ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮ (ಎಲ್.ಎಚ್.ಡಿ.ಸಿ.ಪಿ.) ಪರಿಷ್ಕರಣೆಗೆ ತನ್ನ ಅನುಮೋದನೆ ನೀಡಿದೆ.

ಈ ಯೋಜನೆಯು ರಾಷ್ಟ್ರೀಯ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಎನ್ಎಡಿಸಿಪಿ), ಎಲ್ಎಚ್ ಮತ್ತು ಡಿಸಿ ಮತ್ತು ಪಶು ಔಷಧಿ ಎಂಬ ಮೂರು ಘಟಕಗಳನ್ನು ಹೊಂದಿದೆ. ಎಲ್ಎಚ್ ಮತ್ತು ಡಿಸಿ ಮೂರು ಉಪ ಘಟಕಗಳನ್ನು ಹೊಂದಿದೆ. ಅವುಗಳೆಂದರೆ ನಿರ್ಣಾಯಕ ಪ್ರಾಣಿ ರೋಗ ನಿಯಂತ್ರಣ ಕಾರ್ಯಕ್ರಮ (ಸಿಎಡಿಸಿಪಿ), ಅಸ್ತಿತ್ವದಲ್ಲಿರುವ ಪಶುವೈದ್ಯಕೀಯ ಆಸ್ಪತ್ರೆಗಳು ಮತ್ತು ಔಷಧಾಲಯಗಳ ಸ್ಥಾಪನೆ ಮತ್ತು ಬಲಪಡಿಸುವುದು - ಸಂಚಾರಿ ಪಶುವೈದ್ಯಕೀಯ ಘಟಕ (ಇ ಎಸ್ ವಿ ಎಚ್ ಡಿ-ಎಂವಿಯು) ಮತ್ತು ಪ್ರಾಣಿ ರೋಗಗಳ ನಿಯಂತ್ರಣಕ್ಕಾಗಿ ರಾಜ್ಯಗಳಿಗೆ ನೆರವು (ಎ ಎಸ್ ಸಿ ಎ ಡಿ). ಪಶು ಔಷಧಿ ಎಲ್ ಎಚ್ ಡಿಸಿಪಿ ಯೋಜನೆಗೆ ಸೇರಿಸಲಾದ ಹೊಸ ಘಟಕವಾಗಿದೆ. ಈ ಯೋಜನೆಯ ಒಟ್ಟು ವೆಚ್ಚ 2024-25 ಮತ್ತು 2025-26ನೇ ಸಾಲಿಗೆ 3,880 ಕೋಟಿ ರೂ.ಗಳಾಗಿದ್ದು, ಇದರಲ್ಲಿ ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ಜೆನೆರಿಕ್ ಪಶುವೈದ್ಯಕೀಯ ಔಷಧವನ್ನು ಒದಗಿಸಲು 75 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಮತ್ತು ಪಶು ಔಷಧಿ ಘಟಕದಡಿ ಔಷಧಿಗಳ ಮಾರಾಟಕ್ಕೆ ಪ್ರೋತ್ಸಾಹಧನ ನೀಡಲಾಗಿದೆ.

