲ್ಪ ಮಾಡಿದೆವು. ಇಂದು, ನಕ್ಸಲೀಯ-ಮಾವೋವಾದಿ ಹಿಂಸಾಚಾರವು ತನ್ನ ಅಂತಿಮ ಉಸಿರು ತೆಗೆದುಕೊಳ್ಳುವ ಶಕ್ತಿಯನ್ನು ಸಹ ಹೊಂದಿಲ್ಲ ಎಂದು ಹೇಳಲು ನನಗೆ ಸಂತೋಷವಾಗಿದೆ. ನಾವು ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವತ್ತ ಸಾಗುತ್ತಿದ್ದೇವೆ. ಒಂದು ಕಾಲದಲ್ಲಿ ನಕ್ಸಲೀಯರು ತಮ್ಮ ಬಂದೂಕುಗಳನ್ನು ಹಾರಿಸಿದ ಪ್ರದೇಶಗಳಲ್ಲಿ, ಒಂದು ಕಾಲದಲ್ಲಿ ಭೂಮಿಯು ರಕ್ತಸಿಕ್ತವಾಗಿದ್ದ ಪ್ರದೇಶಗಳಲ್ಲಿ, ಇಂದು, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಅಭಿವೃದ್ಧಿ, ನಂಬಿಕೆ ಮತ್ತು ಪ್ರಯತ್ನದ ತ್ರಿವರ್ಣ ಧ್ವಜವು ನಕ್ಸಲಿಸಂನಿಂದ ಮುಕ್ತವಾಗಿ ಎತ್ತರಕ್ಕೆ ಹಾರುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಆದರೆ ನಾವು ಈ ಸವಾಲನ್ನು ಕಡಿಮೆ ಅಂದಾಜು ಮಾಡಬಾರದು. ಈ ಸವಾಲಿನ ಬಗ್ಗೆ ನಾವು ಇನ್ನಷ್ಟು ಜಾಗರೂಕರಾಗಿರಬೇಕು. ಅನೇಕ ವರ್ಷಗಳಿಂದ ಮಾವೋವಾದಿ ಸಿದ್ಧಾಂತ ಹೊಂದಿರುವ ವ್ಯಕ್ತಿಗಳು ದೇಶದ ಅಧಿಕಾರದ ಕಾರಿಡಾರ್‌ಗಳಲ್ಲಿ ತಮ್ಮ ಸ್ಥಾನ ಪಡೆದುಕೊಂಡಿದ್ದರು. ಸರ್ಕಾರಿ ಸಮಿತಿಗಳಲ್ಲಿ ಸಲಹೆಗಾರರಾಗಿಯೂ ಸಹ, ಈ ಮಾವೋವಾದಿ ಸಿದ್ಧಾಂತವು ನೀತಿಯ ಮೇಲೆ ಪ್ರಭಾವ ಬೀರಿತು.

ನನ್ನ ಪ್ರೀತಿಯ ನಾಗರಿಕರೆ,

ನಾವು ಕಾಡಿನಿಂದ ಸಶಸ್ತ್ರಸಜ್ಜಿತ ನಕ್ಸಲರನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ದೇಶವನ್ನು ಆ ಬೆದರಿಕೆಯಿಂದ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಆದಾಗ್ಯೂ, ಸಶಸ್ತ್ರಸಜ್ಜಿತ ನಕ್ಸಲರು ಹೋಗಿದ್ದರೂ, ಮಾನಸಿಕ ನಕ್ಸಲರು ಉಳಿದಿದ್ದಾರೆ, ಈ ಮಾನಸಿಕ ನಕ್ಸಲರು ಅವಕಾಶಕ್ಕಾಗಿ ಹುಡುಕುತ್ತಿದ್ದಾರೆ. ಅವರು ಹಿಂಸೆ ಮತ್ತು ಅರಾಜಕತೆಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಸಮಾಜವನ್ನು ತಪ್ಪು ಹಾದಿಗೆ ಎಳೆಯಲು ಅವರು ವಿವಿಧ ತಂತ್ರಗಳನ್ನು ಆಶ್ರಯಿಸುತ್ತಿದ್ದಾರೆ. ನಾವು ಈ ಮಾನಸಿಕ ನಕ್ಸಲರನ್ನು ಗುರುತಿಸಬೇಕು, ಅವರನ್ನು ಪ್ರತ್ಯೇಕಿಸಬೇಕು. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಮುಖ್ಯವಾಹಿನಿಯ ಪ್ರಯತ್ನದ ಕಡೆಗೆ ದೇಶದ ಯುವಕರನ್ನು ಕರೆದೊಯ್ಯಬೇಕು.

