ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಲು ಅನುಮೋದನೆ ನೀಡಿದೆ. ಶಾಸ್ತ್ರೀಯ ಭಾಷೆಗಳು ಭಾರತದ ಆಳವಾದ ಮತ್ತು ಪ್ರಾಚೀನ ಸಾಂಸ್ಕೃತಿಕ ಪರಂಪರೆಯ ಪಾಲಕರಾಗಿ ಕಾರ್ಯನಿರ್ವಹಿಸುತ್ತವೆ, ಪ್ರತಿ ಸಮುದಾಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೈಲಿಗಲ್ಲಿನ ಸಾರವನ್ನು ಪ್ರಸ್ತುತಪಡಿಸುತ್ತವೆ.

ಅಂಶವಾರು ವಿವರಣೆ ಮತ್ತು ಹಿನ್ನೆಲೆ:

ಭಾರತ ಸರ್ಕಾರವು 12 ಅಕ್ಟೋಬರ್ 2004 ರಂದು "ಶಾಸ್ತ್ರೀಯ ಭಾಷೆಗಳು" ಎಂದು ಹೊಸ ವರ್ಗದ ಭಾಷೆಗಳನ್ನು ರಚಿಸಲು ನಿರ್ಧರಿಸಿತು, ತಮಿಳನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಿತು ಮತ್ತು ಶಾಸ್ತ್ರೀಯ ಭಾಷಾ ಸ್ಥಾನಮಾನಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ನಿಗದಿಪಡಿಸಿತು:

ಎ.    ಅದರ ಆರಂಭಿಕ ಪಠ್ಯಗಳ ಹೆಚ್ಚಿನ ಪ್ರಾಚೀನತೆ/ಒಂದು ಸಾವಿರ ವರ್ಷಗಳ ದಾಖಲಿತ ಇತಿಹಾಸ ಹೊಂದಿರಬೇಕು.

ಬಿ.    ಪ್ರಾಚೀನ ಸಾಹಿತ್ಯ/ಪಠ್ಯಗಳ ಸಂಗ್ರಹ, ಭಾಷಿಕರ ಪೀಳಿಗೆಯನ್ನು ಅಮೂಲ್ಯವಾದ ಪರಂಪರೆ ಎಂದು ಪರಿಗಣಿಸಲಾಗುತ್ತದೆ.

ಸಿ.   ಸಾಹಿತ್ಯ ಪರಂಪರೆಯು ಮೂಲದ್ದಾಗಿರಬೇಕು ಮತ್ತು ಯಾವುದೇ ಇತರ ಭಾಷಾ ಸಮುದಾಯದಿಂದ ಎರವಲು ಪಡೆದಿರಬಾರದು.

ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ಪ್ರಸ್ತಾವಿತ ಭಾಷೆಗಳನ್ನು ಪರಿಶೀಲಿಸಲು ನವೆಂಬರ್ 2004 ರಲ್ಲಿ ಸಾಹಿತ್ಯ ಅಕಾಡೆಮಿಯ ನೇತೃತ್ವದಲ್ಲಿ ಸಂಸ್ಕೃತಿ ಸಚಿವಾಲಯವು ಭಾಷಾ ತಜ್ಞರ ಸಮಿತಿಯನ್ನು ರಚಿಸಿತು.

ಮಾನದಂಡಗಳನ್ನು ನವೆಂಬರ್ 2005 ರಲ್ಲಿ ಈ ಕೆಳಗಿನಂತೆ ಪರಿಷ್ಕರಿಸಲಾಯಿತು ಮತ್ತು ಸಂಸ್ಕೃತವನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಲಾಯಿತು:

  1.       1500-2000 ವರ್ಷಗಳಲ್ಲಿ ವ್ಯಾಪಿಸಿರುವ ಅದರ ಆರಂಭಿಕ ಪಠ್ಯಗಳು/ದಾಖಲಿತ ಇತಿಹಾಸದ ಹೆಚ್ಚಿನ ಪ್ರಾಚೀನತೆ.
  2.     ಪ್ರಾಚೀನ ಸಾಹಿತ್ಯ/ಪಠ್ಯಗಳ ಸಂಗ್ರಹ, ಇದನ್ನು ಮಾತನಾಡುವವರ ತಲೆಮಾರುಗಳನ್ನು ಮೌಲ್ಯಯುತವಾದ ಪರಂಪರೆ ಎಂದು ಪರಿಗಣಿಸಲಾಗುತ್ತದೆ.

