ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ದೆಹಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯ ಎರಡು ಹೊಸ ಕಾರಿಡಾರ್ ಗಳಿಗೆ ತನ್ನ ಅನುಮೋದನೆ ನೀಡಿದೆ. ಇದು ರಾಷ್ಟ್ರ ರಾಜಧಾನಿಯಲ್ಲಿ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ನಿರೀಕ್ಷೆಯಿದೆ.

ಎರಡು ಕಾರಿಡಾರ್ ಗಳೆಂದರೆ;

ಎ)        ಇಂದರ್ಲೋಕ್ - ಇಂದ್ರಪ್ರಸ್ಥ                      12.377 ಕಿ.ಮೀ

ಬಿ)        ಲಜಪತ್ ನಗರ - ಸಾಕೇತ್ ಜಿ ಬ್ಲಾಕ್            8.385 ಕಿ.ಮೀ

ಯೋಜನಾ ವೆಚ್ಚ ಮತ್ತು ಧನಸಹಾಯ

ದೆಹಲಿ ಮೆಟ್ರೋದ ನಾಲ್ಕನೇ ಹಂತದ ಯೋಜನೆಯ ಈ ಎರಡು ಕಾರಿಡಾರ್ ಗಳ ಒಟ್ಟು ಯೋಜನಾ ವೆಚ್ಚ 8,399 ಕೋಟಿ ರೂ.ಗಳಾಗಿದ್ದು, ಇದನ್ನು ಭಾರತ ಸರ್ಕಾರ, ದೆಹಲಿ ಸರ್ಕಾರ ಮತ್ತು ಅಂತರರಾಷ್ಟ್ರೀಯ ಧನಸಹಾಯ ಸಂಸ್ಥೆಗಳಿಂದ ಪಡೆಯಲಾಗುವುದು.

ಈ ಎರಡು ಮಾರ್ಗಗಳು 20.762 ಕಿ.ಮೀ. ಇಂದರ್ಲೋಕ್ - ಇಂದ್ರಪ್ರಸ್ಥ ಕಾರಿಡಾರ್ ಹಸಿರು ಮಾರ್ಗದ ವಿಸ್ತರಣೆಯಾಗಿದ್ದು, ಕೆಂಪು, ಹಳದಿ, ವಿಮಾನ ನಿಲ್ದಾಣ ಮಾರ್ಗ, ಮೆಜೆಂಟಾ, ನೇರಳೆ ಮತ್ತು ನೀಲಿ ಮಾರ್ಗಗಳೊಂದಿಗೆ ವಿನಿಮಯವನ್ನು ಒದಗಿಸುತ್ತದೆ, ಲಜಪತ್ ನಗರ - ಸಾಕೇತ್ ಜಿ ಬ್ಲಾಕ್ ಕಾರಿಡಾರ್ ಸಿಲ್ವರ್, ಮೆಜೆಂಟಾ, ಪಿಂಕ್ ಮತ್ತು ನೇರಳೆ ಮಾರ್ಗಗಳನ್ನು ಸಂಪರ್ಕಿಸುತ್ತದೆ.

ಲಜಪತ್ ನಗರ - ಸಾಕೇತ್ ಜಿ ಬ್ಲಾಕ್ ಕಾರಿಡಾರ್ ಅನ್ನು ಸಂಪೂರ್ಣವಾಗಿ ಎತ್ತರಿಸಲಾಗುವುದು ಮತ್ತು ಎಂಟು ನಿಲ್ದಾಣಗಳನ್ನು ಹೊಂದಿರುತ್ತದೆ. ಇಂದರ್ಲೋಕ್-ಇಂದ್ರಪ್ರಸ್ಥ ಕಾರಿಡಾರ್ 11.349 ಕಿ.ಮೀ ಭೂಗತ ಮಾರ್ಗಗಳು ಮತ್ತು 1.028 ಕಿ.ಮೀ ಎತ್ತರಿಸಿದ ಮಾರ್ಗಗಳನ್ನು 10 ನಿಲ್ದಾಣಗಳನ್ನು ಒಳಗೊಂಡಿರುತ್ತದೆ.

