India-ASEAN partnership may be just 25 years old. But, India’s ties with Southeast Asia stretch back more than two millennia: PM
India's free trade agreements in ASEAN region are its oldest and among the most ambitious anywhere, says the PM
Over six-million-strong Indian diaspora in ASEAN- rooted in diversity & steeped in dynamism - constitutes an extraordinary human bond: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಸಿಯಾನ್ – ಭಾರತ ಪಾಲುದಾರಿಕೆಯ ಬಗ್ಗೆ ಸಂಪಾದಕೀಯ ಪುಟದ ಪಕ್ಕದ ಪುಟದಲ್ಲಿ ‘ಆಸಿಯಾನ್ – ಭಾರತ: ಹಂಚಿಕೆಯ ಮೌಲ್ಯ, ಸಮಾನ ನಿರ್ದಿಷ್ಟ ಸ್ಥಾನ (ಡೆಸ್ಟಿನಿ)’ ಎಂಬ ಶೀರ್ಷಿಕೆಯಡಿ ತಮ್ಮ  ನಿಲುವನ್ನು ಹಂಚಿಕೊಂಡಿದ್ದಾರೆ. ಈ ಲೇಖನ ಆಸಿಯಾನ್ ಸದಸ್ಯ ರಾಷ್ಟ್ರಗಳ ಪ್ರಮುಖ ದೈನಿಕಗಳಲ್ಲಿ ಪ್ರಕಟವಾಗಿವೆ. ಈ ಲೇಖನದ ಪೂರ್ಣ ಪಾಠ ಈ ಕೆಳಕಂಡಂತಿದೆ.

 

ಆಸಿಯಾನ್- ಇಂಡಿಯಾಹಂಚಿಕೆಯ ಮೌಲ್ಯಗಳುಸಮಾನ ಡೆಸ್ಟಿನಿ

 

ಲೇಖಕರು : ಶ್ರೀ ನರೇಂದ್ರ ಮೋದಿ

 

ಇಂದು 125 ಕೋಟಿ ಭಾರತೀಯರು ಇಂದು ನಮ್ಮ ರಾಜಧಾನಿ, ನವದೆಹಲಿಯಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ ಆಸಿಯಾನ್ ರಾಷ್ಟ್ರಗಳ 10 ಘನತೆವೆತ್ತ ನಾಯಕರಿಗೆ ಆತಿಥ್ಯ ನೀಡುವ ಗೌರವ ಪಡೆದಿದ್ದಾರೆ.

ಭಾರತ – ಆಸಿಯಾನ್ ಪಾಲುದಾರಿಕೆಯ 25ನೇ ವರ್ಷದ ಅಂಗವಾಗಿ ನಡೆದ ಸ್ಮರಣಾರ್ಥ ಶೃಂಗದಲ್ಲಿ  ಗುರುವಾರ, ಆಸಿಯಾನ್ ನಾಯಕರಿಗೆ ಆತಿಥ್ಯ ನೀಡುವ ಗೌರವ ನನಗೆ ದೊರೆತಿತ್ತು. ನಮ್ಮೊಂದಿಗೆ ಅವರುಗಳ ಉಪಸ್ಥಿತಿ ಆಸಿಯಾನ್ ರಾಷ್ಟ್ರಗಳ ಅಭಿಮಾನದ ಧ್ಯೋತಕವಾಗಿದೆ. ಇದಕ್ಕೆ ಸ್ಪಂದನೆ ನೀಡಲು ಅವರಿಗೆ ಬೆಚ್ಚನೆಯ ಸ್ನೇಹದ ಆಲಿಂಗನದೊಂದಿಗೆ ಸ್ವಾಗತಿಸಲು ಚಳಿಯ ಬೆಳಗಿನಲ್ಲಿ ಭಾರತ ಹೊರ ಬಂದಿದೆ.

ಇದು ಒಂದು ಸಾಧಾರಣ ಕಾರ್ಯಕ್ರಮವಲ್ಲ. ಮನುಕುಲದ ಸುಮಾರು ನಾಲ್ಕನೇ ಒಂದು ಭಾಗದಷ್ಟು ಅಂದರೆ ತಮ್ಮ 190 ಕೋಟಿ ಜನರಿಗೆ ದೊಡ್ಡ ಭರವಸೆಯನ್ನು ನೀಡುವ ಭಾರತ ಮತ್ತು ಆಸಿಯಾನ್ ನ ಆಳವಾದ ಸಹಭಾಗಿತ್ವದಲ್ಲಿ ಪ್ರಯಾಣದಲ್ಲಿ ಇದು ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ.

ಭಾರತ-ಆಸಿಯಾನ್ ಪಾಲುದಾರಿಕೆ ಕೇವಲ 25 ವರ್ಷ ಹಳೆಯದಾಗಿರಬಹುದು. ಆದರೆ, ಆಗ್ನೇಯ ಏಷ್ಯಾದೊಂದಿಗಿನ ಭಾರತದ ನಂಟು ಎರಡು ಸಮಸ್ರಮಾನಗಳಿಗೂ ಹಿಂದೆ ಹೋಗುತ್ತದೆ. ಶಾಂತಿ ಮತ್ತು ಸ್ನೇಹ, ಧರ್ಮ ಮತ್ತು ಸಂಸ್ಕೃತಿ, ಕಲೆ ಮತ್ತು ವಾಣಿಜ್ಯ, ಭಾಷೆ ಮತ್ತು ಸಾಹಿತ್ಯದಲ್ಲಿ ಒಂದಾಗಿರುವ ಇದು ಭಾರತ ಮತ್ತು ಆಗ್ನೇಯ ಏಷ್ಯಾದ ಭವ್ಯವಾದ ವೈವಿಧ್ಯತೆಯ ಪ್ರತಿಯೊಂದು ಭಾಗದಲ್ಲಿ ಶಾಶ್ವತ ಸಂಪರ್ಕಗಳು ಈಗಲೂ ಅಸ್ತಿತ್ವದಲ್ಲಿದ್ದು, ನಮ್ಮ ಜನರ ನಡುವೆ ಒಂದು ಅನನ್ಯ ಹೊಂದಾಣಿಕೆ ಮತ್ತು ಪರಿಚಿತತೆಯನ್ನು ಒದಗಿಸುತ್ತದೆ.

ಎರಡು ದಶಕಗಳ ಹಿಂದೆ, ಭಾರತ ಬೃಹತ್ ಪ್ರಕ್ರಿಯಾತ್ಮಕ ಬದಲಾವಣೆಗಳೊಂದಿಗೆ ವಿಶ್ವಕ್ಕೆ ತೆರೆದುಕೊಂಡಿತು. ಶತಮಾನಗಳಿಂದಲೂ ಹೊಂದಿದ್ದ ಪ್ರವೃತ್ತಿಯಿಂದ, ಇದು ಸಹಜವಾಗಿಯೇ ಪೂರ್ವದತ್ತ ತಿರುಗಿತು. ಹೀಗಾಗಿ ಪೂರ್ವದಿಂದ ಭಾರತದ ಪುನರ್ ಸಂಯೋಜನೆಯ ಹೊಸ ಪಯಣ ಆರಂಭವಾಯಿತು. ಭಾರತದದ ಹೆಚ್ಚಿನ ಪ್ರಮುಖ ಪಾಲುದಾರರು ಮತ್ತು ಮಾರುಕಟ್ಟೆಗಳು ಆಸಿಯಾನ್ ಮತ್ತು ಪೂರ್ ಏಷ್ಯಾದಿಂದ ಉತ್ತರ ಅಮೆರಿಕಾವರೆಗೆ ಇದ್ದು – ಇವು ಪೂರ್ವದಲ್ಲೇ ಇವೆ. ಆಗ್ನೇಯ ಏಷ್ಯಾ ಮತ್ತು ಆಸಿಯಾನ್ ಭೂ ಹಾಗೂ ಸಾಗರದಿಂದ ನಮ್ಮ ನೆರೆಯವರಾಗಿದ್ದು, ಅವರು ನಮ್ಮ ಪೂರ್ವದತ್ತ ನೋಟ ಮತ್ತು ಕಳೆದ ಮೂರು ವರ್ಷಗಳ ಪೂರ್ವದತ್ತ ಕ್ರಮ ನೀತಿಯಲ್ಲಿ ಪುಟಿದೇಳುವ ಸಾಧನವಾಗಿವೆ.

ಸಂವಾದನಾತ್ಮಕ ಪಾಲುದಾರಿಕೆಯ ಹಾದಿಯುದ್ದಕ್ಕೂ ಆಸಿಯಾನ್ ಮತ್ತು ಭಾರತ ವ್ಯೂಹಾತ್ಮಕ ಪಾಲುದಾರರಾಗಿ ಪರಿವರ್ತಿತವಾಗಿವೆ. ನಾವು ನಮ್ಮ ವಿಶಾಲ ನೆಲೆಯ  ಪಾಲುದಾರಿಕೆಯನ್ನು 30 ವ್ಯವಸ್ಥೆಗಳ ಮೂಲಕ ಮುಂದುವರಿಸಿದ್ದೇವೆ. ಪ್ರತಿಯೊಂದು ಆಸಿಯಾನ್ ಸದಸ್ಯರೊಂದಿಗೆ ನಾವು, ರಾಜತಾಂತ್ರಿಕವಾಗಿ, ಆರ್ಥಿಕವಾಗಿ ಮತ್ತು ಸುರಕ್ಷತೆಯ ಪಾಲುದಾರರಾಗಿ ಬೆಳೆಯುತ್ತಿದ್ದೇವೆ. ನಾವು ನಮ್ಮ ಕಡಲ ಸುರಕ್ಷತೆ ಮತ್ತು ರಕ್ಷಣೆಗೆ ಒಗ್ಗೂಡಿ ಶ್ರಮಿಸುತ್ತಿದ್ದೇವೆ. ನಮ್ಮ ವಾಣಿಜ್ಯ ಮತ್ತು ಹೂಡಿಕೆಯ ಹರಿವು ಹಲವುಪಟ್ಟು ಹೆಚ್ಚಾಗಿದೆ. ಆಸಿಯಾನ್ ಭಾರತದ ನಾಲ್ಕನೇ ಅತಿ ದೊಡ್ಡ ವಾಣಿಜ್ಯ ಪಾಲುದಾರನಾಗಿದ್ದರೆ; ಭಾರತವು ಆಸಿಯಾನ್ ನ 7ನೆಯದಾಗಿದೆ. ಭಾರತದ ಶೇಕಡ 20ರಷ್ಟು ವಿದೇಶೀ ಹೂಡಿಕೆ ಆಸಿಯಾನ್ ಗೆ ಹೋಗುತ್ತದೆ. ಸಿಂಗಾಪೂರ್ ನೇತೃತ್ವದ ಆಸಿಯಾನ್ ಭಾರತದ ಪ್ರಮುಖ ಹೂಡಿಕೆಯ ಮೂಲವಾಗಿದೆ. ವಲಯದಲ್ಲಿ ಭಾರತದ ಮುಕ್ತ ವಾಣಿಜ್ಯ ಒಪ್ಪಂದಗಳು  ಅತ್ಯಂತ ಹಳೆಯದಾಗಿದ್ದು, ಯಾವುದೇ ಪ್ರದೇಶಕ್ಕಿಂತ ಹೆಚ್ಚು ಆಶಾದಾಯಕವಾಗಿವೆ.