III.    ಸಾಹಿತ್ಯಿಕ ಸಂಪ್ರದಾಯವು ಮೂಲದ್ದಾಗಿರಬೇಕು ಮತ್ತು ಇನ್ನೊಂದು ಭಾಷಾ ಸಮುದಾಯದಿಂದ ಎರವಲು ಪಡೆದಿರಬಾರದು.

  1. ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯವು ಆಧುನಿಕ ಭಾಷೆಯಿಂದ ಭಿನ್ನವಾಗಿರುವುದರಿಂದ, ಶಾಸ್ತ್ರೀಯ ಭಾಷೆ ಮತ್ತು ಅದರ ನಂತರದ ರೂಪಗಳು ಅಥವಾ ಅದರ ಶಾಖೆಗಳ ನಡುವೆ ವ್ಯತ್ಯಾಸವಿರಬಹುದು.

ಭಾರತ ಸರ್ಕಾರವು ಇಲ್ಲಿಯವರೆಗೆ ಕೆಳಗಿನ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಿದೆ:

ಭಾಷೆ

ಅಧಿಸೂಚನೆಯ ದಿನಾಂಕ

ತಮಿಳು

12/10/2004

ಸಂಸ್ಕೃತ

25/11/2005

ತೆಲುಗು

31/10/2008

ಕನ್ನಡ

31/10/2008

ಮಲಯಾಳಂ

08/08/2013

ಒಡಿಯಾ

01/03/2014

 

2013 ರಲ್ಲಿ, ಸಚಿವಾಲಯವು ಮರಾಠಿಗೆ ಶಾಸ್ತ್ರೀಯ ಭಾಷಾ ಸ್ಥಾನಮಾನವನ್ನು ನೀಡುವಂತೆ ಮಹಾರಾಷ್ಟ್ರ ಸರ್ಕಾರದ ಪ್ರಸ್ತಾವನೆಯನ್ನು ಸ್ವೀಕರಿಸಿತು, ಅದನ್ನು ಭಾಷಾ ತಜ್ಞರ ಸಮಿತಿಗೆ ರವಾನಿಸಲಾಯಿತು. ಭಾಷಾ ತಜ್ಞರ ಸಮಿತಿಯು ಶಾಸ್ತ್ರೀಯ ಭಾಷೆಗೆ ಮರಾಠಿಯನ್ನು ಶಿಫಾರಸು ಮಾಡಿತ್ತು. ಮರಾಠಿ ಭಾಷೆಗೆ ಶಾಸ್ತ್ರೀಯ ಭಾಷಾ ಸ್ಥಾನಮಾನ ನೀಡಲು 2017 ರಲ್ಲಿ ಸಂಪುಟಕ್ಕೆ ಕರಡು ಟಿಪ್ಪಣಿ ಕುರಿತ ಅಂತರ ಸಚಿವಾಲಯದ ಸಮಾಲೋಚನೆಯ ಸಂದರ್ಭದಲ್ಲಿ, ಗೃಹ ಸಚಿವಾಲಯವು ನಿಯಮಗಳನ್ನು ಮಾರ್ಪಡಿಸಲು ಮತ್ತು ಅದನ್ನು ಕಠಿಣಗೊಳಿಸಲು ಸಲಹೆ ನೀಡಿತು. ಪ್ರಧಾನಿಯವರ ಕಾರ್ಯಾಲಯವು ತನ್ನ ಸಲಹೆಯಲ್ಲಿ, ಎಷ್ಟು ಇತರ ಭಾಷೆಗಳು ಅರ್ಹತೆ ಪಡೆಯುವ ಸಾಧ್ಯತೆಯಿದೆ ಎಂಬುದನ್ನು ಸಚಿವಾಲಯವು ಪರಿಗಣಿಸಬಹುದು ಎಂದು ಹೇಳಿತು.

ಈ ಮಧ್ಯೆ, ಪಾಲಿ, ಪ್ರಾಕೃತ, ಅಸ್ಸಾಮಿ ಮತ್ತು ಬಂಗಾಳಿ ಭಾಷೆಗಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನವನ್ನು ನೀಡಲು ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳದಿಂದ ಪ್ರಸ್ತಾವನೆಯನ್ನು ಸ್ವೀಕರಿಸಲಾಯಿತು.