ನನ್ನ ಪ್ರೀತಿಯ ನಾಗರಿಕರೆ,

ಸುರಕ್ಷಿತ ಭಾರತ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸವಾಲು ಗಡಿಯೊಳಗೆ ಅಥವಾ ಹೊರಗೆ ಇರಲಿ, ಭಾರತವು ಯಾವುದೇ ಪರಿಸ್ಥಿತಿಗೆ ಸಿದ್ಧವಾಗಿದೆ. ಇಂದು ಯುದ್ಧದ ಸ್ವರೂಪ ಬದಲಾಗುತ್ತಿದೆ, ಸಂಘರ್ಷವು ಗಡಿಗಳಿಗೆ ಸೀಮಿತವಾಗಿರುತ್ತದೆ ಎಂಬುದಕ್ಕೆ ಇನ್ನು ಮುಂದೆ ಯಾವುದೇ ಗ್ಯಾರಂಟಿ ಇಲ್ಲ. ಆಧುನಿಕ ಯುದ್ಧವು ಸಂಸ್ಕರಣಾಗಾರಗಳು, ಬ್ಯಾಂಕಿಂಗ್ ವಲಯ ಅಥವಾ ಡೇಟಾ ಕೇಂದ್ರಗಳನ್ನು ಗುರಿಯಾಗಿಸಬಹುದು, ಒಂದು ಅರ್ಥದಲ್ಲಿ ಮೂಲಸೌಕರ್ಯ ಮತ್ತು ಕಾರ್ಖಾನೆಗಳು ನಾಶವಾಗುತ್ತಿರುವ ಹೊಸ ರೀತಿಯ ಯುದ್ಧ. ನಾವು ಕೆಲವು ವರ್ಷಗಳ ಹಿಂದೆ 'ಮಿಷನ್ ಸುದರ್ಶನ ಚಕ್ರ' ಘೋಷಿಸಿದ್ದೇವೆ, ಅದರ ಮೇಲಿನ ಕೆಲಸವು ವೇಗವಾಗಿ ಪ್ರಗತಿಯಲ್ಲಿದೆ. ಇಂದು ನಮ್ಮ ರಕ್ಷಣಾ ರಫ್ತು ಸುಮಾರು 50 ಪಟ್ಟು ಹೆಚ್ಚಾಗಿದೆ. ನಮ್ಮ ಶಸ್ತ್ರಾಸ್ತ್ರಗಳು ಸುಮಾರು 100 ದೇಶಗಳನ್ನು ತಲುಪುತ್ತಿವೆ. ಜಾಗತಿಕ ವೇದಿಕೆಯಲ್ಲಿ ಭಾರತದ ಖ್ಯಾತಿ ಹಂತ ಹಂತವಾಗಿ ಹೆಚ್ಚುತ್ತಿದೆ. ಈ ಬದಲಾಗುತ್ತಿರುವ ಕಾಲದಲ್ಲಿ, ನಾವು ರಕ್ಷಣಾ ಸಾಧನಗಳ ಮೇಲೆ ಗಮನ ಕೇಂದ್ರೀಕರಿಸಬೇಕು. ನಮ್ಮ ಸಶಸ್ತ್ರ ಪಡೆಗಳ ಸಾಮರ್ಥ್ಯಗಳನ್ನು ಹೆಚ್ಚಿಸಬೇಕು, ಆದರೆ ಅದೇ ಸಮಯದಲ್ಲಿ, ನಾಗರಿಕರು ಸಹ ಸಿದ್ಧರಾಗಿರಬೇಕು. ಕಳೆದ ಶತಮಾನದ ಯುದ್ಧಗಳಿಗೆ ಅನುಗುಣವಾಗಿ ನಮ್ಮ ದೇಶದಲ್ಲಿ ಅಭಿವೃದ್ಧಿ ಹೊಂದಿದ ನಾಗರಿಕ ರಕ್ಷಣಾ ವ್ಯವಸ್ಥೆಗಳು ಹಳೆಯದಾಗಿವೆ. ಆದ್ದರಿಂದ, ಮುಂಬರುವ ದಿನಗಳಲ್ಲಿ, ನಾವು ನಾಗರಿಕ ರಕ್ಷಣಾ ಜಾಲ ರೂಪಿಸುತ್ತೇವೆ ಎಂದು ನಾನು ಇಂದು ಕೆಂಪು ಕೋಟೆಯಿಂದ ಘೋಷಿಸುತ್ತಿದ್ದೇನೆ. ನಾವು ಅವರಿಗೆ ಆಧುನಿಕ ವ್ಯವಸ್ಥೆಗಳೊಂದಿಗೆ ಪರಿಚಿತರಾಗುತ್ತೇವೆ. ಆಧುನಿಕ ಬಿಕ್ಕಟ್ಟುಗಳಿಂದ ನಾಗರಿಕರನ್ನು ರಕ್ಷಿಸಲು ಯಾವ ವ್ಯವಸ್ಥೆಗಳನ್ನು ಮಾಡಬಹುದು? ಆಧುನಿಕ ಸವಾಲುಗಳನ್ನು ನಿವಾರಿಸಲು ನಾವು ನಾಗರಿಕ ರಕ್ಷಣಯ ಬೃಹತ್ ಸ್ವಯಂಸೇವಾ ಪಡೆ ರಚಿಸಲಿದ್ದೇವೆ.