ವಾಯು ಸಂಪರ್ಕಗಳು ತ್ವರಿತವಾಗಿ ವಿಸ್ತರಣೆಯಾಗಿದ್ದು, ನಾವು ಹೆದ್ದಾರಿಗಳನ್ನು ಆಗ್ನೇಯ ಏಷ್ಯಾದ ಭೂಖಂಡದಲ್ಲಿ ಹೊಸ ತುರ್ತು ಮತ್ತು ಆದ್ಯತೆಯೊಂದಿಗೆ ವಿಸ್ತರಿಸುತ್ತಿದ್ದೇವೆ. ಬೆಳೆಯುತ್ತಿರುವ ಸಂಪರ್ಕಗಳು, ಸಾಮಿಪ್ಯತೆಯ ಬಲವರ್ಧನೆ ಮಾಡಿವೆ. ಇದು ಭಾರತವನ್ನು ಆಗ್ನೇಯ ಏಷ್ಯಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ಮೂಲವಾಗಿ ಮಾಡಿದೆ. ಈ ವಲಯದಲ್ಲಿನ 6 ದಶಲಕ್ಷದಷ್ಟು ಬಲಿಷ್ಠ ಭಾರತೀಯ ಸಮುದಾಯ ವೈವಿಧ್ಯತೆ ಮತ್ತು  ಚೈತನ್ಯದಿಂದ ಆಳವಾಗಿ ಬೇರೂರಿದ್ದು, ಅಭೂತಪೂರ್ವ ಮಾನವೀಯ ಬಂಧನವನ್ನು ನಮ್ಮ ನಡುವೆ ಬೆಸೆದಿದೆ.

ಪ್ರಧಾನಮಂತ್ರಿಯವರು ಪ್ರತಿಯೊಂದು ಆಸಿಯಾನ್ ಸದಸ್ಯ ರಾಷ್ಟ್ರದೊಂದಿಗೆ ಹಂಚಿಕೊಂಡಿರುವ ಅಭಿಪ್ರಾಯ ಈ ಕೆಳಗಿನಂತಿದೆ. 

ಥೈಲ್ಯಾಂಡ್

ಥೈಲ್ಯಾಂಡ್ ಆಸಿಯಾನ್ ನಲ್ಲಿ ಭಾರತದ ಮಹತ್ವದ ವಾಣಿಜ್ಯ ಪಾಲುದಾರನಾಗಿ ಹೊರಹೊಮ್ಮಿದೆ ಮತ್ತು ಆಸಿಯಾನ್ ನಿಂದ ಭಾರತದಲ್ಲಿ ಹೂಡಿಕೆ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಮತ್ತು ಥೈಲ್ಯಾಂಡ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಕಳೆದ ದಶಕದಲ್ಲಿ ದುಪ್ಪಟ್ಟಾಗಿದೆ. ಭಾರತ ಮತ್ತು ಥೈಲ್ಯಾಂಡ್ ನಡುವಿನ ಬಾಂಧವ್ಯ ಹಲವು ಕ್ಷೇತ್ರಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿವೆ. ನಾವು ದಕ್ಷಿಣ ಮತ್ತು ಆಗ್ನೇಯ ಏಷ್ಯಾವನ್ನು ಬೆಸೆಯುವ ಪ್ರಮುಖ ಪ್ರಾದೇಶಿಕ ಪಾಲುದಾರರಾಗಿದ್ದೇವೆ. ನಾವು ಆಸಿಯಾನ್, ಪೂರ್ವ ಏಷ್ಯಾ ಶೃಂಗ ಮತ್ತು ಬಿಮ್ ಸ್ಟೆಕ್ (ಬಹು ವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಬಂಗಾಳಕೊಲ್ಲಿಯ ಉಪಕ್ರಮ)ಗಳಲ್ಲಿ ಮತ್ತು ಮೆಕಾಂಗ್ ಗಂಗಾ ಸಹಕಾರ, ಏಷ್ಯಾ ಸಹಕಾರ ಸಂವಾದ ಮತ್ತು ಹಿಂದೂ ಮಹಾಸಾಗರ ರಿಮ್ ಸಂಘಟನೆಗಳಲ್ಲಿ ಆಪ್ತವಾಗಿ ಸಹಕಾರ ನೀಡುತ್ತಿದ್ದೇವೆ. ಥೈಲ್ಯಾಂಡ್ ಪ್ರಧಾನಮಂತ್ರಿಯವರು 2016ರಲ್ಲಿ ಕೈಗೊಂಡ ಅಧಿಕೃತ ಭೇಟಿಯು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಮೇಲೆ ದೀರ್ಘಕಾಲಿನ ಪರಿಣಾಮ ಬೀರಿದೆ.

ಥೈಲ್ಯಾಂಡ್ ನ ಜನಪ್ರಿಯ ದೊರೆ ಭುಮಿಬೋಲ್ ಅದ್ಯುಲಾದಜ್ ಅವರು ನಿಧನ ಹೊಂದಿದಾಗ ಥಾಯ್ ನ ಸಹೋದರ ಸಹೋದರಿಯರೊಂದಿಗೆ ಇಡೀ ಭಾರತವೇ ದುಃಖಿಸಿತು. ನೂತನ ದೊರೆ ಘನತೆವೆತ್ತ ಮಹಾ ವಜಿರಲಾಂಗ್ ಕೋರ್ನ್ ಬೋದಿಂದರಡೇಬಯವರಾಂಗ್ಕುನ್ ಅವರ ಶಾಂತಿಯುತ ಮತ್ತು ಸಮೃದ್ಧಿಯ ದೀರ್ಘಕಾಲಿನ ಆಡಳಿತಕ್ಕಾಗಿ ಥೈಲ್ಯಾಂಡ್ ನಆತ್ನೀಯ ಜನರೊಂದಿಗೆ ಭಾರತದ ಜನರೂ ಪ್ರಾರ್ಥಿಸಿದರು. 

ವಿಯಟ್ನಾಂ

ವಿದೇಶಿ ಆಡಳಿತದಿಂದ ವಿಮೋಚನೆ, ಮತ್ತು ಸ್ವಾತಂತ್ರ್ಯದ ರಾಷ್ಟ್ರೀಯ ಹೋರಾಟದಂಥ  ಸಮಾನ ಹೋರಾಟದಲ್ಲಿ ಸಾಂಪ್ರದಾಯಿಕವಾಗಿ ಆಪ್ತ ಮತ್ತು ಸೌಹಾರ್ದ ಸಂಬಂಧಗಳು ತಮ್ಮ ಐತಿಹಾಸಿಕ ಬೇರುವನ್ನು ಹೊಂದಿವೆ. ಮಹಾತ್ಮಾ ಗಾಂಧಿ ಮತ್ತು ಅಧ್ಯಕ್ಷ ಹೋ ಚಿ ಮಿನ್ಹ್ ಅವರು ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ನಮ್ಮ ಜನರನ್ನು ಮುನ್ನಡೆಸಿದ್ದರು. 2007ರಲ್ಲಿ ಪ್ರಧಾನಮಂತ್ರಿ ಎನ್ಗುಯೆನ್ ತಾನ್ ಡುಂಗ್ ಅವರು ಭಾರತ ಭೇಟಿ ನೀಡಿದ್ದಾಗ, ನಾವು ವ್ಯೂಹಾತ್ಮಕ ಪಾಲುದಾರಿಕೆಯ ಒಪ್ಪಂದಕ್ಕೆ ಅಂಕಿತ ಹಾಕಿದೆವು.  ಈ ವ್ಯೂಹಾತ್ಮಕ ಪಾಲುದಾರಿಕೆಯು 2016ರಲ್ಲಿ ನನ್ನ ವಿಯೆಟ್ ನಾಮ್ ಭೇಟಿಯಿಂದ ಸಮಗ್ರ ವ್ಯೂಹಾತ್ಮಕ ಪಾಲುದಾರಿಕೆಯಾಗಿ ಬೆಳೆಯಿತು.

ವಿಯೆಟ್ ನಾಮ್ ನೊಂದಿಗಿನ ಭಾರತದ ಬಾಂಧವ್ಯವು, ವೃದ್ಧಿಸುತ್ತಿರುವ ಆರ್ಥಿಕ ಮತ್ತು ವಾಣಿಜ್ಯ ಕಾರ್ಯಕ್ರಮಗಳ ಮೂಲಕ ಗುರುತಿಸಲ್ಪಟ್ಟಿವೆ. ಭಾರತ ಮತ್ತು ವಿಯೆಟ್ ನಾಂ ನಡುವಿನ ದ್ವಿಪಕ್ಷೀಯ ವಾಣಿಜ್ಯ 10 ವರ್ಷಗಳಲ್ಲಿ 10ಪಟ್ಟು ಹೆಚ್ಚಳವಾಗಿದೆ. ಭಾರತ ಮತ್ತು ವಿಯಟ್ನಾಂ ನಡುವಿನ ರಕ್ಷಣಾ ಸಹಕಾರವು ವ್ಯೂಹಾತ್ಮಕ ಪಾಲುದಾರಿಕೆಯ ಮಹತ್ವದ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಭಾರತ ಮತ್ತು ವಿಯಟ್ನಾಂ ನಡುವಿನ ಸಹಕಾರದ ಮಹತ್ವದ ಮತ್ತೊಂದು ಕ್ಷೇತ್ರವಾಗಿದೆ.

ಮ್ಯಾನ್ಮಾರ್

ಭಾರತ ಮತ್ತು ಮ್ಯಾನ್ಮಾರ್ ಸುಮಾರು 1600 ಕಿ.ಮೀ ನೆಲ ಗಡಿ ಮತ್ತು ಸಾಗರ ಗಡಿಯನ್ನು ಹಂಚಿಕೊಂಡಿವೆ. ನಮ್ಮ ಆಳವಾದ ಸಂಬಂಧದಿಂದ ಹರಿಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಬೌದ್ಧ ಧರ್ಮದ ನಮ್ಮ ಸಮಾನ ಪರಂಪರೆಯು ಹಿಂದಿನ ಐತಿಹಾಸಿಕ ಹಂಚಿಕೆಯಂತೆ ನಮ್ಮನ್ನು ಬೆಸೆದಿವೆ. ಶ್ವೇಡಾಗಾನ್ ಪಗೋಡಾದ ಮಿನುಗುತ್ತಿರುವ ಗೋಪುರಕ್ಕಿಂತ ಯಾವುದೂ ಹೆಚ್ಚು ಪ್ರಕಾಶಿಸುವುದಿಲ್ಲ. ಭಾರತೀಯ ಪುರಾತತ್ವ ಇಲಾಖೆಯ ನೆರವಿನೊಂದಿಗೆ ಬಗಾನ್ ನಲ್ಲಿನ ಆನಂದ ದೇವಾಲಯದ ಜೀರ್ಣೋದ್ಧಾರದ ಸಹಕಾರ ಸಹ ನಮ್ಮ ಹಂಚಿಕೆಯ ಪರಂಪರೆಯ ಸಂಕೇತವಾಗಿದೆ.