ಅದರಂತೆ, ಭಾಷಾಶಾಸ್ತ್ರ ತಜ್ಞರ ಸಮಿತಿಯು (ಸಾಹಿತ್ಯ ಅಕಾಡೆಮಿಯ ಅಡಿಯಲ್ಲಿ) 25.07.2024 ರಂದು ನಡೆದ ಸಭೆಯಲ್ಲಿ ಈ ಕೆಳಗಿನಂತೆ ಸರ್ವಾನುಮತದಿಂದ ಮಾನದಂಡಗಳನ್ನು ಪರಿಷ್ಕರಿಸಿತು. ಭಾಷಾಶಾಸ್ತ್ರ ತಜ್ಞರ ಸಮಿತಿಗೆ ಸಾಹಿತ್ಯ ಅಕಾಡೆಮಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದೆ.

  1. (ಅದರ) ಹೆಚ್ಚಿನ ಪಾರಾಚೀನತೆಯು 1500-2000 ವರ್ಷಗಳಲ್ಲಿ ವ್ಯಾಪಿಸಿರುವ ಅದರ ಆರಂಭಿಕ ಪಠ್ಯಗಳು/ದಾಖಲಿತ ಇತಿಹಾಸ.
  2. ಪುರಾತನ ಸಾಹಿತ್ಯ/ಪಠ್ಯಗಳ ಸಂಗ್ರಹ, ಇದನ್ನು ಮಾತನಾಡುವವರ ತಲೆಮಾರುಗಳನ್ನು ಪರಂಪರೆ ಎಂದು ಪರಿಗಣಿಸಲಾಗಿದೆ.

iii      ಜ್ಞಾನ ಪಠ್ಯಗಳು, ವಿಶೇಷವಾಗಿ ಕಾವ್ಯದ ಜೊತೆಗೆ ಗದ್ಯ ಪಠ್ಯಗಳು, ಶಿಲಾಶಾಸನದ ಸಾಕ್ಷ್ಯಗಳು.

  1.     ಶಾಸ್ತ್ರೀಯ ಭಾಷೆಗಳು ಮತ್ತು ಸಾಹಿತ್ಯಗಳು ಅವುಗಳ ಪ್ರಸ್ತುತ ರೂಪದಲ್ಲಿ ಅಥವಾ ಅವುಗಳ ಶಾಖೆಗಳ ನಂತರದ ರೂಪಗಳಿಂದ ಭಿನ್ನವಾಗಿರಬಹುದು.

ಈ ಕೆಳಗಿನ ಭಾಷೆಗಳನ್ನು ಶಾಸ್ತ್ರೀಯ ಭಾಷೆಯಾಗಿ ಪರಿಗಣಿಸಲು ಪರಿಷ್ಕೃತ ಮಾನದಂಡಗಳನ್ನು ಪೂರೈಸಬೇಕು ಎಂದು ಸಮಿತಿಯು ಶಿಫಾರಸು ಮಾಡಿತು.

  1. ಮರಾಠಿ
  2. ಪಾಲಿ

III. ಪ್ರಾಕೃತ

  1. ಅಸ್ಸಾಮಿ
  2. ಬೆಂಗಾಲಿ

ಅನುಷ್ಠಾನ ತಂತ್ರ ಮತ್ತು ಗುರಿಗಳು:

