ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಇಂದು ಜೈವಿಕ ತಂತ್ರಜ್ಞಾನ ಇಲಾಖೆಯ ಉನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯನ್ನು ಉತ್ತೇಜಿಸಲು (ಬಯೋಇ 3BioE3 (ಆರ್ಥಿಕತೆ, ಪರಿಸರ ಮತ್ತು ಉದ್ಯೋಗಕ್ಕಾಗಿ ಜೈವಿಕ ತಂತ್ರಜ್ಞಾನ) ನೀತಿ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.

BioE3 ನೀತಿಯು ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಾಗೂ ಉದ್ಯಮಶೀಲತೆಗೆ ಆವಿಷ್ಕಾರ-ಚಾಲಿತ ಬೆಂಬಲವನ್ನು ಒದಗಿಸುವ ಗುರಿ ಹೊಂದಿದೆ. ಇದು ಜೈವಿಕ‌ ಉತ್ಪಾದನೆ (ಬಯೋಮ್ಯಾನುಫ್ಯಾಕ್ಚರಿಂಗ್) ಮತ್ತು ಬಯೋ-AI ಹಬ್ ಗಳು, ಬಯೋಫೌಂಡ್ರಿಗಳ ಸ್ಥಾಪನೆಯ ಮೂಲಕ ತಂತ್ರಜ್ಞಾನ ಅಭಿವೃದ್ಧಿ ಮತ್ತು ವಾಣಿಜ್ಯೀಕರಣವನ್ನು ವೇಗಗೊಳಿಸುತ್ತದೆ. ಈ ನೀತಿಯು ಭಾರತದ ನುರಿತ ಕಾರ್ಯಪಡೆಯ ವಿಸ್ತರಣೆಯನ್ನು ಸುಗಮಗೊಳಿಸುತ್ತದೆ ಮತ್ತು ಹಸಿರು ಬೆಳವಣಿಗೆಯ ಪುನರುತ್ಪಾದಕ ಜೈವಿಕ ಆರ್ಥಿಕ ಮಾದರಿಗೆ ಆದ್ಯತೆ ನೀಡುವುದರ ಜೊತೆಗೆ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸುತ್ತದೆ.

ಒಟ್ಟಾರೆಯಾಗಿ, ನೀತಿಯು ಸರ್ಕಾರದ ಉಪಕ್ರಮಗಳಾದ ' ನೆಟ್ ಝೀರೋ ' (ನಿವ್ವಳ ಶೂನ್ಯ) ಕಾರ್ಬನ್ ಆರ್ಥಿಕತೆ ಮತ್ತು 'ಪರಿಸರ ಸ್ನೇಹಿ ಜೀವನಶೈಲಿ'ಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು 'ವೃತ್ತಾಕಾರದ ಜೈವಿಕ ಆರ್ಥಿಕತೆ'ಯನ್ನು ಉತ್ತೇಜಿಸುವ ಮೂಲಕ ಭಾರತವನ್ನು ತ್ವರಿತ 'ಹಸಿರು ಬೆಳವಣಿಗೆ'ಯ ಹಾದಿಯಲ್ಲಿ ಮುನ್ನಡೆಸುತ್ತದೆ. BioE3 ಕಾರ್ಯತಂತ್ರವು ಹೆಚ್ಚು ಸಮರ್ಥನೀಯ, ನವೀನ ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ವಿಕಸಿತ ಭಾರತಕ್ಕೆ ಜೈವಿಕ ದೃಷ್ಟಿಯನ್ನು ಒದಗಿಸುವ ಭವಿಷ್ಯವನ್ನು ಸೃಷ್ಟಿಸುತ್ತದೆ.