ವಸಾಹತು ಕಾಲದ ಅವಧಿಯಿಂದ, ರಾಜಕೀಯ ನಂಟಿನವರೆಗೆ ನಮ್ಮ ನಾಯಕರ ನಡುವೆ ಬಾಂಧವ್ಯವಿದೆ, ಅವರು ಸ್ವಾತಂತ್ರ್ಯದ ಸಮಾನ ಹೋರಾಟದ ವೇಳೆ ಏಕತೆ ಮತ್ತು ಶ್ರೇಷ್ಠ ಭರವಸೆಯನ್ನು ಪ್ರದರ್ಶಿಸಿದ್ದರು. ಬಾಲ ಗಂಗಾಧರ ತಿಲಕರನ್ನು ಯಂಗಾನ್ ಗೆ ಹಲವು ವರ್ಷಗಳ ಕಾಲ ಗಡಿಪಾರು ಮಾಡಲಾಗಿತ್ತು. ನೇತಾಜಿ ಸುಭಾಷ್ ಚಂದ್ರಬೋಸ್ ಅವರು ಮೊಳಗಿಸಿದ ಭಾರತದ ಸ್ವಾತಂತ್ರ್ಯದ ಕಹಳೆ ಮ್ಯಾನ್ಮಾರ್ ನ ಹಲವು ಆತ್ಮಗಳನ್ನು ಬಡಿದೆಬ್ಬಿಸಿತ್ತು.

ನಮ್ಮ ವಾಣಿಜ್ಯ ಕಳೆದ ದಶಕದಲ್ಲಿ ಎರಡುಪಟ್ಟಿಗಿಂತ ಹೆಚ್ಚಾಗಿದೆ. ನಮ್ಮ ಹೂಡಿಕೆಯ ಬಾಂಧವ್ಯ ಕೂಡ ಚೈತನ್ಯದಾಯಿಯಾಗಿದೆ. ಅಭಿವೃದ್ಧಿಯ ಸಹಕಾರ ಮ್ಯಾನ್ಮಾರ್ ನೊಂದಿಗಿನ ಭಾರತದ ಬಾಂಧವ್ಯದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದೆ. ಈ ನೆರವಿನ ಬಂಡವಾಳ ಪ್ರಸ್ತುತ 1.73 ಶತಕೋಟಿ ಡಾಲರ್ ಗಿಂತ ಹೆಚ್ಚಾಗಿದೆ. ಭಾರತದ ಪಾರದರ್ಶಕ ಅಭಿವೃದ್ಧಿ ಸಹಕಾರವು ಮ್ಯಾನ್ಮಾರ್ ರಾಷ್ಟ್ರೀಯ ಆಧ್ಯತೆಗೆ ಅನುಗುಣವಾಗಿದೆ ಮತ್ತು ಇದು ಆಸಿಯಾನ್ ಸಂಪರ್ಕದ ಮಾಸ್ಟರ್ ಪ್ಲಾನ್ ನೊಂದಿಗೆ ಸಂಯೋಗವಾಗುತ್ತದೆ.

ಸಿಂಗಾಪೂರ್

ಸಿಂಗಾಪೂರವು ವಲಯದಲ್ಲಿನ ಹಾಲಿ ಪ್ರಗತಿ ಮತ್ತು ಭವಿಷ್ಯದ ಸಾಮರ್ಥ್ಯಕ್ಕೆ ಭಾರತದ ಬಾಂಧವ್ಯದ ಪರಂಪರೆಗೆ ಗವಾಕ್ಷಿಯಾಗಿದೆ, ಸಿಂಗಾಪೂರ ಭಾರತ ಮತ್ತು ಆಸಿಯಾನ್ ನಡುವಿನ ಸೇತುವೆಯಾಗಿದೆ.

ಇಂದು ಇದು ನಮ್ಮ ಪೂರ್ವದ ಹೆಬ್ಬಾಗಿಲಾಗಿದೆ, ನಮ್ಮ ಪ್ರಮುಖ ಆರ್ಥಿಕ ಪಾಲುದಾರ ಮತ್ತು ಪ್ರಮುಖ ಜಾಗತಿಕ ವ್ಯೂಹಾತ್ಮಕ ಪಾಲುದಾರನಾಗಿದೆ, ಇದು ನಮ್ಮ ಸದಸ್ಯತ್ವದ ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವೇದಿಕೆಗಳಲ್ಲಿ ಅನುರಣಿಸುತ್ತದೆ.

ನಮ್ಮ ರಾಜಕೀಯ ಸಂಬಂಧಗಳು ಉತ್ತಮಿಕೆ, ಆಪ್ತತೆ ಮತ್ತು ವಿಶ್ವಾದಿಂದ ಕೂಡಿವೆ. ನಮ್ಮ ರಕ್ಷಣಾ ಬಾಂಧವ್ಯ ಇಬ್ಬರಿಗೂ ಬಲಿಷ್ಠವಾಗಿವೆ.

ನಮ್ಮ ಆರ್ಥಿಕ ಪಾಲುದಾರಿಕೆ ನಮ್ಮ ಎರಡೂ ರಾಷ್ಟ್ರಗಳ ಆದ್ಯತೆಯ ಪ್ರತಿಯೊಂದು ಕ್ಷೇತ್ರವನ್ನೂ ವ್ಯಾಪಿಸಿವೆ. ಸಿಂಗಾಪೂರವು ಹೂಡಿಕೆಯ ಭಾರತದ ಪ್ರಮುಖ ತಾಣ ಮತ್ತು ಮೂಲವಾಗಿದೆ.

ಸಾವಿರಾರು ಭಾರತೀಯ ಕಂಪನಿಗಳು ಸಿಂಗಾಪೂರ್ ನಲ್ಲಿ ನೋಂದಾಯಿಸಿಕೊಂಡಿವೆ.

ಭಾರತದ ಹದಿನಾರು ನಗರಗಳಿಂದ ಪ್ರತಿ ವಾರ ಸಿಂಗಾಪೂರಕ್ಕೆ 240 ನೇರ ವಿಮಾನಗಳಿವೆ. ಭಾರತೀತರು ಸಿಂಗಾಪೂರದಲ್ಲಿ ಮೂರನೇ ಅತಿ ದೊಡ್ಡ ಪ್ರವಾಸಿಗರ ತಂಡವಾಗಿದ್ದಾರೆ.

ಸಿಂಗಾಪುರದ ಸ್ಪೂರ್ತಿದಾಯಕ ಬಹುಸಾಂಸ್ಕೃತಿಕತೆ ಮತ್ತು ಪ್ರತಿಭೆಯ ಗೌರವವು ನಮ್ಮ ದೇಶಗಳ ನಡುವಿನ ಆಳವಾದ ಸಹಕಾರಕ್ಕೆ ಕಾರಣವಾಗುವ ರೋಮಾಂಚಕ ಮತ್ತು ಕ್ರಿಯಾತ್ಮಕ ಭಾರತೀಯ ಸಮುದಾಯವನ್ನು ಪೋಷಿಸಿದೆ.

ಪಿಲಿಪ್ಪೀನ್ಸ್

ಕಳೆದ ಎರಡು ತಿಂಗಳುಗಳ ಹಿಂದೆ ನಾನು ಪಿಲಿಪ್ಪೀನ್ಸ್ ಗೆ ತೃಪ್ತಿದಾಯಕ ಭೇಟಿ ನೀಡಿದ್ದೆ. ಆಸಿಯಾನ್ ಭಾರತ , ಇ.ಎ.ಎಸ್. ಮತ್ತು ಸಂಬಂಧಿತ ಶೃಂಗಸಭೆಗಳಲ್ಲಿ ಭಾಗವಹಿಸುವುದರ ಜೊತೆಗೆ, ನನಗೆ ಅಧ್ಯಕ್ಷ ದುತೇರ್ತೆ ಅವರನ್ನು ಭೇಟಿ ಮಾಡುವ ಗೌರವ ಲಭಿಸಿತ್ತು ಮತ್ತು ನಾವು ನಮ್ಮ ಆಪ್ತ ಮತ್ತು ಸಮಸ್ಯೆಮುಕ್ತ ಬಾಂಧವ್ಯವನ್ನು ಹೇಗೆ ಮುಂದೆ ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ವ್ಯಾಪಕವಾಗಿ ಚರ್ಚಿಸಿದೆವು. ಪ್ರಮುಖ ರಾಷ್ಟ್ರಗಳ ನಡುವೆ ನಾವಿಬ್ಬರೂ ಸೇವೆಗಳಲ್ಲಿ ಮತ್ತು ವೃದ್ಧಿ ದರದಲ್ಲಿ ಬಲವಾಗಿದ್ದೇವೆ. ನಮ್ಮ ವಾಣಿಜ್ಯ ಮತ್ತು ವ್ಯಾಪಾರದ ಸಾಮರ್ಥ್ಯ ಶ್ರೇಷ್ಠ ಭರವಸೆ ಹೊಂದಿದೆ.

ನಾನು ಅಧ್ಯಕ್ಷ ದುತೇರ್ತೇ ಅವರ ಸಮಗ್ರ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟದ ಬದ್ಧತೆಯನ್ನು ಶ್ಲಾಘಿಸುತ್ತೇನೆ. ಈ ಎರಡೂ ದೇಶಗಳು ಒಗ್ಗೂಡಿ ಶ್ರಮಿಸಬಹುದಾದ ಕ್ಷೇತ್ರಗಳಾಗಿವೆ. ಸಾರ್ವತ್ರಿಕ ಗುರುತಿನ ಚೀಟಿ, ಹಣಪೂರಣ, ಎಲ್ಲರಿಗೂ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸುವುದು, ನೇರ ಸವಲತ್ತು ವರ್ಗಾವಣೆ ಮತ್ತು ನಗದು ರಹಿತ ವಹಿವಾಟು ಉತ್ತೇಜನದಲ್ಲಿ ಪಿಲಿಪ್ಪೀನ್ಸ್ ನೊಂದಿಗೆ ನಾವು ನಮ್ಮ ಅನುಭವವನ್ನು ಹಂಚಿಕೊಳ್ಳಲು ಹರ್ಷಿಸುತ್ತೇವೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಔಷಧ ದೊರಕುವಂತೆ ಮಾಡುವುದು ಪಿಲಿಪ್ಪೀನ್ಸ್ ಸರ್ಕಾರದ ಮತ್ತೊಂದು ಆದ್ಯತೆಯ ಕ್ಷೇತ್ರವಾಗಿದ್ದು, ಇದಕ್ಕೆ ನಾವು ಕೊಡುಗೆ ನೀಡಲು ಸಿದ್ಧರಿದ್ದೇವೆ. ನಾವು ಸಮಾನ ಸವಾಲುಗಳನ್ನು ಎದುರಿಸಲು ಪಿಲಿಪ್ಪೀನ್ಸ್ ನೊಂದಿಗೆ ಸಹಕಾರ ಹೆಚ್ಚಿಸುತ್ತಿದ್ದೇವೆ.

ಮಲೇಷಿಯಾ

ಭಾರತ ಮತ್ತು ಮಲೇಷಿಯಾ ನಡುವಿನ ನಮ್ಮ ಸಮಕಾಲೀನ ಬಾಂಧವ್ಯ ಸಾಕಷ್ಟು ವ್ಯಾಪಕವಾಗಿದ್ದು, ಅನೇಕ ಪ್ರದೇಶಗಳಲ್ಲಿ ಹರಡಿವೆ ಮಲೇಷಿಯಾ ಮತ್ತು ಭಾರತ ವ್ಯೂಹಾತ್ಮಕ ಪಾಲುದಾರಿಕೆ ಹಂಚಿಕೊಂಡಿದ್ದು, ನಾವು ಹಲವು ಬಹುಪಕ್ಷೀಯ ಮತ್ತು ಪ್ರಾದೇಶಿಕ ವೇದಿಕೆಗಳಲ್ಲಿ ಸಹಕಾರ ನೀಡುತ್ತಿದ್ದೇವೆ. ಮಲೇಷಿಯಾದ ಪ್ರಧಾನಮಂತ್ರಿಯವರ 2017ರ ಅಧಿಕೃತ ಭಾರತ ಪ್ರವಾಸ ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ದೀರ್ಘಕಾಲೀನ ಪ್ರಭಾವ ಬೀರಿದೆ.

ಮಲೇಷಿಯಾವು ಆಸಿಯಾನ್ ನಲ್ಲಿ ಭಾರತದ ಮೂರನೇ ಅತಿದೊಡ್ಡ ವಾಣಿಜ್ಯ ಪಾಲುದಾರನಾಗಿ ಹೊರಹೊಮ್ಮಿದೆ ಮತ್ತು ಆಸಿಯಾನಿಂದ ಭಾರತದಲ್ಲಿ ಹೂಡಿಕೆ ಮಾಡುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಭಾರತ ಮತ್ತು ಮಲೇಷಿಯಾ ನಡುವಿನ ದ್ವಿಪಕ್ಷೀಯ ವಾಣಿಜ್ಯ ಕಲೆದ 10 ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಾಗಿದೆ. ಭಾರತ ಮತ್ತು ಮಲೇಷಿಯಾ ಎರಡೂ ದ್ವಿಪಕ್ಷೀಯ ಸಮಗ್ರ ಆರ್ಥಿಕ ಸಹಕಾರ ಒಪ್ಪಂದವನ್ನು 2011ರಿಂದ ಹೊಂದಿವೆ. ಎರಡೂ ಕಡೆಯವರು ಸರಕು ವ್ಯಾಪಾರದಲ್ಲಿ ಆಸಿಯಾನ್ ಪ್ಲಸ್ ಬದ್ಧತೆಗಳನ್ನು ಒದಗಿಸಿವೆ ಮತ್ತು ಸೇವೆಗಳ ವ್ಯಾಪಾರದಲ್ಲಿ ಡಬ್ಲುಟಿಓ ಪ್ಲಸ್ ಕೊಡುಗೆಗಳನ್ನು ವಿನಿಮಯ ಮಾಡಿಕೊಂಡಿದ್ದು ಈ ಒಪ್ಪಂದವು ವಿಶಿಷ್ಟವಾಗಿದೆ. 2012ರ ಮೇ ತಿಂಗಳಲ್ಲಿ ಎರಡೂ ರಾಷ್ಟ್ರಗಳ ನಡುವೆ ಅಂಕಿತ ಹಾಕಲಾದ ಪರಿಷ್ಕೃತ ದ್ವಿ ತೆರಿಗೆ ತಪ್ಪಿಸುವ ಒಪ್ಪಂದ ಮತ್ತು 2013ರಲ್ಲಿ ಸಹಿ ಹಾಕಲಾದ ಕಸ್ಟಮ್ಸ್ ಸಹಕಾರ ಕುರಿತ ಎಂ.ಓ.ಯು ನಮ್ಮ ವಾಣಿಜ್ಯ ಮತ್ತು ಹೂಡಿಕೆ ಸಹಕಾರವನ್ನು ಮತ್ತಷ್ಟು ಹೆಚ್ಚಿಸಿವೆ.

ಬ್ರೂನಿ

ಭಾರತ ಮತ್ತು ಬ್ರೂನಿ ನಡುವಿನ ದ್ವಿಪಕ್ಷೀಯ ವ್ಯಾಪಾರ ಕಳೆದ ಒಂದು ದಶಕದಲ್ಲಿ ಎರಡು ಪಟ್ಟಿಗಿಂತ ಅಧಿಕವಾಗಿದೆ. ಭಾರತ ಮತ್ತು ಬ್ರೂನಿ ವಿಶ್ವಸಂಸ್ಥೆ, ನಾಮ್, ಕಾಮನ್ ವೆಲ್ತ್, ಎ.ಆರ್.ಎಫ್. ಇತ್ಯಾದಿಗಲ್ಲಿ ಸಮಾನ ಸದಸ್ಯತ್ವ ಹೊಂದಿವೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಾಗಿ, ಬಲವಾದ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಬಾಂಧವ್ಯ ಹೊಂದಿವೆ, ಬ್ರೂನಿ ಮತ್ತು ಭಾರತ ಹಲವು ಅಂತಾರಾಷ್ಟ್ರೀಯ ವಿಷಯಗಳಲ್ಲಿನ ಭಾಗವಹಿಸುವಿಕೆಯಲ್ಲಿ ನ್ಯಾಯಸಮ್ಮತ ಸಮಾನತೆಯನ್ನು ಅನುಭವಿಸುತ್ತಿವೆ. ಮೇ 2008ರಲ್ಲಿ ಬ್ರೂನಿ ಸುಲ್ತಾನರ ಭಾರತ ಭೇಟಿ ಭಾರತ – ಬ್ರೂನಿ ಬಾಂಧವ್ಯದಲ್ಲಿ ಒಂದು ಮೈಲಿಗಲ್ಲಾಗಿದೆ. ಭಾರತದ ಉಪರಾಷ್ಟ್ರಪತಿಯವರು 2016ರ ಫೆಬ್ರವರಿಯಲ್ಲಿ ಬ್ರೂನಿಗೆ ಬೇಟಿ ನೀಡಿದ್ದರು.

ಲಾವೋ ಪಿಡಿಆರ್

ಭಾರತ ಮತ್ತು ಲಾವೋ ಪಿಡಿಆರ್ ನಡುವಿನ ಬಾಂಧವ್ಯ ವ್ಯಾಪಕವಾಗಿ ಹಲವು ಕ್ಷೇತ್ರಗಳಲ್ಲಿ ಹಬ್ಬಿವೆ. ಭಾರತ ವಾಸ್ತವವಾಗಿ ಲಾವೋ ಪಿಡಿಆರ್ ನಲ್ಲಿ ವಿದ್ಯುತ್ ಪ್ರಸರಣ ಮತ್ತು ಕೃಷಿ ವಲಯದಲ್ಲಿ ತೊಡಗಿಕೊಂಡಿದೆ. ಇಂದು ಭಾರತ ಮತ್ತು ಲಾವೋ ಪಿಡಿಆರ್ ಸಹಕಾರ ಬಹುಪಕ್ಷೀಯ ಮತ್ತು ಪ್ರಾದೇಶಿಕ ವೇದಿಕೆಗಳಲ್ಲಿವೆ.

ಆದಾಗ್ಯೂ, ಭಾರತ ಮತ್ತು ಲಾವೋ ಪಿಡಿಆರ್ ನಡುವಿನ ವಾಣಿಜ್ಯ ಸಾಮರ್ಥ್ಯಕ್ಕಿಂತ ಕಡಿಮೆಯೇ ಇದೆ. ಭಾರತವು ಲಾವೋ ಪಿಡಿಆರ್ ಗೆ ಡ್ಯೂಟಿ ಮುಕ್ತ ಸಾರಿಗೆಯ ಆದ್ಯತೆಯ ಯೋಜನೆಯನ್ನು ಒದಗಿಸಿದ್ದು, ಲಾವೋ ಪಿಡಿಆರ್ ನಿಂದ ಭಾರತಕ್ಕೆ ಸರಕುಗಳ ರಫ್ತಿಗೆ ಉತ್ತೇಜನ ನೀಡಿದೆ. ಲಾವೋ ಪಿಡಿಆರ್ ನ ಆರ್ಥಿಕತೆಯನ್ನು ನಿರ್ಮಿಸುವ ಸೇವಾ ವ್ಯಾಪಾರದಲ್ಲಿ ನಮಗೆ ಹೇರಳ ಅವಕಾಶಗಳಿವೆ. ಆಸಿಯಾನ್ ಭಾರತ ಸೇವೆಗಳು ಮತ್ತು ಹೂಡಿಕೆ ಒಪ್ಪಂದ ನಮ್ಮ ಸೇವಾ ವಾಣಿಜ್ಯಕ್ಕೆ ಅವಕಾಶ ನೀಡುತ್ತದೆ.

ಇಂಡೋ ನೇಷಿಯಾ

ಹಿಂದೂ ಮಹಾ ಸಾಗರದಲ್ಲಿ 90 ನಾವಿಕ ಮೈಲಿಗಳಿಂದ ಪ್ರತ್ಯೇಕವಾಗಿರುವ ಭಾರತ ಮತ್ತು ಇಂಡೋನೇಷಿಯಾ ಎರಡು ಸಹಸ್ರಮಾನಗಳಿಂದ ನಾಗರಿಕತೆಯ ಬಾಂಧವ್ಯದ ನಿರಂತರತೆಯನ್ನು ಹಂಚಿಕೊಂಡಿವೆ.