ನನ್ನ ಪ್ರೀತಿಯ ದೇಶವಾಸಿಗಳೆ,

ರಾಷ್ಟ್ರ ನಿರ್ಮಾಣಕ್ಕೆ ನಮ್ಮ ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಕೊಡುಗೆ ನಮಗೆಲ್ಲರಿಗೂ ದೊಡ್ಡ ಸ್ಫೂರ್ತಿಯ ಸೆಲೆಯಾಗಿದೆ. ಫೈಟರ್ ಜೆಟ್‌ಗಳಲ್ಲಿರಲಿ ಅಥವಾ ನಾಗರಿಕ ವಿಮಾನಯಾನದಲ್ಲಿರಲಿ, ನಮ್ಮ ಹೆಣ್ಣು ಮಕ್ಕಳು ಮುಂಚೂಣಿಯಲ್ಲಿದ್ದಾರೆ. ಅವರು ಕ್ರೀಡಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ(ಸ್ಟೆಮ್-STEM) ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ನಮ್ಮ ಹೆಣ್ಣು ಮಕ್ಕಳು ಹೆಚ್ಚು ಮುಂಚೂಣಿಯಲ್ಲಿದ್ದಾರೆ. ಸಶಸ್ತ್ರ ಪಡೆಗಳಲ್ಲಿಯೂ ಸಹ, ಎನ್‌ಡಿಎಯಿಂದ ಪದವಿ ಪಡೆದ ಹೆಣ್ಣು ಮಕ್ಕಳು ಹೆಚ್ಚಿನ ಆತ್ಮವಿಶ್ವಾಸ ಮತ್ತು ಅಧಿಕಾರದಿಂದ ದೇಶದ ಮಿಲಿಟರಿ ಮುನ್ನಡೆಸುವ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ನನ್ನ ಹೆಣ್ಣು ಮಕ್ಕಳ ನಿಜವಾದ ಶಕ್ತಿ ನೋಡಲು ನಾನು ಇತ್ತೀಚೆಗೆ ಸನಂದ್‌ನಲ್ಲಿರುವ ಸೆಮಿಕಂಡಕ್ಟರ್ ಘಟಕಕ್ಕೆ ಭೇಟಿ ನೀಡಿದ್ದೇನೆ, ಅಲ್ಲಿ ದೇಶದ ವಿವಿಧ ಮೂಲೆಗಳಿಂದ ಬುಡಕಟ್ಟು ಹೆಣ್ಣು ಮಕ್ಕಳು ಕೆಲಸ ಮಾಡುತ್ತಿದ್ದರು. ಅವರು ಪಾಸ್‌ಪೋರ್ಟ್ ಎಂದರೇನು ಎಂದು ಜನರಿಗೆ ತಿಳಿದಿಲ್ಲದ ಹಳ್ಳಿಗಳಿಂದ ಬಂದವರು. ಆ ಹೆಣ್ಣು ಮಕ್ಕಳು ವಿದೇಶಕ್ಕೆ ಹೋದರು, ತರಬೇತಿ ಪಡೆದರು. ಇಂದು ಅವರು ಚಿಪ್ ತಯಾರಿಕೆಯಲ್ಲಿ ಮತ್ತು ಹೆಚ್ಚಿನ ವಿಶ್ವಾಸದಿಂದ ಕೆಲಸ ಮಾಡುತ್ತಿದ್ದಾರೆ. ನಾನು ಅವರಲ್ಲಿ ಕಂಡ ವಿಶ್ವಾಸದಿಂದ ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೆ. 3 ಕೋಟಿ ಸಹೋದರಿಯರನ್ನು 'ಲಖ್ಪತಿ ದೀದಿ'ಗಳನ್ನಾಗಿ ಮಾಡುವ ಗುರಿಯನ್ನು ನಾವು ಹೊಂದಿದ್ದೇವೆ, ಈಗಾಗಲೇ ಆ ಗುರಿ ದಾಟಿದ್ದೇವೆ. ಈಗ ನಾವು 6 ಕೋಟಿ ಲಖ್ಪತಿ ದೀದಿಗಳನ್ನು ರಚಿಸುವ ಗುರಿಯೊಂದಿಗೆ ಮುಂದುವರಿಯುತ್ತಿದ್ದೇವೆ. 3 ಕೋಟಿ ಹೊಸ ಲಖ್ಪತಿ ದೀದಿಗಳ ಸೃಷ್ಟಿಯು ಮಹಿಳೆಯರ ಶಕ್ತಿಯಿಂದ ಮುನ್ನಡೆಸಲ್ಪಡುವ ಗ್ರಾಮೀಣ ಆರ್ಥಿಕತೆಯಲ್ಲಿ ಬೃಹತ್ ಪರಿವರ್ತನೆಯನ್ನು ಸೂಚಿಸುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೆ,