ಹವಾಮಾನ ಬದಲಾವಣೆ ತಗ್ಗಿಸುವಿಕೆ , ಆಹಾರ ಭದ್ರತೆ , ಮಾನವ ಆರೋಗ್ಯ ಇತ್ಯಾದಿಗಳಂತಹ ಕೆಲವು ಪ್ರಮುಖ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಸುಸ್ಥಿರ ಆವರ್ತಕ ಅಭ್ಯಾಸಗಳನ್ನು ಉತ್ತೇಜಿಸಲು ಜೀವಶಾಸ್ತ್ರದ ಕೈಗಾರಿಕೀಕರಣದಲ್ಲಿ ಹೂಡಿಕೆ ಮಾಡಲು ಇದೀಗ ಸರಿಯಾದ ಸಮಯ. ಜೈವಿಕ ಆಧಾರಿತ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅತ್ಯಾಧುನಿಕ ಆವಿಷ್ಕಾರವನ್ನು ವೇಗಗೊಳಿಸಲು ನಮ್ಮ ದೇಶದಲ್ಲಿ ಚೇತರಿಸಿಕೊಳ್ಳುವ ಜೈವಿಕ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ರಚಿಸುವುದು ಮುಖ್ಯವಾಗಿದೆ .

ಅತ್ಯುನ್ನತ ಕಾರ್ಯಕ್ಷಮತೆಯ ಜೈವಿಕ ಉತ್ಪಾದನೆಯು ಔಷಧದಿಂದ ವಸ್ತುಗಳವರೆಗಿನ ಉತ್ಪನ್ನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೃಷಿ ಮತ್ತು ಆಹಾರ ಸವಾಲುಗಳನ್ನು ನಿಭಾಯಿಸುತ್ತದೆ ಮತ್ತು ಸುಧಾರಿತ ಜೀವ ತಂತ್ರಜ್ಞಾನ ಪ್ರಕ್ರಿಯೆಗಳ ಸಂಯೋಜನೆಯ ಮೂಲಕ ಜೀವ ಆಧಾರಿತ ಉತ್ಪನ್ನಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ರಾಷ್ಟ್ರೀಯ ಆದ್ಯತೆಗಳನ್ನು ಪರಿಹರಿಸಲು, ಬಯೋಇ3 ನೀತಿಯು ಸಾಮಾನ್ಯವಾಗಿ ಈ ಕೆಳಗಿನ ಕಾರ್ಯತಂತ್ರ/ವಿಷಯಾಧಾರಿತ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ: ಹೆಚ್ಚಿನ ಮೌಲ್ಯದ ಜೀವ ಆಧಾರಿತ ರಾಸಾಯನಿಕಗಳು, ಬಯೋಪಾಲಿಮರ್ ಗಳು ಮತ್ತು ಕಿಣ್ವಗಳು; ಸ್ಮಾರ್ಟ್ ಪ್ರೋಟೀನ್‌ಗಳು ಮತ್ತು ಕ್ರಿಯಾತ್ಮಕ ಆಹಾರಗಳು; ನಿಖರ ಬಯೋಥೆರಪಿಟಿಕ್ಸ್ ; ಹವಾಮಾನ ಸ್ನೇಹಿ ಕೃಷಿ ; ಕಾರ್ಬನ್ ಕ್ಯಾಪ್ಚರ್ ಮತ್ತು ಬಳಕೆ ; ಸಾಗರ ಮತ್ತು ಬಾಹ್ಯಾಕಾಶ ಪರಿಶೋಧನೆ.

 

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
Farmers to benefit as Centre hikes onion procurement price by 13% to ₹2,125 per quintal

Media Coverage

Farmers to benefit as Centre hikes onion procurement price by 13% to ₹2,125 per quintal
NM on the go

Nm on the go

Always be the first to hear from the PM. Get the App Now!
...
Share your ideas and suggestions for 'Mann Ki Baat' now!
July 05, 2026

Prime Minister Narendra Modi will share 'Mann Ki Baat' on Sunday, July 26th. If you have innovative ideas and suggestions, here is an opportunity to directly share it with the PM. Some of the suggestions would be referred by the Prime Minister during his address.

Share your inputs in the comments section below.