ಅದು ಒಡಿಶಾದಲ್ಲಿ ಆಚರಿಸಲಾಗುವ ವಾರ್ಷಿಕ ಬಲಿಜಾತ್ರೆಯಾಗಲೀ ಅಥವಾ ಮಹಾಭಾರತ ಮತ್ತು ರಾಮಾಯಣದ ಕಥೆಯೇ ಆಗಲಿ, ಇದನ್ನು ನಾವು ಇಡೀ ಇಂಡೋನೇಷಿಯಾ ಭೂ ರಮೆಯಲ್ಲಿ ಕಾಣಬಹುದಾಗಿದೆ. ಈ ವಿಶಿಷ್ಟವಾದ ಸಾಂಸ್ಕೃತಿಕ ಎಳೆಗಳು ಹೊಂಬಣ್ಣದಿಂದ ವಿಶೇಷ ನೆರೆಹೊರೆಯ ಏಷ್ಯಾದ ಎರಡು ದೊಡ್ಡ ಪ್ರಜಾಪ್ರಭುತ್ವಗಳ ಜನರನ್ನು ಬಂಧಿಸುತ್ತವೆ.

ವಿವಿಧತೆಯಲ್ಲಿ ಏಕತೆ ಅಥವಾ ಬಿನ್ನೇಕ ತುಂಗಲ್ ಇಕಾ ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಗಳ ಸಾಮಾನ್ಯ ಮೌಲ್ಯಗಳೆರಡನ್ನೂ ಹಂಚಿಕೊಂಡಿರುವ ಹಂಚಿಕೆಯ ಸಾಮಾಜಿಕ ಮೌಲ್ಯದ ರಚನೆಗಳ ಒಂದು ಪ್ರಮುಖ ಅಂಶವೂ ಸಹ ಆಗಿದೆ. ಇಂದು ವ್ಯೂಹಾತ್ಮಕ ಪಾಲುದಾರರಾಗಿ, ನಮ್ಮ ಸಹಕಾರ ರಾಜಕೀಯ, ಆರ್ಥಿಕ, ರಕ್ಷಣೆ ಮತ್ತು ಭದ್ರತೆ, ಸಾಂಸ್ಕೃತಿಕ ಮತ್ತು ಜನರೊಂದಿಗಿನ ಕ್ಷೇತ್ರಗಳಲ್ಲಿ ವ್ಯಾಪಿಸಿವೆ. ಇಂಡೋನೇಷಿಯಾ ಆಸಿಯಾನ್ ನಲ್ಲಿ ನಮ್ಮ ದೊಡ್ಡ ವಾಣಿಜ್ಯ ಪಾಲುದಾರನಾಗಿ ಮುಂದುವರಿದಿದೆ. ಭಾರತ ಮತ್ತು ಇಂಡೋನೇಷಿಯಾ ನಡುವಿನ ದ್ವಿಪಕ್ಷೀಯ ವಾಣಿಜ್ಯ ಕಳೆದ 10 ವರ್ಷಗಳಲ್ಲಿ 2.5ಪಟ್ಟು ಹೆಚ್ಚಳವಾಗಿದೆ. ಅಧ್ಯಕ್ಷ ಜೋಕೋ ವಿಡೋಡೋ ಅವರ 2016ರ ಭಾರತ ಭೇಟಿ ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ದೀರ್ಘಕಾಲೀನ ಪರಿಣಾಮ ಬೀರಿದೆ.

ಕಾಂಬೋಡಿಯಾ

ಭಾರತ ಮತ್ತು ಕಾಂಬೋಡಿಯಾ ನಡುವಿನ ಸಾಂಪ್ರದಾಯಿಕ ಮತ್ತು ಸ್ನೇಹ ಸಂಬಂಧಗಳು ನಮ್ಮ ನಾಗರಿಕತೆಯ ಬೇರುಗಳಲ್ಲಿ ಆಳವಾಗಿವೆ. ಆಂಗ್ಕೋರ್ ವಾಟ್ ದೇವಾಲಯದ ಅದ್ಭುತ ವಾಸ್ತು ವಿನ್ಯಾಸ, ನಮ್ಮ ಪುರಾತನ ಐತಿಹಾಸಿಕ ಧಾರ್ಮಿ ಮತ್ತು ಸಾಂಸ್ಕೃತಿಕ ನಂಟಿಗೆ ದೊಡ್ಡ ಸಂಕೇತವಾಗಿದೆ. ಭಾರತವು 1986-1993ರ ಕ್ಲಿಷ್ಟಕರ ಅವಧಿಯಲ್ಲೂ ಈ ದೇವಾಲಯ ಸಂರಕ್ಷಣೆ ಮತ್ತು ಜೀರ್ಣೋದ್ಧಾರದ ಕಾರ್ಯ ಕೈಗೊಂಡಿದ್ದಕ್ಕೆ ಹೆಮ್ಮೆಪಡುತ್ತದೆ. ಭಾರತವು ಈಗ ನಡೆಯುತ್ತಿರುವ ತಾ ಪ್ರೋಹಮ್ ದೇವಾಲಯದ ಜೀರ್ಣೋದ್ಧಾರ ಕಾರ್ಯದಲ್ಲಿ ಈ ಅಮೂಲ್ಯ ಬಂಧವನ್ನು ಮುಂದುವರಿಸಿದೆ.

ಖಮೇರ್ ರೂಜ್ ಆಡಳಿತದ ಪತನದ ನಂತರ 1981 ರಲ್ಲಿ ಹೊಸ ಸರಕಾರವನ್ನು ಪರಿಗಣಿಸಿದ ಮೊದಲ ದೇಶ ಭಾರತವಾಗಿತ್ತು. ಭಾರತವು ಪ್ಯಾರಿಸ್ ಶಾಂತಿ ಒಪ್ಪಂದ ಮತ್ತು 1991ರಲ್ಲಿ ಅದನ್ನು ಆಖೈರುಗೊಳಿಸುವುದರಲ್ಲೂ ಭಾರತ ಭಾಗಿಯಾಗಿತ್ತು. ಈ ಸಾಂಪ್ರದಾಯಿಕ ನಂಟು, ಸ್ನೇಹ ಉನ್ನತ ಮಟ್ಟದ ಭೇಟಿಯಲ್ಲಿನ ನಿರಂತರ ವಿನಿಮಯದ ಮೂಲಕ ಬಲಗೊಂಡಿದೆ. ನಾವು ನಮ್ಮ ಸಹಕಾರವನ್ನು ವಿವಿಧ ಕ್ಷೇತ್ರಗಳಿಗೆ ಅಂದರೆ ಸಾಂಸ್ಥಿಕ ಸಾಮರ್ಥ್ಯ ವರ್ಧನೆ, ಮಾನವ ಸಂಪನ್ಮೂಲ ಅಭಿವೃದ್ಧಿ, ಅಭಿವೃದ್ಧಿ ಮತ್ತು ಸಾಮಾಜಿಕ ಯೋಜನೆಗಳು, ಸಾಂಸ್ಕೃತಿಕ ವಿನಿಮಯ, ರಕ್ಷಣಾ ಸಹಕಾ, ಪ್ರವಾಸೋದ್ಯಮ ಮತ್ತು ಜನರೊಂದಿಗಿನ ಸಂಪರ್ಕ ವಿಸ್ತರಿಸಿದ್ದೇವೆ.

ಆಸಿಯಾನ್ ವಿಚಾರದಲ್ಲಿ ಮತ್ತು ವಿವಿಧ ಜಾಗತಿಕ ವೇದಿಕೆಗಳಲ್ಲಿ ಕಾಂಬೋಡಿಯಾ ಭಾರತಕ್ಕೆಬೆಂಬಲದ ಪಾಲುದಾರ ಮತ್ತು ಮಹತ್ವದ ಸಂವಾದಕವಾಗಿದೆ. ಭಾರತವು ಕಾಂಬೋಡಿಯಾದ ಆರ್ಥಿಕ ಅಭಿವೃದ್ಧಿಯ ಪಾಲುದಾರನಾಗಿ ಮುಂದುವರಿಯಲು ಭಾರತ ಬದ್ಧವಾಗಿದೆ ಮತ್ತು ಅದರ ಸಾಂಪ್ರದಾಯಿಕ ಬಾಂಧವ್ಯವನ್ನು ಮತ್ತಷ್ಟು ಆಳಗೊಳಿಸಲು ಎದಿರು ನೋಡುತ್ತಿದೆ.

ಭಾರತ ಮತ್ತು ಆಸಿಯಾನ್ ಇನ್ನೂ ಹೆಚ್ಚಿನದನ್ನು ಮಾಡುತ್ತಿವೆ. ಆಸಿಯಾನ್ ನೇತೃತ್ವದ ಸಂಸ್ಥೆಗಳಾದ ಪೂರ್ವ ಏಷ್ಯಾ ಶೃಂಗ, ಎಡಿಎಂಎಂ ಪ್ಲಸ್ (ಆಸಿಯಾನ್ ರಕ್ಷಣಾ ಸಚಿವರುಗಳ ಮಟ್ಟದ ಸಭೆ ಪ್ಲಸ್) ಮತ್ತು ಎ.ಆರ್.ಎಫ್. (ಆಸಿಯಾನ್ ಪ್ರಾದೇಶಿಕ ವೇದಿಕೆ)ಗಳಲ್ಲಿನ ನಮ್ಮ ಪಾಲುದಾರಿಕೆ ವಲಯದಲ್ಲಿ ಶಾಂತಿ ಮತ್ತು ಸ್ಥಿರತೆ ಮುಂದುವರಿಸಿವೆ. ಭಾರತ ಸಹ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಲ್ಲಿ ಉತ್ಸಾಹಿ ಪಾಲುದಾರನಾಗಿದ್ದು, ಸಮಗ್ರ, ಸಮತೋಲಿತ ಮತ್ತು ನ್ಯಾಯಸಮ್ಮತ ಒಪ್ಪಂದವನ್ನು ಎಲ್ಲ 16 ಸಹಭಾಕಿ ರಾಷ್ಟ್ರಗಳೊಂದಿಗೆ ಸಹಕರಿಸುತ್ತದೆ.

ಪಾಲುದಾರಿಕೆಯ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತ್ವವು ಸಂಖ್ಯೆಗಳ ಲೆಕ್ಕಾಚಾರದಿಂದ ಮಾತ್ರವಲ್ಲ, ಸಂಬಂಧದ ಆಧಾರದ ಮೇಲೆ ಕೂಡಾ ಬರುತ್ತದೆ. ಭಾರತ ಮತ್ತು ಆಸಿಯಾನ್ ರಾಷ್ಟ್ರಗಳು ಸ್ಪರ್ಧೆ ಮತ್ತು ಹಕ್ಕು ಮುಕ್ತ ಬಾಂಧವ್ಯ ಹೊಂದಿವೆ. ನಾವು ಸೇರ್ಪಡೆ ಮತ್ತು ಸಮನ್ವಯಕ್ಕೆ ಬದ್ಧವಾದ, ಎಲ್ಲಾ ರಾಷ್ಟ್ರಗಳ ಸಾರ್ವಭೌಮ ಸಮಾನತೆಯ ನಂಬಿಕೆ, ಗಾತ್ರ, ಮತ್ತು ಮುಕ್ತ ಮತ್ತು ಮುಕ್ತ ಮಾರ್ಗಗಳ ವಾಣಿಜ್ಯ ಮತ್ತು ಕಾರ್ಯಕ್ರಮದ ಬೆಂಬಲದ ಮೇಲೆ .ಭವಿಷ್ಯಕ್ಕೆ ಸಮಾನ ಮುನ್ನೋಟವನ್ನು ಹೊಂದಿದ್ದೇವೆ.