ಇಂದು ಪಂಚಾಯಿತಿಗಳು, ಪುರಸಭೆಗಳು ಮತ್ತು ನಗರಸಭೆಗಳಲ್ಲಿ ನಮ್ಮ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸಾರ್ವಜನಿಕ ಪ್ರತಿನಿಧಿಗಳಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ, ಸಮಸ್ಯೆಗಳನ್ನು ಪರಿಹರಿಸುತ್ತಿದ್ದಾರೆ, ಬಹಳ ಸಮರ್ಥ ನಾಯಕತ್ವವನ್ನು ಒದಗಿಸುತ್ತಿದ್ದಾರೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ಸಂಸತ್ತಿನಲ್ಲಿ ನಾರಿಶಕ್ತಿ ವಂದನ ಅಧಿನಿಯಮ ಅಂಗೀಕರಿಸಿದ್ದೇವೆ. ಆದರೂ ಒಂದಲ್ಲ ಒಂದು ಕಾರಣಕ್ಕಾಗಿ, ಕಳೆದ 40 ವರ್ಷಗಳಲ್ಲಿ ಈ ಕನಸು ಪದೇಪದೆ ರಾಜಕೀಯ ಆಟಕ್ಕೆ ಬಲಿಯಾಗಿದೆ. ಇಂದು ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜದ ನೆರಳಿನಲ್ಲಿ ನಿಂತು, ನಾನು ದೇಶದ ಎಲ್ಲಾ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ, ಒತ್ತಾಯಿಸುತ್ತೇನೆ. ಬನ್ನಿ, ನಾವು ಆ ಮಹಿಳೆಯರ ಶಕ್ತಿಯ ಆರಾಧಕರಾಗೋಣ. ಅವರ ಘನತೆ ಎತ್ತಿಹಿಡಿಯಲು, ನಮ್ಮ ತಾಯಂದಿರು ಮತ್ತು ಸಹೋದರಿಯರು ಭಾರತದ ನೀತಿಗಳನ್ನು ರೂಪಿಸುವಲ್ಲಿ ಕೊಡುಗೆ ನೀಡುವಂತೆ ಶಾಸಕಾಂಗ ಸಭೆಗಳು ಮತ್ತು ಲೋಕಸಭೆಯಲ್ಲಿ 33% ಪ್ರಾತಿನಿಧ್ಯವನ್ನು ಸಾಧ್ಯವಾದಷ್ಟು ಬೇಗ ಪಡೆದುಕೊಳ್ಳುವಂತೆ ನೋಡಿಕೊಳ್ಳಲು ನಾವು ಮುಂದೆ ಬರೋಣ, ಇದು ಇಂದಿನ ಅಗತ್ಯವಾಗಿದೆ. ನಾನು ಮತ್ತೊಮ್ಮೆ ಎಲ್ಲಾ ರಾಜಕೀಯ ಪಕ್ಷಗಳನ್ನು ಒತ್ತಾಯಿಸುತ್ತೇನೆ, ಮಹಿಳಾ ಮೀಸಲಾತಿ ಜಾರಿಗೆ ತರುವ ಮೂಲಕ ಮಹಿಳಾ ಗೌರವದ ಕಾರಣಕ್ಕಾಗಿ ನೀವೆಲ್ಲರೂ ಸೇರಿ, ನೀವು ಕೂಡ ಕೀರ್ತಿಯನ್ನು ಪಡೆದುಕೊಳ್ಳಿ, ನೀವು ಕೂಡ ಕೀರ್ತಿಯನ್ನು ಪಡೆದುಕೊಳ್ಳಿ, ಆದರೆ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಹಕ್ಕುಗಳನ್ನು ನೀಡಿ.

ನನ್ನ ಪ್ರೀತಿಯ ದೇಶವಾಸಿಗಳೆ,

ಅಭಿವೃದ್ಧಿಯು ಕೊನೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವು ಈಡೇರುತ್ತದೆ. 2014ರ ಮೊದಲು ಕೇವಲ 25 ಕೋಟಿ ಜನರಿಗೆ ಸಾಮಾಜಿಕ ಭದ್ರತಾ ರಕ್ಷಣೆ ಇತ್ತು, ಅದು ಕೇವಲ 25 ಕೋಟಿ.

ಆದರೆ ಸ್ನೇಹಿತರೆ,

ಕಳೆದ 5-7 ದಶಕಗಳಲ್ಲಿ ಕೇವಲ 25 ಕೋಟಿ ಜನರಿಗೆ ಇದ್ದ ಸಾಮಾಜಿಕ ಭದ್ರತೆ ಒಂದು ದಶಕದೊಳಗೆ ನಾವು 100 ಕೋಟಿ ದೇಶವಾಸಿಗಳಿಗೆ ಒದಗಿಸಿದ್ದೇವೆ. ಆಯುಷ್ಮಾನ್ ಭಾರತ್ ಯೋಜನೆಯಡಿ, 70 ವರ್ಷಕ್ಕಿಂತ ಮೇಲ್ಪಟ್ಟ ವೃದ್ಧರು ಸಹ 5 ಲಕ್ಷ ರೂ. ತನಕ ಉಚಿತ ಔಷಧಿಗಳನ್ನು ಪಡೆಯುತ್ತಿದ್ದಾರೆ. ಇದರಿಂದಾಗಿ ಕೋಟ್ಯಂತರ ಕುಟುಂಬಗಳು ದೊಡ್ಡ ಸೌಲಭ್ಯವನ್ನು ಪಡೆದಿವೆ. ಈ ಆಯುಷ್ಮಾನ್ ಕಾರ್ಡ್‌ನಿಂದಾಗಿ, ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳಿಗಾಗಿ ಖರ್ಚು ಮಾಡಬೇಕಿದ್ದ 2 ಲಕ್ಷ ಕೋಟಿ ರೂ.ಗಳನ್ನು ನಮ್ಮ ಕುಟುಂಬಗಳಿಗೆ ಉಳಿಸಲಾಗಿದೆ, ಅವರು ಬಡ ಕುಟುಂಬಗಳು, ಅವರು ಮಧ್ಯಮ ವರ್ಗದ ಕುಟುಂಬಗಳು, ಅವರು ಅಂತಹ ಮಹತ್ವದ ಬೆಂಬಲ ಪಡೆದಿದ್ದಾರೆ!