ಶಿಕ್ಷಣ ಸಚಿವಾಲಯವು ಶಾಸ್ತ್ರೀಯ ಭಾಷೆಗಳನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಸಂಸ್ಕೃತ ಭಾಷೆಯನ್ನು ಉತ್ತೇಜಿಸಲು ಸಂಸತ್ತಿನ ಕಾಯಿದೆಯ ಮೂಲಕ ಮೂರು ಕೇಂದ್ರೀಯ ವಿಶ್ವವಿದ್ಯಾಲಯಗಳನ್ನು 2020 ರಲ್ಲಿ ಸ್ಥಾಪಿಸಲಾಯಿತು. ಪ್ರಾಚೀನ ತಮಿಳು ಪಠ್ಯಗಳ ಅನುವಾದವನ್ನು ಸುಲಭಗೊಳಿಸಲು, ಸಂಶೋಧನೆಯನ್ನು ಉತ್ತೇಜಿಸಲು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ತಮಿಳು ಭಾಷೆಯ ವಿದ್ವಾಂಸರಿಗೆ ಕೋರ್ಸ್‌ ಗಳನ್ನು ಒದಗಿಸಲು ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳು ಸ್ಥಾಪಿಸಲಾಯಿತು. ಶಾಸ್ತ್ರೀಯ ಭಾಷೆಗಳ ಅಧ್ಯಯನ ಮತ್ತು ಸಂರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು, ಮೈಸೂರಿನಲ್ಲಿರುವ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್‌ ಅಡಿಯಲ್ಲಿ ಶಾಸ್ತ್ರೀಯ ಕನ್ನಡ, ತೆಲುಗು, ಮಲಯಾಳಂ ಮತ್ತು ಒಡಿಯಾದಲ್ಲಿ ಅಧ್ಯಯನಕ್ಕಾಗಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಈ ಉಪಕ್ರಮಗಳಲ್ಲದೆ, ಶಾಸ್ತ್ರೀಯ ಭಾಷೆಗಳ ಕ್ಷೇತ್ರದಲ್ಲಿ ಸಾಧನೆಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ. ಶಿಕ್ಷಣ ಸಚಿವಾಲಯವು ಶಾಸ್ತ್ರೀಯ ಭಾಷೆಗಳಿಗೆ ನೀಡಿದ ಪ್ರಯೋಜನಗಳಲ್ಲಿ ಶಾಸ್ತ್ರೀಯ ಭಾಷೆಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳು, ವಿಶ್ವವಿದ್ಯಾಲಯಗಳಲ್ಲಿ ಪೀಠಗಳು ಮತ್ತು ಶಾಸ್ತ್ರೀಯ ಭಾಷೆಗಳ ಪ್ರಚಾರ ಕೇಂದ್ರಗಳು ಸೇರಿವೆ.

ಉದ್ಯೋಗ ಸೃಷ್ಟಿ ಸೇರಿದಂತೆ ಪ್ರಮುಖ ಪರಿಣಾಮ:

ಭಾಷೆಗಳನ್ನು ಶಾಸ್ತ್ರೀಯ ಭಾಷೆಯಾಗಿ ಸೇರಿಸುವುದರಿಂದ ವಿಶೇಷವಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಗಮನಾರ್ಹ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಹೆಚ್ಚುವರಿಯಾಗಿ, ಈ ಭಾಷೆಗಳ ಪ್ರಾಚೀನ ಪಠ್ಯಗಳ ಸಂರಕ್ಷಣೆ, ದಾಖಲೀಕರಣ ಮತ್ತು ಡಿಜಿಟಲೀಕರಣವು ಆರ್ಕೈವಿಂಗ್, ಅನುವಾದ, ಪ್ರಕಾಶನ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತದೆ.

ಒಳಗೊಂಡಿರುವ ರಾಜ್ಯಗಳು/ಜಿಲ್ಲೆಗಳು:

ಮಹಾರಾಷ್ಟ್ರ (ಮರಾಠಿ), ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ (ಪಾಲಿ ಮತ್ತು ಪ್ರಾಕೃತ), ಪಶ್ಚಿಮ ಬಂಗಾಳ (ಬಂಗಾಳಿ) ಮತ್ತು ಅಸ್ಸಾಂ (ಅಸ್ಸಾಮಿ) ಒಳಗೊಂಡಿರುವ ಮುಖ್ಯ ರಾಜ್ಯಗಳು. ಇದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯವಾಗಿ ವ್ಯಾಪಕವಾದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪರಿಣಾಮವನ್ನು ಬೀರುತ್ತದೆ.

 

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
India’s economy resilient despite West Asia headwinds

Media Coverage

India’s economy resilient despite West Asia headwinds
NM on the go

Nm on the go

Always be the first to hear from the PM. Get the App Now!
...
PM Modi receives a phone call today from President of Sri Lanka
March 24, 2026
The two leaders discuss disruptions affecting global energy security.
Both leaders reiterate the importance of keeping shipping lines open and secure.
The two leaders review progress on various initiatives aimed at strengthening bilateral energy cooperation and enhancing regional security.
PM reiterates India’s firm commitment to work closely together in addressing shared challenges.

Prime Minister Shri Narendra Modi received a phone call today from the President of Sri Lanka, H.E. Anura Kumara Disanayaka.

The two leaders discussed the evolving situation in West Asia with an emphasis on disruptions affecting global energy security.

Both leaders reiterated the importance of keeping shipping lines open and secure in the interest of the whole world..

The two leaders reviewed progress on various initiatives aimed at strengthening India-Sri Lanka energy cooperation and enhancing regional security.

Prime Minister reiterated India’s firm commitment to work closely together in addressing shared challenges in line with India’s Neighbourhood First policy and MAHASAGAR Vision.

The two leaders agreed to stay in touch.