ಆಸಿಯಾನ್ – ಭಾರತ ಪಾಲುದಾರಿಕೆ ನಿರಂತವಾಗಿ ಬೆಳೆಯುತ್ತಿದೆ. ಜನಸಂಖ್ಯೆ, ಚೈತನ್ಯ ಮತ್ತು ಬೇಡಿಕೆಯ ಕೊಡುಗೆಯೊಂದಿಗೆ – ತ್ವರಿತವಾಗಿ ಪ್ರೌಢವಾಗುತ್ತಿರುವ ಆರ್ಥಿಕತೆ ಯೊಂದಿಗೆ ಭಾರತ ಮತ್ತು ಆಸಿಯಾನ್ ಬಲಿಷ್ಠವಾದ ಆರ್ಥಿಕ ಪಾಲುದಾರಿಕೆಯನ್ನು ನಿರ್ಮಿಸುತ್ತಿವೆ.  ಸಂಪರ್ಕ ಹೆಚ್ಚುತ್ತಿದ್ದು, ವಾಣಿಜ್ಯ ವಿಸ್ತಾರವಾಗುತ್ತಿದೆ. ಭಾರತದಲ್ಲಿ ಸಹಕಾರ ಮತ್ತು ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಯುಗದಲ್ಲಿ, ನಮ್ಮ ರಾಜ್ಯಗಳು ಆಗ್ನೇಯ ಏಷ್ಯಾದ ರಾಷ್ಟ್ರಗಳೊಂದಿಗೆ ಫಲಪ್ರದ ಸಹಕಾರವನ್ನು ನಿರ್ಮಿಸುತ್ತಿವೆ. ಭಾರತದ ಈಶಾನ್ಯವು ಪುನರುಜ್ಜೀವನದ ಮಾರ್ಗವಾಗಿದೆ. ಆಗ್ನೇಯ ಏಷ್ಯಾದೊಂದಿಗಿನ ನಂಟು ಅದರ ಪ್ರಗತಿಯನ್ನು ವೇಗಗೊಳಿಸುತ್ತಿದೆ. ಇದಕ್ಕೆ ಪ್ರತಿಯಾಗಿ, ಅದಕ್ಕೆ ಹೊಂದಿಕೊಂಡ ಈಶಾನ್ಯ ಭಾರತ-ಆಸಿಯಾನ್ ನಡುವಿನ ನಮ್ಮ ಕನಸಿನ ಬಾಂಧವ್ಯದ ಸೇತುವೆಯಾಗಿದೆ.

ಪ್ರಧಾನಮಂತ್ರಿಯಾಗಿ ನಾನು, ನಾಲ್ಕು ಆಸಿಯಾನ್ – ಭಾರತ ಶೃಂಗಸಭೆ ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಲ್ಲಿ ಭಾಗವಹಿಸಿದ್ದೇನೆ. ಇವು ಆಸಿಯಾನ್ ಏಕತೆ, ಕೇಂದ್ರೀಕರಣ ಮತ್ತು ವಲಯದಲ್ಲಿ ಈ ನೋಟವನ್ನು ರೂಪಿಸುವ ನಾಯಕತ್ವದ ಬಗ್ಗೆ ನನ್ನ ನಿಶ್ಚಯವನ್ನು ಪುನಶ್ಚೇತನಗೊಳಿಸಿವೆ. ಈ ವರ್ಷ ಮೈಲಿಗಲ್ಲಿನ ವರ್ಷವಾಗಿದೆ. ಭಾರತಕ್ಕೆ ಕಳೆದ ವರ್ಷ 70 ತುಂಬಿದೆ. ಆಸಿಯಾನ್ 50 ವರ್ಷಗಳ ಸುವರ್ಣ ಮೈಲಿಗಲ್ಲು ದಾಟಿದೆ. ನಾವು ಪರಸ್ಪರ ನಮ್ಮ ಭವಿಷ್ಯದತ್ತ ಆಶಾಭಾವನೆಯೊಂದಿಗೆ ಮತ್ತು ವಿಶ್ವಾಸಪೂರ್ಣವಾದ ನಮ್ಮ ಪಾಲುದಾರಿಕೆಯೊಂದಿಗೆ ನೋಡಬಹುದಾಗಿದೆ.

70 ನೇ ವಯಸ್ಸಿನಲ್ಲಿ, ಭಾರತವು ತನ್ನ ಯುವ ಜನರ ಸ್ಫೂರ್ತಿ, ಉದ್ಯಮಶೀಲತೆ ಮತ್ತು ಚೈತನ್ಯವನ್ನು ಹೊರಹಾಕುತ್ತದೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ರಾಷ್ಟ್ರವಾಗಿ, ಜಾಗತಿಕ ಆರ್ಥಿಕತೆಗಳ ಹೊಸ ಎಲ್ಲೆ ಮತ್ತು ಜಾಗತಿಕ ಆರ್ಥಿಕತೆಯ ಸ್ಥಿರತೆಗೆ ಆಧಾರವಾಗಿದೆ. ಕಳೆದ ಪ್ರತಿ ದಿನದಲ್ಲಿ, ಭಾರತದಲ್ಲಿ ವ್ಯಾಪಾರ ಮಾಡುವುದು ಸುಲಭ ಮತ್ತು ಸುಗಮವಾಗಿದೆ. ಸ್ನೇಹಿತರು ಮತ್ತು ನಮ್ಮ ನೆರೆಹೊರೆಯವರು ಮತ್ತು ಆಸಿಯಾನ್ ರಾಷ್ಟ್ರಗಳು ನವ ಭಾರತದ ರೂಪಾಂತರದ ಅವಿಭಾಜ್ಯ ಭಾಗವೆಂದು ನಾನು ಭಾವಿಸುತ್ತೇನೆ.

ನಾವು ಆಸಿಯಾನ್ ನ ಸ್ವಂತ ಪ್ರಗತಿಯನ್ನು ಮೆಚ್ಚುತ್ತೇವೆ. ಆಗ್ನೇಯ ಏಷ್ಯಾವು ಜನ್ಮ ತಳೆದಾಗ ಕ್ರೂರ ಯುದ್ಧದ ಒಂದು ರಂಗ ಮತ್ತು ಅನಿಶ್ಚಿತ ರಾಷ್ಟ್ರಗಳ ಒಂದು ಪ್ರದೇಶವಾಗಿತ್ತು, ಆಸಿಯಾನ್  10 ರಾಷ್ಟ್ರಗಳನ್ನು ಒಂದು ಸಾಮಾನ್ಯ ಉದ್ದೇಶ ಮತ್ತು ಒಂದು ಹಂಚಿಕೆಯ ಭವಿಷ್ಯದಲ್ಲಿ ಏಕೀಕರಿಸಿದೆ. ಮೂಲಸೌಕರ್ಯ ಮತ್ತು ನಗರೀಕರಣದಿಂದ ಹಿಡಿದು ಚೇತರಿಸಿಕೊಳ್ಳುವ ಕೃಷಿ ಮತ್ತು ಆರೋಗ್ಯಕರ ಗ್ರಹದವರೆಗೆ ಹೆಚ್ಚಿನ ಮಹತ್ವಾಕಾಂಕ್ಷೆಗಳನ್ನು ಮುಂದುವರಿಸಲು ಮತ್ತು ನಮ್ಮ ಸಮಯದ ಸವಾಲುಗಳನ್ನು ಪರಿಹರಿಸುವ ಸಾಮರ್ಥ್ಯ ನಮಗೆ ಇದೆ. ಅಭೂತಪೂರ್ವ ವೇಗ ಮತ್ತು ಗಾತ್ರದಲ್ಲಿ ಬದುಕನ್ನು ಪರಿವರ್ತಿಸಲು ನಾವು ಡಿಜಿಟಲ್ ತಂತ್ರಜ್ಞಾನ, ನಾವಿನ್ಯತೆ ಮತ್ತು ಸಂಪರ್ಕದ ಶಕ್ತಿಯನ್ನು ಬಳಸಬಹುದಾಗಿದೆ.

ಭವಿಷ್ಯದ ಭರವಸೆಗೆ ಶಾಂತಿಯ ಹೆಬ್ಬಂಡೆಯ ಅಗತ್ಯವಿದೆ. ಇದು ಬದಲಾವಣೆಯ ಯುಗ. ಅಡೆತಡೆಗಳು ಮತ್ತು ಬದಲಾವಣೆಗಳು ಇತಿಹಾಸದಲ್ಲಿ ಅಪರೂಪಕ್ಕೆ ಬರುತ್ತವೆ. ಆಸಿಯಾನ್ ಮತ್ತು ಭಾರತಕ್ಕೆ ಅಪಾರ ಅವಕಾಶಗಳಿವೆ – ಜೊತೆಗೆ ಸಾಕಷ್ಟು ಜವಾಬ್ದಾರಿಯೂ ಇದೆ – ನಮ್ಮ ಸಮಯದ ಅನಿಶ್ಚಿತತೆ ಮತ್ತು ಪ್ರಕ್ಷುಬ್ಧತೆಯು ನಮ್ಮ ಪ್ರದೇಶ ಮತ್ತು ಪ್ರಪಂಚಕ್ಕೆ ಸ್ಥಿರ ಮತ್ತು ಶಾಂತಿಯುತ ಭವಿಷ್ಯದ ಮೂಲಕ ಸ್ಥಿರತೆಯನ್ನು ಒದಗಿಸುತ್ತದೆ.

ಭಾರತೀಯರು ಸದಾ ಉದಯಿಸುವ ಸೂರ್ಯ ಮತ್ತು ಅವಕಾಶದ ಬೆಳಕು ನೋಡಲು ಪೂರ್ವದತ್ತ ಮುಖ ಮಾಡುತ್ತಾರೆ. ಈಗ, ಹಿಂದಿನಂತೆ, ಪೂರ್ವ ಮತ್ತು ಭಾರತ ಪೆಸಿಫಿಕ್ ವಲಯ, ಭಾರತದ ಭವಿಷ್ಯಕ್ಕೆ ಮತ್ತು ನಮ್ಮ ಸಮಾನ ಡೆಸ್ಟಿನಿಗೆ ಅನಿವಾರ್ಯವಾಗಿದೆ. ಆಸಿಯಾನ್ ಭಾರತ ಪಾಲುದಾರಿಕೆ ವಿವರಣಾತ್ಮಕ ಪಾತ್ರ ನಿರ್ವಹಿಸುತ್ತದೆ. ದೆಹಲಿಯಲ್ಲಿ ಆಸಿಯಾನ್ ಮತ್ತು ಭಾರತ ಮುಂದಿನ ಪಯಣದ ಸಂಕಲ್ಪ ನವೀಕರಿಸಿದೆ.