ನನ್ನ ಪ್ರೀತಿಯ ದೇಶವಾಸಿಗಳೆ,

ಇಂದು ನನಗೆ ಒಂದು ಕಾರ್ಯದಲ್ಲಿ ನಿಮ್ಮ ಸಹಾಯ ಬೇಕು. ನಾನು ನಿಮ್ಮೆಲ್ಲರಿಂದ ಸಹಾಯ ಕೋರುತ್ತಿದ್ದೇನೆ. ಯುವಕರು ಇದರಲ್ಲಿ ಮುಂದಾಳತ್ವ ವಹಿಸಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಸಮಯದ 1 ಅಥವಾ 2 ಗಂಟೆಗಳಿಂದಲೇ ರಾಷ್ಟ್ರವನ್ನು ಗಮನಾರ್ಹವಾಗಿ ಸಬಲೀಕರಣಗೊಳಿಸಬಹುದು. 1 ಅಥವಾ 2 ಗಂಟೆಗಳಲ್ಲಿ ನಾನು ದೇಶಕ್ಕೆ ಯಾವ ಶಕ್ತಿ ನೀಡಬಲ್ಲೆ ಎಂಬುದರಿಂದ ನೀವು ಆಶ್ಚರ್ಯ ಪಡುತ್ತೀರಿ, ನಾನು ನಿಮಗೆ ಹೇಳುತ್ತೇನೆ. ನೀವು ಒಂದು ದೊಡ್ಡ ಶಕ್ತಿಯಾಗಲಿದ್ದೀರಿ, ಆದ್ದರಿಂದ, ಪ್ರತಿ ಮನೆಯಲ್ಲೂ ಒಂದು ವಾತಾವರಣ ಸೃಷ್ಟಿಸಬೇಕು. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಜನಗಣತಿ ನಡೆಯುತ್ತಿದೆ. ಜನಗಣತಿ ಕೆಲಸ ನಡೆಯುತ್ತಿದೆ, ಎಣಿಕೆ ನಡೆಯುತ್ತಿದೆ ಮತ್ತು ಎಣಿಕೆ ಕೇವಲ ಅಂಕಿಅಂಶಗಳ ಬಗ್ಗೆ ಅಲ್ಲ. ನೀತಿಗಳನ್ನು ಅದರ ವಿವರಗಳಿಂದ ರೂಪಿಸಲಾಗುತ್ತದೆ, ಯೋಜನೆಗಳನ್ನು ರೂಪಿಸಲಾಗುತ್ತದೆ, ದೇಶವು ಮುಂದುವರಿಯಲು ತನ್ನ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತದೆ. ಆದ್ದರಿಂದ ನಿಖರವಾದ ಮಾಹಿತಿ ಹೊಂದುವುದು ಬಹಳ ಮುಖ್ಯ. ಕೆಲವೊಮ್ಮೆ ಸರ್ಕಾರದಿಂದ ಬರುವ ಪ್ರತಿನಿಧಿಗಳು ತುಂಬಾ ಆತುರಪಡುತ್ತಾರೆ, ಕೆಲವೊಮ್ಮೆ ಅವರು ಒಂದೇ ಕಾಗುಣಿತ ಬರೆಯಬಹುದು, ಕೆಲವೊಮ್ಮೆ ಅವರು ಅದನ್ನು ವಿಭಿನ್ನವಾಗಿ ಬರೆಯಬಹುದು. ಇದರಿಂದಾಗಿ, ಅಂತಿಮವಾಗಿ, ನಿಖರವಾದ ಫಲಿತಾಂಶಗಳನ್ನು ಪಡೆಯುವಲ್ಲಿ ನಾವು ಸಮಸ್ಯೆಗಳನ್ನು ಎದುರಿಸುತ್ತೇವೆ. ಈಗ ತಂತ್ರಜ್ಞಾನ ಲಭ್ಯವಿರುವುದರಿಂದ, ನಿಮ್ಮ ಮೊಬೈಲ್ ಫೋನ್ ಬಳಸಿ ನಿಮ್ಮ ಜನಗಣತಿ ವಿವರಗಳನ್ನು ನೀವೇ ಸಲ್ಲಿಸಲು ನಿಮಗೆ ಅವಕಾಶ ನೀಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಂತರ ಕೆಲವು ಗುಮಾಸ್ತರು ಬರುತ್ತಾರೆ, ಕೆಲವು ಪ್ರತಿನಿಧಿಗಳು ಬರುತ್ತಾರೆ, ಅವರು ನಿಮ್ಮೊಂದಿಗೆ ವಿವರಗಳನ್ನು ಚರ್ಚಿಸುತ್ತಾರೆ, ನಿಮ್ಮ ಕುಟುಂಬವು ಒಟ್ಟಿಗೆ ಕುಳಿತು ಡಿಜಿಟಲ್ ರೂಪದಲ್ಲಿ ನೋಂದಣಿ ಪೂರ್ಣಗೊಳಿಸಿದರೆ - ಕಾಗುಣಿತ ಅಥವಾ ಮಾಹಿತಿಯಲ್ಲಿ ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳುವುದು - ಡೇಟಾದ ನಿಖರತೆಯು ರಾಷ್ಟ್ರದ ಪ್ರಗತಿಗೆ ಹೆಚ್ಚು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಾನು ದೇಶದ ಯುವಕರು ತಮ್ಮ ಕುಟುಂಬಗಳೊಂದಿಗೆ ಕುಳಿತು ಸಂಪೂರ್ಣ ಫಾರ್ಮ್‌ ತುಂಬುವಂತೆ ಒತ್ತಾಯಿಸುತ್ತೇನೆ. ಮೊದಲು ಫಾರ್ಮ್ ಅನ್ನು ಕಾಗದದ ಮೇಲೆ ಭರ್ತಿ ಮಾಡಿ, ಏನಾದರೂ ತಪ್ಪಾಗಿದ್ದರೆ, ಅದನ್ನು ಸರಿಪಡಿಸಿ, ನಂತರ ತಂತ್ರಜ್ಞಾನದ ಮೂಲಕ ಡಿಜಿಟಲ್ ಆಗಿ ಅಪ್‌ಲೋಡ್ ಮಾಡಿ. ಊಹಿಸಿ, ದೇಶವು ಈ ಬೃಹತ್ ಕಾರ್ಯವನ್ನು ಸಾಧಿಸುತ್ತದೆ. ದೇಶದ ಸಮಯ ಮತ್ತು ಶಕ್ತಿಯನ್ನು ರಚನಾತ್ಮಕ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಅದಕ್ಕಾಗಿಯೇ ನನ್ನ ದೇಶದ ಯುವಕರು ಈ ಜನಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ನಾನು ಒತ್ತಾಯಿಸುತ್ತೇನೆ.

