ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು ಮಹಾರಾಷ್ಟ್ರದಲ್ಲಿ ಷಟ್ಪಥದ ಹಸಿರು ವಲಯ ಪ್ರವೇಶ ನಿಯಂತ್ರಿತ ನಾಸಿಕ್ – ಸೋಲಾಪುರ-ಅಕ್ಕಲಕೋಟ್ ಕಾರಿಡಾರ್ ಅನ್ನು ಒಟ್ಟು ₹19,142 ಕೋಟಿ ಬಂಡವಾಳ ವೆಚ್ಚದಲ್ಲಿ 374 ಕಿ.ಮೀ. ಉದ್ದದ ಯೋಜನಾ ಮಾದರಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಿದೆ. ಈ ಯೋಜನೆಯು ಪ್ರಮುಖ ಪ್ರಾದೇಶಿಕ ನಗರಗಳಾದ ನಾಸಿಕ್, ಅಹಿಲ್ಯಾನಗರ, ಸೋಲಾಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ ಮತ್ತು ನಕ್ಷೆಯಲ್ಲಿ ಸೂಚಿಸಿರುವಂತೆ ಕರ್ನೂಲ್ ಗೆ ಸಂಪರ್ಕ ಕಲ್ಪಿಸಲಿದೆ. ಈ ಮೂಲಸೌಕರ್ಯವು ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ತತ್ವದ ಅಡಿಯಲ್ಲಿ ಸಮಗ್ರ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಮಹತ್ವದ ಹೆಜ್ಜೆಯಾಗಿದೆ.

ನಾಸಿಕ್ ನಿಂದ ಅಕ್ಕಲಕೋಟ್ ವರೆಗಿನ ಹಸಿರು ವಲಯ ಕಾರಿಡಾರ್ ಅನ್ನು ವಾಧ್ವಾನ್ ಪೋರ್ಟ್ ಇಂಟರ್ ಚೇಂಜ್ ಬಳಿ ದೆಹಲಿ-ಮುಂಬೈ ಎಕ್ಸ್ ಪ್ರೆಸ್ ವೇ, ನಾಸಿಕ್ ನಲ್ಲಿ ಆಗ್ರಾ-ಮುಂಬೈ ಕಾರಿಡಾರ್ ಅನ್ನು ರಾಷ್ಟ್ರೀಯ ಹೆದ್ದಾರಿ -60 (ಅಡೆಗಾಂವ್) ಮತ್ತು ಪಂಗ್ರಿಯಲ್ಲಿ ಸಮೃದ್ಧಿ ಮಹಾಮಾರ್ಗಕ್ಕೆ (ನಾಸಿಕ್ ಬಳಿ) ಸಂಪರ್ಕಿಸಲು ಉದ್ದೇಶಿಸಲಾಗಿದೆ. ಉದ್ದೇಶಿತ ಕಾರಿಡಾರ್ ಪಶ್ಚಿಮ ಕರಾವಳಿಯಿಂದ ಪೂರ್ವ ಕರಾವಳಿಗೆ ಸಂಪರ್ಕ ಒದಗಿಸುತ್ತದೆ. ಚೆನ್ನೈ ಬಂದರು ತುದಿಯಿಂದ ಈಗಾಗಲೇ ಚೆನ್ನೈನಿಂದ ಹಸಾಪುರದವರೆಗೆ ತಿರುವಳ್ಳೂರು, ರೇಣಿಗುಂಟಾ, ಕಡಪ್ಪ ಮತ್ತು ಕರ್ನೂಲ್ (700 ಕಿ.ಮೀ ಉದ್ದ) ಮೂಲಕ 4-ಪಥದ ಕಾರಿಡಾರ್ ಗಳು ಪ್ರಗತಿಯಲ್ಲಿವೆ. ಪ್ರಸ್ತಾವಿತ ಪ್ರವೇಶ-ನಿಯಂತ್ರಿತ ಆರು-ಪಥದ ಹಸಿರು ವಲಯ ಯೋಜನೆ ಕಾರಿಡಾರ್ ನ ಪ್ರಾಥಮಿಕ ಉದ್ದೇಶವು ಪ್ರಯಾಣದ ದಕ್ಷತೆ ಸುಧಾರಿಸುವುದಾಗಿದೆ ಮತ್ತು ಪ್ರಯಾಣದ ಸಮಯವನ್ನು 17 ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ದೂರವನ್ನು 201 ಕಿ.ಮೀ ನಷ್ಟು ಕಡಿಮೆ ಮಾಡುವ ನಿರೀಕ್ಷೆಯಿದೆ. 

ನಾಸಿಕ್ - ಅಕ್ಕಲಕೋಟ್ (ಸೋಲಾಪುರ) ಸಂಪರ್ಕವು ಕೊಪ್ಪಾರ್ಥಿ ಮತ್ತು ಓರ್ವಕಲ್ ನ ಪ್ರಮುಖ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ನಿಗಮ (ಎನ್ ಐಸಿಡಿಸಿ) ನೋಡ್ ಗಳಲ್ಲಿ ಸರಕು ಸಾಗಣೆ ಮತ್ತು ಕೊನೆಗೊಳ್ಳಲು ಸಂಚಾರ ದಕ್ಷತೆಯನ್ನು ಸುಧಾರಿಸುತ್ತದೆ. ಮಹಾರಾಷ್ಟ್ರ ರಾಜ್ಯ ಸರ್ಕಾರವು ಕೈಗೆತ್ತಿಕೊಳ್ಳುತ್ತಿರುವ ಪ್ರಸ್ತಾವಿತ ಹೊಸ ಎಕ್ಸ್ ಪ್ರೆಸ್ ವೇನ ಭಾಗವಾಗಿ ಎನ್ಐಸಿಡಿಸಿ ಗುರುತಿಸಿದಂತೆ ಪುಣೆ-ನಾಸಿಕ್ ಎಕ್ಸ್ ಪ್ರೆಸ್ ವೇಯ ಅಭಿವೃದ್ಧಿಯ ಅಗತ್ಯವನ್ನು ಸಹ ಈ ವಿಭಾಗದ ನಾಸಿಕ್ - ತಲೇಗಾಂವ್ ದಿಘೆ ಭಾಗವು ಪರಿಹರಿಸುತ್ತದೆ. 
ಈ ಯೋಜನೆಯು ಸುಧಾರಿತ ಸುರಕ್ಷತೆ ಮತ್ತು ನಿರಂತರ ಸಂಚಾರ ಚಲನೆಗಾಗಿ ವಿನ್ಯಾಸಗೊಳಿಸಲಾದ ಹೈಸ್ಪೀಡ್ ಕಾರಿಡಾರ್ ಅನ್ನು ಒದಗಿಸುತ್ತದೆ, ಪ್ರಯಾಣದ ಸಮಯ, ದಟ್ಟಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಮುಖ್ಯವಾಗಿ, ಈ ಯೋಜನೆಯು ಈ ಪ್ರದೇಶದ ಮೂಲಭೂತ ಮೂಲಸೌಕರ್ಯವನ್ನು ಹೆಚ್ಚಿಸುತ್ತದೆ ಮತ್ತು ನಾಸಿಕ್, ಅಹಿಲ್ಯಾನಗರ, ಧಾರಾಶಿವ್ ಮತ್ತು ಸೋಲಾಪುರ ಜಿಲ್ಲೆಗಳ ಒಟ್ಟಾರೆ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ.

6-ಪಥದ ಪ್ರವೇಶ-ನಿಯಂತ್ರಿತ ಹಸಿರು ವಲಯ ಕಾರಿಡಾರ್ ಹತ್ತಿರದ ಟೋಲಿಂಗ್ ನೊಂದಿಗೆ 60 ಕಿಮೀ / ಗಂ ವಿನ್ಯಾಸದ ವೇಗದೊಂದಿಗೆ ಸರಾಸರಿ ವಾಹನ ವೇಗವನ್ನು 100 ಕಿಮೀ / ಗಂ ವಿನ್ಯಾಸದೊಂದಿಗೆ ಬೆಂಬಲಿಸುತ್ತದೆ. ಇದು ಒಟ್ಟಾರೆ ಪ್ರಯಾಣದ ಸಮಯವನ್ನು ಸರಿಸುಮಾರು 17 ಗಂಟೆಗಳಿಗೆ ಕಡಿಮೆ ಮಾಡುತ್ತದೆ (45 ಗಂಟೆಗಳಿಂದ 31% ರಷ್ಟು ಕಡಿಮೆ), ಆದರೆ ಪ್ರಯಾಣಿಕ ಮತ್ತು ಸರಕು ಸಾಗಣೆ ವಾಹನಗಳಿಗೆ ಸುರಕ್ಷಿತ, ವೇಗದ ಮತ್ತು ನಿರಂತರ ಸಂಪರ್ಕವನ್ನು ನೀಡುತ್ತದೆ.

ಈ ಯೋಜನೆಯು ಸುಮಾರು 251.06 ಲಕ್ಷ ಮಾನವ ದಿನಗಳ ನೇರ ಉದ್ಯೋಗ ಮತ್ತು 313.83 ಲಕ್ಷ ಮಾನವ ದಿನಗಳ ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ. ಉದ್ದೇಶಿತ ಕಾರಿಡಾರ್ ಸುತ್ತಮುತ್ತಲಿನ ಆರ್ಥಿಕ ಚಟುವಟಿಕೆಗಳ ಹೆಚ್ಚಳದಿಂದಾಗಿ ಈ ಯೋಜನೆಯು ಹೆಚ್ಚುವರಿ ಉದ್ಯೋಗಾವಕಾಶ ಸೃಷ್ಟಿಸುತ್ತದೆ.

ನಾಸಿಕ್-ಅಹ್ಮದ್ ನಗರ-ಸೋಲಾಪುರ-ಅಕ್ಕಲಕೋಟ್ ಗೆ ಯೋಜನಾ ಜೋಡಣೆ ನಕ್ಷೆ

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s contribution to BRICS: Nari Shakti moves from promise to delivery

Media Coverage

India’s contribution to BRICS: Nari Shakti moves from promise to delivery
NM on the go

Nm on the go

Always be the first to hear from the PM. Get the App Now!
...
Prime Minister speaks with the President of Iran
June 30, 2026
President Pezeshkian briefs PM on the recent developments in West Asia.
PM welcomes the understanding reached and reiterates the need for continued efforts for lasting peace and stability.

Prime Minister Shri Narendra Modi had a telephone conversation today with the President of the Islamic Republic of Iran, H.E. Dr. Masoud Pezeshkian.

President Pezeshkian briefed the Prime Minister on the recent developments in West Asia and the way forward.

Prime Minister welcomed the understanding reached, and reiterated India’s consistent position that all issues must be resolved through dialogue and diplomacy.

Prime Minister reiterated the need for continued efforts to ensure lasting peace and stability in the region, and for safeguarding freedom of navigation and commerce.