ಕಾಲು ಮತ್ತು ಬಾಯಿ ರೋಗ (ಎಫ್ಎಂಡಿ), ಬ್ರುಸೆಲ್ಲೋಸಿಸ್, ಪೆಸ್ಟೆ ಡೆಸ್ ಪೆಟಿಟ್ಸ್ ರುಮಿನಂಟ್ಸ್ (ಪಿಪಿಆರ್), ಕ್ಲಾಸಿಕಲ್ ಸ್ವೈನ್ ಫೀವರ್ (ಸಿ ಎಸ್ ಎಫ್), ಲಂಪಿ ಚರ್ಮ ರೋಗ ಮುಂತಾದ ರೋಗಗಳಿಂದಾಗಿ ಜಾನುವಾರುಗಳ ಉತ್ಪಾದಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಎಲ್ಎಚ್ ಡಿಸಿಪಿಯ ಅನುಷ್ಠಾನವು ರೋಗನಿರೋಧಕತೆಯ ಮೂಲಕ ರೋಗಗಳನ್ನು ತಡೆಗಟ್ಟುವ ಮೂಲಕ ಈ ನಷ್ಟಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಯು ಸಂಚಾರಿ ಪಶುವೈದ್ಯಕೀಯ ಘಟಕಗಳ (ಇ ಎಸ್ ವಿ ಎಚ್ ಡಿ-ಎಂವಿಯು) ಉಪ ಘಟಕಗಳ ಮೂಲಕ ಜಾನುವಾರು ಆರೋಗ್ಯ ರಕ್ಷಣೆಯನ್ನು ಮನೆ ಬಾಗಿಲಿಗೆ ತಲುಪಿಸಲು ಮತ್ತು ಪಿಎಂ-ಕಿಸಾನ್ ಸಮೃದ್ಧಿ ಕೇಂದ್ರ ಮತ್ತು ಸಹಕಾರಿ ಸಂಘಗಳ ಜಾಲದ ಮೂಲಕ ಜೆನೆರಿಕ್ ಪಶುವೈದ್ಯಕೀಯ ಔಷಧಿ - ಪಶು ಔಷಧಿಯ ಲಭ್ಯತೆಯನ್ನು ಸುಧಾರಿಸಲು ಬೆಂಬಲಿಸುತ್ತದೆ.

ಹೀಗಾಗಿ, ಲಸಿಕೆ, ಕಣ್ಗಾವಲು ಮತ್ತು ಆರೋಗ್ಯ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಜಾನುವಾರು ರೋಗಗಳನ್ನು ತಡೆಗಟ್ಟಲು ಮತ್ತು ನಿಯಂತ್ರಿಸಲು ಈ ಯೋಜನೆ ಸಹಾಯ ಮಾಡುತ್ತದೆ. ಅಲ್ಲದೆ, ಈ ಯೋಜನೆಯು ಉತ್ಪಾದಕತೆಯನ್ನು ಸುಧಾರಿಸುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುತ್ತದೆ ಮತ್ತು ರೋಗದ ಹೊರೆಯಿಂದ ರೈತರ ಆರ್ಥಿಕ ನಷ್ಟವನ್ನು ತಡೆಯುತ್ತದೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India Post revenue rises to ₹15,373 crore in FY 2025-2026 amid digital transformation push

Media Coverage

India Post revenue rises to ₹15,373 crore in FY 2025-2026 amid digital transformation push
NM on the go

Nm on the go

Always be the first to hear from the PM. Get the App Now!
...
Prime Minister shares Sanskrit Subhashitam highlighting the transformative power of true knowledge
May 26, 2026

The Prime Minister, Shri Narendra Modi, said that true knowledge paves the way for the welfare of the nation, society and the entire humanity. He noted that it is important that our knowledge and actions become a source of inspiration for all humankind.

The Prime Minister shared a Sanskrit Subhashitam-

“आत्मा शुद्धः सदा नित्यः सुखरूपः स्वयम्प्रभः।

अज्ञानान्मलिनो भाति ज्ञानाच्छुद्धो भवत्ययम्‌।। ”

The Subhashitam conveys that the the Ātman is by nature always pure, eternal, blissful, and self-luminous. However, because of ignorance, it appears impure; through true knowledge, it once again reveals its pure nature.

The Prime Minister wrote on X;

“सच्चा ज्ञान देश, समाज और समस्त मानवता के कल्याण का मार्ग प्रशस्त करता है। इसलिए यह जरूरी है कि हमारा ज्ञान और हमारे कर्म पूरी मानवता के लिए प्रेरणा बनें।

आत्मा शुद्धः सदा नित्यः सुखरूपः स्वयम्प्रभः।

अज्ञानान्मलिनो भाति ज्ञानाच्छुद्धो भवत्ययम्‌।।”