ನನ್ನ ಪ್ರೀತಿಯ ನಾಗರಿಕರೆ,

ನಾನು ಕೆಂಪುಕೋಟೆಯಿಂದ 'ಪಂಚ ಪ್ರಾಣ'(ಪಂಚ ಸಂಕಲ್ಪಗಳು)ಗಳ ಬಗ್ಗೆ ಮಾತನಾಡಿದ್ದೆ. ಈ 5 ಸಂಕಲ್ಪಗಳು ರಾಷ್ಟ್ರಕ್ಕೆ ಅಪಾರ ಶಕ್ತಿ ಒದಗಿಸಿವೆ, ಸ್ವಾಭಿಮಾನ ಮತ್ತು ಅದರ ಗುರಿಗಳನ್ನು ಮೀರುವ ಸಾಮರ್ಥ್ಯದೊಂದಿಗೆ ಮುಂದುವರಿಯಲು ಅದನ್ನು ಸಬಲಗೊಳಿಸಿವೆ. ನಾವು ಪ್ರತಿ ಕ್ಷಣವೂ ಗುಲಾಮಗಿರಿಯ ಮನಸ್ಥಿತಿಯನ್ನು ನಿರ್ಮೂಲನೆ ಮಾಡುತ್ತಲೇ ಇರಬೇಕು. ನೇತಾಜಿ ಸುಭಾಷ್ ಚಂದ್ರ ಬೋಸ್, ಬಾಬಾಸಾಹೇಬ್ ಅಂಬೇಡ್ಕರ್, ಪಂಡಿತ್ ನೆಹರು, ಸರ್ದಾರ್ ಪಟೇಲ್, ಭಗತ್ ಸಿಂಗ್, ಸುಖದೇವ್, ರಾಜಗುರು, ಡಾ. ಶ್ಯಾಮ ಪ್ರಸಾದ್ ಮುಖರ್ಜಿ, ಭಗವಾನ್ ಬಿರ್ಸಾ ಮುಂಡಾ ಮತ್ತು ಜ್ಯೋತಿಬಾ ಫುಲೆ ಅವರು ಕನಸು ಕಂಡ ಭಾರತದ ದೃಷ್ಟಿಕೋನಗಳಿಂದ ಸ್ಫೂರ್ತಿ ಪಡೆದು ಮುಂದೆ ಸಾಗೋಣ. ಈ ಸಂಕಲ್ಪವನ್ನು ನಾವು ಪುನರುಚ್ಚರಿಸೋಣ. ನಮ್ಮ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿ ಮೊದಲಾಗಿರಬೇಕು, ಕರ್ತವ್ಯವು ನಮ್ಮ ಗುರುತನ್ನು ವ್ಯಾಖ್ಯಾನಿಸಬೇಕು. ನಾನು ನನ್ನ ಎಲ್ಲಾ ದೇಶವಾಸಿಗಳಿಗೆ ಹೇಳುತ್ತೇನೆ - ಇದು ನಮ್ಮ ಸಮಯ, ಇದು ನಮ್ಮ ಕ್ಷಣ, ಇದು ನಮ್ಮ ಸಂಕಲ್ಪ. ಕನಸುಗಳನ್ನು ಸಂಕಲ್ಪವಾಗಿ, ಸಂಕಲ್ಪವನ್ನು ಸಾಮರ್ಥ್ಯವಾಗಿ, ಸಾಮರ್ಥ್ಯವನ್ನು ಯಶಸ್ಸಾಗಿ ಪರಿವರ್ತಿಸೋಣ. ಪ್ರತಿ ಹೆಜ್ಜೆಯನ್ನೂ ಅಭಿವೃದ್ಧಿಯ ಹೆಜ್ಜೆಯನ್ನಾಗಿ ಮಾಡಿಕೊಳ್ಳೋಣ, ಹೆಜ್ಜೆಯೊಂದಿಗೆ ಹೆಜ್ಜೆ ಹಾಕೋಣ, ನಮ್ಮ ಹೃದಯಗಳನ್ನು ಸಂಪರ್ಕಿಸೋಣ, ಗುರಿಯೊಂದಿಗೆ ಸಂಪರ್ಕದಲ್ಲಿರೋಣ, ಒಂದು ದೀಪವು ಸಾವಿರಾರು ದೀಪಗಳನ್ನು ಬೆಳಗಿಸುತ್ತದೆ, ನಾವೆಲ್ಲರೂ ಒಟ್ಟಾಗಿ ಅಭಿವೃದ್ಧಿ ಹೊಂದಿದ ಭಾರತ ನಿರ್ಮಿಸೋಣ. ಈ ಭಾವನೆಯೊಂದಿಗೆ, ಈ ಶುಭ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ನನ್ನೊಂದಿಗೆ ಹೇಳಿ:

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ಭಾರತ್ ಮಾತಾ ಕಿ ಜೈ!

ವಂದೇ ಮಾತರಂ!

ವಂದೇ ಮಾತರಂ!

ವಂದೇ ಮಾತರಂ!

ತುಂಬು ಧನ್ಯವಾದಗಳು!