ಆಸಿಯಾನ್ ದಿನ ಪತ್ರಿಕೆಗಳ ಸಂಪಾದಕೀಯ ಪುಟದ ಪಕ್ಕದ ಪುಟದಲ್ಲಿ ಪ್ರಕಟವಾದ ಪ್ರಧಾನಮಂತ್ರಿಯವರ ಲೇಖನದ ಪಠ್ಯವನ್ನು ಈ ಲಿಂಕ್ ಮೂಲಕ ನೋಡಬಹುದು:

https://www.bangkokpost.com/opinion/opinion/1402226/asean-india-shared-values-and-a-common-destiny

 

https://vietnamnews.vn/opinion/421836/asean-india-shared-values-common-destiny.html#31stC7owkGF6dvfw.97

 

https://www.businesstimes.com.sg/opinion/asean-india-shared-values-common-destiny

 

https://www.globalnewlightofmyanmar.com/asean-india-shared-values-common-destiny/

 

https://www.thejakartapost.com/news/2018/01/26/69th-republic-day-india-asean-india-shared-values-common-destiny.html

 

https://www.mizzima.com/news-opinion/asean-india-shared-values-common-destiny

 

https://www.straitstimes.com/opinion/shared-values-common-destiny

 

https://news.mb.com.ph/2018/01/26/asean-india-shared-values-common-destiny/

Explore More
ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಜನಪ್ರಿಯ ಭಾಷಣಗಳು

ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ
IIT Delhi tops India in QS Rankings 2027; 52 Indian institutions feature

Media Coverage

IIT Delhi tops India in QS Rankings 2027; 52 Indian institutions feature
NM on the go

Nm on the go

Always be the first to hear from the PM. Get the App Now!
...
Text of Prime Minister addresses the Indian Community in Paris
June 18, 2026

नमस्ते!

बों जू!

ऐसा लग रहा है, आप सब छुट्टी के मूड में हैं।

साथियों,

ये पेरिस शहर, Lights का शहर है, रंगों का शहर है, यहां Art है, Ideas हैं, और innovation की प्रेरणा भी है। इस शहर को भारत के अलग-अलग राज्यों से आए आप सभी लोग और भी खूबसूरत बना देते हैं। नए नए रंगों से भर देते हैं।

कोई तमिल है, कोई पंजाबी है, कोई गुजराती है, तो कोई मराठी है, और कोई बंगाली है। भारत के हर कोने का प्रतिनिधित्व यहां दिखाई देता है।

साथियों,

मैं जब 14 जून को नीस पहुंचा था तो सबसे पहले भारत इनोवेट्स कार्यक्रम में शामिल हुआ था। आज जब मैं फ्रांस से वापसी की तैयारी में हूं तो लग रहा है जैसे भारत कनेक्ट्स कार्यक्रम में आ गया हूं।

फ्रांस में रहने वाले आप लोगों ने 21वीं सदी के भारत-फ्रांस रिश्तों को जिस तरह कनेक्ट किया है, वो हमारी Strategic Partnership की बहुत बड़ी ताकत बन रही है। मैं आप सभी के लिए भारत से 140 करोड़ देशवासियों की शुभकामनाएं लेकर आया हूं। इस आत्मीय स्वागत के लिए, मैं आप सभी का हृदय से आभार व्यक्त करता हूं।

साथियों,

आज मैं ऐसे समय में फ्रांस आया हूं जब कुछ ही दिन पहले हमारी सरकार के 12 वर्ष पूरे हुए हैं। चुने हुए प्रधानमंत्री के रूप निरंतर 12 साल तक देश की सेवा करना मेरे जीवन का बहुत बड़ा सौभाग्य रहा है। यह भारत के लोकतंत्र की शक्ति है जिसने एक चायवाले को यहां तक पहुंचा दिया।

साथियों,

बीते 12 वर्ष, 140 करोड़ भारतीयों के अद्भुत सामर्थ्य के रहे हैं। 12 साल के इस कालखंड में भारत का GDP दोगुना हुआ है। Airports की संख्या दोगुनी हुई है। Universities की संख्या भी दोगुनी हो गई है। Highway Construction की स्पीड तीन गुना बढ़ गई। और Metro Network, चार गुणा बड़ा हो गया है।

मैं आपको कुछ और फैक्ट्स दूंगा, उससे आप अंदाजा लगा पाएंगे कि भारत किस स्पीड और कितने बड़े स्केल पर काम कर रहा है। पिछले 12 वर्षों में भारत का Defence Export 35 गुणा यानि Thirty Five Times बढ़ गया है।

औऱ एक फैक्ट सुनिए भारत में मोबाइल मैन्यूफैक्टरिंग यूनिट्स में, 100 गुणा की बढ़ोतरी हुई है। 100 times. भारत अब दुनिया का दूसरा सबसे बड़ा mobile phone manufacturer है। इसी गति, इसी प्रगति का नतीजा है कि आज भारत दुनिया की Fastest Growing Major Economy है।

साथियों,

आज भारत की कहानी सिर्फ Economic Progress की कहानी नहीं है। सिर्फ यहाँ अटक नहीं जाती है। ये Social Transformation की भी कहानी है।

पिछले 12 साल में देश में 25 करोड़ लोग गरीबी से बाहर निकले हैं। यानि एक ऐसी प्रगति जिसका लाभ समाज के अंतिम व्यक्ति तक पहुंच रहा है। फ्रांस में जितने घर हैं, उससे भी अधिक पक्के घर बीते 12 वर्ष में हमने जरूरतमंदों के लिए बनाए हैं।

अब हर परिवार के पास, गरीब से गरीब क्यों न हो, Bank Account है। Financial Inclusion एक सरकारी कार्यक्रम नहीं, बल्कि सामाजिक परिवर्तन का अभियान बना है।

साथियों,

इन 12 वर्षों की उपलब्धियों में, एक उपलब्धि ऐसी भी है जिसे किसी आंकड़े से, या अंकों से, नहीं मापा जा सकता। वह है 140 करोड़ भारतीयों का आत्मविश्वास।

आज का भारत और आज के भारत का युवा बहुत बड़े सपने देख रहा है। भारत का किसान नई संभावनाओं के साथ आगे बढ़ रहा है। भारत की महिलाएं नए नेतृत्व का परिचय दे रही हैं। इसलिए ये सिर्फ Achievements के 12 साल नहीं हैं, ये भारत की एस्पिरेशन्स को नई बुलंदी देने का कालखंड रहा है।

साथियों,

एक समय था जब दूर-दराज के गांवों तक आधुनिक सुविधाएं पहुंचाना वाकई बहुत मुश्किल भरा था। आज उन्हीं गांवों में बिजली भी है, इंटरनेट भी है, और डिजिटल सेवाओं की पूरी दुनिया भी है। आज एक क्लिक पर, कभी भी, कहीं भी बैंकिंग सेवाएं उपलब्ध हैं।

आज मोबाइल फोन, भारत के नागरिकों को अनेक सुविधाओं से कनेक्ट कर रहा है। हमारे किसान, हमारे मछुआरे, हमारे dairy farmers, हमारी महिलाएं, हमारे स्टूडेंट्स, सभी टेक्नोलॉजी के माध्यम से सशक्त हो रहे हैं, और अपने लिए नए अवसर बना रहे हैं।

साथियों,

आपने 125 करोड़ से अधिक Aadhaar IDs के बारे में सुना है। लेकिन आज भारत सिर्फ पहचान को डिजिटल नहीं बना रहा। आज करीब 90 करोड़ भारतीयों की Unique Digital Health IDs बनाई जा चुकी हैं। जिससे मेडिकल रिकॉर्ड सुरक्षित और accessible बन गए हैं। इससे हेल्थकेयर डिलीवरी और अधिक आसान और efficient हो रही है।

साथियों,

इन उपलब्धियों की सबसे बड़ी विशेषता यह है कि इनमें से अधिकांश चीजें कुछ वर्ष पहले तक कल्पना जैसी लगती थीं। कौन सोच सकता था कि गांव-गांव तक हाई-स्पीड इंटरनेट पहुंचेगा ? कौन सोच सकता था कि दूर-सुदूर के गांवों में भी QR code जीवन का हिस्सा बन जायेगा ? गांव में कोई बहन, ड्रोन से खेती करने में मदद करेगी, ये भी असंभव लगता था।

लेकिन आज यह सब, भारत के करोड़ों लोगों के जीवन का सामान्य हिस्सा बनता जा रहा है। और आपको गर्व होगा साथियों, यही नए भारत की पहचान है।

जो कभी सपना था, वह आज सच्चाई है। जो कभी नामुमकिन लगता था, वो आज मुमकिन हुआ है, औऱ ये करने के पीछे सबसे बड़ी ताकत क्या है? किसकी वजह से ये सब संभव हुआ है? यह मोदी के कारण नहीं, वो ताकत है- भारत का लोकतंत्र, भारत की डेमोक्रेसी। इस डेमोक्रेसी में सबका साथ है, सबका विकास है।

साथियों,

आज से 50 या 100 साल बाद जब भारत के इस कालखंड की समीक्षा होगी, तो ये बात उभरकर सामने आएगी कि इस कालखंड को भारत की Aspirations ने ड्राइव किया। यह भारत के एस्पिरेशन्स का नया युग है।

जहां बिजली पहुंची है, वहां लोग सिर्फ बिजली नहीं चाहते, वे Smart Living चाहते हैं। जहां ट्रेन पहुंची है, वहां लोग High-Speed Connectivity चाहते हैं। जहां हाईवे बने हैं, वहां लोग World-Class Expressways चाहते हैं। जहां इंटरनेट पहुंचा है, वहां लोग AI और Digital Innovation में नेतृत्व चाहते हैं।

यानि आज भारत के लोग अपने जीवन को भी Next Level पर ले जाना चाहते हैं, और भारत को भी Next Level पर ले जाना उनका मकसद है, उनका संकल्प है, उनके सपने है।

और साथियों,

यही Aspirations आज भारत की विकास यात्रा की सबसे बड़ी शक्ति हैं। मैं आपको भारत की Space Journey का उदाहरण दूंगा।

भारत ने चंद्रयान को चंद्रमा के South Pole पर उतारा। दुनिया ने इसे एक बहुत बड़ी उपलब्धि माना। लेकिन भारत इसे अपनी मंजिल मानकर रुका नहीं। आज देश गगनयान की तैयारी कर रहा है। भारत अंतरिक्ष में अपना Space Station बनाने की दिशा में आगे बढ़ रहा है।