ಇಂದರ್ಲೋಕ್ - ಇಂದ್ರಪ್ರಸ್ಥ ಮಾರ್ಗವು ಹರಿಯಾಣದ ಬಹದ್ದೂರ್ಗಢ ಪ್ರದೇಶಕ್ಕೆ ವರ್ಧಿತ ಸಂಪರ್ಕವನ್ನು ಒದಗಿಸುತ್ತದೆ, ಏಕೆಂದರೆ ಈ ಪ್ರದೇಶಗಳ ಪ್ರಯಾಣಿಕರು ನೇರವಾಗಿ ಇಂದ್ರಪ್ರಸ್ಥ ಮತ್ತು ಮಧ್ಯ ಮತ್ತು ಪೂರ್ವ ದೆಹಲಿಯ ವಿವಿಧ ಪ್ರದೇಶಗಳನ್ನು ತಲುಪಲು ಹಸಿರು ಮಾರ್ಗದಲ್ಲಿ ಪ್ರಯಾಣಿಸಲು ಸಾಧ್ಯವಾಗುತ್ತದೆ.

ಇಂದರ್ಲೋಕ್, ನಬಿ ಕರೀಮ್, ನವದೆಹಲಿ, ದೆಹಲಿ ಗೇಟ್, ಇಂದ್ರಪ್ರಸ್ಥ, ಲಜಪತ್ ನಗರ, ಚಿರಾಗ್ ದೆಹಲಿ ಮತ್ತು ಸಾಕೇತ್ ಜಿ ಬ್ಲಾಕ್ನಲ್ಲಿ ಎಂಟು ಹೊಸ ಇಂಟರ್ಚೇಂಜ್ ನಿಲ್ದಾಣಗಳು ಬರಲಿವೆ. ಈ ನಿಲ್ದಾಣಗಳು ದೆಹಲಿ ಮೆಟ್ರೋ ಜಾಲದ ಎಲ್ಲಾ ಕಾರ್ಯಾಚರಣೆ ಮಾರ್ಗಗಳ ನಡುವೆ ಅಂತರಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸುತ್ತವೆ.

ದೆಹಲಿ ಮೆಟ್ರೋ ತನ್ನ ನಾಲ್ಕನೇ ಹಂತದ ವಿಸ್ತರಣೆಯ ಭಾಗವಾಗಿ ಈಗಾಗಲೇ 65 ಕಿಲೋಮೀಟರ್ ಜಾಲವನ್ನು ನಿರ್ಮಿಸುತ್ತಿದೆ. ಈ ಹೊಸ ಕಾರಿಡಾರ್ ಗಳು ಮಾರ್ಚ್ ೨೦೨೬ ರೊಳಗೆ ಹಂತ ಹಂತವಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಪ್ರಸ್ತುತ, ಡಿಎಂಆರ್ಸಿ 286 ನಿಲ್ದಾಣಗಳನ್ನು ಒಳಗೊಂಡ 391 ಕಿಲೋಮೀಟರ್ ಜಾಲವನ್ನು ನಿರ್ವಹಿಸುತ್ತಿದೆ. ದೆಹಲಿ ಮೆಟ್ರೋ ಈಗ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮೆಟ್ರೋ ಜಾಲಗಳಲ್ಲಿ ಒಂದಾಗಿದೆ.

ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಡಿಎಂಆರ್ಸಿ) ಈಗಾಗಲೇ ಪೂರ್ವ ಬಿಡ್ ಚಟುವಟಿಕೆಗಳು ಮತ್ತು ಟೆಂಡರ್ ದಾಖಲೆಗಳ ತಯಾರಿಕೆಯನ್ನು ಪ್ರಾರಂಭಿಸಿದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Oman, India’s Gulf 'n' West Asia Gateway

Media Coverage

Oman, India’s Gulf 'n' West Asia Gateway
NM on the go

Nm on the go

Always be the first to hear from the PM. Get the App Now!
...
Prime Minister condoles passing of renowned writer Vinod Kumar Shukla ji
December 23, 2025

The Prime Minister, Shri Narendra Modi has condoled passing of renowned writer and Jnanpith Awardee Vinod Kumar Shukla ji. Shri Modi stated that he will always be remembered for his invaluable contribution to the world of Hindi literature.

The Prime Minister posted on X:

"ज्ञानपीठ पुरस्कार से सम्मानित प्रख्यात लेखक विनोद कुमार शुक्ल जी के निधन से अत्यंत दुख हुआ है। हिन्दी साहित्य जगत में अपने अमूल्य योगदान के लिए वे हमेशा स्मरणीय रहेंगे। शोक की इस घड़ी में मेरी संवेदनाएं उनके परिजनों और प्रशंसकों के साथ हैं। ओम शांति।"