हमारे Space Startups Global Space Economy में अपनी जगह बनाने के लिए पुरजोश काम कर रहे हैं, आगे बढ़ रहे हैं।

साथियों,

Green Energy के क्षेत्र में भी भारत की यही एस्पिरेशंस दिखाई देती है। Solar Power में भारत की उपलब्धियों की दुनिया भर में लगातार चर्चा हो रही हैं। लेकिन भारत अगली छलांग की तैयारी कर रहा है।

Green Hydrogen में बड़े निवेश हो रहे हैं। Advanced Nuclear Energy पर तेजी से काम हो रहा है। आपने भारत के Fast Breeder nuclear Reactor से जुड़ी प्रोग्रेस के बारे में भी सुना ज़रूर होगा। ये भारत के न्यूक्लियर एनर्जी लैंडस्केप में क्रांतिकारी परिवर्तन करने का बहुत बड़ा अचीवमेंट हमारे सीसेन्टिस्टों ने किया है।

साथियों,

आज का भारत भविष्य का पूरा Ecosystem बना रहा है। भारत एक साथ हर उस क्षेत्र में निवेश कर रहा है, जो आने वाले दशकों की दिशा तय करेगा।

अभी आपने कुछ दिन पहले ही देखा है नीस में भारत इनोवेट्स का एक आयोजन किया। ये इवेंट भारत के डीप टेक सामर्थ्य को दुनिया तक पहुंचाने का एक और माध्यम था। इसमें भारत के 120 Deep-Tech Startups उपस्थित थे। Bharat Innovates में करीब एक हजार चार सौ B2B Meetings हुईं है। कई Startups के लिए Investment Commitments आगे बढ़ीं, Commercial Orders के लिए रास्ते खुले। French और European Universities तथा Incubators के साथ Engagements बढ़ रही हैं।

Student Exchanges, Joint Research, और Innovation Support के नए रास्ते बने। इसलिए Bharat Innovates सिर्फ एक Summit नहीं रहा। यह Innovation Diplomacy का एक नया मॉडल बना है।

और आज ही पेरिस में VivaTech इवेंट के जरिए, इस यात्रा को हमने और आगे बढ़ाया। नीस में हमने Ideas को Capital से जोड़ा और पेरिस में Indian Innovation को Global Scale से जोड़ा। आज दुनिया देख रही है भारत केवल भविष्य के लिए तैयार नहीं हो रहा है। भारत भविष्य को आकार दे रहा है।

साथियों,

एक समय था, जब देशों के बीच रिश्ते केवल व्यापार से तय होते थे। आज व्यापार के साथ-साथ Trust यानि भरोसा भी उतना ही महत्वपूर्ण हो गया है।

हर देश Reliable Supply Chains चाहता है। हर देश Stable Partnerships चाहता है। हर देश ऐसे साथियों की तलाश में है, जिन पर लंबे समय तक भरोसा किया जा सके। और ऐसे समय में, भारत विश्व में एक Trusted Partner के रूप में उभर रहा है।

एवियां में G7 बैठक के दौरान मैंने trust based partnerships बनाने पर ज़ोर दिया। ग्लोबल साउथ के देशों के साथ equal पार्टनर्स के रूप में आगे बढ़ने का आह्वान किया। भारत का G7 समिट में संदेश था Global Governance तभी प्रभावी होगी जब वह Inclusive होगी। Global Growth तभी Sustainable होगी जब वह शेयर्ड होगी। और Global Technology तभी मानवता के लिए उपयोगी होगी जब वह Trusted होगी।

साथियों,

भारत और दुनिया के बीच व्यापारिक रिश्तों में नई ऊर्जा नज़र आ रही है। फ्रांस के साथ भारत का ट्रेड लगतार बढ़ रहा है। पिछले कुछ वर्षों में भारत ने दुनिया के अनेक देशों के साथ Free Trade Agreements किए हैं। यूरोपियन यूनियन हो, यूनाइटेड किंगडम हो दुनिया के हर देश, हर रीजन के साथ भारत समझौते कर रहा है।

अगले महीने से भारत और UK के बीच ट्रेड एग्रीमेंट भी लागू हो जाएगा। यह एग्रीमेंट भारत के farmers, workers और innovators को अनेक नए अवसर प्रदान करेगा।

साथियों,

आज दुनिया Uncertainty और Disruption के दौर से गुजर रही है। ऐसे समय में भारत और फ्रांस की साझेदारी विश्वास, स्थिरता और सहयोग का एक मजबूत स्तंभ बन रहा है।

इस वर्ष हमने भारत और फ्रांस के संबंधों को Special Global Strategic Partnership का दर्जा दिया था। नीस में मेरे मित्र President Macron और मैंने हमारे संबंधों को force for global good बनाने पर चर्चा की। Defence से लेकर space और नुक्लियर तक AI और क्रिटीकल मिनरल्स से लेकर high speed railway तक, हर क्षेत्र में हम मिलकर आगे बढ़ेंगे।

साथियों,

Solar energy हो, या AI के क्षेत्र में सहयोग हो, भारत और फ्रांस मिलकर ऐसे समाधान विकसित कर रहे हैं जो पूरी मानवता के हित में हैं। पिछले वर्ष पेरिस में और इस वर्ष दिल्ली में हमने AI Summit को Co-chair किया।

अब हम साथ मिलकर अगले वर्ष “तृष्णा” satellite को लॉन्च करने जा रहें हैं। यह “तृष्णा” satellite जो विश्व में फूड और वाटर सिक्युरिटी सुनिश्चित करने में योगदान देगा।

और साथियों,

यह सभी गवर्नमेंट टू गवर्नमेंट पहलो में आप सभी का योगदान बहुत महत्वपूर्ण है। ये आप हैं जो भारत और यूरोप के बीच सबसे मजबूत सेतु हैं। आप दोनों समाजों को समझते हैं। दोनों बाजारों को समझते हैं। आने वाले समय में Talent, Trade, Technology, Tourism और Investment के नए अवसरों को आगे बढ़ाने में आपकी भूमिका लगातार बढ़ने वाली हैं।

साथियों,

भारत और फ्रांस के रिश्तों को साझा इतिहास, साझा मूल्यों और साझा विश्वास ने आगे बढ़ाया है। विश्व युद्धों के दौरान फ्रांस की धरती पर बलिदान देने वाले भारतीय सैनिकों की स्मृतियां आज भी हमें जोड़ती हैं।

मुझे पहले नव शापेल में श्रद्धांजलि देने का अवसर मिला, पिछले वर्ष प्रेसिडेंट मैक्रों के साथ मार्सेय के वॉर मेमोरियल जाने का अवसर भी मिला। ये हमारी साझा विरासत है।

फ्रांस, भारतीयों के योगदान को संजोता भी है और सराहता भी है। भारतीय मूल की नूर इनायत खान हों, जिन्होंने फ्रांस की Resistance के लिए अपना जीवन बलिदान किया, या महाराजा रणजीत सिंह के साथ काम करने वाले जनरल जां फ्रांस्वा अलार हों ये सभी भारत और फ्रांस की साझा विरासत के प्रतीक हैं।

भारत के राज्य पुडुचेरी में भी फ्रेंच विरासत की झलक दिखाई देती है। वहां का Architecture, वहां की कला-संस्कृति और खान-पान सभी में हमारे संबंधों की महेक है।

साथियों,

इस समय फ्रांस समेत पूरी दुनिया में International Yoga Day की तैयारी भी चल रही है। इस अवसर पर मैं, फ्रांस में योग को आगे बढ़ाने वाले श्रीमान महेश घाट्राड्याल जी को भी आदरपूर्वक श्रद्धांजलि देता हूं। मैं पद्म पुरस्कार से सम्मानित, शार्लोत शोपां जी को भी प्रणाम करता हूं। जिन्होंने सौ वर्ष की आयु में भी, योग के माध्यम से फ़्रांस को भारत की विरासत से जोड़ा है। उनका जीवन यह सिद्ध करता है: Yoga does not add years to life, it adds life to years.

साथियों,

मैं फ्रेद नेग्री जी को भी आदरपूर्वक श्रद्धापूर्वक याद करता हूं। भारतीय विरासत को संरक्षित करने में उनका योगदान अतुल्य रहा है।

साथियों,

भारत और फ्रांस को कनेक्ट करने वाली एक और चीज है, और वो है फुटबॉल। इस वक्त यहां फुटबॉल फीवर पूरे जोर पर है। फ्रांस में इसकी दीवानगी, चप्पे-चप्पे पर दिखती है। लेकिन भारत में भी फुटबॉल का क्रेज़ सिर चढ़कर बोलता है।

खासतौर पर फ्रांस की टीम के फैन्स भारत में बहुत अधिक हैं। फ़्रांस ने इस वर्ल्ड कप की शुरुआत एक जोरदार जीत से शुरू की है। मैं फ्रांस की टीम को बहुत-बहुत शुभकामनाएं देता हूं।

साथियों,

जाने से पहले, आप सभी के लिए कुछ और अच्छी खबरें भी लेकर के आया हूँ। वो आपके लिए हैं। पिछले वर्ष, मार्सेय में कॉन्सुलेट खोला गया, इससे काफी अधिक सुविधा मिल रही है। कुछ हफ्ते पहले, Indian Nationals के लिए French Airports पर Visa-free Transit की व्यवस्था शुरू हो गई है।

Students और Professionals की Mobility बढ़ाना हो, या Educational Qualifications की Mutual Recognition की बात हो, या फिर French Universities के भारत में Campus खोलना हो, इन सभी पर हम मिलकर आगे बढ़ रहें हैं।

अब फ्रांस में UPI के उपयोग का दायरा भी और बढ़ने जा रहा है। यानि भारत-फ्रांस कनेक्ट भी Instant और आपसी Payment भी Instant!

साथियों,

इन सभी पहलों से, हम भारत और फ़्रांस को और करीब ला रहें हैं। और मैं फिर कहूंगा इस साझेदारी की नींव, इस रिश्ते की असली ताकत आप सभी हैं। आप सब मेरे देशवासी हैं।

आज जब भारत तेज़ी से विकसित भारत के लक्ष्य की ओर बढ़ रहा है, तो मैं आप सभी से भारत के साथ और गहराई से जुडने का आग्रह करूंगा। इससे भारत की विकास यात्रा को नई शक्ति मिलेगी, और आपको अपनी पुरखों की धरती की सेवा करने का अवसर भी मिलेगा।

इन्हीं शब्दों के साथ आप सभी के प्रेम आपके उत्साह और इस आत्मीय स्वागत के लिए मैं एक बार फिर आप सभी का आभार व्यक्त करता हूं।

भारत माता की जय!

बहुत बहुत धन्यवाद।